Homeಕರ್ನಾಟಕಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು...

ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…

- Advertisement -
- Advertisement -

ಈಗ ಸುದ್ದಿ ಏನಂದರ ಬೈ ಎಲೆಕ್ಷನ್ನು. ಇದನ್ನು ಅವರು ಇವರಿಗೆ, ಇವರು ಅವರಿಗೆ ಬೈಯೋ ಎಲೆಕ್ಷನ್ನು ಅಂತ ತಿರುಗಿಸಿ ಬಿಟ್ಟ ಠೀವಿ ನಮ್ಮ ಚಾನಲ್ಲುಗಳದು.

ಅನರ್ಹ ಶಾಸಕರ ರಾಜೀನಾಮೆ ಇಂದ ಉಪಚುನಾವಣೆ 17 ಕಡೆ ನಡೀಬೇಕಾಗೇದ. ಅದರೊಳಗ ಎಂಟು ಕಡೆ ಪ್ರವಾಹ ಬಂದಿತ್ತು. ಅವುದರಾಗ ಏಳು ಉತ್ತರ ಕರ್ನಾಟಕದವು, ಒಂದು ಹಳೇ ಮೈಸೂರಿಂದು. ಅಲ್ಲಿ ಸರಿಯಾಗಿ ಪರಿಹಾರ ಸಿಗದೇ ಪ್ರವಾಹದಿಂದ ಜನಾ ಸಾಯಲಿಕ್ಕೆ ಹತ್ಯಾರ. ಅವರ ಗೋಳು, ಸಂಕಟದ ಸುತ್ತ ಚುನಾವಣೆ ನಡೀಬೇಕಾಗಿತ್ತು ಅಂತ ಸ್ಟುಡಿಯೋಗಳಲ್ಲಿ ಕೂತ ಯಾವ ಠೀವಿ ಹಿಡಿಗೂಟ (ಆಂಕರ್) ಗಳಿಗೆ ಅನಿಸವಲ್ಲದು.

ಗೋಕಾಕದ ಸಾಹುಕಾರರ ಚುನಾವಣಾ ಕಾದಾಟ ಅವರಿಗೆ ನಮ್ಮ ಹಳ್ಳಿಯೊಳಗ ಸಾಹುಕಾರರು ತಮ್ಮ ಮನಿ ಮುಂದಿನ ಮೈದಾನದಾಗ ನಡೆಸೋ ಕುಸ್ತಿ ಥರಾ ಕಾಣಲಿಕ್ಕೆ ಹತ್ತೇದ. ಈ ಚುನಾವಣೆಯೊಳಗ ಮಾತಾಡಲಿಕ್ಕೆ ಭಾಳ ಐತಿ. ಅದರೊಳಗ ಒಂದು ಮಾದರಿ ನೀತಿಸಂಹಿತೆ.

ಈ ಸಲಾ ಏನಾತಪಾ ಅಂದರ ನಮ್ಮಂಥ ಅನರ್ಹರಿಂದ ಆಯ್ಕೆಯಾಗಿ ಬೆಂಗಳೂರಿಗೆ ಹೋದ ಅನರ್ಹರು ಅನರ್ಹತೆಯ ಚರಮಸೀಮೆಗಳನ್ನು ಮುಟ್ಟಬೇಕು ಅಂತ ಹೇಳಿ ಆಟ ಗೂಟ ಜೈ ಅನ್ನಲು ನಿರ್ಧಾರ ಮಾಡಿದರು.

ಮೂರು ದಿನದೊಳಗ 17 ಜನ ತಾವು ಗೆದ್ದುಬಂದ ಪಾರ್ಟಿಗಳಿಗೆ ರಾಜೀನಾಮೆ ಕೊಟ್ಟರು. ಇದರಿಂದ ಆ ಸ್ಥಾನಗಳಿಗೆ ಚುನಾವಣೆ ಆಗಬೇಕಾತು. ಜನಪ್ರತಿನಿಧಿ ಕಾಯಿದೆ ಪ್ರಕಾರ ಯಾವುದೋ ಒಂದು ಎಮ್ಮಲ್ಲೆ ಸೀಟು 180 ದಿನಗಳಿಗೂ ಹೆಚ್ಚು ಖಾಲಿ ಇರಬಾರದು. ಅಲ್ಲಿಯ ಜನರಿಗೆ ಪ್ರಾತಿನಿಧ್ಯ ಇಲ್ಲದಂಗ ಆಗತದ ಅಂತ. (ಅವರಿದ್ದಾಗ ಏನು ಪ್ರತಿನಿಧಿತ್ವ ಮಾಡತಾರ ಏನು ಕಡದು ಕಟ್ಟಿಹಾಕತಾರ ಅನ್ನೋದು ಬ್ಯಾರೆ ವಿಷಯಾ).

ಅವರು ಯಾವ ರಾಜೀನಾಮಾಗಳನ್ನು ಬೀಸಾಕಿ ಹೋಗಿದ್ದರೋ ಅಲ್ಲಿಂದ ಸುಮಾರು 300 ಮೀಟರಿನೊಳಗ ರಾಜ್ಯ ಉಚ್ಚ ನ್ಯಾಯಾಲಯದ ಅದ. ಗೂಗಲ್ ಮ್ಯಾಪು ಇರಲಾರದ ಬೆಂಗಳೂರಿನಲ್ಲಿ ಹೋಗಬಲ್ಲಂಥಾ ಕೆಲವೇ ಕೆಲವು ಸ್ಥಳಗಳೊಳಗ ಅದೂ ಒಂದು. ನಡಕೋತ ಹೋದರ ಐದು ನಿಮಿಷ ಮತ್ತ ಬಡವರ ಸುಂಕದಾಗ ಸರಕಾರ ಖರೀದಿ ಮಾಡಿ ಎಮ್ಮೆಲ್ಲೆಗಳಿಗೆ ಕೊಟ್ಟಿರೋ ಎಸ್ಸುಯುವಿಯೊಳಗ ಹೋದರ ಒಂದು ನಿಮಿಷ ಆಗತದ.

ಆದರ ನಮ್ಮ ಪ್ರತಿನಿಧಿಗಳು ಅಲ್ಲಿಗೆ ಹೋಗಲಿಲ್ಲ. ಅವರು ಸಾದಾ ಜನ ಉಪಯೋಗಿಸುವ ವಿಮಾನಗಳಲ್ಲಿ ಹೋದರ ಲೇಟು ಆಗತದ ಅಂತ ಹೇಳಿ ವಿಶೇಷ ವಿಮಾನದೊಳಗ ದೆಹಲಿಗೆ ಹೋದರು. ಹೋಗೋಬೇಕಾರ ಪ್ರವಾಸಾಯಾಸ ಕಳೀಬೇಕು ಅಂತ ಹೇಳಿ ಮುಂಬೈಯೊಳಗ ಒಂದು ಎರಡು ತಿಂಗಳು ರಾಜಾತಿಥ್ಯ ಸ್ವೀಕರಿಸಿದರು.

ವಿಧಾನಸೌಧದಿಂದ ಹೈಕೋರ್ಟಿಗೆ ಹೋದರ ಸಮೀಪ ಆಗತಿತ್ತು, ವಕೀಲರು ಖರ್ಚುನು ಕಡಿಮೆ ಆಗತಿತ್ತು. ಆದರ ಅವರಿಗೆ ಅದನ್ನು ಹೇಳಲಿಲ್ಲ ಅಂತ ಅನಸ್ತದ. ಅವರಿಗೆ ಷಾಹೀ ಫರ್ಮಾನು ಜಾರಿ ಆಗಿತ್ತು. ಭಾರತದ ಹೊಸ್ತಿಲು (ದೆಹಲೀಜು) ದಾಟಿ, ನಮಸ್ಕಾರ ಮಾಡಿ ಒಳಗ ಬರಬೇಕು ಅಂತ. ಅವರು ಹಂಗ ಮಾಡಿದರು. ಸರ್ವೋಚ್ಚ ನ್ಯಾಯಾಲಕ್ಕ ಹೋದರು. ಅಲ್ಲಿ ನಿಮಿಷಕ್ಕ ಇಂತಿಷ್ಟು ಅಂತ ಚಾರ್ಜು ಮಾಡುವ ವಕೀಲರನ್ನು ಹಿಡದು, ಅವರಿಗೆ ಗಂಟು ಬಿದ್ದು, ನ್ಯಾಯಾಲಯದ ಮುಂದೆ ಅಂಗಲಾಚಿ, ಗಡಿಬಿಡಿ ಹಿಯರಿಂಗು ಮಾಡಿಸಿದರು.

ಅವರು ಅಲ್ಲಿಗೆ ಹೋದದ್ದೇ ತಡ, ಚುನಾವಣಾ ಆಯೋಗದವರು ಅವರ ಸ್ಥಾನಗಳಿಗೆ ಉಪಚುನಾವಣೆ ಘೋಷಿಣಾ ಮಾಡಿದರು. ಆಮ್ಯಾಲೆ ಕೋರ್ಟಿನ ಡೇಟು ಬಿದ್ದಮ್ಯಾಲೆ ಇವರಿಗೆ ಅನುಕೂಲ ಆಗಲೀ ಅಂತ ಇರಬೇಕು, ಮತ್ತ ಮುಂದಕ್ಕ ಹಾಕಿದರು.

ಮಜಾ ಏನಂದರ ಚುನಾವಣೆ ಘೋಷಣೆ ಆದ ಕ್ಷಣದಿಂದ ಮಾದರಿ ನೀತಿಸಂಹಿತೆ (ಮಾನೀಸಂ) ಜಾರಿಗೆ ಬರತದ. ಅದಕ್ಕನ ಆಯೋಗದ ಪತ್ರಿಕಾಗೋಷ್ಠಿಯೊಳಗ ಕಡೇ ಮಾತು ಏನಪಾ ಅಂದರ ದಿನಾಂಕ ಘೋಷಣೆ. ಆದರೆ ನಂಬಸಲದಳವಾದ ಕರ್ನಾಟಕದ ಉಪಚುನಾವಣೆಗೆ ಎರಡೂ ಸಲೇನೂ ಮಾನೀಸಂ ಘೋಷಣೆ ತಕ್ಷಣದಿಂದ ಆಗಲಿಲ್ಲ. ಮೊದಲನೇ ಸಲಾ ಅಂತೂ ಆಗಲೇ ಇಲ್ಲ. ಮುಂದ ಹೋದ ದಿನಾಂಕಕ್ಕ ಘೋಷಣಾ ಆದಾಗ ಆಗಲಿಲ್ಲ. ಚುನಾವಣೆ ಪ್ರಕಟಣೆ ಆದಾಗ ಆತು. ಅದುನೂ ಬಹುಚರ್ಚಿತ ಮಾದರಿಯೊಳಗ ಆತು. ನಾಲ್ಕು ಜಿಲ್ಲೆಗಳೊಳಗ ಇಡೀ ಜಿಲ್ಲೆಗೆ ಆತು. ಇನ್ನು ಉಳಿದ ಕಡೆ ಕೇವಲ ಆ ಕ್ಷೇತ್ರಕ್ಕ ಅಷ್ಟನ ಆತು.

ಇದು ಯಾಕ ಹಿಂಗಾತು ಅಂತ ಆಳುವ ಪಕ್ಷದ ದೊರೆಗಳು ಕೇಳಲಿಲ್ಲ. ಕಾಂಗ್ರೆಸ್ಸಿನ ಕುಂಭಕರ್ಣರಿಗೆ ಕೇಳಬೇಕು ಅಂತ ಅನ್ನಿಸಲಿಲ್ಲ. ಪ್ರಜೆಗಳಿಗಂತೂ ಗೊತ್ತೇ ಆಗಲಿಲ್ಲ, ದಿ ನೇಷನ್ ವಾಂಟ್ಸು ನೋ ಅನ್ನುವ ರಾಷ್ಟ್ರೀಯ ಹಿಡಿಗೂಟಗಳಿಗೂ, ಖನ್ನಡ ಮಾತಾಡುವ ಕಿಡಿಗೂಟಗಳಿಗೂ ಇದು ಟಿಆರ್‌ಪಿ ಮಟೀರಿಯಲ್ಲು ಅಂತ ಅನ್ನಿಸಿಲ್ಲ ಅಂತ ಕಾಣತದ.

ಇನ್ನು ಮಾನ್ಯ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಎರಡು ಕ್ಷೇತ್ರಗಳ ಹುದ್ದರಿಗಳ ಚುನಾವಣೆಗೆ ಹೋದಾಗ ನಿಮ್ಮ ನಾಯಕರನ್ನು ಗೆಲ್ಲಿಸಿ ಕೊಡಿ ಅವರನ್ನು ಮಂತ್ರಿ ಮಾಡುತ್ತೇನೆ ಅಂತಂದರು. ಇನ್ನು ಒಂದು ಕಡೆ ಇವರಿಗೆ ಟೀಕೀಟು ಸಿಗಲಿಲ್ಲ. ಇವರನ್ನು ಮೇಲ್ಮನೆಗೆ ಕಳಿಸಿ ಮಂತ್ರಿ ಮಾಡುತ್ತೇನೆ ಅಂತನೂ ಅಂದರು. ಇದು ಮಾನೀಸಂ ಉಲ್ಲಂಘನೆ ಅಂತ ಠೀವಿಗಳಲ್ಲಿ ಕೇಳಿಬರಲಿಲ್ಲ.

ಇದನ್ನು ಓದಿ : ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಇದರಿಂದ ಕೆಲವು ಜಿಲ್ಲೆಗಳಲ್ಲಿ ಸರಕಾರ ಹೊಸ ಯೋಜನೆ ಶುರುಮಾಡಬಹುದು, ಇನ್ನು ಕೆಲವು ಜಿಲ್ಲೆಗಳಲ್ಲಿ ಶುರು ಮಾಡಲಿಕ್ಕೆ ಬರೋದಿಲ್ಲಾ. ಇದರಿಂದ ಸರಕಾರಿ ಯಂತ್ರದ ದುರುಪಯೋಗ ಆಗಬಹುದು ಅಂತ ಜನಾ ಮಾತಾಡಲಿಕ್ಕೆ ಶುರು ಮಾಡಬೇಕಾಗಿತ್ತು. ಅದೂ ಆಗಲಿಲ್ಲ.

ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ಮತದಾರರಿರುವ, ಅತಿ ದೊಡ್ಡ ಚುನಾವಣೆ ಪ್ರಕ್ರಿಯೆ ನಡೆಯುವ, ಅತಿಹೆಚ್ಚು ಚುನಾವಣೆ ಹಾಗೂ ಸುರಕ್ಷಾ ಸಿಬ್ಬಂದಿ ಒಂದು ನೂರಕ್ಕೂ ಹೆಚ್ಚು ಕೆಲಸ ಮಾಡುವ ಈ ದೇಶದ ಪ್ರಜಾಸತ್ತೆಯ ಮಾನ ಇಷ್ಟು ದಿನ ಕಾಪಾಡಿದ್ದು ಈ ಸಂಹಿತೆ.

`ಜಗವೊಂದು ನಾಟಕರಂಗ’ ಅಂತ ನಮ್ಮ ದಾಸರು ಹೇಳಿದಂಥಾ ಮಾತನ್ನ
ಆವೊನ್ ನದಿ ತೀರದ ಜಾದೂಗಾರ ಶೇಕ್ಸಪಿಯರನೂ ಹೇಳ್ಯಾನ.

ಆ ನಾಟಕಕಾರನ ಸುನೀತವೊಂದರ ಕೊನೆಯ ಸಾಲು ಇವು.
“….ಅಲ್ಲಿಗೆ ಈ ವಿಚಿತ್ರ ಘಟನಾವಳಿ ಮುಗೀಲಿಕ್ಕೆ ಬಂದಂಗ
ಅದೊಂಥರಾ ಮನುಷ್ಯನ ಎರಡನೇ ಎಳವೆ,
ಬರೇ ವಿಸ್ಮೃತಿ:
ಹಲ್ಲಿಲ್ಲ, ಕಣ್ಣಿಲ್ಲ, ರುಚಿ ಇಲ್ಲ
ಏನೂ ಇಲ್ಲ ”

ತಿರುಣೆಲೈ ನಾರಾಯಾಣ ಅಯ್ಯರ್ ಶೇಷನ್ ತೀರಿಕೊಂಡ ವಾರದಲ್ಲಿ ಈ ಮಾತು ಬರೆಯುವುದು ಕಷ್ಟ.

ಅವರಿಗೆ ಸುರಿಸಿದ ಕಂಬನಿಯ ಹಸಿ ಚುನಾವಣೆ ಸ್ವಾಯತ್ತತೆಗೂ ಹತ್ತಿದಂಗ ಕಾಣಬಾರದು ಅಷ್ಟ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...