Homeಕರ್ನಾಟಕಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು...

ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…

- Advertisement -
- Advertisement -

ಈಗ ಸುದ್ದಿ ಏನಂದರ ಬೈ ಎಲೆಕ್ಷನ್ನು. ಇದನ್ನು ಅವರು ಇವರಿಗೆ, ಇವರು ಅವರಿಗೆ ಬೈಯೋ ಎಲೆಕ್ಷನ್ನು ಅಂತ ತಿರುಗಿಸಿ ಬಿಟ್ಟ ಠೀವಿ ನಮ್ಮ ಚಾನಲ್ಲುಗಳದು.

ಅನರ್ಹ ಶಾಸಕರ ರಾಜೀನಾಮೆ ಇಂದ ಉಪಚುನಾವಣೆ 17 ಕಡೆ ನಡೀಬೇಕಾಗೇದ. ಅದರೊಳಗ ಎಂಟು ಕಡೆ ಪ್ರವಾಹ ಬಂದಿತ್ತು. ಅವುದರಾಗ ಏಳು ಉತ್ತರ ಕರ್ನಾಟಕದವು, ಒಂದು ಹಳೇ ಮೈಸೂರಿಂದು. ಅಲ್ಲಿ ಸರಿಯಾಗಿ ಪರಿಹಾರ ಸಿಗದೇ ಪ್ರವಾಹದಿಂದ ಜನಾ ಸಾಯಲಿಕ್ಕೆ ಹತ್ಯಾರ. ಅವರ ಗೋಳು, ಸಂಕಟದ ಸುತ್ತ ಚುನಾವಣೆ ನಡೀಬೇಕಾಗಿತ್ತು ಅಂತ ಸ್ಟುಡಿಯೋಗಳಲ್ಲಿ ಕೂತ ಯಾವ ಠೀವಿ ಹಿಡಿಗೂಟ (ಆಂಕರ್) ಗಳಿಗೆ ಅನಿಸವಲ್ಲದು.

ಗೋಕಾಕದ ಸಾಹುಕಾರರ ಚುನಾವಣಾ ಕಾದಾಟ ಅವರಿಗೆ ನಮ್ಮ ಹಳ್ಳಿಯೊಳಗ ಸಾಹುಕಾರರು ತಮ್ಮ ಮನಿ ಮುಂದಿನ ಮೈದಾನದಾಗ ನಡೆಸೋ ಕುಸ್ತಿ ಥರಾ ಕಾಣಲಿಕ್ಕೆ ಹತ್ತೇದ. ಈ ಚುನಾವಣೆಯೊಳಗ ಮಾತಾಡಲಿಕ್ಕೆ ಭಾಳ ಐತಿ. ಅದರೊಳಗ ಒಂದು ಮಾದರಿ ನೀತಿಸಂಹಿತೆ.

ಈ ಸಲಾ ಏನಾತಪಾ ಅಂದರ ನಮ್ಮಂಥ ಅನರ್ಹರಿಂದ ಆಯ್ಕೆಯಾಗಿ ಬೆಂಗಳೂರಿಗೆ ಹೋದ ಅನರ್ಹರು ಅನರ್ಹತೆಯ ಚರಮಸೀಮೆಗಳನ್ನು ಮುಟ್ಟಬೇಕು ಅಂತ ಹೇಳಿ ಆಟ ಗೂಟ ಜೈ ಅನ್ನಲು ನಿರ್ಧಾರ ಮಾಡಿದರು.

ಮೂರು ದಿನದೊಳಗ 17 ಜನ ತಾವು ಗೆದ್ದುಬಂದ ಪಾರ್ಟಿಗಳಿಗೆ ರಾಜೀನಾಮೆ ಕೊಟ್ಟರು. ಇದರಿಂದ ಆ ಸ್ಥಾನಗಳಿಗೆ ಚುನಾವಣೆ ಆಗಬೇಕಾತು. ಜನಪ್ರತಿನಿಧಿ ಕಾಯಿದೆ ಪ್ರಕಾರ ಯಾವುದೋ ಒಂದು ಎಮ್ಮಲ್ಲೆ ಸೀಟು 180 ದಿನಗಳಿಗೂ ಹೆಚ್ಚು ಖಾಲಿ ಇರಬಾರದು. ಅಲ್ಲಿಯ ಜನರಿಗೆ ಪ್ರಾತಿನಿಧ್ಯ ಇಲ್ಲದಂಗ ಆಗತದ ಅಂತ. (ಅವರಿದ್ದಾಗ ಏನು ಪ್ರತಿನಿಧಿತ್ವ ಮಾಡತಾರ ಏನು ಕಡದು ಕಟ್ಟಿಹಾಕತಾರ ಅನ್ನೋದು ಬ್ಯಾರೆ ವಿಷಯಾ).

ಅವರು ಯಾವ ರಾಜೀನಾಮಾಗಳನ್ನು ಬೀಸಾಕಿ ಹೋಗಿದ್ದರೋ ಅಲ್ಲಿಂದ ಸುಮಾರು 300 ಮೀಟರಿನೊಳಗ ರಾಜ್ಯ ಉಚ್ಚ ನ್ಯಾಯಾಲಯದ ಅದ. ಗೂಗಲ್ ಮ್ಯಾಪು ಇರಲಾರದ ಬೆಂಗಳೂರಿನಲ್ಲಿ ಹೋಗಬಲ್ಲಂಥಾ ಕೆಲವೇ ಕೆಲವು ಸ್ಥಳಗಳೊಳಗ ಅದೂ ಒಂದು. ನಡಕೋತ ಹೋದರ ಐದು ನಿಮಿಷ ಮತ್ತ ಬಡವರ ಸುಂಕದಾಗ ಸರಕಾರ ಖರೀದಿ ಮಾಡಿ ಎಮ್ಮೆಲ್ಲೆಗಳಿಗೆ ಕೊಟ್ಟಿರೋ ಎಸ್ಸುಯುವಿಯೊಳಗ ಹೋದರ ಒಂದು ನಿಮಿಷ ಆಗತದ.

ಆದರ ನಮ್ಮ ಪ್ರತಿನಿಧಿಗಳು ಅಲ್ಲಿಗೆ ಹೋಗಲಿಲ್ಲ. ಅವರು ಸಾದಾ ಜನ ಉಪಯೋಗಿಸುವ ವಿಮಾನಗಳಲ್ಲಿ ಹೋದರ ಲೇಟು ಆಗತದ ಅಂತ ಹೇಳಿ ವಿಶೇಷ ವಿಮಾನದೊಳಗ ದೆಹಲಿಗೆ ಹೋದರು. ಹೋಗೋಬೇಕಾರ ಪ್ರವಾಸಾಯಾಸ ಕಳೀಬೇಕು ಅಂತ ಹೇಳಿ ಮುಂಬೈಯೊಳಗ ಒಂದು ಎರಡು ತಿಂಗಳು ರಾಜಾತಿಥ್ಯ ಸ್ವೀಕರಿಸಿದರು.

ವಿಧಾನಸೌಧದಿಂದ ಹೈಕೋರ್ಟಿಗೆ ಹೋದರ ಸಮೀಪ ಆಗತಿತ್ತು, ವಕೀಲರು ಖರ್ಚುನು ಕಡಿಮೆ ಆಗತಿತ್ತು. ಆದರ ಅವರಿಗೆ ಅದನ್ನು ಹೇಳಲಿಲ್ಲ ಅಂತ ಅನಸ್ತದ. ಅವರಿಗೆ ಷಾಹೀ ಫರ್ಮಾನು ಜಾರಿ ಆಗಿತ್ತು. ಭಾರತದ ಹೊಸ್ತಿಲು (ದೆಹಲೀಜು) ದಾಟಿ, ನಮಸ್ಕಾರ ಮಾಡಿ ಒಳಗ ಬರಬೇಕು ಅಂತ. ಅವರು ಹಂಗ ಮಾಡಿದರು. ಸರ್ವೋಚ್ಚ ನ್ಯಾಯಾಲಕ್ಕ ಹೋದರು. ಅಲ್ಲಿ ನಿಮಿಷಕ್ಕ ಇಂತಿಷ್ಟು ಅಂತ ಚಾರ್ಜು ಮಾಡುವ ವಕೀಲರನ್ನು ಹಿಡದು, ಅವರಿಗೆ ಗಂಟು ಬಿದ್ದು, ನ್ಯಾಯಾಲಯದ ಮುಂದೆ ಅಂಗಲಾಚಿ, ಗಡಿಬಿಡಿ ಹಿಯರಿಂಗು ಮಾಡಿಸಿದರು.

ಅವರು ಅಲ್ಲಿಗೆ ಹೋದದ್ದೇ ತಡ, ಚುನಾವಣಾ ಆಯೋಗದವರು ಅವರ ಸ್ಥಾನಗಳಿಗೆ ಉಪಚುನಾವಣೆ ಘೋಷಿಣಾ ಮಾಡಿದರು. ಆಮ್ಯಾಲೆ ಕೋರ್ಟಿನ ಡೇಟು ಬಿದ್ದಮ್ಯಾಲೆ ಇವರಿಗೆ ಅನುಕೂಲ ಆಗಲೀ ಅಂತ ಇರಬೇಕು, ಮತ್ತ ಮುಂದಕ್ಕ ಹಾಕಿದರು.

ಮಜಾ ಏನಂದರ ಚುನಾವಣೆ ಘೋಷಣೆ ಆದ ಕ್ಷಣದಿಂದ ಮಾದರಿ ನೀತಿಸಂಹಿತೆ (ಮಾನೀಸಂ) ಜಾರಿಗೆ ಬರತದ. ಅದಕ್ಕನ ಆಯೋಗದ ಪತ್ರಿಕಾಗೋಷ್ಠಿಯೊಳಗ ಕಡೇ ಮಾತು ಏನಪಾ ಅಂದರ ದಿನಾಂಕ ಘೋಷಣೆ. ಆದರೆ ನಂಬಸಲದಳವಾದ ಕರ್ನಾಟಕದ ಉಪಚುನಾವಣೆಗೆ ಎರಡೂ ಸಲೇನೂ ಮಾನೀಸಂ ಘೋಷಣೆ ತಕ್ಷಣದಿಂದ ಆಗಲಿಲ್ಲ. ಮೊದಲನೇ ಸಲಾ ಅಂತೂ ಆಗಲೇ ಇಲ್ಲ. ಮುಂದ ಹೋದ ದಿನಾಂಕಕ್ಕ ಘೋಷಣಾ ಆದಾಗ ಆಗಲಿಲ್ಲ. ಚುನಾವಣೆ ಪ್ರಕಟಣೆ ಆದಾಗ ಆತು. ಅದುನೂ ಬಹುಚರ್ಚಿತ ಮಾದರಿಯೊಳಗ ಆತು. ನಾಲ್ಕು ಜಿಲ್ಲೆಗಳೊಳಗ ಇಡೀ ಜಿಲ್ಲೆಗೆ ಆತು. ಇನ್ನು ಉಳಿದ ಕಡೆ ಕೇವಲ ಆ ಕ್ಷೇತ್ರಕ್ಕ ಅಷ್ಟನ ಆತು.

ಇದು ಯಾಕ ಹಿಂಗಾತು ಅಂತ ಆಳುವ ಪಕ್ಷದ ದೊರೆಗಳು ಕೇಳಲಿಲ್ಲ. ಕಾಂಗ್ರೆಸ್ಸಿನ ಕುಂಭಕರ್ಣರಿಗೆ ಕೇಳಬೇಕು ಅಂತ ಅನ್ನಿಸಲಿಲ್ಲ. ಪ್ರಜೆಗಳಿಗಂತೂ ಗೊತ್ತೇ ಆಗಲಿಲ್ಲ, ದಿ ನೇಷನ್ ವಾಂಟ್ಸು ನೋ ಅನ್ನುವ ರಾಷ್ಟ್ರೀಯ ಹಿಡಿಗೂಟಗಳಿಗೂ, ಖನ್ನಡ ಮಾತಾಡುವ ಕಿಡಿಗೂಟಗಳಿಗೂ ಇದು ಟಿಆರ್‌ಪಿ ಮಟೀರಿಯಲ್ಲು ಅಂತ ಅನ್ನಿಸಿಲ್ಲ ಅಂತ ಕಾಣತದ.

ಇನ್ನು ಮಾನ್ಯ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಎರಡು ಕ್ಷೇತ್ರಗಳ ಹುದ್ದರಿಗಳ ಚುನಾವಣೆಗೆ ಹೋದಾಗ ನಿಮ್ಮ ನಾಯಕರನ್ನು ಗೆಲ್ಲಿಸಿ ಕೊಡಿ ಅವರನ್ನು ಮಂತ್ರಿ ಮಾಡುತ್ತೇನೆ ಅಂತಂದರು. ಇನ್ನು ಒಂದು ಕಡೆ ಇವರಿಗೆ ಟೀಕೀಟು ಸಿಗಲಿಲ್ಲ. ಇವರನ್ನು ಮೇಲ್ಮನೆಗೆ ಕಳಿಸಿ ಮಂತ್ರಿ ಮಾಡುತ್ತೇನೆ ಅಂತನೂ ಅಂದರು. ಇದು ಮಾನೀಸಂ ಉಲ್ಲಂಘನೆ ಅಂತ ಠೀವಿಗಳಲ್ಲಿ ಕೇಳಿಬರಲಿಲ್ಲ.

ಇದನ್ನು ಓದಿ : ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಇದರಿಂದ ಕೆಲವು ಜಿಲ್ಲೆಗಳಲ್ಲಿ ಸರಕಾರ ಹೊಸ ಯೋಜನೆ ಶುರುಮಾಡಬಹುದು, ಇನ್ನು ಕೆಲವು ಜಿಲ್ಲೆಗಳಲ್ಲಿ ಶುರು ಮಾಡಲಿಕ್ಕೆ ಬರೋದಿಲ್ಲಾ. ಇದರಿಂದ ಸರಕಾರಿ ಯಂತ್ರದ ದುರುಪಯೋಗ ಆಗಬಹುದು ಅಂತ ಜನಾ ಮಾತಾಡಲಿಕ್ಕೆ ಶುರು ಮಾಡಬೇಕಾಗಿತ್ತು. ಅದೂ ಆಗಲಿಲ್ಲ.

ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ಮತದಾರರಿರುವ, ಅತಿ ದೊಡ್ಡ ಚುನಾವಣೆ ಪ್ರಕ್ರಿಯೆ ನಡೆಯುವ, ಅತಿಹೆಚ್ಚು ಚುನಾವಣೆ ಹಾಗೂ ಸುರಕ್ಷಾ ಸಿಬ್ಬಂದಿ ಒಂದು ನೂರಕ್ಕೂ ಹೆಚ್ಚು ಕೆಲಸ ಮಾಡುವ ಈ ದೇಶದ ಪ್ರಜಾಸತ್ತೆಯ ಮಾನ ಇಷ್ಟು ದಿನ ಕಾಪಾಡಿದ್ದು ಈ ಸಂಹಿತೆ.

`ಜಗವೊಂದು ನಾಟಕರಂಗ’ ಅಂತ ನಮ್ಮ ದಾಸರು ಹೇಳಿದಂಥಾ ಮಾತನ್ನ
ಆವೊನ್ ನದಿ ತೀರದ ಜಾದೂಗಾರ ಶೇಕ್ಸಪಿಯರನೂ ಹೇಳ್ಯಾನ.

ಆ ನಾಟಕಕಾರನ ಸುನೀತವೊಂದರ ಕೊನೆಯ ಸಾಲು ಇವು.
“….ಅಲ್ಲಿಗೆ ಈ ವಿಚಿತ್ರ ಘಟನಾವಳಿ ಮುಗೀಲಿಕ್ಕೆ ಬಂದಂಗ
ಅದೊಂಥರಾ ಮನುಷ್ಯನ ಎರಡನೇ ಎಳವೆ,
ಬರೇ ವಿಸ್ಮೃತಿ:
ಹಲ್ಲಿಲ್ಲ, ಕಣ್ಣಿಲ್ಲ, ರುಚಿ ಇಲ್ಲ
ಏನೂ ಇಲ್ಲ ”

ತಿರುಣೆಲೈ ನಾರಾಯಾಣ ಅಯ್ಯರ್ ಶೇಷನ್ ತೀರಿಕೊಂಡ ವಾರದಲ್ಲಿ ಈ ಮಾತು ಬರೆಯುವುದು ಕಷ್ಟ.

ಅವರಿಗೆ ಸುರಿಸಿದ ಕಂಬನಿಯ ಹಸಿ ಚುನಾವಣೆ ಸ್ವಾಯತ್ತತೆಗೂ ಹತ್ತಿದಂಗ ಕಾಣಬಾರದು ಅಷ್ಟ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...