ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಪ್ರಮಾಣವಚನ ಸ್ವೀಕರಿಸಿದ ನಂತರ ಅಜಿತ್ ಪವಾರ್ ಅವರನ್ನು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕತ್ವದಿಂದ ಉಚ್ಚಾಟನೆ ಮಾಡಲಾಗಿದೆ.
ಇನ್ನು ಮುಂಬೈನಲ್ಲಿ NCP- ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ ನಡೆಸಲು ತೀರ್ಮಾನಿಸಲಾಗಿದ್ದು ಬಿಜೆಪಿಯ ನಡೆಯನ್ನು ತೀವ್ರವಾಗಿ ವಿರೋಧಿಸಲು ಮುಂದಾಗಿದ್ದಾರೆ. ಶರಾದ್ ಪವಾರ್, ಉದ್ಧವ್ ಠಾಕ್ರೆ, ಆದಿತ್ಯಾ ಠಾಕ್ರೆಯವರು ಸಹ ಪತ್ರಿಕಾಗೋಷ್ಠಿಯಲ್ಲಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರು ನವೆಂಬರ್ 30 ರವರೆಗೆ ಬಹುಮತ ಸಾಬೀತಿಗೆ ಕಾಲಾವಕಾಶ ಕೊಟ್ಟಿರುವುದರಿಂದ ಅಷ್ಟರಲ್ಲಿ ಏನೇನು ಮಾಡಬಹುದು ಎಂದು NCP, ಶಿವಸೇನೆ ನಿರ್ಧರಿಸಲಿವೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಜೊತೆ ಇನ್ನೊರ್ವ ಎನ್ಸಿಪಿಯ ಶಾಸಕ ಧನಂಜಯ್ ಮುಂಡೆ ಕೂಡ ಹೊಸ ಸರ್ಕಾರದ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಅವರೇ ದೇವೇಂದ್ರ ಫಡ್ನಾವೀಸ್ರನ್ನು ಭೇಟಿಯಾಗಿ ಬೆಂಬಲದ ಪತ್ರ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಅಜಿತ್ ಪವಾರ್ ನಿರ್ಧಾರವನ್ನು ಕೇರಳ ಎನ್ಸಿಪಿ ಖಂಡಿಸಿದೆ.