Homeಅಂಕಣಗಳುಅಂದು ನಾದಿರ್ ಶಾ ಇಂದು ಅಮಿತ್ ಶಾ

ಅಂದು ನಾದಿರ್ ಶಾ ಇಂದು ಅಮಿತ್ ಶಾ

- Advertisement -
- Advertisement -

ಕಳೆದ ಮಾರ್ಚ್ ಎಂಟಕ್ಕೆ ಲಂಕೇಶರ ಹುಟ್ಟುಹಬ್ಬ ಸಂಭವಿಸಿತು. ಆ ಕುರಿತು ಧ್ಯಾನಿಸಿದಾಗ, ಅವರು ಕಳೆದ ಇಪ್ಪತ್ತೈದು ವರ್ಷದ ಹಿಂದೆ ಬರೆದ ಗುಣಮುಖ ನಾಟಕದ ದೃಶ್ಯ ಮುತ್ತಿಕೊಂಡು ಕಾಡಿಸಿತಲ್ಲಾ. ಪರ್ಶಿಯಾದಿಂದ ದಂಡೆತ್ತಿ ಬಂದ ನಾದಿರ್ ಶಾ ಭಾರತದ ಜಾತೀಯತೆ, ಅಸ್ಪೃಶ್ಯತೆ, ಆತ್ಮವಂಚನೆ ಮತ್ತು ಸುಳ್ಳುಗಳಿಂದ ರೋಸಿ ಹೋಗಿದ್ದಲ್ಲದೆ, ಮಾನಸಿಕ ರೋಗಕ್ಕೆ ತುತ್ತಾಗಿದ್ದಾನೆ. ಸ್ಥಳೀಯ ಮುಸ್ಲಿಂ ದೊರೆ, ಹುಡುಗಿಯರೊಂದಿಗೆ ಶಾಯಿರಿ ಬರೆದು ಹೇಳುತ್ತ, ಮದ್ಯ ಮಾಂಸದಲ್ಲಿ ಮುಳುಗಿದ್ದಾನೆ. ನಾದಿರ್ ಶಾಗೆ ಚಿಕಿತ್ಸೆ ಕೊಡಿಸುತ್ತಿಲ್ಲ. ಮಾನಸಿಕ ರೋಗಿಯಾದ ನಾದಿರ್ ಶಾನ ಸೈನ್ಯ ದೆಹಲಿಯನ್ನು ತೆರೆದಿಡುತ್ತದೆ. ಕಡೆಗೆ ಬಂದ ವೈದ್ಯ ಹಕೀಮ ನಾದಿರ್‍ಶಾನ ಹಿಂಸೆಯ ವ್ಯಸನವನ್ನು ತಹಬಂದಿಗೆ ತಂದು ಗುಣಮುಖನನ್ನಾಗಿಸಿ ಭಾರತ ಬಿಟ್ಟು ಹೋಗುವಂತೆ ಮಾಡುತ್ತಾನೆ. ಇದು ಇತಿಹಾಸ. ಇಂತಹ ರಕ್ತಸಿಕ್ತ ಇತಿಹಾಸ ಮರುಕಳಿಸಿದೆ. ನಾದಿರ್ ಶಾನ ಜಾಗದಲ್ಲಿ ಅಮಿತ್ ಶಾ ಇದ್ದಾನೆ. ಅವನ ಪಡೆ ದೆಹಲಿಯಲ್ಲಿ ಪಿಸ್ತೂಲು ಹಿಡಿದು ಜನರನ್ನ ಕೊಲ್ಲುತ್ತಿದೆ. ಹಕೀಮನ ಜಾಗದಲ್ಲಿ ಕೇಜ್ರಿವಾಲನಿದ್ದಾನೆ. ಕೇಜ್ರಿವಾಲನ ಕೆಲಸಗಳು ಅಮಿತ್ ಶಾನ ಕಣ್ಣು ತೆರೆಸಿದರೆ ದೆಹಲಿ ಏಳಿಗೆಯಾಗಬಲ್ಲದು ಇಲ್ಲವಾದರೆ, ಸರ್ವನಾಶ. ಆ ಮುಖಾಂತರ ಭಾರತವೂ ನಾಶದ ಅಂಚಿಗೆ ಬಂದು ನಿಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲವಂತಲ್ಲ ಥೂತ್ತೇರಿ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರನ್ನು ನೋಡಿ ಬೊಗಳಿದ ಯತ್ನಾಳ್ ಎಂಬ ಯಬಡನನ್ನು ಕುರಿತು ಬಿಜೆಪಿಯ ಯಾರೂ ಗದರಲಿಲ್ಲವಂತಲ್ಲಾ. ಇದಲ್ಲದೆ, ಪರವಾಗಿಲ್ಲ ಅವನ ಜೊತೆ ಮಾತಾಡಬಹುದು ಎಂಬಂತಿದ್ದ ಸುರೇಶ್ ಕುಮಾರ್ ಎಂಬ ಸಧಾರಿತ ಚೆಡ್ಡಿಯ ಬಗ್ಗೆ ಶಾನೆ ಬೇಜಾರು ಮಾಡಿಕೊಂಡಿರುವ ದೊರೆಸ್ವಾಮಿ ಸಂಬಂಧಿಯಾದ ದೇವನೂರು ಮಹಾದೇವ ಕೊಳೆತ ಹಣ್ಣಿನ ಜೊತೆಯಿರುವ ಒಳ್ಳೆ ಹಣ್ಣು ಎಂದು ಭಾವಿಸಿ ಮೋಸ ಹೋಗಿದ್ದಾರಲ್ಲಾ. ಯಾರು ಸ್ವಾಮಿ ಇದು ಶ್ರೇಷ್ಠ ಹಣ್ಣು ಎಂದು ತಮಗೆ ಹೇಳಿದ್ದು. ಸಿ.ಟಿ.ರವಿ, ರೇಣುಕಾಚಾರಿ ಯತ್ನಾಳ್ ಹೇಳುವ ಮಾತನ್ನೇ ಶಿಷ್ಟಭಾಷೆಯಲ್ಲಿ ಹೇಳುವ ಸುರೇಶ್‍ಕುಮಾರ್ ಯಡ್ಡಿ ಕಾಲದಲ್ಲಿ ಬೆಂಗಳೂರಲ್ಲಿ ಮಾಡಿಕೊಂಡ ಸೈಟಿನ ಬಗ್ಗೆ ತಲೆದೂಗುವ ಭಾಷೆಯಲ್ಲಿ ಸಮರ್ಥಿಸಿಕೊಂಡಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಯತ್ನಾಳ ದನಿ ಇಡೀ ಬಿಜೆಪಿಗಳ ದನಿ. ಅದಕ್ಕೆ ಆತನ ಪರ ನಿಂತರು. ಅದಾಳು ಬಿದ್ದೋಗಲಿ ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ತಲೆ ಕೆಡಿಸಿಕೊಂಡಿರುವ ವಿಶ್ವನಾಥ್ ಎಂಬ ಕಾಂಗ್ರೆಸ್ ಪ್ರವಾದಿ ಬಾಯಿಗೆ ಅದಾವ ಗೂಟ ಬಡಿದುಕೊಂಡಿದ್ದರೆಂದು ಹಾಲಿ ಕಾಂಗ್ರೆಸ್‍ಗಳು ಗುಸುಗುಟ್ಟುತ್ತಿವೆಯಂತಲ್ಲಾ ಥೂತ್ತೇರಿ.

ಕುಮಾರಸ್ವಾಮಿ ಮಗನ ಮದುವೆ ವಿಷಯದಲ್ಲಿ ಮೂಗು ತೂರಿಸಿ ಕುಮಾರಣ್ಣನಿಂದಲೇ ಸರಿಯಾಗಿ ಇಕ್ಕಿಸಿಕೊಂಡಿದ್ದಾರಲ್ಲಾ ಈ ವಿಶ್ವನಾಥ. ನನ್ನ ಮಗನ ಖರ್ಚಿನ ವಿಷಯದಲ್ಲಿ ಮಾತನಾಡುವ ಈ ವಿಶ್ವನಾಥ ಇದ್ದಕ್ಕಿದ್ದಂತೆ ರಾಜಿನಾಮೆ ನೀಡಿ ಹತ್ತಾರು ಕೋಟಿ ಖರ್ಚಿನಿಂದ ಮತ್ತೆ ಚುನಾವಣೆ ಎದುರಿಸಿದರಲ್ಲಾ ಅದು ಯಾರ ದುಡ್ಡು ಎಂದಿದ್ದಾರಲ್ಲಾ. ಇಬ್ಬರ ಅಭಿಪ್ರಾಯಗಳು ಅರ್ಥವತ್ತಾಗಿವೆ. ಹೇಗೆಂದರೆ, ಚುನಾವಣೆಗೆ ನಿಂತು ಖರ್ಚು ಮಾಡಿಕೊಂಡು ಸಾಲ ಮಾಡಿದ್ದ ವಿಶ್ವನಾಥ್ ಅದನ್ನ ತೀರಿಸಲು ಬಿಜೆಪಿ ಸೇರಿ ಚುನಾವಣೆಗೆ ಹಣ ಖರ್ಚು ಮಾಡಿದರು. ಇತ್ತ ಕುಮಾರಣ್ಣ ಮಂಡ್ಯ ಲೋಕಸಭಾ ಚುನಾವಣೆಗೆ ಮಗನನ್ನು ನಿಲ್ಲಿಸಿ ನೂರು ಕೋಟಿ ಸುರಿದರು. ಈಗ ಅಷ್ಟೇ ದುಡ್ಡಿನಿಂದ ಮಗನ ಮದುವೆ ಮಾಡುತ್ತಿದ್ದಾರೆ. ಇವರಿಬ್ಬರೂ ಖರ್ಚು ಮಾಡಿದ ಹಣ ಸ್ವಂತ ದುಡಿಮೆಯಿಂದ ಸಂಗ್ರಹಿಸಿದ್ದಲ್ಲ. ಅಷ್ಟಕ್ಕೂ ಸಾರ್ವಜನಿಕ ಹಣ ಇಟ್ಟುಕೊಂಡು ಏನು ಮಾಡುವುದು. ಅವರಿಗೇ ಖರ್ಚು ಮಾಡಬೇಕು. ಅದಕ್ಕಾಗಿ ಕುಮಾರಣ್ಣ ಮಗನ ಮದುವೆ ನೆಪದಲ್ಲಿ ಕಾರ್ಯಕರ್ತರಿಗೆ ಊಟ ಉಡುಗೊರೆ ಕೊಟ್ಟು ಪಾರ್ಟಿ ಬಲಪಸುತ್ತಿದ್ದಾರಂತೆ. ಇದನ್ನ ನೋಡಿದ ಜೆಡಿಎಸ್ ವಕ್ತಾರ ರಮೇಶ್ ಬಾಬು, ಜೆಡಿಎಸ್ ಜನಸಮೂಹ ಪ್ರತಿನಿಧಿಸುವ ಪಾರ್ಟಿ ಅಲ್ಲ ಎಂದು ಕಾಲ್ಕೀಳುತ್ತಿದ್ದಾರೆ. ಎಷ್ಟು ತಡವಾಗಿ ಜ್ಞಾನೋದಯವಾಯಿತ್ತಲ್ಲ ಥೂತ್ತೇರಿ.

ಮುಖ್ಯಮಂತ್ರಿಯಾಗಿದ್ದಾಗ ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಿದ್ದ ಸಿದ್ದರಾಮಯ್ಯ ಅದ್ದೂರಿ ಮದುವೆ ಹುಡುಕಿಕೊಂಡು ತಿರುಗುತ್ತಿದ್ದಾರಲ್ಲಾ. ರಾಮುಲು ಮಗಳ ಮದುವೆಗೆ ಹೋಗಿ ಮುಖತೋರಿದ ಸಿದ್ದುವನ್ನ ಎದುರುಗೊಂಡ ಜನಾರ್ಧನರೆಡ್ಡಿ ಎಂಬ ಗಣಿಕಳ್ಳ ಮದುವೆ ಉಸ್ತುವಾರಿ ಹೊತ್ತವನಂತೆ ಓಡಿಬಂದು ಕೈಕುಲುಕಿ, ಹಲ್ಲು ಬಿಟ್ಟಿದ್ದನ್ನು ಹಾದರಕ್ಕೆ ಹುಟ್ಟಿದಂತಿರುವ ಕೆಲವು ಟಿವಿಯ ತಿರುಬೋಕಿಗಳು ಇಡೀ ದಿನ ತೋರಿ ಅದರಲ್ಲೇ ಉಂಡುತಿಂದು ತೇಗಿದವಂತಲ್ಲಾ. ಇದೇ ಜನ ಸಿದ್ದು ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಹೊರಟಾಗ ವಿರೋಧವಾಗಿ ಮಾತನಾಡುವವರನ್ನ ತಂದು ಕೂರಿಸಿಕೊಂಡು ಸರಳ ಮದುವೆ ಸಾಧ್ಯವೇಯಿಲ್ಲ ನಾವು ಹೊಡೆದು ಮಡಗಿರುವ ಕಳ್ಳಧನವನ್ನ ಖರ್ಚು ಮಾಡುವುದೇಗೆ ಎಂಬಂತೆ ಊಳಿಡಲು ಅವಕಾಶಮಡಿಕೊಟ್ಟಿದ್ದರು. ಸದ್ಯದ ಆತಂಕ ಯಾವುದೆಂದರೆ, ಕೋಟ್ಯಾನುಕೋಟಿ ಖರ್ಚು ಮಾಡಿ ಮಾಡುವ ಮದುವೆಗಳು ಮುಂದೆ ಮುರಿದುಬಿದ್ದರೆ ಕತೆಯೇನು ಎಂಬುದು ಅದ್ದೂರಿ ಮದುವೆ ಕಂಡರಾಗದವರ ವ್ಯಾಖ್ಯಾನವಾಗಿದೆಯಂತಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...