ಬೆಂಗಳೂರಿನ ಆಟೋ ಚಾಲಕನೊಂದಿಗಿನ ವಾಗ್ವಾದದಲ್ಲಿ, ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಭಾರತೀಯ ವ್ಯಕ್ತಿ ತನ್ನ ವರ್ತನೆಗೆ ಆನ್ಲೈನ್ನಲ್ಲಿ ಕ್ಷಮೆಯಾಚಿಸಿದ್ದಾನೆ.
ಇತ್ತೀಚೆಗೆ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಆ ವ್ಯಕ್ತಿ ಕನ್ನಡದಲ್ಲಿ ಕ್ಷಮೆಯಾಚಿಸುತ್ತಿರುವುದು ಕುತೂಹಲಕಾರಿಯಾಗಿದೆ. “ನಾನು ಎಲ್ಲ ಕನ್ನಡಿಗರಿಗೆ ಕ್ಷಮೆಯಾಚಿಸುತ್ತೇನೆ. ನಾನು ಕಳೆದ ಒಂಬತ್ತು ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ನನಗೆ ಈ ನಗರದ ಬಗ್ಗೆ ಆಳವಾದ ಭಾವನೆಗಳಿವೆ. ಬೆಂಗಳೂರು ನನಗೆ ಜೀವನ ನೀಡಿದೆ; ನಾನು ಅದನ್ನು ಗೌರವಿಸುತ್ತೇನೆ. ನಾನು ಈ ನಗರದಿಂದ ಹಣ ಸಂಪಾದಿಸುತ್ತೇನೆ. ನನಗೆ ಈ ನಗರ ತುಂಬಾ ಇಷ್ಟ. ನಿಮ್ಮ ಭಾವನೆಗಳಿಗೆ ನೋವುಂಟುಮಾಡಿದ್ದರೆ ಕ್ಷಮಿಸಿ” ಎಂದು ಹೇಳಿದ್ದಾನೆ.
ಹಿಂದಿನ ದಿನ, ಆ ವ್ಯಕ್ತಿ ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಬೆದರಿಕೆ ಹಾಕಿದ ವೀಡಿಯೊ ವೈರಲ್ ಆಗಿತ್ತು. “ನೋಯ್ಡಾ ಮೇ ರಹೋ ಯಾ ಬೆಂಗಳೂರು ಮೇ ರಹೋ, ತುಮ್ ಭಿ ಹಿಂದಿ ಮೇ ಬಾತ್ ಕರೋ (ನೀವು ನೋಯ್ಡಾ ಅಥವಾ ಬೆಂಗಳೂರಿನಲ್ಲಿದ್ದರೂ ಪರವಾಗಿಲ್ಲ! ಹಿಂದಿಯಲ್ಲಿ ಮಾತನಾಡಿ)” ಎಂದು ಆ ವ್ಯಕ್ತಿ ಹೇಳುತ್ತಾನೆ. ನಂತರ ಆತನ ಮಹಿಳಾ ಸ್ನೇಹಿತೆ ಅವನನ್ನು ಕರೆದುಕೊಂಡು ಹೋಗಿದ್ದರು.
Yesterday – Hindi Warrior
Today – Kannada Sympathiser👻
"The 'Hindi warrior' suddenly turns Kannadiga sympathiser?
Watch the apology video of one night superstar of Hindia —( Directly dubbed his apology in Kannada)#Hindia #Kannada #ApologyVideo #LanguagePolitics #SouthIndia pic.twitter.com/Uf2Ez2VFeB— We Dravidians (@WeDravidians) April 21, 2025
“ನೀವು ಬೆಂಗಳೂರಿಗೆ ಬಂದಿದ್ದೀರಿ, ನೀವು ಕನ್ನಡದಲ್ಲಿ ಮಾತನಾಡಬೇಕು. ನಾನು ಹಿಂದಿಯಲ್ಲಿ ಮಾತನಾಡುವುದಿಲ್ಲ” ಎಂದು ಚಾಲಕ ಕನ್ನಡದಲ್ಲಿ ಪ್ರತಿಕ್ರಿಯಿಸುತ್ತಾನೆ. ಆತನ ಹಿಂದಿ ಹೇರಿಕೆ ಹಾಗೂ ದುರಹಂಕಾರದ ವರ್ತನೆ ಬಗ್ಗೆ ಆನ್ಲೈನ್ಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಬೆಂಗಳೂರು| ಆಟೋ ಚಾಲಕನಿಗೆ ‘ಹಿಂದಿ ಮಾತನಾಡು’ ಎಂದು ಧಮ್ಕಿ ಹಾಕಿದ ಉತ್ತರ ಭಾರತೀಯ


