Homeಅಂತರಾಷ್ಟ್ರೀಯಯೆಮೆನ್‌: ಮಾರುಕಟ್ಟೆ ಮತ್ತು ವಸತಿ ಸಮುಚ್ಚಯದ ಮೇಲಿನ ಅಮೆರಿಕದ ವಾಯುದಾಳಿಗೆ 12 ಮಂದಿ ಸಾವು: ಹೌತಿ...

ಯೆಮೆನ್‌: ಮಾರುಕಟ್ಟೆ ಮತ್ತು ವಸತಿ ಸಮುಚ್ಚಯದ ಮೇಲಿನ ಅಮೆರಿಕದ ವಾಯುದಾಳಿಗೆ 12 ಮಂದಿ ಸಾವು: ಹೌತಿ ಬಂಡುಕೋರರು 

- Advertisement -
- Advertisement -

ಯೆಮೆನ್ ರಾಜಧಾನಿಯ ಮೇಲೆ ನಡೆದ ಅಮೆರಿಕದ ವಾಯುದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಹೌತಿ ಬಂಡುಕೋರರು ಸೋಮವಾರ ಮುಂಜಾನೆ ತಿಳಿಸಿದ್ದಾರೆ.

ಸನಾದ ಶುಬ್ ಜಿಲ್ಲೆಯ ಫರ್ವಾ ನೆರೆಹೊರೆಯ ಮಾರುಕಟ್ಟೆ ಮತ್ತು ವಸತಿ ಸಮುಚ್ಚಯದ ಮೇಲೆ “ಅಮೆರಿಕದ ಶತ್ರು ಪಡೆ” ರಾತ್ರೋರಾತ್ರಿ ನಡೆಸಿದ ವಾಯುದಾಳಿಯ ಪರಿಣಾಮವಾಗಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಹೌತಿ ನಡೆಸುತ್ತಿರುವ ಸಬಾ ಸುದ್ದಿ ಸಂಸ್ಥೆ ಸಚಿವಾಲಯವನ್ನು ಉಲ್ಲೇಖಿಸಿದೆ.

ಭಾನುವಾರ ತಡರಾತ್ರಿ ಅಮ್ರಾನ್, ಮಧ್ಯ ಪ್ರಾಂತ್ಯ ಮಾರಿಬ್, ಪಶ್ಚಿಮದಲ್ಲಿ ಹೊಡೈಡಾ ಮತ್ತು ಉತ್ತರದಲ್ಲಿ ಹೌತಿ ಕೋಟೆ ಸಾದಾ ಮತ್ತು ಇತರ ಕಡೆ ಈ ವಾಯು ದಾಳಿಗಳು ವರದಿಯಾಗಿವೆ ಎಂದು ಸಬಾ ಸುದ್ದಿ ಸಂಸ್ಥೆ ಹೇಳಿದೆ.

ಕೊಲ್ಲಿಯಲ್ಲಿ ಅಂತರರಾಷ್ಟ್ರೀಯ ಹಡಗು ಸಾಗಣೆಯ ಮೇಲಿನ ದಾಳಿಗಳು ಮತ್ತು ಇಸ್ರೇಲ್ ಮೇಲಿನ ದಾಳಿಗಳನ್ನು ನಿಲ್ಲಿಸಲು ಯುಎಸ್ ಮಿಲಿಟರಿ ಕಳೆದ ಒಂದು ತಿಂಗಳಿನಿಂದ ಬಹುತೇಕ ದೈನಂದಿನ ದಾಳಿಗಳನ್ನು ನಡೆಸುತ್ತಿದೆ. ರಾಸ್ ಇಸ್ಸಾ ತೈಲ ಬಂದರಿನ ಮೇಲೆ ಗುರುವಾರ ನಡೆದ ದಾಳಿಯಲ್ಲಿ ಕನಿಷ್ಠ 74 ಜನರು ಸಾವನ್ನಪ್ಪಿದರು ಮತ್ತು 171 ಜನರು ಗಾಯಗೊಂಡಿದ್ದಾರೆ ಎಂದು ಹೌತಿಗಳು ತಿಳಿಸಿದ್ದಾರೆ.

ಟೆಹ್ರಾನ್‌ನ ವೇಗವಾಗಿ ಮುಂದುವರಿಯುತ್ತಿರುವ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ರೋಮ್‌ನಲ್ಲಿ ಮಾತುಕತೆಗಳು ಪುನರಾರಂಭವಾದ ನಂತರ ಈ ದಾಳಿಗಳು ನಡೆದಿವೆ.

ಸೋಮವಾರದಂದು ಹೌತಿಗಳು ಒಂದು ಹೇಳಿಕೆಯಲ್ಲಿ “ನಮ್ಮ ದೇಶದ ಮೇಲೆ ಅಮೆರಿಕದ ಆಕ್ರಮಣ ಮತ್ತು ನಮ್ಮ ಜನರ ಮೇಲೆ ಅದು ನಡೆಸಿದ ಹತ್ಯಾಕಾಂಡಗಳಿಗೆ” ಪ್ರತಿಕ್ರಿಯೆಯಾಗಿ ಕೆಂಪು ಸಮುದ್ರದಲ್ಲಿ ಅಮೆರಿಕದ ವಿಮಾನವಾಹಕ ನೌಕೆಯ ಮೇಲೆ ಮತ್ತು ಅರೇಬಿಯನ್ ಸಮುದ್ರದಲ್ಲಿ ಮತ್ತೊಂದು ಕ್ರೂಸ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಅಮೆರಿಕದ ಹಡಗುಗಳ ಮೇಲೆ ಯಾವುದೇ ದಾಳಿಗಳು ವರದಿಯಾಗಿಲ್ಲ.

ಯೆಮೆನ್ ಮೇಲೆ ಅಮೆರಿಕದ ಇತ್ತೀಚಿನ ದಾಳಿಗಳಿಂದ ತಾನು “ಗಂಭೀರವಾಗಿ ಕಳವಳಗೊಂಡಿದ್ದೇನೆ” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಶನಿವಾರ ಹೇಳಿದ್ದರು. ಅವರು ಇಸ್ರೇಲ್ ಮತ್ತು ಗಲ್ಫ್ ಹಡಗು ಸಾಗಣೆಯ ಮೇಲೆ ಕ್ಷಿಪಣಿ ದಾಳಿಯನ್ನು ನಿಲ್ಲಿಸುವಂತೆ ಹೌತಿಗಳಿಗೆ ಕರೆ ನೀಡಿದರು.

ಅಕ್ಟೋಬರ್ 7, 2023ರಂದು ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಹೌತಿಗಳು ಇಸ್ರೇಲ್ ಮತ್ತು ಗಲ್ಫ್ ಹಡಗು ಸಾಗಣೆ ಮಾರ್ಗಗಳ ಮೇಲೆ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದರು. ಹಮಾಸ್ ಶುಕ್ರವಾರದಂದು ಇಸ್ರೇಲ್ ಮೇಲೆ ಕೊನೆಯ ಬಾರಿಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿದೆ. ಇದು ಮಧ್ಯ ಇಸ್ರೇಲ್ ಮತ್ತು ಜೆರುಸಲೆಮ್‌ನಾದ್ಯಂತ ಸೈರನ್‌ಗಳನ್ನು ಮೊಳಗಿಸಿದೆ. ಇಸ್ರೇಲ್ ಕ್ಷಿಪಣಿಯನ್ನು ತಡೆಹಿಡಿದಿದೆ ಎಂದು ಅದು ಹೇಳಿದೆ.

ನವೆಂಬರ್ 2023ರಿಂದ ಜನವರಿ 2025ರವರೆಗೆ ಹೌತಿಗಳು ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರದಲ್ಲಿ ಸಂಚರಿಸುತ್ತಿದ್ದ 100ಕ್ಕೂ ಹೆಚ್ಚು ವ್ಯಾಪಾರಿ ಹಡಗುಗಳನ್ನು ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ ಗುರಿಯಾಗಿಸಿಕೊಂಡಿವೆ. ಅವುಗಳಲ್ಲಿ ಎರಡು ಹಡಗು ಮುಳುಗಿ ನಾಲ್ವರು ನಾವಿಕರು ಸಾವನ್ನಪ್ಪಿದ್ದರು. ಇದು ಪ್ರಮುಖ ಕಾರಿಡಾರ್ ಮೂಲಕ ವ್ಯಾಪಾರದ ಹರಿವನ್ನು ಬಹಳವಾಗಿ ಕಡಿಮೆ ಮಾಡಿದೆ, ಇದು ಸಾಮಾನ್ಯವಾಗಿ $1 ಟ್ರಿಲಿಯನ್ ಸರಕುಗಳನ್ನು ಅದರ ಮೂಲಕ ಸಾಗಿಸುತ್ತದೆ. ಹೌತಿಗಳು ಅಮೆರಿಕದ ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಸಹ ಪ್ರಾರಂಭಿಸಿದೆ. ಆದರೆ ಇದು ಇದುವರೆಗೆ ಯಶಸ್ವಿಯಾಗಿಲ್ಲ.

ಯೆಮೆನ್ ಮೇಲೆ ಅಮೆರಿಕ ದಾಳಿಗಳು ಜನವರಿ 2024ರಲ್ಲಿ ಪ್ರಾರಂಭವಾದವು. ಈ ವರ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಈ ದಾಳಿಗಳನ್ನು ಹೆಚ್ಚಿಸಲಾಗಿದೆ. ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ ದಾಳಿಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಅದರ ಅಭಿಯಾನದಿಂದ ನಾಗರಿಕ ಸಾವುನೋವುಗಳನ್ನು ಚರ್ಚಿಸಲು ನಿರಾಕರಿಸಿದೆ.

ಒಂದು ತಿಂಗಳಿನಿಂದ ಅಮೆರಿಕ ನಡೆಸುತ್ತಿರುವ ವೈಮಾನಿಕ ದಾಳಿಯ ಸಂಖ್ಯೆಯನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಏಕೆಂದರೆ ಅದು ಮಿಲಿಟರಿ ದಾಳಿಯ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡುತ್ತಿಲ್ಲ. ಅದರಲ್ಲಿ ಏನು ಗುರಿಯಾಗಿಸಲಾಗಿದೆ ಮತ್ತು ಎಷ್ಟು ಜನರು ಕೊಲ್ಲಲ್ಪಟ್ಟಿದ್ದಾರೆ ಎಂಬ ಮಾಹಿತಿ ಪಡೆಯಲು ಕಷ್ಟವಾಗುತ್ತಿದೆ.

ಏತನ್ಮಧ್ಯೆ, ಹೌತಿಗಳು ದಾಳಿಗೊಳಗಾದ ಪ್ರದೇಶಗಳಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಾರೆ ಮತ್ತು ದಾಳಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸುವುದಿಲ್ಲ, ಅವುಗಳಲ್ಲಿ ಹಲವು ಮಿಲಿಟರಿ ಮತ್ತು ಭದ್ರತಾ ತಾಣಗಳನ್ನು ಗುರಿಯಾಗಿರಿಸಿಕೊಂಡಿರಬಹುದು.

ಏ.26ರಂದು ದಾವಣಗೆರೆಯಲ್ಲಿ ಬೃಹತ್ ‘ಸಂವಿಧಾನ ಸಂರಕ್ಷಕರ ಸಮಾವೇಶ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...