Homeಆರೋಗ್ಯಫ್ಯಾಕ್ಟ್ ಚೆಕ್: ಕರುಳು ‘ಕಿವುಚುವ’ ವಿಡಿಯೋ - ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸಾ?

ಫ್ಯಾಕ್ಟ್ ಚೆಕ್: ಕರುಳು ‘ಕಿವುಚುವ’ ವಿಡಿಯೋ – ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸಾ?

- Advertisement -
- Advertisement -

ವೈದ್ಯರೊಬ್ಬರು ವ್ಯಕ್ತಿಯೊಬ್ಬನ ಸಣ್ಣಕರುಳಿನ ಆಪರೇಷನ್ ಮಾಡುವ ವಿಡಿಯೋ ಈಗ ಮತ್ತೆ (2015ರಿಂದಲೂ ಆಗಾಗ ಆಗುತ್ತಲೇ ಇದೆ) ವೈರಲ್ ಆಗಿದೆ. ಅದರ ಪ್ರಕಾರ, ವೈದ್ಯರು ಆ ವ್ಯಕ್ತಿಯ ಸಣ್ಣಕರುಳಿನಿಂದ ಜೀರ್ಣವಾಗದ ನ್ಯೂಡಲ್ಸ್ ತೆಗೆದಿದ್ದಾರೆ. ನ್ಯೂಡಲ್ಸ್ ಜೀರ್ಣವಾಗಲ್ಲ, ತಿನ್ನಬೇಡಿ…..’ ಎಂಬೆಲ್ಲ ಪುಕ್ಕಟೆ ವೈದ್ಯಕೀಯ ಸಲಹೆಯೂ ಇದರೊಂದಿಗೆ ಓಡಾಡುತ್ತ ಪೋಷಕರ ಕರುಳು ಚುರ್ ಎನ್ನುವಂತೆ ಮಾಡುತ್ತಿದೆ.

ವಿಡಿಯೋ ನೋಡಿ

ಇದನ್ನು ಮನವರಿಕೆ ಮಾಡಲು, ‘ಅಪೊಲೊ ಹಾಸ್ಪಿಟಲ್‍ನ ಶಸ್ತ್ರಚಿಕಿತ್ಸಕ ಡಾ. ಹರ್ಷ ಶುಕ್ಲಾ ಈ ಸರ್ಜರಿ ಮಾಡಿದ್ದಾರೆ’ ಎಂಬ ಸಾಲೂ ಇದೆ.
ಮಿಥ್ಯ: ನ್ಯೂಡಲ್ಸ್ ಜೀರ್ಣವಾಗುವುದಿಲ್ಲ ಎಂಬುದೇ ತಪ್ಪು ಕಲ್ಪನೆ. ಇಲ್ಲಿರುವ ವಿಡಿಯೋ ಶಸ್ತ್ರಚಿಕಿತ್ಸೆಯ ವಿಡಿಯೊವೇ. ಆದರೆ ವೈದ್ಯರು ಹೊಟ್ಟೆಯಿಂದ ಹೊರತೆಗೆದಿದ್ದು ನ್ಯೂಡಲ್ಸ್ ಅಲ್ಲ.

ಸತ್ಯ: ಇಲ್ಲಿರುವ ವಿಡಿಯೋ 2015ರಿಂದಲೇ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈಗ ವ್ಯಾಟ್ಸಾಪ್‍ನಲ್ಲಿ ಮತ್ತೆ ವೈರಲ್ ಆಗಿದೆ. ಇಲ್ಲಿ ಇದನ್ನು ನೂರಾರು ಜನ ಹಿಂದೆಮುಂದೆ ನೋಡದೇ ಇದನ್ನು ಹರಡುತ್ತಿದ್ದರೆ, ಕೆಲವರು ಮಕ್ಕಳಿಗೆ ನ್ಯೂಡಲ್ಸ್ ನಂತಹ ಫುಡ್ ಅಪಾಯಕಾರಿ ಎಂಬ ಕಾಳಜಿಯಿಂದ ವೈರಲ್ ಮಾಡುತ್ತಿದ್ದಾರೆ. ಜಂಕ್‍ಫುಡ್ ಅಪಾಯ ಎನ್ನುವುದು ಸತ್ಯ ಸರಿ ಹೌದು. ಆದರೆ ನೂಡಲ್ಸ್ ಜೀರ್ಣವಾಗೋಲ್ಲ ಎಂಬ ಅವೈಜ್ಞಾನಿಕ ಮಾಹಿತಿಯ ಬಗ್ಗೆ ಅರಿವು ಮೂಡಿಸಲು, ಸಣ್ಣ ಕರುಳಿನಿಂದ ವೈದ್ಯರು ತೆಗೆದದ್ದು ನೂಡಲ್ಸ್ ಅಲ್ಲ, ಅವು ರೌಂಡ್‍ವಾಮ್ರ್ಸ್ ಎಂಬುದನ್ನು ತಿಳಿಸಲು ಈ ಬರಹ ಹಾಕುತ್ತಿದ್ದೇವೆ.

ಅಲ್ಟ್ ನ್ಯೂಸ್ ಈ ಕುರಿತಂತೆ ಫ್ಯಾಕ್ಟ್ ಚೆಕ್ ಮಾಡಿದಾಗ ಸಿಕ್ಕ ಸತ್ಯವಿದು: 2015, ಅಗಸ್ಟ್ 24ರಂದು ಈ ವಿಡಿಯೋವನ್ನು ಯುಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದ ಡಾ. ಪರೇಶ್ ರೂಪಾರೆಲ್, ‘ಸಣ್ಣಕರುಳಿನಲ್ಲಿದ್ದ ಬಹುವಿಧದ ರೌಂಡ್ ವಾಮ್ರ್ಸ್, ಸರ್ಜರಿ ಮೂಲಕ ಹೊರತೆಗೆಯಲಾಯಿತು…’ ಎಂದು ಕ್ಯಾಪ್ಸನ್ ಹಾಕಿದ್ದರು. ಇದೇ ವಿಡಿಯೋವನ್ನು 2015ರಿಂದಲೇ ವೈರಲ್ ಮಾಡುತ್ತಿರುವವರು, ‘ಸಣ್ಣ ಕರುಳಿನಿಂದ ನ್ಯೂಡಲ್ಸ್ ಹೊರತೆಗೆಯಲಾಗಿದೆ. ನ್ಯೂಡಲ್ಸ್ ಜೀರ್ಣವಾಗಲ್ಲ. ಮಕ್ಕಳಿಗೆ ನ್ಯೂಡಲ್ಸ್ ಕೊಡಬೇಡಿ’ ಎಮದು ಪ್ರಸಾರ ಮಾಡುತ್ತಿದ್ದಾರೆ.

ಆದರೆ ಇದು ಅಸತ್ಯ, ಅದು ನ್ಯೂಡಲ್ಸ್ ಅಲ್ಲ, ರೌಂಡ್‍ವಾಮ್ರ್ಸ್ ಎಂದು ಸರ್ಜರಿ ಮಾಡಿದ ವೈದ್ಯರಷ್ಟೇ ಅಲ್ಲದೇ ವಿವಿಧ ತಜ್ಞ ವೈದ್ಯರು ಕೂಡ ನೂಡಲ್ಸ್ ಸುಲಭವಾಗಿ ಜೀರ್ಣ ಆಗುತ್ತವೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಹಲವಾರು ಪೋರ್ಟಲ್‍ಗಳು ಇದನ್ನೇ ಸಾಬೀತು ಮಾಡಿದ್ದರೂ ಈ ವಿಡಿಯೋ ತಪ್ಪು ಕ್ಯಾಪ್ಸನ್‍ಗಳೊಂದಿಗೆ ಪ್ರಸಾರವಾಗುತ್ತಲೇ ಇದೆ.

ತಜ್ಞವೈದ್ಯ ಡಾ. ಯೋಗೇಶ್ ಹರ್ವಾನಿ (ನೊಬಲ್ ಗ್ಯಾಸ್ಟ್ರೊ ಆಸ್ಪತ್ರೆ, ಅಹಮದಾಬಾದ್) ಪ್ರಕಾರ, ಸಣ್ಣ ಕರುಳಿನಲ್ಲಿ ಹುಳಗಳು ಕಾಣಿಸಿಕೊಳ್ಳುವುದು ಒಂದು ಸೋಂಕು. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸರಿಯಾಗಿ ಬೇಯದ ಆಹಾರ ಸೇವನೆಯಿಂದ ದೊಡ್ಡವರಲ್ಲೂ, ಸ್ವಚ್ಚತೆಯಿಲ್ಲದ ಮಣ್ಣಿನಲ್ಲಿ ಆಟವಾಡಿ ಕೈತೊಳೆಯದೇ ಊಟ ಮಾಡುವ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಇದು ಕರುಳಿನಲ್ಲಿ ಅಡಚಣೆ ಉಂಟು ಮಾಡುತ್ತದೆ’ ಎಂದು ವಿವರಿಸಿದ್ದಾರೆ.
( ಆಧಾರ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...