HomeಮುಖಪುಟNEET ಗೇಟ್; ಮೆರಿಟ್ ಹೆಸರಿನಲ್ಲಿ ಹೊರದಬ್ಬುವುದೇ ಮುಖ್ಯ ಉದ್ದೇಶ

NEET ಗೇಟ್; ಮೆರಿಟ್ ಹೆಸರಿನಲ್ಲಿ ಹೊರದಬ್ಬುವುದೇ ಮುಖ್ಯ ಉದ್ದೇಶ

- Advertisement -
- Advertisement -

ಐದು ಮಕ್ಕಳ ಗುಂಪೊಂದು ನಾಟಕವಾಡೋಣ ಎಂದು ತೀರ್ಮಾನಿಸುತ್ತದೆ. ಅದರಲ್ಲಿದ್ದ ಪುಟಾಣಿ ಹುಡುಗಿ ನನಗೇನು ಪಾತ್ರವಿಲ್ಲ ಎಂದು ಅಳತೊಡಗಿದಾಗ ಸಭೆಯ ತೀರ್ಮಾನ ಹೀಗಾಗುತ್ತದೆ: ನಿನಗೂ ಒಂದು ಪಾತ್ರವಿದೆ, ಆದರೆ ನೀನು ಇನ್ನೂ ಹುಟ್ಟಿಲ್ಲದ ಮಗು! ಪಾತ್ರ ಕೊಟ್ಟಂತೂ ಆಗಬೇಕು, ನಾಟಕದಿಂದ ಹೊರದಬ್ಬಿದಂತೆಯೂ ಆಗಬೇಕು ಎನ್ನುವುದು ’ಸಭೆಯ ಉದ್ದೇಶ’. ಒಳಗೊಳ್ಳುವಿಕೆ ಅಥವಾ ಹೊರದಬ್ಬುವಿಕೆ, ಹೊರನೋಟಕ್ಕೆ ಎಲ್ಲವೂ ನಾಜೂಕಾಗಿ ಕಾಣಬಹುದು ಮತ್ತು ಒಳಗಿಂದೊಳಗೆ ಒಂದು ಕಾನೂನಿನ ಮೂಲಕವೋ ಅಥವಾ ಯಾವುದೋ ಒಂದು ವ್ಯವಸ್ಥೆಯ ಮೂಲಕವೋ, ಹೊರಗಿರುವವರನ್ನು ಹೊರಗೇ ಇಡುವಂತೆ ಮಾಡಬಹುದು.

ಇದಕ್ಕೆ ಹಣಕಾಸು, ಜಾತಿ, ಧರ್ಮ, ಭಾಷೆ – ಈ ರೀತಿ ಯಾವುದಾದರೊಂದನ್ನು ತಂತ್ರವಾಗಿ ಬಳಸಿ ವಾಸ್ತವ ಸ್ಥಿತಿಯನ್ನು ಕಾಪಾಡಿಕೊಳ್ಳುವಂತಾಗಬಹುದು. ಎರಡನೇ ಮಹಾಯುದ್ಧದ ನಂತರ ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ ತನ್ನ ದೇಶಕ್ಕೆ ಹೊಸ ಶಿಕ್ಷಣ ನೀತಿಯೊಂದನ್ನು ರೂಪಿಸಿ ಇದು ಸಾಧಾರಣ ಮನುಷ್ಯನಿಗೆ ಅಸಾಧಾರಣ ಶಿಕ್ಷಣವನ್ನು ಒದಗಿಸುವ ವ್ಯವಸ್ಥೆ (uncommon education for common man) ಎಂದಿದ್ದ. ಅಮೇರಿಕದ ಶ್ರೇಷ್ಠ ತತ್ವಶಾಸ್ತ್ರಜ್ಞ ಜಾನ್ ರಾಲ್ಸ್ ’ನ್ಯಾಯವೆಂದರೆ ಕಟ್ಟಕಡೆಯ ಮನುಷ್ಯನ ಹಾದಿಯನ್ನು ಸುಗಮಗೊಳಿಸುವುದು’ (Advantage for most disadvantaged) ಎಂದಿದ್ದ.

ಇಂದು ಅನೇಕ ಸಾರ್ವಜನಿಕ ವ್ಯವಸ್ಥೆಗಳು ಖಾಸಗೀಕಣಗೊಂಡಿರುವ ಕಾಲ. ಅದು ಆರೋಗ್ಯವಿರಬಹುದು ಅಥವಾ ಶಿಕ್ಷಣವಿರಬಹುದು. ಪತ್ರಕರ್ತ ಶಂಕರ್‌ಅಯ್ಯರ್ ’ಗೇಟೆಡ್ ರಿಪಬ್ಲಿಕ್’ ಎನ್ನುವ ಪುಸ್ತಕವನ್ನು ಈ ವ್ಯವಸ್ಥೆಯನ್ನು ವಿವರಿಸುವುದಕ್ಕಾಗಿಯೇ ಬರೆದಿದ್ದಾರೆ. ಹಾಗೆಯೇ ಆನಂದ ತೇಲ್ತುಂಬ್ಡೆ ಅವರ ’ರಿಪಬ್ಲಿಕ್ ಆಫ್ ಕಾಸ್ಟ್’ ಎನ್ನುವ ಪುಸ್ತಕವನ್ನು ಗಮನಿಸಬಹುದು. ಇದೇ ನಿಟ್ಟಿನಲ್ಲಿ ಮೈಕಲ್ ಸ್ಯಾಂಡಲ್ ತನ್ನ ’ಟಿರನಿ ಆಫ್ ಮೆರಿಟ್’ ಎನ್ನುವ ಪುಸ್ತಕದಲ್ಲಿ ಈ ಅರ್ಹತೆಯ ಅಹಂಕಾರ ಮತ್ತು ದಬ್ಬಾಳಿಕೆಯನ್ನು ವಿವರಿಸುತ್ತಾನೆ. ಹೊರನೋಟಕ್ಕೆ ಅದು ಅರ್ಹತೆ ಎಂದು ಕಂಡುಬಂದರೂ ಅದರ ಹಿಂದೆ ಇರುವ ಕೈಚಳಕ ಪರಂಪರಾಗತವಾಗಿ ಬಂದ ಶ್ರೀಮಂತ ಕುಟುಂಬಗಳು ಮತ್ತು ಅವರ ಪರವಾಗಿ ನಿಲ್ಲುವ ವ್ಯವಸ್ಥೆ ಹೇಗೆ ಮೇಲಿರುವವರನ್ನು ಮೇಲಕ್ಕೆತ್ತುತ್ತಾ, ಕೆಳಗಿರುವವರನ್ನು ತುಳಿಯುತ್ತಾ ಬಂದಿದೆ ಎನ್ನುವುದನ್ನು ಆತ ವಿವರಿಸುತ್ತಾನೆ.

ಸೋತವನು ಅನರ್ಹ, ಅಯೋಗ್ಯ ಎಂದೆಲ್ಲ ಹಣೆಪಟ್ಟಿ ಕಟ್ಟಿ ಹೀಗಳೆಯುವಂತಾಗುತ್ತದೆ. ವಾಸ್ತವವಾಗಿ ಸೋಲಿಗೆ ವ್ಯವಸ್ಥೆಯಲ್ಲಿರುವ ಕಾರಣವನ್ನು ಗಮನಿಸುವುದಿಲ್ಲ. ಹೀಗಾಗಿ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಕೆಳವರ್ಗದವರು ಶೇ.23ರಷ್ಟು ಮಾತ್ರ ಪಾಲ್ಗೊಳ್ಳುವುದಾದರೆ ಇತರರು ಶೇ.32ರಷ್ಟು ಸೇರುವುದಾಗಿದೆ. ಒಟ್ಟು ಉನ್ನತ ಶಿಕ್ಷಣಕ್ಕೆ ಹೋಗುವವರೇ ಶೇ.28ರಷ್ಟಿದ್ದು ಜಗತ್ತಿನ ಸರಾಸರಿ ಶೇ.38ಕ್ಕೆ ಹೋಲಿಸಿದರೆ ಅಥವಾ ಚೈನಾದ ಶೇ.53ಕ್ಕೆ ಹೋಲಿಸಿದರೆ ಭಾರತ ಕಳಪೆ ಸ್ಥಾನದಲ್ಲಿರುವುದನ್ನು ಗಮನಿಸಬಹುದು. ಅದರಲ್ಲೂ ದಲಿತರು ಮತ್ತು ಅಲ್ಪಸಂಖ್ಯಾತರಲ್ಲಿ ಈ ಅನುಪಾತ ಸುಮಾರು ಶೇ.20ರಷ್ಟಿದ್ದು, ಸಮಾಜ-ಆಡಳಿತ ವ್ಯವಸ್ಥೆ ಆ ಸಮುದಾಯ ಹಿಂದೆ ಬಿದ್ದಿರುವದನ್ನು ಸರಿಪಡಿಸಲು ಹೆಚ್ಚೇನೂ ಕೆಲಸ ಮಾಡಿಲ್ಲ ಎಂಬುದನ್ನು ಗಮನಿಸಬಹುದು.

ಇತ್ತೀಚೆಗೆ ತಮಿಳುನಾಡು ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನಡೆಸುವ ಏಕರೂಪದ NEET ಪರೀಕ್ಷೆಯನ್ನು ರದ್ದುಗೊಳಿಸುವ ನಡಾವಳಿಯನ್ನು ವಿಧಾನಸಭೆಯಲ್ಲಿ ಮಂಡಿಸಿತು. ಕಾರಣ NEET ಪರೀಕ್ಷೆ ಆರಂಭಗೊಂಡ ನಂತರ ತಮಿಳು ಮಾಧ್ಯಮದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಸಂಖ್ಯೆ ಶೇ.15ರಿಂದ ಶೇ.2ಕ್ಕೆ ಇಳಿಯಲ್ಪಟ್ಟಿತು ಹಾಗೂ ರಾಜ್ಯ ಸರ್ಕಾರದ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳ ಸಂಖ್ಯೆ ಶೇ.98ರಿಂದ ಶೇ.60ಕ್ಕೆ ಇಳಿಯಲ್ಪಟ್ಟಿತು. ಹಾಗೆಯೇ ಗ್ರಾಮಾಂತರದ ವಿದ್ಯಾರ್ಥಿಗಳ ಸಂಖ್ಯೆ ಶೇ.65ರಿಂದ ಶೇ.50ಕ್ಕೆ ಇಳಿಯಲ್ಪಟ್ಟಿತು. ಅದೇ ಸಮಯದಲ್ಲಿ ಕೇಂದ್ರ ಪಠ್ಯಕ್ರಮದಲ್ಲಿ ಓದಿ ಕಲಿತ ವಿದ್ಯಾರ್ಥಿಗಳ ಸಂಖ್ಯೆ ಶೇ.1ರಿಂದ ಶೇ.39ಕ್ಕೆ ಏರಿಕೆಯಾಯಿತು. ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾದದ್ದು ಗ್ರ್ರಾಮಾಂತರ ಮಕ್ಕಳ ಸಮಸ್ಯೆ. ಇಂಗ್ಲಿಷ್ ಭಾಷೆಯಲ್ಲಿ ಕಲಿಯದಿದ್ದುದು ಮತ್ತು ರಾಜ್ಯದ ಪಠ್ಯಕ್ರಮದಲ್ಲಿ ಕಲಿತದ್ದು, ಅವರ ವಿರುದ್ಧ ಕೆಲಸ ಮಾಡಿ, ಅವರನ್ನು ಹೊರದಬ್ಬುವಂತೆ ಮಾಡಿತು. ತಮಿಳಿನಲ್ಲಿ ಉತ್ತಮ ಅಂಕಗಳನ್ನು ಪಡೆದರೂ NEET ಗೇಟಿನಿಂದ ಹೊರಗುಳಿಯಬೇಕಾಯಿತು. ಇದು ಅರ್ಹತೆ ಅಥವಾ ಜ್ಞಾನದ ಆಧಾರದ ಮೇಲೆ ಎಂದು ಪರಿಗಣಿಸಲಾಗದು. ಗುರುತ್ವಾಕರ್ಷಣೆ ಎಂದು ಗೊತ್ತಿದೆ, ಆದರೆ ಗ್ರಾವಿಟಿ ಗೊತ್ತಿಲ್ಲವೆಂದರೆ ವಿಷಯ ಗೊತ್ತಿಲ್ಲವೆಂದಲ್ಲ. ಭಾಷೆಯ ತೊಡಕಷ್ಟೇ ಎನ್ನುವುದನ್ನು ಗಮನಿಸತಕ್ಕದ್ದು. ಭಾರತದಲ್ಲಿ ಅನೇಕರು ಹೇಳುವಂತೆ ಇಂಗ್ಲಿಷ್ ಬರುವವರೆಲ್ಲಾ ತತ್ವಶಾಸ್ತ್ರಜ್ಞರಾಗಿಬಿಡುತ್ತಾರೆ.

ಇದಲ್ಲದೆ ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಇರತಕ್ಕದ್ದು. ಆದರೆ NEET ಪರೀಕ್ಷೆಯೆಂಬ ಕಾನೂನಿನಿಂದ ಕೇಂದ್ರ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತಾಯಿತು. ಇತ್ತೀಚೆಗೆ ಪಂಚಾಯತ್‌ರಾಜ್‌ನಿಂದ ಹಿಡಿದು ಸಹಕಾರಿ ಬ್ಯಾಂಕ್‌ಗಳನ್ನು ಹಲವು ಕಾನೂನುಗಳ ಮೂಲಕ ಕೇಂದ್ರ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ.

ಇಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲು ಸಾವಿರಾರು ಕೋಟಿಯ ಕೋಚಿಂಗ್ ಉದ್ಯಮ ತಲೆಯೆತ್ತಿ ನಿಂತಿದೆ. ರಾಜಸ್ಥಾನದ ಕೋಟಾದಲ್ಲಿರುವ ಕೋಚಿಂಗ್ ಉದ್ಯಮ ಸುಮಾರು ಮೂರು ಸಾವಿರ ಕೋಟಿಯದು ಎನ್ನುತ್ತಾರೆ. ನಮ್ಮ ಆರ್ಥಿಕ ಮಾಪನಗಳ ವಿಪರ್ಯಾಸವೆಂದರೆ ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠಮಾಡದೆ ಖಾಸಗಿಯಾಗಿ ಟ್ಯೂಷನ್ ತೆಗೆದುಕೊಂಡರೆ ಜಿಡಿಪಿ ಬೆಳೆಯುತ್ತದೆ, ಅಭಿವೃದ್ಧಿ ಆಗುತ್ತದೆ ಎಂದು ತೋರಿಕೊಳ್ಳುತ್ತದೆ. ಇತ್ತೀಚೆಗೆ ಚೈನಾ ದೇಶ ಇಡೀ ಕೋಚಿಂಗ್ ಉದ್ಯಮವನ್ನು ಮಟ್ಟ ಹಾಕಿದೆ.

ನಮ್ಮ ದೇಶದಲ್ಲಿ, ವಂಚಿತ ಸಮುದಾಯಗಳು ತಮ್ಮ ಕೆಳಸ್ತರದಿಂದ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆಬರುವುದು ಅಷ್ಟು ಸುಲಭವಲ್ಲ. ’ವರ್ಲ್ಡ್ ಎಕನಾಮಿಕ್ ಫೋರಂ’ ಹೊರತರುವ ತನ್ನ ಸೋಷಿಯಲ್ ಮೊಬಿಲಿಟಿ ಇಂಡೆಕ್ಸ್ ಎನ್ನುವ ಮಾಪನದಲ್ಲಿ ಜಗತ್ತಿನ 84 ದೇಶಗಳಲ್ಲಿ ಭಾರತ 76ನೇ ಸ್ಥಾನದಲ್ಲಿದೆ. ಯಾವುದೇ ವ್ಯಕ್ತಿ ತನ್ನ ಸ್ಥಾನಮಾನವನ್ನು ಉತ್ತಮಪಡಿಸಿಕೊಂಡು ಮುಂದುವರಿಯಲು ಅತ್ಯಂತ ಹೆಚ್ಚು ತಡೆಗೋಡೆಗಳು ಭಾರತದಲ್ಲಿವೆ ಎನ್ನುವುದೇ ಇದರ ಅರ್ಥ.

ಕೆ.ಸಿ. ರಘು

ಕೆ.ಸಿ. ರಘು
ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು, ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರಿಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: NEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?

ಇದನ್ನೂ ಓದಿ: ಬಹುಪಾಲು ವಿದ್ಯಾರ್ಥಿಗಳಿಗೆ ‘ನೀಟ್‌‌’ ಬೇಡ: ನ್ಯಾಯಮೂರ್ತಿ ರಾಜನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...