Homeರಾಷ್ಟ್ರೀಯಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

- Advertisement -
- Advertisement -

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು.

ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ ತಮ್ಮನ್ನು ಮತದಾರರು ದುರ್ಬಲರು ಎಂದು ತಿಳಿಯುತ್ತಾರೆ… ತಾನು ಸಹ ಅಮೇರಿಕಾ-ಇಸ್ರೇಲ್ ತರಹ ತೋಳ್ಬಲ ಪ್ರದರ್ಶಿಸುವ ವಿಶ್ವಗುರು ಎನ್ನುವ ಪ್ರಚಾರ ಮುಕ್ಕಾಗದಂತೆ ನೋಡಿಕೊಳ್ಳಬೇಕು..
ಇಸ್ರೇಲ್ ಹಾಗೂ ನೇತನ್ಯಾಹು ನಮ್ಮ ರೀತಿ, ಇಲ್ಲಿನ ಹಿಂದುತ್ವ ರಾಜಕಾರಣ ಅಲ್ಲಿನ ಜುಡಾಯಿಸಂ… ಇಬ್ಬರಿಗೂ ಇಸ್ಲಾಂ ಸಮಾನ ಶತೃ ಎನ್ನುವ ಕಥನ ಸೃಷ್ಟಿಸಲಾಗಿದೆ.. ಈಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ.. ಇದಕ್ಕಾಗಿ ಇಸ್ರೇಲ್ ನ ಭಯೋತ್ಪಾದನೆ ಧೋರಣೆಯನ್ನು ಬೆಂಬಲಿಸುವಂತಹ ಸ್ಥಿತಿಯಲ್ಲಿದ್ದಾರೆ…
ಇಲ್ಲಿ ಮುಸ್ಲಿಂರ ವಿರುದ್ಧ ನೆರೇಶನ್ ಸೃಷ್ಟಿಸಿ ಜಾಗತಿಕವಾಗಿ ಇಸ್ಲಾಂ ದೇಶದ ಪರವಾಗಿ ಮಾತನಾಡಿದರೆ ತಮ್ಮ ಮತಬ್ಯಾಂಕ್ ಮೇಲೆ ಪರಿಣಾಮ ಬೀರುತ್ತದೆ…
ಒಂದುವೇಳೆ ಕಾಂಗ್ರೆಸ್ ಪಕ್ಷ, ಚಿಂತಕರು, ಸಂಘಟನೆಗಳು ಏನಾದರೂ ಇರಾನ್ ಪರ ನಿಲುವು ತಾಳಿದರೆ ಅವರನ್ನು ದೇಶದ್ರೋಹಿಗಳು ಎಂದು ಪ್ರಚಾರ ಮಾಡಲು ಮತ್ತು ಮುಂಬರುವ ಪ.ಬಂಗಾಳ, ಅಸ್ಸಾಂ ಚುನಾವಣೆಗಳಲ್ಲಿ ಇದನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ…
ಪ್ರಚಾರದ ಸಂದರ್ಭದಲ್ಲಿ ಮೋದಿ ‘ನಾವು ದೇಶದ ಹಿತಕ್ಕಾಗಿ, ಅವರು ಇರಾನ್ ಹಿತಕ್ಕಾಗಿ’ ಎಂದು ಭಾಷಣ ಮಾಡುವುದರಲ್ಲಿ ಅನುಮಾನವೇ ಇರಲಿಲ್ಲ…
ಒಟ್ಟಿನಲ್ಲಿ ಪ.ಬಂಗಾಳ, ಕೇರಳ, ಅಸ್ಸಾಂ ರಾಜ್ಯದ ಚುನಾವಣಾ ಪ್ರಚಾರದ ಹೊತ್ತಿಗೆ ಇರಾನ್ – ಮುಸ್ಲಿಂ ವಿರುದ್ಧ ನೆರೇಶನ್ ನ ರೆಸಿಪಿ ತಯಾರಿಸುವ ಕೆಲಸ ಶುರುವಾಗಿತ್ತು…

ಆದರೆ ಎರಡು ವಾರಗಳಲ್ಲಿ ಎಲ್ಲವೂ ತಲೆಕೆಳಗಾಗಿ ಮೋದಿ ‘ಇಂಡಿಯಾ ದೇಶ ಇರಾನ್ ನ ಸ್ನೇಹಿತರು’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ…

ಅತ್ತ ಸರ್ಕಾರದ ಮಟ್ಟದಲ್ಲಿ

ಈ ಯುದ್ಧ ಬಹು ದಿನಗಳ ಕಾಲ ನಡೆಯುವುದಿಲ್ಲ. ನಾಲ್ಕೈದು ದಿನಗಳಲ್ಲಿ ಮುಗಿದು ಇರಾಕ್, ಈಜಿಪ್ಟ್ ರೀತಿ ಇರಾನ್ ಶರಣಾಗುತ್ತದೆ, ಆಂತರಿಕವಾಗಿ ಅಲ್ಲಿನ ಜನ ಬೀದಿಗೆ ಬರುತ್ತಾರೆ.. ಹೀಗಾಗಿ ಆರಂಭದಿಂದಲೂ ಅಮೇರಿಕಾ -ಇಸ್ರೇಲ್ ಪರವಾಗಿದ್ದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.. ಇದು ಈ ಸರ್ಕಾರದ ಯೋಚನಾ ಲಹರಿ.. ಇದು ಸಂಭವಿಸಿದರೆ ‘ಮೋದಿ ಅಂದರೆ ಸಾಮಾನ್ಯವೇ’ ಎನ್ನುವ ಪ್ರಚಾರ…
ಆದರೆ ಎಲ್ಲಾ ತಲೆಕೆಳಗಾಗಿ ಇಂದು ಯುದ್ಧ ಆರಂಭಿಸಿದ ಟ್ರಂಪ್ ಗೆ ಮುಂದಿನ ದಾರಿ ಏನು? ಯುದ್ಧ ನಿಲ್ಲಿಸುವುದು ಹೇಗೆ? ಇದರಿಂದ ಹೊರಬರಲು ದಾರಿಗಳೇನು? ಒಂದೂ ಗೊತ್ತಾಗದೆ ದಿಗ್ಮೂಢಗೊಂಡಿದ್ದರೆ ಇವರನ್ನು ನಂಬಿ ರಾಜತಾಂತ್ರಿಕ ವ್ಯವಹಾರ ಮಾಡಿ ದೇಶದ ಘನತೆ ಹಾಳುಗೆಡವಿದ್ದು ಮೋದಿಯವರ ಸಾಧನೆ…

ಮೋದಿಯವರು ಯುದ್ಧ ನಡೆಯುವ ಎರಡು ದಿನಗಳ ಮುಂಚೆ ಇಸ್ರೇಲ್ ದೇಶಕ್ಕೆ ಹೋಗಿದ್ದು ಯಾಕೆ? ನೇತನ್ಯಾಹುನ್ನು ಹೊಗಳಿದ್ದು ಯಾಕೆ? ಇದು ಅವರ ವೈಯಕ್ತಿಕ ನಿಲುವೇ? ಅಥವಾ ವಿದೇಶಾಂಗ ಇಲಾಖೆಯದೇ?
ಇವರಿಗೆ ತಮ್ಮ ಭೇಟಿಯ ನಂತರ ಕೆಲವೇ ದಿನಗಳಲ್ಲಿ ಯುದ್ಧ ಪ್ರಾರಂಭವಾಗುತ್ತದೆ ಎಂದು ಗೊತ್ತಿರಲಿಲ್ಲವೇ? ಅದರ ಮುನ್ಸೂಚನೆ ಇರಲಿಲ್ಲವೇ? ಹೌದಾದರೆ ಅಮೆರಿಕ -ಇಸ್ರೇಲ್ ದೇಶಗಳು ಭಾರತದ ಜಿಗ್ರಿ ದೋಸ್ತ್ ಎನ್ನುವ ಮಾತಿಗೆ ಬೆಲೆಯಿಲ್ಲದಂತಾಯಿತೇ?
ಟ್ರಂಪ್, ನೇತಾನ್ಯಾಹು ನನಗೆ ತೀರಾ ಹತ್ತಿರ ಎಂದು ಹೇಳಿಕೊಳ್ಳುವ ಮೋದಿಯವರ ವಿಶ್ವಾಸಾರ್ಹತೆ ಪ್ರಶ್ನಾರ್ಹವಲ್ಲವೇ?
ದೇಶದ ಹಿತಾಸಕ್ತಿಯನ್ನು ಈ ರೀತಿ ವೈಯಕ್ತಿಕ ವೈಭವೀಕರಣಕ್ಕೆ ಬಲಿ ಕೊಟ್ಟಂತಲ್ಲವೇ?
ಅಥವಾ ಗೊತ್ತಿದ್ದರೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಎಚ್ಚರಿಸುವ, ಅಲ್ಲಿಂದ ಕರೆತರುವ ಪ್ರಯತ್ನ ಯಾಕೆ ಮಾಡಲಿಲ್ಲ?

ಅಮೇರಿಕಾ-ಇಸ್ರೇಲ್ ದಾಳಿಯನ್ನು, ಖಮೇನಿ ಹತ್ಯೆಯನ್ನು ಇದುವರೆಗೂ ಖಂಡಿಸಿಲ್ಲ.. ಯುದ್ಧ ಪ್ರಾರಂಭವಾಗಿ ಒಂದು ವಾರದ ನಂತರ ವಿದೇಶಾಂಗ ಕಾರ್ಯದರ್ಶಿ ಇರಾನಿನಲ್ಲಿನ ಸಾವುಗಳಿಗೆ ಒಂದು ಸಾಲಿನಲ್ಲಿ ಖೇದ ವ್ಯಕ್ತಪಡಿಸುತ್ತಾರೆ.
ಆದರೆ ಈ ಸಾವಿರಾರು ಸಾವುಗಳಿಗೆ ಕಾರಣರಾದವರ ಕುರಿತು ಹೇಳಿಕೆ ನೀಡುವುದಿಲ್ಲ
ಆದರೆ ವಿಶ್ವಸಂಸ್ಥೆಯಲ್ಲಿ ಗಲ್ಫ್ ದೇಶಗಳ ಮೇಲಿನ ಇರಾನ್ ದಾಳಿಯನ್ನು ಖಂಡಿಸುವ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಸಹಿ ಹಾಕುತ್ತಾರೆ..
ಇದು ತಟಸ್ಥ ನೀತಿಯೇ?

ಭಾರತ ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಆದರೆ ಈ ಒಕ್ಕೂಟದ ಸದಸ್ಯ ದೇಶವಾದ ಇರಾನ್ ಪರ ಮಾತನಾಡುತ್ತಿಲ್ಲ..
ಮುಂದಿನ ನವೆಂಬರ್ ತಿಂಗಳಲ್ಲಿ ಬ್ರಿಕ್ಸ್ ಶೃಂಗಸಭೆ ಇದೆ. ಆಗ ಯಾವ ಮುಖ ಹೊತ್ತು ಭಾಗವಹಿಸುತ್ತದೆ?
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜೊತೆಗೆ ಮೋದಿಯವರು ಫೋನ್ ಮೂಲಕ ಮಾತನಾಡಿ ‘ಹೊರ್ಮೂಜ್ ಜಲಸಂಧಿ’ ಮೂಲಕ ತೈಲ ನೌಕೆಗಳು ಹಾದು ಹೋಗಲು ಕುರಿತು ಚರ್ಚೆ ನಡೆಸಿದರು ಎಂದು ವರದಿಯಾಗಿದೆ. ನಿಜ ಇದು ಅಗತ್ಯವಿದೆ.
ಆದರೆ ಇರಾನ್ ‘ಭಾರತದಿಂದ ರಾಜತಾಂತ್ರಿಕವಾಗಿ ಮರಳಿ ನಮಗೇನು ಸಿಗುತ್ತಿದೆ’ ಎಂದು ಕೇಳುತ್ತಿದೆ.. ಇದಕ್ಕೆ ಭಾರತದ ಬಳಿ ಉತ್ತರವಿಲ್ಲ..
ಹೊರ್ಮೂಜ್ ಜಲಸಂಧಿ ಮೂಲಕ ಭಾರತದ ಹತ್ತಾರು ತೈಲ ನೌಕೆಗಳು ಹಾದು ಬರಬೇಕು ಎಂದು ಗೊತ್ತಿದ್ದರೂ ಇರಾನ್ ಜೊತೆಗೆ ಮಾತುಕತೆ ನಡೆಸುವ ಗೋಜಿಗೆ ಹೋಗದೆ ಅದರ ವಿರೋಧಿ ಪಾಳ್ಯದಲ್ಲಿ ಗುರುತಿಸಿಕೊಂಡಿದ್ದು ಅನೈತಿಕತೆ ಮತ್ತು ರಾಜತಾಂತ್ರಿಕ ವೈಫಲ್ಯ.

ಜೂನ್ 2025ರಲ್ಲಿಯೇ ಅಮೇರಿಕಾ ಏಕಪಕ್ಷೀಯವಾಗಿ ಇರಾನ್ ಮೇಲೆ ದಾಳಿ ಮಾಡಿದಾಗ ಎಚ್ಚೆತ್ತುಕೊಂಡು ಸುರಕ್ಷಿತ ಪ್ರಮಾಣದ ತೈಲ ಸಂಗ್ರಹದ ಕಡೆ ಯಾಕೆ ಗಮನ ಹರಿಸದೆ ವ್ಯರ್ಥವಾಗಿ ಕಾಲ ಕಳೆದರು? ಇಂದಿನ ಗಂಭೀರ ಪರಿಸ್ಥಿತಿ ತಂದುಕೊಂಡಿದ್ಯಾಕೆ?
ಇದನ್ನು ‘ಉತ್ತಮ ಆಡಳಿತ ‘ ಎಂದು ಕರೆಯಲು ಸಾಧ್ಯವೇ?

ರಷ್ಯಾ ಜೊತೆಗೆ ತೈಲ ಖರೀದಿ ಸಂಬಂಧದ ವ್ಯವಹಾರ ಒಪ್ಪಂದ ಕುರಿತು ಸರ್ಕಾರದ ನಡೆ ಅವಮಾನಕರವಾಗಿದೆ. ಉತ್ತಮ ರಾಜತಾಂತ್ರಿಕತೆಯ ಕೊರತೆ ಮತ್ತು ಆ ಕುರಿತು ಅಜ್ಞಾನದ ಕಾರಣ ಇಡೀ ದೇಶವೇ ಸಂದಿಗ್ಧತೆಯಲ್ಲಿದೆ.
ರಷ್ಯಾ ಜೊತೆಗೆ ತೈಲ ಖರೀದಿ ವ್ಯವಹಾರವನ್ನು ಸಮರ್ಥವಾಗಿ ನಿರ್ವಹಿಸಿದ್ದರೆ ಇಂದಿನ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ…

ಇದಕ್ಕೆ ಮೋದಿ ನೇತೃತ್ವದ ಸರ್ಕಾರ ಜವಾಬ್ದಾರಿ ಹೊರಬೇಕು.. ಉತ್ತರ ಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...