Homeಅಂಕಣಗಳುಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

ಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

- Advertisement -
- Advertisement -

ನಂದಿಗ್ರಾಮದ ಹಿಂಸಾಚಾರ ಈ ಸರ್ಕಾರವನ್ನು ಪತನದ ಇಳಿಜಾರಿಗೆ ನೂಕಿತ್ತು. ರಾಜ್ಯವನ್ನು ಕೈಗಾರಿಕೀಕರಣದ ಹಾದಿಗೆ ಹಚ್ಚುವ ಭರದಲ್ಲಿ ಕುರುಡಾಗಿ ಜೇನುಹುಟ್ಟಿಗೆ ಕೈ ಇಟ್ಟಿತ್ತು ವಾಮವಾದಿ ಆಡಳಿತ. 2011ರಲ್ಲಿ ಛಿದ್ರವಾದ ಕೆಂಪುಕೋಟೆಯ ಅಡಿಯಲ್ಲಿ ಇಡಲಾದ ಸಿಡಿಮದ್ದು ತಯಾರಾದದ್ದು ನಂದಿಗ್ರಾಮದ ಮೂಸೆಯಲ್ಲಿ. ಆದರೆ ಈ ಸಿಡಿಮದ್ದನ್ನು ಅರೆದು ಗಟ್ಟಿ ಮಾಡುವ ಕ್ರಿಯೆಯಲ್ಲಿ ಖುದ್ದು ಎಡರಂಗ ಸರ್ಕಾರ ಕೈಜೋಡಿಸಿದ್ದು ಬಹುದೊಡ್ಡ ವಿಡಂಬನೆ. ಈ ಪರಿಯ ಮೈಮರೆವಿನಲ್ಲಿ ಮುಳುಗಿದ್ದ ಎಡರಂಗಕ್ಕೆ ಕಾಲ ಕೆಳಗಿನ ನೋಟವೇ ಕಾಣದಾಗಿತ್ತು. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಹೋಯಿತು. ತಾನು ಜನರ ನಡುವೆ ಕೆಲಸ ಮಾಡಿ ಕಟ್ಟಿ ಬೆಳೆಸಿದ್ದ ಜನಶಕ್ತಿಯ ಕ್ರೋಧವನ್ನು ತನ್ನ ಮೈಮೇಲೆ ಎಳೆದುಕೊಂಡಿತು. ನೆಲಕ್ಕೆ ಆನಿಸಿ ಜನದನಿಯನ್ನು ಆಲಿಸಬೇಕಿದ್ದ ಕಿವಿಗಳಲ್ಲಿ ಟೊಳ್ಳುಗಾಳಿಯ ಸದ್ದೇ ತುಂಬಿ ಹೋಗಿತ್ತು. ದಮನದ ದಾರಿಯನ್ನು ಆರಿಸಿಕೊಂಡಿತು. ಎಡರಂಗದ ಕಾರ್ಯಕರ್ತರು ಪೊಲೀಸರ ವೇಷ ಧರಿಸಿದ್ದರು. ಅವರ ಕೈಯಲ್ಲಿ ಬಂದೂಕುಗಳಿದ್ದವು. ಹಿಂಸೆಯಲ್ಲಿ ಮುಳುಗೆದ್ದ ನಂದಿಗ್ರಾಮ ರಣರಂಗವಾಗಿತ್ತು. 14 ಮಂದಿ ಅಸುನೀಗಿದ್ದರು. ಎಡರಂಗ ಸರ್ಕಾರ 2011ರಲ್ಲಿ ಘೋರ ಪರಾಭವ ಕಂಡಿತ್ತು.

ಅಂದು ಮಮತಾ ಗೆಲುವಿನ ಪಯಣವನ್ನು ನಿರ್ಣಯಿಸಿದ್ದ ಅದೇ ನಂದಿಗ್ರಾಮ ಇಂದು ಆಕೆಯನ್ನು ಸತ್ವಪರೀಕ್ಷೆಗೆ ಗುರಿಪಡಿಸಿದೆ. ನಂದಿಗ್ರಾಮ ಮತ್ತು ಸಿಂಗೂರಿನಲ್ಲಿ ಕೃಷಿ ವ್ಯವಸ್ಥೆ ಮತ್ತು ಕೈಗಾರಿಕೀಕರಣದ ಕವಲುದಾರಿಯಲ್ಲಿ ನಿಂತಿತ್ತು ಬಂಗಾಳ. ಎಡರಂಗ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೊಡವೆಗೆ ಹೋಗದೆ ದುಡುಕಿತು. ಬಲವಂತ ಭೂಗ್ರಹಣದ ವಿರುದ್ಧ ಜನರೊಂದಿಗೆ ನಿಂತು ಮಮತಾ ಕಟ್ಟಿ ಬೆಳೆಸಿದ ಆಂದೋಲನವನ್ನು ಹಣಿಯಲು ಹೋಗಿ ಮಣ್ಣು ಮುಕ್ಕಿತು. ಆದರೆ ಅಂದು ಕೈಗಾರಿಕೆಗಳ ಸ್ಥಾಪನೆಗೆ ಕೃಷಿ ಭೂಮಿಯ ಬಲವಂತದ ಸ್ವಾಧೀನವನ್ನು ವಿರೋಧಿಸಿದ ಮಮತಾ ದೀದಿ ಕಳೆದ ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ಮಾಡಿದ್ದಾದರೂ ಏನು? ಕೃಷಿ ಮತ್ತು ಕೈಗಾರಿಕೆಯ ಸಮನ್ವಯ ಅರ್ಥವ್ಯವಸ್ಥೆಯೊಂದನ್ನು ಜನವಿಶ್ವಾಸದ ಅಡಿಪಾಯದ ಮೇಲೆ ಕಟ್ಟಿ ಬೆಳೆಸಬೇಕಿತ್ತಲ್ಲವೇ? ಈ ಕಾರ್ಯದಲ್ಲಿ ಅವರು ಸಂಪೂರ್ಣ ವಿಫಲರಾದರು.

ಬಂಗಾಳದ ಅರ್ಥವ್ಯವಸ್ಥೆ ಹೆಚ್ಚೂಕಡಿಮೆ ಹದಿನಾಲ್ಕು ವರ್ಷಗಳ ಹಳೆಯ ನಂದಿಗ್ರಾಮ-ಸಿಂಗೂರುಗಳಲ್ಲೇ ಹೂತು ಹೋಗಿದೆ. ನಂದಿಗ್ರಾಮ ಹೊಮ್ಮಿಸಿದ ಸವಾಲುಗಳ ನೋಟಕ್ಕೆ ನೋಟ ಬೆರೆಸಿ ನೋಡಲಿಲ್ಲ ಮಮತಾ ಆಡಳಿತ. ಮಮತಾ ದಂಡು ಮತ್ತು ದಂಡನಾಯಕರು ನಡೆಸಿದ ಭ್ರಷ್ಟಾಚಾರವನ್ನೂ ತಮ್ಮ ಕೊರಳಿಗೆ ಸುತ್ತಿಕೊಂಡಿದ್ದಾರೆ. ಪರಿವರ್ತನೆಯ ಮಂತ್ರ ಜಪಿಸಿ ಅಧಿಕಾರಕ್ಕೆ ಬಂದವರು ಮಮತಾ. ಸರ್ಕಾರದ ಪರಿವರ್ತನೆ ಆಯಿತೇ ವಿನಾ ವ್ಯವಸ್ಥೆ ಬದಲಾಗಲಿಲ್ಲ. ಹಾಗೆಂದು ಮಮತಾ ಆಡಳಿತದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು ತಪ್ಪಾದೀತು. ಆದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ಅದರ ಸುತ್ತ ಬೆಸೆದಿದ್ದ ಆಶೋತ್ತರಗಳು ಚಿಗಿತು ಫಲ ನೀಡಲಿಲ್ಲ. ನಿಜ, ಮಮತಾ ಆಡಳಿತ ವಿರೋಧಿ ಅಲೆಯನ್ನೇನೂ ಎದುರಿಸಿಲ್ಲ.

ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು
PC: Deccan herald

ಎರಡು ಅವಧಿಗಳ ನಂತರವೂ ಅಂತಹ ಅಲೆ ಇಲ್ಲದಿರುವುದು ಸಾಧಾರಣ ಸಂಗತಿಯೇನೂ ಅಲ್ಲ. ತಾವು ಎಡಕ್ಕಿಂತ ಹೆಚ್ಚು ಎಡ ಎಂದು ತೋರಿಸಿಕೊಂಡ ದೀದಿ ನೀತಿ ನಿರ್ಧಾರಗಳಲ್ಲಿ ಮೂಲಭೂತ ಬದಲಾವಣೆಗೆ ಕೈ ಹಾಕಲಿಲ್ಲ. ಹೀಗಾಗಿ ನಿರಾಸೆಯ ಅಂತರ್ವಾಹಿನಿ ಜನಮಾನಸದಲ್ಲಿ ಹರಿದಿರುವುದು ಹೌದು. ಅದು ಭ್ರಮನಿರಸನದ ರೂಪನ್ನು ಇನ್ನೂ ತಳೆದಿಲ್ಲವೆಂದರೆ ಮಮತಾ ಸರ್ಕಾರದ ಹಲವಾರು ಜನಪ್ರಿಯ ಕಾರ್ಯಕ್ರಮಗಳೇ ಕಾರಣ. ಎಡರಂಗವೇ ಪ್ರತಿಪಕ್ಷವಾಗಿ ಉಳಿದಿದ್ದರೆ ಮಮತಾಗೆ ಎದುರೇ ಇರುತ್ತಿರಲಿಲ್ಲ. ಆದರೆ ಎಡರಂಗ ಮತ್ತು ಕಾಂಗ್ರೆಸ್ ಉಳಿಸಿರುವ ಶೂನ್ಯವನ್ನು ಮೋದಿ ಮತ್ತು ಅಮಿತ್ ಶಾ ಅವರ ಅತ್ಯುಗ್ರ ಅಕ್ರಮಣಕಾರಿ ಹಿಂದುತ್ವ ರಾಜಕಾರಣ ಕಬಳಿಸಿದೆ.

ಎದುರಾದದ್ದನ್ನೆಲ್ಲ ಉರುಳಿಸಿ ನೆಲಸಮ ಮಾಡುವ ದೈತ್ಯ ಬುಲ್ಡೋಜರ್ ರಾಜಕಾರಣವಿದು. ಹುಟ್ಟಾ ಬಂಡಾಯಗಾರ್ತಿ ಎಂಬ ಪಟ್ಟ ಪಡೆದಿರುವ ಮಮತಾ ಅವರನ್ನೂ ಅಲ್ಲಾಡಿಸಿರುವ ದಾಳಿಯಿದು. ಬೇರುಮಟ್ಟದಲ್ಲಿ ರಾಜಕಾರಣವನ್ನು ನಿಯಂತ್ರಿಸುವ ತೋಳ್ಬಲ-ಧನಬಲದ ಕಟ್ಟಾಳುಗಳನ್ನು ತೃಣಮೂಲದಿಂದ ಸೆಳೆದುಕೊಂಡಿದೆ ಬಿಜೆಪಿ. ಶಾರದ-ನಾರದ ಹಗರಣಗಳಲ್ಲಿ ಕಳಂಕಿತರಾದ ಹಲವು ತೃಣಮೂಲ ತಲೆಯಾಳುಗಳು ಇಂದು ಬಿಜೆಪಿ ಎಂಬ ’ಗಂಗೆ’ಯಲ್ಲಿ ಮುಳುಗಿ ’ಪವಿತ್ರ’ರಾಗಿದ್ದಾರೆ. ಹೀಗಾಗಿ ಬಿಜೆಪಿ ಕೇವಲ ’ಕಟ್ ಮನಿ’ ಭ್ರಷ್ಟಾಚಾರದ ವಿರುದ್ಧ ಕತ್ತಿ ಝಳಪಿಸುತ್ತಿದೆಯೇ ವಿನಾ ಶಾರದ- ನಾರದ ಚಿಟ್ ಫಂಡ್ ಹಗರಣಗಳ ಕುರಿತು ತುಟಿ ಹೊಲಿದುಕೊಂಡಿದೆ.

ಬೀಡುಬೀಸು ಪಕ್ಷಾಂತರ, ಹಣದಶಕ್ತಿಯ ಅಬ್ಬರ, ಕೇಂದ್ರದ ಅಧಿಕಾರದ ದಂಡದ ಯಥೇಚ್ಛ ಬಳಕೆ, ಕೋಮುವಾದಿ ಧ್ರುವೀಕರಣ ಹಾಗೂ ಮಿಥ್ಯಾಪ್ರಚಾರದ ಹಲವು ಹತಾರುಗಳನ್ನು ಝಳಪಿಸುತ್ತ ಬಿಜೆಪಿ ಬಂಗಾಳಕ್ಕೆ ಲಗ್ಗೆ ಹಾಕಿ ವರ್ಷಗಳೇ ಉರುಳಿವೆ. ತನ್ನ ಸನ್ನಾಹದಲ್ಲಿ ಅದು ಕಣ್ಣುಕುಕ್ಕುವ ಯಶಸ್ಸನ್ನು ಕಂಡಿದೆ ಕೂಡ. ಇಂದು ಬಂಗಾಳದ ಅಧಿಕಾರದ ಗದ್ದುಗೆಯ ಮೇಲೆ ಕೈಯಿರಿಸಿ ನಿಂತೀತೆಂದು ಹತ್ತು ವರ್ಷಗಳ ಹಿಂದೆ ಯಾರೂ ಊಹಿಸಿರಲಿಲ್ಲ.

ಇಂತಹ ಬಿಜೆಪಿ ಪ್ರವೇಶದ ನಂತರ ಪಶ್ಚಿಮ ಬಂಗಾಳದ ಬದಲಾದ ರಾಜಕಾರಣದ ವಿನ್ಯಾಸದ ಸುಳಿವುಗಳು ನಂದಿಗ್ರಾಮದ ಮಮತಾ ಬ್ಯಾನರ್ಜಿ-ಸುವೇಂದು ಅಧಿಕಾರಿ ಹಣಾಹಣಿಯಲ್ಲಿ ಕಾಣಸಿಗುತ್ತವೆ. ನಂದೀಗ್ರಾಮದ ಪರಿಶಿಷ್ಟ ಜಾತಿ-ಪಂಗಡಗಳ ಜನಸಂಖ್ಯೆಯ ಪ್ರಮಾಣ ಶೇ.16.5. ಈ ಸಮುದಾಯಗಳನ್ನೂ ಒಡೆದಿರುವ ಬಿಜೆಪಿ, ಹಿಂದೂ-ಮುಸ್ಲಿಮ್ ಧ್ರುವೀಕರಣ ಮತ್ತು ಭಾರೀ ಪ್ರಮಾಣದ ಪಕ್ಷಾಂತರದ ಮೂಲಕ ನಂದೀಗ್ರಾಮವನ್ನು ಗೆಲ್ಲಲು ಹೊರಟಿದೆ. ಈ ಮಾತು ಇಡೀ ಪಶ್ಚಿಮ ಬಂಗಾಳಕ್ಕೆ ಅಕ್ಷರಶಃ ವಿಸ್ತರಿಸಲಿದೆ. ನಂದಿಗ್ರಾಮದ ಕಂಪನಗಳು ರಾಜ್ಯಾದ್ಯಂತ ಹರಿಯಲಿವೆ. ಚುನಾವಣಾ ಫಲಿತಾಂಶಗಳ ನಂತರವೂ ಮುಂದುವರೆಯಲಿವೆ.

ಭಾರತದ ಸಹಬಾಳ್ವೆಯ ಆತ್ಮದ ಅಳಿವು ಉಳಿವಿಗಾಗಿ ನಡೆದಿರುವ ಬಂಗಾಳದ ಸಮರದ ಆತ್ಮ ನಂದಿಗ್ರಾಮ. ಇಲ್ಲಿ ಮಮತಾ ಸೋತರೆ ಈ ಉತ್ಪಾತದ ಕಂಪನಗಳು ದೇಶದ ಜನತಂತ್ರವನ್ನು ಅಸ್ಥಿರಗೊಳಿಸುವುದು ನಿಶ್ಚಿತ. ಬಿಜೆಪಿ ಬಯಸುತ್ತಿರುವ ಪ್ರತಿಪಕ್ಷಮುಕ್ತ ಭಾರತ ಬಾಗಿಲು ಬಡಿಯುತ್ತಿದೆ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...