Homeಆರೋಗ್ಯಫ್ಯಾಕ್ಟ್ ಚೆಕ್: ಕರುಳು ‘ಕಿವುಚುವ’ ವಿಡಿಯೋ - ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸಾ?

ಫ್ಯಾಕ್ಟ್ ಚೆಕ್: ಕರುಳು ‘ಕಿವುಚುವ’ ವಿಡಿಯೋ – ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸಾ?

- Advertisement -
- Advertisement -

ವೈದ್ಯರೊಬ್ಬರು ವ್ಯಕ್ತಿಯೊಬ್ಬನ ಸಣ್ಣಕರುಳಿನ ಆಪರೇಷನ್ ಮಾಡುವ ವಿಡಿಯೋ ಈಗ ಮತ್ತೆ (2015ರಿಂದಲೂ ಆಗಾಗ ಆಗುತ್ತಲೇ ಇದೆ) ವೈರಲ್ ಆಗಿದೆ. ಅದರ ಪ್ರಕಾರ, ವೈದ್ಯರು ಆ ವ್ಯಕ್ತಿಯ ಸಣ್ಣಕರುಳಿನಿಂದ ಜೀರ್ಣವಾಗದ ನ್ಯೂಡಲ್ಸ್ ತೆಗೆದಿದ್ದಾರೆ. ನ್ಯೂಡಲ್ಸ್ ಜೀರ್ಣವಾಗಲ್ಲ, ತಿನ್ನಬೇಡಿ…..’ ಎಂಬೆಲ್ಲ ಪುಕ್ಕಟೆ ವೈದ್ಯಕೀಯ ಸಲಹೆಯೂ ಇದರೊಂದಿಗೆ ಓಡಾಡುತ್ತ ಪೋಷಕರ ಕರುಳು ಚುರ್ ಎನ್ನುವಂತೆ ಮಾಡುತ್ತಿದೆ.

ವಿಡಿಯೋ ನೋಡಿ

ಇದನ್ನು ಮನವರಿಕೆ ಮಾಡಲು, ‘ಅಪೊಲೊ ಹಾಸ್ಪಿಟಲ್‍ನ ಶಸ್ತ್ರಚಿಕಿತ್ಸಕ ಡಾ. ಹರ್ಷ ಶುಕ್ಲಾ ಈ ಸರ್ಜರಿ ಮಾಡಿದ್ದಾರೆ’ ಎಂಬ ಸಾಲೂ ಇದೆ.
ಮಿಥ್ಯ: ನ್ಯೂಡಲ್ಸ್ ಜೀರ್ಣವಾಗುವುದಿಲ್ಲ ಎಂಬುದೇ ತಪ್ಪು ಕಲ್ಪನೆ. ಇಲ್ಲಿರುವ ವಿಡಿಯೋ ಶಸ್ತ್ರಚಿಕಿತ್ಸೆಯ ವಿಡಿಯೊವೇ. ಆದರೆ ವೈದ್ಯರು ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸ್ ಅಲ್ಲ.

ಸತ್ಯ: ಇಲ್ಲಿರುವ ವಿಡಿಯೋ 2015ರಿಂದಲೇ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈಗ ವ್ಯಾಟ್ಸಾಪ್‍ನಲ್ಲಿ ಮತ್ತೆ ವೈರಲ್ ಆಗಿದೆ. ಇಲ್ಲಿ ಇದನ್ನು ನೂರಾರು ಜನ ಹಿಂದೆಮುಂದೆ ನೋಡದೇ ಇದನ್ನು ಹರಡುತ್ತಿದ್ದರೆ, ಕೆಲವರು ಮಕ್ಕಳಿಗೆ ನ್ಯೂಡಲ್ಸ್ ನಂತಹ ಫುಡ್ ಅಪಾಯಕಾರಿ ಎಂಬ ಕಾಳಜಿಯಿಂದ ವೈರಲ್ ಮಾಡುತ್ತಿದ್ದಾರೆ. ಜಂಕ್‍ಫುಡ್ ಅಪಾಯ ಎನ್ನುವುದು ಸತ್ಯ ಸರಿ ಹೌದು. ಆದರೆ ನೂಡಲ್ಸ್ ಜೀರ್ಣವಾಗೋಲ್ಲ ಎಂಬ ಅವೈಜ್ಞಾನಿಕ ಮಾಹಿತಿಯ ಬಗ್ಗೆ ಅರಿವು ಮೂಡಿಸಲು, ಸಣ್ಣ ಕರುಳಿನಿಂದ ವೈದ್ಯರು ತೆಗೆದದ್ದು ನೂಡಲ್ಸ್ ಅಲ್ಲ, ಅವು ರೌಂಡ್‍ವಾಮ್ರ್ಸ್ ಎಂಬುದನ್ನು ತಿಳಿಸಲು ಈ ಬರಹ ಹಾಕುತ್ತಿದ್ದೇವೆ.

ಅಲ್ಟ್ ನ್ಯೂಸ್ ಈ ಕುರಿತಂತೆ ಫ್ಯಾಕ್ಟ್ ಚೆಕ್ ಮಾಡಿದಾಗ ಸಿಕ್ಕ ಸತ್ಯವಿದು: 2015, ಅಗಸ್ಟ್ 24ರಂದು ಈ ವಿಡಿಯೋವನ್ನು ಯುಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದ ಡಾ. ಪರೇಶ್ ರೂಪಾರೆಲ್, ‘ಸಣ್ಣಕರುಳಿನಲ್ಲಿದ್ದ ಬಹುವಿಧದ ರೌಂಡ್ ವಾಮ್ರ್ಸ್, ಸರ್ಜರಿ ಮೂಲಕ ಹೊರತೆಗೆಯಲಾಯಿತು…’ ಎಂದು ಕ್ಯಾಪ್ಸನ್ ಹಾಕಿದ್ದರು. ಇದೇ ವಿಡಿಯೋವನ್ನು 2015ರಿಂದಲೇ ವೈರಲ್ ಮಾಡುತ್ತಿರುವವರು, ‘ಸಣ್ಣ ಕರುಳಿನಿಂದ ನ್ಯೂಡಲ್ಸ್ ಹೊರತೆಗೆಯಲಾಗಿದೆ. ನ್ಯೂಡಲ್ಸ್ ಜೀರ್ಣವಾಗಲ್ಲ. ಮಕ್ಕಳಿಗೆ ನ್ಯೂಡಲ್ಸ್ ಕೊಡಬೇಡಿ’ ಎಮದು ಪ್ರಸಾರ ಮಾಡುತ್ತಿದ್ದಾರೆ.

ಆದರೆ ಇದು ಅಸತ್ಯ, ಅದು ನ್ಯೂಡಲ್ಸ್ ಅಲ್ಲ, ರೌಂಡ್‍ವಾಮ್ರ್ಸ್ ಎಂದು ಸರ್ಜರಿ ಮಾಡಿದ ವೈದ್ಯರಷ್ಟೇ ಅಲ್ಲದೇ ವಿವಿಧ ತಜ್ಞ ವೈದ್ಯರು ಕೂಡ ನೂಡಲ್ಸ್ ಸುಲಭವಾಗಿ ಜೀರ್ಣ ಆಗುತ್ತವೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಹಲವಾರು ಪೋರ್ಟಲ್‍ಗಳು ಇದನ್ನೇ ಸಾಬೀತು ಮಾಡಿದ್ದರೂ ಈ ವಿಡಿಯೋ ತಪ್ಪು ಕ್ಯಾಪ್ಸನ್‍ಗಳೊಂದಿಗೆ ಪ್ರಸಾರವಾಗುತ್ತಲೇ ಇದೆ.

ತಜ್ಞವೈದ್ಯ ಡಾ. ಯೋಗೇಶ್ ಹರ್ವಾನಿ (ನೊಬಲ್ ಗ್ಯಾಸ್ಟ್ರೊ ಆಸ್ಪತ್ರೆ, ಅಹಮದಾಬಾದ್) ಪ್ರಕಾರ, ಸಣ್ಣ ಕರುಳಿನಲ್ಲಿ ಹುಳಗಳು ಕಾಣಿಸಿಕೊಳ್ಳುವುದು ಒಂದು ಸೋಂಕು. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸರಿಯಾಗಿ ಬೇಯದ ಆಹಾರ ಸೇವನೆಯಿಂದ ದೊಡ್ಡವರಲ್ಲೂ, ಸ್ವಚ್ಚತೆಯಿಲ್ಲದ ಮಣ್ಣಿನಲ್ಲಿ ಆಟವಾಡಿ ಕೈತೊಳೆಯದೇ ಊಟ ಮಾಡುವ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಇದು ಕರುಳಿನಲ್ಲಿ ಅಡಚಣೆ ಉಂಟು ಮಾಡುತ್ತದೆ’ ಎಂದು ವಿವರಿಸಿದ್ದಾರೆ.
( ಆಧಾರ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...