Homeಕರ್ನಾಟಕಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

ಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

- Advertisement -
- Advertisement -

ಇದುವರೆಗೂ ಸಿದ್ದರಾಮಯ್ಯನವರು ಮತ್ತು ಮೈಸೂರಿನ ದಳಪತಿಗಳ ನಡುವೆ ದೋಸ್ತಿ ಕುದುರಿಲ್ಲ. ಸಮ್ಮಿಶ್ರ ಸರ್ಕಾರವೇ ಈ ಎರಡು ಪಕ್ಷಗಳ ಮೈತ್ರಿಯಿಂದ ರಚನೆಯಾದರೂ, ಮೈಸೂರಿನಲ್ಲಿ ಅಷ್ಟು ಸುಲಭವಿರಲಿಲ್ಲ. ಚಾಮುಂಡೇಶ್ವರಿಯ ಸೋಲು ಸಿದ್ದರಾಮಯ್ಯನವರಿಗೆ ಯಾವ ಮಟ್ಟಿಗಿನ ಬೇಸರ/ಅಸಮಾಧಾನ ಮೂಡಿಸಿದೆಯೆಂದರೆ, 2 ತಿಂಗಳ ಕೆಳಗೆ ಮೈಸೂರಿನಲ್ಲಿ ಮಾತನಾಡಿ ‘ಪ್ರತೀ ವರ್ಷ ಇಲ್ಲಿ ಸಾಮೂಹಿಕ ಮದುವೆ ಏರ್ಪಡಿಸುತ್ತಿದ್ದೆ. ನಾನು ಹೇಳಿದರೆ ಕೆಲವರು ದುಡ್ಡೂ ಕೊಡೋರು. ಈ ವರ್ಷದಿಂದ ಇಲ್ಲಿ ಮಾಡಿಸಲ್ಲ. ಮೈಸೂರಿನಿಂದ ನನ್ನನ್ನು ಓಡಿಸಿದ್ದೀರಿ. ಹಾಗಾಗಿ ಬಾದಾಮಿಯಲ್ಲೇ ಮಾಡಿಸುತ್ತೇನೆ’ ಎಂದಿದ್ದರು. ಒಕ್ಕಲಿಗ ಮತಗಳ ಧ್ರುವೀಕರಣದ ಜೊತೆಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಮೂಲಕ ಸಿದ್ದರಾಮಯ್ಯನವರಿಗೆ ತವರಿನಲ್ಲಿ ಕೊಟ್ಟ ಪೆಟ್ಟು ಆ ಪ್ರಮಾಣಕ್ಕೆ ಇತ್ತು.

ಆದರೂ ಮೈಸೂರು ಲೋಕಸಭಾ ಕ್ಷೇತ್ರ ಬೇಕೆ ಬೇಕೆಂದು ಪಟ್ಟು ಹಿಡಿದು, ಹಾಲಿ ಸಂಸದರಿದ್ದ ತುಮಕೂರನ್ನೂ ಬಿಟ್ಟುಕೊಟ್ಟು ಅದನ್ನು ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಮೈಸೂರಿನ ಮೇಲೆ ಏನೇ ಪಟ್ಟಿದ್ದರೂ, ಅವರು ದೇವೇಗೌಡರನ್ನು ಒಲಿಸಿಕೊಳ್ಳದೇ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಳೆದ ಎರಡು ಚುನಾವಣೆಗಳ ಅಂಕಗಣಿತ ನೋಡಿದರೆ ಅದು ಸುಸ್ಪಷ್ಟ.

ಇದು ಚೆನ್ನಾಗಿ ಗೊತ್ತಿದ್ದ ಪ್ರತಾಪಸಿಂಹ ಕಳೆದ ಸಾರಿ ಆಡಿದ ಆಟವನ್ನೇ ಈ ಸಾರಿಯೂ ಆಡಲು ಶುರು ಮಾಡಿದ್ದಾರೆ. ಆಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಅವರು ಅಗತ್ಯವಿರಲಿ ಇಲ್ಲದಿರಲು ದೇವೇಗೌಡರನ್ನು ಟೀಕೆ ಮಾಡುವ ಕೆಲಸವನ್ನು ಮಾಡುತ್ತಲೇ ಇದ್ದು, ಒಂದು ನಕಾರಾತ್ಮಕ ಸಂದೇಶವನ್ನು ಕೊಟ್ಟಿದ್ದರು. ಹಾಗಾಗಿಯೇ ಚಿಕ್ಕಮಗಳೂರು ಮೂಲದ, ಬೆಂಗಳೂರಿನಲ್ಲಿ ಪತ್ರಕರ್ತನಾಗಿದ್ದ ಸಿಂಹ, ಪ್ರತಾಪ್ ಸಿಂಹ ಗೌಡನಾಗಿ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು. ದೇವೇಗೌಡರ ಬಗ್ಗೆ ಹೊಗಳುತ್ತಾ, ಎಚ್.ವಿಶ್ವನಾಥ್ ಅವರು ಆ ರೀತಿ ಗೌಡರ ಬಗ್ಗೆ ಮಾತನಾಡುವುದನ್ನು ತಾನು ಒಪ್ಪುವುದಿಲ್ಲವೆಂದು ಹೇಳುತ್ತಾ ಪ್ರಚಾರ ಮಾಡಿದ್ದರು.

ಸ್ಪಷ್ಟವಾಗಿರುವ ಅಂಕಗಣಿತ
ಅದಕ್ಕೆ ಸರಿಯಾಗಿ ಜೆಡಿಎಸ್ ಅಂತಹ ದೊಡ್ಡ ಹೆಸರಲ್ಲದ ಚಂದ್ರಶೇಖರಯ್ಯನವರನ್ನು ಕಣಕ್ಕಿಳಿಸಿ ಪ್ರತಾಪ್ ಸಿಂಹರ ಪರವಾಗಿ ಒಳ ಸಂದೇಶ ಕೊಟ್ಟಿದ್ದರು. ಇವೆಲ್ಲದರ ಜೊತೆಗೆ ಇಡೀ ದೇಶದಲ್ಲಿ ಆಗ ಇದ್ದ ಮೋದಿ ಅಲೆಯ ಲಾಭವನ್ನು ಪಡೆದುಕೊಂಡರೂ ಪ್ರತಾಪ್ ಸಿಂಹ ಗೆದ್ದಿದ್ದು 31 ಸಾವಿರ ಮತಗಳಲ್ಲಿ. 2009ರಲ್ಲಿ ಎಚ್.ವಿಶ್ವನಾಥ್ 3.54 ಲಕ್ಷ ಮತ ಪಡೆದುಕೊಂಡಿದ್ದರೆ, ಬಿಜೆಪಿಯ ವಿಜಯಶಂಕರ್ 3.47 ಲಕ್ಷ ಪಡೆದುಕೊಂಡಿದ್ದರು. ಕೊಡಗಿನ ಜೀವಿಜಯ ಜನತಾದಳದಿಂದ ಸ್ಪರ್ಧಿಸಿ 2.16 ಲಕ್ಷ ಪಡೆದುಕೊಂಡಿದ್ದರು. ಅದಕ್ಕೆ ಹಿಂದಿನ ಸಾಲಿನಲ್ಲಿ ಜೆಡಿಎಸ್‍ನ ಮತಪ್ರಮಾಣದಲ್ಲಿ ಶೇ.9.8ರಷ್ಟು ನಷ್ಟವಾಗಿ ಮಿಕ್ಕೆರಡೂ ಪಕ್ಷಗಳು ಅದರ ಲಾಭ ಪಡೆದುಕೊಂಡಿದ್ದರೂ, ಜೆಡಿಎಸ್‍ಗೆ 2.16 ಲಕ್ಷ ಮತ ಇದ್ದೇ ಇತ್ತು.

2014ರಲ್ಲಿ ಒಂದೂ ಮುಕ್ಕಾಲು ಲಕ್ಷ ಹೆಚ್ಚು ಮತಗಳು ಚಲಾವಣೆಯಾದವು. ದೇವೇಗೌಡರು ಪ್ರತಾಪಸಿಂಹರಿಗೆ ಬೆಂಬಲಿಸಿದದರೂ, ಜೆಡಿಎಸ್‍ನ ಡಮ್ಮಿ ಕ್ಯಾಂಡಿಡೇಟ್‍ಗೆ 1.38 ಲಕ್ಷ ಮತಗಳು ಬಂದವು. ಕಾಂಗ್ರೆಸ್‍ನ ಎಚ್.ವಿಶ್ವನಾಥ್ ಹಿಂದಿಗಿಂತ 1 ಲಕ್ಷ 20 ಸಾವಿರ ಹೆಚ್ಚು ಮತ ಪಡೆದುಕೊಂಡರೂ ಸೋತರು. ಇವೆಲ್ಲವೂ ದೇವೇಗೌಡರ ಕಾರಣಕ್ಕೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಆದರೂ ಸಂದರ್ಭದ ಅನಿವಾರ್ಯತೆಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ‘ಗೌಡರ ವಿರೋಧಿ’ ವಿಶ್ವನಾಥ್ ಜೆಡಿಎಸ್ ಸೇರಿ ಅದರ ರಾಜ್ಯಾಧ್ಯಕ್ಷರಾಗಿದ್ದಾರೆ.
ಈ ಚುನಾವಣೆಯ ಹೊತ್ತಿಗೆ ಒಕ್ಕಲಿಗರ ಮತ ಧ್ರುವೀಕರಣದಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತಷ್ಟು ಪ್ರಬಲವಾಗಿದೆ. ಕಾಂಗ್ರೆಸ್‍ಗೆ ಒಬ್ಬ ಎಂಎಲ್‍ಎ ಇದ್ದರೆ, ಜೆಡಿಎಸ್‍ಗೆ ಮೂವರು ಎಂಎಲ್‍ಎಗಳಿದ್ದಾರೆ. ಅಂದರೆ, ಇಂದಿನ ಮತದಾರರ ಸಂಖ್ಯೆಗೆ ತಾಳೆ ಹಾಕುವುದಾದರೆ ಜೆಡಿಎಸ್ ಕನಿಷ್ಠ 3 ಲಕ್ಷ ಓಟುಗಳನ್ನು ಹೊಂದಿದೆ. ಜೊತೆಗೆ ಇದೊಂಥರಾ ಟ್ರಾನ್ಸಫರಬಲ್ ಮತಗಳು. ಹೀಗಾಗಿ ಇಲ್ಲಿ ದೇವೇಗೌಡರೇ ನಿರ್ಣಾಯಕ. ಅವರ ನೆರವಿಲ್ಲದೇ ಸಿದ್ದರಾಮಯ್ಯನವರು ವಿಜಯಶಂಕರ್‍ರನ್ನು ಗೆಲ್ಲಿಸಿಕೊಳ್ಳುವುದು ಸುಲಭವಿಲ್ಲ.

ಮೈತ್ರಿ ಧರ್ಮ ಪಾಲನೆಯಾದರೆ, ಪ್ರತಾಪ್‍ಸಿಂಹ 2 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಮುಂದಿನ ಒಂದು ವಾರದಲ್ಲೇ ದೋಸ್ತಿಗಳ ನಡುವಿನ ಬಂಧ ಎಷ್ಟು ಗಟ್ಟಿಯಿದೆ ಎಂಬುದು ತೀರ್ಮಾನವಾಗಿಬಿಡುವುದರಿಂದ, ಮೈಸೂರು ಕ್ಷೇತ್ರದ ಫಲಿತಾಂಶವೂ ಈ ವಾರದಲ್ಲೇ ಅಂತಿಮಗೊಂಡುಬಿಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...