Homeಅಂಕಣಗಳುಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

ಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

- Advertisement -
- Advertisement -

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜಕೀಯ ಎತ್ತ ಸಾಗಿದೆ ಎಂಬುದನ್ನು ಕುರಿತು ಮತದಾರ ಯೋಚಿಸುವ ಕಾಲ ಈಗ ಸನ್ನಿಹಿತವಾಗಿದೆ.

ಭಾರತದ ರಾಜಕೀಯ ಹೊಲಸಾಗಿದೆ. ದ್ವೇಷ ಭಾವನೆಯಿಂದ ಕೂಡಿದ ಕೇಂದ್ರ ಸರ್ಕಾರ ಬರ್ಬರ ಕಾನೂನುಗಳನ್ನು ರಚಿಸುತ್ತಿದೆ. ಇದ್ದ ಕಾನೂನುಗಳನ್ನು ತಿರುಚಿ ಬರೆಯುತ್ತಿದೆ; ಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ವಿಚಾರವಾದಿಗಳ ಮೇಲೆ ಕಟ್ಟಲೆ ಹೇರಿ, ಸರ್ಕಾರದ ಧೋರಣೆಯನ್ನು ಪ್ರಶ್ನಿಸುವವರನ್ನು ನಕ್ಸಲರೆಂದು ಪರಿಗಣಿಸಿ ಗೂಂಡಾ ಕಾಯ್ದೆ ಹೊರಿಸುವ ಸಂಭವವಿದೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕ್ರಿಮಿನಲ್ ಕೇಸ್‍ಗಳನ್ನು ಹೊತ್ತವರು, ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಪಕ್ಷಗಳನ್ನು ಕಬ್ಜಾ ಮಾಡುವವರು, ಪಕ್ಷವನ್ನು ನಾಶ ಮಾಡುವ ಪ್ರವೃತ್ತಿಯವರು ಇದ್ದಾರೆ. ಅಶಿಸ್ತು ತಾರಕಕ್ಕೇರಿದೆ. ಸಮಯಸಾಧಕರು, ಮೀರ್‍ಸಾದಿಕ್‍ಗಳು ರಾಜಕೀಯ ದಾಳ ಉರುಳಿಸಿ, ತಮ್ಮ ಪಕ್ಷದ ಪತನಕ್ಕೆ ಸಂಚು ಮಾಡಲು ಮುಂದಾಗಿದ್ದಾರೆ. ಜಾತಿಯ ಆಧಾರದ ಮೇಲೆ ಶಾಸಕರನ್ನು ಆರಿಸಿಕೊಂಡ ದೇವೇಗೌಡರು, ಸಿದ್ದರಾಮಯ್ಯ ಮುಂತಾದವರಿಗೆ ಚಳ್ಳೇ ಹಣ್ಣು ತಿನ್ನಿಸಿದ ದುಷ್ಟ ಶಾಸಕರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.

ರಾಜಕೀಯ ಪಕ್ಷದಲ್ಲಿದ್ದುಕೊಂಡು ಶಿಸ್ತಿನಿಂದ, ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಡೆದುಕೊಳ್ಳುವ ಅನೇಕ ಯೋಗ್ಯ ನಿಷ್ಠಾವಂತ ಕಾರ್ಯಕರ್ತರು ಎಲ್ಲ ಪಕ್ಷಗಳಲ್ಲಿ ಇದ್ದರೂ, ಅವರನ್ನು ಕಡೆಗಣಿಸಿ ಅವರು ತಮ್ಮ ಜಾತಿಯವರೆಂಬ ಕಾರಣಕ್ಕಾಗಿ, ಲಕ್ಷಾಂತರ ರೂಗಳನ್ನು ಪಕ್ಷಕ್ಕೋ, ಕಿಸೆಗೆ ಬಿಡುವುದಕ್ಕೋ ಕೊಟ್ಟವರಿಗೆ ಮಾತ್ರ ಸೀಟು ಸಿಗುತ್ತಿದೆ. ಈ ಜನ ಸಂಸ್ಥೆಗೆ ಏಕೆ ವಿಧೇಯರಾಗಿರಬೇಕು? ಇಂತಹವರಿಗೆ ಸೀಟನ್ನು ಮಾರುವುದು ಪರಿಪಾಠವಾಗಿರುವಾಗ ಅವರು ಸಂಸ್ಥೆಯವರ ಘನತೆ ಗೌರವಗಳ ಬಗೆಗೆ ಯಾಕೆ ಯೋಚಿಸುತ್ತಾರೆ? ನಾವು ಬಂದಿರುವುದೇ ದೋಚುವುದಕ್ಕೆ, ಸ್ವಾರ್ಥ ಸಾಧನೆಗೆ ಎನ್ನುವ ಜನರ ದೃಷ್ಟಿಯಲ್ಲಿ ರಾಜಕೀಯ ಪಕ್ಷ ಒಂದು ಮಾರಾಟ ಸಂಸ್ಥೆ, ತಮ್ಮ ಅಭ್ಯುದಯಕ್ಕಾಗಿ ನೆರವಾಗುವ ಒಂದು ಚಿಮ್ಮು ಹಲಗೆ!

ದೇವೇಗೌಡರಂತಹ ಒಬ್ಬ ನಾಯಕರಿಗೆ ತಮ್ಮ ಪಕ್ಷ ಪ್ರೈವೇಟ್ ಪಾರ್ಟನರ್‍ಷಿಪ್ಪಿನ ಒಂದು ಉದ್ಯಮ. ಶಾಸನಸಭೆಗೆ 30-40 ಜನ ತಮ್ಮ ಪಾರ್ಟಿಯಿಂದ ಶಾಸಕರಾಗಿ ಗೆದ್ದು ಬಂದರೆ ಸಾಕು. ಈ ಅಲ್ಪ ಸಂಖ್ಯೆಯ ಶಾಸಕರನ್ನು ಇಟ್ಟುಕೊಂಡು ಉಳಿದ ಪಾರ್ಟಿಗಳ ಜೊತೆಗೆ ವ್ಯವಹಾರ ಕುದುರಿಸುತ್ತಾರೆ. ಅಧಿಕಾರ ಪಡೆದುಕೊಳ್ಳುತ್ತಾರೆ. ತಮ್ಮ ಮಗನಿಗೋ, ಸೊಸೆಗೋ, ಮೊಮ್ಮಗನಿಗೋ ಪಟ್ಟಕಟ್ಟಲು ಅದನ್ನು ಬಳಸಿಕೊಳ್ಳುತ್ತಾರೆ.

ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತು. ತಮ್ಮ ಮಗನ ಅಧಿಕಾರ ಹೋಯಿತು. ದೇವೇಗೌಡರಿಂದ ವ್ಯಾಪಾರ ಆರಂಭವಾಯಿತು. ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಬೋರಂಟಿ ಬಿಟ್ಟರು. ಯಡಿಯೂರಪ್ಪನವರು ನಿಮ್ಮ ಸಹಕಾರ ಬೇಕಾಗಿಲ್ಲ. ನಮಗೆ ಬಹುಮತ ಸಿಕ್ಕರೆ ನಿಮ್ಮ ಹಂಗೇನು? ಎಂದರು. ಗೌಡರು ತಮ್ಮ ವರಸೆ ತೋರಿಸಿಯೇ ಬಿಟ್ಟರು. ‘ನಾನು ನಿಮಗೆ ನಿಮ್ಮ ಒಳ್ಳೆಯ ಕೆಲಸಕ್ಕೆ ಮಾತ್ರ ಬೆಂಬಲ ಕೊಡುತ್ತೇನೆ’ ಎಂದು ನಾನು ಹೇಳಿದ್ದು ಎಂದು ತಮ್ಮ ಹಿಂದಿನ ನಿಲುವಿಗೆ ಹೊಸ ವ್ಯಾಖ್ಯಾನ ಮಾಡಿದರು.

ಇನ್ನು ಅಧಿಕಾರಾರೂಢ ಭಾಜಪ ಸರ್ಕಾರದ ಬಗ್ಗೆ ಹೇಳುವುದಾದರೆ, ಅದು ಸರ್ವಾಧಿಕಾರಿ ಮನೋಭಾವದ ಸಂಸ್ಥೆ. Hidden Agenda ಇರುವ ಸಂಸ್ಥೆ. ಹಿಂದುತ್ವ ಪ್ರತಿಪಾದಕರ ಸಂಸ್ಥೆ. ಬಿಜೆಪಿಯೆಂಬುದು ತನ್ನ ಟೆಂಟಕಲ್ಸನ್ನು ಬೆಳೆಸಿಕೊಂಡು ಆಕ್ಟೋಪಸ್‍ನಂತೆ ಇಡೀ ಭಾರತವನ್ನು ತನ್ನದಾಗಿಸಿಕೊಳ್ಳುವ ಮಹತ್ವಾಕಾಂಕ್ಷೆಯುಳ್ಳ ಸಂಸ್ಥೆ. ಒದೀತೀನಿ, ಅದಕ್ಕೆ ತಯಾರಾಗಿ ಎಂದು ಅವರ ಆಡಳಿತ ನೀತಿಯನ್ನು ಒಪ್ಪದವರಿಗೆ ಗೃಹಮಂತ್ರಿ ಅಮಿತ್ ಶಾ ಅಬ್ಬರಿಸಿ ಹೇಳಿದ್ದಾರೆ.

ಚಾಣಕ್ಯನಂತೆ ತನಗಾಗದವರನ್ನು ಮುಗಿಸುವುದು ಹೇಗೆ? ಅವರನ್ನು ಮಣಿಸುವುದು ಹೇಗೆ? ಎಂದೆಲ್ಲ ಯೋಜನೆ ಮಾಡುವುದರಲ್ಲಿ ಯೋಜನೆ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ ಮೋದಿ, ಅಮಿತ್ ಶಾ.

ಕರ್ನಾಟಕದಲ್ಲಿ ಪ್ರಥಮ ಪ್ರಯತ್ನದಲ್ಲೇ ದಂತಭಗ್ನರಾದ ಯಡಿಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಮಾಡಿದರು. ಆಡಳಿತ ಪಕ್ಷದ ಶಾಸಕರನ್ನು ಖರೀದಿಸುವ, ಪಕ್ಷಾಂತರಿಗೊಳಿಸುವ ತನ್ನ ಮಾತೃಸಂಸ್ಥೆಯನ್ನು ತೊರೆದು ಹೊರಬರುವ ಎಲ್ಲಾ ತಂತ್ರಗಳನ್ನೂ ಮಾಡಿ, ಅದರಲ್ಲಿ ಜಯಶಾಲಿಗಳೂ ಆದರು. ಭಾಜಪದ ಈ ಹುನ್ನಾರವನ್ನು ಶಾಸಕ ಕೃಷ್ಣ ಭೈರೇಗೌಡರು, ಇತ್ತೀಚೆಗೆ ನಡೆದ ಅಸೆಂಬ್ಲಿ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು. ಮೋದಿ, ಶಾ ಅವರು ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಬಿಜೆಪಿಯನ್ನು ಸ್ಥಾಪಿಸಲು ಮಾಡಿರುವ ತಂತ್ರವೂ ಇಂತಹುದೆ. ದೇಶದ ದಕ್ಷಿಣ ಭಾಗದ ರಾಜ್ಯಗಳಾದ ಆಂಧ್ರ, ರಾಯಲಸೀಮಾ, ಕೇರಳ, ಕರ್ನಾಟಕ, ತಮಿಳುನಾಡುಗಳನ್ನು ಸಂಪೂರ್ಣವಾಗಿ ಬಿಜೆಪಿಮಯ ಮಾಡುವುದು ಹೇಗೆ ಎಂದು ಸಂಚು ನಡೆಸುತ್ತಿದ್ದಾರೆ. ತಮಿಳುನಾಡು ಇವರ ತಂತ್ರಕ್ಕೆ ಸೊಪ್ಪು ಹಾಕಿಲ್ಲ. ಎಲ್ಲ ರಾಜಕೀಯ ಪಕ್ಷಗಳನ್ನು ಹೇಳಹೆಸರಿಲ್ಲದಂತೆ ಮಾಡಿ, ಭಾರತದಲ್ಲಿ ಬಿಜೆಪಿ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಕನಸನ್ನು ಕಾಣುತ್ತಿದ್ದಾರೆಯೇ ಮೋದಿ?

ಈ ಪ್ರಯತ್ನವನ್ನು ತಡೆಗಟ್ಟಿ ಪ್ರಜಾಪ್ರಭುತ್ವವನ್ನು ರೂಢಿಸಿಕೊಳ್ಳುವುದು ಇಂದಿನ ಆದ್ಯ ಅಗತ್ಯತೆ.

ಆದರೆ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಇತರ ರಾಜಕೀಯ ಪಕ್ಷಗಳು ಸೊರಗಿರುವಂತೆ ಕಾಣುತ್ತದೆ. ನಾಯಕತ್ವದ ಅಭಾವ ಎದ್ದು ಕಾಣುತ್ತದೆ. ಜನ ಜಡರಾಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆಯೆಂಬ ಅರಿವು ಜನತೆಗೆ ಬಂದಿಲ್ಲ. ಚುನಾವಣೆಯನ್ನು ಒಂದು ಪ್ರಹಸನ ಎಂದುಕೊಂಡು ಬಿಟ್ಟಿದ್ದಾರೆ ಜನ. ಹಣ ಹೆಂಡಕ್ಕೆ ಮತ ಮಾರಾಟವಾಗುತ್ತದೆ. ಪ್ರಜೆಗಳಿಗೆ ದೇಶದ ಭವಿಷ್ಯವನ್ನು ರೂಪಿಸಬೇಕಾದವರು ನಾವು ಎಂಬ ಅರಿವಿಲ್ಲವಾಗಿದೆ. ಇದರ ಪೂರ್ಣ ಲಾಭವನ್ನು ಮೋದಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾಪ್ರಭುತ್ವವನ್ನು ಸುರಕ್ಷಿತಗೊಳಿಸಲು ವಿಚಾರವಂತರು, ಪ್ರಜ್ಞಾವಂತರು, ಹೊಸ ಮನ್ವಂತರವನ್ನು ಕಾಣಬೇಕು ಎಂದು ಆಶಿಸುವ ಜನ ಒಂದಾಗಿ ಸಂಘಟಿತರಾಗಬೇಕು. ದೇಶದ ತುಂಬಾ ರಾಜಕೀಯ ಸಮ್ಮೇಳನಗಳನ್ನು ನಡೆಸಿ ಇಂದಿನ ರಾಜಕೀಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ನಮಗೆ ಎಂತಹ ರಾಷ್ಟ್ರ ಬೇಕು, ಎಂತಹ ವ್ಯವಸ್ಥೆ ಬೇಕು ಎಂಬುದನ್ನು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಜನ ಜಾಗೃತಿ ಮೂಡಿಸುವ ಮೂಲಕ ಮನವರಿಕೆ ಮಾಡಿಸಬೇಕು. ಈ ಕೆಲಸವನ್ನು ರಾಜಕೀಯ ಪಕ್ಷಗಳಿಗೆ ಬಿಟ್ಟುಕೊಟ್ಟು ಪ್ರಜೆ ನಿಷ್ಕ್ರಿಯನಾದರೆ ಭಾರತ ಹಿಟ್ಲರ್‍ನ ಜರ್ಮನಿಯಾಗುವ ಸಂಭವವಿದೆ.

Eternal Vigilance is The Price of Liberty

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...