Homeಮುಖಪುಟ24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರುತ್ತೇನೆ: ಸಮಾಜ ಘಾತುಕರಿಂದ ರಕ್ಷಿಸಲು ಪೊಲೀಸರಲ್ಲಿ ಮನ್ಸೂರ್ ಖಾನ್ ಮನವಿ

24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರುತ್ತೇನೆ: ಸಮಾಜ ಘಾತುಕರಿಂದ ರಕ್ಷಿಸಲು ಪೊಲೀಸರಲ್ಲಿ ಮನ್ಸೂರ್ ಖಾನ್ ಮನವಿ

- Advertisement -
- Advertisement -

ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಖಾನ್ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, 24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರುತ್ತೇನೆ: ಸಮಾಜ ಘಾತುಕರಿಂದ ರಕ್ಷಿಸಲು ಪೊಲೀಸರಲ್ಲಿ ಮನ್ಸೂರ್ ಖಾನ್ ಮನವಿ ಮಾಡಿದ್ದಾರೆ.

ವಿಡಿಯೋ ನೋಡಿ

ಡಯಾಬಿಟಿಕ್ ಕಾಯಿಲೆಯಾಗಿದ್ದರಿಂದ ಶುಗರ್ ನಿಯಂತ್ರಣ ತಪ್ಪಿ ಒಂದು ತಿಂಗಳು ಬೆಡ್ ರೆಸ್ಟ್‍ನಲ್ಲಿದ್ದೆ. ನನ್ನ ಮೂರು ಬ್ಲಾಕ್‍ಗಳು ಸಂಕಷ್ಟದಲ್ಲಿವೇ ಆಪರೇಷನ್ ಮಾಡಲು ನನ್ನ ಬಳಿ ಹಣವಿಲ್ಲ. ಈಗಲೂ ನನ್ನ ಶುಗರ್ ಲೆವೆಲ್ 600 ರಷ್ಟಿದೆ. ಹಾಗಾಗಿ ಚಿಕಿತ್ಸೆಯ ನಂತರ ವಿಡಿಯೋ ಮಾಡುತ್ತಿದ್ದೇನೆ ಎಂದಿದ್ದಾರೆ.

ನಾನು ವಾಪಸ್ ಬರುತ್ತಿದ್ದು ನ್ಯಾಯಾಂಗವು ಬಂದೋಬಸ್ತ್ ಮಾಡುವ ಮೂಲಕ ರಕ್ಷಣೆ ನೀಡಬೇಕೆಂದು ಕೋರಿದ್ದಾರೆ.

ನಾನೊಂದು ಲಿಸ್ಟ್ ಮಾಡಿದ್ದು ಅವರ ಮೂಲಕ ಎಲ್ಲಾ ಹಣವನ್ನು ನ್ಯಾಯಾಂಗದ ಸಹಾಯದೊಂದಿಗೆ ವಸೂಲಿ ಮಾಡುತ್ತೇನೆ. ನನ್ನಿಂದ ಲಂಚ ಪಡೆದವರ ಬಳಿಯೂ ನ್ಯಾಯಾಂಗದ ಜೊತೆ ಸೇರಿ ವಸೂಲಿ ಮಾಡಬೇಕಿದೆ. ಎಲ್ಲಾ ದಾಖಲೆಗಳನ್ನು ಈಗಾಗಲೇ ನ್ಯಾಯಲಯಕ್ಕೆ ಕೊಟ್ಟಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ನನ್ನ ಕಕ್ಷಿದಾರರಿಗೆ ಅವರ ಹಣವನ್ನು ವಾಪಸ್ ಮಾಡುವುದು ನನ್ನ ಗುರಿಯಾಗಿದೆ. ನನ್ನ ಕೇಸ್ ನಡೆಸಲು ಒಬ್ಬ ವಕೀಲರು ಸಹ ನನ್ನ ಬಳಿ ಇಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹಣವನ್ನು ವಸೂಲಿ ಮಾಡಿದ ಕಕ್ಷಿದಾರರ ಅಕೌಂಟ್‍ಗೆ ಹಾಕುತ್ತೇನೆ ಎಂದಿದ್ದಾರೆ. ವಿಡಿಯೋದ ಕೊನೆಯಲ್ಲಿ ಕಣ್ಣೀರು ಸಹ ಹಾಕಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...