Homeಮುಖಪುಟಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ.

- Advertisement -
- Advertisement -

ಗೌತಮ್ ಭಾಟಿಯಾ

ಅನುವಾದ: ನಿಖಿಲ್ ಕೋಲ್ಪೆ

ಎಪ್ರಿಲ್ ತಿಂಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಗಾಗಿ ಕೇಂದ್ರ ಸಂಪುಟವು 3,900 ಕೋಟಿ ರೂ.ಗಳ ಬಜೆಟನ್ನು ಅಂಗೀಕರಿಸಿದೆ. ತಕ್ಷಣವೇ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಹೇಳಿಕೆ ನೀಡಿ, ಇದು ಕೇವಲ ಒಂದು ಗಣತಿ ಕಾರ್ಯಕ್ರಮವಾಗಿದ್ದು, ಅದಕ್ಕೂ ವಿವಾದಾತ್ಮಕ ಮತ್ತು ಎಲ್ಲರೂ ಭಯಪಟ್ಟಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೂ ಸಂಬಂಧವಿಲ್ಲ ಎಂದರು.

ರಾಷ್ಟ್ರವ್ಯಾಪಿ ಪೌರತ್ವ ನೋಂದಣಿಯ ಕುರಿತು ಕೇಂದ್ರ ಸರಕಾರವು ಈ ತನಕ ಚರ್ಚಿಸಿಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯೊಂದರಲ್ಲಿ ಹೇಳಿದ ಬೆನ್ನಲ್ಲೇ ಈ ಮಂತ್ರಿಗಳು, ಎನ್‌ಪಿಆರ್ ಜನಗಣತಿಯಂತೆಯೇ ಒಂದು ನಿರುಪದ್ರವಿ ಕಾರ್ಯಕ್ರಮ ಎಂದು ವಾದಿಸಿದರು. ಇದಕ್ಕೆ ಯಾವುದೇ ದಾಖಲೆಗಳ ಅಗತ್ಯವಿಲ್ಲ; ಇದನ್ನು ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ನಿರ್ವಹಣೆಗಾಗಿ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.

ಅಲ್ಪ ಪರಿಶೀಲನೆಯಲ್ಲಿಯೇ ಇವರಿಬ್ಬರ ಹೇಳಿಕೆಗಳನ್ನು ಚಿಂದಿ ಉಡಾಯಿಸಬಹುದು. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಇವೆರಡರ ನಡುವಿನ ಸಂಬಂಧವನ್ನು ಕಾನೂನು ಮೂಲಕವೂ ಗಟ್ಟಿಗೊಳಿಸಲಾಗಿದೆ. ವಾಜಪೇಯಿ ಸರಕಾರವು 2003ರಲ್ಲಿಯೇ ಭಾರತೀಯ ಪೌರತ್ವ ಕಾಯಿದೆಯನ್ನು ತಿದ್ದುಪಡಿ ಮಾಡಿ, ವಿಧಿ 14(ಎ)ಯನ್ನು ತರುವುದರ ಮೂಲಕ ಇದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸಿತ್ತು.

ಇದನ್ನು ಎಷ್ಟು ಸಾಧ್ಯವೋ ಅಷ್ಟು ಷೇರ್ ಮಾಡುವ ಅಗತ್ಯವಿದೆ. ಏಕೆಂದರೆ ಎನ್‌‌ಆರ್‌ಸಿ ಸಿಎಎ ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ದೇಶದ ಪ್ರಧಾನಿಯೊಬ್ಬರು ಈ ರೀತಿ ಹಸೀ ಸುಳ್ಳನ್ನು ಸಾರ್ವಜನಿಕವಾಗಿ ಗಟ್ಟಿ ಗಂಟಲಲ್ಲಿ ಕಿರುಲುವುದು ದೇಶಕ್ಕೇ ಅಪಮಾನವಲ್ಲವೇ? ಸಂಸತ್ತಿನಲ್ಲೇ ತನ್ನ ಗೃಹ ಸಚಿವ ಹೇಳಿದ್ದನ್ನು, ತಾನೇ ಮಾಧ್ಯಮ‌ ಸಂದರ್ಶನದಲ್ಲಿ ಹೇಳಿದ್ದನ್ನು ಮರೆತಿರಲು ಸಾಧ್ಯವೇ? ಆ ಪಾಟಿ ಮರೆವಿನ ಖಾಯಿಲೆ ಇದ್ದರೆ ಮೊದಲು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ ಚಿಕಿತ್ಸೆ ಕೊಡಿಸಬೇಕು. ಇಲ್ಲ ಎಂದಾದರೆ ಇಂತಹ ಸುಳ್ಳು ಹೇಳಿದ್ದಕ್ಕೆ ಕ್ಷಮೆ ಯಾಚಿಸಬೇಕು.ಯಾವುದಾದರೂ ಮೀಡಿಯಾದಲ್ಲಿ ಯಾರಾದರೂ ಇದನ್ನು ಬಯಲುಗೊಳಿಸಿ ಛೀಮಾರಿ‌ ಹಾಕಿದ್ದಾರೆಯೇ? ಇಲ್ಲದಿದ್ದರೆ ಅವರು ಮಾಧ್ಯಮ ಹೇಗಾಗುತ್ತಾರೆ?

Posted by Vasu Hv on Tuesday, December 24, 2019

ಇದಕ್ಕೆ ಮುಂಚಿತವಾಗಿ 2002ರಲ್ಲಿಯೇ ಪೌರತ್ವ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯತ್ತ ಒಂದು ಖಂಡಿತವಾದ ಹೆಜ್ಜೆ ಎಂದು ಸ್ಪಷ್ಟಪಡಿಸಲಾಗಿದೆ. ಇದು ಪೌರತ್ವ ನಿಯಮಾವಳಿಗಳ ನಿಯಮ 4(3)ರ ಸಾಲೊಂದರಲ್ಲಿ ಅಡಗಿದೆ. “ಪ್ರತಿಯೊಂದು ಕುಟುಂಬ ಮತ್ತು ವ್ಯಕ್ತಿಯ ವಿವರಗಳನ್ನು ಸ್ಥಳೀಯ ಜನಸಂಖ್ಯಾ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಮತ್ತು ಅದನ್ನು ಸ್ಥಳೀಯ ರಿಜಿಸ್ಟ್ರಾರ್ ತನಿಖೆಗೆ ಒಳಪಡಿಸಿ ಪರಿಶೀಲಿಸಬೇಕು” ಎಂದು ಅದರಲ್ಲಿ ಹೇಳಲಾಗಿದೆ. ಬೇರೆಯೇ ರೀತಿಯಲ್ಲಿ ಹೇಳುವುದಾದರೆ, ಎನ್‌ಪಿಆರ್‌ಗಾಗಿ ವ್ಯಕ್ತಿಗಳು ಮತ್ತು ಕುಟುಂಬಗಳಿಂದ ಸಂಗ್ರಹಿಸಲಾದ ಮಾಹಿತಿಗಳನ್ನು ಎನ್‌ಆರ್‌ಸಿಗಾಗಿ ನಿಯೋಜಿತರಾದ ಸರಕಾರಿ ಅಧಿಕಾರಿಗಳು ಪರಿಶೀಲಿಸಲು ಕಾನೂನು ಅವಕಾಶ ಮಾಡಿಕೊಡುತ್ತದೆ.

ನಿಯಮ 4(4) ಈ ನಿಯಮಾವಳಿಗಳ ಉದ್ದೇಶವನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಸುತ್ತದೆ. ಅದರ ಪ್ರಕಾರ ಯಾರ ಪೌರತ್ವ ಸಂಶಯಾಸ್ಪದವಾಗಿದೆಯೋ ಅಂತವರ ವಿವರಗಳನ್ನು ಸ್ಥಳೀಯ ರಿಜಿಸ್ಟ್ರಾರರು ಜನಸಂಖ್ಯಾ ನೋಂದಣಿಯಲ್ಲಿ ಸೂಕ್ತ ಟಿಪ್ಪಣಿಯೊಂದಿಗೆ  ಮುಂದಿನ ತನಿಖೆಗಾಗಿ ನೋಂದಾಯಿಸುತ್ತಾರೆ. ಇಲ್ಲಿ ಎನ್‌ಪಿಆರ್ ಮತ್ತು ಎನ್‌ಆರ್‌ಸಿಗಳ ಪ್ರಕ್ರಿಯೆಗಳು ಒಂದರೊಳಗೊಂದು ಕಲಸಿಹೋಗುತ್ತವೆ. ಎನ್‌ಪಿಆರ್ ಪ್ರಕ್ರಿಯೆಯಲ್ಲಿ ನೀಡಲಾದ ಮಾಹಿತಿಗಳ ಆಧಾರದಲ್ಲಿ ಒಬ್ಬ ವ್ಯಕ್ತಿ ‘ಸಂಶಯಾಸ್ಪದ ನಾಗರಿಕ’ನೇ ಎಂದು ನಿರ್ಧರಿಸಲು ಪೌರತ್ವ ನಿಯಮಾವಳಿಗಳು ಸ್ಥಳೀಯ ಸರಕಾರಿ ಅಧಿಕಾರಿಗಳಿಗೆ ಅವಕಾಶ ಒದಗಿಸಿಕೊಡುತ್ತವೆ.

ಅಸ್ಸಾಮಿನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿರುವಂತೆ ಲಕ್ಷಾಂತರ ‘ಸಂಶಯಾಸ್ಪದ’ ನಾಗರಿಕರು ದಪ್ಪ ಚರ್ಮದ, ನಿಷ್ಕರುಣಿ ಅಧಿಕಾರಿಗಳ ಮುಂದೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿದೆ. ಕತೆ ಇಲ್ಲಿಗೆ ಮುಗಿಯುವುದಿಲ್ಲ.  ಈ ಬೆಂಕಿಯನ್ನು ಹಾಯ್ದು ಎನ್‌ಆರ್‌ಸಿಯೊಳಗೆ ದಾಖಲಾದರೂ, ತಿದ್ದುಪಡಿಯು ಯಾವುದೇ ವ್ಯಕ್ತಿಗೆ ಈ ಯಾದಿಯಲ್ಲಿರುವ ಯಾವುದೇ ವ್ಯಕ್ತಿಯ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಆಕ್ಷೇಪಣೆಗೆ ಒಳಗಾದ ವ್ಯಕ್ತಿ ಮತ್ತೊಮ್ಮೆ ಅದೇ ಕಷ್ಟದಾಯಕ ಪ್ರಕ್ರಿಯೆಯನ್ನು ಪಾರುಮಾಡಬೇಕಾಗುತ್ತದೆ. ಆಕ್ಷೇಪಣೆ ಮಾಡುವ ವ್ಯಕ್ತಿ ನಿಮ್ಮನ್ನು ಕಂಡರಾಗದ ನೆರೆಮನೆಯವರಾಗಿರಬಹುದು ಅಥವಾ ನಿಮ್ಮ ಕಚೇರಿಯಲ್ಲಿಯೇ ಇರುವ ಪ್ರತಿಸ್ಪರ್ಧಿಯೂ ಆಗಿರಬಹುದು.

ಮತ್ತೊಮ್ಮೆ ಅಸ್ಸಾಮಿನ ಅನುಭವವು ಏನನ್ನು ತಿಳಿಸುತ್ತದೆ ಎಂದರೆ, ಲಕ್ಷಾಂತರ ಜನರ ಮೇಲೆ, ಮುಖ್ಯವಾಗಿ ಮುಸ್ಲಿಮರ ಮೇಲೆ ರಾಶಿಗಟ್ಟಲೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಅನೇಕ ಸಂದರ್ಭಗಳಲ್ಲಿ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಗಳಿಗೆ ತಾವು ಯಾರ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ ಎಂದೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಗುಂಪಿನಲ್ಲಿ ಗೋವಿಂದ ಎಂಬಂತಹ ದ್ವೇಷ ಸಾಧನೆ.

ಆದುದರಿಂದ ಈ ನಿಯಮಾವಳಿಗಳು ಭಯ, ಅಭದ್ರತೆ, ಕಿರುಕುಳದ ವಾತಾವರಣವನ್ನು ಸೃಷ್ಟಿಸುವುದು ಖಂಡಿತ ಮತ್ತು ಎಲ್ಲವೂ ಕೊನೆಗೆ ಸ್ಥಳೀಯ ಅಧಿಕಾರಿಯ ಮರ್ಜಿಯ ಮೇಲೆ ನಿಂತಿರುತ್ತದೆ. ಆದುದರಿಂದ, ಇದನ್ನೆಲ್ಲಾ ಸಾಧ್ಯ ಮಾಡುವ ಮತ್ತು ಅದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸುವ ಪೌರತ್ವ ನಿಯಮಾವಳಿ 2003 ಮತ್ತು ಪೌರತ್ವ ಕಾಯಿದೆಯ ವಿಧಿ 14ಎಯನ್ನು ತಕ್ಷಣವೇ ರದ್ದು ಮಾಡುವಂತೆ ನಾವು ತುರ್ತಾಗಿ ಬೇಡಿಕೆ ಸಲ್ಲಿಸಬೇಕಾಗಿದೆ.

ಇಷ್ಟಿದ್ದರೂ, ಎನ್‌ಪಿಆರ್ ನಿರುಪದ್ರವಿ ಮತ್ತು ಅದರ ಉದ್ದೇಶ ಸರಕಾರಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲಪಿಸುವುದು ಎಂದು ಬಿಜೆಪಿ ಹೇಳುತ್ತದೆ. ಇದು ಶುದ್ಧ ಸುಳ್ಳು. ವಕೀಲರಾದ ಮಾಳವಿಕಾ ಪ್ರಸಾದ್ ಅವರು ಹೇಳುವಂತೆ ಎನ್‌ಪಿಆರ್ ಕೇವಲ ಗಣತಿಯಾಗಿದ್ದರೆ, ಅದಕ್ಕೆ ಪೌರತ್ವವನ್ನು ನಿರ್ಧರಿಸುವ ಪೌರತ್ವ ಕಾಯಿದೆಯನ್ನು ಅನ್ವಯಿಸುವ ಅಗತ್ಯವಿರಲಿಲ್ಲ. ಇನ್ನು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಶ್ನೆ ಬಂದರೆ, ಎಲ್ಲದಕ್ಕೂ ಆಧಾರ್ ಕಾರ್ಡೇ ಆಧಾರ ಎಂದು ಸರಕಾರ ಕಳೆದ ಏಳು ವರ್ಷಗಳಿಂದಲೂ ಹೇಳುತ್ತಾಬಂದಿದೆ. ಸರಕಾರದ ಪರ ವಕೀಲರು ನ್ಯಾಯಾಲಯಗಳಲ್ಲಿ ಮತ್ತು ಅದರ ಚೇಲಾಗಳು ಮಾಧ್ಯಮಗಳಲ್ಲಿ ಇದನ್ನೇ ಹೇಳಿದ್ದಾರೆ. ಅಂದರೆ, ಆಧಾರ್ ಎಂಬುದು ಒಂದು ಗುಜುರಿ ದಾಖಲೆ ಎಂದು ಸರಕಾರ ಈಗ ಒಪ್ಪಿಕೊಳ್ಳಲು ಸಿದ್ಧವಿದೆಯೆ?

ಅಂತಿಮವಾಗಿ ಇನ್ನೊಂದು ಆತಂಕಕಾರಿ ವಿಷಯವಿದೆ. ಮೊತ್ತಮೊದಲ ಬಾರಿಗೆ (2010ಕ್ಕೆ ವಿರುದ್ಧವಾಗಿ) ಎನ್‌ಪಿಆರ್ ಹೆತ್ತವರ ಜನನ ಸ್ಥಳ ಮತ್ತು ದಿನಾಂಕದ ದಾಖಲೆಗಳನ್ನು ಕೇಳಲಿದೆ. ಯಾಕೆಂದರೆ ಪೌರತ್ವ ಕಾಯಿದೆಯ ಪ್ರಕಾರ 1987ರ ನಂತರ ಹುಟ್ಟಿದವರು ಹೆತ್ತವರಲ್ಲಿ ಒಬ್ಬರಾದರೂ ಭಾರತೀಯ ಪೌರರು ಎಂದು ಸಾಬೀತುಪಡಿಸಿದರೆ ಮಾತ್ರ ಭಾರತೀಯ ಪೌರರಾಗುತ್ತಾರೆ. ಆದುದರಿಂದ, ಎನ್‌ಪಿಆರ್ ಕೇವಲ ಗಣತಿಗೆ ಸಂಬಂಧಪಡದ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲಾ ರೀತಿಯಲ್ಲಿ ಅದನ್ನು ಪೌರತ್ವದೊಂದಿಗೆ ತಳಕುಹಾಕಿದೆ. ಆದುದರಿಂದ, ದಯವಿಟ್ಟು ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ. ಎನ್‌ಪಿಆರ್ ಮೊದಲು ನಡೆಯುವುದು ಮತ್ತು ಅದರಿಂದ ಪಡೆದ ಮಾಹಿತಿಯನ್ನು ರಾಷ್ಟ್ರವ್ಯಾಪಿ ಎನ್‌ಆರ್‌ಸಿಗಾಗಿ ಬಳಸಿಕೊಳ್ಳಲಾಗುವುದು.

ಎನ್‌ಆರ್‌ಸಿಯು ತಮ್ಮ ಪೌರತ್ವವನ್ನು ಸರಕಾರಿ ಅಧಿಕಾರಿಗಳ ಮುಂದೆ ಸಾಬೀತುಪಡಿಸುವಂತೆ ಪ್ರತಿಯೊಬ್ಬ ನಾಗರಿಕನನ್ನು ಬಲವಂತಪಡಿಸುತ್ತದೆ. ಮತ್ತು ಒಂದು ವೇಳೆ ಹಾಗೆ ಮಾಡಿದರೂ, ಯಾರೂ ಕೂಡಾ ಅದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.  ಮೇಲಾಗಿ ದೇಶದೊಳಗೆ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ವಲಸೆ ನಡೆದಿದೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ಇದನ್ನು ಮಾಡಲಾಗುತ್ತಿದೆ. ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರವು ತನ್ನ ಪ್ರಜೆಗಳನ್ನು ತೀರಾ ಅನಗತ್ಯವಾಗಿ ಇಂತಹ ಕಂಗೆಡಿಸುವ ಮತ್ತು ನೋವಿನ ಸಂಕಷ್ಟಕ್ಕೆ ತಳ್ಳಿದ್ದಿಲ್ಲ!

(ಲೇಖಕರು ಸುಪ್ರೀಂಕೋರ್ಟಿನ ವಕೀಲರು)


ಇದನ್ನೂ ಓದಿ: ಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...