Homeಅಂಕಣಗಳುಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

ಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

- Advertisement -
- Advertisement -

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜಕೀಯ ಎತ್ತ ಸಾಗಿದೆ ಎಂಬುದನ್ನು ಕುರಿತು ಮತದಾರ ಯೋಚಿಸುವ ಕಾಲ ಈಗ ಸನ್ನಿಹಿತವಾಗಿದೆ.

ಭಾರತದ ರಾಜಕೀಯ ಹೊಲಸಾಗಿದೆ. ದ್ವೇಷ ಭಾವನೆಯಿಂದ ಕೂಡಿದ ಕೇಂದ್ರ ಸರ್ಕಾರ ಬರ್ಬರ ಕಾನೂನುಗಳನ್ನು ರಚಿಸುತ್ತಿದೆ. ಇದ್ದ ಕಾನೂನುಗಳನ್ನು ತಿರುಚಿ ಬರೆಯುತ್ತಿದೆ; ಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ವಿಚಾರವಾದಿಗಳ ಮೇಲೆ ಕಟ್ಟಲೆ ಹೇರಿ, ಸರ್ಕಾರದ ಧೋರಣೆಯನ್ನು ಪ್ರಶ್ನಿಸುವವರನ್ನು ನಕ್ಸಲರೆಂದು ಪರಿಗಣಿಸಿ ಗೂಂಡಾ ಕಾಯ್ದೆ ಹೊರಿಸುವ ಸಂಭವವಿದೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕ್ರಿಮಿನಲ್ ಕೇಸ್‍ಗಳನ್ನು ಹೊತ್ತವರು, ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಪಕ್ಷಗಳನ್ನು ಕಬ್ಜಾ ಮಾಡುವವರು, ಪಕ್ಷವನ್ನು ನಾಶ ಮಾಡುವ ಪ್ರವೃತ್ತಿಯವರು ಇದ್ದಾರೆ. ಅಶಿಸ್ತು ತಾರಕಕ್ಕೇರಿದೆ. ಸಮಯಸಾಧಕರು, ಮೀರ್‍ಸಾದಿಕ್‍ಗಳು ರಾಜಕೀಯ ದಾಳ ಉರುಳಿಸಿ, ತಮ್ಮ ಪಕ್ಷದ ಪತನಕ್ಕೆ ಸಂಚು ಮಾಡಲು ಮುಂದಾಗಿದ್ದಾರೆ. ಜಾತಿಯ ಆಧಾರದ ಮೇಲೆ ಶಾಸಕರನ್ನು ಆರಿಸಿಕೊಂಡ ದೇವೇಗೌಡರು, ಸಿದ್ದರಾಮಯ್ಯ ಮುಂತಾದವರಿಗೆ ಚಳ್ಳೇ ಹಣ್ಣು ತಿನ್ನಿಸಿದ ದುಷ್ಟ ಶಾಸಕರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.

ರಾಜಕೀಯ ಪಕ್ಷದಲ್ಲಿದ್ದುಕೊಂಡು ಶಿಸ್ತಿನಿಂದ, ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಡೆದುಕೊಳ್ಳುವ ಅನೇಕ ಯೋಗ್ಯ ನಿಷ್ಠಾವಂತ ಕಾರ್ಯಕರ್ತರು ಎಲ್ಲ ಪಕ್ಷಗಳಲ್ಲಿ ಇದ್ದರೂ, ಅವರನ್ನು ಕಡೆಗಣಿಸಿ ಅವರು ತಮ್ಮ ಜಾತಿಯವರೆಂಬ ಕಾರಣಕ್ಕಾಗಿ, ಲಕ್ಷಾಂತರ ರೂಗಳನ್ನು ಪಕ್ಷಕ್ಕೋ, ಕಿಸೆಗೆ ಬಿಡುವುದಕ್ಕೋ ಕೊಟ್ಟವರಿಗೆ ಮಾತ್ರ ಸೀಟು ಸಿಗುತ್ತಿದೆ. ಈ ಜನ ಸಂಸ್ಥೆಗೆ ಏಕೆ ವಿಧೇಯರಾಗಿರಬೇಕು? ಇಂತಹವರಿಗೆ ಸೀಟನ್ನು ಮಾರುವುದು ಪರಿಪಾಠವಾಗಿರುವಾಗ ಅವರು ಸಂಸ್ಥೆಯವರ ಘನತೆ ಗೌರವಗಳ ಬಗೆಗೆ ಯಾಕೆ ಯೋಚಿಸುತ್ತಾರೆ? ನಾವು ಬಂದಿರುವುದೇ ದೋಚುವುದಕ್ಕೆ, ಸ್ವಾರ್ಥ ಸಾಧನೆಗೆ ಎನ್ನುವ ಜನರ ದೃಷ್ಟಿಯಲ್ಲಿ ರಾಜಕೀಯ ಪಕ್ಷ ಒಂದು ಮಾರಾಟ ಸಂಸ್ಥೆ, ತಮ್ಮ ಅಭ್ಯುದಯಕ್ಕಾಗಿ ನೆರವಾಗುವ ಒಂದು ಚಿಮ್ಮು ಹಲಗೆ!

ದೇವೇಗೌಡರಂತಹ ಒಬ್ಬ ನಾಯಕರಿಗೆ ತಮ್ಮ ಪಕ್ಷ ಪ್ರೈವೇಟ್ ಪಾರ್ಟನರ್‍ಷಿಪ್ಪಿನ ಒಂದು ಉದ್ಯಮ. ಶಾಸನಸಭೆಗೆ 30-40 ಜನ ತಮ್ಮ ಪಾರ್ಟಿಯಿಂದ ಶಾಸಕರಾಗಿ ಗೆದ್ದು ಬಂದರೆ ಸಾಕು. ಈ ಅಲ್ಪ ಸಂಖ್ಯೆಯ ಶಾಸಕರನ್ನು ಇಟ್ಟುಕೊಂಡು ಉಳಿದ ಪಾರ್ಟಿಗಳ ಜೊತೆಗೆ ವ್ಯವಹಾರ ಕುದುರಿಸುತ್ತಾರೆ. ಅಧಿಕಾರ ಪಡೆದುಕೊಳ್ಳುತ್ತಾರೆ. ತಮ್ಮ ಮಗನಿಗೋ, ಸೊಸೆಗೋ, ಮೊಮ್ಮಗನಿಗೋ ಪಟ್ಟಕಟ್ಟಲು ಅದನ್ನು ಬಳಸಿಕೊಳ್ಳುತ್ತಾರೆ.

ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತು. ತಮ್ಮ ಮಗನ ಅಧಿಕಾರ ಹೋಯಿತು. ದೇವೇಗೌಡರಿಂದ ವ್ಯಾಪಾರ ಆರಂಭವಾಯಿತು. ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಬೋರಂಟಿ ಬಿಟ್ಟರು. ಯಡಿಯೂರಪ್ಪನವರು ನಿಮ್ಮ ಸಹಕಾರ ಬೇಕಾಗಿಲ್ಲ. ನಮಗೆ ಬಹುಮತ ಸಿಕ್ಕರೆ ನಿಮ್ಮ ಹಂಗೇನು? ಎಂದರು. ಗೌಡರು ತಮ್ಮ ವರಸೆ ತೋರಿಸಿಯೇ ಬಿಟ್ಟರು. ‘ನಾನು ನಿಮಗೆ ನಿಮ್ಮ ಒಳ್ಳೆಯ ಕೆಲಸಕ್ಕೆ ಮಾತ್ರ ಬೆಂಬಲ ಕೊಡುತ್ತೇನೆ’ ಎಂದು ನಾನು ಹೇಳಿದ್ದು ಎಂದು ತಮ್ಮ ಹಿಂದಿನ ನಿಲುವಿಗೆ ಹೊಸ ವ್ಯಾಖ್ಯಾನ ಮಾಡಿದರು.

ಇನ್ನು ಅಧಿಕಾರಾರೂಢ ಭಾಜಪ ಸರ್ಕಾರದ ಬಗ್ಗೆ ಹೇಳುವುದಾದರೆ, ಅದು ಸರ್ವಾಧಿಕಾರಿ ಮನೋಭಾವದ ಸಂಸ್ಥೆ. Hidden Agenda ಇರುವ ಸಂಸ್ಥೆ. ಹಿಂದುತ್ವ ಪ್ರತಿಪಾದಕರ ಸಂಸ್ಥೆ. ಬಿಜೆಪಿಯೆಂಬುದು ತನ್ನ ಟೆಂಟಕಲ್ಸನ್ನು ಬೆಳೆಸಿಕೊಂಡು ಆಕ್ಟೋಪಸ್‍ನಂತೆ ಇಡೀ ಭಾರತವನ್ನು ತನ್ನದಾಗಿಸಿಕೊಳ್ಳುವ ಮಹತ್ವಾಕಾಂಕ್ಷೆಯುಳ್ಳ ಸಂಸ್ಥೆ. ಒದೀತೀನಿ, ಅದಕ್ಕೆ ತಯಾರಾಗಿ ಎಂದು ಅವರ ಆಡಳಿತ ನೀತಿಯನ್ನು ಒಪ್ಪದವರಿಗೆ ಗೃಹಮಂತ್ರಿ ಅಮಿತ್ ಶಾ ಅಬ್ಬರಿಸಿ ಹೇಳಿದ್ದಾರೆ.

ಚಾಣಕ್ಯನಂತೆ ತನಗಾಗದವರನ್ನು ಮುಗಿಸುವುದು ಹೇಗೆ? ಅವರನ್ನು ಮಣಿಸುವುದು ಹೇಗೆ? ಎಂದೆಲ್ಲ ಯೋಜನೆ ಮಾಡುವುದರಲ್ಲಿ ಯೋಜನೆ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ ಮೋದಿ, ಅಮಿತ್ ಶಾ.

ಕರ್ನಾಟಕದಲ್ಲಿ ಪ್ರಥಮ ಪ್ರಯತ್ನದಲ್ಲೇ ದಂತಭಗ್ನರಾದ ಯಡಿಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಮಾಡಿದರು. ಆಡಳಿತ ಪಕ್ಷದ ಶಾಸಕರನ್ನು ಖರೀದಿಸುವ, ಪಕ್ಷಾಂತರಿಗೊಳಿಸುವ ತನ್ನ ಮಾತೃಸಂಸ್ಥೆಯನ್ನು ತೊರೆದು ಹೊರಬರುವ ಎಲ್ಲಾ ತಂತ್ರಗಳನ್ನೂ ಮಾಡಿ, ಅದರಲ್ಲಿ ಜಯಶಾಲಿಗಳೂ ಆದರು. ಭಾಜಪದ ಈ ಹುನ್ನಾರವನ್ನು ಶಾಸಕ ಕೃಷ್ಣ ಭೈರೇಗೌಡರು, ಇತ್ತೀಚೆಗೆ ನಡೆದ ಅಸೆಂಬ್ಲಿ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು. ಮೋದಿ, ಶಾ ಅವರು ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಬಿಜೆಪಿಯನ್ನು ಸ್ಥಾಪಿಸಲು ಮಾಡಿರುವ ತಂತ್ರವೂ ಇಂತಹುದೆ. ದೇಶದ ದಕ್ಷಿಣ ಭಾಗದ ರಾಜ್ಯಗಳಾದ ಆಂಧ್ರ, ರಾಯಲಸೀಮಾ, ಕೇರಳ, ಕರ್ನಾಟಕ, ತಮಿಳುನಾಡುಗಳನ್ನು ಸಂಪೂರ್ಣವಾಗಿ ಬಿಜೆಪಿಮಯ ಮಾಡುವುದು ಹೇಗೆ ಎಂದು ಸಂಚು ನಡೆಸುತ್ತಿದ್ದಾರೆ. ತಮಿಳುನಾಡು ಇವರ ತಂತ್ರಕ್ಕೆ ಸೊಪ್ಪು ಹಾಕಿಲ್ಲ. ಎಲ್ಲ ರಾಜಕೀಯ ಪಕ್ಷಗಳನ್ನು ಹೇಳಹೆಸರಿಲ್ಲದಂತೆ ಮಾಡಿ, ಭಾರತದಲ್ಲಿ ಬಿಜೆಪಿ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಕನಸನ್ನು ಕಾಣುತ್ತಿದ್ದಾರೆಯೇ ಮೋದಿ?

ಈ ಪ್ರಯತ್ನವನ್ನು ತಡೆಗಟ್ಟಿ ಪ್ರಜಾಪ್ರಭುತ್ವವನ್ನು ರೂಢಿಸಿಕೊಳ್ಳುವುದು ಇಂದಿನ ಆದ್ಯ ಅಗತ್ಯತೆ.

ಆದರೆ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಇತರ ರಾಜಕೀಯ ಪಕ್ಷಗಳು ಸೊರಗಿರುವಂತೆ ಕಾಣುತ್ತದೆ. ನಾಯಕತ್ವದ ಅಭಾವ ಎದ್ದು ಕಾಣುತ್ತದೆ. ಜನ ಜಡರಾಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆಯೆಂಬ ಅರಿವು ಜನತೆಗೆ ಬಂದಿಲ್ಲ. ಚುನಾವಣೆಯನ್ನು ಒಂದು ಪ್ರಹಸನ ಎಂದುಕೊಂಡು ಬಿಟ್ಟಿದ್ದಾರೆ ಜನ. ಹಣ ಹೆಂಡಕ್ಕೆ ಮತ ಮಾರಾಟವಾಗುತ್ತದೆ. ಪ್ರಜೆಗಳಿಗೆ ದೇಶದ ಭವಿಷ್ಯವನ್ನು ರೂಪಿಸಬೇಕಾದವರು ನಾವು ಎಂಬ ಅರಿವಿಲ್ಲವಾಗಿದೆ. ಇದರ ಪೂರ್ಣ ಲಾಭವನ್ನು ಮೋದಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾಪ್ರಭುತ್ವವನ್ನು ಸುರಕ್ಷಿತಗೊಳಿಸಲು ವಿಚಾರವಂತರು, ಪ್ರಜ್ಞಾವಂತರು, ಹೊಸ ಮನ್ವಂತರವನ್ನು ಕಾಣಬೇಕು ಎಂದು ಆಶಿಸುವ ಜನ ಒಂದಾಗಿ ಸಂಘಟಿತರಾಗಬೇಕು. ದೇಶದ ತುಂಬಾ ರಾಜಕೀಯ ಸಮ್ಮೇಳನಗಳನ್ನು ನಡೆಸಿ ಇಂದಿನ ರಾಜಕೀಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ನಮಗೆ ಎಂತಹ ರಾಷ್ಟ್ರ ಬೇಕು, ಎಂತಹ ವ್ಯವಸ್ಥೆ ಬೇಕು ಎಂಬುದನ್ನು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಜನ ಜಾಗೃತಿ ಮೂಡಿಸುವ ಮೂಲಕ ಮನವರಿಕೆ ಮಾಡಿಸಬೇಕು. ಈ ಕೆಲಸವನ್ನು ರಾಜಕೀಯ ಪಕ್ಷಗಳಿಗೆ ಬಿಟ್ಟುಕೊಟ್ಟು ಪ್ರಜೆ ನಿಷ್ಕ್ರಿಯನಾದರೆ ಭಾರತ ಹಿಟ್ಲರ್‍ನ ಜರ್ಮನಿಯಾಗುವ ಸಂಭವವಿದೆ.

Eternal Vigilance is The Price of Liberty

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...