Homeಮುಖಪುಟಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

- Advertisement -
- Advertisement -

ಜನವರಿ 10ರಂದು ನಾನು ಓದಿದ ಹೈಸ್ಕೂಲ್‌ನ ಕಾರ್ಯಕ್ರಮವೊಂದಕ್ಕೆ ಹೋಗಿ, ಅಲ್ಲಿ ಸಮೀಪದ ನನ್ನ ತವರು ಮನೆಗೆ ಹೋಗಿ ಬಂದೆ. ಅಲ್ಲಿ ಏರ್‌ಟೆಲ್ ಸಿಗ್ನಲ್ ಇಲ್ಲ. ಮನೆಗೆ ಹಿಂದಿರುಗಿ ಫೇಸ್ಬುಕ್ ತೆಗೆದು ನೋಡಿದರೆ, ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತೀರಿಹೋದ ಸುದ್ದಿ. ಸಾರಾ ಅಬೂಬಕ್ಕರ್ ಅವರ ಆರೋಗ್ಯ ಕೆಲವು ತಿಂಗಳಿಂದ ಚೆನ್ನಾಗಿರಲಿಲ್ಲ. ಕಳೆದ ವರ್ಷವೇ ಅವರಿಗೆ ಮರೆವು ಆವರಿಸಿತ್ತು ಎಂದು ತಿಳಿದಿತ್ತು.

ಎರಡು ವರ್ಷಗಳ ಕೆಳಗೆ, ಸಾರಾ ಕನ್ನಡಕ್ಕೆ ಅನುವಾದಿಸಿದ, ಗುಜರಾತ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪೊಲೀಸ್ ಅಧಿಕಾರಿ ಶ್ರೀಕುಮಾರ್ (ಕೆಲವು ತಿಂಗಳ ಕೆಳಗೆ ತೀಸ್ತಾ ಅವರ ಜೊತೆಗೆ ಬಂಧನಕ್ಕೆ ಒಳಪಟ್ಟಿದ್ದರು) ಅವರ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಪ್ರತಿಗಳು ಬೇಕು ಎಂದು ಕೇಳಿದ್ದಾಗ, ಈಗ ಮರು ಮುದ್ರಣ ಮಾಡಲು ತಮಗೆ ಕಷ್ಟ ಎಂದಿದ್ದರು. ನವಕರ್ನಾಟಕ ಪ್ರಕಾಶನದವರಿಗೆ ಕೊಟ್ಟರೆ ಪ್ರಕಟಿಸುತ್ತಾರೆ ಅಂದೆ. ಅವರು ಉತ್ಸಾಹ ತೋರಿಸಲಿಲ್ಲ. ಅವರ ಪುಸ್ತಕಗಳಿಗೆ ಅವರೇ ಪ್ರಕಾಶಕರು. ’ಚಂದ್ರಗಿರಿ’ ಅವರ ಪ್ರಕಾಶನ ಸಂಸ್ಥೆಯ ಹೆಸರು. ಪ್ರತಿ ಪುಸ್ತಕದ ಎರಡು ಪ್ರತಿಗಳನ್ನು ಕಳಿಸುತ್ತಿದ್ದರು. ಲೈಬ್ರರಿಗೆ ಮತ್ತು ನನಗೆ. 1984ರಿಂದ ಬರೆಯಲು ತೊಡಗಿದ ಅವರು, ಎಂಟು ಕಾದಂಬರಿಗಳು, ಆರು ಕಥಾ ಸಂಕಲನಗಳು, ಐದು ಭಾಷಾಂತರ ಕೃತಿಗಳು, ಮೂರು ಲೇಖನ ಸಂಗ್ರಹಗಳು, ಒಂದು ಪ್ರವಾಸ ಕಥನ, ಒಂದು ನಾಟಕ ಸಂಕಲನ ಪ್ರಕಟಿಸಿದ್ದಾರೆ. ’ಹೊತ್ತು ಕಂತುವ ಮುನ್ನ’ ಅವರ ಆತ್ಮಚರಿತ್ರೆ, ’ಚಂದ್ರಗಿರಿ’ ಅವರ ಅಭಿನಂದನಾ ಗ್ರಂಥ. ಅವರ ಮೊದಲ ಕಾದಂಬರಿ ’ಚಂದ್ರಗಿರಿ ತೀರದಲ್ಲಿ’ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದೆ ಮತ್ತು ಚಲನಚಿತ್ರವಾಗಿದೆ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ನಾಡೋಜ ಪ್ರಶಸ್ತಿಯವರೆಗೆ ಹಲವು ಪ್ರಶಸ್ತಿಗಳು, ಗೌರವಗಳು ಅವರಿಗೆ ಲಭಿಸಿವೆ.

ನಮ್ಮ ಕಾಲೇಜಿನ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಲು ಎರಡು ಸಲ ಅವರು ತೀರ್ಥಹಳ್ಳಿಗೆ ಬಂದಿದ್ದರು. ಒಮ್ಮೆ ನಮ್ಮ ಮನೆಗೆ ಬಂದು ಊಟ ಮಾಡಿ ಹೋಗಿದ್ದರು. ಎರಡು ಸಲವೂ ಮಂಗಳೂರಿನಿಂದ ಮಿನಿ ಬಸ್‌ನಲ್ಲಿ ಅವರು ಬಂದಿದ್ದು. ಬಸ್‌ನಲ್ಲಿ ಪ್ರಯಾಣಿಸುವುದನ್ನು ಅವರು ಕೊನೆಯವರೆಗೂ ರೂಢಿಸಿಕೊಂಡಿದ್ದರು. ಅವರ ಜತೆ ನಾಲ್ಕು ಐದು ಸಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನೆನಪಿದೆ: ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮ, ಗಿರೀಶ ಕಾರ್ನಾಡ ರಂಗಶಂಕರದಲ್ಲಿ ನಡೆಸಿಕೊಟ್ಟ ಲೇಖಕಿಯರ ಪ್ರೋಗ್ರಾಂನಲ್ಲಿ ಹೀಗೆ. ಅರವಿಂದ ಆಶ್ರಮದ ಗೆಸ್ಟ್ ಹೌಸ್‌ನಲ್ಲಿ ಸಾರಾ ಅಬೂಬಕ್ಕರ್ ಜತೆ ಒಂದೇ ಕೋಣೆಯಲ್ಲಿ ಉಳಿದ ಸವಿನೆನಪು. ಅದೇ ಕೊಠಡಿಯಲ್ಲಿ ಕತೆಗಾರ್ತಿ ನಾಗವೇಣಿ ಸಹ ನಮ್ಮ ಜತೆ ಇದ್ದರು. ಈ ಎಲ್ಲ ಸಂದರ್ಭದಲ್ಲಿ ನಾನು ಗಮನಿಸಿದಂತೆ ಸಾರಾ ಅವರು ತುಂಬಾ ಸರಳ ಮತ್ತು ನಿಗರ್ವಿ. ಅವರ ಬರಹದಂತೆ ನೇರ, ತೆರೆದ ಮನಸ್ಸು. ಅವರ ಅಭಿನಂದನಾ ಗ್ರಂಥಕ್ಕೆ ಅವರ ಸಾಹಿತ್ಯ ಕೃತಿಗಳ ಕುರಿತು ಲೇಖನ ಕೇಳಿದಾಗ ಬರೆದುಕೊಟ್ಟ ಸಂತಸ ನನ್ನದಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ರಿಫ್ರೆಷರ್ ಕೋರ್ಸ್ ಅಭ್ಯರ್ಥಿಗಳಿಗೆ ಸಾರಾ ಅಬೂಬಕ್ಕರ್ ಅವರ ಎಲ್ಲ ಕೃತಿಗಳ ಕುರಿತು ಉಪನ್ಯಾಸ ನೀಡಿದ್ದೇನೆ. ಸಾರಾ ಅವರ ಕೃತಿಗಳ ಮೂಲಕ ನಮ್ಮ ಜತೆಗೆ ಸದಾ ಉಳಿಯುತ್ತಾರೆ ಮತ್ತು ಸ್ಫೂರ್ತಿಯಾಗುತ್ತಾರೆ.

ಅವರ ಆತ್ಮ ಚರಿತ್ರೆ ’ಹೊತ್ತು ಕಂತುವ ಮುನ್ನ’ ಪುಸ್ತಕದಲ್ಲಿ, ಅವರು ತಮ್ಮ ಕೌಟುಂಬಿಕ ಬದುಕಿನ ಜತೆಗೆ ಬರಹದ ಬದುಕಿನ ಸವಾಲುಗಳನ್ನು ಕುರಿತೂ ಬರೆದಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಸ್ತ್ರೀಯರಿಗಿದ್ದ ಧಾರ್ಮಿಕ ಸ್ವಾತಂತ್ರ್ಯದ ಮಿತಿಗಳನ್ನು ಕುರಿತು ಬರೆದಾಗ ಅವರದೇ ಸಮುದಾಯದ ಜನ ವಿರೋಧಿಸಿದರು. ಬೆಂಗಳೂರಿನ ಲೇಖಕಿ ಒಬ್ಬರು ಸಾರಾ ಅಬೂಬಕ್ಕರ್ ಲೇಖಕಿ ಆದರೆ ನಾನು ಲೇಖಕಿ ಅಲ್ಲ ಅಂದರಂತೆ. ಮೂವತ್ತೈದು ವರ್ಷಗಳ ಹಿಂದಿನ ಮಾತು ಇದು. ಸಾರಾ ಅವರ ಮಾತುಗಳನ್ನು ಅಲ್ಲಲ್ಲೇ ಬಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆದರು. ಇನ್ನೊಬ್ಬರು ಸಾರಾ ಲಂಕೇಶ್ ಪತ್ರಿಕೆಯಲ್ಲಿ ಬರೆಯುವುದನ್ನು ಇಷ್ಟಪಡದೆ ಟೀಕಿಸಿದರು. ಹೀಗೆ ಹಲವು ಕಹಿಮಾತುಗಳನ್ನು ಕೇಳಿ ಅರಗಿಸಿಕೊಂಡು ಬದುಕಿ ಬರೆದವರು ಸಾರಾ.

ಇದನ್ನೂ ಓದಿ: ಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ’ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

ಸಾರಾ ಅಬೂಬಕ್ಕರ್ ಕೇವಲ ಮುಸ್ಲಿಂ ಜಗತ್ತಿನ ಕುರಿತು ಬರೆದಿಲ್ಲ. ’ತಳ ಒಡೆದ ದೋಣಿಯಲಿ’ ಎಂಬ ಅವರ ಕಾದಂಬರಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಭ್ರಷ್ಟಾಚಾರದ ಕುರಿತ ಚಿತ್ರಣ ಇದೆ. ಒಬ್ಬರು ರಾಜಕಾರಣಿಗೆ ಲಂಚ ತೆಗೆದುಕೊಳ್ಳಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಹಿರಿಯ ಎಂಜಿನಿಯರ್ ಆಗಿದ್ದ ಅವರ ಪತಿ ಅಬೂಬಕ್ಕರ್ ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗುತ್ತದೆ. ನೀರಾವರಿ ಇಲಾಖೆಯ ಭ್ರಷ್ಟಾಚಾರದ ಕತೆಯೇ ’ತಳ ಒಡೆದ ದೋಣಿಯಲಿ’. ಸಾರಾ ಈ ಕಾದಂಬರಿ ಬರೆದಿದ್ದು 1997ರಲ್ಲಿ. ಇವತ್ತು ಕೂಡ ಈ ಎಡದಂಡೆ ಕಾಲುವೆ ರಿಪೇರಿ ಆಗುತ್ತಲೇ ಇದೆ. ಒಡೆದು ಹೋಗುತ್ತಲೇ ಇದೆ. ’ತಳ ಒಡೆದ ದೋಣಿಯಲಿ’ ಒಂದು ಮುಖ್ಯ ಕಾದಂಬರಿ. ಸಾರಾ ತಮ್ಮ ಕೃತಿಗಳಲ್ಲೆಲ್ಲಾ ಸಾಮಾಜಿಕ ಸಮಸ್ಯೆಗಳ ಚಿತ್ರಣಕ್ಕೆ ಒತ್ತು ನೀಡಿ ಬರೆದಿದ್ದಾರೆ.

ಇಪ್ಪತ್ತೈದು ಪುಸ್ತಕಗಳನ್ನು ಬರೆದಿರುವ ಸಾರಾ ಅವರಿಗೆ ಕೇವಲ ಕಲಾತ್ಮಕ ಅಭಿವ್ಯಕ್ತಿ ಮಾತ್ರವೇ ಮುಖ್ಯವಲ್ಲ. ತನ್ನದೇ ಅಂತರಂಗದ ಅಭಿವ್ಯಕ್ತಿ ಅಥವಾ ಆತ್ಮ ನಿವೇದನೆಯೂ ಮುಖ್ಯವಲ್ಲ. ತಾನು ನೋಡಿದ ಅನುಭವಿಸಿದ ಸಂಪ್ರದಾಯದ ನಂಬಿಕೆಗಳು, ಧಾರ್ಮಿಕ ನಂಬಿಕೆಗಳು, ಅದರ ಪರಿಣಾಮವಾಗಿ ನಿರಂತರ ನೋವು ಅನುಭವಿಸುತ್ತಿರುವ ಸ್ತ್ರೀ ಸಮುದಾಯ- ಇವು ನಿರಂತರವಾಗಿ ಲೇಖಕಿಯನ್ನು ಕಾಡಿದ ಸಂಗತಿಗಳು. ಕೇರಳದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯ ಸುತ್ತಮುತ್ತಲಿನ ಪರಿಸರ ಸಾರಾ ಅವರ ಕಥೆ ಕಾದಂಬರಿಗಳ ಕಾರ್ಯಕ್ಷೇತ್ರ. ಮಲಯಾಳಂನ ಪ್ರಮುಖ ಲೇಖಕರಲ್ಲಿ ಒಬ್ಬರಾದ ವೈಕಂ ಮಹಮ್ಮದ್ ಬಶೀರ್ ಅವರ ಕಥೆ ಕಾದಂಬರಿಗಳಲ್ಲಿ ಚಿತ್ರಿತವಾದ ಮುಸ್ಲಿಂ ಕೌಟುಂಬಿಕ ಪರಿಸರಕ್ಕಿಂತ ಸಾರಾ ಅವರ ಬರವಣಿಗೆ ಭಿನ್ನ. ರವೀಂದ್ರನಾಥ ಟ್ಯಾಗೋರರ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಆದಂತೆ ತನ್ನದೂ ಒಂದು ಕಿರು ಪ್ರಯತ್ನ ಎಂದು ಹೇಳುತ್ತಾರೆ ಅವರು.

ಸಾರಾ ಅಬೂಬಕ್ಕರ್ ಅವರ ಕೃತಿಗಳಲ್ಲಿ ಮತ್ತೊಂದು ಹೆಗ್ಗಳಿಕೆಯೆಂದರೆ, ಮೊದಲ ಬಾರಿಗೆ ಕನ್ನಡ ಲೇಖಕಿಯರ ಕೃತಿಗಳಲ್ಲಿ ಮಾಂಸ, ಮೀನುಗಳ ಅಡಿಗೆಯ ವಿವರ ಬರುವುದು. ನಫೀಸ ಎಂಬ ಎಳೆಯ ಗೃಹಿಣಿ ತೆಳ್ಳನೆಯ ಅಕ್ಕಿ ರೊಟ್ಟಿ ಮಾಡಿ ಕಾಯಿಹಾಲು ಹಚ್ಚಿ ಮಾಡಿದ ರೊಟ್ಟಿಯನ್ನು ಅವಿಭಕ್ತ ಕುಟಂಬದಲ್ಲಿ ಅವಳ ಗಂಡನಿಗೆ ಇನ್ಯಾರೋ ಬಡಿಸುತ್ತಾರೆ. ಅವನು ರುಚಿಯನ್ನು ಮೆಚ್ಚಿ ತಿನ್ನುತ್ತಾನೆ. ಆದರೆ ಅದು ತನ್ನ ಹೆಂಡತಿ ಮಾಡಿದ್ದು ಎಂದು ತಿಳಿಯುವುದಿಲ್ಲ. ಅವಳ ಒಳ್ಳೆಯ ಗುಣಗಳು ಅವಳ ಗಂಡನಿಗೆ ಕೊನೆಗೂ ತಿಳಿಯದೆ ಅವಳ ಬದುಕು ದುರಂತವಾಗುತ್ತದೆ. ತಮ್ಮ ಹೆಚ್ಚಿನ ಕೃತಿಗಳಲ್ಲಿ, ತಲಾಖ್, ಬಹುಪತ್ನಿತ್ವ, ಘೋಶಾದ ತೊಂದರೆಗಳು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಹತ್ವ ಇಲ್ಲದೆ ಇರುವುದು- ಇವುಗಳನ್ನು ಚಿತ್ರಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ’ಚಂದ್ರಗಿರಿ ತೀರದಲ್ಲಿ’ ಕಾದಂಬರಿಯಲ್ಲಿ ನಾದಿರ ಮಸೀದಿಯ ಕೊಳದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಶಕ್ತವಾಗಿ ಪ್ರತಿಭಟನೆ ಮಾಡಿದ್ದರೆ, ’ನಿಯಮ ನಿಯಮಗಳ ನಡುವೆ’ ಎಂಬ ಕತೆಯಲ್ಲಿ ಪ್ರಕೃತಿ ನಿಯಮ ಮತ್ತು ಮನುಷ್ಯ ನಿರ್ಮಿತ ಧಾರ್ಮಿಕ ನಿಯಮಗಳ ನಡುವೆ ಸಿಲುಕಿ ನಲಗುವ ಹೆಣ್ಣಿನ ಕಥೆಯನ್ನು ಮನಕಲುಕುವಂತೆ ನಿರೂಪಿಸಿದ್ದಾರೆ. ಈ ಕಥೆ ಪಿಯು ತರಗತಿಗೆ ಪಠ್ಯವಾಗಿತ್ತು. ಅಧ್ಯಾಪಕರ ಕಾರ್ಯಾಗಾರ ಒಂದರಲ್ಲಿ ಈ ಕಥೆಯನ್ನು ಕುರಿತು ನಾನು ಮಾತನಾಡಬೇಕಿತ್ತು. ಕಥೆಯ ಕುರಿತು ವಿಶ್ಲೇಷಣೆಗೆ ತೊಡಗಿದಾಗ ಹಲವು ಜನ ಪುರುಷ ಅಧ್ಯಾಪಕರು, ಈ ಕಥೆಯನ್ನು ಪಠ್ಯವಾಗಿರಿಸಿದ್ದರ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿದರು. ಬಸಿರು, ಮುಟ್ಟು ಇತ್ಯಾದಿ ಸಂಗತಿಗಳ ಕುರಿತು ತರಗತಿಯಲ್ಲಿ ಹೇಗೆ ಹೇಳುವುದು, ಇದೆಂತಹ ಕಥೆ ಎಂದು ಕೂಗಾಡಿದರು. ಅವರ ಅಜ್ಞಾನಕ್ಕೆ ಮರುಗಬೇಕಾಯಿತು. ಹೀಗೆ ಸಾರಾ ಪುರುಷ ಅಹಂಗೆ ಹಲವು ರೀತಿಯಲ್ಲಿ ಸವಾಲಾಗಿದ್ದರು. ಹಾಗೆಯೇ ಎಲ್ಲಾ ಧರ್ಮಗಳ ಮೂಲಭೂತವಾದಿಗಳಿಗೂ! ಅವರು ಅನುವಾದಿಸಿದ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಕುರಿತು ಮರು ಚರ್ಚೆ ಆಗಬೇಕಿದೆ. ಅದು ಮರುಮುದ್ರಣ ಕಾಣಬೇಕಿದೆ.

ವಾಸ್ತವಕ್ಕೆ ದೂರವಾದ ಕಲ್ಪಿತ ಕಥೆ ಕಾದಂಬರಿಗಳ ಹಿಂಸೆ ಕ್ರೌರ್ಯವನ್ನು ಸಂಪ್ರದಾಯಸ್ಥ ಜನ ಪ್ರಶ್ನಿಸುವುದಿಲ್ಲ. ಆದರೆ ನಿಜವಾಗಿ ಸಮಾಜದಲ್ಲಿರುವ ಹೆಣ್ಣಿನ ಶೋಷಣೆಯನ್ನು ಕುರಿತು ಬರೆದರೆ ಸಂಪ್ರದಾಯಸ್ಥರಿಗೆ ಸಹಿಸಲು ಆಗುವುದಿಲ್ಲ. ಇದು ನಮ್ಮ ಸದ್ಯದ ಸಾಮಾಜಿಕ ಪರಿಸ್ಥಿತಿ. ಸಾರಾ ಅಬೂಬಕ್ಕರ್ ತರಹದ ಲೇಖಕಿಯರು ಮತ್ತೆ ಹುಟ್ಟಿ ಬರಬೇಕು. ಅವರಿಗೆ ಹೃದಯಪೂರ್ವಕ ನಮನಗಳು.

ಡಾ. ಎಲ್.ಸಿ ಸುಮಿತ್ರಾ
ಬರಹಗಾರ್ತಿ, ತೀರ್ಥಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...