Homeಕರ್ನಾಟಕಹಿರಿಯ ರೈತ ಹೋರಾಟಗಾರರನ್ನು ಅವಮಾನಿಸಿದ ಸಚಿವ ಮಾಧುಸ್ವಾಮಿ ನಡೆಗೆ ತೀವ್ರ ಆಕ್ರೋಶ

ಹಿರಿಯ ರೈತ ಹೋರಾಟಗಾರರನ್ನು ಅವಮಾನಿಸಿದ ಸಚಿವ ಮಾಧುಸ್ವಾಮಿ ನಡೆಗೆ ತೀವ್ರ ಆಕ್ರೋಶ

’ಐ ಆಮ್ ದಿ ಮಿನಿಸ್ಟರ್, ನಾನೇಳಿದ್ದು ಕೇಳಬೇಕು. ಇಲ್ಲದಿದ್ದರೆ ಇಲ್ಲಿಂದ ಹೋಗಿ’ ಎಂದು ಸಚಿವ ಮಾಧುಸ್ವಾಮಿ ಸೌಜನ್ಯ ಮೀರಿದ್ದರು.

- Advertisement -
- Advertisement -

ಪ್ರಶ್ನೆ ಮಾಡುವ ರೈತರ ಮೇಲೆ ರೇಗುವ ಪರಿಪಾಠ ಬೆಳೆಸಿಕೊಂಡಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಧೋರಣೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಿಂದೆ ಕೋಲಾರ ರೈತ ಮಹಿಳೆಯೊಬ್ಬರನ್ನು ರ್‍ಯಾಸ್ಕಲ್ ಬಾಯ್ಮುಚ್ಚು ಎಂದು ಧಮಕಿ ಹಾಕಿದ್ದ ಕಾನೂನು ಸಚಿವರು ಇದೀಗ ತುಮಕೂರಿನಲ್ಲಿ ಹಿರಿಯ ಹೋರಾಟಗಾರರಿಗೆ ’ಐ ಆಮ್ ದಿ ಮಿನಿಸ್ಟರ್, ನಾನೇಳಿದ್ದು ಕೇಳಬೇಕು. ಇಲ್ಲದಿದ್ದರೆ ಇಲ್ಲಿಂದ ಹೋಗಿ’ ಎಂದು ಸೌಜನ್ಯ ಮೀರಿದ ನಡವಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಡೆದದ್ದು ಇಷ್ಟು. ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಎಸ್ ಸಿಸಿ ಮತ್ತು ಎಐಕೆಎಸ್ ಮತ್ತು ದಲಿತ ಸಂಘಟನೆಗಳು ಜೂನ್ 29ರಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ಪ್ರತಿಭಟನಾನಿರತ ರೈತ ಮುಖಂಡರು ಕಾದರು. ಅರ್ಧ ಗಂಟೆಯ ನಂತರ ಸಚಿವರು ಡಿಸಿ ಕಚೇರಿಯ ಎಡ ಭಾಗದ ಗೇಟಿನಿಂದ ಹೊರಕ್ಕೆ ಬಂದರು. ಪ್ರತಿಭಟನಾಕಾರರು ಬಲಭಾಗದ ಗೇಟಿನಲ್ಲಿ ಕಾಯುತ್ತಿದ್ದರು. ಸಚಿವರು ಬಲಭಾಗದ ಗೇಟ್ ಗೆ ಬಂದು ಮನವಿ ಸ್ವೀಕರಿಸುವಂತೆ ರೈತರು ಒತ್ತಾಯಿಸಿ ಸಚಿವರ ಕಾರನ್ನು ತಡೆದು ಘೋಷಣೆ ಕೂಗಿದರು.

ಪ್ರತಿಭಟನಾ ನಿರತರ ಬಳಿಗೆ ಬಂದು ಅಧಿಕಾರಿಗಳು ಸಚಿವರು ಮನವಿ ಸ್ವೀಕರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ.( ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿ) ಸಚಿವರು ಬಲ ಭಾಗದ ಗೇಟ್ ಗೆ ಬರಲು ಒಪ್ಪಲಿಲ್ಲ. ತಾನಿರುವಲ್ಲಿಗೇ ಬಂದು ಕೊಡಿ ಎಂದರು. ರೈತರು ಸಿಟ್ಟಿಗೆದ್ದರು. ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಇದು ಮಿನಿಸ್ಟರ್ ಅವರನ್ನು ಕೆರಳಿಸಿತು. ಮತ್ತೆ ಕಾರಿನಲ್ಲಿ ಕೂತರು. ಅಧಿಕಾರಿಗಳು ಸಮಾಧಾನ ಪಡಿಸಿ ಸಚಿವರನ್ನು ಕರೆತಂದರು.

ಎರಡನೇ ಅಂಕ: ರೈತರ ಒತ್ತಾಯಕ್ಕೆ ಮಣಿದು ಪ್ರತಿಭಟನಾ ನಿರತರ ಬಳಿಗೆ ಬಂದರು. ಪ್ರಾಂತ ರೈತ ಸಂಘ ಮುಖಂಡ ಬಿ.ಉಮೇಶ್ ಸಚಿವರೊಂದಿಗೆ ಸರ್ಕಾರದ ತೀರ್ಮಾಗಳಿಂದ ರೈತರಿಗಾಗುವ ಅನ್ಯಾಯವನ್ನು ವಿವರಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಸಚಿವರು ಉಮೇಶ್ ಅವರನ್ನು ದಬಾಯಿಸಲು ಮುಂದಾದರು. ಕೂಡಲೆ ಬಡವರ ಭೂಮಿ ವಸತಿ ಹಕ್ಕಿಗಾಗಿ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವ ಹಿರಿಯರಾದ ಸಿ. ಯತಿರಾಜು ಅವರು ಸಚಿವರನ್ನು ಪ್ರಶ್ನಿಸತೊಡಗಿದರು.

ಸಿ.ಯತಿರಾಜ್ ರವರು ನಾಡಿನ ಹಿರಿಯ ಹೋರಾಟಗಾರರು. ಸದಾ ರೈತರು ,ಪರಿಸರದ ಕುರಿತು ಕಾಳಿಜಿಯಿಂದ ಹೋರಾಟ ನಡೆಸುತ್ತಿರುವವರು. ಇಂತಹ ಹಿರಿಯರ ಜೊತೆ ಸಚಿವ ಮಾಧುಸ್ವಾಮಿಯವರು ಇತ್ತಿಚಿಗೆ ನಡೆದ ಭೂ ಸುಧಾರಣಾ ಕಾಯ್ದೆ ವಿರುದ್ಧದ ಹೋರಾಟದ ಸಮಯದಲ್ಲಿ ಮನವಿಪತ್ರ ನೀಡುವ ವೇಳೆ ದುರಂಹಕಾರದಿಂದ ನಡೆದುಕೊಂಡಿದ್ದಾರೆ.#NaanuGauri #LawMinister #maduswamy

Posted by Naanu Gauri on Tuesday, June 30, 2020

ಭೂಸ್ವಾದೀನ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗುತ್ತದೆ. ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಹೊಂದಬಹುದು. ಈಗಿರುವ ಕಾನೂನಿನಂತೆ 10 ಯೂನಿಟ್ ಗೆ 5.4 ಎಕರೆಯಂತೆ 54 ಎಕರೆ ಜಮೀನು ಹೊಂದಲು ಅವಕಾಶವಿದೆ. ತಿದ್ದುಪಡಿ ಮಾಡಿದರೆ 4 ಮಂದಿ ಸದಸ್ಯರಿರುವ ಕುಟುಂಬಕ್ಕೆ 20 ಯೂನಿಟ್ ಮಾಡಿದ್ದೀರಿ. ಇದರಿಂದ 108 ಎಕರೆ ಹೊಂದಬಹುದು. 5 ಮಂದಿ ಸದಸ್ಯರಿರುವ ಕುಟುಂಬಕ್ಕೆ 40 ಯೂನಿಟ್ ನಂತೆ 216 ಎಕರೆ ಹೊಂದಬಹುದು ಎಂದು ಹಿರಿಯ ಹೋರಾಟಗಾರ ಯತಿರಾಜು ಅವರು ಸಚಿವರನ್ನು ಪ್ರಶ್ನಿಸುತ್ತಾ ಹೋದರು.

ಇದರಿಂದ ಕೆರೆಳಿ ಕೆಂಡವಾದ ಸಚಿವ ಮಾಧುಸ್ವಾಮಿ, ’ಐ ಆಮ್ ಮಿನಿಸ್ಟರ್, ನಾನು ಹೇಳಿದ್ದು ಮೊದಲು ಕೇಳಿ. ನನಗೆ ಮಾತಾಡಲು ಮೊದಲು ಬಿಡಿ ನಿಮ್ಮ ಭಾಷಣ ಕೇಳಲು ನಾನಿಲ್ಲಿ ಬಂದಿಲ್’ ಎಂದು ಕೋಪಗೊಂಡರು. ಒಂದು ಹಂತದಲ್ಲಿ ನನ್ನ ಮಾತನ್ನು ಕೇಳುವುದಾದರೆ ಕೇಳಿ ಇಲ್ಲಾಂದ್ರೆ ಇಲ್ಲಿಂದ ಹೊರಡಿ ಎಂದು ಕೂಗಾಡಿದರು ಸಚಿವರು. ಸರ್ಕಾರದ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಬಲವಾಗಿ ಸಮರ್ಥಿಸಿಕೊಂಡರು.

ಆಗ ಯತಿರಾಜು ಅವರು ‘ಮೊದಲು ರೈತರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ರೈತರ ಬೇಡಿಕೆಗಳ ಗಂಭೀರತೆ ತಿಳಿದುಕೊಳ್ಳಿ ಸರ್. ನಮಗೂ ಮಾತನಾಡಲು ಅವಕಾಶ ಕೊಡಿ. ಆಮೇಲೆ ನೀವು ಸರ್ಕಾರದ ನಡೆಯನ್ನು ಬೇಕಾಧರೆ ಸಮರ್ಥಿಸಿಕೊಳ್ಳಿ ಎಂದು ಅತ್ಯಂತ ಗೌರವಯುತವಾಗಿಯೇ ಸಚಿವರಿಗೆ ಹೇಳಿದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸಚಿವರು ಟೆಕ್ಕಿಗಳು ಸರ್ಕಾರಕ್ಕೆ ಭೂಮಿ ಬೇಕೆಂದು ಮನವಿ ಸಲ್ಲಿಸಿದ್ದಾರೆ. ಅದಕ್ಕಾಗಿ ಭೂಸುಧಾರಣೆಗೆ ತಿದ್ದುಪಡಿ ತರುತ್ತಿದ್ದೇವೆ ಎಂದು ಸಚಿವರು ಹೇಳತೊಡಗಿದರು. ಇದರಿಂದ ರೈತರಿಗೆ ದೊಡ್ಡಮಟ್ಟದ ಲಾಭವಾಗುತ್ತದೆ ಎಂದರು. ಇದರಿಂದ ಸಿಟ್ಟುಗೊಂಡ ಯತಿರಾಜು ಅವರು ತಲೆತಲಾಂತರದಿಂದ ಕೃಷಿಯನ್ನೇ ನಂಬಿಕೊಂಡು ಬಂದಿರುವರಿಗೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಭೂಮಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರನ್ನು ಬಿಟ್ಟು ಸಂಡೇ ಕೃಷಿಕರಿಗೆ ಭೂಮಿ ನೀಡುವುದರಿಂದ ಅನ್ನದ ಅಭದ್ರತೆ ಸೃಷ್ಟಿಯಾಗುತ್ತದೆ ಎಂದು ಹೇಳಿದಾಗ ಸಚಿವರು ಕೆರಳಿ ಕೆಂಡವಾದರು.

ನಿಮ್ಮ ಮಾತು ನಿಲ್ಲಿಸಿ, ನೀವು ಹೇಳುತ್ತಿರುವುದು ಸರಿಯಲ್ಲ.  5 ಜನರಿರುವ ಕುಟುಂಬಕ್ಕೆ 40 ಯೂನಿಟ್ ನಂತೆ ಕೇವಲ 84 ಎಕರೆ ಭೂಮಿ ಹೊಂದಲು ಈಗಿನ ಕಾನೂನಿನಲ್ಲಿ ಅವಕಾಶವಾಗಲಿದೆ ಎಂದು ಸಚಿವರ ಹೇಳಿಕೆ ಸುಳ್ಳಿನಿಂದ ಕೂಡಿದೆ ಈಗಿನ ಕಾನೂನಿನಂತ ಒಂದು ಕುಟುಂಬ 216 ಎಕರೆ ಹೊಂದಬಹುದು. ಇದು ಭೂಮಿಯನ್ನೇ ನಂಬಿರುವ ರೈತರಿಗೆ ತೊಂದರೆಯಾಗುತ್ತದೆ ಎಂದು ವಿವರಿಸಲು ಯತಿರಾಜು ಮುಂದಾದರು.

ಹೀಗಾಗಿ ತನಗೆ ಪ್ರಶ್ನಿಸಲು ಬರುತ್ತಾರೆ ಎಂದುಕೊಂಡ ಸಚಿವರು ಹಿರಿಯ ಹೋರಾಟಗಾರರಿಗೆ ಗೌರವ ಕೊಡದೆ ನಡೆದುಕೊಂಡರು ಎಂದು ಆಡಿಕೊಳ್ಳುವಂತಾಗಿದೆ. ಕೇವಲ ಬಂದು ಮನವಿ ಪಡೆದು ಹೋಗಿದ್ದರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಚಿವರ ಅಹಂಗೆ ಇದು ಉದಾಹರಣೆಯಾಗಿದೆ. ಇಂತಹ ಧೋರಣೆಯನ್ನು ಸಚಿವರು ತಿದ್ದಿಕೊಳ್ಳಬೇಕು ಎಂದು ಹಿರಿಯ ಜೀವಗಳು ಆಗ್ರಹಿಸಿವೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಹಿರಿಯ ಹೋರಾಟಗಾರ ಸಿ.ಯತಿರಾಜು, “ರೈತರ ಆತಂಕವನ್ನು ಸಚಿವರ ಮುಂದೆ ಹೇಳಿದ್ದೇ ತಪ್ಪಾ? ಸದನ ಶೂರ ಎಂದು ಕರೆಸಿಕೊಳ್ಳುವ ಸಚಿವರು ಹೀಗೆ ವರ್ತಿಸಿರುವುದು ಬೇಸರ ಮೂಡಿಸಿದೆ. ಟಿಕ್ಕಿಗಳಿಗೆ ಭೂಮಿ ನೀಡಿದರೆ ನ್ಯಾಚುರಲ್ ಫಾರಂ ಹೆಚ್ಚಾಗುತ್ತದೆ.  ಕೃಷಿ ಉತ್ತೇಜನ ಸಿಗುವುದಿಲ್ಲ. ಶೇ.85ರಷ್ಟು ಸಣ್ಣ ಮಧ್ಯಮ ರೈತರು ಇದ್ದು ಭೂಮಿ ನಂಬಿ ಬದುಕುತ್ತಿದ್ದಾರೆ. ಈಗ ಭೂಮಿಯನ್ನೂ ಕಳೆದುಕೊಂಡರೆ ಅವರ ಬದುಕು ಬರ್ಬರವಾಗುತ್ತದೆ. ಒಂದಿಷ್ಟು ದುಡ್ಡು ಬರಬಹುದು. ರೈತರ ಸ್ವಾಭಿಮಾನ ಮತ್ತು ಘನತೆಯುತ ಬದುಕಿಗೆ ಧಕ್ಕೆ ಬರುತ್ತದೆ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು. ತಾನೇ ಸರ್ವಜ್ಞ ಎಂಬ ಮನೋಭಾವ ಬಿಟ್ಟರೆ ಒಳ್ಳೆಯದು” ಎಂದು ಹೇಳಿದರು.

ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಭೂಮಿ ಕಾರ್ಪೋರೇಟ್ ಕುಳಗಳು ಸಂಡೇ ಕೃಷಿಕರ ಪಾಲಾಗುತ್ತದೆ ಕಂಪನಿಗಳು, ಬಂಡವಾಳಗಾರರು ಭೂಮಿ ಹೊಂದಿ ನಿಜವಾದ ರೈತರು ಜೀತದಾಳುಗಂತೆ ದುಡಿಮೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ರೈತ ಮುಖಂಡರದ್ದು.

79 ಎ ಬಿ ಕಲಂಗಳಿಂದ ಹೆಚ್ಚು ಭೂಮಿ ಹೊಂದಲು ಅವಕಾಶವಿಲ್ಲ. ಇವುಗಳನ್ನು ತೆಗೆದುಹಾಕಿದರೆ ಕೃಷಿಕರಿಗೆ ತೊಂದರೆಯಾಗಲಿದೆ. ನೈಸರ್ಗಿಕ ಕೃಷಿ ಹೋಗಿ ರಫ್ತು ಆಧಾರಿತ ಕೃಷಿ ಸಂಸ್ಕೃತಿ ಬರುತ್ತದೆ. ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ರೈತರ ಆಧಾಯ ಖೋತಾ ಆಗುತ್ತದೆ. ಯಾವುದೇ ಕಾರಣಕ್ಕೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಬಾರದು. ರೈತರ ಪರವಾಗಿ ಧ್ವನಿ ಎತ್ತಬೇಕಾಗಿದ್ದ ಸಚಿವ ಮಾಧುಸ್ವಾಮಿ ಬಂಡವಾಳಿಗರು ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾಗಿ ನಿಂತಿರುವುದಕ್ಕೆ ರೈತ ಸಂಘಟನೆಗಳು ಸಿಡಿದೇಳುವಂತೆ ಮಾಡಿದೆ.


ಓದಿ: ಭೂಸುಗ್ರೀವಾಜ್ಞೆ ವಿರೋಧಿಸಿ ಪ್ರತಿಭಟನೆ: ರೈತಮುಖಂಡರೊಂದಿಗೆ ಮಾಧುಸ್ವಾಮಿ ಮಾತಿನ ಚಕಮಕಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...