Homeಚಳವಳಿರಾಜಸ್ಥಾನದಲ್ಲಿ ಜಾತಿ ದೌರ್ಜನ್ಯದ ವಿರುದ್ದ ’ಆಪರೇಷನ್ ಸಮಾನತಾ’: ದಲಿತರ ಮದುವೆಯಲ್ಲಿ ಕುದುರೆ ಸವಾರಿಗೆ ಆಡಳಿತದ ಸಾಥ್!

ರಾಜಸ್ಥಾನದಲ್ಲಿ ಜಾತಿ ದೌರ್ಜನ್ಯದ ವಿರುದ್ದ ’ಆಪರೇಷನ್ ಸಮಾನತಾ’: ದಲಿತರ ಮದುವೆಯಲ್ಲಿ ಕುದುರೆ ಸವಾರಿಗೆ ಆಡಳಿತದ ಸಾಥ್!

ಆಪರೇಷನ್ ಸಮಂತ ಆರಂಭವಾದಾಗಿನಿಂದ ಹತ್ತಕ್ಕೂ ಹೆಚ್ಚು ದಲಿತರ ವಿವಾಹಗಳು ಶಾಂತಿಯುತವಾಗಿ ನಡೆದಿವೆ- ಪೊಲೀಸ್ ವರಿಷ್ಠಾಧಿಕಾರಿ

- Advertisement -
- Advertisement -

ಜಾತಿ ದೌರ್ಜನ್ಯ, ಜಾತಿಯ ಅಡೆತಡೆಗಳನ್ನು ಮುರಿದು, ರಾಜಸ್ಥಾನದ ದಲಿತ ಯುವಕರೊಬ್ಬರು ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ದಲಿತರು ಕುದುರೆ ಸವಾರಿ ಮಾಡಬಾರದು ಎಂದು ಮೇಲ್ಜಾತಿಯವರ ನಿರ್ಬಂಧವನ್ನು ಧಿಕ್ಕರಿಸಿರುವ ಅವರು ಕುದುರೆ ಸವಾರಿ ಮಾಡುವುದೂ ನಮ್ಮ ಹಕ್ಕು ಎಂದಿದ್ದಾರೆ. ಅವರ ಈ ಪ್ರಯತ್ನಕ್ಕೆ ಆಡಳಿತವು ಬೆಂಬಲ ನೀಡಿದೆ.

ದಲಿತರು ತಮ್ಮ ಮದುವೆಯಲ್ಲಿ ಕುದುರೆ ಮೇಲೆ ಸವಾರಿ ಮಾಡದಂತೆ ಮೇಲ್ಜಾತಿಯವರು ತಡೆಯುವುದು. ತಡೆದು ಹಲ್ಲೆ ನಡೆಸಿರುವ ಘಟನೆಗಳು ಸಾಕಷ್ಟು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಜಾತಿ ತಾರತಮ್ಯವನ್ನು ಮೀರಿ, ಅಂಚಿಗೆ ತಳ್ಳಲ್ಪಟ್ಟ ಜನರಿಗೆ ಅವರ ಹಕ್ಕುಗಳನ್ನು ಮರಳಿ ತರಲು ಬುಂದಿ ಜಿಲ್ಲೆಯಲ್ಲಿ ಪೋಲೀಸ್ ಮತ್ತು ಸ್ಥಳೀಯ ಆಡಳಿತವು ಪ್ರಾರಂಭಿಸಿದ ‘ಆಪರೇಷನ್ ಸಮಾನತಾ (ಸಮಾನತೆ)’ ಅಭಿಯಾನವು ಈ ವಿವಾದ ಮೂಲಕ ಒಂದು ಹಂತಕ್ಕೆ ಯಶಸ್ವಿಯಾಗಿದೆ. ಆ ಅಭಿಯಾನವು ದಲಿತ ಯುವಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ದಲಿತರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು. ಆ ಮೂಲಕ ತಮ್ಮ ಮದುವೆಯನ್ನು ಘನತೆಯಿಂದ ಮಾಡಿಕೊಳ್ಳಲು ಈ ಅಭಿಯಾನವು ಅನುವು ಮಾಡಿಕೊಟ್ಟಿದೆ. ಹಳ್ಳಿಗಳಲ್ಲಿನ ಪ್ರಭಾವಿ ಜನರನ್ನು ತಮ್ಮ ಸಹ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮನವೊಲಿಸುವಲ್ಲಿಯೂ ಈ ಅಭಿಯಾನ ಜಿಲ್ಲೆಯ ಕೆಲವೆಡೆ ಯಶಸ್ವಿಯಾಗಿದೆ.

ಬುಂಡಿ ಜಿಲ್ಲೆಯ ಚಾಡಿ ಗ್ರಾಮದಲ್ಲಿ 27 ವರ್ಷದ ಶ್ರೀರಾಮ್ ಮೇಘವಾಲ್ ಅವರು ಮೇರ್ (ಕುದುರೆ) ಮೇಲೆ ಸವಾರಿ ಸೇರಿದಂತೆ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿ, ಮದುವೆಯಾದ ಮೊದಲ ದಲಿತರಾಗಿದ್ದಾರೆ. ಮೇಲ್ಜಾತಿಗೆ ಸೇರಿದವರ ಮನೆಗಳ ಹಿಂದೆ ಸಾಗಿದ ಅವರ ಮದುವೆ ಮೆರವಣಿಗೆಯು ಪೋಲೀಸ್ ಪಡೆಯ ರಕ್ಷಣೆಯಲ್ಲಿತ್ತು. ಮಕ್ಕಳು ಮತ್ತು ಮಹಿಳೆಯರು ಸಂಗೀತವನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಮೆರವಣಿಗೆಯನ್ನು ನಡೆಸಿದ್ದಾರೆ.

ನಂತರದಲ್ಲಿ, ಮನೋಜ್ ಬೈರ್ವಾ ಎಂಬುವವರು ನೀಮ್ ಕಾ ಖೇಡಾ ಗ್ರಾಮದ ಕಿರಿದಾದ ಹಾದಿಯಲ್ಲಿ ಮೇರ್ ಸವಾರಿ ಮಾಡಿ ತನ್ನ ಮದುವೆಯ ಮೆರವಣಿಗೆಯನ್ನು ನಡೆಸಿದ್ದಾರೆ. ಮೂರು ದಶಕಗಳ ಹಿಂದೆ ಆತನ ಚಿಕ್ಕಪ್ಪ ಅದೇ ಗ್ರಾಮದಲ್ಲಿ ತನ್ನ ಮದುವೆಯ ದಿನ ಕುದುರೆ (ಮೇರ್) ಸವಾರಿ ಮಾಡಲು ಮುಂದಾದಾಗ ಗ್ರಾಮದ ಮೇಲ್ಜಾತಿಯ ಜನರು ಅವರನ್ನು ಥಳಿಸಿದ್ದರು. ಇದೀಗ, ಆ ಹಳ್ಳಿಯ ದಲಿತರಲ್ಲಿ ಧೈರ್ಯ ಮತ್ತು ಮೇಲ್ಜಾತಿಯವರಲ್ಲಿ ಜಾಗೃತಿ ಬೆಳೆದಿದೆ. ಆ ಗ್ರಾಮದ ಗ್ರಾಮಸ್ಥರು ಜಾತಿ ಭೇದ ಮರೆತು ಮನೋಜ್‌ಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ.

ಸ್ಥಳೀಯ ಆಡಳಿತದ ‘ಆಪರೇಷನ್ ಸಮಾನತಾ (ಸಮಾನತೆ)’ ಅಭಿಯಾನವು ದಲಿತರ ವಿರುದ್ಧ ತಾರತಮ್ಯದ ಇತಿಹಾಸವನ್ನು ಹೊಂದಿರುವ ಗ್ರಾಮಗಳನ್ನು ಗುರುತಿಸಿ, ಆ ಹಳ್ಳಿಗಳಲ್ಲಿ ಜಾಗೃತಿಯನ್ನು ಮೂಡಿಸಲು ಯೋಜಿಸಿತ್ತು. ಅದಕ್ಕಾಗಿ, ದಲಿತ ಮತ್ತು ಉನ್ನತ ಜಾತಿಗಳಿಗೆ ಸೇರಿದ ಜನರೊಂದಿಗೆ ಸಂವಹನ ನಡೆಸಲು ‘ಸಮನತಾ ಸಮಿತಿ’ಗಳನ್ನು ನೇಮಿಸಿತ್ತು. ಈ ಸಮಿತಿಗಳ ಸದಸ್ಯರಲ್ಲಿ ಸರಪಂಚ್, ಗ್ರಾಮಾಭಿವೃದ್ಧಿ ಅಧಿಕಾರಿ, ಸ್ಟೇಷನ್ ಹೌಸ್ ಆಫೀಸರ್ ಮತ್ತು ಪ್ರತಿ ಸಮುದಾಯದ ಇಬ್ಬರು ಹಿರಿಯರು ಇರುತ್ತಾರೆ ಎಂದು ಬುಂಡಿ ಪೊಲೀಸ್ ವರಿಷ್ಠಾಧಿಕಾರಿ ಜೈ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ದಲಿತ ವರನ ಕುದುರೆ ಸವಾರಿಗೆ ಅಡ್ಡಿಪಡಿಸಿದ್ದ 9 ಜನರಿಗೆ 5 ವರ್ಷ ಜೈಲು

“ಅಭಿಯಾನವು ನಾವು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಮುದಾಯ ಬೆಂಬಲವನ್ನು ಪಡೆದುಕೊಂಡಿದೆ. ಸಾಮರಸ್ಯವನ್ನು ಸೃಷ್ಟಿಸುವ ಹಾದಿಯಲ್ಲಿ ಮೇಲ್ಜಾತಿಗೆ ಸೇರಿದ ಪ್ರಭಾವಿ ಗ್ರಾಮಸ್ಥರನ್ನು ಸದಸ್ಯರನ್ನಾಗಿ ಒಳಗೊಳ್ಳುವುದು ಅಭಿಯಾನದ ಯಶಸ್ವಿಗೆ ಮತ್ತೊಂದು ಮೆಟ್ಟಿಲಾಗಿದೆ” ಎಂದು ಯಾದವ್ ಹೇಳಿದ್ದಾರೆ.

ಸಮಿತಿಯ ಸದಸ್ಯರು ನಿಯಮಿತವಾಗಿ ದಲಿತ ಕುಟುಂಬಗಳನ್ನು ಭೇಟಿಯಾಗಿ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತಾರೆ. ನಂತರ, ಮೇಲ್ಜಾತಿಗಳಿಗೆ ಸೇರಿದ ಜನರಿಗೆ ಕಾನೂನಿನ ನಿಬಂಧನೆಗಳನ್ನು ವಿವರಿಸುತ್ತಾರೆ ಮತ್ತು ಸಾಂಪ್ರದಾಯದ ಹೆಸರಿನಲ್ಲಿ ನಡೆಸು ಆಚರಣೆಗಳನ್ನು ನಿಲ್ಲಿಸುವಂತೆ ಮನವಿ ಮಾಡುತ್ತಾರೆ ಎಂದು ಜೈ ಯಾದವ್ ವಿವರಿಸಿದ್ದಾರೆ.

ದಲಿತ ಕುಟುಂಬಗಳ ಮದುವೆಯ ಸಂದರ್ಭದಲ್ಲಿ ಯಾರಾದರೂ ತೊಂದರೆ ಕೊಡಬಹುದು ಎಂದು ಕಂಡುಬಂದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಆಪರೇಷನ್ ಸಮಾನತಾ ಆರಂಭವಾದಾಗಿನಿಂದ ಹತ್ತಕ್ಕೂ ಹೆಚ್ಚು ದಲಿತರ ವಿವಾಹ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿವೆ ಎಂದೂ ಅವರು ಮಾಹಿತಿ ಮಾಡಿದ್ದಾರೆ.

ಆದರೂ ಇತ್ತ, ಜಲಾವರ್ ಜಿಲ್ಲೆಯ ಗುರಾಡಿಯಾ ಭರ್ತಾ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ 23 ವರ್ಷದ ದಲಿತ ಯುವಕನ ಮದುವೆಯ ಮೆರವಣಿಗೆ ನಡೆಸುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಮೇಲ್ಜಾತಿಗಳಲ್ಲಿರುವ ಊಳಿಗಮಾನ್ಯ ಮನೋಭಾವವನ್ನು ಬದಲಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವವರೆಗೂ ದಲಿತರ ಮೇಲಿನ ದಾಳಿಗಳು ನಡೆಯುತ್ತಲೇ ಇರುತ್ತವೆ. ಜಲವಾರ್ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟವು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಮುಂದೆ ಅರ್ಜಿ ಸಲ್ಲಿಸಿದೆ ಎಂದು ರಾಜಸ್ಥಾನದ ಸೆಂಟರ್ ಆಫ್ ದಲಿತ್ ರೈಟ್ಸ್ (ದಲಿತ ಹಕ್ಕುಗಳ ಕೇಂದ್ರ)ದ ಸಂಚಾಲಕ ಸತೀಶ್ ಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: ರಾಜಸ್ಥಾನ: ಪೊಲೀಸ್ ರಕ್ಷಣೆಯಲ್ಲಿ ದಲಿತ ಮಧುಮಗನ ಕುದುರೆ ಸವಾರಿ – ಮೊಳಗಿದ ಜೈಭೀಮ್ ಘೋಷಣೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...