Homeಕರ್ನಾಟಕ17 ಶಾಸಕರ ಅನರ್ಹತೆ, ಡೆಮಾಕ್ರಸಿಗೆ ಘನತೆ. ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

17 ಶಾಸಕರ ಅನರ್ಹತೆ, ಡೆಮಾಕ್ರಸಿಗೆ ಘನತೆ. ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

- Advertisement -
- Advertisement -

17 > 105 ! ಮ್ಯಾಥ್ಸ್ ಆಫ್ ಡೆಮಾಕ್ರಸಿ!
17 ಶಾಸಕರ ಅನರ್ಹತೆ ಡೆಮಾಕ್ರಸಿಗೆ ಘನತೆ
ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

ರಾಜಕೀಯದಲ್ಲಿ ಒಂದು ಮಟ್ಟಿಗಿನ ನೈತಿಕತೆಯನ್ನು ಬಯಸುವ ರಾಜ್ಯದ ಜನರೆಲ್ಲ 17 ಶಾಸಕರ ಅನರ್ಹತೆಯ ಸಂಗತಿಯನ್ನು ಬೆಂಬಲಿಸಿದ್ದಾರೆ. ಅವರ ಆಶಯಕ್ಕೆ ಅನುಗುಣವಾಗಿಯೇ ಸ್ಪೀಕರ್ ಅವರ ನಿರ್ಧಾರವೂ ಬಂದಿದೆ ಅನಿಸುತ್ತಿದೆ ಎಂದು ದಿಟ್ಟವಾಗಿ ಹೇಳಲೂ ಆಗದ ಕಾಲದಲ್ಲಿ ನಾವಿದ್ದೇವೆ!

ಆದರೆ, ಒಬ್ಬ ಪ್ರಜೆಯಾಗಿ, ಮತದಾರನಾಗಿ ಹೇಳುವುದಾದರೆ ಹೊಣೆಗೇಡಿ 17 ಶಾಸಕರಿಗೆ ತಕ್ಕ ಶಾಸ್ತಿಯೇ ಆಗಿದೆ. ಹೀಗೆ ಪಾಠವು ದಿಟ್ಟವಾಗಿ ಹೇಳದೇ ಇದ್ದರೆ, ತಮ್ಮ ಮಿತಿಗಳಲ್ಲೇ ಅಂತಹ ಕ್ರಮಕ್ಕೆ ಮುಂದಾದ ಸ್ಪೀಕರ್‍ಗೆ ಅವಮಾನಿಸಿದಂತೆ.

2008ರಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್-ಎಲ್ಲವನ್ನೂ ಮಣ್ಣು ಮಾಡಿ ಅಧಿಕಾರ ಹಿಡಿಯಬಹುದು ಎಂದು ಹೊಸ ‘ಮಾದರಿ’ಯೊಂದನ್ನು ದೇಶದ ಮುಂದಿಟ್ಟ, ಆ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಅದನ್ನು ಎತ್ತಿ ಹಿಡಿಯುತ್ತಿದ್ದ ದೇಶದ ಉನ್ನತ ನ್ಯಾಯಾಲಯಗಳನ್ನೂ ಕಾಲಕಸ ಮಾಡಿದ ಕರ್ನಾಟಕ ರಾಜ್ಯದ ಬಿಜೆಪಿಯೀಗ ಅಂಥದ್ದೇ ‘ಮಾದರಿ’ಯ ಪ್ರಯೋಗದಲ್ಲಿ ಆರೂವರೆ ವರ್ಷಗಳ ನಂತರ ಅಧಿಕಾರ ಹಿಡಿದಿದೆ.

ಆದರೆ ಈ ಸಲ ಅಂತಹ ಅನೈತಿಕ ಪ್ರಯೋಗಕ್ಕೇ ಸವಾಲು ಎನಿಸುವಂತಹ ನೈತಿಕ ನಿರ್ಧಾರಗಳು ಹಲವು ಮೂಲಗಳಿಂದ ಹೊರಬಿದ್ದಿವೆ. ಮುಂದೆ ಈ ವಿಚಾರ ಸುಪ್ರೀಂ ಕೋರ್ಟಿಗೆ ಹೋಗಬಹುದು ಎಂಬ ಅರಿವಿದ್ದರೂ, ಸ್ಪೀಕರ್ ರಮೇಶಕುಮಾರ್ ಅವರು, ‘’ಅತೃಪ್ತ” ಎಂಬ ಹಣೆಪಟ್ಟಿ ಅಂಟಿಸಿಕೊಂಡು ಕ್ಷೇತ್ರ ಮತ್ತು ರಾಜ್ಯಗಳಿಂದ ಪಲಾಯನ ಮಾಡಿದ್ದ, ಸಾಂವಿಧಾನಿಕ ಮತ್ತು ಪ್ರಜಾತಾಂತ್ರಿಕ ಆಶಯಗಳನ್ನೇ ಗೇಲಿ ಮಾಡುವಂತೆ ಟಿವಿ ಚಾನೆಲ್ಲುಗಳಿಂದ ವಿಜೃಂಭಿಸಲ್ಪಡುತ್ತಿದ್ದ 17 ಹೊಣೆಗೇಡಿ ಶಾಸಕರನ್ನು ಅನರ್ಹಗೊಳಿಸುವ ಮೂಲಕ, ದೇಶದ ಎಲ್ಲೆಡೆ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿರುವ ಅಸಹ್ಯ ರಾಜಕಾರಣಕ್ಕೆ ಒಂದು ಏಟು ನೀಡಿದ್ದಾರೆ.

ಅನರ್ಹತೆ: ಮುಂದೇನು?
ಸದ್ಯ ಶೆಡ್ಯೂಲ್ 10ರ ತೀರಾ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಪರಿಗಣಿಸಿಯೇ ಸ್ಪೀಕರ್ ರಮೇಶಕುಮಾರ್ 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಸದ್ಯಕ್ಕೆ ಅವರು, ಈ ಸದನದ, 15ನೇ ಅಸೆಂಬ್ಲಿ ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸುಪ್ರೀಂ ಕೋರ್ಟು ಮೊರೆ ಹೋಗಿರುವ ಶಾಸಕರಿಗೆ ಅಲ್ಲೂ ನಿರಾಶೆ ಕಾದಂತಿದೆ. ಈ ಹಿಂದೆ, ಹೆಚ್ಚೂಕಡಿಮೆ ಇಂಥದ್ದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿನ 18 ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿತ್ತು. ಈ ಅಂತಿಮ ತೀರ್ಪು ಬರಲು ಒಂದು ವರ್ಷ ಹಿಡಿದಿತ್ತು!

ಅಸಲಿ ವಿಷಯ
ಈಗ ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಅದೀಗ ಪ್ರಜಾಸತ್ತಾತ್ಮಕ ವಿಷಯ ಎಂದು ಒಪ್ಪಿಕೊಳ್ಳಲು ಶುರು ಮಾಡಿಬಿಟ್ಟರೆ ಏನಾಗುತ್ತದೆ? ಇಲ್ಲೇನೂ ಆಗಲಿಕ್ಕಿಲ್ಲ. ಆದರೆ, ದೇಶದ ತುಂಬ ಹೀಗೇ ಪ್ರತಿಪಕ್ಷಗಳನ್ನೇ ನಾಶ ಮಾಡುವ ಅಜೆಂಡಾದೊಂದಿಗೆ ಒಂದು ದುಷ್ಟಶಕ್ತಿ ಹವಣಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಬೆಂಬಲವೂ ಇದೆ ಎಂಬುದೆಲ್ಲ ಗೊತ್ತಾದ ಮೇಲೂ, ‘ಕರ್ನಾಟಕದಲ್ಲಿ ಈಗ ವಿಶ್ವಾಸಮತ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದಿದೆ’ ಎಂದು ಒಪ್ಪಿಕೊಂಡರೆ ಅದು ಆತ್ಮವಂಚನೆಯೇ, ಅದೆಷ್ಟರ ಮಟ್ಟಿಗಿನ ಆತ್ಮವಂಚನೆ ಎಂದರೆ ಈ ದೇಶದಲ್ಲಿ ಇನ್ನೂ ಪರಿಪೂರ್ಣ ಪ್ರಜಾಪ್ರಭುತ್ವ ಜೀವಂತ ಇದೆ ಎಂದು ಹಲುಬುವ ಮನಸ್ಸುಗಳು ತಮಗೆ ತಾವೇ ದ್ರೋಹ ಬಗೆದುಕೊಂಡಂತೆ…

ಸುಪ್ರೀಂಕೋರ್ಟಿನಲ್ಲಿ 17 ‘ಅನರ್ಹ ಶಾಸಕರು’ ಅರ್ಜಿ ಸಲ್ಲಿಸುತ್ತಾರೆ. ಅಲ್ಲಿ ಗೆಲ್ಲುವುದೇ ಅವರಿಗೆ ಡೌಟು! ಆ ಕಾರಣಕ್ಕೇ ಈಗಾಗಲೇ ಕೆಲವು ಮನೆಹಾಳ ಅನರ್ಹರು ನಿವೃತ್ತಿ ಘೋಷಿಸಿದ್ದಾರೆ. ಇವರೆಲ್ಲ ತಮ್ಮ ಮಕ್ಕಳಿಗೆ ಅಥವಾ ಪತ್ನಿಗೆ ಸಚಿವ ಸ್ಥಾನ ಕೊಡಿ ಎಂದರೆ ಯಡಿಯೂರಪ್ಪ ಏನು ಮಾಡುತ್ತಾರೆ? ಕೊಡಲೇಬೇಕು ಅಲ್ಲವೇ? ಅಲ್ಲಿಗೇ ಮತ್ತೊಮ್ಮೆ ಮತ್ತೊಂದು ವಿಧದ ಆಪರೇಷನ್ ಕಮಲ ಶುರುವಾದಂತೆ!

ಈ ಸರ್ಕಾರ, ಮುಂದೇನಾಗುತ್ತೆ?
ಸರಳ ಪ್ರಶ್ನೆ. ಆರು ತಿಂಗಳು ಬೀಳಲ್ಲ. ಈಗಿನ ಕೇಂದ್ರದ ಬಲ ಮತ್ತು ಬಿಜೆಪಿಯ ಹಣಬಲ ನೋಡಿದರೆ ಬೀಳೋದೇ ಇಲ್ಲ. ಆದರೂ. ಇಲ್ಲಿ ವಿಪಕ್ಷಗಳು ಒಂದು ದೊಡ್ಡ ಹೋರಾಟಕ್ಕೆ ಅಣಿಯಾದರೆ ಸ್ವಲ್ಪ ವ್ಯತ್ಯಾಸ ಆಗಬಹುದಷ್ಟೇ. ಈ ಮೂರ್ಖರಲ್ಲಿ ಅಂತಹ ದೃಢತೆ ಇಲ್ಲವೇ ಇಲ್ಲ ಅಲ್ಲವೇ?

ಹಾಗಾಗಿ, ಈ ಸರ್ಕಾರವನ್ನು 2023ರವರೆಗೂ ಕರೆದೊಯ್ಯುವ ಜವಾಬ್ದಾರಿಯನ್ನು ಅಮಿತ್ ಶಾ ಹೊತ್ತಿದ್ದಾರೆ. ಗೋವಾದಲ್ಲಿ ಕೇವಲ 12 ಬಿಜೆಪಿ ಶಾಸಕರಿದ್ದೂ ಅಲ್ಲಿನ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ! ಇಲ್ಲೂ ಅದರ ಪ್ರಯೋಗ ಮುಂದುವರೆಯುತ್ತದೆ ಅಷ್ಟೇ!

ಮೀಡಿಯಾ: ಈಗ ವಿಪಕ್ಷ ವಿರುದ್ಧ!
ಇಲ್ಲಿ ಪ್ರಜಾಪ್ರಭುತ್ವ ಕೊಲ್ಲುವ ಕಾನೂನುಬಾಹಿರ ಕೆಲಸಗಳಿಗೆಲ್ಲ ಮಾನ್ಯತೆ ತಂದುಕೊಟ್ಟಿರುವುದೇ ಈ ಮೀಡಿಯಾ, ಅದರಲ್ಲೂ ದೃಶ್ಯ ಮೀಡಿಯಾ. ಇಲ್ಲಿವರೆಗೂ ಸರ್ಕಾರವನ್ನು ಟೀಕಿಸುತ್ತಿದ್ದ ಅವು ಇನ್ಮುಂದೆ ವಿಪಕ್ಷಗಳನ್ನು ಟೀಕಿಸಲು ಶುರು ಮಾಡಲಿವೆ!

ಇಲ್ಲಿವರೆಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ವಿಪರೀತ ಎನಿಸುವಷ್ಟು ಟೀಕೆ, ಅಪಪ್ರಚಾರ ಮಾಡತೊಡಗಿದ ಮಾಧ್ಯಮಗಳ ಕಾರ್ಯವನ್ನು ಮೆಚ್ಚೋಣ. ಮಾಧ್ಯಮ ಯಾವತ್ತಿಗೂ ವಿಪಕ್ಷ ಎಂಬ ಹಿನ್ನೆಲೆ ಇಟ್ಟುಕೊಂಡರೆ ಅದು ಸರಿಯೇ ಅನಿಸಬಹುದು. ಆದರೆ, ಈಗ ವಿಶ್ವಾಸಮತದ ಪ್ರಕ್ರಿಯೆ ಶುರು ಆದಾಗಿಂದ ಇವೆಲ್ಲ ಪುಟ್ಟಾಪೂರಾ ‘ಅತೃಪ್ತರ’ ಪರ ಬ್ಯಾಟಿಂಗ್ ಮಾಡಿದ್ದು ರಾಜ್ಯಕ್ಕೇ ಗೊತ್ತಿದೆ.

ಸುತ್ತು ಬಳಸಿ ಬೇಡವೇ ಬೇಡ, ರಾಜ್ಯದ ಬಹುಪಾಲು ದೃಶ್ಯ ಮಾಧ್ಯಮಗಳು ಬಿಜೆಪಿಗೆ ಮಾರಿಕೊಂಡಿವೆ. ಹೀಗಾಗಿ ಅವುಗಳ ಮುಂದಿನ ಟಾರ್ಗೆಟ್ ಆಡಳಿತ ಪಕ್ಷವಲ್ಲ, ವಿರೋಧ ಪಕ್ಷಗಳೇ. ಈ ಎರಡು ದಿನಗಳ ಅವುಗಳ ವರದಿ, ವಿಶ್ಲೇಷಣೆ ನೋಡಿದರೆ ಸಾಕು, ಇದೆಲ್ಲ ಅರ್ಥವಾಗುತ್ತದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...