Homeಅಂಕಣಗಳುಅಂದು ನಾದಿರ್ ಶಾ ಇಂದು ಅಮಿತ್ ಶಾ

ಅಂದು ನಾದಿರ್ ಶಾ ಇಂದು ಅಮಿತ್ ಶಾ

- Advertisement -
- Advertisement -

ಕಳೆದ ಮಾರ್ಚ್ ಎಂಟಕ್ಕೆ ಲಂಕೇಶರ ಹುಟ್ಟುಹಬ್ಬ ಸಂಭವಿಸಿತು. ಆ ಕುರಿತು ಧ್ಯಾನಿಸಿದಾಗ, ಅವರು ಕಳೆದ ಇಪ್ಪತ್ತೈದು ವರ್ಷದ ಹಿಂದೆ ಬರೆದ ಗುಣಮುಖ ನಾಟಕದ ದೃಶ್ಯ ಮುತ್ತಿಕೊಂಡು ಕಾಡಿಸಿತಲ್ಲಾ. ಪರ್ಶಿಯಾದಿಂದ ದಂಡೆತ್ತಿ ಬಂದ ನಾದಿರ್ ಶಾ ಭಾರತದ ಜಾತೀಯತೆ, ಅಸ್ಪೃಶ್ಯತೆ, ಆತ್ಮವಂಚನೆ ಮತ್ತು ಸುಳ್ಳುಗಳಿಂದ ರೋಸಿ ಹೋಗಿದ್ದಲ್ಲದೆ, ಮಾನಸಿಕ ರೋಗಕ್ಕೆ ತುತ್ತಾಗಿದ್ದಾನೆ. ಸ್ಥಳೀಯ ಮುಸ್ಲಿಂ ದೊರೆ, ಹುಡುಗಿಯರೊಂದಿಗೆ ಶಾಯಿರಿ ಬರೆದು ಹೇಳುತ್ತ, ಮದ್ಯ ಮಾಂಸದಲ್ಲಿ ಮುಳುಗಿದ್ದಾನೆ. ನಾದಿರ್ ಶಾಗೆ ಚಿಕಿತ್ಸೆ ಕೊಡಿಸುತ್ತಿಲ್ಲ. ಮಾನಸಿಕ ರೋಗಿಯಾದ ನಾದಿರ್ ಶಾನ ಸೈನ್ಯ ದೆಹಲಿಯನ್ನು ತೆರೆದಿಡುತ್ತದೆ. ಕಡೆಗೆ ಬಂದ ವೈದ್ಯ ಹಕೀಮ ನಾದಿರ್‍ಶಾನ ಹಿಂಸೆಯ ವ್ಯಸನವನ್ನು ತಹಬಂದಿಗೆ ತಂದು ಗುಣಮುಖನನ್ನಾಗಿಸಿ ಭಾರತ ಬಿಟ್ಟು ಹೋಗುವಂತೆ ಮಾಡುತ್ತಾನೆ. ಇದು ಇತಿಹಾಸ. ಇಂತಹ ರಕ್ತಸಿಕ್ತ ಇತಿಹಾಸ ಮರುಕಳಿಸಿದೆ. ನಾದಿರ್ ಶಾನ ಜಾಗದಲ್ಲಿ ಅಮಿತ್ ಶಾ ಇದ್ದಾನೆ. ಅವನ ಪಡೆ ದೆಹಲಿಯಲ್ಲಿ ಪಿಸ್ತೂಲು ಹಿಡಿದು ಜನರನ್ನ ಕೊಲ್ಲುತ್ತಿದೆ. ಹಕೀಮನ ಜಾಗದಲ್ಲಿ ಕೇಜ್ರಿವಾಲನಿದ್ದಾನೆ. ಕೇಜ್ರಿವಾಲನ ಕೆಲಸಗಳು ಅಮಿತ್ ಶಾನ ಕಣ್ಣು ತೆರೆಸಿದರೆ ದೆಹಲಿ ಏಳಿಗೆಯಾಗಬಲ್ಲದು ಇಲ್ಲವಾದರೆ, ಸರ್ವನಾಶ. ಆ ಮುಖಾಂತರ ಭಾರತವೂ ನಾಶದ ಅಂಚಿಗೆ ಬಂದು ನಿಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲವಂತಲ್ಲ ಥೂತ್ತೇರಿ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರನ್ನು ನೋಡಿ ಬೊಗಳಿದ ಯತ್ನಾಳ್ ಎಂಬ ಯಬಡನನ್ನು ಕುರಿತು ಬಿಜೆಪಿಯ ಯಾರೂ ಗದರಲಿಲ್ಲವಂತಲ್ಲಾ. ಇದಲ್ಲದೆ, ಪರವಾಗಿಲ್ಲ ಅವನ ಜೊತೆ ಮಾತಾಡಬಹುದು ಎಂಬಂತಿದ್ದ ಸುರೇಶ್ ಕುಮಾರ್ ಎಂಬ ಸಧಾರಿತ ಚೆಡ್ಡಿಯ ಬಗ್ಗೆ ಶಾನೆ ಬೇಜಾರು ಮಾಡಿಕೊಂಡಿರುವ ದೊರೆಸ್ವಾಮಿ ಸಂಬಂಧಿಯಾದ ದೇವನೂರು ಮಹಾದೇವ ಕೊಳೆತ ಹಣ್ಣಿನ ಜೊತೆಯಿರುವ ಒಳ್ಳೆ ಹಣ್ಣು ಎಂದು ಭಾವಿಸಿ ಮೋಸ ಹೋಗಿದ್ದಾರಲ್ಲಾ. ಯಾರು ಸ್ವಾಮಿ ಇದು ಶ್ರೇಷ್ಠ ಹಣ್ಣು ಎಂದು ತಮಗೆ ಹೇಳಿದ್ದು. ಸಿ.ಟಿ.ರವಿ, ರೇಣುಕಾಚಾರಿ ಯತ್ನಾಳ್ ಹೇಳುವ ಮಾತನ್ನೇ ಶಿಷ್ಟಭಾಷೆಯಲ್ಲಿ ಹೇಳುವ ಸುರೇಶ್‍ಕುಮಾರ್ ಯಡ್ಡಿ ಕಾಲದಲ್ಲಿ ಬೆಂಗಳೂರಲ್ಲಿ ಮಾಡಿಕೊಂಡ ಸೈಟಿನ ಬಗ್ಗೆ ತಲೆದೂಗುವ ಭಾಷೆಯಲ್ಲಿ ಸಮರ್ಥಿಸಿಕೊಂಡಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಯತ್ನಾಳ ದನಿ ಇಡೀ ಬಿಜೆಪಿಗಳ ದನಿ. ಅದಕ್ಕೆ ಆತನ ಪರ ನಿಂತರು. ಅದಾಳು ಬಿದ್ದೋಗಲಿ ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ತಲೆ ಕೆಡಿಸಿಕೊಂಡಿರುವ ವಿಶ್ವನಾಥ್ ಎಂಬ ಕಾಂಗ್ರೆಸ್ ಪ್ರವಾದಿ ಬಾಯಿಗೆ ಅದಾವ ಗೂಟ ಬಡಿದುಕೊಂಡಿದ್ದರೆಂದು ಹಾಲಿ ಕಾಂಗ್ರೆಸ್‍ಗಳು ಗುಸುಗುಟ್ಟುತ್ತಿವೆಯಂತಲ್ಲಾ ಥೂತ್ತೇರಿ.

ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ಮೂಗು ತೂರಿಸಿ ಕುಮಾರಣ್ಣನಿಂದಲೇ ಸರಿಯಾಗಿ ಇಕ್ಕಿಸಿಕೊಂಡಿದ್ದಾರಲ್ಲಾ ಈ ವಿಶ್ವನಾಥ. ನನ್ನ ಮಗನ ಖರ್ಚಿನ ವಿಷಯದಲ್ಲಿ ಮಾತನಾಡುವ ಈ ವಿಶ್ವನಾಥ ಇದ್ದಕ್ಕಿದ್ದಂತೆ ರಾಜಿನಾಮೆ ನೀಡಿ ಹತ್ತಾರು ಕೋಟಿ ಖರ್ಚಿನಿಂದ ಮತ್ತೆ ಚುನಾವಣೆ ಎದುರಿಸಿದರಲ್ಲಾ ಅದು ಯಾರ ದುಡ್ಡು ಎಂದಿದ್ದಾರಲ್ಲಾ. ಇಬ್ಬರ ಅಭಿಪ್ರಾಯಗಳು ಅರ್ಥವತ್ತಾಗಿವೆ. ಹೇಗೆಂದರೆ, ಚುನಾವಣೆಗೆ ನಿಂತು ಖರ್ಚು ಮಾಡಿಕೊಂಡು ಸಾಲ ಮಾಡಿದ್ದ ವಿಶ್ವನಾಥ್ ಅದನ್ನ ತೀರಿಸಲು ಬಿಜೆಪಿ ಸೇರಿ ಚುನಾವಣೆಗೆ ಹಣ ಖರ್ಚು ಮಾಡಿದರು. ಇತ್ತ ಕುಮಾರಣ್ಣ ಮಂಡ್ಯ ಲೋಕಸಭಾ ಚುನಾವಣೆಗೆ ಮಗನನ್ನು ನಿಲ್ಲಿಸಿ ನೂರು ಕೋಟಿ ಸುರಿದರು. ಈಗ ಅಷ್ಟೇ ದುಡ್ಡಿನಿಂದ ಮಗನ ಮದುವೆ ಮಾಡುತ್ತಿದ್ದಾರೆ. ಇವರಿಬ್ಬರೂ ಖರ್ಚು ಮಾಡಿದ ಹಣ ಸ್ವಂತ ದುಡಿಮೆಯಿಂದ ಸಂಗ್ರಹಿಸಿದ್ದಲ್ಲ. ಅಷ್ಟಕ್ಕೂ ಸಾರ್ವಜನಿಕ ಹಣ ಇಟ್ಟುಕೊಂಡು ಏನು ಮಾಡುವುದು. ಅವರಿಗೇ ಖರ್ಚು ಮಾಡಬೇಕು. ಅದಕ್ಕಾಗಿ ಕುಮಾರಣ್ಣ ಮಗನ ಮದುವೆ ನೆಪದಲ್ಲಿ ಕಾರ್ಯಕರ್ತರಿಗೆ ಊಟ ಉಡುಗೊರೆ ಕೊಟ್ಟು ಪಾರ್ಟಿ ಬಲಪಸುತ್ತಿದ್ದಾರಂತೆ. ಇದನ್ನ ನೋಡಿದ ಜೆಡಿಎಸ್ ವಕ್ತಾರ ರಮೇಶ್ ಬಾಬು, ಜೆಡಿಎಸ್ ಜನಸಮೂಹ ಪ್ರತಿನಿಧಿಸುವ ಪಾರ್ಟಿ ಅಲ್ಲ ಎಂದು ಕಾಲ್ಕೀಳುತ್ತಿದ್ದಾರೆ. ಎಷ್ಟು ತಡವಾಗಿ ಜ್ಞಾನೋದಯವಾಯಿತ್ತಲ್ಲ ಥೂತ್ತೇರಿ.

ಮುಖ್ಯಮಂತ್ರಿಯಾಗಿದ್ದಾಗ ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಿದ್ದ ಸಿದ್ದರಾಮಯ್ಯ ಅದ್ದೂರಿ ಮದುವೆ ಹುಡುಕಿಕೊಂಡು ತಿರುಗುತ್ತಿದ್ದಾರಲ್ಲಾ. ರಾಮುಲು ಮಗಳ ಮದುವೆಗೆ ಹೋಗಿ ಮುಖತೋರಿದ ಸಿದ್ದುವನ್ನ ಎದುರುಗೊಂಡ ಜನಾರ್ಧನರೆಡ್ಡಿ ಎಂಬ ಗಣಿಕಳ್ಳ ಮದುವೆ ಉಸ್ತುವಾರಿ ಹೊತ್ತವನಂತೆ ಓಡಿಬಂದು ಕೈಕುಲುಕಿ, ಹಲ್ಲು ಬಿಟ್ಟಿದ್ದನ್ನು ಹಾದರಕ್ಕೆ ಹುಟ್ಟಿದಂತಿರುವ ಕೆಲವು ಟಿವಿಯ ತಿರುಬೋಕಿಗಳು ಇಡೀ ದಿನ ತೋರಿ ಅದರಲ್ಲೇ ಉಂಡುತಿಂದು ತೇಗಿದವಂತಲ್ಲಾ. ಇದೇ ಜನ ಸಿದ್ದು ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಾಗ ವಿರೋಧವಾಗಿ ಮಾತನಾಡುವವರನ್ನ ತಂದು ಕೂರಿಸಿಕೊಂಡು ಸರಳ ಮದುವೆ ಸಾಧ್ಯವೇಯಿಲ್ಲ ನಾವು ಹೊಡೆದು ಮಡಗಿರುವ ಕಳ್ಳಧನವನ್ನ ಖರ್ಚು ಮಾಡುವುದೇಗೆ ಎಂಬಂತೆ ಊಳಿಡಲು ಅವಕಾಶಮಡಿಕೊಟ್ಟಿದ್ದರು. ಸದ್ಯದ ಆತಂಕ ಯಾವುದೆಂದರೆ, ಕೋಟ್ಯಾನುಕೋಟಿ ಖರ್ಚು ಮಾಡಿ ಮಾಡುವ ಮದುವೆಗಳು ಮುಂದೆ ಮುರಿದುಬಿದ್ದರೆ ಕತೆಯೇನು ಎಂಬುದು ಅದ್ದೂರಿ ಮದುವೆ ಕಂಡರಾಗದವರ ವ್ಯಾಖ್ಯಾನವಾಗಿದೆಯಂತಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...