Homeಮುಖಪುಟಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

ಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

- Advertisement -
- Advertisement -

ಸುಮ್ಮನೆ ಊಹಿಸಿಕೊಳ್ಳಿ, ಕೆಲವು ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೋಗುತ್ತಾರೆ, ಅಲ್ಲಿ ಹೋದ ನಂತರ ಅವರಿಗೆ ಗೊತ್ತಾಗುವುದೇನೆಂದರೆ, ನಿನ್ನೆಯ ತನಕ ಐದನೆಯ ತರಗತಿಯಲ್ಲಿದ್ದ ಅವರು ಈಗ ನಾಲ್ಕನೆಯ ತರಗತಿಗೆ ಸೇರಿಕೊಳ್ಳಲಿದ್ದಾರೆ, ನಾಲ್ಕನೆಯ ತರಗತಿಯವರು ಮೂರನೆಯ ತರಗತಿಗೆ; ಯಾವ ಪುಸ್ತಕವನ್ನು ಅವರು ಮೊದಲು ಓದಬಹುದಾಗಿತ್ತೋ, ಈಗ ತೊದಲುತ್ತಿದ್ದಾರೆ, ಯಾರಿಗೆ ಗಣಿತ ಬರುತ್ತಿತ್ತೋ ಈಗ ಅದನ್ನು ಮರೆತಿದ್ದಾರೆ. ಅಂದರೆ ರಾತ್ರೋರಾತ್ರಿ ಇಡೀ ಶಾಲೆ ಒಂದು ಹಂತ ಕೆಳಗೆ ಕುಸಿದುಬಿಟ್ಟಿದೆ. ಯೋಚಿಸಿ, ಆಗ ಆ ಶಾಲೆ, ಆ ಮಕ್ಕಳು, ಆ ಹಳ್ಳಿಯ ಮೇಲೆ ಯಾವ ಪರಿಣಾಮ ಬೀರಬಹುದು. ಇದು ಸೈನ್ಸ್ ಫಿಕ್ಷನ್‌ನ ಒಂದು ಹೊಸ ಕಲ್ಪನೆಯಲ್ಲ. ಇದು ವಾಸ್ತವ. ಕೇವಲ ಒಂದು ಶಾಲೆಯದ್ದಲ್ಲ, ಇಡೀ ದೇಶದ ವಾಸ್ತವ. ಯಾವುದೇ ದೂರದ ದೇಶದ್ದೂ ಅಲ್ಲ, ನಮ್ಮ ಭಾರತದ ಕಥೆಯೇ ಇದು. ಯಾವುದೋ ಒಂದು ಭೂತಕಾಲದ ಕಥೆಯೂ ಅಲ್ಲ, ಕಳೆದ 4 ವರ್ಷಗಳ ದುಃಖಭರಿತ ಕಥೆ ಇದು.

ಕಳೆದ ವರ್ಷ ಪ್ರಥಮ್ ಎಂಬ ಸರಕಾರೇತರ ಸಂಸ್ಥೆಯು ’ಅಸರ್’ ಎಂಬ ಹೆಸರಿನ ಸಮೀಕ್ಷೆಯ 2022ರ ವರದಿ ಬಿಡುಗಡೆ ಮಾಡಿತು, ಈ ವರದಿ ಈ ಧಾರುಣ ಕಥೆ ಹೇಳುತ್ತದೆ. ಅಸರ್ ಎಂದರೆ ’ಎನುವಲ್ ಸ್ಟೇಟಸ್ ಆಫ್ ಎಜ್ಯುಕೇಷನ್ ರಿಪೋರ್ಟ್’ (Annul status of education report). ಇದು ಕಳೆದ 17 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅರ್ಹತೆಯನ್ನು ಅಳೆಯುವ ಒಂದು ಪ್ರಾಮಾಣಿಕ ಅಸ್ತ್ರವಾಗಿ ಹೊರಹೊಮ್ಮಿದೆ. ಈ ಸಮೀಕ್ಷೆಯಲ್ಲಿ, ಶಾಲೆಯಲ್ಲಿ ಮಕ್ಕಳ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳುವ ಬದಲಿಗೆ ಅವರ ಮನೆಗೆ ಹೋಗಿ ಭಾಷೆ ಮತ್ತು ಗಣಿತದ ಸಾಧಾರಣ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರದ್ದೇ ಆದ ಪಠ್ಯಪುಸ್ತಕದ ಒಂದು ಸಾಧಾರಣ ಪ್ಯಾರಾವನ್ನು ಓದಿಸಲಾಗುತ್ತದೆ. ಗಣಿತದಲ್ಲಿ ಕೂಡುವ ಕಳೆಯುವ ಅತ್ಯಂತ ಸಾಧಾರಣ ಲೆಕ್ಕ ಬಿಡಿಸಲು ಹೇಳಲಾಗುತ್ತದೆ.

ಈ ವರ್ಷ ಅಸರ್‌ನ ವರದಿಯನ್ನು ನಾನು ಕಾತುರದಿಂದ ಕಾಯುತ್ತಿದ್ದೆ. 2005ರಿಂದ ಪ್ರತಿ ವರ್ಷ ಹಾಗೂ 2014ರ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ವರದಿ ಹೊರಬರುತ್ತಿದೆ. ಆದರೆ 2018ರ ನಂತರ ಈ ಪ್ರಕ್ರಿಯೆ ನಿಂತಿತ್ತು. ಕೋವಿಡ್ ಮಹಾಮಾರಿಯ ಕಾರಣದಿಂದ ಶಾಲೆಗಳೂ ಮುಚ್ಚಿದ್ದವು ಹಾಗೂ ಅಸರ್ ಸಮೀಕ್ಷೆಯನ್ನೂ ಮಾಡಲಾಗಲಿಲ್ಲ. ಹಾಗಾಗಿ 2022ರ ವರದಿ ಕಳೆದ 4 ವರ್ಷಗಳ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒದಗಿದ ಅಡೆತಡೆಯ ದಾಖಲೆಯಾಗಿ ಹೊರಹೊಮ್ಮಿದೆ. ದೇಶದ 606 ಜಿಲ್ಲೆಗಳಲ್ಲಿ 19 ಸಾವಿರ ಹಳ್ಳಿಗಳ 7 ಲಕ್ಷ ಮಕ್ಕಳ ಸಮೀಕ್ಷೆಯ ಆಧಾರಿತ ಈ ವರದಿ ಮೊದಲ ಬಾರಿ ಕೋವಿಡ್ ಮಹಾಮಾರಿ ಕಾರಣದಿಂದ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಣದ ಮೇಲೆ ಆದ ಪರಿಣಾಮಗಳನ್ನು ದಾಖಲಿಸುತ್ತದೆ.

ಸುದ್ದಿ ಒಳ್ಳೆಯದಿಲ್ಲ. ಅಸರ್ 2018ರ ವರದಿಯು 5ನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಕೇವಲ 51% ಮಕ್ಕಳು 2ನೆಯ ತರಗತಿಯ ಸಾಧಾರಣ ಪುಸ್ತಕದ ಸರಳವಾದ ಪ್ಯಾರಾ ಓದಬಲ್ಲರು ಎಂದು ಹೇಳಿತ್ತು.

ಇದನ್ನೂ ಓದಿ: ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ | ಶಿಕ್ಷಣ ಇಲಾಖೆಯ ಕ್ರಮಕ್ಕೆ ತಜ್ಞರ ವಿರೋಧ

ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿತ್ತು. ಈಗ 2022ರ ವರದಿ ಹೇಳುವುದೇನೆಂದರೆ, ಈ ಅಂಕಿ ಇನ್ನಷ್ಟು ಕೆಳಗಿಳಿದು ಆ ಅನುಪಾದ 43%ಕ್ಕೆ ಕುಸಿದಿದೆ. ಅಂದರೆ ಪ್ರಾಥಮಿಕ ಶಾಲೆ ಪಾಸ್ ಮಾಡುವ 10 ಮಕ್ಕಳಲ್ಲಿ 6 ಮಕ್ಕಳಿಗೆ ತಮ್ಮ ಮೂರು ವರ್ಗ ಕೆಳಗಿನ ಪುಸ್ತಕದ ಸರಳವಾದ ಒಂದು ಪ್ಯಾರಾ ಕೂಡ ಓದಲು ಆಗುವುದಿಲ್ಲ. ಅಸರ್‌ನದ್ದೇ ಹಳೆಯ ಸಮೀಕ್ಷೆಯೊಂದಿಗೆ ಹೋಲಿಸಿದಾಗ ತಿಳಿಯುವುದೇನೆಂದರೆ ಒಂದೇ ಏಟಿನಲ್ಲಿ ನಾವು 2012ರ ಸ್ತರಕ್ಕೆ ಮರಳಿದ್ದೇವೆ. ಒಂದು ತರಗತಿಯಲ್ಲ, ಒಂದು ಶಾಲೆಯಲ್ಲ, ಒಂದು ಹಳ್ಳಿಯಲ್ಲ, ಇಡೀ ದೇಶದ ಶಿಕ್ಷಣದ ಒಂದು ಹಂತ ಕೆಳಗಿಳಿದುಬಿಟ್ಟಿದೆ.

ಈ ಕಥೆಯನ್ನು ಬೇರೆ ಬೇರೆ ಸ್ತರಗಳಲ್ಲಿ ಪುನರುಚ್ಚರಿಸಲಾಗಿದೆ. 2ನೆಯ ತರಗತಿಯ ಪುಸ್ತಕ ಓದಲು ಸಾಧ್ಯವಾಗುವ 3ನೆಯ ತರಗತಿಯ ಮಕ್ಕಳ ಸಂಖ್ಯೆ 2018ರಲ್ಲಿ 27% ಇತ್ತು; ಈಗ 2022ರಲ್ಲಿ ಕುಸಿದು 21%ಗೆ ನಿಂತಿದೆ. 3ನೆಯ ತರಗತಿಯ ಮಕ್ಕಳು ಕಳೆಯುವ ಪ್ರಶ್ನೆಗಳನ್ನು ಉತ್ತರಿಸಬಲ್ಲ ಹಾಗೂ 5ನೆಯ ತರಗತಿಯ ಮಕ್ಕಳು ಭಾಗಾಕಾರ ಮಾಡಬಲ್ಲವರ ಸಂಖ್ಯೆ 28%ರಿಂದ ಇಳಿದು ಈಗ 26%ಕ್ಕೆ ಬಂದಿದೆ. ಶಿಕ್ಷಣದಲ್ಲಿ ಈ ಕುಸಿತ ಕೇವಲ ಬಡರಾಜ್ಯಗಳಲ್ಲಿ ಕಾಣಿಸಿಲ್ಲ. ಈ ಹೊಡೆತ ಶಿಕ್ಷಣದ ವ್ಯವಸ್ಥೆ ಉತ್ತಮವಾಗಿರುವ ಕೇರಳ, ಹಿಮಾಚಲ ಹಾಗೂ ಹರಿಯಾಣದಂತಹ ರಾಜ್ಯಗಳಲ್ಲೂ ಕಂಡುಬಂದಿದೆ. ಈ ಕುಸಿತ ಎಲ್ಲಾ ರೀತಿಯ ಮಕ್ಕಳಲ್ಲಿ ದಾಖಲಾಗಿದೆ, ಅವರು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಾಗಲಿ, ಖಾಸಗಿಯಲ್ಲಿ ಓದುವವರಾಗಿರಲಿ. ಅಂದರೆ, ಕೋವಿಡ್ ಮಹಾಮಾರಿಯ ಸಮಯದಲ್ಲಿ ನಮ್ಮ ಗ್ರಾಮೀಣ ಮಕ್ಕಳ ಶಿಕ್ಷಣ ವ್ಯವಸ್ಥೆ ಧ್ವಂಸಗೊಂಡಿದೆ.

ಆದರೆ ಇದರರ್ಥ ಶಿಕ್ಷಣದಲ್ಲಿ ಪೋಷಕರ ಅಥವಾ ಮಕ್ಕಳ ಆಸಕ್ತಿ ಕುಂದಿದೆ ಅಂತಲ್ಲ. ಇದೇ ಸಮೀಕ್ಷೆ ಈ ವಾಸ್ತವವನ್ನೂ ದಾಖಲಿಸುತ್ತದೆ: ಈ ನಾಲ್ಕು ವರ್ಷಗಳಲ್ಲಿ ಶಾಲೆಗೆ ದಾಖಲಾಗುವ ಗ್ರಾಮೀಣ ಮಕ್ಕಳ ಸಂಖ್ಯೆ 97.2%ರಿಂದ 98.4%ಗೆ ಏರಿದೆ. ಹೆಣ್ಣುಮಕ್ಕಳ ದಾಖಲಾತಿಯೂ ಮೊದಲಿಗಿಂತ ಹೆಚ್ಚಿದೆ. ಶಾಲೆಗಳಲ್ಲಿ ಮಾತ್ರವಲ್ಲ ಅಂಗನವಾಡಿಯಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆಯೂ 57% ಇಂದ ಜಿಗಿತ ಕಂಡು ಈಗ 67% ಆಗಿದೆ. ಮೂರು ವರ್ಷ ವಯಸ್ಸಿನ 78% ಮಕ್ಕಳು ಒಂದಲ್ಲ ಒಂದು ನರ್ಸರಿ ಶಾಲೆಗೆ ಹೋಗುತ್ತಿದ್ದಾರೆ. ಅಂದರೆ ಶಿಕ್ಷಣದ ಹಸಿವು ನಿರಂತರವಾಗಿ ಹೆಚ್ಚುತ್ತಿದೆ.

ಆದರೆ ಶಿಕ್ಷಣದ ಅವಕಾಶದಲ್ಲಿ ಕುಸಿತ ಕಂಡುಬರುತ್ತಿದೆ. ಈ ಸಮೀಕ್ಷೆಯು ಮೊದಲ ಬಾರಿಗೆ ಒಂದು ಐತಿಹಾಸಿಕ ಪ್ರಕ್ರಿಯೆಯು ತಲೆಕೆಳಗಾಗಿದ್ದನ್ನು ದಾಖಲಿಸುತ್ತದೆ. ಬಹಳಷ್ಟು ಸಮಯದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕುಸಿಯುತ್ತಿತ್ತು. ಅದಕ್ಕೆ ಕಾರಣ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಸಾಧ್ಯತೆ ಒಂದು. ಆದರೆ ಮೊದಲ ಬಾರಿ 2018ರಿಂದ 2022ರ ನಡುವೆ ಖಾಸಗಿ ಶಾಲೆಗಳಿಗೆ ಹೋಗುವ ಗ್ರಾಮೀಣ ಮಕ್ಕಳ ಸಂಖ್ಯೆಯು 35%ರಿಂದ ಇಳಿದು 27% ಆಗಿದೆ. ಹೀಗೆ ಆಗಿದ್ದು ಸರಕಾರಿ ಶಾಲೆಗಳ ಗುಣಮಟ್ಟ ಉತ್ತಮಗೊಂಡ ಕಾರಣಕ್ಕೇನೂ ಅಲ್ಲ. ಅದರ ಬದಲಿಗೆ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಂದೆತಾಯಿಯ ಆರ್ಥಿಕ ವ್ಯವಸ್ಥೆಯಲ್ಲಿ ಕುಸಿತ ಕಂಡಿದ್ದರಿಂದ. ಮಹಾಮಾರಿಯ ಕಾರಣದಿಂದ ಶಾಲೆಗಳು ಮುಚ್ಚಿಕೊಂಡವು ಹಾಗೂ ಹೆಚ್ಚಿನ ಜನರ ಗಳಿಕೆಯ ಮೇಲೆ ಪೆಟ್ಟುಬಿತ್ತು; ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ತಂದೆತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಅವರನ್ನು ಸರಕಾರಿ ಶಾಲೆಗಳಿಗೆ ಸೇರಿಸಿದರು.

ಗ್ರಾಮೀಣ ಭಾರತದಲ್ಲಿ ಶಿಕ್ಷಣಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಹಸಿವು, ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕ, ಆದರೆ ಸಾಮಾನ್ಯ ಜನರಿಗೆ ಅಲಭ್ಯವಾಗುತ್ತಿರುವ ಸಂಪನ್ಮೂಲಗಳು ಹಾಗೂ ಸರಕಾರಿ ಶಾಲೆಗಳ ವ್ಯವಸ್ಥೆ ನಿರಂತರವಾಗಿ ಹಿನ್ನೆಡೆ ಕಾಣುತ್ತಿರುವ ಈ ಸಮಯದಲ್ಲಿ, ಶಿಕ್ಷಣದ ಗುಣಮಟ್ಟದಲ್ಲಿ ದಾಖಲಾದ ಕುಸಿತವು ಒಂದು ದೊಡ್ಡ ರಾಷ್ಟ್ರೀಯ ವಿಪತ್ತಿನ ಕಡೆ ಕೈತೋರಿಸುತ್ತದೆ. ಮುಂದಿನ 5 ವರ್ಷಗಳ ತನಕ ದೇಶದ ಶಾಲಾ ಶಿಕ್ಷಣ ಏಕಮೇವ ಮಿಷನ್ ಆಗಿರಬೇಕಾಗಿದೆ. ಅದು ಈ ಹೊಡೆತದ ಪರಿಣಾಮವನ್ನು ತಗ್ಗಿಸಿ, ಗ್ರಾಮೀಣ ಮತ್ತು ನಗರದ ಬಡವರ ಒಂದು ಇಡೀ ತಲೆಮಾರಿಗೆ ಈ ನಷ್ಟದಿಂದ ಕಾಪಾಡಬೇಕಿದೆ. ಇಲ್ಲವಾದರೆ ಇದರ ಪೆಟ್ಟು ಒಂದು ಶಾಶ್ವತ ದುರಂತವಾಗಿ ಬದಲಾಗಬಹುದು.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dont consider the report or study of Pratham organization. This is a fake study.
    This is only coocked data to fetch money from abroad and from governments.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...