Homeಕರ್ನಾಟಕಮೈಸೂರಿನಲ್ಲಿ ಒಕ್ಕಲಿಗರ ಶಾಸಕರನ್ನು ಟಾರ್ಗೆಟ್ ಮಾಡಿ ನಡೆಯುತ್ತಿದೆ ಆಪರೇಷನ್ ಗಪ್‍ಚುಪ್!

ಮೈಸೂರಿನಲ್ಲಿ ಒಕ್ಕಲಿಗರ ಶಾಸಕರನ್ನು ಟಾರ್ಗೆಟ್ ಮಾಡಿ ನಡೆಯುತ್ತಿದೆ ಆಪರೇಷನ್ ಗಪ್‍ಚುಪ್!

- Advertisement -
- Advertisement -

ಸಿಎಂ ಕುಮಾರಸ್ವಾಮಿ ಅತ್ತ ಅಮೆರಿಕಾ ಕಾಳಭೈರವನ ಸನ್ನಿದಿಯಲ್ಲಿ ಕೂತಿರುವ ಸಂದರ್ಭದಲ್ಲಿ ಇತ್ತ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟದ್ದು ದೊಡ್ಡ ಕೋಲಾಹಲವನ್ನೇ ಉಂಟುಮಾಡಿದೆ. ಮೋದಿಯವರ ಪ್ರಮಾಣ ವಚನಕ್ಕೆಂದು ಹೋಗಿದ್ದ ಯಡ್ಯೂರಪ್ಪನವರು ವಾಪಾಸು ಬಂದು ಹೇಳಿದ ಮೊದಲ ಸುದ್ದಿಯೇ `ನಾವಿನ್ನು ಆಪರೇಷನ್ ಕಮಲ ಮಾಡೋದಿಲ್ಲ. ವಿರೋಧಪಕ್ಷವಾಗಿ ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತೇವೆ’ ಎಂದು. ಅಲ್ಲಿಗೆ ಆಪರೇಷನ್ ಕಮಲದ ಕಥೆ ಮುಗಿದಹೋಯ್ತು ಅಂತ ಸುಮಾರಷ್ಟು ಜನ ಭಾವಿಸಿದ್ದಿರಬಹುದು. ಆದರೆ ಅದರ ಅಸಲೀ ಹಕೀಕತ್ತು ಈಗ ಈ ಇಬ್ಬರ ರಾಜೀನಾಮೆಯಿಂದ ಬಯಲಾಗಿದೆ.

ಅವತ್ತು ದಿಲ್ಲಿಗೆ ಹೋದ ಯಡ್ಯೂರಪ್ಪನವರಿಗೆ ಅಮಿತ್ ಷಾ ಕೊಟ್ಟ ಸೂಚನೆ ಸ್ಪಷ್ಟವಾಗಿತ್ತು. ಯಾವ ಕಾರಣಕ್ಕೂ ಆಪರೇಷನ್ ಕಮಲ ನಿಲ್ಲಿಸಬೇಡಿ, ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿ ನೀವೇ ಸಿಎಂ ಆಗಿ, ಆದ್ರೆ ಯಾವ ಕಾರಣಕ್ಕೂ ಬಿಜೆಪಿಯೇ ಸರ್ಕಾರ ಬೀಳಿಸಿತು ಎಂಬ ಅಪಖ್ಯಾತಿ ತಟ್ಟಬಾರದು. ಅದಕ್ಕಾಗಿ ಬಹಿರಂಗವಾಗಿ ಕದನ ವಿರಾಮ ಘೋಷಿಸಿ ಒಳಗೊಳಗೇ ಮಸಲತ್ತು ಮುಂದುವರೆಸಿ ಎಂಬ ಬುದ್ದಿಮಾತು ಹೇಳಿ ಕಳಿಸಿದ್ದರು. ಹಾಗಾಗಿಯೇ ಯಡ್ಯೂರಪ್ಪನವರು ಆಪರೇಷನ್ ಕಮಲ ಮಾಡಲ್ಲ ಅನ್ನೋ ಹೇಳಿಕೆ ಕೊಟ್ಟಿದ್ದು.

ಅಮಿತ್ ಶಾ ಕೂಡಾ ಅಷ್ಟು ಸ್ಪಷ್ಟವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಕ್ಕೆ ಒಂದು ಕಾರಣವಿತ್ತು. ಮೊನ್ನೆಯಷ್ಟೆ ಮುಗಿದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯೇನು ಪ್ರಚಂಡ ಕಟಾವು ಮಾಡಿಕೊಂಡಿತಲ್ಲ, ಅದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮೈತ್ರಿ ಪಾಳೆಯದ ಮೂವತ್ತು ಶಾಸಕರು ನೆರವಾಗಿದ್ದರು. ಬಿಜೆಪಿಗೆ ಹೋಗಿಬಿಡಬೇಕು ಎಂಬ ಕಾರಣಕ್ಕೇ ಅಲ್ಲದಿದ್ದರು, ತಮ್ಮೊಳಗಿನ ಆಂತರಿಕ ಕಚ್ಚಾಟದ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಅದರಲ್ಲಿ ಕೆಲವರು ಬಿಜೆಪಿಗೆ ಸಾಥ್ ಕೊಟ್ಟದ್ದು ಸುಳ್ಳಲ್ಲ. ಈ ಮೂವತ್ತರಲ್ಲಿ ಕನಿಷ್ಠ ಅರ್ಧದಷ್ಟು ಮಂದೆಯನ್ನಾದರು ತಮ್ಮ ಕಡೆ ತಿರುಗಿಸಿಕೊಳ್ಳೋದು ಕಷ್ಟವಲ್ಲ ಎಂಬುದನ್ನು ಯಡ್ಯೂರಪ್ಪನವರು ಮನವರಿಕೆ ಮಾಡಿಕೊಟ್ಟಿದ್ದರಿಂದ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟದ್ದು, ಜೊತೆಗೆ ಬಿಜೆಪಿಗೆ ಅಪಖ್ಯಾತಿ ಬರಬಾರದೆಂಬ ಎಚ್ಚರಿಕೆಯನ್ನೂ ಇತ್ತದ್ದು.

ಈ ತೆರೆಮರೆ ಆಪರೇಷನ್‍ನ ಫಲವಾಗಿಯೇ ಈ ಇಬ್ಬರು ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಸಂಶಯಗಳು ಕ್ಷಣದಿಂದ ಕ್ಷಣಕ್ಕೆ ದಟ್ಟವಾಗುತ್ತಿವೆ. ಆ ರಾಜೀನಾಮೆಗಳು ಅಂಗೀಕರವಾಗುವುದೇ ಡೌಟು ಎಂಬ ಅನುಮಾನಗಳೂ ಮೂಡುತ್ತಿವೆ. ಅದೇನೆ ಇರಲಿ, ಈ ಸಲ ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡುವುದಷ್ಟೇ ಅಲ್ಲ, ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಬಲವನ್ನು ಏಕಾಏಕಿ ಕುಗ್ಗಿಸಿ ಇಡೀ ಕರ್ನಾಟಕದ ಉದ್ದಗಲಕ್ಕು ಕಮಲದ ಬಾವುಟ ಹಾರಾಡಿಸಬೇಕೆಂಬ ಅಜೆಂಡಾ ಇಟ್ಟುಕೊಂಡೇ ಅಖಾಡಕ್ಕಿಳಿದಿದೆ. ಅದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದಕ್ಕೆ ಕಾಲವೇ ಉತ್ತರ ಕೊಡಬೇಕು.

ಈ ಸಲ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿರುವ ಬಿಜೆಪಿ ಸಿಲಿಕಾನ್ ಸಿಟಿಯ ಬದಲಿಗೆ ಮೈಸೂರು ನಗರಿಯಿಂದ ಆಪರೇಟ್ ಮಾಡುತ್ತಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಇದಕ್ಕೂ ಕಾರಣವಿದೆ. ಒಕ್ಕಲಿಗ ಮುಖ್ಯಮಂತ್ರಿಯ ಸರ್ಕಾರ ಕೆಡವಿದ ಅಪಖ್ಯಾತಿ ಬರಬಾರದು ಎಂಬ ಕಾರಣಕ್ಕೆ ಎಸ್.ಎಂ.ಕೃಷ್ಣರ ಮನೆಯಿಂದ ದಾಳ ಉರುಳಿಸಿದ್ದ ಬಿಜೆಪಿ ಆ ವಿಚಾರದಲ್ಲಿ ಈಗ ಮತ್ತಷ್ಟೂ ಸೆನ್ಸಿಬಲ್ ಆಗಿದೆ. ಅತ್ತ ಅಧಿಕಾರವೂ ಸಿಗಬೇಕು, ಇತ್ತ ಒಕ್ಕಲಿಗ ಮತಗಳ ಮೇಲೆ ಹಿಡಿತವೂ ಸಾಧ್ಯವಾಗಬೇಕು ಎಂಬ ಯೋಜನೆ ಹಾಕಿಕೊಂಡು, ಈ ಸಲ ಆಪರೇಷನ್ ಕಮಲಕ್ಕೆ ಹೆಚ್ಚೆಚ್ಚು ಒಕ್ಕಲಿಗ ಶಾಸಕರನ್ನೇ, ಅದರಲ್ಲೂ ಜೆಡಿಎಸ್ ಶಾಸಕರನ್ನೇ ಸೆಳೆಯುವ ಸಾಹಸಕ್ಕೆ ಅದು ಕೈಹಾಕಿದೆ. ಒಕ್ಕಲಿಗ ಶಾಸಕರೇ ಕೈಕೊಟ್ಟು ಕುಮಾರಸ್ವಾಮಿಯ ಸರ್ಕಾರ ಬೀಳಿಸಿದರೆ ಒಕ್ಕಲಿಗರು ಜಾತಿಯ ಕಾರಣಕ್ಕೆ ದೇವೇಗೌಡರತ್ತ ದೃವೀಕರಣವಾಗಲಾರರು ಎಂಬುದು ಇದರ ಹಿಂದಿರುವ ಲೆಕ್ಕಾಚಾರ. ಅಲ್ಲದೇ ಹಾಗೆ ಬರುವ ಅಷ್ಟೂ ಒಕ್ಕಲಿಗ ಶಾಸಕರ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಾವುಟ ಹಾರಾಡಿಸಿ, ತಳ ಗಟ್ಟಿಮಾಡಿಕೊಳ್ಳುವ ಯೋಜನೆಯೂ ಇದರಲ್ಲಿದೆ. ಈ ಕಾರಣಕ್ಕೇ ಸಿಎಂ ಕುಮಾರಸ್ವಾಮಿ ಅಮೆರಿಕಾಕ್ಕೆ ಹೋಗಿರುವ ಸಂದರ್ಭವನ್ನೇ ಸರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಇದರ ಸಂಪೂರ್ಣ ಹೊಣೆಯನ್ನು ಬಿಜೆಪಿಯ ಒಕ್ಕಲಿಗ ಲೀಡರುಗಳಾದ ಸಿ.ಟಿ.ರವಿ ಮತ್ತು ಆರ್.ಅಶೋಕ್ ಹೆಗಲಿಗೆ ವಹಿಸಲಾಗಿದೆ. ಈ ಇಬ್ಬರೂ ಮೈಸೂರಿನಲ್ಲಿ ಮುಕ್ಕಾಂ ಹೂಡಿ ಗಾಳ ಹಾಕಿ ಕೂತಿದ್ದಾರೆ. ಪತ್ರಿಕೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಆಪರೇಷನ್‍ಗೆ ಒಳಗಾಗುವ ಒಕ್ಕಲಿಗ ಶಾಸಕರಿಗೆ ತಲಾ ಮೂವತ್ತು ಕೋಟಿ ಹಣ, ಉಪಚುನಾವಣೆಯಲ್ಲಿ ಟಿಕೆಟ್, ಗೆಲ್ಲಿಸಿಕೊಂಡು ಬರುವ ಭರವಸೆ ಮತ್ತು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಪದವಿಯ ಬಲ್ಕ್ ಪ್ಯಾಕೇಜ್ ನೀಡಲಾಗುತ್ತಿದೆಯಂತೆ. ಅದರಲ್ಲು ಮಂತ್ರಿ ಪದವಿ ಬೇಡವೆಂದವರಿಗೆ ಮೊತ್ತದಲ್ಲಿ ಅಡ್ಜಸ್ಟ್‍ಮೆಂಟ್ ಮಾಡುವ ಖಾತ್ರಿಯನ್ನೂ ನೀಡಲಾಗುತ್ತಿದೆ.

ಇದರ ಬೆನ್ನಿಗೇನೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಮತ್ತ ಉನ್ನತ ಶಿಕ್ಷಣ ಸಚಿವರೂ ಆದ ಜಿ.ಟಿ ದೇವೆಗೌಡರು ಈಗ ಮತ್ತೆ ಮೋದಿ ಮತ್ತು ಅಮಿತ್ ಶಾರನ್ನು ಹೊಗಳಲು ಶುರು ಮಾಡಿದ್ದಾರೆ. ಇದರ ಮರ್ಮವೇನೆಂದು ತಿಳಿಯಲು ಇನ್ನ ಒಂದೆರಡು ದಿನಗಳು ಸಾಕು.

ಬೇರೆಬೇರೆ ಕಾರಣಗಳಿಂದ ದೇವೇಗೌಡರ ಕುಟುಂಬ ಹಾಗೂ ಈ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವ ಹತ್ತು ಮಂದಿ ಒಕ್ಕಲಿಗ ಶಾಸಕರನ್ನು ವಿಚಲಿತಗೊಳಿಸುವುದಕ್ಕೆಂದೆ `ಸ್ಟಾರ್ಟ್ ಅಪ್ ಡೋಸ್’ ಆಗಿ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯವರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂಬುದು ಸುದ್ದಿ. ಆದರೆ ಇದಕ್ಕೆ ಜೆಡಿಎಸ್‍ನ ಇತರ ಶಾಸಕರು ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...