Homeಮುಖಪುಟಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

- Advertisement -
- Advertisement -

ಜನವರಿ 10ರಂದು ನಾನು ಓದಿದ ಹೈಸ್ಕೂಲ್‌ನ ಕಾರ್ಯಕ್ರಮವೊಂದಕ್ಕೆ ಹೋಗಿ, ಅಲ್ಲಿ ಸಮೀಪದ ನನ್ನ ತವರು ಮನೆಗೆ ಹೋಗಿ ಬಂದೆ. ಅಲ್ಲಿ ಏರ್‌ಟೆಲ್ ಸಿಗ್ನಲ್ ಇಲ್ಲ. ಮನೆಗೆ ಹಿಂದಿರುಗಿ ಫೇಸ್ಬುಕ್ ತೆಗೆದು ನೋಡಿದರೆ, ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತೀರಿಹೋದ ಸುದ್ದಿ. ಸಾರಾ ಅಬೂಬಕ್ಕರ್ ಅವರ ಆರೋಗ್ಯ ಕೆಲವು ತಿಂಗಳಿಂದ ಚೆನ್ನಾಗಿರಲಿಲ್ಲ. ಕಳೆದ ವರ್ಷವೇ ಅವರಿಗೆ ಮರೆವು ಆವರಿಸಿತ್ತು ಎಂದು ತಿಳಿದಿತ್ತು.

ಎರಡು ವರ್ಷಗಳ ಕೆಳಗೆ, ಸಾರಾ ಕನ್ನಡಕ್ಕೆ ಅನುವಾದಿಸಿದ, ಗುಜರಾತ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪೊಲೀಸ್ ಅಧಿಕಾರಿ ಶ್ರೀಕುಮಾರ್ (ಕೆಲವು ತಿಂಗಳ ಕೆಳಗೆ ತೀಸ್ತಾ ಅವರ ಜೊತೆಗೆ ಬಂಧನಕ್ಕೆ ಒಳಪಟ್ಟಿದ್ದರು) ಅವರ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಪ್ರತಿಗಳು ಬೇಕು ಎಂದು ಕೇಳಿದ್ದಾಗ, ಈಗ ಮರು ಮುದ್ರಣ ಮಾಡಲು ತಮಗೆ ಕಷ್ಟ ಎಂದಿದ್ದರು. ನವಕರ್ನಾಟಕ ಪ್ರಕಾಶನದವರಿಗೆ ಕೊಟ್ಟರೆ ಪ್ರಕಟಿಸುತ್ತಾರೆ ಅಂದೆ. ಅವರು ಉತ್ಸಾಹ ತೋರಿಸಲಿಲ್ಲ. ಅವರ ಪುಸ್ತಕಗಳಿಗೆ ಅವರೇ ಪ್ರಕಾಶಕರು. ’ಚಂದ್ರಗಿರಿ’ ಅವರ ಪ್ರಕಾಶನ ಸಂಸ್ಥೆಯ ಹೆಸರು. ಪ್ರತಿ ಪುಸ್ತಕದ ಎರಡು ಪ್ರತಿಗಳನ್ನು ಕಳಿಸುತ್ತಿದ್ದರು. ಲೈಬ್ರರಿಗೆ ಮತ್ತು ನನಗೆ. 1984ರಿಂದ ಬರೆಯಲು ತೊಡಗಿದ ಅವರು, ಎಂಟು ಕಾದಂಬರಿಗಳು, ಆರು ಕಥಾ ಸಂಕಲನಗಳು, ಐದು ಭಾಷಾಂತರ ಕೃತಿಗಳು, ಮೂರು ಲೇಖನ ಸಂಗ್ರಹಗಳು, ಒಂದು ಪ್ರವಾಸ ಕಥನ, ಒಂದು ನಾಟಕ ಸಂಕಲನ ಪ್ರಕಟಿಸಿದ್ದಾರೆ. ’ಹೊತ್ತು ಕಂತುವ ಮುನ್ನ’ ಅವರ ಆತ್ಮಚರಿತ್ರೆ, ’ಚಂದ್ರಗಿರಿ’ ಅವರ ಅಭಿನಂದನಾ ಗ್ರಂಥ. ಅವರ ಮೊದಲ ಕಾದಂಬರಿ ’ಚಂದ್ರಗಿರಿ ತೀರದಲ್ಲಿ’ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದೆ ಮತ್ತು ಚಲನಚಿತ್ರವಾಗಿದೆ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ನಾಡೋಜ ಪ್ರಶಸ್ತಿಯವರೆಗೆ ಹಲವು ಪ್ರಶಸ್ತಿಗಳು, ಗೌರವಗಳು ಅವರಿಗೆ ಲಭಿಸಿವೆ.

ನಮ್ಮ ಕಾಲೇಜಿನ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಲು ಎರಡು ಸಲ ಅವರು ತೀರ್ಥಹಳ್ಳಿಗೆ ಬಂದಿದ್ದರು. ಒಮ್ಮೆ ನಮ್ಮ ಮನೆಗೆ ಬಂದು ಊಟ ಮಾಡಿ ಹೋಗಿದ್ದರು. ಎರಡು ಸಲವೂ ಮಂಗಳೂರಿನಿಂದ ಮಿನಿ ಬಸ್‌ನಲ್ಲಿ ಅವರು ಬಂದಿದ್ದು. ಬಸ್‌ನಲ್ಲಿ ಪ್ರಯಾಣಿಸುವುದನ್ನು ಅವರು ಕೊನೆಯವರೆಗೂ ರೂಢಿಸಿಕೊಂಡಿದ್ದರು. ಅವರ ಜತೆ ನಾಲ್ಕು ಐದು ಸಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನೆನಪಿದೆ: ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮ, ಗಿರೀಶ ಕಾರ್ನಾಡ ರಂಗಶಂಕರದಲ್ಲಿ ನಡೆಸಿಕೊಟ್ಟ ಲೇಖಕಿಯರ ಪ್ರೋಗ್ರಾಂನಲ್ಲಿ ಹೀಗೆ. ಅರವಿಂದ ಆಶ್ರಮದ ಗೆಸ್ಟ್ ಹೌಸ್‌ನಲ್ಲಿ ಸಾರಾ ಅಬೂಬಕ್ಕರ್ ಜತೆ ಒಂದೇ ಕೋಣೆಯಲ್ಲಿ ಉಳಿದ ಸವಿನೆನಪು. ಅದೇ ಕೊಠಡಿಯಲ್ಲಿ ಕತೆಗಾರ್ತಿ ನಾಗವೇಣಿ ಸಹ ನಮ್ಮ ಜತೆ ಇದ್ದರು. ಈ ಎಲ್ಲ ಸಂದರ್ಭದಲ್ಲಿ ನಾನು ಗಮನಿಸಿದಂತೆ ಸಾರಾ ಅವರು ತುಂಬಾ ಸರಳ ಮತ್ತು ನಿಗರ್ವಿ. ಅವರ ಬರಹದಂತೆ ನೇರ, ತೆರೆದ ಮನಸ್ಸು. ಅವರ ಅಭಿನಂದನಾ ಗ್ರಂಥಕ್ಕೆ ಅವರ ಸಾಹಿತ್ಯ ಕೃತಿಗಳ ಕುರಿತು ಲೇಖನ ಕೇಳಿದಾಗ ಬರೆದುಕೊಟ್ಟ ಸಂತಸ ನನ್ನದಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ರಿಫ್ರೆಷರ್ ಕೋರ್ಸ್ ಅಭ್ಯರ್ಥಿಗಳಿಗೆ ಸಾರಾ ಅಬೂಬಕ್ಕರ್ ಅವರ ಎಲ್ಲ ಕೃತಿಗಳ ಕುರಿತು ಉಪನ್ಯಾಸ ನೀಡಿದ್ದೇನೆ. ಸಾರಾ ಅವರ ಕೃತಿಗಳ ಮೂಲಕ ನಮ್ಮ ಜತೆಗೆ ಸದಾ ಉಳಿಯುತ್ತಾರೆ ಮತ್ತು ಸ್ಫೂರ್ತಿಯಾಗುತ್ತಾರೆ.

ಅವರ ಆತ್ಮ ಚರಿತ್ರೆ ’ಹೊತ್ತು ಕಂತುವ ಮುನ್ನ’ ಪುಸ್ತಕದಲ್ಲಿ, ಅವರು ತಮ್ಮ ಕೌಟುಂಬಿಕ ಬದುಕಿನ ಜತೆಗೆ ಬರಹದ ಬದುಕಿನ ಸವಾಲುಗಳನ್ನು ಕುರಿತೂ ಬರೆದಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಸ್ತ್ರೀಯರಿಗಿದ್ದ ಧಾರ್ಮಿಕ ಸ್ವಾತಂತ್ರ್ಯದ ಮಿತಿಗಳನ್ನು ಕುರಿತು ಬರೆದಾಗ ಅವರದೇ ಸಮುದಾಯದ ಜನ ವಿರೋಧಿಸಿದರು. ಬೆಂಗಳೂರಿನ ಲೇಖಕಿ ಒಬ್ಬರು ಸಾರಾ ಅಬೂಬಕ್ಕರ್ ಲೇಖಕಿ ಆದರೆ ನಾನು ಲೇಖಕಿ ಅಲ್ಲ ಅಂದರಂತೆ. ಮೂವತ್ತೈದು ವರ್ಷಗಳ ಹಿಂದಿನ ಮಾತು ಇದು. ಸಾರಾ ಅವರ ಮಾತುಗಳನ್ನು ಅಲ್ಲಲ್ಲೇ ಬಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆದರು. ಇನ್ನೊಬ್ಬರು ಸಾರಾ ಲಂಕೇಶ್ ಪತ್ರಿಕೆಯಲ್ಲಿ ಬರೆಯುವುದನ್ನು ಇಷ್ಟಪಡದೆ ಟೀಕಿಸಿದರು. ಹೀಗೆ ಹಲವು ಕಹಿಮಾತುಗಳನ್ನು ಕೇಳಿ ಅರಗಿಸಿಕೊಂಡು ಬದುಕಿ ಬರೆದವರು ಸಾರಾ.

ಇದನ್ನೂ ಓದಿ: ಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ’ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

ಸಾರಾ ಅಬೂಬಕ್ಕರ್ ಕೇವಲ ಮುಸ್ಲಿಂ ಜಗತ್ತಿನ ಕುರಿತು ಬರೆದಿಲ್ಲ. ’ತಳ ಒಡೆದ ದೋಣಿಯಲಿ’ ಎಂಬ ಅವರ ಕಾದಂಬರಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಭ್ರಷ್ಟಾಚಾರದ ಕುರಿತ ಚಿತ್ರಣ ಇದೆ. ಒಬ್ಬರು ರಾಜಕಾರಣಿಗೆ ಲಂಚ ತೆಗೆದುಕೊಳ್ಳಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಹಿರಿಯ ಎಂಜಿನಿಯರ್ ಆಗಿದ್ದ ಅವರ ಪತಿ ಅಬೂಬಕ್ಕರ್ ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗುತ್ತದೆ. ನೀರಾವರಿ ಇಲಾಖೆಯ ಭ್ರಷ್ಟಾಚಾರದ ಕತೆಯೇ ’ತಳ ಒಡೆದ ದೋಣಿಯಲಿ’. ಸಾರಾ ಈ ಕಾದಂಬರಿ ಬರೆದಿದ್ದು 1997ರಲ್ಲಿ. ಇವತ್ತು ಕೂಡ ಈ ಎಡದಂಡೆ ಕಾಲುವೆ ರಿಪೇರಿ ಆಗುತ್ತಲೇ ಇದೆ. ಒಡೆದು ಹೋಗುತ್ತಲೇ ಇದೆ. ’ತಳ ಒಡೆದ ದೋಣಿಯಲಿ’ ಒಂದು ಮುಖ್ಯ ಕಾದಂಬರಿ. ಸಾರಾ ತಮ್ಮ ಕೃತಿಗಳಲ್ಲೆಲ್ಲಾ ಸಾಮಾಜಿಕ ಸಮಸ್ಯೆಗಳ ಚಿತ್ರಣಕ್ಕೆ ಒತ್ತು ನೀಡಿ ಬರೆದಿದ್ದಾರೆ.

ಇಪ್ಪತ್ತೈದು ಪುಸ್ತಕಗಳನ್ನು ಬರೆದಿರುವ ಸಾರಾ ಅವರಿಗೆ ಕೇವಲ ಕಲಾತ್ಮಕ ಅಭಿವ್ಯಕ್ತಿ ಮಾತ್ರವೇ ಮುಖ್ಯವಲ್ಲ. ತನ್ನದೇ ಅಂತರಂಗದ ಅಭಿವ್ಯಕ್ತಿ ಅಥವಾ ಆತ್ಮ ನಿವೇದನೆಯೂ ಮುಖ್ಯವಲ್ಲ. ತಾನು ನೋಡಿದ ಅನುಭವಿಸಿದ ಸಂಪ್ರದಾಯದ ನಂಬಿಕೆಗಳು, ಧಾರ್ಮಿಕ ನಂಬಿಕೆಗಳು, ಅದರ ಪರಿಣಾಮವಾಗಿ ನಿರಂತರ ನೋವು ಅನುಭವಿಸುತ್ತಿರುವ ಸ್ತ್ರೀ ಸಮುದಾಯ- ಇವು ನಿರಂತರವಾಗಿ ಲೇಖಕಿಯನ್ನು ಕಾಡಿದ ಸಂಗತಿಗಳು. ಕೇರಳದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯ ಸುತ್ತಮುತ್ತಲಿನ ಪರಿಸರ ಸಾರಾ ಅವರ ಕಥೆ ಕಾದಂಬರಿಗಳ ಕಾರ್ಯಕ್ಷೇತ್ರ. ಮಲಯಾಳಂನ ಪ್ರಮುಖ ಲೇಖಕರಲ್ಲಿ ಒಬ್ಬರಾದ ವೈಕಂ ಮಹಮ್ಮದ್ ಬಶೀರ್ ಅವರ ಕಥೆ ಕಾದಂಬರಿಗಳಲ್ಲಿ ಚಿತ್ರಿತವಾದ ಮುಸ್ಲಿಂ ಕೌಟುಂಬಿಕ ಪರಿಸರಕ್ಕಿಂತ ಸಾರಾ ಅವರ ಬರವಣಿಗೆ ಭಿನ್ನ. ರವೀಂದ್ರನಾಥ ಟ್ಯಾಗೋರರ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಆದಂತೆ ತನ್ನದೂ ಒಂದು ಕಿರು ಪ್ರಯತ್ನ ಎಂದು ಹೇಳುತ್ತಾರೆ ಅವರು.

ಸಾರಾ ಅಬೂಬಕ್ಕರ್ ಅವರ ಕೃತಿಗಳಲ್ಲಿ ಮತ್ತೊಂದು ಹೆಗ್ಗಳಿಕೆಯೆಂದರೆ, ಮೊದಲ ಬಾರಿಗೆ ಕನ್ನಡ ಲೇಖಕಿಯರ ಕೃತಿಗಳಲ್ಲಿ ಮಾಂಸ, ಮೀನುಗಳ ಅಡಿಗೆಯ ವಿವರ ಬರುವುದು. ನಫೀಸ ಎಂಬ ಎಳೆಯ ಗೃಹಿಣಿ ತೆಳ್ಳನೆಯ ಅಕ್ಕಿ ರೊಟ್ಟಿ ಮಾಡಿ ಕಾಯಿಹಾಲು ಹಚ್ಚಿ ಮಾಡಿದ ರೊಟ್ಟಿಯನ್ನು ಅವಿಭಕ್ತ ಕುಟಂಬದಲ್ಲಿ ಅವಳ ಗಂಡನಿಗೆ ಇನ್ಯಾರೋ ಬಡಿಸುತ್ತಾರೆ. ಅವನು ರುಚಿಯನ್ನು ಮೆಚ್ಚಿ ತಿನ್ನುತ್ತಾನೆ. ಆದರೆ ಅದು ತನ್ನ ಹೆಂಡತಿ ಮಾಡಿದ್ದು ಎಂದು ತಿಳಿಯುವುದಿಲ್ಲ. ಅವಳ ಒಳ್ಳೆಯ ಗುಣಗಳು ಅವಳ ಗಂಡನಿಗೆ ಕೊನೆಗೂ ತಿಳಿಯದೆ ಅವಳ ಬದುಕು ದುರಂತವಾಗುತ್ತದೆ. ತಮ್ಮ ಹೆಚ್ಚಿನ ಕೃತಿಗಳಲ್ಲಿ, ತಲಾಖ್, ಬಹುಪತ್ನಿತ್ವ, ಘೋಶಾದ ತೊಂದರೆಗಳು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಹತ್ವ ಇಲ್ಲದೆ ಇರುವುದು- ಇವುಗಳನ್ನು ಚಿತ್ರಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ’ಚಂದ್ರಗಿರಿ ತೀರದಲ್ಲಿ’ ಕಾದಂಬರಿಯಲ್ಲಿ ನಾದಿರ ಮಸೀದಿಯ ಕೊಳದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಶಕ್ತವಾಗಿ ಪ್ರತಿಭಟನೆ ಮಾಡಿದ್ದರೆ, ’ನಿಯಮ ನಿಯಮಗಳ ನಡುವೆ’ ಎಂಬ ಕತೆಯಲ್ಲಿ ಪ್ರಕೃತಿ ನಿಯಮ ಮತ್ತು ಮನುಷ್ಯ ನಿರ್ಮಿತ ಧಾರ್ಮಿಕ ನಿಯಮಗಳ ನಡುವೆ ಸಿಲುಕಿ ನಲಗುವ ಹೆಣ್ಣಿನ ಕಥೆಯನ್ನು ಮನಕಲುಕುವಂತೆ ನಿರೂಪಿಸಿದ್ದಾರೆ. ಈ ಕಥೆ ಪಿಯು ತರಗತಿಗೆ ಪಠ್ಯವಾಗಿತ್ತು. ಅಧ್ಯಾಪಕರ ಕಾರ್ಯಾಗಾರ ಒಂದರಲ್ಲಿ ಈ ಕಥೆಯನ್ನು ಕುರಿತು ನಾನು ಮಾತನಾಡಬೇಕಿತ್ತು. ಕಥೆಯ ಕುರಿತು ವಿಶ್ಲೇಷಣೆಗೆ ತೊಡಗಿದಾಗ ಹಲವು ಜನ ಪುರುಷ ಅಧ್ಯಾಪಕರು, ಈ ಕಥೆಯನ್ನು ಪಠ್ಯವಾಗಿರಿಸಿದ್ದರ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿದರು. ಬಸಿರು, ಮುಟ್ಟು ಇತ್ಯಾದಿ ಸಂಗತಿಗಳ ಕುರಿತು ತರಗತಿಯಲ್ಲಿ ಹೇಗೆ ಹೇಳುವುದು, ಇದೆಂತಹ ಕಥೆ ಎಂದು ಕೂಗಾಡಿದರು. ಅವರ ಅಜ್ಞಾನಕ್ಕೆ ಮರುಗಬೇಕಾಯಿತು. ಹೀಗೆ ಸಾರಾ ಪುರುಷ ಅಹಂಗೆ ಹಲವು ರೀತಿಯಲ್ಲಿ ಸವಾಲಾಗಿದ್ದರು. ಹಾಗೆಯೇ ಎಲ್ಲಾ ಧರ್ಮಗಳ ಮೂಲಭೂತವಾದಿಗಳಿಗೂ! ಅವರು ಅನುವಾದಿಸಿದ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಕುರಿತು ಮರು ಚರ್ಚೆ ಆಗಬೇಕಿದೆ. ಅದು ಮರುಮುದ್ರಣ ಕಾಣಬೇಕಿದೆ.

ವಾಸ್ತವಕ್ಕೆ ದೂರವಾದ ಕಲ್ಪಿತ ಕಥೆ ಕಾದಂಬರಿಗಳ ಹಿಂಸೆ ಕ್ರೌರ್ಯವನ್ನು ಸಂಪ್ರದಾಯಸ್ಥ ಜನ ಪ್ರಶ್ನಿಸುವುದಿಲ್ಲ. ಆದರೆ ನಿಜವಾಗಿ ಸಮಾಜದಲ್ಲಿರುವ ಹೆಣ್ಣಿನ ಶೋಷಣೆಯನ್ನು ಕುರಿತು ಬರೆದರೆ ಸಂಪ್ರದಾಯಸ್ಥರಿಗೆ ಸಹಿಸಲು ಆಗುವುದಿಲ್ಲ. ಇದು ನಮ್ಮ ಸದ್ಯದ ಸಾಮಾಜಿಕ ಪರಿಸ್ಥಿತಿ. ಸಾರಾ ಅಬೂಬಕ್ಕರ್ ತರಹದ ಲೇಖಕಿಯರು ಮತ್ತೆ ಹುಟ್ಟಿ ಬರಬೇಕು. ಅವರಿಗೆ ಹೃದಯಪೂರ್ವಕ ನಮನಗಳು.

ಡಾ. ಎಲ್.ಸಿ ಸುಮಿತ್ರಾ
ಬರಹಗಾರ್ತಿ, ತೀರ್ಥಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...