Homeಮುಖಪುಟಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

ಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

- Advertisement -
- Advertisement -

ಕನ್ನಡದ ಪ್ರಜ್ಞೆಯನ್ನು ಕಾಡಿ, ಕದಡಿ, ತಲೆಮಾರುಗಳನ್ನೇ ಜೀವಪರ ಮೌಲ್ಯಗಳಿಗೆ ಒಗ್ಗಿಸಲು ತಮ್ಮ ಬರವಣಿಗೆ ಮತ್ತು ಪತ್ರಿಕೋದ್ಯಮದ ಮೂಲಕ ಪ್ರಯತ್ನಿಸಿದ ಪಿ. ಲಂಕೇಶ್ ಅವರ ಮಗಳಾದ್ದರಿಂದಲೋ ಏನೋ ಗೌರಿ ಲಂಕೇಶ್ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡರು. ಕನ್ನಡ ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿದ್ದ ಅಪ್ಪನ ಪ್ರಭಾವ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಿದ್ದರೂ, ಇಂಗ್ಲಿಷ್ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು ತನ್ನ ಸ್ವಂತಿಕೆಯ ಕಾರಣಕ್ಕೇ ಆಗಿತ್ತು. ಆ ಕಾಲಕ್ಕೆ ವಿದೇಶದಲ್ಲಿ, ದೇಶದ ಹಲವೆಡೆ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದ ಗೌರಿ ತಾಯ್ನಾಡಿಗೆ ಬರುವಷ್ಟರಲ್ಲಿ ಕನ್ನಡನಾಡು ಲಂಕೇಶರ ಪ್ರತಿಭೆಯಿಂದ ಸಾಕಷ್ಟು ಪ್ರಭಾವಕ್ಕೆ ಒಳಪಟ್ಟಿತ್ತು. ಆದರೆ, ಅಷ್ಟರಲ್ಲಿ ಲಂಕೇಶ್ ಭೌತಿಕವಾಗಿ ವೇದಿಕೆಯಿಂದ ನಿರ್ಗಮಿಸಿದ್ದರು. ಒಂದಿಡೀ ತಲೆಮಾರಿನ ಪ್ರಜ್ಞೆಯ ಜೊತೆಗೇ ಹೊಂದಿಕೊಂಡಿದ್ದ, ಆ ಪ್ರಜ್ಞೆಯನ್ನು ಆರೋಗ್ಯಕರವಾಗಿ ರೂಪಿಸಲು ಶ್ರಮಿಸುತ್ತಿದ್ದ ’ಲಂಕೇಶ್ ಪತ್ರಿಕೆ’ಯ ಹೊಣೆ ಗೌರಿ ಲಂಕೇಶರ ಹೆಗಲಿಗೆ ಬಿದ್ದಾಗ, ಆ ಜವಾಬ್ದಾರಿ ಕೇವಲ ಒಂದು ಪತ್ರಿಕೆಯನ್ನು ನಡೆಸುವುದಷ್ಟೇ ಅಲ್ಲ ಎಂಬ ಅರಿವು ಅವರಿಗಿತ್ತು. ಈ ಜವಾಬ್ದಾರಿಯನ್ನು ಅವರು ಕೋಮುವಾದದ ವಿರುದ್ಧದ ಸಕ್ರಿಯ ಹೋರಾಟದ ಮೂಲಕ ವಿಸ್ತರಿಸಿಕೊಂಡು ಸಾಗಿದರು.

ಕುಟುಂಬದ ಹಿರಿಯ ಮಗಳಾದ್ದರಿಂದ ಕೆಲವು ಸಂಕಷ್ಟಗಳೂ ಎದುರಾದವು. ’ಲಂಕೇಶ್ ಪತ್ರಿಕೆ’ಯನ್ನು ’ಗೌರಿ ಲಂಕೇಶ್ ವಾರ ಪತ್ರಿಕೆ’ಯನ್ನಾಗಿ ಬದಲಿಸಬೇಕಾಯಿತು. ಇಡೀ ಪತ್ರಿಕೆಯನ್ನು ಕೋಮುವಾದದ ವಿರುದ್ಧದ ಪ್ರಜ್ಞಾವಾಹಿನಿಯಾಗಿ ಬದಲಿಸಿದರು. ಟೀಕೆ, ಮೆಚ್ಚುಗೆಗಳ ಜೊತೆಗೆ ಹಳಬರ ನಿರ್ಗಮನ ಹೊಸಬರ ಆಗಮನಗಳಿಂದ ಗೌರಿ ಲಂಕೇಶ್ ’ಗೌರಿ’ಯಾಗುತ್ತಾ ಸಾಗಿದರು ಮತ್ತು ಅದೇ ದಾರಿಯಲ್ಲಿ ಹಠಾತ್ತನೆ ನಿರ್ಗಮಿಸಿದರು. ಅವರು ನಿರ್ಗಮಿಸುವಂತಹ ವಿಷಮ ವಾತಾವರಣ ಆಗಲೇ ಈ ನಾಡಿನಲ್ಲಿ ನಿರ್ಮಾಣವಾಗಿತ್ತು. ಅದರ ವಿರುದ್ಧದ ಅವರ ಹೋರಾಟದ ಕಾರಣಕ್ಕಾಗಿಯೇ, ಆ ವಿಷಮ ವಾತಾವರಣವನ್ನು ನಿರ್ಮಿಸಿದವರು ಅವರನ್ನು ಭೌತಿಕವಾಗಿ ಇಲ್ಲವಾಗಿಸಿದರು.

ಲಂಕೇಶರು ತೀರಿಹೋದಾಗಿನಿಂದ ಗೌರಿ ಅವರ ಬೆನ್ನಿಗೆ ನಿಂತ ಅವರ ತಂಗಿ ಕವಿತಾ ಲಂಕೇಶ್ ’ಗೌರಿ ಪ್ರಜ್ಞೆ’ಯನ್ನು ಈಗ ಪ್ರಪಂಚದಾದ್ಯಂತ ಹೊತ್ತು ಸಾಗುತ್ತಿದ್ದಾರೆ; ಇದು ಗೌರಿಯವರ ಹೋರಾಟದ ಮುಂದುವರಿಕೆಯೇ ಆಗಿದೆ. ಅದರ ಭಾಗವಾಗಿಯೇ ಕವಿತಾ ಅವರು ನಿರ್ದೇಶಿಸಿರುವ ’ಗೌರಿ’ ಸಾಕ್ಷ್ಯಚಿತ್ರ ಮೂಡಿಬಂದಿದೆ. ಇಡೀ ಚಿತ್ರ ಗೌರಿ ಲಂಕೇಶರ ಹೋರಾಟದ ಮತ್ತು ಪತ್ರಿಕೋದ್ಯಮದ ಬದುಕಿನ ಎಳೆಗಳನ್ನು ಹೆಣೆಯುವುದರಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ನೋಡುವವರಿಗೆ, ಪತ್ರಕರ್ತರಿಗಿರಬೇಕಾದ ಸಾಮಾಜಿಕ ಹೊಣೆಯ ಚಿತ್ರಣ ಹಾಗೂ ಕನ್ನಡ ಪ್ರಜ್ಞೆಯಂತಹ ಆದಿಮ ಪ್ರತಿಭಟನಾತ್ಮಕ ಧಾರೆಯು ಫ್ಯಾಸಿಸ್ಟ್ ಶಕ್ತಿಯ ವಿರುದ್ಧ ಹೇಗೆ ನಿಲ್ಲಬೇಕೆಂಬ ಮಾದರಿ ಸಿಗುತ್ತದೆ. ಅಲ್ಲದೆ, ಒಂದು ಚಳವಳಿ ಯಾವುದೆಲ್ಲವನ್ನು ಒಳಗೊಳ್ಳಬೇಕು ಹಾಗೂ ಆ ಮೂಲಕ ಜನಾಭಿಪ್ರಾಯವನ್ನು ಹೋರಾಟದ ಶಕ್ತಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬ ಅರಿವು ದಕ್ಕುತ್ತದೆ.

ಗೌರಿ ಇಲ್ಲವಾಗಿ ಐದು ವರ್ಷಗಳು ಸಂದುಹೋಗಿವೆ. ಅದರ ಜೊತೆಗೆ ಜಗತ್ತಿನ ಇತಿಹಾಸದಲ್ಲಿ ಅಳಿದು ಹೋದ ಫ್ಯಾಸಿಸ್ಟ್ ಶಕ್ತಿಗಳನ್ನೂ ಮೀರಿಸುವ ಕ್ರೌರ್ಯ ನಮ್ಮ ನೆಲದಲ್ಲಿ ಚಿಗುರೊಡೆದು ವರ್ಷಗಳಾಗಿವೆ. ಈ ಕ್ರೌರ್ಯವನ್ನು ಕನ್ನಡ ಪ್ರಜ್ಞೆ ಒಂದು ಎಚ್ಚರವಾಗಿ ಎದುರಿಸಬೇಕಿರುವುದನ್ನು ’ಗೌರಿ’ ಸಿನಿಮಾ ನೆನಪಿಸಿ ಸಾಕ್ಷೀಕರಿಸುತ್ತದೆ. ಗೌರಿಯವರು ಪತ್ರಿಕೆ ವಹಿಸಿಕೊಂಡ ದಿನದಿಂದ ಅವರು ಒಡನಾಡಿದ, ಹೋರಾಟಗಳನ್ನು ದಾಖಲಿಸಲಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಕೋಮುವಾದದ ವಿರುದ್ಧ ನಡೆದ ಮೂರು ದಶಕಗಳ ಹೋರಾಟವನ್ನು ಸಾಕ್ಷ್ಯಚಿತ್ರ ದಾಖಲಿಸುತ್ತದೆ. ಈ ದಾಖಲೆಯಲ್ಲಿ ಸಾಹಿತಿಗಳು, ಹೋರಾಟಗಾರರು, ಕಲಾವಿದರು ಮೊದಲಾಗಿ ಗೌರಿಯವರ ಒಡನಾಡಿಗಳೆಲ್ಲ ಕಾಣಸಿಗುತ್ತಾರೆ.

ಇದನ್ನೂ ಓದಿ: ‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”

ಗೌರಿ ಲಂಕೇಶರನ್ನು ಕಂಡರೇ ನಡುಗುತ್ತಿದ್ದ ಸಂಘ ಪರಿವಾರದವರ ಮೈ ಪರಚಿಕೊಳ್ಳುವ ಭಾಷಣಗಳ ಫುಟೇಜ್‌ಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ಗೌರಿಯನ್ನು ಸುಟ್ಟೆವೆಂದು ಹರ್ಷಾಚರಣೆ ಮಾಡಿದ ಮುಠ್ಠಾಳರಿಗೆ ಈ ಮೂಲಕ ಲಕ್ಷಾಂತರ ಗೌರಿಯರ ಬದುಕು ನಿದ್ದೆಗೆಡಿಸುತ್ತದೆ. ಅವರನ್ನು ಕೊಂದಾಗ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಗ್ರೌಂಡಿಗೆ “ನಾನೂ ಗೌರಿ ನಾವೆಲ್ಲಾ ಗೌರಿ” ಎಂದು ಎದೆ ತಟ್ಟಿಕೊಳ್ಳುತ್ತಾ ಹರಿದು ಬಂದ ಜನಸಾಗರದ ದೃಶ್ಯಗಳಂತೂ ಗೌರಿ ಸಿನಿಮಾದ ಮುಖ್ಯ ಭಾಗ. ಆ ದಿನ ಬೆಂಗಳೂರಿನಲ್ಲಿ ಮೊಳಗಿದ ಘೋಷಣೆಗಳು ಆನಂತರದ ದಿನಗಳಲ್ಲಿ ಪ್ರತಿರೋಧದ ಶಕ್ತಿಯಾಗಿ ದೇಶಾದ್ಯಂತ ಪಸರಿಸಿದ ಹೋರಾಟದ ಕಿಚ್ಚನ್ನೂ ಸಿನಿಮಾದಲ್ಲಿ ಪ್ರಾತಿನಿಧಿಕವಾಗಿ ಒಳಗೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಕರ್ನಾಟಕದಲ್ಲಿ ನನ್ನಂತಹ ಹೊಸತಲೆಮಾರಿನ ಯುವಜನರಿಗಂತೂ ಕೋಮುವಾದವನ್ನು, ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸಲೇಬೇಕಾದ ಪಾಠಗಳನ್ನು ಆ ’ನಾನೂ ಗೌರಿ’ ಸಮಾವೇಶ ನೀಡಿತು.

ಗೌರಿ ಅವರ ಜೊತೆಗೆ ಒಡನಾಡಿದ ಕೆಲವು ಪ್ರಮುಖ ವ್ಯಕ್ತಿಗಳನ್ನು ಸಿನಿಮಾಗಾಗಿ ಮಾತನಾಡಿಸಲಾಗಿದೆ. ಅದರಲ್ಲಿ ಕವಿತಾ ಅವರ ಮಗಳು ಇಶಾ ಮಾತುಗಳು ಹೆಚ್ಚು ಆರ್ದ್ರವಾಗಿ ಮೂಡಿಬಂದಿವೆ. ಸಾವಿನ ದಿನಗಳಲ್ಲಿ ಗೌರಿಯವರ ಪ್ರೀತಿಯಲ್ಲಿ ಮಿಂದಿದ್ದ ನೂರಾರು ಯುವಜನರ ಕಣ್ಣುಗಳ ಹನಿಗಳನ್ನು ಇಶಾ ಮಾತಾಗಿಸಿದ್ದಾರೆ. ಕೆ.ಷರೀಫಾ ಅವರ ಒಡನಾಟದ ನೆನಪು ಗೌರಿಯವರ ಎಲ್ಲಾ ಒಡನಾಡಿಗಳ ನೆನಪಾಗಿ ನೋಡುಗರ ಎದೆಯೊಳಗೆ ಪಲ್ಲವಿಸುತ್ತದೆ.

ಇನ್ನು ಕೋಮು ಸೌಹಾರ್ದ ವೇದಿಕೆಯ ಪ್ರತಿಭಟನೆಗಳು, ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಶನದಲ್ಲಿ ಗೌರಿ ಅವರು ಮಾತನಾಡಲು ಹೋದಾಗ ಅಲ್ಲಿ ಅವರಿಗೆ ಎದುರಾದ ವಿರೋಧವನ್ನು ಚಂದ್ರಶೇಖರ ಪಾಟೀಲರು ಛಲಬಿಡದೆ ನಿಭಾಯಿಸಿದ್ದು, ದಿಡ್ಡಳ್ಳಿ ಹೋರಾಟದಲ್ಲಿ ಭೂಮಿ ವಸತಿ ವಂಚಿತರಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದು ಈ ಎಲ್ಲಾ ವಿವರಗಳೂ ಪತ್ರಕರ್ತೆಯಾಗಿದ್ದ ಗೌರಿಯವರು ಹೋರಾಟಗಾರ್ತಿ ಪತ್ರಕರ್ತೆಯಾಗಿ ರೂಪುಗೊಂಡ ಪ್ರಕ್ರಿಯೆಯನ್ನು ಮಂಡಿಸುತ್ತವೆ.

ಪಶ್ಚಿಮಘಟ್ಟದ ಕಾಡುಗಳಲ್ಲಿ ಇಳಿದು ಸಾಕೇತ್ ರಾಜನ್ ಅವರನ್ನು ಸಂದರ್ಶನ ಮಾಡಿದ ವಿವರಗಳಂತೂ ಮೈಜುಮ್ಮೆನ್ನಿಸುತ್ತವೆ. ಕನ್ನಡ ಪತ್ರಿಕೋದ್ಯಮದಲ್ಲಿ ಮರೆವಿಗೆ ಸಂದಿದ್ದ ಸಾಹಸದ ಆಕ್ಟಿವಿಸ್ಟ್ ಪತ್ರಿಕೋದ್ಯಮ ಗೌರಿಯವರಿಂದ ಮುನ್ನಲೆಗೆ ಬರುತ್ತದೆ. ನಕ್ಸಲ್ ಹೋರಾಟಗಳಲ್ಲಿದ್ದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜರವರನ್ನು ಸಮಾಜದ ಮುಖ್ಯವಾಹಿನಿಗೆ ತಂದದ್ದು ಮುಖ್ಯ ಸಾಹಸಗಳಲ್ಲೊಂದು.

ಭಾರತದ ಯುವ ಪ್ರಜ್ಞೆಗಳಾದ ಜಿಗ್ನೇಶ್ ಮೆವಾನಿ, ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್ ಮತ್ತು ಉಮರ್ ಖಾಲಿದ್ ಅವರನ್ನು ಗೌರಿ ಅವರು ಹಚ್ಚಿಕೊಂಡಿದ್ದು ಮತ್ತು ಅವರೂ ಗೌರಿಯವರನ್ನು ತಾಯಿಯಂತೆ ಭಾವಿಸುತ್ತಿದ್ದುದು ಕರ್ನಾಟಕದ ಹೋರಾಟಗಾರ ಯುವಜನತೆಗೆ ಸ್ಫೂರ್ತಿಯಾಗಿತ್ತು. ಸಿನಿಮಾ ಅದನ್ನೂ ದಾಖಲಿಸಿದೆ.

ಬಹಳ ಶ್ರಮವಹಿಸಿ ಕವಿತಾ ಅವರು ’ಗೌರಿ’ ಸಿನಿಮಾ ಕಟ್ಟಿದ್ದಾರೆ. ಆದರೆ, ನನ್ನ ತಿಳಿವಿನ ಮಿತಿಯಲ್ಲಿ ಸಿನಿಮಾ ಒಳಗೊಳ್ಳಬೇಕಿದ್ದ ಇನ್ನೂ ಕೆಲವು ಅಂಶಗಳಿದ್ದವು; ಗೌರಿಯವರನ್ನು ಆತುಕೊಂಡ ದಲಿತ ಹೋರಾಟಗಾರರ-ಹೋರಾಟಗಳ ವಿವರಗಳು, ಚಲೋ ಉಡುಪಿ ಜಾಥಾ ಹಾಗೂ ಸಮಾವೇಶ, ಅವರೇ ಜಿಗ್ನೇಶ್ ಜೊತೆ ನಿಂತು ಕಂಬನಿ ತುಂಬಿದ ಕಣ್ಣುಗಳಿಂದಲೇ ಭಾಗವಹಿಸಿದ ಚಲೋ ತುಮಕೂರು, ಹಗಲು ರಾತ್ರಿ ಫ್ರೀಡಂ ಪಾರ್ಕಿನ ಹುಲ್ಲುಹಾಸಿನ ಮೇಲೆ ಕೂತು ಶ್ರಮವಹಿಸಿ ನಡೆಸಿದ ಬೆಂಗಳೂರು ಚಲೋ ಹೋರಾಟಗಳ ವಿವರಗಳನ್ನು ಸಿನಿಮಾ ಒಳಗೊಂಡಿದ್ದರೆ ಗೌರಿಯ ವ್ಯಕ್ತಿತ್ವದ ವಿಸ್ತೃತ ಹರವನ್ನು ದಾಖಲಿಸಿದಂತಾಗುತ್ತಿತ್ತು. ಹಾಗೂ ಗೌರಿಯವರು ಒಡನಾಟ ಇಟ್ಟುಕೊಂಡಿದ್ದ ಹಲವು ಬಗೆಯ ಪ್ರಗತಿಪರ ಸಂಘಟನೆಗಳ ಚಿತ್ರಣವೂ ಅದಾಗುತ್ತಿತ್ತು.

ಈ ಸಣ್ಣಪುಟ್ಟ ಕೊರತೆಗಳೊಂದಿಗೆಯೇ ಕವಿತಾ ಲಂಕೇಶ್ ರೂಪಿಸಿದ ’ಗೌರಿ’ ಎಲ್ಲರೂ ನೋಡಲೇಬೇಕಾದ ಸಿನಿಮಾ.

ಅಶ್ವಿನಿ ಬೋಧ್

ಅಶ್ವಿನಿ ಬೋಧ್
ಕನ್ನಡ ಉಪನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...