Homeಮುಖಪುಟಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

ಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

- Advertisement -
- Advertisement -

2021ರ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ಸಮಯ. ಚುನಾವಣಾ ತಂತ್ರಗಾರಿಕೆಯಲ್ಲಿ ಹೆಸರು ಮಾಡಿದ ಪ್ರಶಾಂತ್ ಕಿಶೋರ್ ಆಯ್ದ ಕೆಲವು ಪತ್ರಕರ್ತರೊಂದಿಗೆ ಚರ್ಚೆ ನಡೆಸಿದ್ದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಬಲಾಬಲ ಕುರಿತ ವಿಚಾರಗಳ ವಿನಿಮಯವಾಗಿತ್ತು. ಈ ಸಂವಾದ ಆಡಿಯೋ ತುಣುಕು ಏಕಾಏಕಿ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಚರ್ಚೆ ನಡೆದಿದ್ದು ಕ್ಲಬ್‌ಹೌಸ್ ಎಂಬ ಆಪ್‌ನಲ್ಲಿ.

2020ರಲ್ಲಿ ಬಿಡುಗಡೆಯಾದ ಈ ಆಪ್ ಕೇವಲ ಐಫೋನ್‌ಗಳಿಗೆ ಲಭ್ಯವಿತ್ತು. ಈಗ ಆಂಡ್ರಾಯ್ಡ್ ಬಳಕೆದಾರರಿಗೂ ಪರಿಚಯಿಸಲಾಗಿದೆ. ಆದರೆ ಆಹ್ವಾನದ ಮೇರೆಗೆ ಈ ಆಪ್‌ನಲ್ಲಿ ಖಾತೆ ತೆರೆಯಬಹುದಾಗಿತ್ತು. ಇದಾಗಿ ಕೆಲವೇ ವಾರಗಳಲ್ಲಿ ಕ್ಲಬ್‌ಹೌಸ್ ಮುಕ್ತವಾಗಿದ್ದು ಪ್ರಸಕ್ತ ಭಾರತದಲ್ಲಿ 1 ಮಿಲಿಯನ್ ಬಳಕೆದಾರರನ್ನು ಹೊಂದಿದೆ!

ಏನಿದು ಕ್ಲಬ್‌ಹೌಸ್?

ಇದೊಂದು ಆಡಿಯೋ ಆಧರಿತ ಸೋಷಿಯಲ್ ಮೀಡಿಯಾ ಆಪ್. ಇಲ್ಲಿ ವಿಡಿಯೋಗಳಿಲ್ಲ. ಸಾಲು ಸಾಲು ಬರಹಗಳಿಲ್ಲ. ಇಲ್ಲಿರುವುದು ಬರೀ ಮಾತು. ಇದೊಂದು ರೀತಿಯ ಪಾಡ್‌ಕಾಸ್ಟ್‌ನ ಲೈವ್ ಆವೃತ್ತಿ ಎನ್ನಬಹುದು. ಸಮಾನ ಆಸಕ್ತಿಯ ವಿಷಯಗಳ ಬಗ್ಗೆ ಒಂದೆಡೆ ಸೇರಿ ಹೇಗೆ ಹರಟೆ ಹೊಡೆಯುತ್ತೇವೊ, ಅದೇ ಅನೌಪಚಾರಿಕತೆಯೊಂದಿಗೆ ಹರಟೆ ಹೊಡೆಯುವುದಕ್ಕೆ ಕ್ಲಬ್‌ಹೌಸ್ ವೇದಿಕೆ ಕಲ್ಪಿಸಿದೆ.

ಭಾರತೀಯ ಹಿನ್ನೆಲೆಯ ಅಮೆರಿಕನ್ ರೋಹನ್ ಸೇತ್ ಮತ್ತು ಪಾಲ್ ಡೇವಿಸನ್ ಅಭಿವೃದ್ಧಿಪಡಿಸಿದ ಕ್ಲಬ್‌ಹೌಸ್ ಕೋವಿಡ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿಢೀರನೆ ಪ್ರಚಾರ ಪಡೆದುಕೊಂಡು ವಿಶ್ವದಾದ್ಯಂತ 1 ಕೋಟಿ ಬಳಕೆದಾರರನ್ನು ಗಳಿಸಿಕೊಂಡಿದೆ.

PC : Business Insider, (ರೋಹನ್ ಸೇತ್ ಮತ್ತು ಪಾಲ್ ಡೇವಿಸನ್)

ಬಳಕೆದಾರರು ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡು ಆಸಕ್ತಿಯ ವಿಷಯ ಕುರಿತು ಚರ್ಚಿಸಬಹುದು, ಸಂವಾದ ನಡೆಸಬಹುದು. ಅನಿರ್ಬಂಧಿತವಾದ ಖಾಸಗಿ ಹರಟೆಗೂ ಅವಕಾಶವಿದೆ. ಮುಕ್ತವಾಗಿ ಆಸಕ್ತರೆಲ್ಲರನ್ನೂ ಒಳಗೊಳ್ಳುವುದಕ್ಕೂ ಅವಕಾಶವನ್ನು ಕ್ಲಬ್‌ಹೌಸ್ ನೀಡಿದೆ.

ಜನಪ್ರಿಯವಾಗಿದ್ದೇಕೆ?

ಸೋಷಿಯಲ್ ಮೀಡಿಯಾ ಅಂದರೆ ಅಲ್ಲಿ ಸೆಲ್ಫಿಗಳು, ಫೋಟೊಗಳು, ವಿಡಿಯೋಗಳು, ಉದ್ದುದ್ದ ಬರಹಗಳು.. ಅವುಗಳಿಗೆ ಬರುವ ಲೈಕ್, ಕಮೆಂಟ್‌ಗಳು, ಶೇರ್‌ಗಳು…

ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಈ ಹಲವು ಸೋಷಿಯಲ್ ಮೀಡಿಯಾ ಚಟುವಟಿಕೆಗಳಿಂದ ರೋಸಿದ ಕಾರಣಕ್ಕೊ ಏನೋ, ಕೇವಲ ಧ್ವನಿಯನ್ನಷ್ಟೇ ಆಧರಿಸಿದ ಕ್ಲಬ್‌ಹೌಸ್ ಜನಪ್ರಿಯವಾಗುತ್ತಿದೆ.

ಎಷ್ಟರಮಟ್ಟಿಗೆ ಎಂದರೆ ಇಲ್ಲಿ ತರುಣ-ತರುಣಿಯರಿದ್ದಾರೆ, ಮಹಿಳೆಯರಿದ್ದಾರೆ, ಉದ್ಯಮಿಗಳು, ಪತ್ರಕರ್ತರು, ಹೊಸ ತಲೆಮಾರಿನ ರಾಜಕಾರಣಿಗಳೂ ತೊಡಗಿಸಿಕೊಂಡಿದ್ದಾರೆ. ತರಹೇವಾರಿ ವಿಷಯಗಳ ಕುರಿತು ಸೀಮಿತ ಅವಧಿಯ ಚರ್ಚೆಗಳು ನಡೆಯುತ್ತವೆ. ಅಲ್ಲಿಗೆ ಒಂದು ಸಭೆ ಮುಗಿದುಹೋಗುತ್ತದೆ.

ಯಾರು ಬೇಕಾದರೂ ಇಂತಹ ಚರ್ಚೆಗಳನ್ನು ನಡೆಸಬಹುದು, ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ವಿವಿಧ ಹಿನ್ನೆಲೆಯ ಅನುಭವವುಳ್ಳವರೊಂದಿಗೆ ನೇರ ಸಂವಾದ ಚರ್ಚೆಗಳು ಸಾಧ್ಯವಾಗುವುದರಿಂದ
ವಸ್ತು-ವಿಷಯಗಳ ವಿವಿಧ ಆಯಾಮಗಳ ದೃಷ್ಟಿಕೋನವನ್ನು ಪಡೆಯುವುದಕ್ಕೂ ಕ್ಲಬ್‌ಹೌಸ್ ಅವಕಾಶ ಕೊಡುತ್ತದೆ ಎಂಬುದು ಬಳಕೆದಾರರ ಅಭಿಪ್ರಾಯ.

ಭಾರತದಲ್ಲಿ ಕ್ಲಬ್‌ಹೌಸ್ ಕುತೂಹಲ

ಆರಂಭದಲ್ಲಿಯೇ ಹೇಳಿದಂತೆ ರಾಜಕೀಯ ಚರ್ಚೆಗಳ ವೇದಿಕೆಯಾಗಿದೆ ಈ ಕ್ಲಬ್‌ಹೌಸ್. ಪ್ರಶಾಂತ್ ಕಿಶೋರ್, ಇತ್ತೀಚೆಗೆ ದಿಗ್ವಿಜಯ್ ಸಿಂಗ್ ಈ ವೇದಿಕೆಯಲ್ಲಿ ಚರ್ಚೆ ಮಾಡಿದ ವಿಚಾರಗಳ ಕಾರಣಕ್ಕೆ ಸುದ್ದಿಯಾಗಿದ್ದನ್ನು, ವಿವಾದ ಎಬ್ಬಿಸಿದ್ದನ್ನು ನೋಡಿದ್ದೇವೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ದೃಷ್ಟಿಯಿಂದ ಹಲವು ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ವಿರುದ್ಧ ಅಭಿಪ್ರಾಯ ರೂಪಿಸುವ ಚರ್ಚೆಗಳು ನಡೆಯುತ್ತಿವೆ.

ಇವುಗಳಲ್ಲದೆ, ಅತ್ಯಂತ ಲಘು ವಿಷಯಗಳ ಮೇಲೂ ಹರಟೆಗಳು ನಡೆಯುತ್ತಿವೆ. ಲಾಕ್‌ಡೌನ್ ಮುಗಿದಮೇಲೆ ಸುತ್ತಲು ಎಲ್ಲಿಗೆ ಹೋಗುವುದು? ನೀವು ಇಷ್ಟಪಡುವ ತಿಂಡಿ ಯಾವುದು? ಹೀಗೆ.. ಅಷ್ಟೇ ಅಲ್ಲ ’ಮಕ್ಕಳನ್ನು ಮಾಡಿಕೊಳ್ಳುವುದು ನೈತಿಕವಾಗಿ ಸರಿಯೇ?’ ಎಂಬಂತಹ ಅತ್ಯಂತ ಸೂಕ್ಷ್ಮವಾದ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ.

ಇಷ್ಟಾಗಿಯೂ ಕ್ಲಬ್‌ಹೌಸ್ ತನ್ನದೇ ಆದ ರೀತಿಯಲ್ಲಿ ಮಹತ್ವ ಗಳಿಸಿಕೊಳ್ಳುತ್ತಿದೆ. ಇತರೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ಗಮನಸೆಳೆಯುವ ಕಸರತ್ತುಗಳು ಇಲ್ಲಿಲ್ಲ. ಇಲ್ಲಿ ಆಳವಾದ ಹಾಗೂ ಗಂಭೀರವಾದ ಚರ್ಚೆ, ವಿಚಾರ ವಿನಿಮಯ, ಸಂವಾದಗಳಿಗೆ ಅವಕಾಶವಿದೆ. ಪ್ರಶ್ನೆ ಕೇಳುವಂತೆ ಮಾಡುವ ಹಾಗೂ ಪ್ರಶ್ನೆ ಕೇಳುವ ಮೂಲಕ ಹೆಚ್ಚು ಹೆಚ್ಚು ವಿಶಾಲವಾದ ಹರಹಿನ ಚರ್ಚೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕ್ಲಬ್‌ಹೌಸ್‌ನ ವೈಶಿಷ್ಟ್ಯ.

ನಿರ್ದಿಷ್ಟವಾಗಿ ಒಂದು ಗುಂಪನ್ನು ಉದ್ದೇಶಿಸಿ ಮಾತನಾಡುವ ಅವಕಾಶ, ಅಭಿಪ್ರಾಯ ರೂಪಿಸುವ, ಅಭಿಮತ ರೂಪಿಸುವ ಮುಖ್ಯವಾದ ಅವಕಾಶವನ್ನು ನೀಡುತ್ತದೆ.

ಬಹಳ ಮುಖ್ಯವಾಗಿ ರಾಜಕಾರಣಿಗಳು ಈ ಆಪ್‌ಅನ್ನು ಅತ್ಯಂತ ಕುತೂಹಲದಿಂದು ನೋಡುತ್ತಿದ್ದಾರೆ. ತೆಲಂಗಾಣದ ಕಾಂಗ್ರೆಸ್ ನಾಯಕ ಡಾ. ಶ್ರವನ್ ಕುಮಾರ್ ದಾಸೋಜು ಅವರು, ’ಇದು ಅತ್ಯಂತ ವಿಸ್ಮಯಕಾರಿ ಆಪ್. ರಾಜಕಾರಣಿಗಳು ತಮ್ಮ ಜನರ ಮಾತುಗಳನ್ನು ನೇರವಾಗಿ ಕೇಳುವುದಕ್ಕೆ ಅವಕಾಶ ನೀಡುತ್ತದೆ. ವಿವಿಧ ಹಿನ್ನೆಲೆ, ವೃತ್ತಿ, ವಯಸ್ಸು ಮತ್ತು ಭಿನ್ನ ರಾಜಕೀಯ ನಿಲುವುಗಳಿರುವವರ ಮಾತು ಕೇಳಬಹುದು. ಇದೊಂದು ರೀತಿಯಲ್ಲಿ ಅಭಿಪ್ರಾಯ ಪಡೆದುಕೊಳ್ಳುವ ಸಾಧನ’ ಎಂದಿದ್ದಾರೆ.

ಅವರ ಪ್ರಕಾರ 2023ರ ಚುನಾವಣೆಯಲ್ಲಿ ಕ್ಲಬ್‌ಹೌಸ್ ನಿರ್ಣಾಯಕ ಪಾತ್ರವಹಿಸಲಿದೆ! ಈಗಾಗಲೇ ಬಿಜೆಪಿ, ಪ್ರಧಾನಿ ಮೋದಿ ಕುರಿತು ಪ್ರಚಾರ ರೂಪದ ಚರ್ಚೆಗಳು, ಹಿಂದುತ್ವ ಕುರಿತ ಸಂವಾದಗಳು, ರಾಹುಲ್‌ಗಾಂಧಿಯನ್ನು ಯಥಾ ಪ್ರಕಾರ ಗೇಲಿ ಮಾಡುವ ಚರ್ಚೆಗಳನ್ನು ನಡೆಸುತ್ತಿದೆ.

ಇವೆಲ್ಲವೂ ಅಭಿಪ್ರಾಯ ರೂಪಿಸುವ, ಅಭಿಪ್ರಾಯ ಹೇರುವ ಪ್ರಯತ್ನಗಳಾಗಿ ಈಗಾಗಲೇ ಚುರುಕಾಗಿ ಸಾಗುತ್ತಿವೆ ಎಂಬ ಅಭಿಪ್ರಾಯವೂ ತೀವ್ರವಾಗಿದೆ.

ತಕರಾರುಗಳಿವೆ, ಆದರೂ ಆಸಕ್ತಿಯೂ ಇದೆ

ಮಾತನ್ನೇ (ಸಂವಾದವನ್ನು) ಬಂಡವಾಳವಾಗಿಸಿಕೊಂಡಿರುವ ಈ ಆಪ್ ಅಕ್ಷರಶಃ ವಾಚಾಳಿ. ಹರಟೆಯೇ ಇದರ ಮೂಲ ಸ್ವರೂಪ. ಹಾಗಾಗಿ ಅನೇಕರಿಗೆ ಇದು ’ವಟವಟ’ ಸದ್ದಿನ ಕೋಣೆ. ತಮ್ಮ ಆಸಕ್ತಿಯ ವಿಷಯಗಳನ್ನು ಹಂಚಿಕೊಳ್ಳುವುದಕ್ಕೆ ಸಮಾನ ನಿಲುವಿನ ಅಥವಾ ಆಸಕ್ತಿಯ ಜನರೊಂದಿಗೆ ಹರಟುವ ಈ ಕ್ಲಬ್‌ಹೌಸ್ ಗುಂಪುಗಳು ಮೇಲ್ನೋಟಕ್ಕೆ ಎಕೊಚೇಂಬರ್ಸ್‌ನಂತೆ ಕಾಣಿಸುತ್ತವೆ. ಆದರೆ ಯಾರು ಬೇಕಾದರೂ ಪಾಲ್ಗೊಳ್ಳುವ ಅವಕಾಶವಿರುವುದರಿಂದ ಹಾಗೊಂದು ಚೌಕಟ್ಟನ್ನು ಹೇರಲಾಗದು.

ಆದರೆ ಎಲ್ಲ ಹೊಸ ಅವಕಾಶಗಳನ್ನು, ಹೊಸ ದೃಷ್ಟಿಕೋನದಿಂದ ನೋಡಬೇಕು, ಸದಭಿರುಚಿ ಮತ್ತು ಸದಾಶಯಗಳುಳ್ಳ ಚರ್ಚೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ಇದೆ.

ಮೈಸೂರಿನ ಕಲಾವಿದೆ ಚರಿತಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆಯುತ್ತಾ..

“ನಾನು ಗಮನಿಸಿದಂತೆ, ಕ್ಲಬ್‌ಹೌಸ್‌ಅನ್ನು ತುಂಬಾ ಬುದ್ಧಿವಂತಿಕೆಯಿಂದ, ಅದರ ಸಾಧ್ಯತೆಗಳನ್ನೆಲ್ಲ ಬಳಸಿಕೊಳ್ಳುತ್ತಿರೋರು ಮಲಯಾಳಿಗಳು. ಅಲ್ಲಿ ಅವರು ಕ್ರಿಯೇಟ್ ಮಾಡುವ ’ರೂಮ್‌’ಗಳ ವಿಷಯ-ವೈವಿಧ್ಯ ’ವಾವ್’ ಅನಿಸುವಷ್ಟು ವಿಸ್ತೃತವಾಗಿದೆ. ಇತ್ತೀಚೆಗೆ ಮಲಯಾಳಿ ಸ್ಕಾಲರ್ ಒಬ್ಬರು ತಮ್ಮ ಕಾದಂಬರಿಯ ಬಗ್ಗೆ ಚರ್ಚೆ ಏರ್ಪಡಿಸಿದ್ದರು. ಆ ಕಾದಂಬರಿಯಲ್ಲಿ ಕನ್ನಡದ ವಚನಕಾರ್ತಿ ’ದುಗ್ಗವ್ವೆ’ ಬಗ್ಗೆ ಪ್ರಸ್ತಾಪವಿದೆ. ಅವರ ಪ್ರಕಾರ ಆಕೆ ಕೇರಳ ಮೂಲದವಳು! ವಚನಕಾರರ ಬಗ್ಗೆ ಕನ್ನಡದವರೇ ಇಷ್ಟು ಗಂಭೀರವಾಗಿ ಚರ್ಚಿಸಿದ್ದನ್ನು ನಾನು ಕೇಳಿಲ್ಲ! ಆ ಚರ್ಚೆಯಲ್ಲಿ ಪಿ.ಲಂಕೇಶ್, ಗೌರಿ ಲಂಕೇಶ್ ಬಗ್ಗೆ ಕೂಡ ಪ್ರಸ್ತಾಪವಾಯಿತು.”

ಸಿನಿ ನಿರ್ದೇಶಕ, ಲೇಖಕ ಪರಮೇಶ್ವರ ಗುರುಸ್ವಾಮಿಯವರೂ ಕ್ಲಬ್‌ಹೌಸ್‌ಅನ್ನು ಹೊಸಸಾಧ್ಯತೆಯಾಗಿ ಕಾಣುತ್ತಾರೆ. ಅವರೇ ಹೇಳುವಂತೆ, “ಥೋರೋತನ ರೂಸೋತನ ಮತ್ತು ಪ್ರಕೃತಿ ಹಾಗು ಪ್ರಕೃತಿಗೆ ಸಂಬಂಧಿಸಿದ್ದೆಲ್ಲವೂ ಬುಲ್ಡೋಜೀಕರಣವಾಗುತ್ತಿರುವ ಈ ನಮ್ಮ ಕಾಲದಲ್ಲಿ ಮಮತಾ ಮತ್ತು ಸ್ಟಾಲಿನ್‌ರನ್ನು ಗೆಲುವಿಗೆ ತಲುಪಿಸಿದ ಪಿಕೆ (ಪ್ರಶಾಂತ್ ಕಿಶೋರ್), ನನ್ನಂಥವರು ಒಪ್ಪಿಕೊಳ್ಳಲಾಗದ ತಾಂತ್ರಿಕ ಸ್ಟ್ರಾಟಜಿಗಳನ್ನ ಬಳಸಿದ್ದು ವಾಸ್ತವ. ಈತ ಬಳಸಿದ ಅದೇ ತಾಂತ್ರಿಕ ಕುಟಿಲತೆಗಳಲ್ಲಿ ಒಂದು ’ಚಾಯ್ ಪೆ ಚರ್ಚಾ’. ಹಲವು ಗುಂಡುಗಳನ್ನು ಸತತವಾಗಿ ಹಾರಿಸುವ ರಿವಾಲ್ವರ್‌ಅನ್ನು ಸ್ಯಾಮ್ಯುಯಲ್ ಕೋಲ್ಟ್ ಕಂಡು ಹಿಡಿದ ನಂತರವೇ ಬಿಲ್ಲು ಬಾಣಗಳು, ಈಟಿ ಭರ್ಜಿಗಳನ್ನು ಬಳಸುತ್ತಿದ್ದ ಅಮೆರಿಕನ್ ಮೂಲನಿವಾಸಿಗಳನ್ನು ದಮನಿಸಿ ಬಿಟ್ಟರು. ಪಿಕೆಯ ಆಧುನಿಕ ತಾಂತ್ರಿಕ ಸ್ಟ್ರಾಟಜಿಗಳನ್ನು ತಿರಸ್ಕರಿಸಿದ ಕಾಂಗ್ರೆಸ್ ಎಲ್ಲಿದೆ. ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಿತು. ಹೀಗಾಗಿ ಯಾವುದೇ ಹೊಸ ಅವಕಾಶಗಳನ್ನು ಉಪೇಕ್ಷೆ ಮಾಡುವ ಪರಿಸ್ಥಿತಿ ಮತ್ತು ಸಂದರ್ಭ ಇದಲ್ಲ.”

ಕವಿ ಶಂಕರ ಕೆಂಚನೂರು, ಲೇಖಕ ನಾಗೇಗೌಡ ಕೀಲಾರ ಅವರು ನಡೆಸುತ್ತಿರುವ ರಾಜಕೀಯ ಚರ್ಚೆಗಳು, ಅವಧಿ ತಾಣ ನಡೆಸುತ್ತಿರುವ ಸಾಹಿತ್ಯಕ ಚರ್ಚೆಗಳು ಕುತೂಹಲಕಾರಿಯೂ, ಗಂಭೀರವೂ ಹಾಗೂ ಮಹತ್ವದ ಚರ್ಚೆಗಳಾಗಿವೆ.

ಆದರೆ ವಿಚಾರ ಭಿನ್ನಾಭಿಪ್ರಾಯಗಳಿದ್ದಲ್ಲಿ ತಮ್ಮದೇ ಚರ್ಚೆ ಆರಂಭಿಸುವುದಕ್ಕೆ ಮುಕ್ತ ಅವಕಾಶವಿರುವುದರಿಂದ ಹಲವು ಆಯಾಮಗಳ ಮಾತುಕತೆ ಸಾಧ್ಯ. ಆದರೆ ಹೀಗೆ ಎಕೊಚೇಂಬರ್‌ನಂತೆ ರೂಪಿಸಿಕೊಳ್ಳುವ ಅವಕಾಶವಿರುವುದರಿಂದ ಹಾಗೂ ರಾಜಕಾರಣಿಗಳು ಈ ತಾಣದ ಬಗ್ಗೆ ಅತೀವ ಆಸಕ್ತಿ ತೋರುವುದರಿಂದ ಇದೊಂದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಫೇಸ್‌ಬುಕ್ ಮಾಡಲಾಗದ್ದು ಈ ಕ್ಲಬ್‌ಹೌಸ್ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಲ್ಲದು ಎಂಬುದನ್ನು ಉಪೇಕ್ಷೆ ಮಾಡುವಂತೆಯೇ ಇಲ್ಲ.

PC : Cashify

ಅಲ್ಲದೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿರುವಂತೆ ಇಲ್ಲಿಯೂ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡುವುದು, ಆನ್‌ಲೈನ್ ಶೋಷಣೆಯಂತಹ ವಿಚಾರಗಳಲ್ಲಿ ಕ್ಲಬ್‌ಹೌಸ್ ಯಾವುದೇ ಕ್ರಮಕೈಗೊಂಡಿಲ್ಲ. ಈ ವಿಷಯವಾಗಿ ಈಗಾಗಲೇ ನೂರಾರು ದೂರುಗಳು ಕ್ಲಬ್‌ಹೌಸ್ ತಲುಪಿವೆ.

ಇನ್ನೊಂದೆಡೆ ನಕಲಿ ವ್ಯಕ್ತಿಗಳು ತಲೆನೋವಾಗಿದ್ದಾರೆ. ಕಳೆದ ವಾರ ಮಲಯಾಳಂ ಪ್ರಸಿದ್ಧ ನಟ ಪೃಥ್ವಿರಾಜ್ ಸುಕುಮಾರನ್ ಹೆಸರಿನಲ್ಲಿ ಖಾತೆ ತೆರೆದು ಚರ್ಚೆ ನಡೆಸಿದ ಘಟನೆಯೊಂದು ಬೆಳಕಿಗೆ ಬಂತು. ಖಾತೆ ತೆರೆಯುವ ವ್ಯಕ್ತಿಯ ಗುರುತನ್ನು ಪರಾಮರ್ಶಿಸುವ ಯಾವುದೇ ಮಾನದಂಡಗಳಿಲ್ಲದ್ದು ಆತಂಕಕಾರಿ.

ಡೀಪ್ ಫೇಕ್‌ಗಳು ಸೃಷ್ಟಿಯಾಗುತ್ತಿರುವ ಕಾಲದಲ್ಲಿ ಸುರಕ್ಷತೆಯ ಬಗ್ಗೆ ಸ್ಪಷ್ಟ ಹಾಗೂ ಸೂಕ್ಷ್ಮ ನಿಯಮಗಳನ್ನು ಹೊಂದಿಲ್ಲದಿರುವುದು ಅಪಾಯಕಾರಿಯಾಗಬಲ್ಲದು.

ಇದರ ಜೊತೆಗೆ ಬಳಕೆದಾರರನ ಖಾಸಗಿತನಕ್ಕೆ ಇಲ್ಲಿ ಸೂಕ್ತ ರಕ್ಷಣೆಯಿಲ್ಲ ಎಂಬ ಆರೋಪವೂ ಇದೆ. ಎಲ್ಲ ಆಪ್‌ಗಳಂತೆ ಇಲ್ಲಿಯೂ ಖಾತೆ ತೆರೆಯುವ ವ್ಯಕ್ತಿಯ ಕಾಂಟ್ಯಾಕ್ಟ್ ಲಿಸ್ಟ್‌ಅನ್ನು ನೋಡಲು ಕ್ಲಬ್‌ಹೌಸ್ ಅನುಮತಿ ಪಡೆದುಕೊಳ್ಳುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಮೂರನೆಯ ವ್ಯಕ್ತಿಯೊಂದಿಗೆ ಮಾರಿಕೊಳ್ಳುತ್ತದೆ ಎಂಬುದು ಕೂಡ ಬಹಿರಂಗಗೊಂಡಿದೆ. ಬಿಡುಗಡೆಯಾಗಿ ಕೇವಲ ಆರೇಳು ತಿಂಗಳ ಇತಿಹಾಸವಿರುವ ಈ ಆಪ್ ಏಪ್ರಿಲ್ ತಿಂಗಳಲ್ಲಿ ತನ್ನ 13 ಲಕ್ಷ ಬಳಕೆದಾರರ ಮಾಹಿತಿಯ ಸೋರಿಕೆಗೆ ಅವಕಾಶ ಮಾಡಿಕೊಟ್ಟಿದೆ ಎಂದರೆ ಖಾಸಗಿತನ, ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಈ ಆಪ್ ವಿಶ್ವಾಸಾರ್ಹವಲ್ಲ ಎಂದೆನಿಸುತ್ತದೆ.

ಖಾಸಗಿತನವೂ ಸರ್ಕಾರದ ಬೇಹುಗಾರಿಕೆಯೂ

ಒಂದೆಡೆ ಭಾರತ ಸರ್ಕಾರ ಕೋವಿಡ್ ಮತ್ತು ಇತ್ತೀಚಿನ ವಿಧಾನಸಭಾ ಚುನಾವಣೆಗಳ ವಿಷಯದಲ್ಲಿ ಹಿನ್ನೆಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಚರ್ಚೆಗಳನ್ನು ಕಣ್ಣು-ಕಿವಿಯಾಗಿ ಗಮನಿಸುತ್ತಿದೆ. ಕ್ಲಬ್‌ಹೌಸ್ ಕೂಡ ಹೊಸ ರೀತಿಯ ಚರ್ಚೆಯ ವೇದಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ಲಬ್‌ಹೌಸ್ ಚರ್ಚೆಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ದಳ, ಆರ್‌ಎಡಬ್ಲ್ಯು, ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ 11 ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ದಿ ಹಿಂದು ಪತ್ರಿಕೆ ವರದಿ ಹೇಳುತ್ತದೆ.

ಇದಲ್ಲದೆ ಇತ್ತೀಚಿನ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಂದಿರುವ ಹೊಸ ಕಾನೂನುಗಳಿಗೆ ಕ್ಲಬ್‌ಹೌಸ್ ಒಪ್ಪಿಗೆ ಸೂಚಿಸಿಲ್ಲ. ಈ ಕುರಿತು ಇನ್ನು ಪರಾಮರ್ಶೆ ಮಾಡುತ್ತಿರುವುದಾಗಿ ಹೇಳಿದೆ.


ಇದನ್ನೂ ಓದಿ: ‘ಪ್ರಜ್ಞಾ ಠಾಕೂರ್‌ ವಿಚಾರದಲ್ಲಿ ಮೋದಿ ಮನಸು ಬದಲಾಯಿಸಿದ ಹಾಗಿದೆ’: ಕಾಂಗ್ರೆಸ್‌‌ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕ್ಲಬ್ ಹೌಸ್ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಾರೆ ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...