Homeಅಂಕಣಗಳುಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

ಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

- Advertisement -
- Advertisement -

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜಕೀಯ ಎತ್ತ ಸಾಗಿದೆ ಎಂಬುದನ್ನು ಕುರಿತು ಮತದಾರ ಯೋಚಿಸುವ ಕಾಲ ಈಗ ಸನ್ನಿಹಿತವಾಗಿದೆ.

ಭಾರತದ ರಾಜಕೀಯ ಹೊಲಸಾಗಿದೆ. ದ್ವೇಷ ಭಾವನೆಯಿಂದ ಕೂಡಿದ ಕೇಂದ್ರ ಸರ್ಕಾರ ಬರ್ಬರ ಕಾನೂನುಗಳನ್ನು ರಚಿಸುತ್ತಿದೆ. ಇದ್ದ ಕಾನೂನುಗಳನ್ನು ತಿರುಚಿ ಬರೆಯುತ್ತಿದೆ; ಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ವಿಚಾರವಾದಿಗಳ ಮೇಲೆ ಕಟ್ಟಲೆ ಹೇರಿ, ಸರ್ಕಾರದ ಧೋರಣೆಯನ್ನು ಪ್ರಶ್ನಿಸುವವರನ್ನು ನಕ್ಸಲರೆಂದು ಪರಿಗಣಿಸಿ ಗೂಂಡಾ ಕಾಯ್ದೆ ಹೊರಿಸುವ ಸಂಭವವಿದೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕ್ರಿಮಿನಲ್ ಕೇಸ್‍ಗಳನ್ನು ಹೊತ್ತವರು, ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಪಕ್ಷಗಳನ್ನು ಕಬ್ಜಾ ಮಾಡುವವರು, ಪಕ್ಷವನ್ನು ನಾಶ ಮಾಡುವ ಪ್ರವೃತ್ತಿಯವರು ಇದ್ದಾರೆ. ಅಶಿಸ್ತು ತಾರಕಕ್ಕೇರಿದೆ. ಸಮಯಸಾಧಕರು, ಮೀರ್‍ಸಾದಿಕ್‍ಗಳು ರಾಜಕೀಯ ದಾಳ ಉರುಳಿಸಿ, ತಮ್ಮ ಪಕ್ಷದ ಪತನಕ್ಕೆ ಸಂಚು ಮಾಡಲು ಮುಂದಾಗಿದ್ದಾರೆ. ಜಾತಿಯ ಆಧಾರದ ಮೇಲೆ ಶಾಸಕರನ್ನು ಆರಿಸಿಕೊಂಡ ದೇವೇಗೌಡರು, ಸಿದ್ದರಾಮಯ್ಯ ಮುಂತಾದವರಿಗೆ ಚಳ್ಳೇ ಹಣ್ಣು ತಿನ್ನಿಸಿದ ದುಷ್ಟ ಶಾಸಕರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.

ರಾಜಕೀಯ ಪಕ್ಷದಲ್ಲಿದ್ದುಕೊಂಡು ಶಿಸ್ತಿನಿಂದ, ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಡೆದುಕೊಳ್ಳುವ ಅನೇಕ ಯೋಗ್ಯ ನಿಷ್ಠಾವಂತ ಕಾರ್ಯಕರ್ತರು ಎಲ್ಲ ಪಕ್ಷಗಳಲ್ಲಿ ಇದ್ದರೂ, ಅವರನ್ನು ಕಡೆಗಣಿಸಿ ಅವರು ತಮ್ಮ ಜಾತಿಯವರೆಂಬ ಕಾರಣಕ್ಕಾಗಿ, ಲಕ್ಷಾಂತರ ರೂಗಳನ್ನು ಪಕ್ಷಕ್ಕೋ, ಕಿಸೆಗೆ ಬಿಡುವುದಕ್ಕೋ ಕೊಟ್ಟವರಿಗೆ ಮಾತ್ರ ಸೀಟು ಸಿಗುತ್ತಿದೆ. ಈ ಜನ ಸಂಸ್ಥೆಗೆ ಏಕೆ ವಿಧೇಯರಾಗಿರಬೇಕು? ಇಂತಹವರಿಗೆ ಸೀಟನ್ನು ಮಾರುವುದು ಪರಿಪಾಠವಾಗಿರುವಾಗ ಅವರು ಸಂಸ್ಥೆಯವರ ಘನತೆ ಗೌರವಗಳ ಬಗೆಗೆ ಯಾಕೆ ಯೋಚಿಸುತ್ತಾರೆ? ನಾವು ಬಂದಿರುವುದೇ ದೋಚುವುದಕ್ಕೆ, ಸ್ವಾರ್ಥ ಸಾಧನೆಗೆ ಎನ್ನುವ ಜನರ ದೃಷ್ಟಿಯಲ್ಲಿ ರಾಜಕೀಯ ಪಕ್ಷ ಒಂದು ಮಾರಾಟ ಸಂಸ್ಥೆ, ತಮ್ಮ ಅಭ್ಯುದಯಕ್ಕಾಗಿ ನೆರವಾಗುವ ಒಂದು ಚಿಮ್ಮು ಹಲಗೆ!

ದೇವೇಗೌಡರಂತಹ ಒಬ್ಬ ನಾಯಕರಿಗೆ ತಮ್ಮ ಪಕ್ಷ ಪ್ರೈವೇಟ್ ಪಾರ್ಟನರ್‍ಷಿಪ್ಪಿನ ಒಂದು ಉದ್ಯಮ. ಶಾಸನಸಭೆಗೆ 30-40 ಜನ ತಮ್ಮ ಪಾರ್ಟಿಯಿಂದ ಶಾಸಕರಾಗಿ ಗೆದ್ದು ಬಂದರೆ ಸಾಕು. ಈ ಅಲ್ಪ ಸಂಖ್ಯೆಯ ಶಾಸಕರನ್ನು ಇಟ್ಟುಕೊಂಡು ಉಳಿದ ಪಾರ್ಟಿಗಳ ಜೊತೆಗೆ ವ್ಯವಹಾರ ಕುದುರಿಸುತ್ತಾರೆ. ಅಧಿಕಾರ ಪಡೆದುಕೊಳ್ಳುತ್ತಾರೆ. ತಮ್ಮ ಮಗನಿಗೋ, ಸೊಸೆಗೋ, ಮೊಮ್ಮಗನಿಗೋ ಪಟ್ಟಕಟ್ಟಲು ಅದನ್ನು ಬಳಸಿಕೊಳ್ಳುತ್ತಾರೆ.

ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತು. ತಮ್ಮ ಮಗನ ಅಧಿಕಾರ ಹೋಯಿತು. ದೇವೇಗೌಡರಿಂದ ವ್ಯಾಪಾರ ಆರಂಭವಾಯಿತು. ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಬೋರಂಟಿ ಬಿಟ್ಟರು. ಯಡಿಯೂರಪ್ಪನವರು ನಿಮ್ಮ ಸಹಕಾರ ಬೇಕಾಗಿಲ್ಲ. ನಮಗೆ ಬಹುಮತ ಸಿಕ್ಕರೆ ನಿಮ್ಮ ಹಂಗೇನು? ಎಂದರು. ಗೌಡರು ತಮ್ಮ ವರಸೆ ತೋರಿಸಿಯೇ ಬಿಟ್ಟರು. ‘ನಾನು ನಿಮಗೆ ನಿಮ್ಮ ಒಳ್ಳೆಯ ಕೆಲಸಕ್ಕೆ ಮಾತ್ರ ಬೆಂಬಲ ಕೊಡುತ್ತೇನೆ’ ಎಂದು ನಾನು ಹೇಳಿದ್ದು ಎಂದು ತಮ್ಮ ಹಿಂದಿನ ನಿಲುವಿಗೆ ಹೊಸ ವ್ಯಾಖ್ಯಾನ ಮಾಡಿದರು.

ಇನ್ನು ಅಧಿಕಾರಾರೂಢ ಭಾಜಪ ಸರ್ಕಾರದ ಬಗ್ಗೆ ಹೇಳುವುದಾದರೆ, ಅದು ಸರ್ವಾಧಿಕಾರಿ ಮನೋಭಾವದ ಸಂಸ್ಥೆ. Hidden Agenda ಇರುವ ಸಂಸ್ಥೆ. ಹಿಂದುತ್ವ ಪ್ರತಿಪಾದಕರ ಸಂಸ್ಥೆ. ಬಿಜೆಪಿಯೆಂಬುದು ತನ್ನ ಟೆಂಟಕಲ್ಸನ್ನು ಬೆಳೆಸಿಕೊಂಡು ಆಕ್ಟೋಪಸ್‍ನಂತೆ ಇಡೀ ಭಾರತವನ್ನು ತನ್ನದಾಗಿಸಿಕೊಳ್ಳುವ ಮಹತ್ವಾಕಾಂಕ್ಷೆಯುಳ್ಳ ಸಂಸ್ಥೆ. ಒದೀತೀನಿ, ಅದಕ್ಕೆ ತಯಾರಾಗಿ ಎಂದು ಅವರ ಆಡಳಿತ ನೀತಿಯನ್ನು ಒಪ್ಪದವರಿಗೆ ಗೃಹಮಂತ್ರಿ ಅಮಿತ್ ಶಾ ಅಬ್ಬರಿಸಿ ಹೇಳಿದ್ದಾರೆ.

ಚಾಣಕ್ಯನಂತೆ ತನಗಾಗದವರನ್ನು ಮುಗಿಸುವುದು ಹೇಗೆ? ಅವರನ್ನು ಮಣಿಸುವುದು ಹೇಗೆ? ಎಂದೆಲ್ಲ ಯೋಜನೆ ಮಾಡುವುದರಲ್ಲಿ ಯೋಜನೆ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ ಮೋದಿ, ಅಮಿತ್ ಶಾ.

ಕರ್ನಾಟಕದಲ್ಲಿ ಪ್ರಥಮ ಪ್ರಯತ್ನದಲ್ಲೇ ದಂತಭಗ್ನರಾದ ಯಡಿಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಮಾಡಿದರು. ಆಡಳಿತ ಪಕ್ಷದ ಶಾಸಕರನ್ನು ಖರೀದಿಸುವ, ಪಕ್ಷಾಂತರಿಗೊಳಿಸುವ ತನ್ನ ಮಾತೃಸಂಸ್ಥೆಯನ್ನು ತೊರೆದು ಹೊರಬರುವ ಎಲ್ಲಾ ತಂತ್ರಗಳನ್ನೂ ಮಾಡಿ, ಅದರಲ್ಲಿ ಜಯಶಾಲಿಗಳೂ ಆದರು. ಭಾಜಪದ ಈ ಹುನ್ನಾರವನ್ನು ಶಾಸಕ ಕೃಷ್ಣ ಭೈರೇಗೌಡರು, ಇತ್ತೀಚೆಗೆ ನಡೆದ ಅಸೆಂಬ್ಲಿ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು. ಮೋದಿ, ಶಾ ಅವರು ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಬಿಜೆಪಿಯನ್ನು ಸ್ಥಾಪಿಸಲು ಮಾಡಿರುವ ತಂತ್ರವೂ ಇಂತಹುದೆ. ದೇಶದ ದಕ್ಷಿಣ ಭಾಗದ ರಾಜ್ಯಗಳಾದ ಆಂಧ್ರ, ರಾಯಲಸೀಮಾ, ಕೇರಳ, ಕರ್ನಾಟಕ, ತಮಿಳುನಾಡುಗಳನ್ನು ಸಂಪೂರ್ಣವಾಗಿ ಬಿಜೆಪಿಮಯ ಮಾಡುವುದು ಹೇಗೆ ಎಂದು ಸಂಚು ನಡೆಸುತ್ತಿದ್ದಾರೆ. ತಮಿಳುನಾಡು ಇವರ ತಂತ್ರಕ್ಕೆ ಸೊಪ್ಪು ಹಾಕಿಲ್ಲ. ಎಲ್ಲ ರಾಜಕೀಯ ಪಕ್ಷಗಳನ್ನು ಹೇಳಹೆಸರಿಲ್ಲದಂತೆ ಮಾಡಿ, ಭಾರತದಲ್ಲಿ ಬಿಜೆಪಿ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಕನಸನ್ನು ಕಾಣುತ್ತಿದ್ದಾರೆಯೇ ಮೋದಿ?

ಈ ಪ್ರಯತ್ನವನ್ನು ತಡೆಗಟ್ಟಿ ಪ್ರಜಾಪ್ರಭುತ್ವವನ್ನು ರೂಢಿಸಿಕೊಳ್ಳುವುದು ಇಂದಿನ ಆದ್ಯ ಅಗತ್ಯತೆ.

ಆದರೆ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಇತರ ರಾಜಕೀಯ ಪಕ್ಷಗಳು ಸೊರಗಿರುವಂತೆ ಕಾಣುತ್ತದೆ. ನಾಯಕತ್ವದ ಅಭಾವ ಎದ್ದು ಕಾಣುತ್ತದೆ. ಜನ ಜಡರಾಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆಯೆಂಬ ಅರಿವು ಜನತೆಗೆ ಬಂದಿಲ್ಲ. ಚುನಾವಣೆಯನ್ನು ಒಂದು ಪ್ರಹಸನ ಎಂದುಕೊಂಡು ಬಿಟ್ಟಿದ್ದಾರೆ ಜನ. ಹಣ ಹೆಂಡಕ್ಕೆ ಮತ ಮಾರಾಟವಾಗುತ್ತದೆ. ಪ್ರಜೆಗಳಿಗೆ ದೇಶದ ಭವಿಷ್ಯವನ್ನು ರೂಪಿಸಬೇಕಾದವರು ನಾವು ಎಂಬ ಅರಿವಿಲ್ಲವಾಗಿದೆ. ಇದರ ಪೂರ್ಣ ಲಾಭವನ್ನು ಮೋದಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾಪ್ರಭುತ್ವವನ್ನು ಸುರಕ್ಷಿತಗೊಳಿಸಲು ವಿಚಾರವಂತರು, ಪ್ರಜ್ಞಾವಂತರು, ಹೊಸ ಮನ್ವಂತರವನ್ನು ಕಾಣಬೇಕು ಎಂದು ಆಶಿಸುವ ಜನ ಒಂದಾಗಿ ಸಂಘಟಿತರಾಗಬೇಕು. ದೇಶದ ತುಂಬಾ ರಾಜಕೀಯ ಸಮ್ಮೇಳನಗಳನ್ನು ನಡೆಸಿ ಇಂದಿನ ರಾಜಕೀಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ನಮಗೆ ಎಂತಹ ರಾಷ್ಟ್ರ ಬೇಕು, ಎಂತಹ ವ್ಯವಸ್ಥೆ ಬೇಕು ಎಂಬುದನ್ನು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಜನ ಜಾಗೃತಿ ಮೂಡಿಸುವ ಮೂಲಕ ಮನವರಿಕೆ ಮಾಡಿಸಬೇಕು. ಈ ಕೆಲಸವನ್ನು ರಾಜಕೀಯ ಪಕ್ಷಗಳಿಗೆ ಬಿಟ್ಟುಕೊಟ್ಟು ಪ್ರಜೆ ನಿಷ್ಕ್ರಿಯನಾದರೆ ಭಾರತ ಹಿಟ್ಲರ್‍ನ ಜರ್ಮನಿಯಾಗುವ ಸಂಭವವಿದೆ.

Eternal Vigilance is The Price of Liberty

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...