Homeಎಚ್.ಎಸ್.ದೊರೆಸ್ವಾಮಿಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

ಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

- Advertisement -
- Advertisement -

ಕರ್ನಾಟಕಕ್ಕೊಂದು ಸವಾಲು ಎದುರಾಗಿದೆ- ಇದನ್ನು ಎಲ್ಲರೂ ಗಮನಿಸಬೇಕು. ಕಾಂಗ್ರೆಸ್ಸು ಒಡೆದ ಮನೆಯಾಗಿದೆ. ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕೋಲಾರದ ಮುನಿಯಪ್ಪನವರ ನಾಯಕತ್ವ ಕೋಲಾರಕ್ಕೆ ಸೀಮಿತವಾಗಿತ್ತು. ಈಗ ಅದೂ ಇಲ್ಲವಾಗಿದೆ. ಅಲ್ಲೂ ಅವರಿಗೆ ಎದುರಾಳಿಗಳು ಹುಟ್ಟಿಕೊಂಡು ಅವರ ವರ್ಚಸ್ಸು ಕಡಿಮೆಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ಮತ್ತು ದೊಡ್ಡ ನಾಯಕರಾದರೂ, ಅವರ ಪ್ರಭಾವ ಹೈದರಾಬಾದ್ ಕರ್ನಾಟಕಕ್ಕೆ ಸೀಮಿತವಾಗಿತ್ತು. ಅವರು ನಾಯಕತ್ವ ವಿಸ್ತಾರಗೊಳಿಸುವ ಸಾಮಥ್ರ್ಯ ಹೊಂದಿದ್ದಾರೆ. ಎಚ್.ಕೆ.ಪಾಟೀಲರು ಉತ್ತರ ಕರ್ನಾಟಕದ ಎತ್ತರಕ್ಕೆ ಬೆಳೆದ ನಾಯಕರು. ಸಾರ್ವಜನಿಕ ಜೀವನವನ್ನು ಚೊಕ್ಕವಾಗಿ ಇಟ್ಟುಕೊಂಡಿದ್ದಾರೆ. ಸಹಕಾರಿಗಳು, ಸಾಮಾಜಿಕ ಕಳಕಳಿಯುಳ್ಳ ಉತ್ತಮ ಸಮಾಜ ಸೇವಕರು. ಅವರ ಬಗ್ಗೆ ಅಪಾರವಾದ ಗೌರವ ಇದೆ. ರಾಜಕೀಯದಲ್ಲಿ ಅವರಿನ್ನೂ ದೊಡ್ಡ ಹೆಜ್ಜೆಗಳನ್ನು ಹಾಕಿಲ್ಲ. ಪಾರ್ಲಿಮೆಂಟ್ ಚುನಾವಣೆ ಸಮಯದಲ್ಲಿ ಚುನಾವಣೆ ನಡೆಸುವ ದೊಡ್ಡ ಜವಾಬ್ದಾರಿಯನ್ನು ಪಾಟೀಲರಿಗೆ ವಹಿಸಲಾಗಿತ್ತು. ಅದನ್ನು ನಿಭಾಯಿಸುವುದರಲ್ಲಿ ಅವರು ಫಲಕಾರಿಯಾಗಿಲ್ಲ.

ಪರಮೇಶ್ವರರು ಬುದ್ಧಿವಂತರು, ರಾಜಕೀಯ ಬಲ್ಲವರು. ಅವರು ತಮ್ಮ ತಂದೆಯವರ ಮೂಸೆಯಲ್ಲಿ ಬೆಳೆದವರು. ಆದರೆ ಅವರಿಗೆ Dashing ಸ್ವಭಾವ ಇಲ್ಲ. ಸಂಘಟನೆ ಮಾಡುವ ಅನುಭವವಿಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 3-4 ಸಾರಿ ಕಾಂಗ್ರೆಸ್ ಜಯಗಳಿಸಿರುವುದು ನಿಜ. ಅದು ಅವರ ಅದೃಷ್ಟ ಎಂದು ಹೇಳಬಹುದೇ ಹೊರತು ಅವರ ರಾಜಕೀಯ ಕೌಶಲದಿಂದ ಆದ ಗೆಲುವು ಎಂದು ಹೇಳಲು ಪುರಾವೆಗಳಿಲ್ಲ.

ಇನ್ನುಳಿದಂತೆ ಹಾಳೂರಿಗೆ ಉಳಿದವನೇ ಒಡೆಯ ಎಂಬ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಭಿನ್ನ. ಆಡಳಿತದ ಅನುಭವವುಳ್ಳವರು. ನಾಯಕತ್ವದ ಲಕ್ಷಣ ಉಳ್ಳವರು, ರಾಮಕೃಷ್ಣ ಹೆಗ್ಡೆ, ದೇವೇಗೌಡರ ಮೂಸೆಯಲ್ಲಿ ಬೆಳೆದು ಬಂದವರು. ಸ್ವಲ್ಪ ಮಟ್ಟಿಗೆ ಮೈನಾರಿಟಿಗಳಲ್ಲಿ ಮೈನಾರಿಟಿಗಳಾದ ದೇವರಾಜ ಅರಸರಂತೆ ಅಲ್ಪಸಂಖ್ಯಾತರ ಏಳ್ಗೆಯ ಬಗೆಗೆ ಗಮನ ಹರಿಸುವವರು. ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಹೆಚ್ಚಿನ ವರ್ಚಸ್ಸಿನ ವ್ಯಕ್ತಿ ಸಿದ್ದರಾಮಯ್ಯ. ಆದರೆ ಇವರು ಕೊನೆಯ ಪಕ್ಷ ರಾಮಕೃಷ್ಣ ಹೆಗ್ಡೆ, ದೇವರಾಜ ಅರಸರು, ದೇವೇಗೌಡರಷ್ಟು ದಕ್ಷ ಹೋರಾಟಗಾರರಲ್ಲ ಎಂಬುದು ಕಟುಸತ್ಯ. ಆದ್ದರಿಂದ ಸಿದ್ದರಾಮಯ್ಯ ಮೊದಲುಗೊಂಡು ಇತರ ನಾಯಕರು ತಮ್ಮ Ego ಬಿಟ್ಟು ಸಾಮೂಹಿಕ ನಾಯಕತ್ವ ವಹಿಸಿಕೊಂಡರೆ ಮಾತ್ರ ಕರ್ನಾಟಕ ಕಾಂಗ್ರೆಸ್‍ಗೆ ಭವಿಷ್ಯ ಇರುವುದು. ಇವರು ಸ್ಥಾನಮಾನಗಳನ್ನು ನ್ಯಾಯಯುತವಾಗಿ ಹಂಚಿಕೊಂಡು, ಒಟ್ಟಾಗಿ ನಿಂತು ಸಂಘರ್ಷಕ್ಕೆ ಇಳಿದರೆ ಮಾತ್ರ ಮೋದಿ ಮತ್ತು ಶಾರವರ onslaughtನ್ನು ಎದುರಿಸಲು ಸಾಧ್ಯವಾದೀತು.

ನನ್ನ ದೃಷ್ಟಿಯಲ್ಲಿ ಮೋದಿ ಈಗ ಕರ್ನಾಟಕವನ್ನು ಬಿಜೆಪಿ ವಶಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಅವರು ಲಿಂಗಾಯತ, ಒಕ್ಕಲಿಗರ ಎರಡು ರಾಜಕೀಯ ಬಲಗಳನ್ನು ಕರ್ನಾಟಕದಲ್ಲಿ ಗುರುತಿಸಿದ್ದಾರೆ. ಈ ಎರಡು ಬಣಗಳನ್ನು ಒಡೆದರೆ ತನ್ನ ಗುರಿ ಸಾಧನೆಯಾದೀತೆಂದು ನಂಬಿದ್ದಾರೆ. ಇಂಗ್ಲಿಷರ ಒಡೆದು ಆಳುವ ನೀತಿಯನ್ನು ಕರಗತ ಮಾಡಿಕೊಂಡಿರುವ ಶಾ ಮತ್ತು ಮೋದಿ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಈ ಪ್ರಯೋಗ ಮಾಡಲು ತೀರ್ಮಾನಿಸಿರುವಂತಿದೆ. ಯಡಿಯೂರಪ್ಪನವರನ್ನು ಬಹಳಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವರು ಬಿಡುವುದಿಲ್ಲ. ಅವರ ರಾಜೀನಾಮೆ ಪಡೆದು, ರಾಷ್ಟ್ರಾಧ್ಯಕ್ಷರ ಆಡಳಿತ ಹೇರಿ ಆರು ತಿಂಗಳೊಳಗೆ ಚುನಾವಣೆ ನಡೆಸುವ ನಿರ್ಧಾರ ಅವರದು. ಈ ಪ್ರಯೋಗಕ್ಕೆ ಇದು ಸಕಾಲ ಎಂಬುದು ಅವರ ಲೆಕ್ಕಾಚಾರ.

ಲಿಂಗಾಯತರಿಗೆ ಶಾಸನಸಭೆಗೆ ಸಾಕಷ್ಟು ಸೀಟು ಕೊಟ್ಟಿಲ್ಲ. ಮಂತ್ರಿ ಪದವಿ ಕೊಟ್ಟಿಲ್ಲ ಎಂದು ಹಲವು ಲಿಂಗಾಯತ ಮಠಗಳೂ ಡಿಮ್ಯಾಂಡಿಡುವುದು ಸರ್ವೇ ಸಾಮಾನ್ಯ ವಿಷಯ. ಇಷ್ಟರ ಮಟ್ಟಿಗೆ ಲಿಂಗಾಯತ ಮಠಗಳು ರಾಜಕೀಯಕ್ಕೆ ಕೈ ಹಾಕುವುದನ್ನು ಅನೇಕ ಸಾರಿ ಕಂಡಿದ್ದೇವೆ. ಈ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವೇದ್ಯವೇ ಸರಿ. ಅವರೆಡೆಗೆ ಲಿಂಗಾಯಿತ ಮಠಗಳಿಗೆ ಒಲವಿರುವುದು ಎಲ್ಲರಿಗೂ ತಿಳಿದ ವಿಚಾರ.

ಈಗ ಮೋದಿಯ strategy ಒಕ್ಕಲಿಗ ಲಿಂಗಾಯತರನ್ನು ಬೇರ್ಪಡಿಸುವುದೇ ಆಗಿದೆ. ಲಿಂಗಾಯತರನ್ನು ಒಲಿಸಿಕೊಳ್ಳಲು ಲಿಂಗಾಯತ ಮಠಗಳ ಸಹಾಯ ಪಡೆಯುವುದು, ಒಕ್ಕಲಿಗ ನಾಯಕರನ್ನು ಮೂಲೆ ಗುಂಪು ಮಾಡುವುದು ಮೋದಿ-ಶಾ ಲೆಕ್ಕಾಚಾರ. ಕರ್ನಾಟಕದಲ್ಲಿ ಇರುವ ಪ್ರಭಾವಶಾಲಿ ಜಾತಿಗಳು ಇವೆರಡೇ. ಇವರನ್ನು ಒಡೆದರೆ ನಮ್ಮ ಪತಾಕೆ ಹಾರಿಸಬಹುದು ಎಂಬುದು ಮೋದಿ ಅವರ ಅಂಬೋಣ.

ಕರ್ನಾಟಕದಲ್ಲಿ ಒಕ್ಕಲಿಗರನ್ನು ಒಂದುಗೂಡಿಸುವ ರಾಜಕೀಯ ಶಕ್ತಿಯಾಗಿದ್ದವರು ಎಂದರೆ ದೇವೇಗೌಡರು, ಕುಮಾರಸ್ವಾಮಿಯವರು. ಮನೆತನದ ರಾಜಕೀಯಕ್ಕೆ ಬದ್ಧ ದೇವೇಗೌಡರನ್ನೂ ಇದುವರೆಗೂ ಒಕ್ಕಲಿಗರು ಪ್ರಶ್ನಿಸಿದ್ದಿಲ್ಲ. ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದ 7 ಸ್ಥಾನಗಳಲ್ಲಿ 3ನ್ನು ದೇವೇಗೌಡರು ತಮ್ಮ ಮನೆಗೆ ಕೊಂಡೊಯ್ದರು. ಅವುಗಳಲ್ಲಿ ಒಂದನ್ನು ಗೆದ್ದು ಎರಡರಲ್ಲಿ ಸೋತರು. ಈಗ ಒಕ್ಕಲಿಗರು ದೇವೇಗೌಡರನ್ನು ಬಹಿರಂಗವಾಗಿ ಟೀಕೆ ಮಾಡಲು ಆರಂಭ ಮಾಡಿದ್ದಾರೆ. ಅವರ ವರ್ಚಸ್ಸು ಕುಗ್ಗುತ್ತಿದೆ. ಈ ಸುಸಂದರ್ಭವನ್ನು ಬಳಸಿಕೊಂಡು ಒಕ್ಕಲಿಗರ ಪ್ರಾಬಲ್ಯವನ್ನು ಕಡಿಮೆ ಮಾಡುವ ಹುನ್ನಾರ ಮಾಡಲೇಬೇಕೆಂದು ಮೋದಿ ತೀರ್ಮಾನಿಸಿದ್ದಾರೆ. ದೇವೇಗೌಡರಿಗೆ ಅದಕ್ಕಿಂತ ಮುಖ್ಯವಾಗಿ, ಒಕ್ಕಲಿಗ ಜನಾಂಗಕ್ಕೇ ಇದು ಒಂದು ಸವಾಲು.

ಆ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಒಕ್ಕಲಿಗ ಜನಾಂಗ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಜಾತಿವಾದಿಯಾಗಿಲ್ಲ. ಜಾತಿ ಪದ್ಧತಿ ರದ್ದಾಗಬೇಕೆನ್ನುವವನು ನಾನು. ಆದರೆ ಒಂದು ಬಣವನ್ನೇ ನಾಶ ಮಾಡುವುದಕ್ಕೆ ಅಥವಾ ನಿರ್ವೀಯರನ್ನಾಗಿ ಮಾಡುವುದಕ್ಕೆ ನಾನು ಕಡು ವಿರೋಧಿ. ಆದ್ದರಿಂದ ನನ್ನದು ಈ ನಿಲುವು.

ಒಕ್ಕಲಿಗರು ಮೈ ಕೊಡವಿಕೊಂಡು ಎದ್ದು ಮೋದಿಯವರ ಈ ಸವಾಲನ್ನು ಎದುರಿಸಲು ಸೆಡ್ಡು ಹೊಡೆಯಬೇಕು. ಕೂಡಲೇ ಒಕ್ಕಲಿಗ ನಾಯಕರು, ಲಿಂಗಾಯತ ಮಠಗಳ ಸಂಪರ್ಕ ಮಾಡಿ, ನಾವು ಹಿಂದಿನಂತೆಯೇ ಸಾಮರಸ್ಯದಿಂದ ಬಾಳುವ ಸಂಕಲ್ಪ ಮಾಡೋಣವೆಂದು ಪಕ್ಷ ಭೇದ ಮರೆತು ಮನವರಿಕೆ ಮಾಡಿಕೊಡಬೇಕು. ‘ಆಲಸ್ಯಂ ಅಮೃತಂ ವಿಷಂ’.

ಸಿದ್ದರಾಮಯ್ಯನವರಿಗೂ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೂ ಸಖ್ಯ ಕಡಿಮೆಯಾಗುತ್ತಿದೆ. ಇದು ಮುಂದುವರೆದರೆ ಕರ್ನಾಟಕ ಕಾಂಗ್ರೆಸ್ಸು ನೆಲ ಕಚ್ಚುವುದು ಹಾಗೂ ದೇವೇಗೌಡರ ವರ್ಚಸ್ಸು ಇಳಿಮುಖವಾಗುವ ಸಾಧ್ಯತೆಗಳಿವೆ. ಆ ಉಭಯರೂ ಈಗಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ಒಬ್ಬರಿಗೊಬ್ಬರು ಸ್ನೇಹಹಸ್ತ ನೀಡಬೇಕು. ಕಾಂಗ್ರೆಸ್ ಮತ್ತು ದೇವೇಗೌಡರ ಪಕ್ಷ ಎರಡೂ ತನ್ನ ಎಡವಟ್ಟುಗಳನ್ನು ಮನಗಂಡು, ಹೊಸ ಒಡಂಬಡಿಕೆ ಮಾಡಿಕೊಂಡು ಕೂಡಿ ಹೋರಾಡಬೇಕು. ನಿನ್ನದು ಎರಡು ಕಣ್ಣು ಹೋಗುವುದಾದರೆ, ನನ್ನದು ಒಂದು ಕಣ್ಣು ಹೋದರು ಸರಿ ಎಂದು ಸಿದ್ದರಾಮಯ್ಯ ಮೊದಲುಗೊಂಡು ಎಲ್ಲರೂ ತೀರ್ಮಾನಕ್ಕೆ ಬಂದಿದ್ದರೆ, ಮೋದಿಯವರ ಕೈಗೆ ಕರ್ನಾಟಕವನ್ನು ನೀವೇ ಕರೆದು ಒಪ್ಪಿಸಿದಂತೆ ಆಗುತ್ತದೆ. ಹೀಗೆ ನೀವಿಬ್ಬರು ಅವಿವೇಕಿಗಳಂತೆ ವರ್ತಿಸಿದರೆ, ಜನ ನಿಮ್ಮನ್ನು ಸುಮ್ಮನೆ ಬಿಡೊಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....