Homeಮುಖಪುಟಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ.

- Advertisement -
- Advertisement -

ಗೌತಮ್ ಭಾಟಿಯಾ

ಅನುವಾದ: ನಿಖಿಲ್ ಕೋಲ್ಪೆ

ಎಪ್ರಿಲ್ ತಿಂಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಗಾಗಿ ಕೇಂದ್ರ ಸಂಪುಟವು 3,900 ಕೋಟಿ ರೂ.ಗಳ ಬಜೆಟನ್ನು ಅಂಗೀಕರಿಸಿದೆ. ತಕ್ಷಣವೇ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಹೇಳಿಕೆ ನೀಡಿ, ಇದು ಕೇವಲ ಒಂದು ಗಣತಿ ಕಾರ್ಯಕ್ರಮವಾಗಿದ್ದು, ಅದಕ್ಕೂ ವಿವಾದಾತ್ಮಕ ಮತ್ತು ಎಲ್ಲರೂ ಭಯಪಟ್ಟಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೂ ಸಂಬಂಧವಿಲ್ಲ ಎಂದರು.

ರಾಷ್ಟ್ರವ್ಯಾಪಿ ಪೌರತ್ವ ನೋಂದಣಿಯ ಕುರಿತು ಕೇಂದ್ರ ಸರಕಾರವು ಈ ತನಕ ಚರ್ಚಿಸಿಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯೊಂದರಲ್ಲಿ ಹೇಳಿದ ಬೆನ್ನಲ್ಲೇ ಈ ಮಂತ್ರಿಗಳು, ಎನ್‌ಪಿಆರ್ ಜನಗಣತಿಯಂತೆಯೇ ಒಂದು ನಿರುಪದ್ರವಿ ಕಾರ್ಯಕ್ರಮ ಎಂದು ವಾದಿಸಿದರು. ಇದಕ್ಕೆ ಯಾವುದೇ ದಾಖಲೆಗಳ ಅಗತ್ಯವಿಲ್ಲ; ಇದನ್ನು ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ನಿರ್ವಹಣೆಗಾಗಿ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.

ಅಲ್ಪ ಪರಿಶೀಲನೆಯಲ್ಲಿಯೇ ಇವರಿಬ್ಬರ ಹೇಳಿಕೆಗಳನ್ನು ಚಿಂದಿ ಉಡಾಯಿಸಬಹುದು. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಇವೆರಡರ ನಡುವಿನ ಸಂಬಂಧವನ್ನು ಕಾನೂನು ಮೂಲಕವೂ ಗಟ್ಟಿಗೊಳಿಸಲಾಗಿದೆ. ವಾಜಪೇಯಿ ಸರಕಾರವು 2003ರಲ್ಲಿಯೇ ಭಾರತೀಯ ಪೌರತ್ವ ಕಾಯಿದೆಯನ್ನು ತಿದ್ದುಪಡಿ ಮಾಡಿ, ವಿಧಿ 14(ಎ)ಯನ್ನು ತರುವುದರ ಮೂಲಕ ಇದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸಿತ್ತು.

ಇದನ್ನು ಎಷ್ಟು ಸಾಧ್ಯವೋ ಅಷ್ಟು ಷೇರ್ ಮಾಡುವ ಅಗತ್ಯವಿದೆ. ಏಕೆಂದರೆ ಎನ್‌‌ಆರ್‌ಸಿ ಸಿಎಎ ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ದೇಶದ ಪ್ರಧಾನಿಯೊಬ್ಬರು ಈ ರೀತಿ ಹಸೀ ಸುಳ್ಳನ್ನು ಸಾರ್ವಜನಿಕವಾಗಿ ಗಟ್ಟಿ ಗಂಟಲಲ್ಲಿ ಕಿರುಲುವುದು ದೇಶಕ್ಕೇ ಅಪಮಾನವಲ್ಲವೇ? ಸಂಸತ್ತಿನಲ್ಲೇ ತನ್ನ ಗೃಹ ಸಚಿವ ಹೇಳಿದ್ದನ್ನು, ತಾನೇ ಮಾಧ್ಯಮ‌ ಸಂದರ್ಶನದಲ್ಲಿ ಹೇಳಿದ್ದನ್ನು ಮರೆತಿರಲು ಸಾಧ್ಯವೇ? ಆ ಪಾಟಿ ಮರೆವಿನ ಖಾಯಿಲೆ ಇದ್ದರೆ ಮೊದಲು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ ಚಿಕಿತ್ಸೆ ಕೊಡಿಸಬೇಕು. ಇಲ್ಲ ಎಂದಾದರೆ ಇಂತಹ ಸುಳ್ಳು ಹೇಳಿದ್ದಕ್ಕೆ ಕ್ಷಮೆ ಯಾಚಿಸಬೇಕು.ಯಾವುದಾದರೂ ಮೀಡಿಯಾದಲ್ಲಿ ಯಾರಾದರೂ ಇದನ್ನು ಬಯಲುಗೊಳಿಸಿ ಛೀಮಾರಿ‌ ಹಾಕಿದ್ದಾರೆಯೇ? ಇಲ್ಲದಿದ್ದರೆ ಅವರು ಮಾಧ್ಯಮ ಹೇಗಾಗುತ್ತಾರೆ?

Posted by Vasu Hv on Tuesday, December 24, 2019

ಇದಕ್ಕೆ ಮುಂಚಿತವಾಗಿ 2002ರಲ್ಲಿಯೇ ಪೌರತ್ವ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯತ್ತ ಒಂದು ಖಂಡಿತವಾದ ಹೆಜ್ಜೆ ಎಂದು ಸ್ಪಷ್ಟಪಡಿಸಲಾಗಿದೆ. ಇದು ಪೌರತ್ವ ನಿಯಮಾವಳಿಗಳ ನಿಯಮ 4(3)ರ ಸಾಲೊಂದರಲ್ಲಿ ಅಡಗಿದೆ. “ಪ್ರತಿಯೊಂದು ಕುಟುಂಬ ಮತ್ತು ವ್ಯಕ್ತಿಯ ವಿವರಗಳನ್ನು ಸ್ಥಳೀಯ ಜನಸಂಖ್ಯಾ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಮತ್ತು ಅದನ್ನು ಸ್ಥಳೀಯ ರಿಜಿಸ್ಟ್ರಾರ್ ತನಿಖೆಗೆ ಒಳಪಡಿಸಿ ಪರಿಶೀಲಿಸಬೇಕು” ಎಂದು ಅದರಲ್ಲಿ ಹೇಳಲಾಗಿದೆ. ಬೇರೆಯೇ ರೀತಿಯಲ್ಲಿ ಹೇಳುವುದಾದರೆ, ಎನ್‌ಪಿಆರ್‌ಗಾಗಿ ವ್ಯಕ್ತಿಗಳು ಮತ್ತು ಕುಟುಂಬಗಳಿಂದ ಸಂಗ್ರಹಿಸಲಾದ ಮಾಹಿತಿಗಳನ್ನು ಎನ್‌ಆರ್‌ಸಿಗಾಗಿ ನಿಯೋಜಿತರಾದ ಸರಕಾರಿ ಅಧಿಕಾರಿಗಳು ಪರಿಶೀಲಿಸಲು ಕಾನೂನು ಅವಕಾಶ ಮಾಡಿಕೊಡುತ್ತದೆ.

ನಿಯಮ 4(4) ಈ ನಿಯಮಾವಳಿಗಳ ಉದ್ದೇಶವನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಸುತ್ತದೆ. ಅದರ ಪ್ರಕಾರ ಯಾರ ಪೌರತ್ವ ಸಂಶಯಾಸ್ಪದವಾಗಿದೆಯೋ ಅಂತವರ ವಿವರಗಳನ್ನು ಸ್ಥಳೀಯ ರಿಜಿಸ್ಟ್ರಾರರು ಜನಸಂಖ್ಯಾ ನೋಂದಣಿಯಲ್ಲಿ ಸೂಕ್ತ ಟಿಪ್ಪಣಿಯೊಂದಿಗೆ  ಮುಂದಿನ ತನಿಖೆಗಾಗಿ ನೋಂದಾಯಿಸುತ್ತಾರೆ. ಇಲ್ಲಿ ಎನ್‌ಪಿಆರ್ ಮತ್ತು ಎನ್‌ಆರ್‌ಸಿಗಳ ಪ್ರಕ್ರಿಯೆಗಳು ಒಂದರೊಳಗೊಂದು ಕಲಸಿಹೋಗುತ್ತವೆ. ಎನ್‌ಪಿಆರ್ ಪ್ರಕ್ರಿಯೆಯಲ್ಲಿ ನೀಡಲಾದ ಮಾಹಿತಿಗಳ ಆಧಾರದಲ್ಲಿ ಒಬ್ಬ ವ್ಯಕ್ತಿ ‘ಸಂಶಯಾಸ್ಪದ ನಾಗರಿಕ’ನೇ ಎಂದು ನಿರ್ಧರಿಸಲು ಪೌರತ್ವ ನಿಯಮಾವಳಿಗಳು ಸ್ಥಳೀಯ ಸರಕಾರಿ ಅಧಿಕಾರಿಗಳಿಗೆ ಅವಕಾಶ ಒದಗಿಸಿಕೊಡುತ್ತವೆ.

ಅಸ್ಸಾಮಿನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿರುವಂತೆ ಲಕ್ಷಾಂತರ ‘ಸಂಶಯಾಸ್ಪದ’ ನಾಗರಿಕರು ದಪ್ಪ ಚರ್ಮದ, ನಿಷ್ಕರುಣಿ ಅಧಿಕಾರಿಗಳ ಮುಂದೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿದೆ. ಕತೆ ಇಲ್ಲಿಗೆ ಮುಗಿಯುವುದಿಲ್ಲ.  ಈ ಬೆಂಕಿಯನ್ನು ಹಾಯ್ದು ಎನ್‌ಆರ್‌ಸಿಯೊಳಗೆ ದಾಖಲಾದರೂ, ತಿದ್ದುಪಡಿಯು ಯಾವುದೇ ವ್ಯಕ್ತಿಗೆ ಈ ಯಾದಿಯಲ್ಲಿರುವ ಯಾವುದೇ ವ್ಯಕ್ತಿಯ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಆಕ್ಷೇಪಣೆಗೆ ಒಳಗಾದ ವ್ಯಕ್ತಿ ಮತ್ತೊಮ್ಮೆ ಅದೇ ಕಷ್ಟದಾಯಕ ಪ್ರಕ್ರಿಯೆಯನ್ನು ಪಾರುಮಾಡಬೇಕಾಗುತ್ತದೆ. ಆಕ್ಷೇಪಣೆ ಮಾಡುವ ವ್ಯಕ್ತಿ ನಿಮ್ಮನ್ನು ಕಂಡರಾಗದ ನೆರೆಮನೆಯವರಾಗಿರಬಹುದು ಅಥವಾ ನಿಮ್ಮ ಕಚೇರಿಯಲ್ಲಿಯೇ ಇರುವ ಪ್ರತಿಸ್ಪರ್ಧಿಯೂ ಆಗಿರಬಹುದು.

ಮತ್ತೊಮ್ಮೆ ಅಸ್ಸಾಮಿನ ಅನುಭವವು ಏನನ್ನು ತಿಳಿಸುತ್ತದೆ ಎಂದರೆ, ಲಕ್ಷಾಂತರ ಜನರ ಮೇಲೆ, ಮುಖ್ಯವಾಗಿ ಮುಸ್ಲಿಮರ ಮೇಲೆ ರಾಶಿಗಟ್ಟಲೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಅನೇಕ ಸಂದರ್ಭಗಳಲ್ಲಿ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಗಳಿಗೆ ತಾವು ಯಾರ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ ಎಂದೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಗುಂಪಿನಲ್ಲಿ ಗೋವಿಂದ ಎಂಬಂತಹ ದ್ವೇಷ ಸಾಧನೆ.

ಆದುದರಿಂದ ಈ ನಿಯಮಾವಳಿಗಳು ಭಯ, ಅಭದ್ರತೆ, ಕಿರುಕುಳದ ವಾತಾವರಣವನ್ನು ಸೃಷ್ಟಿಸುವುದು ಖಂಡಿತ ಮತ್ತು ಎಲ್ಲವೂ ಕೊನೆಗೆ ಸ್ಥಳೀಯ ಅಧಿಕಾರಿಯ ಮರ್ಜಿಯ ಮೇಲೆ ನಿಂತಿರುತ್ತದೆ. ಆದುದರಿಂದ, ಇದನ್ನೆಲ್ಲಾ ಸಾಧ್ಯ ಮಾಡುವ ಮತ್ತು ಅದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸುವ ಪೌರತ್ವ ನಿಯಮಾವಳಿ 2003 ಮತ್ತು ಪೌರತ್ವ ಕಾಯಿದೆಯ ವಿಧಿ 14ಎಯನ್ನು ತಕ್ಷಣವೇ ರದ್ದು ಮಾಡುವಂತೆ ನಾವು ತುರ್ತಾಗಿ ಬೇಡಿಕೆ ಸಲ್ಲಿಸಬೇಕಾಗಿದೆ.

ಇಷ್ಟಿದ್ದರೂ, ಎನ್‌ಪಿಆರ್ ನಿರುಪದ್ರವಿ ಮತ್ತು ಅದರ ಉದ್ದೇಶ ಸರಕಾರಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲಪಿಸುವುದು ಎಂದು ಬಿಜೆಪಿ ಹೇಳುತ್ತದೆ. ಇದು ಶುದ್ಧ ಸುಳ್ಳು. ವಕೀಲರಾದ ಮಾಳವಿಕಾ ಪ್ರಸಾದ್ ಅವರು ಹೇಳುವಂತೆ ಎನ್‌ಪಿಆರ್ ಕೇವಲ ಗಣತಿಯಾಗಿದ್ದರೆ, ಅದಕ್ಕೆ ಪೌರತ್ವವನ್ನು ನಿರ್ಧರಿಸುವ ಪೌರತ್ವ ಕಾಯಿದೆಯನ್ನು ಅನ್ವಯಿಸುವ ಅಗತ್ಯವಿರಲಿಲ್ಲ. ಇನ್ನು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಶ್ನೆ ಬಂದರೆ, ಎಲ್ಲದಕ್ಕೂ ಆಧಾರ್ ಕಾರ್ಡೇ ಆಧಾರ ಎಂದು ಸರಕಾರ ಕಳೆದ ಏಳು ವರ್ಷಗಳಿಂದಲೂ ಹೇಳುತ್ತಾಬಂದಿದೆ. ಸರಕಾರದ ಪರ ವಕೀಲರು ನ್ಯಾಯಾಲಯಗಳಲ್ಲಿ ಮತ್ತು ಅದರ ಚೇಲಾಗಳು ಮಾಧ್ಯಮಗಳಲ್ಲಿ ಇದನ್ನೇ ಹೇಳಿದ್ದಾರೆ. ಅಂದರೆ, ಆಧಾರ್ ಎಂಬುದು ಒಂದು ಗುಜುರಿ ದಾಖಲೆ ಎಂದು ಸರಕಾರ ಈಗ ಒಪ್ಪಿಕೊಳ್ಳಲು ಸಿದ್ಧವಿದೆಯೆ?

ಅಂತಿಮವಾಗಿ ಇನ್ನೊಂದು ಆತಂಕಕಾರಿ ವಿಷಯವಿದೆ. ಮೊತ್ತಮೊದಲ ಬಾರಿಗೆ (2010ಕ್ಕೆ ವಿರುದ್ಧವಾಗಿ) ಎನ್‌ಪಿಆರ್ ಹೆತ್ತವರ ಜನನ ಸ್ಥಳ ಮತ್ತು ದಿನಾಂಕದ ದಾಖಲೆಗಳನ್ನು ಕೇಳಲಿದೆ. ಯಾಕೆಂದರೆ ಪೌರತ್ವ ಕಾಯಿದೆಯ ಪ್ರಕಾರ 1987ರ ನಂತರ ಹುಟ್ಟಿದವರು ಹೆತ್ತವರಲ್ಲಿ ಒಬ್ಬರಾದರೂ ಭಾರತೀಯ ಪೌರರು ಎಂದು ಸಾಬೀತುಪಡಿಸಿದರೆ ಮಾತ್ರ ಭಾರತೀಯ ಪೌರರಾಗುತ್ತಾರೆ. ಆದುದರಿಂದ, ಎನ್‌ಪಿಆರ್ ಕೇವಲ ಗಣತಿಗೆ ಸಂಬಂಧಪಡದ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲಾ ರೀತಿಯಲ್ಲಿ ಅದನ್ನು ಪೌರತ್ವದೊಂದಿಗೆ ತಳಕುಹಾಕಿದೆ. ಆದುದರಿಂದ, ದಯವಿಟ್ಟು ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ. ಎನ್‌ಪಿಆರ್ ಮೊದಲು ನಡೆಯುವುದು ಮತ್ತು ಅದರಿಂದ ಪಡೆದ ಮಾಹಿತಿಯನ್ನು ರಾಷ್ಟ್ರವ್ಯಾಪಿ ಎನ್‌ಆರ್‌ಸಿಗಾಗಿ ಬಳಸಿಕೊಳ್ಳಲಾಗುವುದು.

ಎನ್‌ಆರ್‌ಸಿಯು ತಮ್ಮ ಪೌರತ್ವವನ್ನು ಸರಕಾರಿ ಅಧಿಕಾರಿಗಳ ಮುಂದೆ ಸಾಬೀತುಪಡಿಸುವಂತೆ ಪ್ರತಿಯೊಬ್ಬ ನಾಗರಿಕನನ್ನು ಬಲವಂತಪಡಿಸುತ್ತದೆ. ಮತ್ತು ಒಂದು ವೇಳೆ ಹಾಗೆ ಮಾಡಿದರೂ, ಯಾರೂ ಕೂಡಾ ಅದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.  ಮೇಲಾಗಿ ದೇಶದೊಳಗೆ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ವಲಸೆ ನಡೆದಿದೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ಇದನ್ನು ಮಾಡಲಾಗುತ್ತಿದೆ. ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರವು ತನ್ನ ಪ್ರಜೆಗಳನ್ನು ತೀರಾ ಅನಗತ್ಯವಾಗಿ ಇಂತಹ ಕಂಗೆಡಿಸುವ ಮತ್ತು ನೋವಿನ ಸಂಕಷ್ಟಕ್ಕೆ ತಳ್ಳಿದ್ದಿಲ್ಲ!

(ಲೇಖಕರು ಸುಪ್ರೀಂಕೋರ್ಟಿನ ವಕೀಲರು)


ಇದನ್ನೂ ಓದಿ: ಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...