Homeಮುಖಪುಟಠಕ್ಕರ್: ಎದುರಾಬದುರಾ! 'ಬಾಹರ್ ಕೆ ಕಪಡೆ ಚೋಡೋ, ಜರಾ ಅಂದರ್ ದೇಖೋ ಭಾಯ್'

ಠಕ್ಕರ್: ಎದುರಾಬದುರಾ! ‘ಬಾಹರ್ ಕೆ ಕಪಡೆ ಚೋಡೋ, ಜರಾ ಅಂದರ್ ದೇಖೋ ಭಾಯ್’

- Advertisement -

| ವಿಡಂಬನೆ: ಮಲ್ಲಿ |

- Advertisement -

ನೀವು ಸಂದರ್ಶಿಸಬೇಕಿದ್ದ ವ್ಯಕ್ತಿ ನಿಮಗೆ ಸುಲಭದಲ್ಲಿ ಸಿಗುತ್ತಾರೆ. ಆದರೆ, ಅವರ ಬಾಯಿಂದ ಸತ್ಯಗಳು ಸುಲಭದಲ್ಲಿ ಸಿಗುವುದಿಲ್ಲ. ಹಾಗಾಗಿ ಮನೋಲೋಕದಲ್ಲೇ ಇಬ್ಬರನ್ನೂ ಕೂರಿಸಿಕೊಂಡು ಸತ್ಯ ಹೊರತೆಗೆಯೋಣ ಎಂದು ಠಕ್ಕರ್ ನಿರ್ಧರಿಸಿದ್ದಾರೆ. ವಾರಕ್ಕೆರಡು ಸಂದರ್ಶನ ಗ್ಯಾರಂಟಿ.

ಮೋದಿಯೊಂದಿಗೆ ಒಂದು SUM-ದರ್ಶನ

ಅಕ್ಷಿ ಮತ್ತು ಇಂಡಿಯಾ ‘ಕಡೆ’ಯವರ ಸಂದರ್ಶನದ ನಂತರ ನಮ್ಮ ಠಕ್ಕ(ರ್) ಸ್ನೇಹಿತ ಒಂದು ಚಿಟ್‍ಚಾಟ್ ಮಾಡಿದ್ದಾನೆ….

ಠಕ್ಕರ್: ಅಕ್ಷಯ್ ನಿಮ್ಮ ಡ್ರೆಸ್ ಬಗ್ಗೆ ಕೇಳಿದಾಗ, ತಾವು ಒಳ್ಳೆ ಬಟ್ಟೆ ತೊಡುವ ತಮ್ಮ ಹಂಬಲ ಈಗ ಈಡೇರಿದೆ ಅಂದಿರಿ. ಮೂರ್ಖ ಅಕ್ಷಿ ಹಿಹಿಹಿ ಅಂದು ಬಿಟ್ಟ…

ಗುರೇಂದ್ರ ಕೌದಿ: ಅಚ್ಚಾ, ಅಕ್ಷಿ ಒಬ್ಬ ಸಿನಿಮಾ ನಟ ಅಷ್ಟೇ.. ಅವಂಗೆ ಎಲ್ಲ ಗೊತ್ತಾಗಲ್ಲ. ಬಟ್, ಇಂದಿಯಾ ‘ಕಡೆ’ ಸಂದರ್ಶನದಲ್ಲಿ ಪ್ರಶ್ನೆ ಕೇಳ್ತಾ ಇದ್ದ ಆ ಇಬ್ಬರು ಯುವತಿಯರಿಗೆ ದಿರಿಸುಗಳ ಬಗ್ಗೆ ಅದ್ಭುತ ಹೊಳವು ಇದ್ದವು. ಆದರೆ ಅಕ್ಷಿಯಂತೆ ಅವರೂ ನನ್ನ ದುಬಾರಿ ಡ್ರೆಸ್ ಬಗ್ಗೆ ಕೇಳಿಬಿಟ್ಟರು.

ಮೈ ನೆ ಇಸ್‍ಕೋ ಬೋಲಾ, ಬಾಹರ್ ಕೆ ಕಪಡೆ ಚೋಡೋ, ಅಂದರ್ ಕಿ ಬಾತ್ ಕರೋ…

ಠಕ್ಕರ್: ಸರ್ ಅವರಿಗೇನು ಗೊತ್ತು ಅಂತರಾಳದ ಮರ್ಮ, ಒಳಗಿನ ಬೇಗುದಿ… ಆದರೂ ಒಂದ್ ಪರ್ಸನಲ್ ಪ್ರಶ್ನೆ, ‘ಅಂದರ್ ಕಿ ಬಾತ್ ವೊ ಕ್ಯಾ ಹೌ ಡ್ರೆಸ್ ಕೆ ಬಾರೆ ಮೆಂ’

ಗುರೇಂದ್ರ ಕೌದಿ: ಅಂದರ್ ಕಿ ಬಾತ್ ಅಂದರ್ ಹಿ ಹೋನಾ ಭಯ್ಯಾ… ಭಯ್ಯಾ ಸಚ್‍ಮುಚ್ ಬೋಲ್ತಾ ಹೂ ಅಂದರ್ ಕುಚ್ ನಹಿ! (ಒಳಗಿನ ವಿಷ್ಯ ಒಳಗ ಇರ್ಬೇಕು ಮಾರಾಯ…ಖರೆ ಹೇಳ್ತೀನಿ, ಒಳಗ ಏನ್ ಅಂದ್ರ ಏನೂ ಇಲ್ಲ..|)

ಠಕ್ಕರ್: ಕ್ಯಾ ಸಚ್ ಬತಾಯಾ ಆಪನೆ ಸರ್! ಮಗರ್ ಏಕ್ ಬಾತ್ ಪರ್ಸನಲ್ ಸರ್, ಮೇರಾ ಅಂದರ್ ಕುಚ್ ಹೈ, ಬನಿಯನ್ ಔರ್ ಅಂಡರ್‍ವೇರ್….ಆಪ್ ಕೆ ಪಾಸ್ ವೊ ಭಿ ನಹಿಂ ಹೈ! ಸೊ ಸಿಂಪಲ್ ಸರ್ ಯು ಆರ್…( ಎಂತಹ ಸತ್ಯ ಹೇಳಿದ್ರಿ ನೀವು! ಆದ್ರ ಒಂದ್ ಪರ್ಸನಲ್ ಮಾತ್ ಐತ್ರಿ, ನಂಗ ಒಳಗ ಸಂಥಿಂಗ್ ಐತ್ರಿ, ಅಂಡರ್‍ವೇರು, ಬನಿಯನ್ನು….ನಿಮ್ಮತ್ರ ಅವೂ ಇಲ್ಲ ಅಂದ್ರ, ನೀವೆಷ್ಟು ಸಿಂಪಲ್ ಸರ್?)

ಗುರೇಂದ್ರ ಕೌದಿ: ಅಕ್ಷಿ, ಕುನ್ವಾಲ್ ಟೀಮ್‍ಗೆ ಅರ್ಥವಾಗದ್ದನ್ನು ನೀ ಕಂಡು ಹಿಡಿದೆ… ಒಳಗಿನ ಮಾತಲ್ಲವಾ? ಇಸಿ ಲಿಯೆ ಮೈ ಆಮ್ ಆದ್ಮಿಯೊ ಕಾ ಬಾತ್ ಕೊ ರಿಸ್ಪೆಕ್ಟ್ ಕರತಾ ಹೂಂ…

ಠಕ್ಕರ್: ಅಲ್ಲ ಸರ್, ಬ್ಯಾಗ್ ಚಿಕ್ಕದು ಅಂತಾ ನೀವು ಫುಲ್ ತೋಳಿನ ಶರ್ಟನ್ನೇ ಅರ್ಧ ತೋಳಿನ ಶರ್ಟಾಗಿ ಕಟ್ ಮಾಡತಾ ಇದ್ದಿರಂತೆ… ಎಂತಹ ಐಡಿಯಾ ಸರ್?

ಗುರೇಂದ್ರ ಮೋದಿ: ಹಾ ಹಾ….ಅಹಹಾ.. ಅದಕ್ಕೂ ತಲೆ ಬೇಕಲ್ವಾ?

ಠಕ್ಕರ್: ಬ್ಯಾಗ್ ಚಿಕ್ಕದು ಅನ್ನೋ ಫಾರ್ಮುಲಾ ಇಟ್‍ಕೊಂಡು ಕ್ಷಮಿತ್ ಶಾ ಅವರು, ದೇಶ ಚಿಕ್ಕದು, ಇಷ್ಟೆಲ್ಲ ಜನರಿಗೆ ಸಾಲಲ್ಲ ಅಂತ ಎನ್‍ಆರ್‍ಸಿ ಅನ್ನೋ ಕತ್ತರಿ ಬಳಸಿ ಜನರನ್ನೇ ಕಟ್ ಮಾಡೋಕೆ ಹೊಂಟಂಗಿದೆ?

ಗುರೇಂದ್ರ ಮೋದಿ: ಭಯ ಬೇಡ…ಅದೆಲ್ಲ ಆಗುತ್ತ? ಆಫ್ ದಿ ರೆಕಾರ್ಡ್ ಹೇಳ್ತೀನಿ: ರಾಮ ಮಂದಿರ ಮಾಡಿದ್ವಾ? 370 ಆರ್ಟಿಕಲ್? ಕಪ್ಪು ಹಣ? ಕಾಂಗ್ರೆಸ್ ಜೈಲು? ಇವೆಲ್ಲ ಸುಮ್ಮನೇ ಮಾರಾಯ….ಇಲೆಕ್ಷನ್‍ವರೆಗೆ ಇದೆಲ್ಲ ಆಫ್ ದಿ ರೆಕಾರ್ಡ್ ಆಗಿರಲಿ..

ಠಕ್ಕರ್: ಸರ್, ಮಾವಿನ ಹಣ್ಣಿನ ಜೊತೆ ಹಲಸಿನ ಹಣ್ಣು ಸಿಕ್ಕಿದ್ದರೆ ಏನ್ ಮಾಡ್ತಿದ್ರಿ? ಸುಮ್ಮನೆ ಕುತೂಹಲ ಅಷ್ಟೇ…

ಗುರೇಂದ್ರ ಕೌದಿ: ಯಾಕೆ ಭಯ? ಒಳ್ಳೆ ಪ್ರಶ್ನೆ. ಅಕ್ಷಯ್ ಕೂಡ ಹಿಂಗೇ ಫೇಮಸ್ ಆಗಲಿಲ್ವಾ? ಕರಡಿ ಅಂದ್ರ ಜಾಂಬುವಂತ ಅಲ್ವಾ? ಕರಡಿ ತರಹ ತಿನ್ನೋ ಶಕ್ತಿಯನ್ನ ಆ ಜಾಂಬುವಂತ ಕೊಡ್ತಿದ್ದ. ಬಟ್, ಆಗ ನೆಹರು ಕಾರಣದಿಂದಾಗಿ, ಕರಡಿ ದ್ವೇಷದಿಂದಾಗಿ ಹಲಸಿನ ಹಣ್ಣುಗಳನ್ನು ಬೆಳೆಯೋದನ್ನೇ ನಿಷೇಧಿಸಿಲಾಗಿತ್ತು.

ಠಕ್ಕರ್: ಕೊನೆ ಪ್ರಶ್ನೆ. ಅಕ್ಕೋರನ್ನ ನೀವ್ ಬಿಟ್ ಬರಬಾರದಿತ್ತು ಅಲ್ಲವಾ?

ಗುರೇಂದ್ರ ಕೌದಿ: ಅಕ್ಷಯ್, ಕುನ್ವಲ್, ಅರ್ನಾಬ್ ಈ ಪ್ರಶ್ನೆ ಕೇಳಲಿಲ್ಲ. ಅವರಿಗೆ ಸಂಘದ ‘ಸ್ವಯಂಸೇವಕ’ ಅಂದರೆ ಏನು ಅಂತಾ ಗೊತ್ತು. ನನಗೆ ಮದುವೆಯಾದ ಮೇಲೂ ಸ್ವಯಂಸೇವಕ ಆಗಿರುವುದೇ ತೃಪ್ತಿ ಕೊಡ್ತಾ ಇತ್ತು. ಮನೆಯಲ್ಲೇ ಇದ್ದುಕೊಂಡು ಸ್ವಯಂಸೇವೆಯ ಕಡೆ ಒತ್ತು ಕೊಡೋದು ತಪ್ಪಲ್ವಾ? ಅದಕ್ಕೇ ದೇಶಾಂತರ ಹೊರಟು ಬಿಟ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...