Homeಅಂತರಾಷ್ಟ್ರೀಯಕ್ಯೂಬಾದ ವೈದ್ಯಕೀಯ ತಂಡಕ್ಕೆ ’ನೋಬೆಲ್ ಶಾಂತಿ’ ಪ್ರಶಸ್ತಿ ನೀಡುವಂತೆ ಪ್ರತಿಪಾದನೆ

ಕ್ಯೂಬಾದ ವೈದ್ಯಕೀಯ ತಂಡಕ್ಕೆ ’ನೋಬೆಲ್ ಶಾಂತಿ’ ಪ್ರಶಸ್ತಿ ನೀಡುವಂತೆ ಪ್ರತಿಪಾದನೆ

ಕ್ಯೂಬಾದ ವೈದ್ಯಕೀಯ ನೆರವನ್ನು ತಿರಸ್ಕರಿಸುವಂತೆ ಅಮೇರಿಕಾ ಕರೆನೀಡಿ ಅಂತರಾಷ್ಟ್ರೀಯವಾಗಿ ವಿವಾದಕ್ಕೊಳಗಾಗಿತ್ತು

- Advertisement -
- Advertisement -

ಕೊರೊನಾ ವಿರುದ್ಧದ ಹೋರಾಟಕ್ಕಾಗಿ 20 ಕ್ಕೂ ಹೆಚ್ಚು ದೇಶಗಳಲ್ಲಿ ನಿಯೋಜಿಸಲಾಗಿರುವ ಕ್ಯೂಬಾದ ವೈದ್ಯಕೀಯ ದಳವಾದ ’ಹೆನ್ರಿ ರೀವ್‌’‌ಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಂತೆ ಫ್ರೆಂಚ್ ಸಂಘ ಕ್ಯೂಬಾ ಲಿಂಡಾ ಪ್ರತಿಪಾದಿಸಿದೆ.

ಕೊರೊನಾ ಸಾಂಕ್ರಮಿಕ ಹರಡುತ್ತಿರುವಾಗ ಇತರ ದೇಶಗಳಿಗೆ ತನ್ನ ವೈದ್ಯಕೀಯ ದಳವನ್ನು ಕಳುಹಿಸಿದ ಕ್ಯೂಬಾ ದೇಶವನ್ನು ವಿಶ್ವದಾದ್ಯಂತ ಜನರು ಅಭಿನಂಧಿಸಿದ್ದರು. ವೈದ್ಯಕೀಯ ನೆರವಿಗಾಗಿ ಕ್ಯೂಬಾ ಈ ಹಿಂದೆಯೂ ತನ್ನ ತಂಡವನ್ನು ಬೇರೆ ಬೇರೆ ಸಂದರ್ಭದಲ್ಲಿ ಕಳುಹಿಸಿತ್ತು.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಕ್ಯೂಬಾ ತನ್ನ ಮೊದಲ ಕಾರ್ಯಾಚರಣೆಯನ್ನು ಕೊರೊನಾ ಪೀಡಿತ ಪ್ರದೇಶವಾದ ಇಟಲಿಯ ಲೊಂಬಾರ್ಡಿಗೆ ಕಳುಹಿಸಿತ್ತು. ಇಟಲಿಯ ನಂತರ, ವೆನಿಜುವೆಲಾ, ನಿಕರಾಗುವಾ, ಬೆಲೀಜ್, ಸುರಿನಾಮ್, ಡೊಮಿನಿಕಾ, ಸೇಂಟ್ ಲೂಸಿಯಾ, ಮೆಕ್ಸಿಕೊ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಆಂಟಿಗುವಾ ಮತ್ತು ಬಾರ್ಬುಡಾ, ಜಮೈಕಾ, ಹೊಂಡುರಾಸ್, ಗ್ರೆನಡಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಬಾರ್ಬಡೋಸ್, ಹೈಟಿ, ಅಂಡೋರಾ, ಅಂಗೋಲಾ, ಟೋಗೊ, ಸೇಂಟ್ ಥಾಮಸ್ ಮತ್ತು ಪ್ರಿನ್ಸ್, ಕತಾರ್, ಕೇಪ್ ವರ್ಡೆ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳಿಗೆ ನರವಿಗಾಗಿ ತನ್ನ ವೈದ್ಯಕೀಯ ದಳವನ್ನು ಕಳುಹಿಸಿದೆ.


ಇದನ್ನೂ ಓದಿ: ಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?


ಕ್ಯೂಬಾ ಕ್ರಾಂತಿಕಾರಿ ಹಾಗೂ ಮಾಜಿ ಅಧ್ಯಕ್ಷರಾದ ಫಿಡೆಲ್ ಕ್ಯಾಸ್ಟ್ರೊ ಕ್ಯೂಬಾದ ವೈದ್ಯರನ್ನು ಕ್ಯೂಬಾದ “ಬಿಳಿ ಕೋಟುಗಳ ಸೈನ್ಯ” ಎಂದು ವ್ಯಾಖ್ಯಾನಿಸಿದ್ದರು. ಹಲವಾರು ವರ್ಷಗಳಿಂದ ಈ ಸೈನ್ಯವು ಸಾರ್ಸ್, ಎಬೋಲಾ, ಕಾಲರಾ ಮುಂತಾದ ಮಾರಣಾಂತಿಕ ವೈರಸ್‌ಗಳ ವಿರುದ್ದ ಹೋರಾಡಲು ಹಲವಾರು ದೇಶಗಳಿಗೆ ಸಹಾಯ ಮಾಡಿತ್ತು.

ಕ್ಯೂಬಾದ ಹೆನ್ರಿ ರೀವ್ ಅಂತರಾಷ್ಟ್ರೀಯ ವೈದ್ಯಕೀಯ ದಳ 2005 ಮತ್ತು 2017 ರ ನಡುವೆ 21 ದೇಶಗಳಲ್ಲಿ 3.5 ಮಿಲಿಯನ್ ಜನರಿಗೆ ಸಹಾಯ ಮಾಡಿದೆ.

ಕ್ಯೂಬನ್ ಕ್ರಾಂತಿಯ ಆರಂಭಿಕ ದಿನಗಳಿಂದಲೂ, ನಾಯಕ ಫಿಡೆಲ್ ಕ್ಯಾಸ್ಟ್ರೊ ದೇಶವನ್ನು ನಿರ್ಮಿಸುವಲ್ಲಿ ಸಾರ್ವತ್ರಿಕ ಮುಕ್ತ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣವು ಪ್ರಮುಖ ತಂತ್ರವಾಗಿದೆ ಎಂದು ನಂಬಿದ್ದರು. ಕ್ಯೂಬಾದಲ್ಲಿ ಅಮೆರಿಕಾಗಿಂತ ತಲಾ ಮೂರು ಪಟ್ಟು ಹೆಚ್ಚು ವೈದ್ಯರಿದ್ದಾರೆ.

ಕ್ಯೂಬಾದ ಆರೋಗ್ಯ ಮಂತ್ರಿ ಜೋಸ್ ಏಂಜಲ್ ಪೋರ್ಟಲ್ ಮಿರಾಂಡಾ ಒಂದು ತಿಂಗಳ ಹಿಂದೆ ಟ್ವೀಟ್ ಮಾಡಿ ““ಕ್ಯೂಬಾ ಹಲವು ಬಾರಿ ಸಹಾಯಕ್ಕೆ ಕೈ ಚಾಚಿದೆ ಆದರೆ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಬಾರಿ ಸಹಾಯ ಮಾಡಿದ್ದು ಇದು ಮೊದಲ ಬಾರಿಯಗಿದೆ. ಕಳೆದ ವಾರದಲ್ಲಿ ಹೆನ್ರಿ ರೀವ್ ಬ್ರಿಗೇಡ್ ಪ್ರತಿ ಸೂರ್ಯೋದಯದೊಂದಿಗೆ ಹೊರಟಿದೆ. ಹೀಗಾಗಿದ್ದು ಇದುವೇ ಮೊದಲು, ಈಗಾಗಲೇ ಒಟ್ಟು 11 ಬಾರಿ ಅದು ಇಲ್ಲಿಂದ ಹೊರಟಿದೆ”

ಕ್ಯೂಬಾದ ವೈದ್ಯಕೀಯ ನೆರವನ್ನು ತಿರಸ್ಕರಿಸುವಂತೆ ಅಮೇರಿಕಾ ಕರೆನೀಡಿ ಅಂತರಾಷ್ಟ್ರೀಯವಾಗಿ ವಿವಾದಕ್ಕೊಳಗಾಗಿತ್ತು. ಜಗತ್ತು ಒಗ್ಗಟ್ಟಿನಲ್ಲಿ ನಿಲ್ಲಬೇಕಾದ ಈ ಕಾಲದಲ್ಲಿ, ‘ಬಿಳಿ ಕೋಟುಗಳ ಸೈನ್ಯ’ ಮಾಡಿದ ಮಾನವೀಯ ಕಾರ್ಯಗಳು ಮಹತ್ವದ್ದಾಗಿದೆ ಎಂದು ಅಂತರಾಷ್ಟೀಯ ಸಮುದಾಯ ಅಮೆರಿಕಾಕ್ಕೆ ತಿರುಗೆಟು ನೀಡಿತ್ತು.


ಇದನ್ನೂ ಓದಿ: ಕ್ಯೂಬಾದ ವೈದ್ಯಕೀಯ ಸಹಾಯ ತಿರಸ್ಕರಿಸುವಂತೆ ಹಲವು ದೇಶಗಳಿಗೆ ಅಮೆರಿಕದ ಒತ್ತಡ


ಇದೇ ಸುದ್ದಿಯನ್ನು ಇನ್ನಷ್ಟು ವಿಸ್ತಾರವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...