Homeಅಂತರಾಷ್ಟ್ರೀಯಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?

ಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?

ಕ್ಯೂಬಾದ ಪ್ರಕಾರ ವೈದ್ಯ ವೃತ್ತಿಯೆಂದರೆ ವ್ಯಾಪಾರವಲ್ಲ, ಮನುಕುಲದ ರಕ್ಷಣೆಗಾಗಿ ಇರುವ ಒಂದು ಮಾನವೀಯ ಸೇವೆ...

- Advertisement -
- Advertisement -

ಕ್ಯೂಬಾದ ಮಾಜಿ ಅಧ್ಯಕ್ಷ ಕಾಮ್ರೇಡ್ ಫಿಡೆಲ್ ಕ್ಯಾಸ್ಟ್ರೋ ಅವರ ಒಂದು ಭಾಷಣದ ಕೆಲ ತುಣುಕುಗಳು ನನ್ನ‌ ಮನಸಲ್ಲಿ ಅಚ್ಚಳಿಯದೇ ಉಳಿದಿದೆ.

“ಅವರು ನ್ಯೂಕ್ಲಿಯರ್ ಬಾಂಬ್‌ಗಳನ್ನು ತಯಾರಿಸಿಯೂ ಮನುಕುಲದ ರಕ್ಷಣೆಯ ಹೊಣೆ ಹೊತ್ತವರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ. ನಮಗೆ ಯಾರ ಪ್ರಶಂಸೆಯೂ ಬೇಕಾಗಿಲ್ಲ. ನಾವು ಅವರ ಬಾಂಬಿಗೆ ಎದುರಾಗಿ ಮನುಕುಲದ ಉಳಿವಿಗಾಗಿ ಮನುಕುಲವನ್ನು ಕಾಡುವ ಭಯಾನಕ ಖಾಯಿಲೆಗಳಿಗೆ ಕಡಿಮೆ ಖರ್ಚಿನ ಔಷಧಿಗಳ ಸಂಶೋಧನೆಯಲ್ಲಿ ತೊಡಗಿದ್ದೇವೆ. ನಾವು ಮನುಕುಲದ ಸೇವೆಗಾಗಿ‌ ಶ್ರೇಷ್ಠ ಗುಣಮಟ್ಟದ ವೈದ್ಯರನ್ನು ಸೃಷ್ಟಿ ಮಾಡುತ್ತಿದ್ದೇವೆ.. ನಮ್ಮ ಈ ಕೆಲಸಗಳನ್ನು ಇನ್ನಷ್ಟು ಹೆಚ್ಚಾಗಿ ಮಾಡಬೇಕಿದೆ…”

ಎಂತಹಾ ಅದ್ಭುತ ಮಾತುಗಳು ಅಲ್ವಾ…?

ಇಂದು ಜಗತ್ತಿನಲ್ಲಿ ಹೆಲ್ತ್‌ಕೇರ್ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಇಟಲಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸೋತಾಗ ಅವರ ರಕ್ಷಣೆಗೆ ಸ್ವಯಂ ಪ್ರೇರಿತವಾಗಿ ಬಂದಿದ್ದು ಇದೇ ಕ್ಯೂಬಾ..

ಕ್ಯೂಬಾದ ವೈದ್ಯಕೀಯ ನೆರವಿನ ಅಗತ್ಯವಿಲ್ಲವೆಂದು‌‌ ದಾರ್ಷ್ಟ್ಯ ಮೆರೆದಿದ್ದ ಬ್ರೆಝಿಲ್ ಇಂದು ಮತ್ತೆ ನಾಚಿಕೆಗೆಟ್ಟು ಇದೇ ಕ್ಯೂಬಾದ ನೆರವು ಯಾಚಿಸಬೇಕಾಗಿ ಬಂತು.‌ ತನ್ನನ್ನು ಅವಮಾನಿಸಿದ್ದರೂ‌ ಕ್ಯೂಬಾ ಬ್ರೆಝಿಲ್‌ಗೆ ವೈದ್ಯಕೀಯ ನೆರವು ನಿರಾಕರಿಸಲಿಲ್ಲ. ಯಾಕೆಂದರೆ ಕ್ಯೂಬಾದ ಪ್ರಕಾರ ವೈದ್ಯ ವೃತ್ತಿಯೆಂದರೆ ವ್ಯಾಪಾರವಲ್ಲ, ಮನುಕುಲದ ರಕ್ಷಣೆಗಾಗಿ ಇರುವ ಒಂದು ಮಾನವೀಯ ಸೇವೆ.

ಫಿಡೆಲ್‌ ಕ್ಯಾಸ್ಟ್ರೊ

ಗುಣಮಟ್ಟದ ವೈದ್ಯಕೀಯ ಸೇವೆಯ ಮೂಲಕ ತನ್ನ ರಾಷ್ಟ್ರದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತಿರುವ ಕ್ಯೂಬಾದ ಸಾಧನೆ ಮನುಕುಲವನ್ನು ವಿನಾಶದಂಚಿಗೆ ತಳ್ಳುವ ಶಸ್ತ್ರಾಸ್ತ್ರಗಳ ಮಾರಾಟದ ಮೂಲಕ ತನ್ನ ಆರ್ಥಿಕತೆಯನ್ನು ಬೆಳೆಸುತ್ತಿರುವ ಅಮೆರಿಕಾದ ಕಣ್ಣು ಕೆಂಪಾಗಿಸಿದೆ. ಅದಕ್ಕಾಗಿ ಅಮೆರಿಕಾ ಅಲ್ಲೂ ತನ್ನ ಕುತಂತ್ರ ಬಿಡದೇ ಜಗತ್ತಿನ ದೇಶಗಳು ಕ್ಯೂಬಾದ ವೈದ್ಯಕೀಯ ನೆರವನ್ನು ತಿರಸ್ಕರಿಸಬೇಕೆಂದು ಹೇಳಿ ಜಗತ್ತಿನ ಮುಂದೆ ಕುಬ್ಜವಾಗಿದೆ.


ಇದನ್ನೂ ಓದಿ: ಕೊರೊನಾ : ಕ್ಯೂಬಾದ ವೈದ್ಯಕೀಯ ಸಹಾಯ ತಿರಸ್ಕರಿಸುವಂತೆ ಹಲವು ದೇಶಗಳಿಗೆ ಅಮೆರಿಕದ ಒತ್ತಡ


ಕ್ಯೂಬಾದ ಎಂಬ ಪುಟ್ಟ ರಾಷ್ಟ್ರದ ಮಾನವೀಯ ಮುಖಕ್ಕೆ ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ.
ಕ್ಯೂಬಾ ವಿಮೋಚನೆಯ ಮಹಾ ಕ್ರಾಂತಿಕಾರಿ ಅರ್ಜೆಂಟೀನಾ ಸಂಜಾತ ಕಾಮ್ರೇಡ್ ಅರ್ನೆಸ್ಟೋ ಚೆಗುವಾರ. ಕ್ಯೂಬಾಕ್ಕೆ ಕ್ಯೂಬಾವೇ ಸಂಗಾತಿ ಚೆ ಗುವಾರನನ್ನು ಹೃದಯದಲ್ಲಿಟ್ಟು ಆರಾಧಿಸುತ್ತದೆ. ಅಂತಹ ಚೆ ಗುವಾರನನ್ನು 1967 ರ ಅಕ್ಟೋಬರ್ ಒಂಬತ್ತರಂದು ಗುಂಡಿಕ್ಕಿ ಕೊಂದ ಬೊಲಿವಿಯನ್ ಆರ್ಮಿಯ ಸೈನಿಕ ಮಾರಿಯೋ ಟೆರಾನ್‌ಗೆ ಆತನ ವೃದ್ದಾಪ್ಯದಲ್ಲಿ ಕಣ್ಣಿನ ಶಸ್ತ್ರಕ್ರಿಯೆಯ ಅಗತ್ಯ ಬೀಳುತ್ತದೆ. ಮಾರಿಯೋ ‌ಟೆರಾನ್ ‌ತನ್ನ ದೇಶದ ಜನರ ಹೃದಯದಲ್ಲಿ ಸದಾ ಅಮರನಾಗಿರುವ ಕ್ರಾಂತಿಕಾರಿ, ತನ್ನ ಜೀವದ ಗೆಳೆಯ ಚೆಗುವಾರನನ್ನು ಕೊಂದ ಸೈನಿಕನೆಂದು ಗೊತ್ತಿದ್ದರೂ ಕಾಮ್ರೇಡ್ ಫಿಡೆಲ್ ಆತನಿಗೆ ತನ್ನ ನೆಲದಲ್ಲಿ ಚಿಕಿತ್ಸೆ ನಿರಾಕರಿಸುವುದಿಲ್ಲ. ಇನ್ನೂ‌ ಆಸಕ್ತಿದಾಯಕ ವಿಚಾರವೇನೆಂದರೆ ಮಾರಿಯೋ ಟೆರಾನ್‌‌ನ ಕಣ್ಣಿನ ಶಸ್ತ್ರಕ್ರಿಯೆ ನಡೆದದ್ದು ಕಾಮ್ರೇಡ್ ಚೆ ಗುವಾರನ ಹೆಸರಿನಲ್ಲಿರುವ ಆಸ್ಪತ್ರೆಯಲ್ಲಾಗಿತ್ತು.

ಚೆಗುವಾರ

ಈ ಬಗ್ಗೆ ಫಿಡೆಲ್ ಹೀಗೆನ್ನುತ್ತಾರೆ “ಆತ ಅಂದು ನಮ್ಮ ಶತ್ರು ಸೈನ್ಯದ ಸೈನಿಕನಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದಾನಷ್ಟೆ. ಇಂದು ಆತ ಚಿಕಿತ್ಸೆ ಬಯಸಿ ನಮ್ಮ ದೇಶಕ್ಕೆ ಬಂದಿದ್ದಾನೆ. ನಾವು ನಮ್ಮ ಹುತಾತ್ಮ ಸಂಗಾತಿಯನ್ನು ಕೊಂದ ಸೈನಿಕನಿಗೆ ಅದೇ ಸಂಗಾತಿಯ ಹೆಸರಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದೇವೆ. ನಮ್ಮ ಪ್ರಕಾರ ಯುದ್ಧಗಳು ಯುದ್ಧಭೂಮಿಗಷ್ಟೇ ಸೀಮಿತ. ಆಸ್ಪತ್ರೆಗಳು ಯುದ್ಧಭೂಮಿಯಲ್ಲ, ಚಿಕಿತ್ಸಾ ಕೇಂದ್ರಗಳು.. ಇಲ್ಲಿ ಏನು ಮಾಡಬೇಕೋ ಅದನ್ನೇ ನಾವು ಮಾಡಿದ್ದೇವೆ…”

ಇಂತಹ ಕ್ಯೂಬಾ ಇಂದು ತನ್ನ ನುರಿತ ವೈದ್ಯರ ಪಡೆಯನ್ನು‌ ಆರೋಗ್ಯ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿರುವ ದೇಶಕ್ಕೆ ಕಳುಹಿಸಿಕೊಡಲು ಸಾಧ್ಯವಾಗಿದ್ದು ಯಾಕೆಂದರೆ ‌ಅವರು ಕ್ಯೂಬಾದ ವೈದ್ಯರು. ಕ್ಯೂಬಾದ ವೈದ್ಯರೆಂದರೆ ಜಗತ್ತಿನ ಅತ್ಯಂತ ಸಮರ್ಥ ವೈದ್ಯರು ಮತ್ತು ಅತ್ಯಂತ ಸಮರ್ಪಣಾ ಮನೋಭಾವದ ವೈದ್ಯರು.

ಕ್ಯೂಬಾದ ವೈದ್ಯರು ಅಂತಹ ಹೆಗ್ಗಳಿಕೆಗೆ ಪಾತ್ರವಾಗಲು ಯಾಕೆ ಸಾಧ್ಯವಾಗುತ್ತದೆಂದು ಹುಡುಕುತ್ತಾ ಹೋದರೆ‌ ಅದಕ್ಕೆ ಅಲ್ಲಿನ ಶಿಕ್ಷಣ ವ್ಯವಸ್ಥೆಯೇ ಉತ್ತರ ಕೊಡುತ್ತದೆ.

ಕ್ಯೂಬಾದಲ್ಲಿ ವೈದ್ಯಕೀಯ ಪದವಿ ಪಡೆಯಲು ನಮ್ಮ ದೇಶದಲ್ಲೋ, ಇತರ ದೇಶಗಳಲ್ಲೋ ಇರುವಂತೆ ನೋಟುಗಳ ಮೂಟೆಗಳು ಬೇಕಾಗಿಲ್ಲ. ಅಲ್ಲಿ ವೈದ್ಯಕೀಯ ಶಿಕ್ಷಣದ ಸೀಟು ಸಿಗಲು ವೈದ್ಯಕೀಯ ಶಿಕ್ಷಣ ಇಲಾಖೆಯ ಸೂಚಿತ ಅರ್ಹತೆಯೊಂದಿದ್ದರೆ ಸಾಕು. ನಮ್ಮಲ್ಲಿ ಜನರಲ್ ಡಿಗ್ರಿಗಳಾದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಪಡೆದಷ್ಟೇ ಸುಲಭವಾಗಿ ಸೂಚಿತ ಅರ್ಹತೆ ಇದ್ದ ಯಾರು ಬೇಕಾದರೂ ವೈದ್ಯಕೀಯ ಶಿಕ್ಷಣ ಪಡೆಯಬಹುದು. ಕ್ಯಾಪಿಟೇಶನ್ ಎಂಬ ಪದವೇ ಕ್ಯೂಬಾದಲ್ಲಿ ಅಪರಿಚಿತ. ಅಲ್ಲಿ ಸರಕಾರವೇ ವಿದ್ಯಾರ್ಥಿಯ ಕಲಿಕೆಯ ಸಂಪೂರ್ಣ‌ ಖರ್ಚು ವೆಚ್ಚಗಳನ್ನು ಭರಿಸುತ್ತದೆ. ಆದುದರಿಂದ ಸರಕಾರದ ಆದೇಶವನ್ನು ಅಲ್ಲಿನ ಯಾವ ವೈದ್ಯನೂ ಮೀರಲು ಸಾಧ್ಯವಾಗುವುದಿಲ್ಲ.

ನಮ್ಮ ದೇಶದಲ್ಲಿ ಇಂದು ಹದಿನೇಳು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿದ್ದಾನೆ. (ಅವರಲ್ಲಿ ಎಷ್ಟು ಮಂದಿ ಅರ್ಹತೆಯುಳ್ಳವರು ಎಂಬುವುದು ಎರಡನೇ ವಿಚಾರ) ಅವರಲ್ಲಿ ಬಹುತೇಕರು ಊಟಕ್ಕಿಲ್ಲದ ಉಪ್ಪಿನಕಾಯಿ.
ಇಂತಹ ವೈದ್ಯರುಗಳಲ್ಲಿ ಹೆಚ್ಚಿನ ಯಾರ ಮೇಲೂ ಸರಕಾರ ತನ್ನ ನಿಯಮಾವಳಿಗಳನ್ನು ಹೇರಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರೆಲ್ಲಾ ಕೋಟಿ ಕೋಟಿ ಸುರಿದೇ ವೈದ್ಯಕೀಯ ಪದವಿ ಪಡೆದಿರುತ್ತಾರೆ. ಅವರು ಅದಕ್ಕಾಗಿ ಕೋಟಿಗಳ ಲೆಕ್ಕದಲ್ಲಿ ಸಾಲ ಮಾಡಿರುತ್ತಾರೆ. ಅವರೆಲ್ಲಾ ನಗರದ ಐಷಾರಾಮಿ ಬದುಕನ್ನೇ ಬಯಸುತ್ತಾರೆ. ಅವರು ದೊಡ್ಡ ದೊಡ್ಡ ನಗರಗಳಲ್ಲಿ ನೋಟಿನ ಕಂತೆಗಳ ಹೊರತಾಗಿ ವೃತ್ತಿ ನಿರ್ವಹಿಸುವುದು‌ ಸಾಧ್ಯವಿಲ್ಲ. ಅವರು ಶಿಕ್ಷಣಕ್ಕಾಗಿ ಹಾಕಿದ ಬಂಡವಾಳ ವಾಪಾಸು ಪಡೆಯಬೇಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ, ತೀರಾ ಮೂಲಭೂತ ಸೌಕರ್ಯಗಳಿಲ್ಲದ ಆದಿವಾಸಿ ಬೆಲ್ಟ್‌ಗಳಲ್ಲಿ ಸೇವೆ ಮಾಡಲು ಸಾಧ್ಯವಾಗದು. ಸರಕಾರ ಅವರ ಮೇಲೆ ಅಂಕುಶ ಹೇರುವ ಯಾವ ಹಕ್ಕನ್ನೂ ಉಳಿಸಿಕೊಂಡಿರುವುದಿಲ್ಲ. ಇಂತಹ ವೈದ್ಯರು ದುಡ್ಡಿನ ಮುಖವನ್ನು ನೋಡಲೇಬೇಕಾಗುತ್ತದೆ.‌ಅದು ಅವರ ತಪ್ಪಲ್ಲ. ಅದು ಪ್ರಭುತ್ವದ ತಪ್ಪು. ಇಂತಹವರಿಂದ ನಾವು ಸಮರ್ಪಣಾ ಮನೋಭಾವದ ಸೇವೆ ಹೇಗೆ ನಿರೀಕ್ಷಿಸಲು ಸಾಧ್ಯ..?

ಸರಕಾರ ಒಬ್ಬ ಎಂ.ಬಿ.ಬಿ.ಎಸ್ ಪದವೀಧರನಿಗೆ ಒಂದು ಲಕ್ಷ ರೂಪಾಯಿ ಸಂಬಳ ಕೊಟ್ಟರೂ ಆತ ತನ್ನೆಲ್ಲಾ ಖರ್ಚು ವೆಚ್ಚಗಳನ್ನು ಕಳೆದು ತನ್ನ ಶಿಕ್ಷಣಕ್ಕಾಗಿ ಪಡೆದ ಸಾಲ ತೀರಿಸಬೇಕಾದರೆ ಇಪ್ಪತ್ತೈದು ವರ್ಷಗಳ ಕಾಲ ದುಡಿಯಬೇಕು. ಅಲ್ಲಿಗೆ ಅವನ ವೃತ್ತಿಯ ಮುಕ್ಕಾಲು ಭಾಗ ಮುಗಿದು ಬಿಡುತ್ತದೆ. ಹೀಗಿರುವುದರಿಂದ ಇಂತಹ ವೈದ್ಯರಿಂದ ಗುಣಮಟ್ಟದ ಚಿಕಿತ್ಸೆ ನಿರೀಕ್ಷಿಸಬೇಕಾದರೆ ರೋಗಿ ಅದೇ ಗುಣಮಟ್ಟದ ದುಡ್ಡಿನ ಕಂತೆ ಬಿಚ್ಚಬೇಕಾಗುತ್ತದೆ.

ನಮ್ಮ ಸರಕಾರಕ್ಕೆ ವೈದ್ಯರ‌ ಅಗತ್ಯ ಈ ಕೇಡುಗಾಲದಲ್ಲಿ ಅರ್ಥವಾಗುತ್ತದಷ್ಟೆ. ಕೋಟಿ ಸುರಿದು ವಿದ್ಯೆ ಪಡೆದವ ಯಾವ ಕಾರಣಕ್ಕೂ ತನ್ನ ಜೀವ ಪಣಕ್ಕಿಟ್ಟು ಕೆಲಸ ಮಾಡಲು ಬಿಲ್‌ಕುಲ್ ಬರಲಾರ.

ಕ್ಯೂಬಾ ಗುಣಮಟ್ಟದ ವೈದ್ಯರನ್ನು ಸೃಷ್ಟಿಸುವ ಮೂಲಕ ಕ್ಯೂಬನ್ ಕ್ರಾಂತಿಯ ಮಹಾನಾಯಕನೂ, ಸ್ವತಃ ಚರ್ಮರೋಗ ಶಾಸ್ತ್ರ ಪರಿಣತಿ ಪಡೆದಿದ್ದ ಸಂಗಾತಿ ಚೆ ಗುವಾರನ ಹೆಸರನ್ನು ನಿಜಾರ್ಥದಲ್ಲಿ‌ ಅಚ್ಚಳಿಯದಂತೆ ಉಳಿಸುತ್ತಿದೆ. ಆತ ಅಂದು ಯಾವ ಮನುಕುಲದ ನೋವಿಗೆ ಮಿಡಿದು ವೈದ್ಯ ವೃತ್ತಿ ತೊರೆದು ಕ್ರಾಂತಿಯ ಹಾದಿ ಹಿಡಿದನೋ, ಆತನ ಮೂಲ ವೃತ್ತಿಯ ಮೂಲಕ ಕ್ಯೂಬಾ ಇಂದು ಮನುಕುಲದ ಸೇವೆಯನ್ನು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮಾಡುತ್ತಿದೆ.

ಆದರೆ ವೈದ್ಯಕೀಯ ಶಿಕ್ಷಣವನ್ನು ಬೃಹತ್ ಉದ್ಯಮವಾಗಿ ಪರಿವರ್ತಿಸಿದ ಭಾರತೀಯರಾದ ನಮಗೆ ಕ್ಯೂಬಾದಿಂದ ಇಟಲಿಗೆ ಕೊರೋನಾ ವಿರುದ್ಧ ಹೋರಾಡಲು ಹೊರಟ ವೈದ್ಯಕೀಯ ಸೈನಿಕರ ಫೋಟೋಗಳನ್ನು ಫ್ಯಾಬ್ರಿಕೇಟ್ ಮಾಡಿ ಭಾರತದ… ಅದೂ ಆರೆಸ್ಸೆಸ್ಸಿನ ವೈದ್ಯರೆಂದು ಸುಳ್ಳು ಹೇಳಿ ನಮ್ಮ ಬೆನ್ನು ನಾವೇ ತಟ್ಟಲು ಮಾತ್ರ ಸಾಧ್ಯವಾಗುತ್ತಿದೆ.

*******

ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ: ಇಟಲಿಗೆ ಬಲಿಷ್ಟ ವೈದ್ಯರ ತಂಡ ಕಳುಹಿಸಿಕೊಟ್ಟ ʼಕ್ಯೂಬಾʼ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...