Homeಮುಖಪುಟಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ.

- Advertisement -
- Advertisement -

ಗೌತಮ್ ಭಾಟಿಯಾ

ಅನುವಾದ: ನಿಖಿಲ್ ಕೋಲ್ಪೆ

ಎಪ್ರಿಲ್ ತಿಂಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಗಾಗಿ ಕೇಂದ್ರ ಸಂಪುಟವು 3,900 ಕೋಟಿ ರೂ.ಗಳ ಬಜೆಟನ್ನು ಅಂಗೀಕರಿಸಿದೆ. ತಕ್ಷಣವೇ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಹೇಳಿಕೆ ನೀಡಿ, ಇದು ಕೇವಲ ಒಂದು ಗಣತಿ ಕಾರ್ಯಕ್ರಮವಾಗಿದ್ದು, ಅದಕ್ಕೂ ವಿವಾದಾತ್ಮಕ ಮತ್ತು ಎಲ್ಲರೂ ಭಯಪಟ್ಟಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೂ ಸಂಬಂಧವಿಲ್ಲ ಎಂದರು.

ರಾಷ್ಟ್ರವ್ಯಾಪಿ ಪೌರತ್ವ ನೋಂದಣಿಯ ಕುರಿತು ಕೇಂದ್ರ ಸರಕಾರವು ಈ ತನಕ ಚರ್ಚಿಸಿಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯೊಂದರಲ್ಲಿ ಹೇಳಿದ ಬೆನ್ನಲ್ಲೇ ಈ ಮಂತ್ರಿಗಳು, ಎನ್‌ಪಿಆರ್ ಜನಗಣತಿಯಂತೆಯೇ ಒಂದು ನಿರುಪದ್ರವಿ ಕಾರ್ಯಕ್ರಮ ಎಂದು ವಾದಿಸಿದರು. ಇದಕ್ಕೆ ಯಾವುದೇ ದಾಖಲೆಗಳ ಅಗತ್ಯವಿಲ್ಲ; ಇದನ್ನು ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ನಿರ್ವಹಣೆಗಾಗಿ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.

ಅಲ್ಪ ಪರಿಶೀಲನೆಯಲ್ಲಿಯೇ ಇವರಿಬ್ಬರ ಹೇಳಿಕೆಗಳನ್ನು ಚಿಂದಿ ಉಡಾಯಿಸಬಹುದು. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಇವೆರಡರ ನಡುವಿನ ಸಂಬಂಧವನ್ನು ಕಾನೂನು ಮೂಲಕವೂ ಗಟ್ಟಿಗೊಳಿಸಲಾಗಿದೆ. ವಾಜಪೇಯಿ ಸರಕಾರವು 2003ರಲ್ಲಿಯೇ ಭಾರತೀಯ ಪೌರತ್ವ ಕಾಯಿದೆಯನ್ನು ತಿದ್ದುಪಡಿ ಮಾಡಿ, ವಿಧಿ 14(ಎ)ಯನ್ನು ತರುವುದರ ಮೂಲಕ ಇದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸಿತ್ತು.

ಇದನ್ನು ಎಷ್ಟು ಸಾಧ್ಯವೋ ಅಷ್ಟು ಷೇರ್ ಮಾಡುವ ಅಗತ್ಯವಿದೆ. ಏಕೆಂದರೆ ಎನ್‌‌ಆರ್‌ಸಿ ಸಿಎಎ ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ದೇಶದ ಪ್ರಧಾನಿಯೊಬ್ಬರು ಈ ರೀತಿ ಹಸೀ ಸುಳ್ಳನ್ನು ಸಾರ್ವಜನಿಕವಾಗಿ ಗಟ್ಟಿ ಗಂಟಲಲ್ಲಿ ಕಿರುಲುವುದು ದೇಶಕ್ಕೇ ಅಪಮಾನವಲ್ಲವೇ? ಸಂಸತ್ತಿನಲ್ಲೇ ತನ್ನ ಗೃಹ ಸಚಿವ ಹೇಳಿದ್ದನ್ನು, ತಾನೇ ಮಾಧ್ಯಮ‌ ಸಂದರ್ಶನದಲ್ಲಿ ಹೇಳಿದ್ದನ್ನು ಮರೆತಿರಲು ಸಾಧ್ಯವೇ? ಆ ಪಾಟಿ ಮರೆವಿನ ಖಾಯಿಲೆ ಇದ್ದರೆ ಮೊದಲು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ ಚಿಕಿತ್ಸೆ ಕೊಡಿಸಬೇಕು. ಇಲ್ಲ ಎಂದಾದರೆ ಇಂತಹ ಸುಳ್ಳು ಹೇಳಿದ್ದಕ್ಕೆ ಕ್ಷಮೆ ಯಾಚಿಸಬೇಕು.ಯಾವುದಾದರೂ ಮೀಡಿಯಾದಲ್ಲಿ ಯಾರಾದರೂ ಇದನ್ನು ಬಯಲುಗೊಳಿಸಿ ಛೀಮಾರಿ‌ ಹಾಕಿದ್ದಾರೆಯೇ? ಇಲ್ಲದಿದ್ದರೆ ಅವರು ಮಾಧ್ಯಮ ಹೇಗಾಗುತ್ತಾರೆ?

Posted by Vasu Hv on Tuesday, December 24, 2019

ಇದಕ್ಕೆ ಮುಂಚಿತವಾಗಿ 2002ರಲ್ಲಿಯೇ ಪೌರತ್ವ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯತ್ತ ಒಂದು ಖಂಡಿತವಾದ ಹೆಜ್ಜೆ ಎಂದು ಸ್ಪಷ್ಟಪಡಿಸಲಾಗಿದೆ. ಇದು ಪೌರತ್ವ ನಿಯಮಾವಳಿಗಳ ನಿಯಮ 4(3)ರ ಸಾಲೊಂದರಲ್ಲಿ ಅಡಗಿದೆ. “ಪ್ರತಿಯೊಂದು ಕುಟುಂಬ ಮತ್ತು ವ್ಯಕ್ತಿಯ ವಿವರಗಳನ್ನು ಸ್ಥಳೀಯ ಜನಸಂಖ್ಯಾ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಮತ್ತು ಅದನ್ನು ಸ್ಥಳೀಯ ರಿಜಿಸ್ಟ್ರಾರ್ ತನಿಖೆಗೆ ಒಳಪಡಿಸಿ ಪರಿಶೀಲಿಸಬೇಕು” ಎಂದು ಅದರಲ್ಲಿ ಹೇಳಲಾಗಿದೆ. ಬೇರೆಯೇ ರೀತಿಯಲ್ಲಿ ಹೇಳುವುದಾದರೆ, ಎನ್‌ಪಿಆರ್‌ಗಾಗಿ ವ್ಯಕ್ತಿಗಳು ಮತ್ತು ಕುಟುಂಬಗಳಿಂದ ಸಂಗ್ರಹಿಸಲಾದ ಮಾಹಿತಿಗಳನ್ನು ಎನ್‌ಆರ್‌ಸಿಗಾಗಿ ನಿಯೋಜಿತರಾದ ಸರಕಾರಿ ಅಧಿಕಾರಿಗಳು ಪರಿಶೀಲಿಸಲು ಕಾನೂನು ಅವಕಾಶ ಮಾಡಿಕೊಡುತ್ತದೆ.

ನಿಯಮ 4(4) ಈ ನಿಯಮಾವಳಿಗಳ ಉದ್ದೇಶವನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಸುತ್ತದೆ. ಅದರ ಪ್ರಕಾರ ಯಾರ ಪೌರತ್ವ ಸಂಶಯಾಸ್ಪದವಾಗಿದೆಯೋ ಅಂತವರ ವಿವರಗಳನ್ನು ಸ್ಥಳೀಯ ರಿಜಿಸ್ಟ್ರಾರರು ಜನಸಂಖ್ಯಾ ನೋಂದಣಿಯಲ್ಲಿ ಸೂಕ್ತ ಟಿಪ್ಪಣಿಯೊಂದಿಗೆ  ಮುಂದಿನ ತನಿಖೆಗಾಗಿ ನೋಂದಾಯಿಸುತ್ತಾರೆ. ಇಲ್ಲಿ ಎನ್‌ಪಿಆರ್ ಮತ್ತು ಎನ್‌ಆರ್‌ಸಿಗಳ ಪ್ರಕ್ರಿಯೆಗಳು ಒಂದರೊಳಗೊಂದು ಕಲಸಿಹೋಗುತ್ತವೆ. ಎನ್‌ಪಿಆರ್ ಪ್ರಕ್ರಿಯೆಯಲ್ಲಿ ನೀಡಲಾದ ಮಾಹಿತಿಗಳ ಆಧಾರದಲ್ಲಿ ಒಬ್ಬ ವ್ಯಕ್ತಿ ‘ಸಂಶಯಾಸ್ಪದ ನಾಗರಿಕ’ನೇ ಎಂದು ನಿರ್ಧರಿಸಲು ಪೌರತ್ವ ನಿಯಮಾವಳಿಗಳು ಸ್ಥಳೀಯ ಸರಕಾರಿ ಅಧಿಕಾರಿಗಳಿಗೆ ಅವಕಾಶ ಒದಗಿಸಿಕೊಡುತ್ತವೆ.

ಅಸ್ಸಾಮಿನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿರುವಂತೆ ಲಕ್ಷಾಂತರ ‘ಸಂಶಯಾಸ್ಪದ’ ನಾಗರಿಕರು ದಪ್ಪ ಚರ್ಮದ, ನಿಷ್ಕರುಣಿ ಅಧಿಕಾರಿಗಳ ಮುಂದೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿದೆ. ಕತೆ ಇಲ್ಲಿಗೆ ಮುಗಿಯುವುದಿಲ್ಲ.  ಈ ಬೆಂಕಿಯನ್ನು ಹಾಯ್ದು ಎನ್‌ಆರ್‌ಸಿಯೊಳಗೆ ದಾಖಲಾದರೂ, ತಿದ್ದುಪಡಿಯು ಯಾವುದೇ ವ್ಯಕ್ತಿಗೆ ಈ ಯಾದಿಯಲ್ಲಿರುವ ಯಾವುದೇ ವ್ಯಕ್ತಿಯ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಆಕ್ಷೇಪಣೆಗೆ ಒಳಗಾದ ವ್ಯಕ್ತಿ ಮತ್ತೊಮ್ಮೆ ಅದೇ ಕಷ್ಟದಾಯಕ ಪ್ರಕ್ರಿಯೆಯನ್ನು ಪಾರುಮಾಡಬೇಕಾಗುತ್ತದೆ. ಆಕ್ಷೇಪಣೆ ಮಾಡುವ ವ್ಯಕ್ತಿ ನಿಮ್ಮನ್ನು ಕಂಡರಾಗದ ನೆರೆಮನೆಯವರಾಗಿರಬಹುದು ಅಥವಾ ನಿಮ್ಮ ಕಚೇರಿಯಲ್ಲಿಯೇ ಇರುವ ಪ್ರತಿಸ್ಪರ್ಧಿಯೂ ಆಗಿರಬಹುದು.

ಮತ್ತೊಮ್ಮೆ ಅಸ್ಸಾಮಿನ ಅನುಭವವು ಏನನ್ನು ತಿಳಿಸುತ್ತದೆ ಎಂದರೆ, ಲಕ್ಷಾಂತರ ಜನರ ಮೇಲೆ, ಮುಖ್ಯವಾಗಿ ಮುಸ್ಲಿಮರ ಮೇಲೆ ರಾಶಿಗಟ್ಟಲೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಅನೇಕ ಸಂದರ್ಭಗಳಲ್ಲಿ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಗಳಿಗೆ ತಾವು ಯಾರ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ ಎಂದೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಗುಂಪಿನಲ್ಲಿ ಗೋವಿಂದ ಎಂಬಂತಹ ದ್ವೇಷ ಸಾಧನೆ.

ಆದುದರಿಂದ ಈ ನಿಯಮಾವಳಿಗಳು ಭಯ, ಅಭದ್ರತೆ, ಕಿರುಕುಳದ ವಾತಾವರಣವನ್ನು ಸೃಷ್ಟಿಸುವುದು ಖಂಡಿತ ಮತ್ತು ಎಲ್ಲವೂ ಕೊನೆಗೆ ಸ್ಥಳೀಯ ಅಧಿಕಾರಿಯ ಮರ್ಜಿಯ ಮೇಲೆ ನಿಂತಿರುತ್ತದೆ. ಆದುದರಿಂದ, ಇದನ್ನೆಲ್ಲಾ ಸಾಧ್ಯ ಮಾಡುವ ಮತ್ತು ಅದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸುವ ಪೌರತ್ವ ನಿಯಮಾವಳಿ 2003 ಮತ್ತು ಪೌರತ್ವ ಕಾಯಿದೆಯ ವಿಧಿ 14ಎಯನ್ನು ತಕ್ಷಣವೇ ರದ್ದು ಮಾಡುವಂತೆ ನಾವು ತುರ್ತಾಗಿ ಬೇಡಿಕೆ ಸಲ್ಲಿಸಬೇಕಾಗಿದೆ.

ಇಷ್ಟಿದ್ದರೂ, ಎನ್‌ಪಿಆರ್ ನಿರುಪದ್ರವಿ ಮತ್ತು ಅದರ ಉದ್ದೇಶ ಸರಕಾರಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲಪಿಸುವುದು ಎಂದು ಬಿಜೆಪಿ ಹೇಳುತ್ತದೆ. ಇದು ಶುದ್ಧ ಸುಳ್ಳು. ವಕೀಲರಾದ ಮಾಳವಿಕಾ ಪ್ರಸಾದ್ ಅವರು ಹೇಳುವಂತೆ ಎನ್‌ಪಿಆರ್ ಕೇವಲ ಗಣತಿಯಾಗಿದ್ದರೆ, ಅದಕ್ಕೆ ಪೌರತ್ವವನ್ನು ನಿರ್ಧರಿಸುವ ಪೌರತ್ವ ಕಾಯಿದೆಯನ್ನು ಅನ್ವಯಿಸುವ ಅಗತ್ಯವಿರಲಿಲ್ಲ. ಇನ್ನು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಶ್ನೆ ಬಂದರೆ, ಎಲ್ಲದಕ್ಕೂ ಆಧಾರ್ ಕಾರ್ಡೇ ಆಧಾರ ಎಂದು ಸರಕಾರ ಕಳೆದ ಏಳು ವರ್ಷಗಳಿಂದಲೂ ಹೇಳುತ್ತಾಬಂದಿದೆ. ಸರಕಾರದ ಪರ ವಕೀಲರು ನ್ಯಾಯಾಲಯಗಳಲ್ಲಿ ಮತ್ತು ಅದರ ಚೇಲಾಗಳು ಮಾಧ್ಯಮಗಳಲ್ಲಿ ಇದನ್ನೇ ಹೇಳಿದ್ದಾರೆ. ಅಂದರೆ, ಆಧಾರ್ ಎಂಬುದು ಒಂದು ಗುಜುರಿ ದಾಖಲೆ ಎಂದು ಸರಕಾರ ಈಗ ಒಪ್ಪಿಕೊಳ್ಳಲು ಸಿದ್ಧವಿದೆಯೆ?

ಅಂತಿಮವಾಗಿ ಇನ್ನೊಂದು ಆತಂಕಕಾರಿ ವಿಷಯವಿದೆ. ಮೊತ್ತಮೊದಲ ಬಾರಿಗೆ (2010ಕ್ಕೆ ವಿರುದ್ಧವಾಗಿ) ಎನ್‌ಪಿಆರ್ ಹೆತ್ತವರ ಜನನ ಸ್ಥಳ ಮತ್ತು ದಿನಾಂಕದ ದಾಖಲೆಗಳನ್ನು ಕೇಳಲಿದೆ. ಯಾಕೆಂದರೆ ಪೌರತ್ವ ಕಾಯಿದೆಯ ಪ್ರಕಾರ 1987ರ ನಂತರ ಹುಟ್ಟಿದವರು ಹೆತ್ತವರಲ್ಲಿ ಒಬ್ಬರಾದರೂ ಭಾರತೀಯ ಪೌರರು ಎಂದು ಸಾಬೀತುಪಡಿಸಿದರೆ ಮಾತ್ರ ಭಾರತೀಯ ಪೌರರಾಗುತ್ತಾರೆ. ಆದುದರಿಂದ, ಎನ್‌ಪಿಆರ್ ಕೇವಲ ಗಣತಿಗೆ ಸಂಬಂಧಪಡದ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲಾ ರೀತಿಯಲ್ಲಿ ಅದನ್ನು ಪೌರತ್ವದೊಂದಿಗೆ ತಳಕುಹಾಕಿದೆ. ಆದುದರಿಂದ, ದಯವಿಟ್ಟು ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ. ಎನ್‌ಪಿಆರ್ ಮೊದಲು ನಡೆಯುವುದು ಮತ್ತು ಅದರಿಂದ ಪಡೆದ ಮಾಹಿತಿಯನ್ನು ರಾಷ್ಟ್ರವ್ಯಾಪಿ ಎನ್‌ಆರ್‌ಸಿಗಾಗಿ ಬಳಸಿಕೊಳ್ಳಲಾಗುವುದು.

ಎನ್‌ಆರ್‌ಸಿಯು ತಮ್ಮ ಪೌರತ್ವವನ್ನು ಸರಕಾರಿ ಅಧಿಕಾರಿಗಳ ಮುಂದೆ ಸಾಬೀತುಪಡಿಸುವಂತೆ ಪ್ರತಿಯೊಬ್ಬ ನಾಗರಿಕನನ್ನು ಬಲವಂತಪಡಿಸುತ್ತದೆ. ಮತ್ತು ಒಂದು ವೇಳೆ ಹಾಗೆ ಮಾಡಿದರೂ, ಯಾರೂ ಕೂಡಾ ಅದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.  ಮೇಲಾಗಿ ದೇಶದೊಳಗೆ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ವಲಸೆ ನಡೆದಿದೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ಇದನ್ನು ಮಾಡಲಾಗುತ್ತಿದೆ. ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರವು ತನ್ನ ಪ್ರಜೆಗಳನ್ನು ತೀರಾ ಅನಗತ್ಯವಾಗಿ ಇಂತಹ ಕಂಗೆಡಿಸುವ ಮತ್ತು ನೋವಿನ ಸಂಕಷ್ಟಕ್ಕೆ ತಳ್ಳಿದ್ದಿಲ್ಲ!

(ಲೇಖಕರು ಸುಪ್ರೀಂಕೋರ್ಟಿನ ವಕೀಲರು)


ಇದನ್ನೂ ಓದಿ: ಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...