Homeನ್ಯಾಯ ಪಥಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

ಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

- Advertisement -
- Advertisement -

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಹೈದರಾಬಾದ್‍ನ ಪಶುವೈದ್ಯೆ ‘ದಿಶಾ’ರ ಅತ್ಯಾಚಾರ ಮತ್ತು ಕೊಲೆ ಇಡೀ ದೇಶದ ಆತ್ಮಸಾಕ್ಷಿಯನ್ನು ಅಲುಗಾಡಿಸಿಬಿಟ್ಟಿದೆ. ಚಿಂತಕುಂಟ ಚನ್ನಕೇಶವುಲು, ಜೊಲ್ಲು ಶಿವ, ಮಹಮದ್ ಆರಿಫ್ ಮತ್ತು ಜೊಲ್ಲುನವೀನ್ ಎಂಬ ನಾಲ್ವರು ಶಾದ್‍ನಗರದಲ್ಲಿ ನವೆಂಬರ್ 27ರಂದು ದಿಶಾಗೆ ನೆರವು ನೀಡುವ ನೆಪದಲ್ಲಿ ಅಪಹರಿಸಿ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಉಸಿರುಗಟ್ಟಿಸಿ ಕೊಂದು, ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ದೇಶದಲ್ಲಿ ದಿನನಿತ್ಯ ನೂರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ಕೆಲವು ಘಟನೆಗಳ ಭೀಕರತೆ ಇಡೀ ದೇಶದ ಗಮನ ಸೆಳೆಯುತ್ತವೆ, ಜನಾಕ್ರೋಶಕ್ಕೆ ಕಾರಣವಾಗುತ್ತವೆ. ದಿಶಾ ಪ್ರಕರಣದ ಭೀಕರತೆ ಇಡೀ ನಾಗರಿಕ ಪ್ರಪಂಚವನ್ನು ಅಲುಗಾಡಿಸಿಬಿಟ್ಟಿದೆ. ದೆಹಲಿಯ ನಿರ್ಭಯಾ ಪ್ರಕರಣ, ಕಥುವಾದ ಆಸಿಫಾ ಪ್ರಕರಣಗಳು ನಡೆದಾಗಲೂ ಇದೇ ರೀತಿಯ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.

ದಿಶಾ ಕೊಲೆಗಡುಕರಿಗೆ ನಡುರಸ್ತೆಯಲ್ಲಿ ನೇಣು ಹಾಕಬೇಕು, ಕಲ್ಲು ಹೊಡೆದು ಸಾಯಿಸಬೇಕು, ಬೆಂಕಿ ಹಚ್ಚಿ ಕೊಲ್ಲಬೇಕು, ಮರ್ಮಾಂಗವನ್ನು ಕತ್ತರಿಸಬೇಕು ಎಂದು ಸಾಮಾನ್ಯ ಜನರು ಅಭಿಪ್ರಾಯಪಡುತ್ತಿದ್ದಾರೆ. ಈ ತರದ ಯಾವುದೇ ಶಿಕ್ಷಾವಿಧಾನ ನಮ್ಮಲ್ಲಿಲ್ಲ. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಜನರ ಆಕ್ರೋಶ ದಿನೇದಿನೇ ಹೆಚ್ಚುತ್ತಲಿದೆ ಮತ್ತು ಅತ್ಯಾಚಾರದಂಥ ಪ್ರಕರಣಗಳನ್ನು ಸರ್ಕಾರ ಮತ್ತು ನ್ಯಾಯವ್ಯವಸ್ಥೆ ನಿರ್ವಹಿಸುತ್ತಿರುವ ಸ್ಥಿತಿಯ ಕುರಿತು ಅವರಿಗೆ ತೀವ್ರವಾದ ಅಸಮಾಧಾನವಿದೆ.

ದಿಶಾ ಸಾವು ಹೀಗೆ ದೇಶವನ್ನು ಕಂಗೆಡಿಸಿದ್ದರೆ, ಕೆಲವು ಅಮಾನವೀಯ ಮತ್ತು ಲಜ್ಜೆಗೇಡಿ ಶಕ್ತಿಗಳು ತಮ್ಮ ಹುನ್ನಾಕ್ಕೆ ಬಳಸಿಕೊಳ್ಳಲು ಅನುವಾದರು. ಇವು ಹೆಣ ಬೀಳುವುದನ್ನೇ ಕಾಯುವ ರಣಹದ್ದುಗಳು. ಇವರಿಗೆ ನೈತಿಕತೆಯ ಯಾವ ಗಡಿಗುರುತುಗಳು ಇಲ್ಲ, ಮಾನವೀಯತೆಯೆಂಬುದರ ಅರ್ಥವೂ ತಿಳಿದಿಲ್ಲ. ಅವರಿಗೆ ತಮ್ಮ ಅಜೆಂಡಾಗಳು ಕಾರ್ಯರೂಪಕ್ಕೆ ಬರಬೇಕು ಅಷ್ಟೆ.

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಇದಕ್ಕಿಂತ ಹೀನ ಆಲೋಚನೆಯೂ ಈ ಟ್ವೀಟ್ ಹಿಂದೆ ಕೆಲಸ ಮಾಡಿದೆ. ಮಹಮದ್ ಆರಿಫ್ ಎಂಬ ಆರೋಪಿಯ ಪೂರ್ಣ ಹೆಸರು ಬರೆಯದೆ ಮಹಮದ್ ಎಂದಷ್ಟೇ ಬರೆಯಲಾಗಿದೆ. ಈ ಮೂಲಕ ಮುಸ್ಲಿಮರನ್ನು ಕೆರಳಿಸುವುದು, ಅವರ ಉದ್ದೇಶ. ಆದರೆ ಅವರ ಲೆಕ್ಕಾಚಾರ ತಪ್ಪಿಹೋಯಿತು. ಈ ಕುಚೇಷ್ಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವತ್ರಿಕ ಟೀಕೆ ವ್ಯಕ್ತವಾಯಿತು.

ಅತ್ಯಾಚಾರವಾಗಿರುವುದು ನಿಜ, ಎಲ್ಲರಿಗೂ ತಮ್ಮ ಸಿಟ್ಟು ತೋಡಿಕೊಳ್ಳುವ ಹಕ್ಕು ಇದೆ. ಆದರೆ ಸೂಲಿಬೆಲೆಯವರಿಗೆ ಯಾಕೆ ಈ ಸೆಲೆಕ್ಟಿವ್ ಸಿಟ್ಟು? ಆರಿಫ್ ಹೊರತುಪಡಿಸಿ ಇನ್ನುಳಿದ ಮೂವರ ಮೇಲೆ ಯಾಕೆ ಮಮಕಾರ? ಆರಿಫ್‍ನನ್ನು ನೇಣಿಗೇರಿಸಬೇಕು, ಉಳಿದ ಶಿವ, ನವೀನ, ಚನ್ನಕೇಶವರನ್ನು ಏನು ಮಾಡಬೇಕು? ಇದೇ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. ಉಳಿದ ಮೂವರು ರೇಪಿಸ್ಟರನ್ನು ನಿಮ್ಮ ನಮೋ ಬ್ರಿಗೇಡ್‍ಗೆ ಸೇರಿಸಿಕೊಳ್ಳುತ್ತೀರಾ ಸೂಲಿಬೆಲೆಯವರೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆ ಮೂವರು ನಿಮ್ಮ ರಕ್ತಸಂಬಂಧಿಗಳಿರಬಹುದು, ಅದಕ್ಕೆ ಅವರಿಗೆ ನೇಣುಶಿಕ್ಷೆ ಕೇಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಇದು ಸೂಲಿಬೆಲೆ ಒಬ್ಬಾತನ ಪ್ರಶ್ನೆಯಲ್ಲ. ಇದೇ ಥರ ಯೋಚಿಸುವ ಹಿಂಡುಹಿಂಡೇ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ದಿಶಾ ಅತ್ಯಾಚಾರ-ಕೊಲೆ ನಡೆದಿರುವುದು ಶಾದ್‍ನಗರದಲ್ಲಿ ಎಂದು ಗೊತ್ತಾಗುತ್ತಿದ್ದಂತೆ ಅದು ಮುಸ್ಲಿಂ ಬಾಹುಳ್ಯದ ಪ್ರದೇಶ, ಅದಕ್ಕೆ ರೇಪ್ ನಡೆದಿದೆ ಎಂದು ಕೆಲವರು ಬರೆದುಕೊಂಡರು. ಪೋಸ್ಟ್ ಕಾರ್ಡ್ ಎಂಬ ದ್ವೇಷಜನಕರು ಆರೋಪಿಗಳಲ್ಲಿ ಒಬ್ಬನಾದ ಜೊಲ್ಲು ನವೀನನ ಹೆಸರನ್ನು ಬೇಕೆಂದೇ ಅನ್ವರ್ ನವೀನ್ ಎಂದು ತಿದ್ದಿ ಪೋಸ್ಟ್ ಗಳನ್ನು ಹಾಕಿದರು.

ಬಲಪಂಥೀಯ ಪೇಜ್‍ಗಳಲ್ಲಿ ಮಹಮದ್ ಆರಿಫ್ ಮತ್ತು ಮೂವರು ಸಂಗಡಿಗರು ಎಂದೇ ಬರೆಯಲಾಯಿತು, ಉಳಿದ ಮೂವರ ಹೆಸರುಗಳನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡಲಾಯಿತು. ಸಾರ್ವಜನಿಕರ ಆಕ್ರೋಶವೆಲ್ಲ ಒಂದು ಸಮುದಾಯದ ಮೇಲೆ ಕೇಂದ್ರೀಕರಣವಾಗಲಿ ಎಂಬುದು ಇವರೆಲ್ಲರ ಸ್ಪಷ್ಟ ಹುನ್ನಾರವಾಗಿತ್ತು.  ಎಷ್ಟೋ ಬಾರಿ ಈ ತಂಡಗಳು ಜನರನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದವು, ಆದರೆ ಈ ಬಾರಿ ಹಾಗೆ ಆಗಲಿಲ್ಲ. ದಿಶಾ ಪ್ರಕರಣವನ್ನು ಮುಸ್ಲಿಮರ ಮೇಲಿನ ದ್ವೇಷಕ್ಕೆ ಬಳಸಿಕೊಳ್ಳುವ ಇವರ ದುಷ್ಟಯತ್ನ ವಿಫಲವಾಗಿದ್ದಷ್ಟೇ ಅಲ್ಲ, ತಾವೇ ಸಾರ್ವಜನಿಕ ನಿಂದನೆಗೆ ಗುರಿಯಾಗುವಂತೆ ಆಯಿತು. ಸ್ವತಃ ಚಕ್ರವರ್ತಿ ಸೂಲಿಬೆಲೆಯವರ ಅನುಯಾಯಿಗಳೇ ಈ ಬಾರಿ ತಿರುಗಿಬಿದ್ದು ಪ್ರಶ್ನಿಸತೊಡಗಿದರು.

ಚಕ್ರವರ್ತಿ ಸೂಲಿಬೆಲೆಯನ್ನು ಚಿಂತಕ, ವಾಗ್ಮಿ ಇತ್ಯಾದಿ ಹೆಸರಿನಿಂದ ಗುರುತಿಸಲಾಗುತ್ತದೆ.ಯಾವಾಗ ನರೇಂದ್ರ ಮೋದಿ ಭಾರತ ರಾಜಕಾರಣದ ಮುಖ್ಯಭೂಮಿಕೆಗೆ ಬಂದರೋ, ಆಗ ಸೂಲಿಬೆಲೆಯಂಥ ಪೇಯ್ಡ್ ಭಾಷಣಕಾರರ ಅಗತ್ಯವಿತ್ತು. ಸೂಲಿಬೆಲೆ ತಡಮಾಡದೆ ನಮೋ ಬ್ರಿಗೇಡ್ ಕಟ್ಟಿದರು. ಊರೂರು ಸುತ್ತಿದರು. ನರೇಂದ್ರ ಮೋದಿ ಚಹಾ ಮಾರುತ್ತಿದ್ದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು. ದೇಶದ ಸೈನಿಕರಿಗೆ ಬಾಲನರೇಂದ್ರ ಪುಕ್ಕಟೆಯಾಗಿ ಚಹಾ ನೀಡಿದ್ದರಿಂದ ಹಿಡಿದು, ಹಿಮಾಲಯದಲ್ಲಿ ತಪಸ್ಸು ಮಾಡಲು ಹೋದ ಅನುಭವಗಳವರೆಗೆ ಸ್ವತಃ ನರೇಂದ್ರ ಮೋದಿಯವರೇ ನಾಚಿಕೊಳ್ಳುವಂತೆ ಕಥೆಗಳನ್ನು ಕಟ್ಟಿ ಹೇಳತೊಡಗಿದರು. ಆಗ ಹುಟ್ಟಿಕೊಂಡಿದ್ದೇ ಸೂಲಿಬೆಲೆ-ಗುರುಮೂರ್ತಿ ಜೋಡಿಯ ಚಿನ್ನದ ರಸ್ತೆಯ ಥಿಯರಿಗಳು.

ಬರೀ ಅಷ್ಟೇ ಆಗಿದ್ದರೆ ಪರವಾಗಿಲ್ಲ. ಮುಸ್ಲಿಂ ದ್ವೇಷವನ್ನು ಹಬ್ಬಿಸುವುದನ್ನೇ ಕಾಯಕವಾಗಿಸಿಕೊಂಡರು.  ಪೋಸ್ಟ್ ಕಾರ್ಡ್ ಪೇಜ್‍ಗಳನ್ನು ಗಮನಿಸಿ. ಅದರ ತುಂಬೆಲ್ಲ ಮುಸ್ಲಿಂ ದ್ವೇಷದ ಪೋಸ್ಟ್ ರುಗಳು, ಬರಹಗಳೇ ಕಣ್ಣಿಗೆ ರಾಚುತ್ತವೆ. ಮುಸ್ಲಿಂ ಸಮುದಾಯದ ಹೆಸರಿನವರು ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಕಾಣಿಸಿಕೊಂಡರೆ ಇವರಿಗೆ ಹಬ್ಬ. ಹುಡುಹುಡುಕಿ ಅಂಥವನ್ನು ತಂದು ಪ್ರಚೋದನೆಯ ಧಾಟಿಯಲ್ಲಿ ಬರೆಯಲಾಯಿತು. ಸೂಲಿಬೆಲೆಯಂಥವರ ಬಾಯಿಗಳಿಗೆ ಬಿಡುವಿಲ್ಲದ ಕೆಲಸ. ಅರ್ನಾಬ್ ಗೋಸ್ವಾಮಿಯಂಥ ಪೇಯ್ಡ್ ಪತ್ರಕರ್ತರ ಪ್ರೈಂ ಟೈಮ್ ಡಿಬೇಟುಗಳಿಗೆ ಬೇರೆ ವಿಷಯಗಳೇ ಬೇಡವಾದವು.

ದಿಶಾ ಪ್ರಕರಣದಲ್ಲೂ ಇದನ್ನೇ ಮಾಡಲು ಹೋಗಿ ಚಕ್ರವರ್ತಿ ಸೂಲಿಬೆಲೆ ಸಿಕ್ಕಿಬಿದ್ದಿದ್ದಾರೆ. ಸೂಲಿಬೆಲೆಯವರೇ, ನೀವು ನಿಜವಾದ ಹಿಂದುತ್ವವಾದಿಯಾಗಿದ್ದರೆ, ದೇವಸ್ಥಾನದ ಆಸ್ತಿ ಉಳಿಸಲು ಹೊರಟ ಮಂಗಳೂರಿನ ವಿನಾಯಕ ಬಾಳಿಗರ ಕೊಲೆಗಡುಕರ ಬೆಂಬಲಕ್ಕೆ ನಿಲ್ಲುತ್ತಿರಲಿಲ್ಲ ಎಂದು ಅವರ ಅಭಿಮಾನಿಗಳೇ ವಿಡಿಯೋ ಮಾಡಿ ಜಾಡಿಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ, ಸತ್ತ ವ್ಯಕ್ತಿ ಹಿಂದೂವಾಗಿದ್ದರಿಂದ ಸಂಸದ (ಹಾಲಿ ಬಿಜೆಪಿಯ ರಾಜ್ಯ ಅಧ್ಯಕ್ಷ) ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೊಲೆಯನ್ನು ಮುಸ್ಲಿಮರೇ ಮಾಡಿದ್ದೆಂದು ಸಾರಿದ ಕಟೀಲ್ ಇದರಿಂದ ಮಂಗಳೂರಿಗೆ ಬೆಂಕಿ ಹಚ್ಚಿ ಉರಿಸಲಾಗುತ್ತದೆ ಎಂದು ಗುಡುಗಿದರು. ನಂತರ ಕೊಲೆಗಾರ್ತಿ ಮೃತ ವ್ಯಕ್ತಿಯ ತಂಗಿ ಮತ್ತು ಕಟೀಲ್ ನೇತೃತ್ವದ ಪ್ರತಿಭಟನೆಯಲ್ಲೇ ಪಾಲ್ಗೊಂಡಿದ್ದಳು ಎಂದು ಪೊಲೀಸರು ಬಂಧಿಸಿದರು! ಇಂತಹ ಹತ್ತಾರು ಪ್ರಕರಣಗಳು ಕೇವಲ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿ ನಡೆದಿವೆ. ಅದೇ ಸಂದರ್ಭದಲ್ಲಿ ಭೀಕರವಾದ ಕೊಲೆ ಅಥವಾ ಅತ್ಯಾಚಾರಕ್ಕೊಳಗಾದ ವ್ಯಕ್ತಿಗಳು ಮುಸ್ಲಿಮರಾಗಿದ್ದರೆ ಈ ಪರಿವಾರವು ಉಸಿರೆತ್ತುವುದೇ ಇಲ್ಲ. ಬದಲಿಗೆ ಕಥುವಾ ಪ್ರಕರಣದಲ್ಲಿ ಅತ್ಯಂತ ಭೀಕರವಾದ ಅತ್ಯಾಚಾರಕ್ಕೊಳಗಾದ ಬಾಲೆಯ ಪ್ರಕರಣದ ಆರೋಪಿಗಳ ಪರ ಧರ್ಮರಕ್ಷಕರು ನಿಂತಿದ್ದರು! ಇನ್ನೂ ಹೇಳಬೇಕೆಂದರೆ, ಹಿಂದೂ ಪುರುಷರಿಂದ ಹಿಂದೂ ಹುಡುಗಿಯರು ಅತ್ಯಾಚಾರಕ್ಕೆ ಒಳಗಾದಾಗಲೂ ಅದಿವರಿಗೆ ಸಮಸ್ಯೆಯೂ ಅಲ್ಲ, ದನಿಯೇಳುವುದು ಇಲ್ಲ.

ಸೂ.ರಂ. ರಾಮಯ್ಯನವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಸೂಲಿಬೆಲೆ ಗ್ರಾಮ ಹೊಸಕೋಟೆ ತಾಲೂಕಿನ ವಿಶಿಷ್ಟ ಹಳ್ಳಿ. ಮಿಥುನ್ ಚಕ್ರವರ್ತಿ ಎಂಬ ವಿಕೃತ ವ್ಯಕ್ತಿಯ ಅನ್ವರ್ಥವಾಗಿ ಅದು ಬಳಕೆಯಲ್ಲಿರುವುದರಿಂದ ಗುರುತಿಗಾಗಿ ಬಳಸಿದ್ದೇವೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಅದು ಏನು ಅಂತ ಸುದ್ದಿ ಮಾಡ್ತಿರ್ರಿ ಅದು ದಿಶಾ ಅಲ್ಲ ಪ್ರಿಯಾಂಕಾ ರೆಡ್ಡಿ, ಅದು ಸರಿಯಾಗಿ ಗೊತ್ತಿಲ್ಲ , ನೀವು ಮತ್ತೊಬ್ಬರ ಬಗ್ಗೆ ಹೇಳ್ತೀರಾ?

    • ಭಾರತದ ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ತೆಯ ಮೂಲ ಹೆಸರು, ಫೋಟೊ ಇತ್ಯಾದಿಗಳನ್ನು ಪ್ರಕಟಿಸಬಾರದು. ಹಾಗಾಗಿ ಹೆಸರು ಬದಲಿಸಿದ್ದೇವೆ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...