Homeಮುಖಪುಟಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

ಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

- Advertisement -
- Advertisement -

2021ರ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ಸಮಯ. ಚುನಾವಣಾ ತಂತ್ರಗಾರಿಕೆಯಲ್ಲಿ ಹೆಸರು ಮಾಡಿದ ಪ್ರಶಾಂತ್ ಕಿಶೋರ್ ಆಯ್ದ ಕೆಲವು ಪತ್ರಕರ್ತರೊಂದಿಗೆ ಚರ್ಚೆ ನಡೆಸಿದ್ದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಬಲಾಬಲ ಕುರಿತ ವಿಚಾರಗಳ ವಿನಿಮಯವಾಗಿತ್ತು. ಈ ಸಂವಾದ ಆಡಿಯೋ ತುಣುಕು ಏಕಾಏಕಿ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಚರ್ಚೆ ನಡೆದಿದ್ದು ಕ್ಲಬ್‌ಹೌಸ್ ಎಂಬ ಆಪ್‌ನಲ್ಲಿ.

2020ರಲ್ಲಿ ಬಿಡುಗಡೆಯಾದ ಈ ಆಪ್ ಕೇವಲ ಐಫೋನ್‌ಗಳಿಗೆ ಲಭ್ಯವಿತ್ತು. ಈಗ ಆಂಡ್ರಾಯ್ಡ್ ಬಳಕೆದಾರರಿಗೂ ಪರಿಚಯಿಸಲಾಗಿದೆ. ಆದರೆ ಆಹ್ವಾನದ ಮೇರೆಗೆ ಈ ಆಪ್‌ನಲ್ಲಿ ಖಾತೆ ತೆರೆಯಬಹುದಾಗಿತ್ತು. ಇದಾಗಿ ಕೆಲವೇ ವಾರಗಳಲ್ಲಿ ಕ್ಲಬ್‌ಹೌಸ್ ಮುಕ್ತವಾಗಿದ್ದು ಪ್ರಸಕ್ತ ಭಾರತದಲ್ಲಿ 1 ಮಿಲಿಯನ್ ಬಳಕೆದಾರರನ್ನು ಹೊಂದಿದೆ!

ಏನಿದು ಕ್ಲಬ್‌ಹೌಸ್?

ಇದೊಂದು ಆಡಿಯೋ ಆಧರಿತ ಸೋಷಿಯಲ್ ಮೀಡಿಯಾ ಆಪ್. ಇಲ್ಲಿ ವಿಡಿಯೋಗಳಿಲ್ಲ. ಸಾಲು ಸಾಲು ಬರಹಗಳಿಲ್ಲ. ಇಲ್ಲಿರುವುದು ಬರೀ ಮಾತು. ಇದೊಂದು ರೀತಿಯ ಪಾಡ್‌ಕಾಸ್ಟ್‌ನ ಲೈವ್ ಆವೃತ್ತಿ ಎನ್ನಬಹುದು. ಸಮಾನ ಆಸಕ್ತಿಯ ವಿಷಯಗಳ ಬಗ್ಗೆ ಒಂದೆಡೆ ಸೇರಿ ಹೇಗೆ ಹರಟೆ ಹೊಡೆಯುತ್ತೇವೊ, ಅದೇ ಅನೌಪಚಾರಿಕತೆಯೊಂದಿಗೆ ಹರಟೆ ಹೊಡೆಯುವುದಕ್ಕೆ ಕ್ಲಬ್‌ಹೌಸ್ ವೇದಿಕೆ ಕಲ್ಪಿಸಿದೆ.

ಭಾರತೀಯ ಹಿನ್ನೆಲೆಯ ಅಮೆರಿಕನ್ ರೋಹನ್ ಸೇತ್ ಮತ್ತು ಪಾಲ್ ಡೇವಿಸನ್ ಅಭಿವೃದ್ಧಿಪಡಿಸಿದ ಕ್ಲಬ್‌ಹೌಸ್ ಕೋವಿಡ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿಢೀರನೆ ಪ್ರಚಾರ ಪಡೆದುಕೊಂಡು ವಿಶ್ವದಾದ್ಯಂತ 1 ಕೋಟಿ ಬಳಕೆದಾರರನ್ನು ಗಳಿಸಿಕೊಂಡಿದೆ.

PC : Business Insider, (ರೋಹನ್ ಸೇತ್ ಮತ್ತು ಪಾಲ್ ಡೇವಿಸನ್)

ಬಳಕೆದಾರರು ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡು ಆಸಕ್ತಿಯ ವಿಷಯ ಕುರಿತು ಚರ್ಚಿಸಬಹುದು, ಸಂವಾದ ನಡೆಸಬಹುದು. ಅನಿರ್ಬಂಧಿತವಾದ ಖಾಸಗಿ ಹರಟೆಗೂ ಅವಕಾಶವಿದೆ. ಮುಕ್ತವಾಗಿ ಆಸಕ್ತರೆಲ್ಲರನ್ನೂ ಒಳಗೊಳ್ಳುವುದಕ್ಕೂ ಅವಕಾಶವನ್ನು ಕ್ಲಬ್‌ಹೌಸ್ ನೀಡಿದೆ.

ಜನಪ್ರಿಯವಾಗಿದ್ದೇಕೆ?

ಸೋಷಿಯಲ್ ಮೀಡಿಯಾ ಅಂದರೆ ಅಲ್ಲಿ ಸೆಲ್ಫಿಗಳು, ಫೋಟೊಗಳು, ವಿಡಿಯೋಗಳು, ಉದ್ದುದ್ದ ಬರಹಗಳು.. ಅವುಗಳಿಗೆ ಬರುವ ಲೈಕ್, ಕಮೆಂಟ್‌ಗಳು, ಶೇರ್‌ಗಳು…

ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಈ ಹಲವು ಸೋಷಿಯಲ್ ಮೀಡಿಯಾ ಚಟುವಟಿಕೆಗಳಿಂದ ರೋಸಿದ ಕಾರಣಕ್ಕೊ ಏನೋ, ಕೇವಲ ಧ್ವನಿಯನ್ನಷ್ಟೇ ಆಧರಿಸಿದ ಕ್ಲಬ್‌ಹೌಸ್ ಜನಪ್ರಿಯವಾಗುತ್ತಿದೆ.

ಎಷ್ಟರಮಟ್ಟಿಗೆ ಎಂದರೆ ಇಲ್ಲಿ ತರುಣ-ತರುಣಿಯರಿದ್ದಾರೆ, ಮಹಿಳೆಯರಿದ್ದಾರೆ, ಉದ್ಯಮಿಗಳು, ಪತ್ರಕರ್ತರು, ಹೊಸ ತಲೆಮಾರಿನ ರಾಜಕಾರಣಿಗಳೂ ತೊಡಗಿಸಿಕೊಂಡಿದ್ದಾರೆ. ತರಹೇವಾರಿ ವಿಷಯಗಳ ಕುರಿತು ಸೀಮಿತ ಅವಧಿಯ ಚರ್ಚೆಗಳು ನಡೆಯುತ್ತವೆ. ಅಲ್ಲಿಗೆ ಒಂದು ಸಭೆ ಮುಗಿದುಹೋಗುತ್ತದೆ.

ಯಾರು ಬೇಕಾದರೂ ಇಂತಹ ಚರ್ಚೆಗಳನ್ನು ನಡೆಸಬಹುದು, ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ವಿವಿಧ ಹಿನ್ನೆಲೆಯ ಅನುಭವವುಳ್ಳವರೊಂದಿಗೆ ನೇರ ಸಂವಾದ ಚರ್ಚೆಗಳು ಸಾಧ್ಯವಾಗುವುದರಿಂದ
ವಸ್ತು-ವಿಷಯಗಳ ವಿವಿಧ ಆಯಾಮಗಳ ದೃಷ್ಟಿಕೋನವನ್ನು ಪಡೆಯುವುದಕ್ಕೂ ಕ್ಲಬ್‌ಹೌಸ್ ಅವಕಾಶ ಕೊಡುತ್ತದೆ ಎಂಬುದು ಬಳಕೆದಾರರ ಅಭಿಪ್ರಾಯ.

ಭಾರತದಲ್ಲಿ ಕ್ಲಬ್‌ಹೌಸ್ ಕುತೂಹಲ

ಆರಂಭದಲ್ಲಿಯೇ ಹೇಳಿದಂತೆ ರಾಜಕೀಯ ಚರ್ಚೆಗಳ ವೇದಿಕೆಯಾಗಿದೆ ಈ ಕ್ಲಬ್‌ಹೌಸ್. ಪ್ರಶಾಂತ್ ಕಿಶೋರ್, ಇತ್ತೀಚೆಗೆ ದಿಗ್ವಿಜಯ್ ಸಿಂಗ್ ಈ ವೇದಿಕೆಯಲ್ಲಿ ಚರ್ಚೆ ಮಾಡಿದ ವಿಚಾರಗಳ ಕಾರಣಕ್ಕೆ ಸುದ್ದಿಯಾಗಿದ್ದನ್ನು, ವಿವಾದ ಎಬ್ಬಿಸಿದ್ದನ್ನು ನೋಡಿದ್ದೇವೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ದೃಷ್ಟಿಯಿಂದ ಹಲವು ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ವಿರುದ್ಧ ಅಭಿಪ್ರಾಯ ರೂಪಿಸುವ ಚರ್ಚೆಗಳು ನಡೆಯುತ್ತಿವೆ.

ಇವುಗಳಲ್ಲದೆ, ಅತ್ಯಂತ ಲಘು ವಿಷಯಗಳ ಮೇಲೂ ಹರಟೆಗಳು ನಡೆಯುತ್ತಿವೆ. ಲಾಕ್‌ಡೌನ್ ಮುಗಿದಮೇಲೆ ಸುತ್ತಲು ಎಲ್ಲಿಗೆ ಹೋಗುವುದು? ನೀವು ಇಷ್ಟಪಡುವ ತಿಂಡಿ ಯಾವುದು? ಹೀಗೆ.. ಅಷ್ಟೇ ಅಲ್ಲ ’ಮಕ್ಕಳನ್ನು ಮಾಡಿಕೊಳ್ಳುವುದು ನೈತಿಕವಾಗಿ ಸರಿಯೇ?’ ಎಂಬಂತಹ ಅತ್ಯಂತ ಸೂಕ್ಷ್ಮವಾದ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ.

ಇಷ್ಟಾಗಿಯೂ ಕ್ಲಬ್‌ಹೌಸ್ ತನ್ನದೇ ಆದ ರೀತಿಯಲ್ಲಿ ಮಹತ್ವ ಗಳಿಸಿಕೊಳ್ಳುತ್ತಿದೆ. ಇತರೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ಗಮನಸೆಳೆಯುವ ಕಸರತ್ತುಗಳು ಇಲ್ಲಿಲ್ಲ. ಇಲ್ಲಿ ಆಳವಾದ ಹಾಗೂ ಗಂಭೀರವಾದ ಚರ್ಚೆ, ವಿಚಾರ ವಿನಿಮಯ, ಸಂವಾದಗಳಿಗೆ ಅವಕಾಶವಿದೆ. ಪ್ರಶ್ನೆ ಕೇಳುವಂತೆ ಮಾಡುವ ಹಾಗೂ ಪ್ರಶ್ನೆ ಕೇಳುವ ಮೂಲಕ ಹೆಚ್ಚು ಹೆಚ್ಚು ವಿಶಾಲವಾದ ಹರಹಿನ ಚರ್ಚೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕ್ಲಬ್‌ಹೌಸ್‌ನ ವೈಶಿಷ್ಟ್ಯ.

ನಿರ್ದಿಷ್ಟವಾಗಿ ಒಂದು ಗುಂಪನ್ನು ಉದ್ದೇಶಿಸಿ ಮಾತನಾಡುವ ಅವಕಾಶ, ಅಭಿಪ್ರಾಯ ರೂಪಿಸುವ, ಅಭಿಮತ ರೂಪಿಸುವ ಮುಖ್ಯವಾದ ಅವಕಾಶವನ್ನು ನೀಡುತ್ತದೆ.

ಬಹಳ ಮುಖ್ಯವಾಗಿ ರಾಜಕಾರಣಿಗಳು ಈ ಆಪ್‌ಅನ್ನು ಅತ್ಯಂತ ಕುತೂಹಲದಿಂದು ನೋಡುತ್ತಿದ್ದಾರೆ. ತೆಲಂಗಾಣದ ಕಾಂಗ್ರೆಸ್ ನಾಯಕ ಡಾ. ಶ್ರವನ್ ಕುಮಾರ್ ದಾಸೋಜು ಅವರು, ’ಇದು ಅತ್ಯಂತ ವಿಸ್ಮಯಕಾರಿ ಆಪ್. ರಾಜಕಾರಣಿಗಳು ತಮ್ಮ ಜನರ ಮಾತುಗಳನ್ನು ನೇರವಾಗಿ ಕೇಳುವುದಕ್ಕೆ ಅವಕಾಶ ನೀಡುತ್ತದೆ. ವಿವಿಧ ಹಿನ್ನೆಲೆ, ವೃತ್ತಿ, ವಯಸ್ಸು ಮತ್ತು ಭಿನ್ನ ರಾಜಕೀಯ ನಿಲುವುಗಳಿರುವವರ ಮಾತು ಕೇಳಬಹುದು. ಇದೊಂದು ರೀತಿಯಲ್ಲಿ ಅಭಿಪ್ರಾಯ ಪಡೆದುಕೊಳ್ಳುವ ಸಾಧನ’ ಎಂದಿದ್ದಾರೆ.

ಅವರ ಪ್ರಕಾರ 2023ರ ಚುನಾವಣೆಯಲ್ಲಿ ಕ್ಲಬ್‌ಹೌಸ್ ನಿರ್ಣಾಯಕ ಪಾತ್ರವಹಿಸಲಿದೆ! ಈಗಾಗಲೇ ಬಿಜೆಪಿ, ಪ್ರಧಾನಿ ಮೋದಿ ಕುರಿತು ಪ್ರಚಾರ ರೂಪದ ಚರ್ಚೆಗಳು, ಹಿಂದುತ್ವ ಕುರಿತ ಸಂವಾದಗಳು, ರಾಹುಲ್‌ಗಾಂಧಿಯನ್ನು ಯಥಾ ಪ್ರಕಾರ ಗೇಲಿ ಮಾಡುವ ಚರ್ಚೆಗಳನ್ನು ನಡೆಸುತ್ತಿದೆ.

ಇವೆಲ್ಲವೂ ಅಭಿಪ್ರಾಯ ರೂಪಿಸುವ, ಅಭಿಪ್ರಾಯ ಹೇರುವ ಪ್ರಯತ್ನಗಳಾಗಿ ಈಗಾಗಲೇ ಚುರುಕಾಗಿ ಸಾಗುತ್ತಿವೆ ಎಂಬ ಅಭಿಪ್ರಾಯವೂ ತೀವ್ರವಾಗಿದೆ.

ತಕರಾರುಗಳಿವೆ, ಆದರೂ ಆಸಕ್ತಿಯೂ ಇದೆ

ಮಾತನ್ನೇ (ಸಂವಾದವನ್ನು) ಬಂಡವಾಳವಾಗಿಸಿಕೊಂಡಿರುವ ಈ ಆಪ್ ಅಕ್ಷರಶಃ ವಾಚಾಳಿ. ಹರಟೆಯೇ ಇದರ ಮೂಲ ಸ್ವರೂಪ. ಹಾಗಾಗಿ ಅನೇಕರಿಗೆ ಇದು ’ವಟವಟ’ ಸದ್ದಿನ ಕೋಣೆ. ತಮ್ಮ ಆಸಕ್ತಿಯ ವಿಷಯಗಳನ್ನು ಹಂಚಿಕೊಳ್ಳುವುದಕ್ಕೆ ಸಮಾನ ನಿಲುವಿನ ಅಥವಾ ಆಸಕ್ತಿಯ ಜನರೊಂದಿಗೆ ಹರಟುವ ಈ ಕ್ಲಬ್‌ಹೌಸ್ ಗುಂಪುಗಳು ಮೇಲ್ನೋಟಕ್ಕೆ ಎಕೊಚೇಂಬರ್ಸ್‌ನಂತೆ ಕಾಣಿಸುತ್ತವೆ. ಆದರೆ ಯಾರು ಬೇಕಾದರೂ ಪಾಲ್ಗೊಳ್ಳುವ ಅವಕಾಶವಿರುವುದರಿಂದ ಹಾಗೊಂದು ಚೌಕಟ್ಟನ್ನು ಹೇರಲಾಗದು.

ಆದರೆ ಎಲ್ಲ ಹೊಸ ಅವಕಾಶಗಳನ್ನು, ಹೊಸ ದೃಷ್ಟಿಕೋನದಿಂದ ನೋಡಬೇಕು, ಸದಭಿರುಚಿ ಮತ್ತು ಸದಾಶಯಗಳುಳ್ಳ ಚರ್ಚೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ಇದೆ.

ಮೈಸೂರಿನ ಕಲಾವಿದೆ ಚರಿತಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆಯುತ್ತಾ..

“ನಾನು ಗಮನಿಸಿದಂತೆ, ಕ್ಲಬ್‌ಹೌಸ್‌ಅನ್ನು ತುಂಬಾ ಬುದ್ಧಿವಂತಿಕೆಯಿಂದ, ಅದರ ಸಾಧ್ಯತೆಗಳನ್ನೆಲ್ಲ ಬಳಸಿಕೊಳ್ಳುತ್ತಿರೋರು ಮಲಯಾಳಿಗಳು. ಅಲ್ಲಿ ಅವರು ಕ್ರಿಯೇಟ್ ಮಾಡುವ ’ರೂಮ್‌’ಗಳ ವಿಷಯ-ವೈವಿಧ್ಯ ’ವಾವ್’ ಅನಿಸುವಷ್ಟು ವಿಸ್ತೃತವಾಗಿದೆ. ಇತ್ತೀಚೆಗೆ ಮಲಯಾಳಿ ಸ್ಕಾಲರ್ ಒಬ್ಬರು ತಮ್ಮ ಕಾದಂಬರಿಯ ಬಗ್ಗೆ ಚರ್ಚೆ ಏರ್ಪಡಿಸಿದ್ದರು. ಆ ಕಾದಂಬರಿಯಲ್ಲಿ ಕನ್ನಡದ ವಚನಕಾರ್ತಿ ’ದುಗ್ಗವ್ವೆ’ ಬಗ್ಗೆ ಪ್ರಸ್ತಾಪವಿದೆ. ಅವರ ಪ್ರಕಾರ ಆಕೆ ಕೇರಳ ಮೂಲದವಳು! ವಚನಕಾರರ ಬಗ್ಗೆ ಕನ್ನಡದವರೇ ಇಷ್ಟು ಗಂಭೀರವಾಗಿ ಚರ್ಚಿಸಿದ್ದನ್ನು ನಾನು ಕೇಳಿಲ್ಲ! ಆ ಚರ್ಚೆಯಲ್ಲಿ ಪಿ.ಲಂಕೇಶ್, ಗೌರಿ ಲಂಕೇಶ್ ಬಗ್ಗೆ ಕೂಡ ಪ್ರಸ್ತಾಪವಾಯಿತು.”

ಸಿನಿ ನಿರ್ದೇಶಕ, ಲೇಖಕ ಪರಮೇಶ್ವರ ಗುರುಸ್ವಾಮಿಯವರೂ ಕ್ಲಬ್‌ಹೌಸ್‌ಅನ್ನು ಹೊಸಸಾಧ್ಯತೆಯಾಗಿ ಕಾಣುತ್ತಾರೆ. ಅವರೇ ಹೇಳುವಂತೆ, “ಥೋರೋತನ ರೂಸೋತನ ಮತ್ತು ಪ್ರಕೃತಿ ಹಾಗು ಪ್ರಕೃತಿಗೆ ಸಂಬಂಧಿಸಿದ್ದೆಲ್ಲವೂ ಬುಲ್ಡೋಜೀಕರಣವಾಗುತ್ತಿರುವ ಈ ನಮ್ಮ ಕಾಲದಲ್ಲಿ ಮಮತಾ ಮತ್ತು ಸ್ಟಾಲಿನ್‌ರನ್ನು ಗೆಲುವಿಗೆ ತಲುಪಿಸಿದ ಪಿಕೆ (ಪ್ರಶಾಂತ್ ಕಿಶೋರ್), ನನ್ನಂಥವರು ಒಪ್ಪಿಕೊಳ್ಳಲಾಗದ ತಾಂತ್ರಿಕ ಸ್ಟ್ರಾಟಜಿಗಳನ್ನ ಬಳಸಿದ್ದು ವಾಸ್ತವ. ಈತ ಬಳಸಿದ ಅದೇ ತಾಂತ್ರಿಕ ಕುಟಿಲತೆಗಳಲ್ಲಿ ಒಂದು ’ಚಾಯ್ ಪೆ ಚರ್ಚಾ’. ಹಲವು ಗುಂಡುಗಳನ್ನು ಸತತವಾಗಿ ಹಾರಿಸುವ ರಿವಾಲ್ವರ್‌ಅನ್ನು ಸ್ಯಾಮ್ಯುಯಲ್ ಕೋಲ್ಟ್ ಕಂಡು ಹಿಡಿದ ನಂತರವೇ ಬಿಲ್ಲು ಬಾಣಗಳು, ಈಟಿ ಭರ್ಜಿಗಳನ್ನು ಬಳಸುತ್ತಿದ್ದ ಅಮೆರಿಕನ್ ಮೂಲನಿವಾಸಿಗಳನ್ನು ದಮನಿಸಿ ಬಿಟ್ಟರು. ಪಿಕೆಯ ಆಧುನಿಕ ತಾಂತ್ರಿಕ ಸ್ಟ್ರಾಟಜಿಗಳನ್ನು ತಿರಸ್ಕರಿಸಿದ ಕಾಂಗ್ರೆಸ್ ಎಲ್ಲಿದೆ. ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಿತು. ಹೀಗಾಗಿ ಯಾವುದೇ ಹೊಸ ಅವಕಾಶಗಳನ್ನು ಉಪೇಕ್ಷೆ ಮಾಡುವ ಪರಿಸ್ಥಿತಿ ಮತ್ತು ಸಂದರ್ಭ ಇದಲ್ಲ.”

ಕವಿ ಶಂಕರ ಕೆಂಚನೂರು, ಲೇಖಕ ನಾಗೇಗೌಡ ಕೀಲಾರ ಅವರು ನಡೆಸುತ್ತಿರುವ ರಾಜಕೀಯ ಚರ್ಚೆಗಳು, ಅವಧಿ ತಾಣ ನಡೆಸುತ್ತಿರುವ ಸಾಹಿತ್ಯಕ ಚರ್ಚೆಗಳು ಕುತೂಹಲಕಾರಿಯೂ, ಗಂಭೀರವೂ ಹಾಗೂ ಮಹತ್ವದ ಚರ್ಚೆಗಳಾಗಿವೆ.

ಆದರೆ ವಿಚಾರ ಭಿನ್ನಾಭಿಪ್ರಾಯಗಳಿದ್ದಲ್ಲಿ ತಮ್ಮದೇ ಚರ್ಚೆ ಆರಂಭಿಸುವುದಕ್ಕೆ ಮುಕ್ತ ಅವಕಾಶವಿರುವುದರಿಂದ ಹಲವು ಆಯಾಮಗಳ ಮಾತುಕತೆ ಸಾಧ್ಯ. ಆದರೆ ಹೀಗೆ ಎಕೊಚೇಂಬರ್‌ನಂತೆ ರೂಪಿಸಿಕೊಳ್ಳುವ ಅವಕಾಶವಿರುವುದರಿಂದ ಹಾಗೂ ರಾಜಕಾರಣಿಗಳು ಈ ತಾಣದ ಬಗ್ಗೆ ಅತೀವ ಆಸಕ್ತಿ ತೋರುವುದರಿಂದ ಇದೊಂದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಫೇಸ್‌ಬುಕ್ ಮಾಡಲಾಗದ್ದು ಈ ಕ್ಲಬ್‌ಹೌಸ್ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಲ್ಲದು ಎಂಬುದನ್ನು ಉಪೇಕ್ಷೆ ಮಾಡುವಂತೆಯೇ ಇಲ್ಲ.

PC : Cashify

ಅಲ್ಲದೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿರುವಂತೆ ಇಲ್ಲಿಯೂ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡುವುದು, ಆನ್‌ಲೈನ್ ಶೋಷಣೆಯಂತಹ ವಿಚಾರಗಳಲ್ಲಿ ಕ್ಲಬ್‌ಹೌಸ್ ಯಾವುದೇ ಕ್ರಮಕೈಗೊಂಡಿಲ್ಲ. ಈ ವಿಷಯವಾಗಿ ಈಗಾಗಲೇ ನೂರಾರು ದೂರುಗಳು ಕ್ಲಬ್‌ಹೌಸ್ ತಲುಪಿವೆ.

ಇನ್ನೊಂದೆಡೆ ನಕಲಿ ವ್ಯಕ್ತಿಗಳು ತಲೆನೋವಾಗಿದ್ದಾರೆ. ಕಳೆದ ವಾರ ಮಲಯಾಳಂ ಪ್ರಸಿದ್ಧ ನಟ ಪೃಥ್ವಿರಾಜ್ ಸುಕುಮಾರನ್ ಹೆಸರಿನಲ್ಲಿ ಖಾತೆ ತೆರೆದು ಚರ್ಚೆ ನಡೆಸಿದ ಘಟನೆಯೊಂದು ಬೆಳಕಿಗೆ ಬಂತು. ಖಾತೆ ತೆರೆಯುವ ವ್ಯಕ್ತಿಯ ಗುರುತನ್ನು ಪರಾಮರ್ಶಿಸುವ ಯಾವುದೇ ಮಾನದಂಡಗಳಿಲ್ಲದ್ದು ಆತಂಕಕಾರಿ.

ಡೀಪ್ ಫೇಕ್‌ಗಳು ಸೃಷ್ಟಿಯಾಗುತ್ತಿರುವ ಕಾಲದಲ್ಲಿ ಸುರಕ್ಷತೆಯ ಬಗ್ಗೆ ಸ್ಪಷ್ಟ ಹಾಗೂ ಸೂಕ್ಷ್ಮ ನಿಯಮಗಳನ್ನು ಹೊಂದಿಲ್ಲದಿರುವುದು ಅಪಾಯಕಾರಿಯಾಗಬಲ್ಲದು.

ಇದರ ಜೊತೆಗೆ ಬಳಕೆದಾರರನ ಖಾಸಗಿತನಕ್ಕೆ ಇಲ್ಲಿ ಸೂಕ್ತ ರಕ್ಷಣೆಯಿಲ್ಲ ಎಂಬ ಆರೋಪವೂ ಇದೆ. ಎಲ್ಲ ಆಪ್‌ಗಳಂತೆ ಇಲ್ಲಿಯೂ ಖಾತೆ ತೆರೆಯುವ ವ್ಯಕ್ತಿಯ ಕಾಂಟ್ಯಾಕ್ಟ್ ಲಿಸ್ಟ್‌ಅನ್ನು ನೋಡಲು ಕ್ಲಬ್‌ಹೌಸ್ ಅನುಮತಿ ಪಡೆದುಕೊಳ್ಳುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಮೂರನೆಯ ವ್ಯಕ್ತಿಯೊಂದಿಗೆ ಮಾರಿಕೊಳ್ಳುತ್ತದೆ ಎಂಬುದು ಕೂಡ ಬಹಿರಂಗಗೊಂಡಿದೆ. ಬಿಡುಗಡೆಯಾಗಿ ಕೇವಲ ಆರೇಳು ತಿಂಗಳ ಇತಿಹಾಸವಿರುವ ಈ ಆಪ್ ಏಪ್ರಿಲ್ ತಿಂಗಳಲ್ಲಿ ತನ್ನ 13 ಲಕ್ಷ ಬಳಕೆದಾರರ ಮಾಹಿತಿಯ ಸೋರಿಕೆಗೆ ಅವಕಾಶ ಮಾಡಿಕೊಟ್ಟಿದೆ ಎಂದರೆ ಖಾಸಗಿತನ, ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಈ ಆಪ್ ವಿಶ್ವಾಸಾರ್ಹವಲ್ಲ ಎಂದೆನಿಸುತ್ತದೆ.

ಖಾಸಗಿತನವೂ ಸರ್ಕಾರದ ಬೇಹುಗಾರಿಕೆಯೂ

ಒಂದೆಡೆ ಭಾರತ ಸರ್ಕಾರ ಕೋವಿಡ್ ಮತ್ತು ಇತ್ತೀಚಿನ ವಿಧಾನಸಭಾ ಚುನಾವಣೆಗಳ ವಿಷಯದಲ್ಲಿ ಹಿನ್ನೆಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಚರ್ಚೆಗಳನ್ನು ಕಣ್ಣು-ಕಿವಿಯಾಗಿ ಗಮನಿಸುತ್ತಿದೆ. ಕ್ಲಬ್‌ಹೌಸ್ ಕೂಡ ಹೊಸ ರೀತಿಯ ಚರ್ಚೆಯ ವೇದಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ಲಬ್‌ಹೌಸ್ ಚರ್ಚೆಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ದಳ, ಆರ್‌ಎಡಬ್ಲ್ಯು, ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ 11 ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ದಿ ಹಿಂದು ಪತ್ರಿಕೆ ವರದಿ ಹೇಳುತ್ತದೆ.

ಇದಲ್ಲದೆ ಇತ್ತೀಚಿನ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಂದಿರುವ ಹೊಸ ಕಾನೂನುಗಳಿಗೆ ಕ್ಲಬ್‌ಹೌಸ್ ಒಪ್ಪಿಗೆ ಸೂಚಿಸಿಲ್ಲ. ಈ ಕುರಿತು ಇನ್ನು ಪರಾಮರ್ಶೆ ಮಾಡುತ್ತಿರುವುದಾಗಿ ಹೇಳಿದೆ.


ಇದನ್ನೂ ಓದಿ: ‘ಪ್ರಜ್ಞಾ ಠಾಕೂರ್‌ ವಿಚಾರದಲ್ಲಿ ಮೋದಿ ಮನಸು ಬದಲಾಯಿಸಿದ ಹಾಗಿದೆ’: ಕಾಂಗ್ರೆಸ್‌‌ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕ್ಲಬ್ ಹೌಸ್ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಾರೆ ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...