Homeಕರ್ನಾಟಕಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು...

ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…

- Advertisement -
- Advertisement -

ಈಗ ಸುದ್ದಿ ಏನಂದರ ಬೈ ಎಲೆಕ್ಷನ್ನು. ಇದನ್ನು ಅವರು ಇವರಿಗೆ, ಇವರು ಅವರಿಗೆ ಬೈಯೋ ಎಲೆಕ್ಷನ್ನು ಅಂತ ತಿರುಗಿಸಿ ಬಿಟ್ಟ ಠೀವಿ ನಮ್ಮ ಚಾನಲ್ಲುಗಳದು.

ಅನರ್ಹ ಶಾಸಕರ ರಾಜೀನಾಮೆ ಇಂದ ಉಪಚುನಾವಣೆ 17 ಕಡೆ ನಡೀಬೇಕಾಗೇದ. ಅದರೊಳಗ ಎಂಟು ಕಡೆ ಪ್ರವಾಹ ಬಂದಿತ್ತು. ಅವುದರಾಗ ಏಳು ಉತ್ತರ ಕರ್ನಾಟಕದವು, ಒಂದು ಹಳೇ ಮೈಸೂರಿಂದು. ಅಲ್ಲಿ ಸರಿಯಾಗಿ ಪರಿಹಾರ ಸಿಗದೇ ಪ್ರವಾಹದಿಂದ ಜನಾ ಸಾಯಲಿಕ್ಕೆ ಹತ್ಯಾರ. ಅವರ ಗೋಳು, ಸಂಕಟದ ಸುತ್ತ ಚುನಾವಣೆ ನಡೀಬೇಕಾಗಿತ್ತು ಅಂತ ಸ್ಟುಡಿಯೋಗಳಲ್ಲಿ ಕೂತ ಯಾವ ಠೀವಿ ಹಿಡಿಗೂಟ (ಆಂಕರ್) ಗಳಿಗೆ ಅನಿಸವಲ್ಲದು.

ಗೋಕಾಕದ ಸಾಹುಕಾರರ ಚುನಾವಣಾ ಕಾದಾಟ ಅವರಿಗೆ ನಮ್ಮ ಹಳ್ಳಿಯೊಳಗ ಸಾಹುಕಾರರು ತಮ್ಮ ಮನಿ ಮುಂದಿನ ಮೈದಾನದಾಗ ನಡೆಸೋ ಕುಸ್ತಿ ಥರಾ ಕಾಣಲಿಕ್ಕೆ ಹತ್ತೇದ. ಈ ಚುನಾವಣೆಯೊಳಗ ಮಾತಾಡಲಿಕ್ಕೆ ಭಾಳ ಐತಿ. ಅದರೊಳಗ ಒಂದು ಮಾದರಿ ನೀತಿಸಂಹಿತೆ.

ಈ ಸಲಾ ಏನಾತಪಾ ಅಂದರ ನಮ್ಮಂಥ ಅನರ್ಹರಿಂದ ಆಯ್ಕೆಯಾಗಿ ಬೆಂಗಳೂರಿಗೆ ಹೋದ ಅನರ್ಹರು ಅನರ್ಹತೆಯ ಚರಮಸೀಮೆಗಳನ್ನು ಮುಟ್ಟಬೇಕು ಅಂತ ಹೇಳಿ ಆಟ ಗೂಟ ಜೈ ಅನ್ನಲು ನಿರ್ಧಾರ ಮಾಡಿದರು.

ಮೂರು ದಿನದೊಳಗ 17 ಜನ ತಾವು ಗೆದ್ದುಬಂದ ಪಾರ್ಟಿಗಳಿಗೆ ರಾಜೀನಾಮೆ ಕೊಟ್ಟರು. ಇದರಿಂದ ಆ ಸ್ಥಾನಗಳಿಗೆ ಚುನಾವಣೆ ಆಗಬೇಕಾತು. ಜನಪ್ರತಿನಿಧಿ ಕಾಯಿದೆ ಪ್ರಕಾರ ಯಾವುದೋ ಒಂದು ಎಮ್ಮಲ್ಲೆ ಸೀಟು 180 ದಿನಗಳಿಗೂ ಹೆಚ್ಚು ಖಾಲಿ ಇರಬಾರದು. ಅಲ್ಲಿಯ ಜನರಿಗೆ ಪ್ರಾತಿನಿಧ್ಯ ಇಲ್ಲದಂಗ ಆಗತದ ಅಂತ. (ಅವರಿದ್ದಾಗ ಏನು ಪ್ರತಿನಿಧಿತ್ವ ಮಾಡತಾರ ಏನು ಕಡದು ಕಟ್ಟಿಹಾಕತಾರ ಅನ್ನೋದು ಬ್ಯಾರೆ ವಿಷಯಾ).

ಅವರು ಯಾವ ರಾಜೀನಾಮಾಗಳನ್ನು ಬೀಸಾಕಿ ಹೋಗಿದ್ದರೋ ಅಲ್ಲಿಂದ ಸುಮಾರು 300 ಮೀಟರಿನೊಳಗ ರಾಜ್ಯ ಉಚ್ಚ ನ್ಯಾಯಾಲಯದ ಅದ. ಗೂಗಲ್ ಮ್ಯಾಪು ಇರಲಾರದ ಬೆಂಗಳೂರಿನಲ್ಲಿ ಹೋಗಬಲ್ಲಂಥಾ ಕೆಲವೇ ಕೆಲವು ಸ್ಥಳಗಳೊಳಗ ಅದೂ ಒಂದು. ನಡಕೋತ ಹೋದರ ಐದು ನಿಮಿಷ ಮತ್ತ ಬಡವರ ಸುಂಕದಾಗ ಸರಕಾರ ಖರೀದಿ ಮಾಡಿ ಎಮ್ಮೆಲ್ಲೆಗಳಿಗೆ ಕೊಟ್ಟಿರೋ ಎಸ್ಸುಯುವಿಯೊಳಗ ಹೋದರ ಒಂದು ನಿಮಿಷ ಆಗತದ.

ಆದರ ನಮ್ಮ ಪ್ರತಿನಿಧಿಗಳು ಅಲ್ಲಿಗೆ ಹೋಗಲಿಲ್ಲ. ಅವರು ಸಾದಾ ಜನ ಉಪಯೋಗಿಸುವ ವಿಮಾನಗಳಲ್ಲಿ ಹೋದರ ಲೇಟು ಆಗತದ ಅಂತ ಹೇಳಿ ವಿಶೇಷ ವಿಮಾನದೊಳಗ ದೆಹಲಿಗೆ ಹೋದರು. ಹೋಗೋಬೇಕಾರ ಪ್ರವಾಸಾಯಾಸ ಕಳೀಬೇಕು ಅಂತ ಹೇಳಿ ಮುಂಬೈಯೊಳಗ ಒಂದು ಎರಡು ತಿಂಗಳು ರಾಜಾತಿಥ್ಯ ಸ್ವೀಕರಿಸಿದರು.

ವಿಧಾನಸೌಧದಿಂದ ಹೈಕೋರ್ಟಿಗೆ ಹೋದರ ಸಮೀಪ ಆಗತಿತ್ತು, ವಕೀಲರು ಖರ್ಚುನು ಕಡಿಮೆ ಆಗತಿತ್ತು. ಆದರ ಅವರಿಗೆ ಅದನ್ನು ಹೇಳಲಿಲ್ಲ ಅಂತ ಅನಸ್ತದ. ಅವರಿಗೆ ಷಾಹೀ ಫರ್ಮಾನು ಜಾರಿ ಆಗಿತ್ತು. ಭಾರತದ ಹೊಸ್ತಿಲು (ದೆಹಲೀಜು) ದಾಟಿ, ನಮಸ್ಕಾರ ಮಾಡಿ ಒಳಗ ಬರಬೇಕು ಅಂತ. ಅವರು ಹಂಗ ಮಾಡಿದರು. ಸರ್ವೋಚ್ಚ ನ್ಯಾಯಾಲಕ್ಕ ಹೋದರು. ಅಲ್ಲಿ ನಿಮಿಷಕ್ಕ ಇಂತಿಷ್ಟು ಅಂತ ಚಾರ್ಜು ಮಾಡುವ ವಕೀಲರನ್ನು ಹಿಡದು, ಅವರಿಗೆ ಗಂಟು ಬಿದ್ದು, ನ್ಯಾಯಾಲಯದ ಮುಂದೆ ಅಂಗಲಾಚಿ, ಗಡಿಬಿಡಿ ಹಿಯರಿಂಗು ಮಾಡಿಸಿದರು.

ಅವರು ಅಲ್ಲಿಗೆ ಹೋದದ್ದೇ ತಡ, ಚುನಾವಣಾ ಆಯೋಗದವರು ಅವರ ಸ್ಥಾನಗಳಿಗೆ ಉಪಚುನಾವಣೆ ಘೋಷಿಣಾ ಮಾಡಿದರು. ಆಮ್ಯಾಲೆ ಕೋರ್ಟಿನ ಡೇಟು ಬಿದ್ದಮ್ಯಾಲೆ ಇವರಿಗೆ ಅನುಕೂಲ ಆಗಲೀ ಅಂತ ಇರಬೇಕು, ಮತ್ತ ಮುಂದಕ್ಕ ಹಾಕಿದರು.

ಮಜಾ ಏನಂದರ ಚುನಾವಣೆ ಘೋಷಣೆ ಆದ ಕ್ಷಣದಿಂದ ಮಾದರಿ ನೀತಿಸಂಹಿತೆ (ಮಾನೀಸಂ) ಜಾರಿಗೆ ಬರತದ. ಅದಕ್ಕನ ಆಯೋಗದ ಪತ್ರಿಕಾಗೋಷ್ಠಿಯೊಳಗ ಕಡೇ ಮಾತು ಏನಪಾ ಅಂದರ ದಿನಾಂಕ ಘೋಷಣೆ. ಆದರೆ ನಂಬಸಲದಳವಾದ ಕರ್ನಾಟಕದ ಉಪಚುನಾವಣೆಗೆ ಎರಡೂ ಸಲೇನೂ ಮಾನೀಸಂ ಘೋಷಣೆ ತಕ್ಷಣದಿಂದ ಆಗಲಿಲ್ಲ. ಮೊದಲನೇ ಸಲಾ ಅಂತೂ ಆಗಲೇ ಇಲ್ಲ. ಮುಂದ ಹೋದ ದಿನಾಂಕಕ್ಕ ಘೋಷಣಾ ಆದಾಗ ಆಗಲಿಲ್ಲ. ಚುನಾವಣೆ ಪ್ರಕಟಣೆ ಆದಾಗ ಆತು. ಅದುನೂ ಬಹುಚರ್ಚಿತ ಮಾದರಿಯೊಳಗ ಆತು. ನಾಲ್ಕು ಜಿಲ್ಲೆಗಳೊಳಗ ಇಡೀ ಜಿಲ್ಲೆಗೆ ಆತು. ಇನ್ನು ಉಳಿದ ಕಡೆ ಕೇವಲ ಆ ಕ್ಷೇತ್ರಕ್ಕ ಅಷ್ಟನ ಆತು.

ಇದು ಯಾಕ ಹಿಂಗಾತು ಅಂತ ಆಳುವ ಪಕ್ಷದ ದೊರೆಗಳು ಕೇಳಲಿಲ್ಲ. ಕಾಂಗ್ರೆಸ್ಸಿನ ಕುಂಭಕರ್ಣರಿಗೆ ಕೇಳಬೇಕು ಅಂತ ಅನ್ನಿಸಲಿಲ್ಲ. ಪ್ರಜೆಗಳಿಗಂತೂ ಗೊತ್ತೇ ಆಗಲಿಲ್ಲ, ದಿ ನೇಷನ್ ವಾಂಟ್ಸು ನೋ ಅನ್ನುವ ರಾಷ್ಟ್ರೀಯ ಹಿಡಿಗೂಟಗಳಿಗೂ, ಖನ್ನಡ ಮಾತಾಡುವ ಕಿಡಿಗೂಟಗಳಿಗೂ ಇದು ಟಿಆರ್‌ಪಿ ಮಟೀರಿಯಲ್ಲು ಅಂತ ಅನ್ನಿಸಿಲ್ಲ ಅಂತ ಕಾಣತದ.

ಇನ್ನು ಮಾನ್ಯ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಎರಡು ಕ್ಷೇತ್ರಗಳ ಹುದ್ದರಿಗಳ ಚುನಾವಣೆಗೆ ಹೋದಾಗ ನಿಮ್ಮ ನಾಯಕರನ್ನು ಗೆಲ್ಲಿಸಿ ಕೊಡಿ ಅವರನ್ನು ಮಂತ್ರಿ ಮಾಡುತ್ತೇನೆ ಅಂತಂದರು. ಇನ್ನು ಒಂದು ಕಡೆ ಇವರಿಗೆ ಟೀಕೀಟು ಸಿಗಲಿಲ್ಲ. ಇವರನ್ನು ಮೇಲ್ಮನೆಗೆ ಕಳಿಸಿ ಮಂತ್ರಿ ಮಾಡುತ್ತೇನೆ ಅಂತನೂ ಅಂದರು. ಇದು ಮಾನೀಸಂ ಉಲ್ಲಂಘನೆ ಅಂತ ಠೀವಿಗಳಲ್ಲಿ ಕೇಳಿಬರಲಿಲ್ಲ.

ಇದನ್ನು ಓದಿ : ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಇದರಿಂದ ಕೆಲವು ಜಿಲ್ಲೆಗಳಲ್ಲಿ ಸರಕಾರ ಹೊಸ ಯೋಜನೆ ಶುರುಮಾಡಬಹುದು, ಇನ್ನು ಕೆಲವು ಜಿಲ್ಲೆಗಳಲ್ಲಿ ಶುರು ಮಾಡಲಿಕ್ಕೆ ಬರೋದಿಲ್ಲಾ. ಇದರಿಂದ ಸರಕಾರಿ ಯಂತ್ರದ ದುರುಪಯೋಗ ಆಗಬಹುದು ಅಂತ ಜನಾ ಮಾತಾಡಲಿಕ್ಕೆ ಶುರು ಮಾಡಬೇಕಾಗಿತ್ತು. ಅದೂ ಆಗಲಿಲ್ಲ.

ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ಮತದಾರರಿರುವ, ಅತಿ ದೊಡ್ಡ ಚುನಾವಣೆ ಪ್ರಕ್ರಿಯೆ ನಡೆಯುವ, ಅತಿಹೆಚ್ಚು ಚುನಾವಣೆ ಹಾಗೂ ಸುರಕ್ಷಾ ಸಿಬ್ಬಂದಿ ಒಂದು ನೂರಕ್ಕೂ ಹೆಚ್ಚು ಕೆಲಸ ಮಾಡುವ ಈ ದೇಶದ ಪ್ರಜಾಸತ್ತೆಯ ಮಾನ ಇಷ್ಟು ದಿನ ಕಾಪಾಡಿದ್ದು ಈ ಸಂಹಿತೆ.

`ಜಗವೊಂದು ನಾಟಕರಂಗ’ ಅಂತ ನಮ್ಮ ದಾಸರು ಹೇಳಿದಂಥಾ ಮಾತನ್ನ
ಆವೊನ್ ನದಿ ತೀರದ ಜಾದೂಗಾರ ಶೇಕ್ಸಪಿಯರನೂ ಹೇಳ್ಯಾನ.

ಆ ನಾಟಕಕಾರನ ಸುನೀತವೊಂದರ ಕೊನೆಯ ಸಾಲು ಇವು.
“….ಅಲ್ಲಿಗೆ ಈ ವಿಚಿತ್ರ ಘಟನಾವಳಿ ಮುಗೀಲಿಕ್ಕೆ ಬಂದಂಗ
ಅದೊಂಥರಾ ಮನುಷ್ಯನ ಎರಡನೇ ಎಳವೆ,
ಬರೇ ವಿಸ್ಮೃತಿ:
ಹಲ್ಲಿಲ್ಲ, ಕಣ್ಣಿಲ್ಲ, ರುಚಿ ಇಲ್ಲ
ಏನೂ ಇಲ್ಲ ”

ತಿರುಣೆಲೈ ನಾರಾಯಾಣ ಅಯ್ಯರ್ ಶೇಷನ್ ತೀರಿಕೊಂಡ ವಾರದಲ್ಲಿ ಈ ಮಾತು ಬರೆಯುವುದು ಕಷ್ಟ.

ಅವರಿಗೆ ಸುರಿಸಿದ ಕಂಬನಿಯ ಹಸಿ ಚುನಾವಣೆ ಸ್ವಾಯತ್ತತೆಗೂ ಹತ್ತಿದಂಗ ಕಾಣಬಾರದು ಅಷ್ಟ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...