Homeಕರ್ನಾಟಕಮುಟ್ಟಿನ ಬೆಳಕು : ಸತ್ಯಾ ಎಸ್

ಮುಟ್ಟಿನ ಬೆಳಕು : ಸತ್ಯಾ ಎಸ್

- Advertisement -
- Advertisement -

‘ಮುಟ್ಟಿನಿಂದ ಹುಟ್ಟು’ ಎನ್ನುವ ಸರಳ ಸತ್ಯ ಎಲ್ಲರಿಗೂ ಬೆಳಕಿನಷ್ಟು ನಿಚ್ಚಳವಾಗಿದ್ದರೂ, ಮುಟ್ಟನ್ನು ಮೈಲಿಗೆ ಎನ್ನುವಷ್ಟು ದ್ರಾಷ್ಟ್ಯ ಮನುಷ್ಯ ಕುಲವನ್ನು ಕಾಡುತ್ತಿರುವುದು ಗಂಭೀರವಾದ ವಿಷಯ. ತನ್ನ ಹುಟ್ಟಿಗೆ ಕಾರಣವಾದ, ನೈಸರ್ಗಿಕವಾದ, ವೈಜ್ಞಾನಿಕವಾದ ಕ್ರಿಯೆಯನ್ನೇ ಮನುಷ್ಯ ತನ್ನ ಅಹಂಕಾರ, ಅಧಿಕಾರ ಲಾಲಸೆ, ದೊಡ್ಡಸ್ತಿಕೆಯ ಅಸ್ತ್ರವಾಗಿ ಬಳಸುತ್ತಿರುವುದು ಮನುಷ್ಯ ಕುಲ ಇನ್ನೂ ಎಷ್ಟೊಂದು ಅವೈಜ್ಞಾನಿಕವಾಗಿ, ಅವೈಚಾರಿಕಾಗಿ ಹಾಗೂ ಅನೈಸರ್ಗಿಕವಾಗಿ ಆಲೋಚಿಸುತ್ತಿದೆ, ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅಪ್ರಜಾಸತ್ತಾತ್ಮಕವಾದ ದಸರಾ ಆಚರಣೆಯನ್ನು ಉದ್ಘಾಟಿಸಿದ ಪುರೋಗಾಮಿ ಚಿಂತನೆಯ ಲೇಖಕ ಎಸ್ ಎಲ್ ಬೈರಪ್ಪನವರು ಮುಟ್ಟಾಗುವ ಹೆಂಗಸರು ದೇವಸ್ಥಾನಕ್ಕೆ ಹೋಗುವಂತಿಲ್ಲ, ಆಫೀಸಿಗೆ ಹೋಗಬಹುದು ಎನ್ನುವ ಮೂಲಕ ಬಹುಪಾಲು ಮನುಷ್ಯರ ಹಿಮ್ಮುಖದ ಚಲನೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಹೆಣ್ಣನ್ನು ನಿಯಂತ್ರಿಸುವ ಮತ್ತು ಬಳಸಿಕೊಳ್ಳುವ ಪಿತೃಪ್ರಧಾನ ಹಾಗೂ ಪಾಳೇಗಾರಿ ಮನೋಭಾವವನ್ನು ಯಾವ ಹಿಂಜರಿಕೆ, ಸಂಕೋಚವಿಲ್ಲದೆ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ನೀಲಾಂಚಲದಲ್ಲಿರುವ, ಫಲವಂತಿಕೆಯ ಸ್ವರೂಪ ಎಂದು ಹೆಸರಾದ ದೇವಸ್ಥಾನ, ಕಾಮಾಕ್ಯ ದೇವಿಯ ದೇವಸ್ಥಾನ. ಗರ್ಭಾಶಯ ಆಕೃತಿಯ ಗರ್ಭಗೃಹ, ಯೋನಿ ರೂಪದ ದೇವತೆ ಮತ್ತು ನಸುಗೆಂಪು ಬಣ್ಣದ ಯೋನಿಯಿಂದ ಸ್ರವಿಸುವ ನೀರು- ಇವು ಆ ದೇವಾಲಯದ ಮುಖ್ಯಾಂಶಗಳು. ತಮ್ಮ ಒಂದೊಂದು ಕಾದಂಬರಿಗೂ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಅಪಾರ ಖಚಿತತೆಯಿಂದ ಸಾಹಿತ್ಯ ಕೃತಿಗಳನ್ನು ರಚಿಸುವ ಬೈರಪ್ಪನವರು, ಈ ಕಾಮಾಕ್ಯ ದೇವಸ್ಥಾನಕ್ಕೂ ಹೋಗಿಬಂದಿದ್ದಾರೆ. ಹಾಗಿದ್ದ ಮೇಲೆ, ಮುಟ್ಟಿನ ಕುರಿತು ಇವರು ಯಾವ ರೀತಿಯ ಅನುಸಂಧಾನ ನಡೆಸಿದ್ದಾರೆ? ಎಂದು ಅಚ್ಚರಿಯಾಗುತ್ತದೆ.

ಎಪ್ಪತ್ತರ ದಶಕದ ಎರಡನೇ ಭಾಗದಲ್ಲಿ ಸ್ಯಾನಿಟರಿ ಪ್ಯಾಡ್‍ಗಳು ಚಲಾವಣೆಗೆ ಬಂದಾಗ ಮಹಿಳೆಯರ ನಡುವೆ ಮುಟ್ಟು ಮೌನ ಮುರಿದು ‘ಗುಸುಗುಸು’ ಮಾತಿನ ಅಂಗಳಕ್ಕೆ ಬಂದು ನಿಂತಿತ್ತು. ಸ್ಯಾನಿಟರಿ ಪ್ಯಾಡ್‍ಗಳ ಜಾಹಿರಾತು ಟಿವಿ ಪರದೆಯಲ್ಲಿ ಮೂಡತೊಡಗಿದಾಗ ಗಂಡಸರೂ ಈ ಕುರಿತು ಗುಸುಗುಸು ಮಾಡತೊಡಗಿದರು. ಸ್ಯಾನಿಟರಿ ಪ್ಯಾಡ್ ಕಂಪೆನಿಗಳು ತಮ್ಮ ಮಾರುಕಟ್ಟೆಯ ವಿಸ್ತರಣೆಗಾಗಿ ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಋತುಸ್ರಾವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಆರಂಭಿಸಿದವು. ಹೀಗೆ ಮಾರುಕಟ್ಟೆಯ ಕಾರಣ ಮುಟ್ಟಿನ ಮಾತು ಕೌಟುಂಬಿಕ ಮತ್ತು ಸಾಮಾಜಿಕ ಸ್ಥಳಗಳಲ್ಲಿ ವಿಸ್ತರಣೆಯಾಯಿತು. ಆದರೆ ಸಾಂಸ್ಕøತಿಕವಾಗಿ ಮುಟ್ಟು ಯಾವತ್ತಿಗೂ ಮುಕ್ತವಾಗಿ ಹಾಗೂ ಗುಪ್ತವಾಗಿ ಮಾತಿನಲ್ಲಿ, ಚರ್ಚೆಯಲ್ಲಿ, ಆಚರಣೆಯಲ್ಲಿ ಹಾಗೂ ವಿಜೃಂಭಣೆಯಲ್ಲಿ ವಸ್ತುವಾಗಿದ್ದುಕೊಂಡೇ ಇದೆ.

ಇತ್ತೀಚೆಗೆ ಶಬರಿಮಲೆ ನಿಮಿತ್ತ ಮುಟ್ಟು ಸಾರ್ವಜನಿಕ ಚರ್ಚೆಗೆ ಹೆಚ್ಚೆಚ್ಚು ತೆರೆದುಕೊಂಡು, ಮುಟ್ಟನ್ನು ಗಲೀಜು ಎಂದು ಜರೆಯುವವರ ಮನಸ್ಸಿನ ಕೊಳಕನ್ನೆಲ್ಲ ಹೊರಗೆ ಚೆಲ್ಲುತ್ತಿದೆ. 2015ರ ನವೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನದ ಮುಖ್ಯಸ್ಥ ಗೋಪಾಲಕೃಷ್ಣನ್, ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ಸ್ಕ್ಯಾನ್ ಮಾಡುವ ಯಂತ್ರ ಸ್ಥಾಪಿಸುವ ಕುರಿತು ಮಾತನಾಡಿದಾಗ, ಸಿಟ್ಟಿಗೆದ್ದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಕಿತಾ ಅರೋರಾ ‘ಹ್ಯಾಪಿ ಟು ಬ್ಲೀಡ್’ ಎಂಬ ಆಂದೋಲನವನ್ನೇ ಹುಟ್ಟು ಹಾಕಿದರು. ಸ್ಯಾನಿಟರಿ ಪ್ಯಾಡ್‍ಗಳನ್ನು ಹಿಡಿದುಕೊಂಡ ಯುವತಿಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿ, ಮುಟ್ಟಿಗೆ ಸಂಬಂಧಿಸಿದ ಮೂಢ ಆಚರಣೆಗಳು ಹಾಗೂ ವಿಧಿ ನಿಷೇಧಗಳನ್ನು ವಿರೋಧಿಸಿದರು.

2017ರಲ್ಲಿ ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಶೇ.12ರಷ್ಟು ತೆರಿಗೆ ಹೇರುವ ಕೇಂದ್ರ ಸರ್ಕಾರದ ಮೂರ್ಖ ಕ್ರಮವು ‘ರಕ್ತಕ್ಕೆ ತೆರಿಗೆ’ ಎಂಬ ತೆರಿಗೆ ವಿರೋಧಿ ಚಳವಳಿಯನ್ನು ಹುಟ್ಟುಹಾಕಿತು; 2018ರಲ್ಲಿ ತೆರಿಗೆ ರದ್ಧತಿಗೆ ಕಾರಣವಾಯಿತು. 2018ರ ಸೆಪ್ಟೆಂಬರ್‍ನಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಎಲ್ಲ ಮಹಿಳೆಯರಿಗೂ ಮುಕ್ತ ಅವಕಾಶ ಕೊಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೆಣ್ಣನ್ನು ಕುರಿತಾಗಿ ಈ ದೇಶಕ್ಕೆ ಇರುವ ಕೊಳಕು ನಿಲುವುಗಳನ್ನೆಲ್ಲ ಬೀದಿಗೆ ಚೆಲ್ಲಿತು. ಹೆಣ್ಣಿನಿಂದಲೇ ಹುಟ್ಟಿದ ದೇವರು ಹೆಣ್ಣಿನಿಂದಲೇ ಅಪವಿತ್ರನಾಗುತ್ತಾನೆ ಎನ್ನುವ ಭಕ್ತ ಗಣದ ಕುರುಡುತನವು ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯನ್ನೂ ಅನಾವರಣಗೊಳಿಸಿತು.

ಆದರೆ, ಈ ಕಾರಣಗಳು ಮುಟ್ಟಿನ ಕುರಿತಾದ ಚರ್ಚೆಯನ್ನು ಹೆಚ್ಚಿಸಿವೆ. ಜನರಲ್ಲಿ ಈ ಕುರಿತ ತಿಳಿವಳಿಕೆಯು ಹೆಚ್ಚಾಗುತ್ತಾ ಬಂದಿದೆ. ಮುಟ್ಟಿನ ಸಂದರ್ಭದ ಅಗತ್ಯಗಳ ಕುರಿತು, ಆರೋಗ್ಯದ ಕುರಿತು ಸಾಕಷ್ಟು ಧನಾತ್ಮಕ ಚಿಂತನೆಗಳು, ಬೆಳವಣಿಗೆಗಳು ನಡೆದಿವೆ. ಬರಹಗಾರರು, ಕಾರ್ಯಕರ್ತರು, ಸಂಘಟನೆಗಳು ಮುಟ್ಟಿನ ಕುರಿತು ಆರೋಗ್ಯಕರವಾಗಿ ಸ್ಪಂದಿಸಿದ್ದಾರೆ. ಸ್ವತಂತ್ರ ಯುಟ್ಯೂಬ್ ಚಾನೆಲ್‍ಗಳು ‘ಮುಟ್ಟು ಎಂದರೇನು’ ಎಂಬ ಸಾರ್ವಜನಿಕ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಿವೆ. ಮಂಗಳೂರಿನ ಶ್ರೀನಿವಾಸ ಕಾರ್ಕಳ ಅವರು ದಶಕಕ್ಕೂ ಹಿಂದೆಯೇ ‘ಮುಟ್ಟು ಮುಟ್ಟೇಂದೇಕೆ ಹೀಯಾಳಿಸುವಿರಿ?/ಮುಟ್ಟಿನಿಂದಲ್ಲವೇ ನಮ್ಮೆಲ್ಲ ಹುಟ್ಟು/ ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು..’ ಎಂದು ಬರೆದ ಹಾಡು ಅಸಂಖ್ಯಾತ ಮಹಿಳಾ ತರಬೇತಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಮುಟ್ಟಿನ ಕುರಿತಾದ ಮುಜುಗರವನ್ನು ಹೊಡೆದೋಡಿಸಿದೆ.

ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಯುವ ಜೋಡಿಯೊಂದು ಮುಟ್ಟಿನ ಕುರಿತು ತಿಳಿವಳಿಕೆ ಹೆಚ್ಚಿಸಲು ತಮ್ಮ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಸಖೀಭವ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ, ‘ಸುಸ್ಥಿರ ಮುಟ್ಟಿನ ಆರೋಗ್ಯ’ ಕುರಿತು ಆಂದೋಲನವನ್ನೇ ನಡೆಸಿದೆ. ಈ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವ ಜ್ಯೋತಿ ಇಟ್ನಾಳ್ ಮುಟ್ಟಿನ ಆಚರಣೆಗಳು ಹಾಗೂ ವಿಧಿ ನಿಷೇಧಗಳ ಕುರಿತಾಗಿಯೇ ಪಿಎಚ್‍ಡಿ ಸಂಶೋಧನೆಗೆ ಕೈಹಾಕಿದ್ದಾರೆ.

ಕಳೆದ ವರ್ಷ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿದ್ದ ಕೇರಳದಲ್ಲಿ ಮುಟ್ಟಾದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‍ನ ಬದಲಿಗೆ ಮುಟ್ಟಿನ ಬಟ್ಟಲುಗಳನ್ನು ಒದಗಿಸುವ ಕ್ರಾಂತಿಕಾರಿ ಕ್ರಮವನ್ನು ಅನುಸರಿಸಲಾಯಿತು. ಇದೇ ಮಾರ್ಗವನ್ನು ಅನುಸರಿಸಿ ಕಳೆದ ತಿಂಗಳು ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಶಿವಲೀಲಾ, ಸಂಜ್ಯೋತಿ, ದೀಪಾ ಮತ್ತು ಜ್ಯೋತಿಯವರ ಮುಂದಾಳತ್ವದಲ್ಲಿ ಸಾವಿರಾರು ಮುಟ್ಟಿನ ಬಟ್ಟಲುಗಳು ಪ್ರವಾಹಸಂತ್ರಸ್ತ ಮಹಿಳೆಯರಿಗೆ ಉಚಿತವಾಗಿ ವಿತರಿಸಿ, ಅದರ ಬಳಕೆಯ ಕುರಿತು ತಿಳಿಸಿಕೊಡಲಾಗಿದೆ. ಮುಟ್ಟಿನ ಕುರಿತು ವೈಜ್ಞಾನಿಕ ಮಾಹಿತಿ, ಆಚರಣೆಗಳು ಇತ್ಯಾದಿಗಳ ಜೊತೆಗೆ, ಗಂಡಸರು ಮುಟ್ಟನ್ನು ಎದುರುಗೊಂಡ ಬಗೆಯೂ ಸಾರ್ವಜನಿಕ ಚರ್ಚೆಯ ವಲಯ ಪ್ರವೇಶಿಸಿರುವದು ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ.

ಹೀಗೆ ಒಂದು ಕಡೆ ಮುಟ್ಟಿನ ಕುರಿತಾದ ಸಂಕುಚಿತತೆಯ ನೆರಳಿನಲ್ಲೇ ಮುಟ್ಟಿನ ಕುರಿತಾದ ಅರಿವು ಹೆಚ್ಚಿಸುವ ಬೆಳಕು ಮೂಡುತ್ತಿರುವುದು ಗಮನಾರ್ಹ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅದ್ಭುತವಾದ ಲೇಖನ. ಈ ಲೇಖನವನ್ನು “ಡಾಬಸ್ ಪೇಟೆ ವಾಯ್ಸ್” ಕನ್ನಡ ಮಾಸಪತ್ರಿಕೆಯ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...