Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ'

ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

"ಕಾಮಾಚಾರವೆಲ್ಲ ವಾಮಾಚಾರವಲ್ಲ, ವೇದಾಂತಿಗಳೆಲ್ಲ ಸುಭಗರಲ್ಲ. ಮುಚ್ಚಿಟ್ಟ ಚಿಂದಿಗಳು; ಮುಚ್ಚಿಟ್ಟ ದುರ್ನಾತಗಳು. ಎಷ್ಟು ದಿನ ಈ ನಾಟಕ! ಒಂದಲ್ಲ ಒಂದು ದಿನ ಎಲ್ಲ ಬಯಲಾಗಬೇಕು" ಎನ್ನುವ ಬನ್ನಂಜೆ ಕಾಮವನ್ನು ಹತ್ತಿಕ್ಕಲು ಪ್ರಯತ್ನಿಸುವ ಮನುಷ್ಯನ ಪ್ರಯತ್ನವೇ ಒಂದು ನಿಷ್ಫಲದ ಸಾಹಸವೆನ್ನುತ್ತಾರೆ. ಸಾಮಾನ್ಯ ಮತ್ತು ಸಹಜ ಕ್ರಿಯೆಯಾಗಿರುವ ಈ ಲೈಂಗಿಕಾಸಕ್ತಿ ಮತ್ತು ಲಿಂಗಶಕ್ತಿಗಳನ್ನು ಉಪನಿಷತ್ತು ಮತ್ತು ವೇದಗಳಲ್ಲಿ ಪ್ರಕಟಗೊಂಡಿರುವ ಬಗೆಗಳನ್ನು ಬಿಚ್ಚಿಡುತ್ತಾರೆ.

- Advertisement -
- Advertisement -

ಸಂಭೋಗ ಅಂದತಕ್ಷಣ ಸುಭಗರಂತೆ ಮೂಗು ಮುರಿಯುವ ಸಂಪ್ರದಾಯವಾದಿಗಳಿಗೆ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ ಪುಸ್ತಕದ ಪುಟಪುಟಗಳಲ್ಲಿ ಮೈ ಚಳಿ ಬಿಡಿಸುತ್ತಾ ಹೋಗುತ್ತಾರೆ. “ಹೆಣ್ಣಿನ ಮುಂದೆಯೂ ವೇದಾಂತ ಬಿಚ್ಚುವವರು ವೇದಾಂತದ ಒಳಗೂ ಹೆಣ್ಣನ್ನೇ ಹುಡುಕುತ್ತಿರುತ್ತಾರೆ. ಒಳಗೊಂದು ಹೊರಗೊಂದು ಆದವರು ಮಡಿವಂತ ವೇದಾಂತಿಗಳಾಗಿ ನೆಲದಲ್ಲೆ ಕುಪ್ಪಳಿಸುತ್ತಾರೆ” ಎಂದು ವಿಡಂಬಿಸುವ ಬನ್ನಂಜೆ, ಕೃತಿಯುದ್ದಕ್ಕೂ ವೇದ ಮತ್ತು ಇತರ ಪ್ರಾಚೀನ ಗ್ರಂಥಗಳ ಆಧಾರದಿಂದಲೇ ಲೈಂಗಿಕತೆಯ ವಿವಿಧ ವಿಸ್ತಾರಗಳನ್ನು ಪ್ರಸ್ತುತಪಡಿಸುತ್ತಾ ಹೋಗುತ್ತಾರೆ. ವಿಮರ್ಶೆ ಮತ್ತು ವಿಡಂಬನೆಗಳು ಗುಪ್ತಗಾಮಿಯಾಗಿದ್ದು ವಿಷಯ ಪ್ರಧಾನವಾಗಿ ಪ್ರಸ್ತುತವಾಗುತ್ತದೆ.

“ಕಾಮಾಚಾರವೆಲ್ಲ ವಾಮಾಚಾರವಲ್ಲ, ವೇದಾಂತಿಗಳೆಲ್ಲ ಸುಭಗರಲ್ಲ. ಮುಚ್ಚಿಟ್ಟ ಚಿಂದಿಗಳು; ಮುಚ್ಚಿಟ್ಟ ದುರ್ನಾತಗಳು. ಎಷ್ಟು ದಿನ ಈ ನಾಟಕ! ಒಂದಲ್ಲ ಒಂದು ದಿನ ಎಲ್ಲ ಬಯಲಾಗಬೇಕು” ಎನ್ನುವ ಬನ್ನಂಜೆ ಕಾಮವನ್ನು ಹತ್ತಿಕ್ಕಲು ಪ್ರಯತ್ನಿಸುವ ಮನುಷ್ಯನ ಪ್ರಯತ್ನವೇ ಒಂದು ನಿಷ್ಫಲದ ಸಾಹಸವೆನ್ನುತ್ತಾರೆ. ಸಾಮಾನ್ಯ ಮತ್ತು ಸಹಜ ಕ್ರಿಯೆಯಾಗಿರುವ ಈ ಲೈಂಗಿಕಾಸಕ್ತಿ ಮತ್ತು ಲಿಂಗಶಕ್ತಿಗಳನ್ನು ಉಪನಿಷತ್ತು ಮತ್ತು ವೇದಗಳಲ್ಲಿ ಪ್ರಕಟಗೊಂಡಿರುವ ಬಗೆಗಳನ್ನು ಬಿಚ್ಚಿಡುತ್ತಾರೆ.

“ಗಂಡಿಗಾಗಿ ಗಂಡನ್ನು ಹೆಣ್ಣು ಪ್ರೀತಿಸುವುದಿಲ್ಲ. ಹೆಣ್ಣಿಗಾಗಿ ಹೆಣ್ಣನ್ನು ಗಂಡು ಪ್ರೀತಿಸುವುದಿಲ್ಲ. ತನ್ನ ಕಾಮಪೂರ್ತಿಗಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ತನ್ನ ಕಾಮಪೂರ್ತಿಗಾಗಿಯೇ ಮನುಷ್ಯ ಎಲ್ಲವನ್ನೂ ಪ್ರೀತಿಸುತ್ತಾನೆ” ಎಂದು ಬೃಹದಾರಣ್ಯಕೋಪನಿಷತ್ತಿನ (4.5) ಶ್ಲೋಕವು ಸಿಗ್ಮಂಡ್ ಫ್ರಾಯ್ಡನ ಪ್ರಾಚೀನ ಸೊಲ್ಲಿನಂತೆ ಹಿಂಧ್ವನಿಸುತ್ತದೆ.

ಕಾಮ ಎನ್ನುವುದು ಹೆಣ್ಣು ಗಂಡಿನ ಸಂಬಂಧಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ಬಗೆಯ ಬದುಕಿನ ಬಯಕೆಯೂ ಕಾಮ. ಎಲ್ಲ ಇಂದ್ರಿಯಗಳ ಬಯಕೆಯೂ ಕಾಮ. ಈ ಎಲ್ಲ ಬಯಕೆಗಳಿಗೆ ಎಲ್ಲಿ ಸಾಫಲ್ಯವೋ ಅದೇ ಕಾಮದ ಗೌರೀಶಂಕರ ಎನ್ನುವ ಬನ್ನಂಜೆ ಹಿಂದೆ ಹೆಣ್ಣಿಗಿದ್ದ ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಮಾಹಿತಿಗಳನ್ನು ನೀಡುತ್ತಾರೆ. ಶೀಲ ಮತ್ತು ಅಶ್ಲೀಲವೆಂಬುದೇ ಮನುಷ್ಯನ ಸಂಕುಚಿತ ಮಾನಸಿಕ ಅವಸ್ಥೆಗಳಿಂದ ಹುಟ್ಟಿರುವುದು. ಮನುಷ್ಯ ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವ ಸ್ವಾರ್ಥದಿಂದ ಹೇಗೆ ನಾನಾ ಬಗೆಯ ತಂತ್ರಗಳನ್ನು ಹೂಡುತ್ತಾನೋ ಹಾಗೆಯೇ ತನ್ನ ಲೈಂಗಿಕಾಭಿಲಾಷೆಯನ್ನು ಪೂರೈಸಿಕೊಳ್ಳಲು ಯತ್ನಿಸಿದಾಗ ಅಕ್ರಮಿಯಾಗಿಬಿಡುತ್ತಾನೆ. ಹಾಗಾಗಲು ಕಾರಣಗಳೋ ಹಲವು. ಹೆಣ್ಣಿಗೆ ಪಾತಿವ್ರತ್ಯದ ಮೌಲ್ಯವನ್ನು ಎತ್ತಿ ಹಿಡಿಯಲು ಗಂಡುಸಂತತಿಗಳು ಹೆಣಗಾಡಿದ್ದೇ ತಮ್ಮ ದೌರ್ಬಲ್ಯ ಮತ್ತು ಅಸೂಯೆಗಳನ್ನು ಮರೆಮಾಚಲು. ಹಾಗೆಯೇ ಅವುಗಳಷ್ಟೇ ಪಾತಿವ್ರತ್ಯವೆಂಬ ಮೌಲ್ಯದ ಹಿಂದಿನ ಕಾರಣಗಳೂ ಕೂಡಾ. ಆ ಮೂಲಕ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಲೈಂಗಿಕ ತೃಷೆಯಲ್ಲಿ ಅಗ್ನಿಯಾಗಿರುವ ಹೆಣ್ಣನ್ನು ತಣಿಸಲು ತನ್ನ ತುಪ್ಪವಾಗಿಸಿಕೊಂಡು ಸುರಿಯುವ ಪುರುಷತ್ವವು ಟುಸ್ಸ್ ಆದರೂ ಅವಳು ಮತ್ತೊಂದು ಪುರುಷನಿಂದ ತಣಿದುಬಿಟ್ಟು ತನ್ನ ಕಡೆಗಣಿಸಿಬಿಟ್ಟಾಳೆಂದು ಅವನ ಪುರುಷಾಧಿಕ್ಯದ ಅಹಂಕಾರವನ್ನು ಬೆದರಿಸುತ್ತಿತ್ತು. ಈ ಹೆದರಿಕೆಯನ್ನು ದರ್ಪವನ್ನಾಗಿಸಿಕೊಂಡ ಗಂಡು ಹೆಣ್ಣಿಗೆ ಶೀಲ, ಪಾತಿವ್ರತ್ಯ, ಪತಿಯೇ ಪರದೈವ; ಹೀಗೆ ಅನೇಕಾನೇಕ ಅನೈಸರ್ಗಿಕವಾದ ನೈತಿಕ ಮೌಲ್ಯಗಳಿಂದ ಅವಳನ್ನು ಬಂಧಿಸಿ ವಿಧೇಯವಾಗಿರಿಸಲು ಯತ್ನಿಸಿದ. ಅಂಜುಕುಳಿಯು ಅಬ್ಬರಿಸುವುದು ಶೂರತ್ವದಂತೆ ಕಾಣುವುದು ದೂರದಿಂದ.

ಹೆಣ್ಣಿನ ಲೈಂಗಿಕ ತೃಷೆಯೆಂಬ ಅಗ್ನಿಯ ಬಗ್ಗೆ ಮಾತು ಹಾಗಿರಲಿ, ಕಾಮವಾದರೂ ಏನು? ಭಗವಂತನ ತೆಕ್ಕೆಯಲ್ಲಿ ಹಾಯಾಗಿ ಮಲಗಿದ ಜೀವದಂತೆ. ಬೃಹದಾರಣ್ಯಕೋಪನಿಷತ್ತಿನಲ್ಲಿ (6.3.21) ಹೇಳುವಂತೆ ಮೆಚ್ಚಿದ ಹೆಣ್ಣಿನ ತೆಕ್ಕೆಯಲ್ಲಿ ಮೈಮರೆತು ಮಲಗಿದವನಿಗೆ ಹೊರಗಿನ ಮತ್ತು ಒಳಗಿನ ಪರಿವೆಯು ಇರುವುದಿಲ್ಲ. ನಿದ್ದೆಯಲ್ಲಿ ಭಗವಂತನ ತೆಕ್ಕೆಯಲ್ಲಿ ಹಾಯಾಗಿ ಮಲಗಿದ ಜೀವನೂ ಹಾಗೆಯೇ. ಅದು ಕೇವಲ ಆನಂದದ ಅನುಭೂತಿಯ ಸ್ಥಿತಿ; ಎಂದು ಕಾಮ ನೀಡುವ ಸುವಿಶ್ರಾಂತ ಸ್ಥಿತಿಗಳನ್ನು ಅನೇಕ ಉಲ್ಲೇಖಗಳಿಂದ ಬನ್ನಂಜೆ ವಿವರಿಸುತ್ತಾರೆ.

“ಸಂಗವನ್ನು ಬಯಸಿ ಹಾಸಿಗೆಗೆ ಬಂದ ಯಾವ ಹೆಣ್ಣನ್ನೂ ನಿರಾಶೆಗೊಳಿಸಬಾರದು. ವಾಮದೇವ ಯಜ್ಞದಲ್ಲಿ ದೀಕ್ಷಿತರಾದವರಿಗೆ ಇದೊಂದು ಪುಣ್ಯಕಾರ್ಯ ಎನ್ನುತ್ತಾ ಛಂದೋಗ್ಯೋಪನಿಷತ್ತಿನ (2.13.2) ಭಾಗವೊಂದನ್ನು ವಿವರಿಸುವಾಗ ಗಮನಿಸಬೇಕಾದ ಅಂಶವೆಂದರೆ ಬಲಾತ್ಕಾರವನ್ನು ನಿರಾಕರಿಸುವುದು. ಬಯಸಿ ಬಂದ ಹೆಣ್ಣನ್ನು ನಿರಾಕರಿಸಬಾರದು, ಅವಳ ಬಯಕೆಯನ್ನು ಈಡೇರಿಸುವುದೇ ಒಂದು ಮಹಾಯಜ್ಞ ಎನ್ನುವ ಉಪನಿಷತ್ತು ಅತ್ಯಾಚಾರವನ್ನು ಪುರಸ್ಕರಿಸುವುದಿಲ್ಲ. ಬದಲಾಗಿ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಗಂಡು ಬಲಾತ್ಕರಿಸಬಾರದು. “ಹೆಣ್ಣು ಯಾವನೇ ಒಬ್ಬನ ಖಾಸಗಿ ಸೊತ್ತಲ್ಲ ಎನ್ನುವ ಪ್ರಾಚೀನ ಕಾಮಶಾಸ್ತ್ರ ರಚನಾಕಾರ ಯಶೋಧರಾ “ಅವಳೊಡನೆ ಜಗಳವಾಡಬೇಡ. ಅವಳಲ್ಲೇ ಮುಳುಗಿರಲೂ ಬೇಡ. ರಮಿಸಿ ಖುಷಿಪಡು, ಖುಷಿ ಕೊಡು” ಎಂದು ಕಿವಿಮಾತು ಹೇಳುತ್ತಾನಂತೆ.

PC : Prajavani, (ಬನ್ನಂಜೆ ಗೋವಿಂದಾಚಾರ್ಯ)

ಒಟ್ಟಾರೆ ಪ್ರಾಚೀನರು ಹೇಳುವಂತೆ ಹೆಣ್ಣಿಗೆ ಯಾವುದೇ ನಿರ್ಬಂಧ ಸಲ್ಲದು. ಆದರೆ ಮಕ್ಕಳಾಗಲಿ ಆಗದಿರಲಿ, ಸುಖ ಸಿಗಲಿ, ಸಿಗದಿರಲಿ, ಹೆಣ್ಣಿಗೆ ತಾಳಿ ಕಟ್ಟಿದ ಗಂಡೇ ಪರದೈವ ಎನ್ನುವುದು ಅಂಜುಕುಳಿ ಗಂಡಸರು ಅಸೂಯೆಯಿಂದ ಮಾಡಿರುವ ಕಟ್ಟುಪಾಡುಗಳು. ಪ್ರಾಚೀನ ಭಾರತದಲ್ಲಿ ತನ್ನ ಗಂಡನಿಂದ ಮಕ್ಕಳಾಗದಿದ್ದರೆ ನಿಯೋಗ ಪದ್ಧತಿಯಲ್ಲಿ ಅವಳು ತನ್ನ ತಾಯ್ತನವನ್ನು ಪೂರೈಸಿಕೊಳ್ಳಬಹುದಿತ್ತು. ಮಹಾಭಾರತ ಮತ್ತು ರಾಮಾಯಣದಲ್ಲಿ ಮಂತ್ರದಿಂದ ಮತ್ತು ಪಾಯಸದಿಂದ ಹುಟ್ಟಿದವರೆಲ್ಲಾ ಹೀಗೇ ಅಲ್ಲವೇ!

ಲೈಂಗಿಕಾಂಗಗಳ ಗಾತ್ರ ಮತ್ತು ಅದರ ಪುಷ್ಟೀಕರಣದ ವಿಷಯವಾಗಿ ಹಲವಾರು ಉಲ್ಲೇಖಗಳನ್ನು ನೀಡುವ ಬನ್ನಂಜೆ ಹೀಗೆ ಹೇಳುತ್ತಾರೆ: “ಮನಸ್ಸಿನಲ್ಲಿ ಕಾಮದ ಭಾವನೆ ಮೂಡಿದರೆ ಅದನ್ನು ಹೇಳಿ ಕೈ ತೊಳೆದುಕೊಂಡುಬಿಡಬೇಕು. ಅದನ್ನು ಉಲ್ಲೇಖಿಸದೇಬಿಟ್ಟರೆ ಅದು ಒಳಗಿಂದೊಳಗೆ ಬೆಳೆದು ಕೊನೆಗೊಮ್ಮೆ ವಿನಾಶಕಾರಿಯಾಗಿ ಸ್ಫೋಟಗೊಳ್ಳಬಹುದು. ಕ್ಯಾನ್ಸರಿನಂತೆ ಒಳಗೆಯೇ ಹಬ್ಬಿ ವ್ಯಕ್ತಿತ್ವವನ್ನು ನಾಶಮಾಡಬಹುದು. ಅಪ್ಪ ಅದುಮಿಟ್ಟ ಕಾಮ ಮಗನಲ್ಲಿ, ಮೊಮ್ಮಗನಲ್ಲಿ ಅತಿಕಾಮವಾಗಿ ಮತ್ತೊಮ್ಮೆ ಪುಟಿದೇಳಬಹುದು. ಮನಸ್ಸನ್ನು ಮಡಿಯಾಗಿಡುವುದೆಂದರೆ ಕೆಟ್ಟ ಭಾವನೆಗಳನ್ನು ಮನಸ್ಸಿನೊಳಗೆ ಅದುಮಿ ಹಿಡಿಯುವುದಲ್ಲ. ಹೊರಕ್ಕೆ ಬಿಡುವುದು.”

ಸಮಾಜದಲ್ಲಿ ಅತ್ಯಾಚಾರಿಗಳು ರೂಪುಗೊಳ್ಳುವ ಬಗೆಯನ್ನು ಈಗ ನಾವು ಆಲೋಚಿಸಬಹುದು. ಲೈಂಗಿಕ ಶಿಕ್ಷಣವೆಂದರೆ ಇದೆಯೇ. ತನ್ನದೇ ಲೈಂಗಿಕಾಂಗಗಳ ಬಗ್ಗೆ ತಾನು ತಿಳಿದುಕೊಂಡು, ಅದರ ಕುರಿತಾದ ವಿಚಾರಗಳನ್ನು ಮುಕ್ತವಾಗಿ ಮೂಗು ಮುಸುಡಿಯ ಬಗ್ಗೆ ಮಾತಾಡುವಂತೆ ವಿಷಯವನ್ನು ಹಂಚಿಕೊಳ್ಳುವುದು. ಆಗ ಅದು ಬಚ್ಚಿಟ್ಟುಕೊಂಡು ಕೊಳೆತು ಗಲೀಜಾಗಿ ಹೊರಗೊಮ್ಮೆ ಚಿಮ್ಮುವುದಿಲ್ಲ. ಆರೋಗ್ಯಕರವಾದ ಬದುಕಿಗೆ ಆರೋಗ್ಯಕವಾದ ಲೈಂಗಿಕತೆಯೂ ಕಾರಣವಾಗುತ್ತದೆ. ಪ್ರಾಚೀನ ಭಾರತದಲ್ಲಿ ಲೈಂಗಿಕ ಶಿಕ್ಷಣವನ್ನು ಪ್ರತಿಪಾದಿಸಿರುವ ರೀತಿಗಳನ್ನು ಬನ್ನಂಜೆ ಉಲ್ಲೇಖಿಸುತ್ತಾರೆ.

“ಚಂದದ ಅಪ್ಸರೆಯರ ಹುಳು ತಲೆಗೆ ಹೊಕ್ಕಾಗ ಋಷಿಗಳು ಮೊದಲು ಅವರನ್ನು ಭೋಗಿಸಿ ಮತ್ತೆ ತಪಸ್ಸಿಗೆ ಹೊರಡುತ್ತಿದ್ದರು. ಇಲ್ಲವಾದರೆ ತಪಸ್ಸಿನ ಉದ್ದಕ್ಕು ಅಪ್ಸರೆಯರೆ ಕಂಡಾರು. ಮೊದಲು ತಲೆ ಖಾಲಿಯಾಗಬೇಕು. ಆಮೇಲೆ ತಪಸ್ಸಿಗೆ ಕೂಡಬೇಕು.”

ಯಜುರ್ವೇದದಲ್ಲಿ ಅಶ್ಲೀಲ ಭಾಷಣವೊಂದು ಈ ಕಾಲದ ಯಾವ ಪೋಲಿ ಪೋಕರಿಯ ಮಾತಿಗೂ ಕಡಿಮೆಯಿಲ್ಲದಂತೆ ಸಂಸ್ಕೃತದಲ್ಲಿ ಉಲಿಯುತ್ತದೆ.

ಕರ್ನಾಟಕದ ಪಶ್ಚಿಮ ಕರಾವಳಿ, ಗುಜರಾತ್, ಆಂದ್ರಪ್ರದೇಶವೂ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ಮಂತ್ರಿಮಾಗಧರು ತಮ್ಮ ಹೆಂಡಂದಿರನ್ನು ರಾತ್ರಿಯ ಹೊತ್ತು ರಾಜನ ಆರೈಕೆಗೆಂದು ಅಂತಃಪುರಕ್ಕೆ ಕಳಿಸುತ್ತಿದ್ದರು. ಅಷ್ಟೇ ಅಲ್ಲ. ಮದುವೆಯಾದ ಹತ್ತನೆಯ ದಿವಸ ಗಂಡನ ಜತೆಗೆ ಪ್ರಸ್ತಕ್ಕೆ ಕೂಡುವ ಮುನ್ನ, ರಾಜ್ಯದ ಹುಡುಗಿಯರು ರಾಜನಿಗೆ ಉಡುಗೊರೆಯಾಗಿ ಒಪ್ಪಿಸಲು ಅಂತಃಪುರಕ್ಕೆ ಹೋಗಬೇಕಾಗಿತ್ತು. ಇದು ಪ್ರಭುತ್ವದಲ್ಲಿರುವ ಪುರುಷರು ಅಥವಾ ಶ್ರೀಮಂತ ಲಂಪಟರು ಹೆಣ್ಣನ್ನು ಶೋಷಿಸಿದ ರೀತಿಯಾದರೆ, ರಾಣಿಯರಿಗೆ ಚಾಕರಿಯ ಹುಡುಗಿಯರು ಚೆಂದದ ಹುಡುಗರನ್ನು ಬೇಟೆಯಾಡಿ ತಂದು ಅವರ ಶಯನ ಗೃಹಕ್ಕೆ ಬಿಡುತ್ತಿದ್ದರು. ಅಂತಃಪುರದ ಕಾವಲಿಗಿರುವವರು ರಾಣಿಯರು ಸೇರುತ್ತಿದ್ದರು. ಪೇಟೆಯ ಹುಡುಗರಿಗೆ ಹೆಣ್ಣಿನ ವೇಶ ತೊಡಿಸಿ ತಂದೊಪ್ಪಿಸುತ್ತಿದ್ದರು. ಹೀಗೆ ರಾಣಿಯರೂ ಗುಪ್ತವಾಗಿ ತಮ್ಮ ರಾಜರ ದರ್ಬಾರಿಗೆ ಸೆಡ್ಡೊಡೆಯುತ್ತಿದ್ದರು.

ಲೈಂಗಿಕ ವಾಂಛೆಯ ಸುತ್ತ ಇರುವ ಪ್ರಾಚೀನ ಭಾರತದ ವಿಚಿತ್ರ ಸಂಪ್ರದಾಯಗಳನ್ನು ಕೆದಕುತ್ತಾ ಬೆದಕುತ್ತಾ ತಮ್ಮ ಸನಾತನ ಶಾಸ್ತ್ರಗಳು ಶ್ರೇಷ್ಠ ಮತ್ತು ಪವಿತ್ರ ಎಂದು ಕೊಚ್ಚಿಕೊಳ್ಳುತ್ತಾ ಶೀಲ ಅಶ್ಲೀಲಗಳೆಂದು ಪಾಶ್ಚಾತ್ಯರ ಮುಕ್ತತೆಯನ್ನು ಹೀಯಾಳಿಸುವವರಿಗೆ ಚುರುಕು ಮುಟ್ಟಿಸುತ್ತಾರೆ ಬನ್ನಂಜೆ ಗೋವಿಂದಾಚಾರ್ಯರು.

ಹೆಣ್ಣು, ಹೊನ್ನು ಮತ್ತು ಮಣ್ಣು ಎಂದು ಹೆಣ್ಣನ್ನು ಭೋಗದ ಮತ್ತು ಅಧೀನಕ್ಕೊಳಪಡಿಸುವ ವಸ್ತುವನ್ನಾಗಿ ಸಂಕುಚಿಸಿದ ಪುರುಷಧರ್ಮಿಗಳು ಮಾಡಿಕೊಂಡಿರುವ ಎಡವಟ್ಟುಗಳನ್ನು ಅನಾವರಣ ಮಾಡುವ ಕೃತಿಯು ಪ್ರಾಚೀನ ವೇಶ್ಯೆಯರ ಕಲೆ ಮತ್ತು ಕಸುಬಿನ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಏನೆಲ್ಲಾ ಲೈಂಗಿಕ ಮುಕ್ತತೆಯ ಬಗ್ಗೆ ಶಾಸ್ತ್ರಗಳು ವಿವರಿಸಿದರೂ ರಚಿಸಿದವರು ಪುರುಷರೇ ಆದ್ದರಿಂದ ಹೆಣ್ಣು ಒಂದು ಭೋಗದ ಮತ್ತು ಸುಖ ನೀಡುವ ವಸ್ತುವನ್ನಾಗಿಯೇ ನೋಡುವುದು. ಆದರೆ ವ್ಯತ್ಯಾಸವೆಂದರೆ ಬಲಾತ್ಕಾರ ಮತ್ತು ಹಿಂಸೆಗಳನ್ನು ಅನುಮೋದಿಸದೇ ಒಲಿಸಿಕೊಳ್ಳುವ ದಿಕ್ಕಿನಲ್ಲಿ ಬೆತ್ತಲಾಗಿ ತೆರೆದುಕೊಂಡು ಬಿದ್ದುಕೊಳ್ಳುತ್ತದೆ.


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಮಸ್ಕಾರಗಳು
    ಭಾರತೀಯ ಸಮಾಜದಲ್ಲಿ ಕಾಮಶಾಸ್ತ್ರ ಈ ಪುಸ್ತಕದ ಪ್ರಕಾಶಕರು ಯಾರು ತಿಳಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...