Homeಕರ್ನಾಟಕಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು...

ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…

- Advertisement -
- Advertisement -

ಈಗ ಸುದ್ದಿ ಏನಂದರ ಬೈ ಎಲೆಕ್ಷನ್ನು. ಇದನ್ನು ಅವರು ಇವರಿಗೆ, ಇವರು ಅವರಿಗೆ ಬೈಯೋ ಎಲೆಕ್ಷನ್ನು ಅಂತ ತಿರುಗಿಸಿ ಬಿಟ್ಟ ಠೀವಿ ನಮ್ಮ ಚಾನಲ್ಲುಗಳದು.

ಅನರ್ಹ ಶಾಸಕರ ರಾಜೀನಾಮೆ ಇಂದ ಉಪಚುನಾವಣೆ 17 ಕಡೆ ನಡೀಬೇಕಾಗೇದ. ಅದರೊಳಗ ಎಂಟು ಕಡೆ ಪ್ರವಾಹ ಬಂದಿತ್ತು. ಅವುದರಾಗ ಏಳು ಉತ್ತರ ಕರ್ನಾಟಕದವು, ಒಂದು ಹಳೇ ಮೈಸೂರಿಂದು. ಅಲ್ಲಿ ಸರಿಯಾಗಿ ಪರಿಹಾರ ಸಿಗದೇ ಪ್ರವಾಹದಿಂದ ಜನಾ ಸಾಯಲಿಕ್ಕೆ ಹತ್ಯಾರ. ಅವರ ಗೋಳು, ಸಂಕಟದ ಸುತ್ತ ಚುನಾವಣೆ ನಡೀಬೇಕಾಗಿತ್ತು ಅಂತ ಸ್ಟುಡಿಯೋಗಳಲ್ಲಿ ಕೂತ ಯಾವ ಠೀವಿ ಹಿಡಿಗೂಟ (ಆಂಕರ್) ಗಳಿಗೆ ಅನಿಸವಲ್ಲದು.

ಗೋಕಾಕದ ಸಾಹುಕಾರರ ಚುನಾವಣಾ ಕಾದಾಟ ಅವರಿಗೆ ನಮ್ಮ ಹಳ್ಳಿಯೊಳಗ ಸಾಹುಕಾರರು ತಮ್ಮ ಮನಿ ಮುಂದಿನ ಮೈದಾನದಾಗ ನಡೆಸೋ ಕುಸ್ತಿ ಥರಾ ಕಾಣಲಿಕ್ಕೆ ಹತ್ತೇದ. ಈ ಚುನಾವಣೆಯೊಳಗ ಮಾತಾಡಲಿಕ್ಕೆ ಭಾಳ ಐತಿ. ಅದರೊಳಗ ಒಂದು ಮಾದರಿ ನೀತಿಸಂಹಿತೆ.

ಈ ಸಲಾ ಏನಾತಪಾ ಅಂದರ ನಮ್ಮಂಥ ಅನರ್ಹರಿಂದ ಆಯ್ಕೆಯಾಗಿ ಬೆಂಗಳೂರಿಗೆ ಹೋದ ಅನರ್ಹರು ಅನರ್ಹತೆಯ ಚರಮಸೀಮೆಗಳನ್ನು ಮುಟ್ಟಬೇಕು ಅಂತ ಹೇಳಿ ಆಟ ಗೂಟ ಜೈ ಅನ್ನಲು ನಿರ್ಧಾರ ಮಾಡಿದರು.

ಮೂರು ದಿನದೊಳಗ 17 ಜನ ತಾವು ಗೆದ್ದುಬಂದ ಪಾರ್ಟಿಗಳಿಗೆ ರಾಜೀನಾಮೆ ಕೊಟ್ಟರು. ಇದರಿಂದ ಆ ಸ್ಥಾನಗಳಿಗೆ ಚುನಾವಣೆ ಆಗಬೇಕಾತು. ಜನಪ್ರತಿನಿಧಿ ಕಾಯಿದೆ ಪ್ರಕಾರ ಯಾವುದೋ ಒಂದು ಎಮ್ಮಲ್ಲೆ ಸೀಟು 180 ದಿನಗಳಿಗೂ ಹೆಚ್ಚು ಖಾಲಿ ಇರಬಾರದು. ಅಲ್ಲಿಯ ಜನರಿಗೆ ಪ್ರಾತಿನಿಧ್ಯ ಇಲ್ಲದಂಗ ಆಗತದ ಅಂತ. (ಅವರಿದ್ದಾಗ ಏನು ಪ್ರತಿನಿಧಿತ್ವ ಮಾಡತಾರ ಏನು ಕಡದು ಕಟ್ಟಿಹಾಕತಾರ ಅನ್ನೋದು ಬ್ಯಾರೆ ವಿಷಯಾ).

ಅವರು ಯಾವ ರಾಜೀನಾಮಾಗಳನ್ನು ಬೀಸಾಕಿ ಹೋಗಿದ್ದರೋ ಅಲ್ಲಿಂದ ಸುಮಾರು 300 ಮೀಟರಿನೊಳಗ ರಾಜ್ಯ ಉಚ್ಚ ನ್ಯಾಯಾಲಯದ ಅದ. ಗೂಗಲ್ ಮ್ಯಾಪು ಇರಲಾರದ ಬೆಂಗಳೂರಿನಲ್ಲಿ ಹೋಗಬಲ್ಲಂಥಾ ಕೆಲವೇ ಕೆಲವು ಸ್ಥಳಗಳೊಳಗ ಅದೂ ಒಂದು. ನಡಕೋತ ಹೋದರ ಐದು ನಿಮಿಷ ಮತ್ತ ಬಡವರ ಸುಂಕದಾಗ ಸರಕಾರ ಖರೀದಿ ಮಾಡಿ ಎಮ್ಮೆಲ್ಲೆಗಳಿಗೆ ಕೊಟ್ಟಿರೋ ಎಸ್ಸುಯುವಿಯೊಳಗ ಹೋದರ ಒಂದು ನಿಮಿಷ ಆಗತದ.

ಆದರ ನಮ್ಮ ಪ್ರತಿನಿಧಿಗಳು ಅಲ್ಲಿಗೆ ಹೋಗಲಿಲ್ಲ. ಅವರು ಸಾದಾ ಜನ ಉಪಯೋಗಿಸುವ ವಿಮಾನಗಳಲ್ಲಿ ಹೋದರ ಲೇಟು ಆಗತದ ಅಂತ ಹೇಳಿ ವಿಶೇಷ ವಿಮಾನದೊಳಗ ದೆಹಲಿಗೆ ಹೋದರು. ಹೋಗೋಬೇಕಾರ ಪ್ರವಾಸಾಯಾಸ ಕಳೀಬೇಕು ಅಂತ ಹೇಳಿ ಮುಂಬೈಯೊಳಗ ಒಂದು ಎರಡು ತಿಂಗಳು ರಾಜಾತಿಥ್ಯ ಸ್ವೀಕರಿಸಿದರು.

ವಿಧಾನಸೌಧದಿಂದ ಹೈಕೋರ್ಟಿಗೆ ಹೋದರ ಸಮೀಪ ಆಗತಿತ್ತು, ವಕೀಲರು ಖರ್ಚುನು ಕಡಿಮೆ ಆಗತಿತ್ತು. ಆದರ ಅವರಿಗೆ ಅದನ್ನು ಹೇಳಲಿಲ್ಲ ಅಂತ ಅನಸ್ತದ. ಅವರಿಗೆ ಷಾಹೀ ಫರ್ಮಾನು ಜಾರಿ ಆಗಿತ್ತು. ಭಾರತದ ಹೊಸ್ತಿಲು (ದೆಹಲೀಜು) ದಾಟಿ, ನಮಸ್ಕಾರ ಮಾಡಿ ಒಳಗ ಬರಬೇಕು ಅಂತ. ಅವರು ಹಂಗ ಮಾಡಿದರು. ಸರ್ವೋಚ್ಚ ನ್ಯಾಯಾಲಕ್ಕ ಹೋದರು. ಅಲ್ಲಿ ನಿಮಿಷಕ್ಕ ಇಂತಿಷ್ಟು ಅಂತ ಚಾರ್ಜು ಮಾಡುವ ವಕೀಲರನ್ನು ಹಿಡದು, ಅವರಿಗೆ ಗಂಟು ಬಿದ್ದು, ನ್ಯಾಯಾಲಯದ ಮುಂದೆ ಅಂಗಲಾಚಿ, ಗಡಿಬಿಡಿ ಹಿಯರಿಂಗು ಮಾಡಿಸಿದರು.

ಅವರು ಅಲ್ಲಿಗೆ ಹೋದದ್ದೇ ತಡ, ಚುನಾವಣಾ ಆಯೋಗದವರು ಅವರ ಸ್ಥಾನಗಳಿಗೆ ಉಪಚುನಾವಣೆ ಘೋಷಿಣಾ ಮಾಡಿದರು. ಆಮ್ಯಾಲೆ ಕೋರ್ಟಿನ ಡೇಟು ಬಿದ್ದಮ್ಯಾಲೆ ಇವರಿಗೆ ಅನುಕೂಲ ಆಗಲೀ ಅಂತ ಇರಬೇಕು, ಮತ್ತ ಮುಂದಕ್ಕ ಹಾಕಿದರು.

ಮಜಾ ಏನಂದರ ಚುನಾವಣೆ ಘೋಷಣೆ ಆದ ಕ್ಷಣದಿಂದ ಮಾದರಿ ನೀತಿಸಂಹಿತೆ (ಮಾನೀಸಂ) ಜಾರಿಗೆ ಬರತದ. ಅದಕ್ಕನ ಆಯೋಗದ ಪತ್ರಿಕಾಗೋಷ್ಠಿಯೊಳಗ ಕಡೇ ಮಾತು ಏನಪಾ ಅಂದರ ದಿನಾಂಕ ಘೋಷಣೆ. ಆದರೆ ನಂಬಸಲದಳವಾದ ಕರ್ನಾಟಕದ ಉಪಚುನಾವಣೆಗೆ ಎರಡೂ ಸಲೇನೂ ಮಾನೀಸಂ ಘೋಷಣೆ ತಕ್ಷಣದಿಂದ ಆಗಲಿಲ್ಲ. ಮೊದಲನೇ ಸಲಾ ಅಂತೂ ಆಗಲೇ ಇಲ್ಲ. ಮುಂದ ಹೋದ ದಿನಾಂಕಕ್ಕ ಘೋಷಣಾ ಆದಾಗ ಆಗಲಿಲ್ಲ. ಚುನಾವಣೆ ಪ್ರಕಟಣೆ ಆದಾಗ ಆತು. ಅದುನೂ ಬಹುಚರ್ಚಿತ ಮಾದರಿಯೊಳಗ ಆತು. ನಾಲ್ಕು ಜಿಲ್ಲೆಗಳೊಳಗ ಇಡೀ ಜಿಲ್ಲೆಗೆ ಆತು. ಇನ್ನು ಉಳಿದ ಕಡೆ ಕೇವಲ ಆ ಕ್ಷೇತ್ರಕ್ಕ ಅಷ್ಟನ ಆತು.

ಇದು ಯಾಕ ಹಿಂಗಾತು ಅಂತ ಆಳುವ ಪಕ್ಷದ ದೊರೆಗಳು ಕೇಳಲಿಲ್ಲ. ಕಾಂಗ್ರೆಸ್ಸಿನ ಕುಂಭಕರ್ಣರಿಗೆ ಕೇಳಬೇಕು ಅಂತ ಅನ್ನಿಸಲಿಲ್ಲ. ಪ್ರಜೆಗಳಿಗಂತೂ ಗೊತ್ತೇ ಆಗಲಿಲ್ಲ, ದಿ ನೇಷನ್ ವಾಂಟ್ಸು ನೋ ಅನ್ನುವ ರಾಷ್ಟ್ರೀಯ ಹಿಡಿಗೂಟಗಳಿಗೂ, ಖನ್ನಡ ಮಾತಾಡುವ ಕಿಡಿಗೂಟಗಳಿಗೂ ಇದು ಟಿಆರ್‌ಪಿ ಮಟೀರಿಯಲ್ಲು ಅಂತ ಅನ್ನಿಸಿಲ್ಲ ಅಂತ ಕಾಣತದ.

ಇನ್ನು ಮಾನ್ಯ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಎರಡು ಕ್ಷೇತ್ರಗಳ ಹುದ್ದರಿಗಳ ಚುನಾವಣೆಗೆ ಹೋದಾಗ ನಿಮ್ಮ ನಾಯಕರನ್ನು ಗೆಲ್ಲಿಸಿ ಕೊಡಿ ಅವರನ್ನು ಮಂತ್ರಿ ಮಾಡುತ್ತೇನೆ ಅಂತಂದರು. ಇನ್ನು ಒಂದು ಕಡೆ ಇವರಿಗೆ ಟೀಕೀಟು ಸಿಗಲಿಲ್ಲ. ಇವರನ್ನು ಮೇಲ್ಮನೆಗೆ ಕಳಿಸಿ ಮಂತ್ರಿ ಮಾಡುತ್ತೇನೆ ಅಂತನೂ ಅಂದರು. ಇದು ಮಾನೀಸಂ ಉಲ್ಲಂಘನೆ ಅಂತ ಠೀವಿಗಳಲ್ಲಿ ಕೇಳಿಬರಲಿಲ್ಲ.

ಇದನ್ನು ಓದಿ : ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಇದರಿಂದ ಕೆಲವು ಜಿಲ್ಲೆಗಳಲ್ಲಿ ಸರಕಾರ ಹೊಸ ಯೋಜನೆ ಶುರುಮಾಡಬಹುದು, ಇನ್ನು ಕೆಲವು ಜಿಲ್ಲೆಗಳಲ್ಲಿ ಶುರು ಮಾಡಲಿಕ್ಕೆ ಬರೋದಿಲ್ಲಾ. ಇದರಿಂದ ಸರಕಾರಿ ಯಂತ್ರದ ದುರುಪಯೋಗ ಆಗಬಹುದು ಅಂತ ಜನಾ ಮಾತಾಡಲಿಕ್ಕೆ ಶುರು ಮಾಡಬೇಕಾಗಿತ್ತು. ಅದೂ ಆಗಲಿಲ್ಲ.

ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ಮತದಾರರಿರುವ, ಅತಿ ದೊಡ್ಡ ಚುನಾವಣೆ ಪ್ರಕ್ರಿಯೆ ನಡೆಯುವ, ಅತಿಹೆಚ್ಚು ಚುನಾವಣೆ ಹಾಗೂ ಸುರಕ್ಷಾ ಸಿಬ್ಬಂದಿ ಒಂದು ನೂರಕ್ಕೂ ಹೆಚ್ಚು ಕೆಲಸ ಮಾಡುವ ಈ ದೇಶದ ಪ್ರಜಾಸತ್ತೆಯ ಮಾನ ಇಷ್ಟು ದಿನ ಕಾಪಾಡಿದ್ದು ಈ ಸಂಹಿತೆ.

`ಜಗವೊಂದು ನಾಟಕರಂಗ’ ಅಂತ ನಮ್ಮ ದಾಸರು ಹೇಳಿದಂಥಾ ಮಾತನ್ನ
ಆವೊನ್ ನದಿ ತೀರದ ಜಾದೂಗಾರ ಶೇಕ್ಸಪಿಯರನೂ ಹೇಳ್ಯಾನ.

ಆ ನಾಟಕಕಾರನ ಸುನೀತವೊಂದರ ಕೊನೆಯ ಸಾಲು ಇವು.
“….ಅಲ್ಲಿಗೆ ಈ ವಿಚಿತ್ರ ಘಟನಾವಳಿ ಮುಗೀಲಿಕ್ಕೆ ಬಂದಂಗ
ಅದೊಂಥರಾ ಮನುಷ್ಯನ ಎರಡನೇ ಎಳವೆ,
ಬರೇ ವಿಸ್ಮೃತಿ:
ಹಲ್ಲಿಲ್ಲ, ಕಣ್ಣಿಲ್ಲ, ರುಚಿ ಇಲ್ಲ
ಏನೂ ಇಲ್ಲ ”

ತಿರುಣೆಲೈ ನಾರಾಯಾಣ ಅಯ್ಯರ್ ಶೇಷನ್ ತೀರಿಕೊಂಡ ವಾರದಲ್ಲಿ ಈ ಮಾತು ಬರೆಯುವುದು ಕಷ್ಟ.

ಅವರಿಗೆ ಸುರಿಸಿದ ಕಂಬನಿಯ ಹಸಿ ಚುನಾವಣೆ ಸ್ವಾಯತ್ತತೆಗೂ ಹತ್ತಿದಂಗ ಕಾಣಬಾರದು ಅಷ್ಟ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...