Homeಅಂಕಣಗಳುಅಂದು ನಾದಿರ್ ಶಾ ಇಂದು ಅಮಿತ್ ಶಾ

ಅಂದು ನಾದಿರ್ ಶಾ ಇಂದು ಅಮಿತ್ ಶಾ

- Advertisement -
- Advertisement -

ಕಳೆದ ಮಾರ್ಚ್ ಎಂಟಕ್ಕೆ ಲಂಕೇಶರ ಹುಟ್ಟುಹಬ್ಬ ಸಂಭವಿಸಿತು. ಆ ಕುರಿತು ಧ್ಯಾನಿಸಿದಾಗ, ಅವರು ಕಳೆದ ಇಪ್ಪತ್ತೈದು ವರ್ಷದ ಹಿಂದೆ ಬರೆದ ಗುಣಮುಖ ನಾಟಕದ ದೃಶ್ಯ ಮುತ್ತಿಕೊಂಡು ಕಾಡಿಸಿತಲ್ಲಾ. ಪರ್ಶಿಯಾದಿಂದ ದಂಡೆತ್ತಿ ಬಂದ ನಾದಿರ್ ಶಾ ಭಾರತದ ಜಾತೀಯತೆ, ಅಸ್ಪೃಶ್ಯತೆ, ಆತ್ಮವಂಚನೆ ಮತ್ತು ಸುಳ್ಳುಗಳಿಂದ ರೋಸಿ ಹೋಗಿದ್ದಲ್ಲದೆ, ಮಾನಸಿಕ ರೋಗಕ್ಕೆ ತುತ್ತಾಗಿದ್ದಾನೆ. ಸ್ಥಳೀಯ ಮುಸ್ಲಿಂ ದೊರೆ, ಹುಡುಗಿಯರೊಂದಿಗೆ ಶಾಯಿರಿ ಬರೆದು ಹೇಳುತ್ತ, ಮದ್ಯ ಮಾಂಸದಲ್ಲಿ ಮುಳುಗಿದ್ದಾನೆ. ನಾದಿರ್ ಶಾಗೆ ಚಿಕಿತ್ಸೆ ಕೊಡಿಸುತ್ತಿಲ್ಲ. ಮಾನಸಿಕ ರೋಗಿಯಾದ ನಾದಿರ್ ಶಾನ ಸೈನ್ಯ ದೆಹಲಿಯನ್ನು ತೆರೆದಿಡುತ್ತದೆ. ಕಡೆಗೆ ಬಂದ ವೈದ್ಯ ಹಕೀಮ ನಾದಿರ್‍ಶಾನ ಹಿಂಸೆಯ ವ್ಯಸನವನ್ನು ತಹಬಂದಿಗೆ ತಂದು ಗುಣಮುಖನನ್ನಾಗಿಸಿ ಭಾರತ ಬಿಟ್ಟು ಹೋಗುವಂತೆ ಮಾಡುತ್ತಾನೆ. ಇದು ಇತಿಹಾಸ. ಇಂತಹ ರಕ್ತಸಿಕ್ತ ಇತಿಹಾಸ ಮರುಕಳಿಸಿದೆ. ನಾದಿರ್ ಶಾನ ಜಾಗದಲ್ಲಿ ಅಮಿತ್ ಶಾ ಇದ್ದಾನೆ. ಅವನ ಪಡೆ ದೆಹಲಿಯಲ್ಲಿ ಪಿಸ್ತೂಲು ಹಿಡಿದು ಜನರನ್ನ ಕೊಲ್ಲುತ್ತಿದೆ. ಹಕೀಮನ ಜಾಗದಲ್ಲಿ ಕೇಜ್ರಿವಾಲನಿದ್ದಾನೆ. ಕೇಜ್ರಿವಾಲನ ಕೆಲಸಗಳು ಅಮಿತ್ ಶಾನ ಕಣ್ಣು ತೆರೆಸಿದರೆ ದೆಹಲಿ ಏಳಿಗೆಯಾಗಬಲ್ಲದು ಇಲ್ಲವಾದರೆ, ಸರ್ವನಾಶ. ಆ ಮುಖಾಂತರ ಭಾರತವೂ ನಾಶದ ಅಂಚಿಗೆ ಬಂದು ನಿಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲವಂತಲ್ಲ ಥೂತ್ತೇರಿ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರನ್ನು ನೋಡಿ ಬೊಗಳಿದ ಯತ್ನಾಳ್ ಎಂಬ ಯಬಡನನ್ನು ಕುರಿತು ಬಿಜೆಪಿಯ ಯಾರೂ ಗದರಲಿಲ್ಲವಂತಲ್ಲಾ. ಇದಲ್ಲದೆ, ಪರವಾಗಿಲ್ಲ ಅವನ ಜೊತೆ ಮಾತಾಡಬಹುದು ಎಂಬಂತಿದ್ದ ಸುರೇಶ್ ಕುಮಾರ್ ಎಂಬ ಸಧಾರಿತ ಚೆಡ್ಡಿಯ ಬಗ್ಗೆ ಶಾನೆ ಬೇಜಾರು ಮಾಡಿಕೊಂಡಿರುವ ದೊರೆಸ್ವಾಮಿ ಸಂಬಂಧಿಯಾದ ದೇವನೂರು ಮಹಾದೇವ ಕೊಳೆತ ಹಣ್ಣಿನ ಜೊತೆಯಿರುವ ಒಳ್ಳೆ ಹಣ್ಣು ಎಂದು ಭಾವಿಸಿ ಮೋಸ ಹೋಗಿದ್ದಾರಲ್ಲಾ. ಯಾರು ಸ್ವಾಮಿ ಇದು ಶ್ರೇಷ್ಠ ಹಣ್ಣು ಎಂದು ತಮಗೆ ಹೇಳಿದ್ದು. ಸಿ.ಟಿ.ರವಿ, ರೇಣುಕಾಚಾರಿ ಯತ್ನಾಳ್ ಹೇಳುವ ಮಾತನ್ನೇ ಶಿಷ್ಟಭಾಷೆಯಲ್ಲಿ ಹೇಳುವ ಸುರೇಶ್‍ಕುಮಾರ್ ಯಡ್ಡಿ ಕಾಲದಲ್ಲಿ ಬೆಂಗಳೂರಲ್ಲಿ ಮಾಡಿಕೊಂಡ ಸೈಟಿನ ಬಗ್ಗೆ ತಲೆದೂಗುವ ಭಾಷೆಯಲ್ಲಿ ಸಮರ್ಥಿಸಿಕೊಂಡಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಯತ್ನಾಳ ದನಿ ಇಡೀ ಬಿಜೆಪಿಗಳ ದನಿ. ಅದಕ್ಕೆ ಆತನ ಪರ ನಿಂತರು. ಅದಾಳು ಬಿದ್ದೋಗಲಿ ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ತಲೆ ಕೆಡಿಸಿಕೊಂಡಿರುವ ವಿಶ್ವನಾಥ್ ಎಂಬ ಕಾಂಗ್ರೆಸ್ ಪ್ರವಾದಿ ಬಾಯಿಗೆ ಅದಾವ ಗೂಟ ಬಡಿದುಕೊಂಡಿದ್ದರೆಂದು ಹಾಲಿ ಕಾಂಗ್ರೆಸ್‍ಗಳು ಗುಸುಗುಟ್ಟುತ್ತಿವೆಯಂತಲ್ಲಾ ಥೂತ್ತೇರಿ.

ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ಮೂಗು ತೂರಿಸಿ ಕುಮಾರಣ್ಣನಿಂದಲೇ ಸರಿಯಾಗಿ ಇಕ್ಕಿಸಿಕೊಂಡಿದ್ದಾರಲ್ಲಾ ಈ ವಿಶ್ವನಾಥ. ನನ್ನ ಮಗನ ಖರ್ಚಿನ ವಿಷಯದಲ್ಲಿ ಮಾತನಾಡುವ ಈ ವಿಶ್ವನಾಥ ಇದ್ದಕ್ಕಿದ್ದಂತೆ ರಾಜಿನಾಮೆ ನೀಡಿ ಹತ್ತಾರು ಕೋಟಿ ಖರ್ಚಿನಿಂದ ಮತ್ತೆ ಚುನಾವಣೆ ಎದುರಿಸಿದರಲ್ಲಾ ಅದು ಯಾರ ದುಡ್ಡು ಎಂದಿದ್ದಾರಲ್ಲಾ. ಇಬ್ಬರ ಅಭಿಪ್ರಾಯಗಳು ಅರ್ಥವತ್ತಾಗಿವೆ. ಹೇಗೆಂದರೆ, ಚುನಾವಣೆಗೆ ನಿಂತು ಖರ್ಚು ಮಾಡಿಕೊಂಡು ಸಾಲ ಮಾಡಿದ್ದ ವಿಶ್ವನಾಥ್ ಅದನ್ನ ತೀರಿಸಲು ಬಿಜೆಪಿ ಸೇರಿ ಚುನಾವಣೆಗೆ ಹಣ ಖರ್ಚು ಮಾಡಿದರು. ಇತ್ತ ಕುಮಾರಣ್ಣ ಮಂಡ್ಯ ಲೋಕಸಭಾ ಚುನಾವಣೆಗೆ ಮಗನನ್ನು ನಿಲ್ಲಿಸಿ ನೂರು ಕೋಟಿ ಸುರಿದರು. ಈಗ ಅಷ್ಟೇ ದುಡ್ಡಿನಿಂದ ಮಗನ ಮದುವೆ ಮಾಡುತ್ತಿದ್ದಾರೆ. ಇವರಿಬ್ಬರೂ ಖರ್ಚು ಮಾಡಿದ ಹಣ ಸ್ವಂತ ದುಡಿಮೆಯಿಂದ ಸಂಗ್ರಹಿಸಿದ್ದಲ್ಲ. ಅಷ್ಟಕ್ಕೂ ಸಾರ್ವಜನಿಕ ಹಣ ಇಟ್ಟುಕೊಂಡು ಏನು ಮಾಡುವುದು. ಅವರಿಗೇ ಖರ್ಚು ಮಾಡಬೇಕು. ಅದಕ್ಕಾಗಿ ಕುಮಾರಣ್ಣ ಮಗನ ಮದುವೆ ನೆಪದಲ್ಲಿ ಕಾರ್ಯಕರ್ತರಿಗೆ ಊಟ ಉಡುಗೊರೆ ಕೊಟ್ಟು ಪಾರ್ಟಿ ಬಲಪಸುತ್ತಿದ್ದಾರಂತೆ. ಇದನ್ನ ನೋಡಿದ ಜೆಡಿಎಸ್ ವಕ್ತಾರ ರಮೇಶ್ ಬಾಬು, ಜೆಡಿಎಸ್ ಜನಸಮೂಹ ಪ್ರತಿನಿಧಿಸುವ ಪಾರ್ಟಿ ಅಲ್ಲ ಎಂದು ಕಾಲ್ಕೀಳುತ್ತಿದ್ದಾರೆ. ಎಷ್ಟು ತಡವಾಗಿ ಜ್ಞಾನೋದಯವಾಯಿತ್ತಲ್ಲ ಥೂತ್ತೇರಿ.

ಮುಖ್ಯಮಂತ್ರಿಯಾಗಿದ್ದಾಗ ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಿದ್ದ ಸಿದ್ದರಾಮಯ್ಯ ಅದ್ದೂರಿ ಮದುವೆ ಹುಡುಕಿಕೊಂಡು ತಿರುಗುತ್ತಿದ್ದಾರಲ್ಲಾ. ರಾಮುಲು ಮಗಳ ಮದುವೆಗೆ ಹೋಗಿ ಮುಖತೋರಿದ ಸಿದ್ದುವನ್ನ ಎದುರುಗೊಂಡ ಜನಾರ್ಧನರೆಡ್ಡಿ ಎಂಬ ಗಣಿಕಳ್ಳ ಮದುವೆ ಉಸ್ತುವಾರಿ ಹೊತ್ತವನಂತೆ ಓಡಿಬಂದು ಕೈಕುಲುಕಿ, ಹಲ್ಲು ಬಿಟ್ಟಿದ್ದನ್ನು ಹಾದರಕ್ಕೆ ಹುಟ್ಟಿದಂತಿರುವ ಕೆಲವು ಟಿವಿಯ ತಿರುಬೋಕಿಗಳು ಇಡೀ ದಿನ ತೋರಿ ಅದರಲ್ಲೇ ಉಂಡುತಿಂದು ತೇಗಿದವಂತಲ್ಲಾ. ಇದೇ ಜನ ಸಿದ್ದು ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಾಗ ವಿರೋಧವಾಗಿ ಮಾತನಾಡುವವರನ್ನ ತಂದು ಕೂರಿಸಿಕೊಂಡು ಸರಳ ಮದುವೆ ಸಾಧ್ಯವೇಯಿಲ್ಲ ನಾವು ಹೊಡೆದು ಮಡಗಿರುವ ಕಳ್ಳಧನವನ್ನ ಖರ್ಚು ಮಾಡುವುದೇಗೆ ಎಂಬಂತೆ ಊಳಿಡಲು ಅವಕಾಶಮಡಿಕೊಟ್ಟಿದ್ದರು. ಸದ್ಯದ ಆತಂಕ ಯಾವುದೆಂದರೆ, ಕೋಟ್ಯಾನುಕೋಟಿ ಖರ್ಚು ಮಾಡಿ ಮಾಡುವ ಮದುವೆಗಳು ಮುಂದೆ ಮುರಿದುಬಿದ್ದರೆ ಕತೆಯೇನು ಎಂಬುದು ಅದ್ದೂರಿ ಮದುವೆ ಕಂಡರಾಗದವರ ವ್ಯಾಖ್ಯಾನವಾಗಿದೆಯಂತಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...