Homeಕರ್ನಾಟಕಪಟ್ಟಭದ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಉಳಿದ ಮೈಸೂರಿನ ಸರ್ಕಾರಿ ಶಾಲೆ!

ಪಟ್ಟಭದ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಉಳಿದ ಮೈಸೂರಿನ ಸರ್ಕಾರಿ ಶಾಲೆ!

- Advertisement -
- Advertisement -

ಸರ್ಕಾರಿ ಶಾಲೆ, ಸರ್ಕಾರಿ ಆಸ್ತಿಪಾಸ್ತಿಗಳನ್ನು ಹೊಡೆಯಲು ಸಂಚುಕೋರರು ಎಲ್ಲಾ ಕಡೆಯು ಕಾದಿರುತ್ತಾರೆ. ಅವರಿಗೆ ಮಕ್ಕಳ ಶಿಕ್ಷಣ, ಅವರ ಭವಿಷ್ಯ ಯಾವುದು ಲೆಕ್ಕಕ್ಕಿಲ್ಲ.. ತಮ್ಮ ಸ್ವಾರ್ಥ ಗುರಿ ಸಾಧನೆಗಾಗಿ ಯಾವ ಹಾದಿಯನ್ನು ಬೇಕಾದರೂ ಹಿಡಿಯಲು ಸಿದ್ದರಿರುತ್ತಾರೆ.. ಆದರೆ ಇನ್ನು ಕೆಲವರಿರುತ್ತಾರೆ. ಅವರಿಗೆ ತಮ್ಮ ಜೀವನದಂತೆಯೇ ಸಮಾಜದ ಆರೋಗ್ಯವೂ ಮುಖ್ಯ. ಎಲ್ಲರಿಗೂ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಸಿಗಬೇಕೆಂದು ಬಯಸುತ್ತಾರೆ ಅದಕ್ಕಾಗಿ ಎಂತಹ ಹೋರಾಟಕ್ಕೂ ಮುಂದಾಗುತ್ತಾರೆ. ಇವರಿಬ್ಬರ ನಡುವೆ ಸದಾ ತಿಕ್ಕಾಟವಿರುತ್ತದೆ.. ಮೈಸೂರಿನ ಪ್ರಕರಣವೊಂದರಲ್ಲಿ ಹಣಬಲ, ಅಧಿಕಾರ ಬಲ, ತೋಳ್ಬಲವನ್ನು ಹೊಂದಿದ್ದ ಸಂಚುಕೋರರ ವಿರುದ್ಧ ಜನಬಲ, ಪ್ರಾಮಾಣಿಕತೆ, ಬದ್ಧತೆಯಿಂದ ಹೋರಾಡಿ ಗೆದ್ದ ನಿಜಕಥೆಯೊಂದು ಇಲ್ಲಿದೆ ನೋಡಿ.

ಶತಮಾನದ ಹಿಂದೆಯೇ ಮೈಸೂರಿನ ಅರಸರು ಮಹಾರಾಣಿಯರಿಗಾಗಿ ಶಾಲೆಯೊಂದನ್ನು ತೆರೆದಿದ್ದರು. ಸ್ವಾತಂತ್ರ್ಯ ನಂತರ ಅದು ಮಹಾರಾಣಿ ಮಾದರಿ ಸರ್ಕಾರಿ ಕನ್ನಡ ಶಾಲೆಯಾಗಿ (ಎನ್‍ಟಿಎಂಎಸ್) ಕರೆಸಿಕೊಂಡು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ಖ್ಯಾತಿ ಪಡೆದಿದೆ. ಅದರ ಏಕೈಕ ದುರಾದೃಷ್ಟವೆಂದರೆ ಅದು ಮೈಸೂರು ನಗರದ ಹೃದಯಭಾಗದಲ್ಲಿದ್ದು ಕೋಟ್ಯಾಂತರ ಬೆಲೆ ಬಾಳುತ್ತದೆ. ಇಂತಹ ಆಯಾಕಟ್ಟಿನ ಜಾಗದ ಆ ಶಾಲೆಯಲ್ಲ್ಲಿ ಈಗ ಬಡವರ, ಕೂಲಿಕಾರರ ಮಕ್ಕಳು ಕಲಿಯುತ್ತಿದ್ದಾರೆ..

ಇಂತಹ ಶಾಲೆಯ ಮೇಲೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡಿರುವ ದಂಧೇಕೋರರ ಕಣ್ಣು ಬಿದ್ದಿದೆ. ಮೂಲತಃ ತಮಿಳುನಾಡು ಮೂಲದ ಈ ಟ್ರಸ್ಟ್ ಶತಾಯಗತಾಯ ಈ ಶಾಲೆಯ ಜಾಗವನ್ನು ಕಬಳಿಸಲು ಹೊಂಚುಹಾಕಿದೆ. ಈ ಶಾಲೆಗೆ ಹೊಂದಿಕೊಂಡಂತೆ ಇರುವ ದೇವಸ್ಥಾನದ ಆವರಣಕ್ಕೆ ಒಮ್ಮೆ ಸ್ವಾಮಿ ವಿವೇಕಾನಂದರು ಭೇಟಿಕೊಟ್ಟಿದ್ದರು ಎಂಬ ನೆಪವಿಟ್ಟುಕೊಂಡು ಅಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸುವ ನಾಟಕ ತೆಗೆದಿದೆ. 2013ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅವಕಾಶ ಬಳಸಿಕೊಂಡು ಶಾಲೆ ತೆರವು ಮಾಡುವ ಆದೇಶವನ್ನೇ ಮಾಡಿಸಿಬಿಟ್ಟಿದ್ದಾರೆ..

ಉತ್ತಮವಾಗಿ ನಡೆಯುತ್ತಿದ್ದ ಎನ್‍ಟಿಎಂಎಸ್ ಶಾಲೆಯನ್ನು ಮುಚ್ಚಿ ಟ್ರಸ್ಟ್‍ಗೆ ಹಸ್ತಾಂತರ ಮಾಡುತ್ತಿದ್ದಾರೆ. ಮಕ್ಕಳನ್ನು ದೇವರಾಜು ಅರಸು ಶಾಲೆಗೆ ವರ್ಗಾಹಿಸಲಾಗುತ್ತಿದೆ ಎಂಬ ಸುದ್ದಿ ಹರಡುತ್ತಲೇ ಆ ಶಾಲೆಯ ಮಕ್ಕಳ ಪೋಷಕರು ಕಂಗಾಲಾದರು.. ಹಲವರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆಡೆಗೆ ಸೇರಿಸಿದರು. ಇದನ್ನು ತಿಳಿದ ಸ.ರ ಸುದರ್ಶನ್, ಪ.ಮಲ್ಲೇಶ್, ಸಂಸ್ಕೃತಿ ಸುಬ್ರಮಣ್ಯ ಸೇರಿದಂತೆ ಹಲವು ಕನ್ನಡ ಹೋರಾಟಗಾರರು ಶಾಲೆ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು.

ಕೂಡಲೇ ಪೋಷಕರನ್ನು ಭೇಟಿ ಮಾಡಿ ಶಾಲೆ ಉಳಿಸಿಕೊಳ್ಳುವ ಹೋರಾಟಕ್ಕೆ ಜೊತೆಯಾಗಲು ಮನವಿ ಮಾಡಿದರು. 2014ರಲ್ಲಿ ಕೇವಲ 23 ಮಕ್ಕಳು ಮಾತ್ರ ಅಲ್ಲಿದ್ದರು. ಹಲವು ಪೋಷಕರ ಮನವೊಲಿಸಿ ಅಲ್ಲಿಯೇ ತಮ್ಮ ಮಕ್ಕಳನ್ನು ಓದಿಸಲು ಮುಂದಾದರು. ನಿರಂತರ ಜನಾಂದೋಲನದ ಜೊತೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಶಾಲೆ ಉಳಿಸುವಂತೆ ಒತ್ತಡ ತರಲಾಯಿತು. ಅವರ ನೈಜ ಕಾಳಜಿಗೆ ಸ್ಪಂದಿಸಿದ ಸಿದ್ದರಾಮಯ್ಯನವರು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಮೌಖಿಕ ಆದೇಶ ನೀಡಿ ಶಾಲೆ ಹಸ್ತಾಂತರಕ್ಕೆ ತಡೆವೊಡ್ಡಿದರು. ಒಂದು ಹಂತದ ಜಯಪಡೆದ ಹೋರಾಟಗಾರರು ನಿಟ್ಟುಸಿರುಬಿಟ್ಟರು.. ಸೋತ ಟ್ರಸ್ಟ್‌ನವರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಲ್ಲಿಂದ ಆರು ವರ್ಷ ಶಾಲೆ ನಿರಾಂತಕವಾಗಿ ನಡೆಯಿತು. ಈಗ ಮಕ್ಕಳ ಸಂಖ್ಯೆ 48ಕ್ಕೆ ಏರಿದೆ. ಶಾಲೆ ಕಬಳಿಸಲು ತೆರೆಮರೆ ಪ್ರಯತ್ನ ನಡೆಸುತ್ತಿದ್ದ ಟ್ರಸ್ಟ್‍ನವರು ಮತ್ತೆ ಬಿಜೆಪಿ ಸರ್ಕಾರ ಬಂದೊಡನೆಯೇ ಸಕ್ರಿಯರಾಗಿಬಿಟ್ಟಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲೆ ಒತ್ತಡ ತರಲಾಗಿದೆ. ಸರ್ಕಾರ ಹೇಳಿದಂತೆ ಕುಣಿಯುವ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾಏಕಿ ಶಾಲೆ ಧ್ವಂಸ ಮಾಡಲು ಮುಂದಾಗಿದ್ದಾರೆ. ಹೋರಾಟಗಾರರ ಗಮನಕ್ಕೆ ಬಂದಂತೆಯೇ ಕ್ಷಣಾರ್ಧದಲ್ಲಿ ನೂರಾರು ಜನ ಸೇರಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಶಾಲೆ ಮುಚ್ಚಲು ತರಾತುರಿ ಏಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 12,13,14ರಂದು ಹಗಲು ರಾತ್ರಿ ಶಾಲೆ ಬಳಿ ನೆರೆದು ಪ್ರತಿಭಟಿಸಿದ್ದಾರೆ.

ಸಾಹಿತಿಗಳಾದ ಜಿ.ಎಚ್ ನಾಯಕ್, ಮೀರಾ ನಾಯಕ್, ದೇವನೂರು ಮಹಾದೇವ, ಸ.ರ ಸುದರ್ಶನ್, ಪ.ಮಲ್ಲೇಶ್, ಪ್ರೊ ಪಂಡಿತಾರಾಧ್ಯ, ಶಾಸಕ ಸಾ.ರಾ ಮಹೇಶ್, ಮಾಜಿ ಸಂಸದ ಧ್ರುವನಾರಾಯಣ್ ಸೇರಿದಂತೆ ಹಲವು ಗಣ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಪೋಷಕರು ಬೆಂಗಳೂರಿನವರೆಗೆ ಹೋಗಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಎಚ್ಚೆತ್ತ ಯಡಿಯೂರಪ್ಪನವರು ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಶಾಲೆ ಹಸ್ತಾರಂತರ ಮಾಡದಂತೆ ಆದೇಶ ನೀಡಿದ್ದಾರೆ. ಸಾಮೂಹಿಕ ಪ್ರಬಲ ಹೋರಾಟದಿಂದ ಕೈತಪ್ಪಿಹೋಗಲಿದ್ದ ಶಾಲೆ ಉಳಿದು ನಳನಳಿಸುತ್ತಿದೆ. ಮಕ್ಕಳ ಮೊಗದಲ್ಲಿ ಸಂತಸ ಅರಳಿದೆ.

ಶಾಲೆ ಮುಚ್ಚುವುದು ವಿವೇಕಾನಂದರಿಗೆ ಮಾಡುವ ಅಪಮಾನ

ಸ್ವಾಮಿ ವಿವೇಕಾನಂದರು ದರಿದ್ರರೇ ದೇವರು ಎಂದು ನಂಬಿದ್ದವರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಒತ್ತಾಯಿಸಿದ್ದವರು. ಹೆಣ್ಣು ಮಕ್ಕಳು ಏನು ಕಲಿಯಬೇಕೆಂಬುದನ್ನು ಹೆಣ್ಣು ಮಕ್ಕಳೇ ನಿರ್ಧರಿಸಬೇಕೆ ವಿನಃ ಬೇರ್ಯಾರೂ ಅಲ್ಲ ಎಂದಿದ್ದರು. ಅಂತಹ ವಿವೇಕಾನಂದರ ಹೆಸರೇಳಿಕೊಂಡು ಬಡವರ, ಹೆಣ್ಣು ಮಕ್ಕಳ ಶಾಲೆ ಮುಚ್ಚಿಸಲು ಬಂದಿರುವುದು ಅವರಿಗೆ ಮಾಡುವ ಮಹಾ ಅಪಮಾನ. ನಾವು ವಿವೇಕಾನಂದರನ್ನು ಗೌರವಿಸುತ್ತೇವೆ, ಹಾಗಾಗಿಯೇ ಈ ಶಾಲೆ ಉಳಿಸಲು ಹೋರಾಡುತ್ತಿದ್ದೇವೆ ಎನ್ನುತ್ತಾರೆ ದೇವನೂರು ಮಹಾದೇವ

ಮೈಸೂರಿನಲ್ಲಿ ವಿವೇಕಾನಂದರ ಹೆಸರಿನಲ್ಲಿ ಬಡಾವಣೆಯಿದೆ. ನಾಲ್ಕೈದು ಪ್ರತಿಮೆಗಳಿವೆ. ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವುದಾರೆ ಬೇಕಾದಷ್ಟು ಜಾಗಗಳಿವೆ. ಅಲ್ಲಿ ನಿರ್ಮಿಸಬೇಕೆ ಹೊರತು ಸರ್ಕಾರಿ ಶಾಲೆಯನ್ನು ಮುಚ್ಚಿಸಿ ಜಾಗ ಕಬಳಿಸುವುದಲ್ಲ. ವಿವೇಕಾನಂದರ ವಿಚಾರಗಳನ್ನು ಮುದ್ರಿಸಿ ಕಡಿಮೆ ದರದಲ್ಲಿ ಜನರಿಗೆ ತಲುಪಿಸಿದಾಗ ಮಾತ್ರ ಅವರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ನಿವೃತ್ತ ಪ್ರಾಧ್ಯಪಕರಾದ ಪ್ರೊ.ಪಂಡಿತಾರಾಧ್ಯರವರು ಅಭಿಪ್ರಾಯಪಡುತ್ತಾರೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ...

ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ : ಚಿನ್ಮಯಿ ಶ್ರೀಪಾದ, ಟಿಎಂ ಕೃಷ್ಣ ಸೇರಿ ಹಲವರಿಂದ ಟೀಕೆ

ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ತಮಿಳು ಸಾಹಿತಿ ವೈರಮುತ್ತು ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ...

ಡ್ರೋನ್ ದಾಳಿಯ ನಂತರ ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ ಅವಘಡ; ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ದುಬೈ ಅಧಿಕಾರಿಗಳ ಪ್ರಕಾರ, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ."ದುಬೈ ಅಂತರಾಷ್ಟ್ರೀಯ ವಿಮಾನ...

ಕಾನ್ಶಿ ರಾಮ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ಥಾಪಿಸಿದ ದಲಿತ ಐಕಾನ್ ಕಾನ್ಶಿ ರಾಮ್‌ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ...

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...

ಒಡಿಶಾ | ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ಮಂದಿ ಸಾವು

ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯುನಲ್ಲಿ ಸೋಮವಾರ (ಮಾರ್ಚ್ 16) ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 10 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು...

ಆಸ್ಕರ್‌ 2026 : ಮೈಕೆಲ್ ಬಿ. ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ, ಒನ್ ಬ್ಯಾಟಲ್ ಆಫ್ಟರ್ ಅನದರ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಪ್ರತಿಷ್ಠಿತ 98ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ 2026) ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮಾರ್ಚ್ 15ರಂದು (ಭಾರತೀಯ ಕಾಲಮಾನ ಮಾರ್ಚ್ 16) ನಡೆಯಿತು. ಖ್ಯಾತ ಹಾಸ್ಯನಟ ಕೋನನ್ ಒಬ್ರೇನ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು....

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...