Homeಮುಖಪುಟಠಕ್ಕರ್: ಎದುರಾಬದುರಾ! 'ಬಾಹರ್ ಕೆ ಕಪಡೆ ಚೋಡೋ, ಜರಾ ಅಂದರ್ ದೇಖೋ ಭಾಯ್'

ಠಕ್ಕರ್: ಎದುರಾಬದುರಾ! ‘ಬಾಹರ್ ಕೆ ಕಪಡೆ ಚೋಡೋ, ಜರಾ ಅಂದರ್ ದೇಖೋ ಭಾಯ್’

- Advertisement -

| ವಿಡಂಬನೆ: ಮಲ್ಲಿ |

- Advertisement -

ನೀವು ಸಂದರ್ಶಿಸಬೇಕಿದ್ದ ವ್ಯಕ್ತಿ ನಿಮಗೆ ಸುಲಭದಲ್ಲಿ ಸಿಗುತ್ತಾರೆ. ಆದರೆ, ಅವರ ಬಾಯಿಂದ ಸತ್ಯಗಳು ಸುಲಭದಲ್ಲಿ ಸಿಗುವುದಿಲ್ಲ. ಹಾಗಾಗಿ ಮನೋಲೋಕದಲ್ಲೇ ಇಬ್ಬರನ್ನೂ ಕೂರಿಸಿಕೊಂಡು ಸತ್ಯ ಹೊರತೆಗೆಯೋಣ ಎಂದು ಠಕ್ಕರ್ ನಿರ್ಧರಿಸಿದ್ದಾರೆ. ವಾರಕ್ಕೆರಡು ಸಂದರ್ಶನ ಗ್ಯಾರಂಟಿ.

ಮೋದಿಯೊಂದಿಗೆ ಒಂದು SUM-ದರ್ಶನ

ಅಕ್ಷಿ ಮತ್ತು ಇಂಡಿಯಾ ‘ಕಡೆ’ಯವರ ಸಂದರ್ಶನದ ನಂತರ ನಮ್ಮ ಠಕ್ಕ(ರ್) ಸ್ನೇಹಿತ ಒಂದು ಚಿಟ್‍ಚಾಟ್ ಮಾಡಿದ್ದಾನೆ….

ಠಕ್ಕರ್: ಅಕ್ಷಯ್ ನಿಮ್ಮ ಡ್ರೆಸ್ ಬಗ್ಗೆ ಕೇಳಿದಾಗ, ತಾವು ಒಳ್ಳೆ ಬಟ್ಟೆ ತೊಡುವ ತಮ್ಮ ಹಂಬಲ ಈಗ ಈಡೇರಿದೆ ಅಂದಿರಿ. ಮೂರ್ಖ ಅಕ್ಷಿ ಹಿಹಿಹಿ ಅಂದು ಬಿಟ್ಟ…

ಗುರೇಂದ್ರ ಕೌದಿ: ಅಚ್ಚಾ, ಅಕ್ಷಿ ಒಬ್ಬ ಸಿನಿಮಾ ನಟ ಅಷ್ಟೇ.. ಅವಂಗೆ ಎಲ್ಲ ಗೊತ್ತಾಗಲ್ಲ. ಬಟ್, ಇಂದಿಯಾ ‘ಕಡೆ’ ಸಂದರ್ಶನದಲ್ಲಿ ಪ್ರಶ್ನೆ ಕೇಳ್ತಾ ಇದ್ದ ಆ ಇಬ್ಬರು ಯುವತಿಯರಿಗೆ ದಿರಿಸುಗಳ ಬಗ್ಗೆ ಅದ್ಭುತ ಹೊಳವು ಇದ್ದವು. ಆದರೆ ಅಕ್ಷಿಯಂತೆ ಅವರೂ ನನ್ನ ದುಬಾರಿ ಡ್ರೆಸ್ ಬಗ್ಗೆ ಕೇಳಿಬಿಟ್ಟರು.

ಮೈ ನೆ ಇಸ್‍ಕೋ ಬೋಲಾ, ಬಾಹರ್ ಕೆ ಕಪಡೆ ಚೋಡೋ, ಅಂದರ್ ಕಿ ಬಾತ್ ಕರೋ…

ಠಕ್ಕರ್: ಸರ್ ಅವರಿಗೇನು ಗೊತ್ತು ಅಂತರಾಳದ ಮರ್ಮ, ಒಳಗಿನ ಬೇಗುದಿ… ಆದರೂ ಒಂದ್ ಪರ್ಸನಲ್ ಪ್ರಶ್ನೆ, ‘ಅಂದರ್ ಕಿ ಬಾತ್ ವೊ ಕ್ಯಾ ಹೌ ಡ್ರೆಸ್ ಕೆ ಬಾರೆ ಮೆಂ’

ಗುರೇಂದ್ರ ಕೌದಿ: ಅಂದರ್ ಕಿ ಬಾತ್ ಅಂದರ್ ಹಿ ಹೋನಾ ಭಯ್ಯಾ… ಭಯ್ಯಾ ಸಚ್‍ಮುಚ್ ಬೋಲ್ತಾ ಹೂ ಅಂದರ್ ಕುಚ್ ನಹಿ! (ಒಳಗಿನ ವಿಷ್ಯ ಒಳಗ ಇರ್ಬೇಕು ಮಾರಾಯ…ಖರೆ ಹೇಳ್ತೀನಿ, ಒಳಗ ಏನ್ ಅಂದ್ರ ಏನೂ ಇಲ್ಲ..|)

ಠಕ್ಕರ್: ಕ್ಯಾ ಸಚ್ ಬತಾಯಾ ಆಪನೆ ಸರ್! ಮಗರ್ ಏಕ್ ಬಾತ್ ಪರ್ಸನಲ್ ಸರ್, ಮೇರಾ ಅಂದರ್ ಕುಚ್ ಹೈ, ಬನಿಯನ್ ಔರ್ ಅಂಡರ್‍ವೇರ್….ಆಪ್ ಕೆ ಪಾಸ್ ವೊ ಭಿ ನಹಿಂ ಹೈ! ಸೊ ಸಿಂಪಲ್ ಸರ್ ಯು ಆರ್…( ಎಂತಹ ಸತ್ಯ ಹೇಳಿದ್ರಿ ನೀವು! ಆದ್ರ ಒಂದ್ ಪರ್ಸನಲ್ ಮಾತ್ ಐತ್ರಿ, ನಂಗ ಒಳಗ ಸಂಥಿಂಗ್ ಐತ್ರಿ, ಅಂಡರ್‍ವೇರು, ಬನಿಯನ್ನು….ನಿಮ್ಮತ್ರ ಅವೂ ಇಲ್ಲ ಅಂದ್ರ, ನೀವೆಷ್ಟು ಸಿಂಪಲ್ ಸರ್?)

ಗುರೇಂದ್ರ ಕೌದಿ: ಅಕ್ಷಿ, ಕುನ್ವಾಲ್ ಟೀಮ್‍ಗೆ ಅರ್ಥವಾಗದ್ದನ್ನು ನೀ ಕಂಡು ಹಿಡಿದೆ… ಒಳಗಿನ ಮಾತಲ್ಲವಾ? ಇಸಿ ಲಿಯೆ ಮೈ ಆಮ್ ಆದ್ಮಿಯೊ ಕಾ ಬಾತ್ ಕೊ ರಿಸ್ಪೆಕ್ಟ್ ಕರತಾ ಹೂಂ…

ಠಕ್ಕರ್: ಅಲ್ಲ ಸರ್, ಬ್ಯಾಗ್ ಚಿಕ್ಕದು ಅಂತಾ ನೀವು ಫುಲ್ ತೋಳಿನ ಶರ್ಟನ್ನೇ ಅರ್ಧ ತೋಳಿನ ಶರ್ಟಾಗಿ ಕಟ್ ಮಾಡತಾ ಇದ್ದಿರಂತೆ… ಎಂತಹ ಐಡಿಯಾ ಸರ್?

ಗುರೇಂದ್ರ ಮೋದಿ: ಹಾ ಹಾ….ಅಹಹಾ.. ಅದಕ್ಕೂ ತಲೆ ಬೇಕಲ್ವಾ?

ಠಕ್ಕರ್: ಬ್ಯಾಗ್ ಚಿಕ್ಕದು ಅನ್ನೋ ಫಾರ್ಮುಲಾ ಇಟ್‍ಕೊಂಡು ಕ್ಷಮಿತ್ ಶಾ ಅವರು, ದೇಶ ಚಿಕ್ಕದು, ಇಷ್ಟೆಲ್ಲ ಜನರಿಗೆ ಸಾಲಲ್ಲ ಅಂತ ಎನ್‍ಆರ್‍ಸಿ ಅನ್ನೋ ಕತ್ತರಿ ಬಳಸಿ ಜನರನ್ನೇ ಕಟ್ ಮಾಡೋಕೆ ಹೊಂಟಂಗಿದೆ?

ಗುರೇಂದ್ರ ಮೋದಿ: ಭಯ ಬೇಡ…ಅದೆಲ್ಲ ಆಗುತ್ತ? ಆಫ್ ದಿ ರೆಕಾರ್ಡ್ ಹೇಳ್ತೀನಿ: ರಾಮ ಮಂದಿರ ಮಾಡಿದ್ವಾ? 370 ಆರ್ಟಿಕಲ್? ಕಪ್ಪು ಹಣ? ಕಾಂಗ್ರೆಸ್ ಜೈಲು? ಇವೆಲ್ಲ ಸುಮ್ಮನೇ ಮಾರಾಯ….ಇಲೆಕ್ಷನ್‍ವರೆಗೆ ಇದೆಲ್ಲ ಆಫ್ ದಿ ರೆಕಾರ್ಡ್ ಆಗಿರಲಿ..

ಠಕ್ಕರ್: ಸರ್, ಮಾವಿನ ಹಣ್ಣಿನ ಜೊತೆ ಹಲಸಿನ ಹಣ್ಣು ಸಿಕ್ಕಿದ್ದರೆ ಏನ್ ಮಾಡ್ತಿದ್ರಿ? ಸುಮ್ಮನೆ ಕುತೂಹಲ ಅಷ್ಟೇ…

ಗುರೇಂದ್ರ ಕೌದಿ: ಯಾಕೆ ಭಯ? ಒಳ್ಳೆ ಪ್ರಶ್ನೆ. ಅಕ್ಷಯ್ ಕೂಡ ಹಿಂಗೇ ಫೇಮಸ್ ಆಗಲಿಲ್ವಾ? ಕರಡಿ ಅಂದ್ರ ಜಾಂಬುವಂತ ಅಲ್ವಾ? ಕರಡಿ ತರಹ ತಿನ್ನೋ ಶಕ್ತಿಯನ್ನ ಆ ಜಾಂಬುವಂತ ಕೊಡ್ತಿದ್ದ. ಬಟ್, ಆಗ ನೆಹರು ಕಾರಣದಿಂದಾಗಿ, ಕರಡಿ ದ್ವೇಷದಿಂದಾಗಿ ಹಲಸಿನ ಹಣ್ಣುಗಳನ್ನು ಬೆಳೆಯೋದನ್ನೇ ನಿಷೇಧಿಸಿಲಾಗಿತ್ತು.

ಠಕ್ಕರ್: ಕೊನೆ ಪ್ರಶ್ನೆ. ಅಕ್ಕೋರನ್ನ ನೀವ್ ಬಿಟ್ ಬರಬಾರದಿತ್ತು ಅಲ್ಲವಾ?

ಗುರೇಂದ್ರ ಕೌದಿ: ಅಕ್ಷಯ್, ಕುನ್ವಲ್, ಅರ್ನಾಬ್ ಈ ಪ್ರಶ್ನೆ ಕೇಳಲಿಲ್ಲ. ಅವರಿಗೆ ಸಂಘದ ‘ಸ್ವಯಂಸೇವಕ’ ಅಂದರೆ ಏನು ಅಂತಾ ಗೊತ್ತು. ನನಗೆ ಮದುವೆಯಾದ ಮೇಲೂ ಸ್ವಯಂಸೇವಕ ಆಗಿರುವುದೇ ತೃಪ್ತಿ ಕೊಡ್ತಾ ಇತ್ತು. ಮನೆಯಲ್ಲೇ ಇದ್ದುಕೊಂಡು ಸ್ವಯಂಸೇವೆಯ ಕಡೆ ಒತ್ತು ಕೊಡೋದು ತಪ್ಪಲ್ವಾ? ಅದಕ್ಕೇ ದೇಶಾಂತರ ಹೊರಟು ಬಿಟ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...