Homeಕರ್ನಾಟಕಆನಂದಸಿಂಗ್ ರಾಜಿನಾಮೆ ಬ್ಲ್ಯಾಕ್‍ಮೇಲ್ ತಂತ್ರವೋ? ಅಸಲಿ ಕಾರಣ ಇದಲ್ಲವೇ?

ಆನಂದಸಿಂಗ್ ರಾಜಿನಾಮೆ ಬ್ಲ್ಯಾಕ್‍ಮೇಲ್ ತಂತ್ರವೋ? ಅಸಲಿ ಕಾರಣ ಇದಲ್ಲವೇ?

ರಾಜ್ಯ ಸರ್ಕಾರದ ಹೊಸ ಮೈನಿಂಗ್ ಲೀಸ್ ನೀತಿಯ ಪ್ರಕಾರ ಫ್ಯಾಕ್ಟರಿ ಇರುವ ಕಂಪನಿಗಳಿಗೆ ಮಾತ್ರ ಲೀಸ್ ನೀಡಲಾಗುವುದು ಎಂಬ ನಿಯಮವಿದೆ ಎನ್ನಲಾಗಿದೆ. ಹೀಗಾದರೆ ಆನಂದಸಿಂಗ್, ಲಾಡ್ ಮುಂತಾದವರಿಗೆ ಹೊಸ ಲೀಸ್ ಸಿಗುವುದು ಅಸಾಧ್ಯ.

- Advertisement -
- Advertisement -

| ಮಲ್ಲನಗೌಡರ್ |

ಇವತ್ತು ಮುಂಜಾನೆಯಿಂದ ಸರ್ಕಾರ ಬೀಳುವ/ ಬೀಳಿಸುವ ಆಟ ಹೊರನೋಟಕ್ಕೆ ಐಪಿಎಲ್ ಮ್ಯಾಚಿನ ಖದರು ಕಳೆಗಟ್ಟಿಕೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕದಲ್ಲಿರುವಾಗ ದಿಢೀರನೆ ರಾಜಿನಾಮೆಯ ಕರಿಮೋಡಗಳು ಕಾಣತೋಡಗಿದ್ದು ಇವು ಮಳೆ ಸುರಿಸುತ್ತವಾ ಅಥವಾ ಎಂದಿನಂತೆ ಹಾಗೆ ಬಂದಂತೆ ಹೀಗೆ ತೇಲಿ ಹೋಗುತ್ತವಾ ಎಂಬ ಪ್ರಶ್ನೆ ಎದ್ದಿದೆ.

ಈ ರಾಜಿನಾಮೆ ಕ್ಲೈಮೇಟಿನಲ್ಲಿ ಎದ್ದು ಹೊಡೆಯುತ್ತಿರುವುದು ಹೊಸಪೇಟೆಯ ಶಾಸಕ ಆಂದ್‍ಸಿಂಗ್ ನಡವಳಿಕೆ. ಅವರೀಗ ಸ್ಪೀಕರ್ ಪಿ.ಎಸ್‍ಗೆ ರಾಜಿನಾಮೆ ಕೊಟ್ಟು ಮಾಧ್ಯಮಗಳ ಎದುರು ಅವರು ಸ್ಪೀಕರ್ ಹೆಸರಲ್ಲಿ ಬರೆದ ರಾಜಿನಾಮೆ ಪತ್ರವನ್ನು ಪ್ರದರ್ಶಿಸಿದ್ದಾರೆ. ಇದಕ್ಕೂ ಮೊದಲು ಅವರು ರಾಜಿನಾಮೆಯನ್ನು ರಾಜ್ಯಪಾಲರಿಗೆ ಕೊಟ್ಟಿದ್ದು ವಿಚಿತ್ರವೂ ಆಗಿತ್ತು, ಹಾಸ್ಯಾಸ್ಪದವೂ ಆಗಿತ್ತು. ಬಹುಷ ಅದು ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಕೆಲಸ ಮಾಡಿಸಿಕೊಳ್ಳುವ ತಂತ್ರವಾಗಿದೆ. ಜಿಂದಾಲ್ ಕಂಪನಿಗೂ ಆನಂದಸಿಂಗ್‍ರಿಗೂ ವ್ಯವಹಾರದ ಮಟ್ಟಿಗೆ ಸರಿಯಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟ ಮಾಡಬಾರದು ಎಂದು ಬಹಿರಂಗವಾಗಿ ಹೇಳಿದ ಏಕೈಕ ಬಳ್ಳಾರಿ ಶಾಸಕ ಅವರು. ಹಿಂದೆಯೂ ಒಮ್ಮೆ ಅವರು ಹೊಸಪೇಟೆ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಇದ್ದಾಗ ಜಿಂದಾಲ್‍ಗೆ ನೀರು ಬಿಡಬಾರದು ಎಂದಿದ್ದರು.

ಈಗ ಜಿಂದಾಲ್‍ಗೆ ಭೂಮಿ ಮಾರಾಟ ವಿಷಯದ ಮರುಪರಿಶೀಲನೆ ಮಾಡಲು ರಚಿಸಿರುವ ಎಂಬಿ ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಮೇಲೆ ಒತ್ತಡ ಹೇರಲು, ಆ ಮೂಲಕ ಜಿಂದಾಲ್‍ಗೆ ಭೂಮಿ ಮಾರಾಟ ಆಗದಂತೆ ತಡೆಯುವ ಪ್ರಯತ್ನವನ್ನು ಆನಂದಸಿಂಗ್ ಮಾಡುತ್ತಿರುವ ಸಾಧ್ಯತೆ ಇದೆ. ತಮಗೆ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬೆಂಬಲವೂ ಇದೆ ಎಂದು ಆನಂದಸಿಂಗ್ ಹೇಳುತ್ತಿರುವುದು ಕುತೂಹಲಕರವಾಗಿದೆ. ಹೊಸಪೇಟೆ ಕೇಂದ್ರವಾಗಿಸಿ ವಿಜಯನಗರ ಹೊಸ ಜಿಲ್ಲೆ ರಚಿಸಬೇಕೆಂಬ ಬೇಡಿಕೆಗಾಗಿ ರಾಜಿನಾಮೆ ನಿಡುತ್ತಿರುವುದಾಗಿಯೂ ಆನಂದಸಿಂಗ್ ಹೇಳಲು ಶುರು ಮಾಡಿದ್ದಾರೆ.

ಇಲ್ಲಿ ಒಂದು ಸೂಕ್ಷ್ಮ ವಿಷಯವೂ ಇದೆ. ರಾಜ್ಯ ಸರ್ಕಾರದ ಹೊಸ ಮೈನಿಂಗ್ ಲೀಸ್ ನೀತಿಯ ಪ್ರಕಾರ ಫ್ಯಾಕ್ಟರಿ ಇರುವ ಕಂಪನಿಗಳಿಗೆ ಮಾತ್ರ ಲೀಸ್ ನೀಡಲಾಗುವುದು ಎಂಬ ನಿಯಮವಿದೆ ಎನ್ನಲಾಗಿದೆ. ಹೀಗಾದರೆ ಆನಂದಸಿಂಗ್, ಲಾಡ್ ಮುಂತಾದವರಿಗೆ ಹೊಸ ಲೀಸ್ ಸಿಗುವುದು ಅಸಾಧ್ಯ. ಹೊಸ ಲೀಸ್‍ಗಳೆಲ್ಲ ಜಿಂದಾಲ್ ಪಾಲಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಈ ಹೊಸ ನಿಯಮ ತಿದ್ದುಪಡಿ ಮಾಡಿ ಫ್ಯಾಕ್ಟರಿ ಇಲ್ಲದ ಮೈನಿಂಗ್ ಕಂಪನಿಗಳಿಗೂ ಲೀಸ್ ನೀಡುವ ಅವಕಾಶ ಮಾಡಿಕೊಡಿ ಎಂಬ ಒತ್ತಡ ಹೇರುವ ತಂತ್ರವಾಗಿಯೂ ಇದನ್ನು ನೋಡಬಹುದು.

ತಮ್ಮ ವೈಯಕ್ತಿಕ ಲಾಭಕ್ಕಾಗಿ ತಾವಿರುವ ಪಕ್ಷದ ಮೇಲೆ ಒತ್ತಡ ಹೇರಲು ಹಿಂದೆ ಇಂತಹ ಹಲವಾರು ಬ್ಲ್ಯಾಕ್‍ಮೇಲ್ ತಂತ್ರಗಳನ್ನು ಆನಂದಸಿಂಗ್ ಅನುಸರಿಸಿದ್ದಾರೆ. ಅವರು ಬಿಜೆಪಿ ಶಾಸಕರಾಗಿದ್ದಾಗ ಮಂತ್ರಿ ಪದವಿ ಪಡೆಯಲು ಒತ್ತಡ ಹೇರುವ ಸಲುವಾಗಿ ಹೊಸಪೇಟೆಯಲ್ಲಿ ಭವ್ಯವಾಗಿ ಟಿಪ್ಪು ಜಯಂತಿ ಆಚರಿಸಿದ್ದರು. ಕಾಂಗ್ರೆಸ್ ಶಾಸಕರಾದ ಮೇಲೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಲು ಒತ್ತಡ ಹೇರಲು ಹನುಮ ಮಾಲೆ ಜಯಂತಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕರಲ್ಲಿ ದಿಗಿಲು ಮೂಡಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ರಮೇಶ ಜಾರಕಿಹೊಳಿ ಗುಂಪಿನೊಂದಿಗೆ ಮುಂಬೈ ಸುತ್ತಾಡಿ ಬಂದಿದ್ದ ಅವರು, ಬಹುಮತ ಸಾಬೀತುಪಡಿಸುವ ವೇಳೆಗೆ ಕಾಂಗ್ರೆಸ್ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್‍ನಲ್ಲಿ ಆಪರೇಷನ್ ಕಮಲ ವಿಫಲವಾದ ನಂತರ ರೆಸಾರ್ಟಿನಲ್ಲಿ ಗದ್ದಲ ಮಾಡಿಕೊಂಡು ಹಲ್ಲೆಗೊಳಗಾಗಿದ್ದರು.

ಇದಾದ ಮೇಲೆ ಅವರು ಸುದ್ದಿಯಾಗಿದ್ದು ಜಿಂದಾಲ್‍ಗೆ ಭೂಮಿ ಮಾರಾಟ ಮಾಡಬಾರದೆಂದು ಸರ್ಕಾರಕ್ಕೆ ಆಗ್ರಹಿಸುವ ಮೂಲಕ. ಹೊಸ ಮೈನಿಂಗ್ ನೀತಿಯಲ್ಲಿ ಮಾರ್ಪಾಟು ಮಾಡಿಸಲು ಈಗ ರಾಜಿನಾಮೆ ತಂತ್ರ ಹೂಡಿದ್ದಾರೋ ಅಥವಾ ಜಿಂದಾಲ್‍ಗೆ ಭೂಮಿ ಮಾರಾಟ ತಡೆಯಲು ಯತ್ನಿಸುವುದು, ಆಗದಿದ್ದರೆ ಆ ಕಡೆಯಿಂದ ‘ಫೇವರ್’ ಪಡೆಯುವ ಉದ್ದೇಶವೂ ಇದರ ಹಿಂದಿರಬಹುದೇ?

ಸುದ್ದಿ ಮಾಧ್ಯಮಗಳ ಪ್ರಕಾರ, ಸರ್ಕಾರ ಬೀಳುವುದು ಗ್ಯಾರಂಟಿ ಎಂಬ ಭಾವವನ್ನಂತೂ ಜನರಲ್ಲಿ ತೇಲಿ ಬಿಡಲಾಗಿದೆ. ಇದರ ಮೂಲ ಮಾತ್ರ ಆನಂದಸಿಂಗ್ ಹೊರಡಿಸಿದ ಗುಡುಗಿನ ಆರ್ಭಟವಷ್ಟೇ. ಹಿಂದಿನಂತೆ ಈ ಭಿನ್ನಮತ ಮಳೆ ಸುರಿಸದೇ ಹೋಗಬಹುದು. ರಾಷ್ಟ್ರೀಯ ಬಿಜೆಪಿಯಲ್ಲಿರುವ ಅಧಿಕಾರ ಮತ್ತು ಹಣಬಲದಿಂದ ಕೃತಕ ಮೋಡಬಿತ್ತನೆಯೂ ಆಗಿ ಮಳೆ ಸುರಿಸಲೂಬಹುದು. ಆಗಲೂ ಬಿತ್ತನೆಗೆ ಬೇಕಾದಷ್ಟು ಮಣ್ಣು ಹಸಿ (ಸರ್ಕಾರ ಕೆಡವಲು ಅಗತ್ಯವಾದ ಸಂಖ್ಯೆ) ಆಗುವುದೇ ಎಂಬ ಸಂಶಯ ಎಂದಿನಂತೆ ಇದ್ದೇ ಇದೆ,  ಅಧಿಕಾರದ ಆಟದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಕಾದು ನೋಡುವುದಷ್ಟೇ ರಾಜ್ಯದ ಜನರ ಕರ್ಮ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...