Homeಮುಖಪುಟಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು: ಅಭದ್ರತೆಯೇ ಆಡಳಿತ!

ಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು: ಅಭದ್ರತೆಯೇ ಆಡಳಿತ!

- Advertisement -
- Advertisement -

ಸರಿಯಾಗಿ ಒಂದು ವರ್ಷದ ಹಿಂದೆ ಬರೆದಿದ್ದ ಈ ಲೇಖನವು ಮೊದಲು ಹಫಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿತ್ತು. ನರೇಂದ್ರ ಮೋದಿಯವರ ನೇತೃತ್ವದ ಈಗಿನ ಸರ್ಕಾರವು ಮತ್ತೆ ಗೆದ್ದುಬಂದ ಸರ್ಕಾರವಾದ್ದರಿಂದ ಒಂದು ಹಿನ್ನೋಟದ ಅಗತ್ಯವೂ ಇದೆ. ಹಾಗಾಗಿ ಇದನ್ನು ಪುನರ್‍ಮುದ್ರಿಸಲಾಗಿದೆ.

ಒಂದು ಹಳೆಯ ಜಾನಪದ ಕತೆ ಹೀಗಿದೆ: ತನ್ನ ಪಾಪಗಳನ್ನು ತೊಳೆಯಲು ಒಬ್ಬ ವ್ಯಕ್ತಿ ದೀರ್ಘಕಾಲ ಘನಘೋರ ತಪಸ್ಸು ಮಾಡುತ್ತಾನೆ. ದೇವರು ಆತನ ಮುಂದೆ ಪ್ರತ್ಯಕ್ಷನಾಗಿ ಒಂದು ವರವನ್ನು ದಯಪಾಲಿಸುತ್ತಾನೆ. ಆದರೆ, ಒಂದು ಶರತ್ತು ಇದೆ. ಅದೆಂದರೆ, ಅವನು ಏನು ಕೇಳುತ್ತಾನೋ ಅದರ ಎರಡು ಪಾಲು ಅವನ ಗೆಳೆಯನಿಗೆ ಸಿಗುತ್ತದೆ. ಗೆಳೆಯನಿಗೆ ಸಿಗುತ್ತದೆ ಎಂದು ಚಿಂತಿತನಾದ ಆ ವ್ಯಕ್ತಿ ಸ್ವಲ್ಪ ಕಾಲ ಯೋಚಿಸಿ, ತನ್ನ ಒಂದು ಕಣ್ಣು ತೆಗೆಯುವಂತೆ ಹೇಳುತ್ತಾನೆ. ಅವನ ಗೆಳೆಯ ಎರಡೂ ಕಣ್ಣು ಕಳೆದುಕೊಂಡು ಸಂಪೂರ್ಣ ಕುರುಡನಾಗುತ್ತಾನೆ.
ನರೇಂದ್ರ ಮೋದಿಯ ಭಾರತದಲ್ಲಿ ಇದು ಕತೆಯಾಗಿ ಉಳಿದಿಲ್ಲ. ಅದು ಒಂದು ಆಡಳಿತ ಪದ್ಧತಿಯಾಗಿ ಬೆಳೆದಿದೆ. ಒಬ್ಬ ವ್ಯಕ್ತಿಯ ಅತ್ಯಂತ ಅಭದ್ರತೆಯೇ ಆಡಳಿತಕ್ಕೆ ಚಾಲಕಶಕ್ತಿಯಾಗಿದೆ. ಅದು ಹೇಗೆಂದರೆ ತನ್ನ ಸಂಕಷ್ಟಗಳನ್ನು “ಇತರರ” ವಿರುದ್ಧ ಹೋಲಿಸಲು ಕಲಿಸುವುದರ ಮೂಲಕ. ಕಳೆದ ಐದು ವರ್ಷಗಳಲ್ಲಿ ಈ “ಇತರರು” ಬೇರೆಬೇರೆ ರೂಪ ತಳೆದಿದ್ದಾರೆ- ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು, ರೈತರು, ನಿರುದ್ಯೋಗಿಗಳು ಮತ್ತು ಉದ್ಯೋಗ ಮಾಡಲಾಗದವರು.

ಯಾರಾದರೂ ಇದನ್ನು ಮತ್ತೆಮತ್ತೆ ಮಾಡುವುದು ಹೇಗೆ ಸಾಧ್ಯ? ಅದು ಕೊನೆಯೇ ಇಲ್ಲದ ಮೋಸದ ಮೂಲಕ; ಸರಕಾರದ ಮೇಲೆ ಜನರಿಗೆ ಇರುವ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ; ಬಡಾಯಿಯ ಧೋರಣೆಗಳನ್ನು ರೂಪಿಸುವ ಮೂಲಕ; ರಣಕೇಕೆ ಹಾಕುವ ಮೂಲಕ; ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಮೂಲಕ.

ಈ ಪ್ರಕ್ರಿಯೆಯಲ್ಲಿ ಅವರು ಜನರ ಗಮನವನ್ನು ಸರಕಾರದ ವೈಫಲ್ಯದಿಂದ ದೂರಕ್ಕೆ ಸೆಳೆಯಲು ಯಶಸ್ವಿಯಾಗಿದ್ದಾರೆ. ಚುನಾವಣಾ ಕಾಲ ಮುಗಿಯುತ್ತಿರುವಂತೆ ಸರಕಾರದ ವೈಫಲ್ಯಗಳನ್ನು ನೆನಪಿಸುವುದು ಅತೀ ಮುಖ್ಯ- ನಾವು ಸರಕಾರದ ಭಾಗವಾಗಿರುವುದಕ್ಕಾಗಿ ಮಾತ್ರವಲ್ಲ; ಬಿಜೆಪಿ ಸರಕಾರವು ಮಾಡಿರುವ ರಾಚನಿಕ ಮತ್ತು ಸಾಂಸ್ಥಿಕ ಹಾನಿಯ ಪರಿಣಾಮ ಮುಂಬರುವ ಕೆಲವು ವರ್ಷಗಳ ತನಕ ಕಾಡಲಿರುವುದರಿಂದ.

ನೋಟು ಅಮಾನ್ಯೀಕರಣ

ಅತ್ಯಂತ ದೊಡ್ಡ ಆರ್ಥಿಕ ಅಪಹಾಸ್ಯವೆಂದರೆ ಖಂಡಿತವಾಗಿಯೂ ನೋಟು ಅಮಾನ್ಯೀಕರಣ. ಮೋದಿ ನವೆಂಬರ್ 2016ರಲ್ಲಿ ಜನರು ತಮ್ಮದೇ ಕಷ್ಟಪಟ್ಟು ದುಡಿದ ಹಣವನ್ನು ಪಡೆಯಲು ಸಾಲುಗಟ್ಟಿ ಬೇಡುವಂತೆ ಮಾಡಿದ್ದರು. ಉದ್ದವಾದ ಸರತಿ ಸಾಲು ಮತ್ತು ಜನರು ಎದುರಿಸಿದ ಸಂಕಷ್ಟಕ್ಕೆ ಅತಿರಿಕ್ತವಾಗಿ ದೊಡ್ಡ ಹೊಡೆತವೆಂದರೆ, ಇಡೀ ಪ್ರಕ್ರಿಯೆಯೇ ಒಂದು ದೊಡ್ಡ ನಾಟಕವಾಗಿತ್ತು. ಕಪ್ಪು ಹಣವೆಂಬ ಮಿಥ್ಯೆಯನ್ನು ತೊಲಗಿಸುವ ಬದಲಾಗಿ ಅದು ಆರ್ಥಿಕತೆಯಿಂದ ಹಣವನ್ನೇ ತೊಲಗಿಸಿತು. ಸ್ಥಾಪಿತವಾಗಿದ್ದ ವ್ಯಾಪಾರ ಜಾಲಗಳು ಸರ್ವನಾಶವಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು.

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ 2019ರ ವರದಿಯಂತೆ ಅಮಾನ್ಯೀಕರಣದ ಬಳಿಕ 50 ಲಕ್ಷ ಉದ್ಯೋಗಗಳು ನಷ್ಟವಾದವು. ಬಡವರೇ ಹೆಚ್ಚಾಗಿ ಇದರ ಭಾರವನ್ನು ಹೊತ್ತರು. ಇದರ ದುಷ್ಪರಿಣಾಮಗಳ ಕುರಿತು ರಿಸರ್ವ್ ಬ್ಯಾಂಕ್ ಮೊದಲಾಗಿಯೇ ಸರಕಾರವನ್ನು ಎಚ್ಚರಿಸಿತ್ತು. ಆದರೂ ಮೋದಿ ಮತ್ತವರ ಕೂಟವು ಇದನ್ನು ಕಡೆಗಣಿಸಿ ಮುಂದಡಿಯಿಟ್ಟಿತು. ಯಾಕೆ? ಯಾಕೆಂದರೆ, ಭ್ರಷ್ಟಾಚಾರ ನಿರ್ಮೂಲನೆಗೆ ಸರಕಾರ ಬದ್ಧ ಎಂದು ತೋರಿಸುವ ದೊಡ್ಡ ಪ್ರದರ್ಶನವೊಂದು ನಡೆಯಬೇಕಿತ್ತು.

ಆರ್ಥಿಕ ಒಳಗೊಳ್ಳುವಿಕೆ

ಬಿಜೆಪಿ ಸರಕಾರವು ಆರ್ಥಿಕ ಒಳಗೊಳ್ಳುವಿಕೆಯ ಕುರಿತು ಭಾರೀ ಭರವಸೆಗಳನ್ನು ನೀಡಿತ್ತು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಜನ ಧನ್ ಯೋಜನಾ (ಪಿಎಂಜೆಡಿವೈ) ಅಡಿಯಲ್ಲಿ ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಆರ್ಥಿಕ ಒಳಗೊಳ್ಳುವಿಕೆಯು ಅಗತ್ಯವಾಗಿದ್ದರೂ, ಕೇವಲ ಬ್ಯಾಂಕ್ ಖಾತೆ ತೆರೆಯುವುದರಿಂದ ಯಾವುದೇ ಆರ್ಥಿಕ ಒಳಗೊಳ್ಳುವಿಕೆಯು ಸಾಧ್ಯವಾಗದು. ಇಲ್ಲಿ ವಾದಿಸಲಾಗಿರುವಂತೆ ಸಕಾಲಿಕ ಹೂಡಿಕೆ ಮತ್ತು ಗ್ರಾಹಕ ಶಕ್ತಿ ಹೆಚ್ಚುವಂತೆ ಮಾಡುವ ಸಲುವಾಗಿ ಕೈಗೆಟಕುವ ಸಾಲ ಒದಗಿಸುವ ವ್ಯವಸ್ಥೆ ಬಡವಾಗಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಉದ್ಯೋಗಾವಕಾಶ ಕುಸಿತ ಮತ್ತು ನೈಜ ಸಂಬಳದ ಕುಸಿತದಿಂದ ಬಡವರಲ್ಲಿ ಸಾಕಷ್ಟು ಉಳಿತಾಯವಿಲ್ಲ. ಇದು ಅವರು ಔಪಚಾರಿಕ ಆರ್ಥಿಕ ವ್ಯವಸ್ಥೆಯಲ್ಲಿ ಪಾಲುಗೊಳ್ಳದಂತೆ ಮಾಡುತ್ತದೆ. ಆದುದರಿಂದಲೇ ದೊಡ್ಡ ಸಂಖ್ಯೆಯಲ್ಲಿ ಇಂತಹಾ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿವೆ.

ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 14.06 ಬ್ಯಾಂಕ್ ಶಾಖೆಗಳಿವೆ. ಈ ಸಂಖ್ಯೆ ಕಳೆದ 15 ವರ್ಷಗಳಿಂದ ಏರುತ್ತಿದೆಯಾದರೂ, ಏರಿಕೆಯ ದರ ತೀರಾ ನಿಧಾನವಾಗಿದೆ. ಬ್ಯಾಂಕುಗಳು ಗ್ರಾಮೀಣ ಜನರನ್ನು ಮುಟ್ಟುವಂತೆ ಮಾಡಲು ಯಾವುದೇ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಬದಲಾಗಿ ಸರಕಾರವು ಕಾಗದದ ದಾಖಲೆಗಳಿಲ್ಲದ ಬ್ಯಾಂಕಿಂಗ್ (ಬಿ.ಸಿ. ಅಂದರೆ, ಬ್ಯಾಂಕಿಂಗ್ ಕರೆಸ್ಪೋಂಡೆಂಟ್ಸ್) ಮೂಲಕ ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು ತಳ್ಳಲು ಯತ್ನಿಸುತ್ತಿದೆ. ಈ ಮೂಲಕ ಪಾವತಿ ಪಡೆಯುವ ಗ್ರಾಮೀಣ ಜನತೆಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಅಪ್‍ಡೇಟ್ ಮಾಡುವಂತಹ ಮೂಲಸೌಕರ್ಯಗಳೂ ಇಲ್ಲ. ಈ ಬಿ.ಸಿ.ಗಳು ಉತ್ತಮವಾದ ನಿಯಂತ್ರಣ ಮತ್ತು ಕಣ್ಗಾವಲು ವ್ಯವಸ್ಥೆ ಹೊಂದಿದ್ದರೂ, ನಿಜವಾದ ಬ್ಯಾಂಕ್‍ಗಳಿಗೆ ಬದಲಿಯಾಗುವುದು ಸಾಧ್ಯವಿಲ್ಲ. ವಾಸ್ತವ ಸ್ಥಿತಿಯಲ್ಲಿ ಈ ಬಿ.ಸಿ.ಗಳಿಗೆ ಸದ್ಯಕ್ಕೆ ಯಾವುದೇ ಉತ್ತರದಾಯಿತ್ವ ನಿಯಮಗಳಿಲ್ಲ. ಆರ್ಥಿಕ ಒಳಗೊಳ್ಳುವಿಕೆಗೆ ಸ್ಪಷ್ಟವಾದ ಧೋರಣೆಗಳು ಇಲ್ಲದೇ ಇರುವುದರಿಂದ ಈಗಾಗಲೇ ಸಿಬ್ಬಂದಿ ಕೊರತೆ ಹೊಂದಿರುವ ಸಾರ್ವಜನಿಕ ರಂಗದ ಗ್ರಾಮೀಣ ಬ್ಯಾಂಕ್‍ಗಳು ತೀರಾ ಒತ್ತಡದಲ್ಲಿವೆ.

ಪ್ರಧಾನಮಂತ್ರಿ ಜನ ಧನ ಯೋಜನೆಯು ಬಿಜೆಪಿಯ ಜೆಎಎಂ (ಜನ ಧನ್-ಆಧಾರ್ ಮೊಬೈಲ್)ನ ಆಧಾರ್‍ನ ಸುಲಲಿತ ವ್ಯವಸ್ಥೆಯ ಜೊತೆಗೆಯೇ ಆರಂಭವಾಯಿತಾದರೂ ಸಾಕಷ್ಟು ಇತರ ಸಮಸ್ಯೆಗಳೂ ಇದ್ದವು. ಮೊದಲನೆಯದಾಗಿ, 2015ರಲ್ಲಿ ಮಾಹಿತಿ ಹಕ್ಕು ಕಾಯಿದೆಯ ಅನುಸಾರ ಸಲ್ಲಿಸಲಾದ ಅರ್ಜಿಗೆ ಬಂದ ಉತ್ತರದ ಪ್ರಕಾರ, ಆಧಾರ್ ಸಂಖ್ಯೆಗಳನ್ನು ನೀಡಲಾಗುವ ಮೊದಲೇ ಜನರಲ್ಲಿ ಆಗಲೇ ಕನಿಷ್ಟ ಎರಡು ಗುರುತಿನ ದಾಖಲೆಗಳು ಇದ್ದವು. ಬಹುತೇಕ ಉದ್ದೇಶಿತ ಜನರು ಒಂದು ಸರಕಾರಿ ಗುರುತು ದಾಖಲೆ ಹೊಂದಿದ್ದು, ಆಗಲೇ ಇಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆಯ ಮೂಲಕ ಹಣವು ಗ್ರಾಮೀಣ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುತ್ತಿತ್ತು. ಹೀಗಿರುವಾಗ ಆಧಾರ್ ಕಾರ್ಡನ್ನು ಹೊಸದಾಗಿ ಪರಿಚಯಿಸಿದುದರ ಹಿಂದಿನ ತರ್ಕವೇ ಪ್ರಶ್ನಾರ್ಹವಾಗಿತ್ತು.

ಇದಕ್ಕೆ ವ್ಯತಿರಿಕ್ತವಾಗಿ ಆಧಾರ್ ಸಂಬಂಧಿಸಿದ ಅನೇಕ ಹಣ ವರ್ಗಾವಣೆಗಯು ಹಲವಾರು ಕಾರಣಗಳಿಗಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಆಗುವುದು, ಪಾವತಿ ತಿರಸ್ಕೃತವಾಗುವುದು ನಡೆದೇ ಇದೆ. ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿನ ಅನೇಕ ಪಾವತಿಗಳಿಗೆ ಇದೇ ಗತಿಯಾಗಿರುವುದು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‍ಬಿ) ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇದು ತೀರಾ ಹತಾಶೆಯ ವಿಷಯ. ಆಧಾರ್ ಸಂಬಂಧಿ ಬಯೋಮೆಟ್ರಿಕ್ ವೈಫಲ್ಯಗಳ ಕಾರಣದಿಂದ ಪಡಿತರ ನಿರಾಕರಿಸಲಾಗಿರುವುದು ಕನಿಷ್ಟ 75ರಷ್ಟು ಹಸಿವಿನಿಂದ ಸಾವಿಗೆ ಕಾರಣವಾಗಿದೆ. ಇಂತಹಾ ಮಹಾನ್ ತಪ್ಪಿಗಾಗಿ ಯಾಕೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಯಿತು ಎಂಬ ಬಗ್ಗೆ ಬಿಜೆಪಿ ಸರಕಾರವು ತೆಪ್ಪಗಿದೆ. ವೃದ್ಧಾಪ್ಯ ವೇತನಕ್ಕೂ ಇದೇ ಗತಿಯಾಗಿದೆ.

ಉದ್ಯೋಗ ಖಾತರಿ

ಉದ್ಯೋಗ ಖಾತರಿ ಯೋಜನೆಗೆ ಈ ತನಕಕ್ಕಿಂತ ಅತ್ಯಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿಗೆ ವ್ಯತಿರಿಕ್ತವಾಗಿ ಈ ಅನುದಾನ ಪಾತಾಳ ತಲುಪಿದೆ. ಪ್ರತಿವರ್ಷವೂ ಸರಾಸರಿಯಾಗಿ 23 ಶೇಕಡಾ ಅನುದಾನ ವಾಸ್ತವವಾಗಿ ಹಿಂದಿನ ವರ್ಷದ ಪಾವತಿ ಬಾಕಿಯಾಗಿತ್ತು. ಈ ವರ್ಷದ 60,000 ಕೋಟಿ ರೂ. ಅನುದಾನದಲ್ಲಿ 10,000 ಕೋಟಿ ರೂ. ಹಿಂದಿನ ವರ್ಷಗಳ ಪಾವತಿ ಬಾಕಿಯಾಗಿತ್ತು ಎಂದು ಲೇಖಕರ ಲೆಕ್ಕಾಚಾರ. ಇದರಿಂದ ಕೃಷಿ ಬಿಕ್ಕಟ್ಟನ್ನು ಬಿಜೆಪಿ ಸರಕಾರವು ಇನ್ನಷ್ಟು ಉಲ್ಭಣಗೊಳಿಸಿದೆ. ವಾಸ್ತವವಾಗಿ ಈ ವರ್ಷದ ಅನುದಾನವು 2010-11ರ ಅನುದಾನಕ್ಕಿಂತಲೂ ಕಡಿಮೆ. ಜನರ ಕೆಲಸದ ಬೇಡಿಕೆಗಿಂತ 33 ಶೇಕಡಾ ಕಡಿಮೆ ಉದ್ಯೋಗ ನೀಡಲಾಗುತ್ತಿದೆ. ಸರಾಸರಿಯಾಗಿ ದೇಶದಾದ್ಯಂತ ಉದ್ಯೋಗ ಖಾತರಿ ಯೋಜನೆಯ ಸಂಬಳ ಮಾಮೂಲಿ ಕೃಷಿ ಕೂಲಿಗಿಂತಲೂ ಕಡಿಮೆಯಾಗಿದೆ.

ನಿರುದ್ಯೋಗ

ಸೋರಿಕೆಯಾದ ಸರಕಾರಿ ದಾಖಲೆಗಳ ಪ್ರಕಾರವೇ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿದೆ. ಐವರಲ್ಲಿ ಒಬ್ಬರು ಶಿಕ್ಷಿತ ಯುವಜನರು ನಿರುದ್ಯೋಗಿಯಾಗಿದ್ದಾರೆ. 20-24ರ ಹರೆಯದಲ್ಲಿರುವ ನಗರವಾಸಿ ಯುವಕರು ದುಡಿಯಬಲ್ಲ ಜನರ ಸಂಖ್ಯೆಯಲ್ಲಿ 13.5 ಶೇಕಡಾ ಇದ್ದಾರೆ. ಅವರಲ್ಲಿಯೇ 60 ಶೇಕಡಾ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಮುದ್ರಾ ಯೋಜನೆಯೂ ಇದೇ ರೀತಿಯಲ್ಲಿ ವಿಫಲಗೊಂಡಿದೆ. ಇದಕ್ಕೆ ಸರಕಾರದ ಪ್ರತಿಕ್ರಿಯೆ ಏನು? ಅದುವೇ ಅಂಕಿ ಅಂಶಗಳನ್ನು ಮುಚ್ಚಿಡುವುದು! ದೋಷಪೂರಿತ ಜಿಎಸ್‍ಟಿ ಚಿಕ್ಕ ವ್ಯಾಪಾರಿಗಳು ಮತ್ತು ಉದ್ಯಮಿಗಳನ್ನು ಸರ್ವನಾಶ ಮಾಡಿದೆ.

ಕೇವಲ ಆರ್ಥಿಕತೆಯಲ್ಲ…

ಮಾಹಿತಿ ಆಯೋಗ, ಚುನಾವಣಾ ಆಯೋಗ ಇತ್ಯಾದಿ ಸಾಂವಿಧಾನಿಕ ಸಂಸ್ಥೆಗಳನ್ನೂ ದುರ್ಬಲಗೊಳಿಸಲಾಗಿದೆ. ಭಾರತವನ್ನು ಲಿಂಚಿಸ್ಥಾನ್ ಎಂದು ಕರೆಯುವಂತೆ ಮಾಡಲಾಗಿದೆ. ಭಾರತದ ನೈತಿಕ ಸತ್ವವನ್ನು ಗುಣಪಡಿಸುವವರು ಯಾರು? ವಿಷವುಣಿಸಲಾದ ಜನರು ಮಾಡುವುದಾದರೂ ಏನನ್ನು? ಪ್ರಜಾಪ್ರಭುತ್ವದ ಈ ಉತ್ಸವವನ್ನು ಸಾವು ಸುಳ್ಳುಗಳು, ವಿಡಿಯೋ ಟೇಪುಗಳ ಸಂತೆಯನ್ನಾಗಿ ಮಾಡಿದ್ದಾರೆ. ದ್ವೇಷ, ನೈತಿಕ ಅಧಃಪತನ ಇತ್ಯಾದಿಗಳನ್ನು ನೋಡಿದರೆ, ನಾವು ಆರಂಭದಲ್ಲಿ ಹೇಳಿದ ಜಾನಪದ ಕತೆಯ ಮನುಷ್ಯನಾಗಿದ್ದೇವೆಯೆ?

ಮೂಲ: ರಾಜೇಂದ್ರನ್ ನಾರಾಯಣ್, ಸಯನ್‍ದೇಬ್ ಚೌಧರಿ
ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

(ರಾಜೇಂದ್ರನ್ ನಾರಾಯಣ್ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ಮತ್ತು ಸಯನ್‍ದೇಬ್ ಚೌಧರಿ ದಿಲ್ಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...