Homeಕರ್ನಾಟಕನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

ನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

- Advertisement -
- Advertisement -

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಕೃಷಿ ಮಂತ್ರಿ ಎನ್. ಚಲುವರಾಯಸ್ವಾಮಿ ಸರಕಾರ ರಚನೆಯಾದ ಒಂದೇ ವಾರಕ್ಕೆ ಸಕ್ಕರೆ ಕಾರ್ಖಾನೆಗೆ ಐವತ್ತು ಕೋಟಿ ಹಣ ಬಿಡುಗಡೆ ಮಾಡಿಸಿ ತಾವೊಬ್ಬ ಸಮರ್ಥ ಮಂತ್ರಿ ಎಂಬ ಭರವಸೆಯನ್ನು ಮೂಡಿಸುವತ್ತ ಮುಂದಡಿಯಿಟ್ಟಿದ್ದಾರೆ!

ಮಂಡ್ಯ ಜಿಲ್ಲಾಪಂಚಾಯ್ತಿಗೆ ಆಯ್ಕೆಯಾಗುವುದರ ಮುಖಾಂತರ ರಾಜಕೀಯ ಪ್ರವೇಶ ಪಡೆದ ಚಲುವರಾಯಸ್ವಾಮಿ ಅಂದು ಜಿಲ್ಲಾ ಮಂತ್ರಿಯಾಗಿದ್ದ ಎಸ್.ಡಿ ಜಯರಾಮರ ಬೆಂಬಲದಿಂದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿ ನಾಗಮಂಗಲ ಕ್ಷೇತ್ರದ ಕೆಲಸಗಳನ್ನು ಮಾಡುತ್ತ ಜನಪ್ರಿಯತೆ ಗಳಿಸತೊಡಗಿದರು. ಸಹಜವಾಗಿ ಅಂದಿನ ಶಾಸಕರು ಮತ್ತು ಬಿಡಿಎ ಛೇರ್ಮನ್ ಆಗಿದ್ದ ಶಿವರಾಮೇಗೌಡರು ತನ್ನ ಪ್ರತಿಸ್ಪರ್ಧಿಯ ವಿಷಯವಾಗಿ ಹೆಚ್ಚು ಪ್ರಚಾರ ಕೊಡತೊಡಗಿದರು; ಅದಾಗಲೇ ವಕೀಲ ಮತ್ತು ಪತ್ರಕರ್ತ ಗಂಗಾಧರಮೂರ್ತಿ ಕೊಲೆ ಆಪಾದನೆಯಿಂದ ಬಿಡುಗಡೆಯಾಗಿದ್ದ ಶಿವರಾಮೇಗೌಡರು ಹೊಸ ಹುಮ್ಮಸ್ಸಿನಿಂದ ನಾನು ಅಂತಹವನಲ್ಲ ಎಂದು ಸಾಬೀತುಮಾಡುವ ಭರದಲ್ಲಿ ಚಲುವರಾಯಸ್ವಾಮಿಗೇ ಹೆಚ್ಚು ಪ್ರಚಾರಕೊಟ್ಟರು. ಜನಕ್ಕೆ ಚಲುವರಾಯಸ್ವಾಮಿ ಹೇಗಿರಬಹುದೆಂಬ ಕುತೂಹಲ ಜಾಸ್ತಿಯಾಗಿ ತಮ್ಮ ಊರಿನ ಹಬ್ಬ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕರೆಯತೊಡಗಿದರು; ಆಗ ಜನರಿಗೆ ತಮ್ಮ ನಾಯಕನಾಗಲು ಈತನೇ ಸರಿ ಅನ್ನಿಸತೊಡಗಿತು. ಮುಂದೆ 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶೀವರಾಮೇಗೌಡರ ಎದುರು 16 ಸಾವಿರ ಮತಗಳ ಮುನ್ನಡೆಯಿಂದ ಗೆದ್ದರು. ಆಗ ಕುಮಾರಸ್ವಾಮಿ ದೇವೇಗೌಡರಾದಿಯಾಗಿ ಸೋತು ಹೋಗಿದ್ದರಿಂದ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ ಗುರುತಿಸುವ ನಾಯಕರಾಗಿ ಬೆಳೆಯತೊಡಗಿದ್ದರು.

ವಿರೋಧ ಪಕ್ಷದಲ್ಲಿದ್ದುಕೊಂಡೇ ಎಸ್‌ಎಂ ಕೃಷ್ಣರ ಸರಕಾರದಿಂದ ತಾಲೂಕಿಗೆ ಬೇಕಾದ ಕೆಲಸ ಮಾಡುತ್ತ ಐದು ವರ್ಷ ತುಂಬಿಸಿದಾಗ ಮತ್ತೆ ಚುನಾವಣೆ ಬಂತು. 2004ರಲ್ಲಿ ಮತ್ತೆ ಗೆದ್ದ ಚಲುವರಾಯಸ್ವಾಮಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾದರು. ಆಗ ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದುದಲ್ಲದೆ ನಾಗಮಂಗಲದ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಸುಮಾರು ಐದು ಊರುಗಳಿಗೆ ಪ್ರಾಥಮಿಕ ಆರೋಗ್ಯದ ಘಟಕಗಳನ್ನು ತಂದರು. ಇದರ ಜೊತೆಗೆ ರಾಜ್ಯದ ಇನ್ನಿತರ ಕಡೆಯ ಜವಾಬ್ದಾರಿಯನ್ನು ನೋಡಬೇಕಿದ್ದುದರಿಂದ ಆರೋಗ್ಯ ಇಲಾಖೆಯನ್ನು ಸುಸ್ಥಿತಿಗೆ ತರುವ ಸಮಯದಲ್ಲಿ ಸಮ್ಮಿಶ್ರ ಸರಕಾರವೇ ಹೈಜಾಕಾದಂತಾಗಿ ಧರ್ಮಸಿಂಗ್ ಮನೆಗೆ ಹೋದರು. ಬಹುಶಃ ಕರ್ನಾಟಕದ ರಾಜಕಾರಣ ತನ್ನ ಪಥವನ್ನು ಬದಲಿಸಿಕೊಂಡು ಪತನದ ಹಾದಿ ಹಿಡಿಯಲು ಇದೇ ಕಾರಣ. ಕುಮಾರಸ್ವಾಮಿಯವರು ಬಿಜೆಪಿಗಳೊಟ್ಟಿಗೆ ಸರಕಾರ ಮಾಡಿದರು.

ದೇವೇಗೌಡ

ಆಗ ಕುಮಾರಸ್ವಾಮಿ ಸುತ್ತ ಸಮರ್ಥರ ದಂಡೇ ನೆರೆದಿತ್ತು; ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ ಹೀಗೆ; ಇವರೆಲ್ಲಾ ತಮ್ಮ ಮಗನನ್ನು ಮೀರಿಸುವ ನಾಯಕರಾಗಿ ಹೊರಹೊಮ್ಮುತ್ತಿದ್ದಂತೆ ಕಂಡಿದ್ದರಿಂದ ಆತಂಕಗೊಂಡ ದೇವೇಗೌಡರು ಮಗನೊಂದಿಗೆ ರಾಜಿಯಾಗಿ ಅಧಿಕಾರದ ಸೂತ್ರ ಕೈಗೆ ತೆಗೆದುಕೊಳ್ಳತೊಡಗಿದರು. ಚಲುವರಾಯಸ್ವಾಮಿ ಆಗ ಸಾರಿಗೆ ಸಚಿವರಾಗಿದ್ದರು. ಆಗಾಗಲೇ ನಾಗಮಂಗಲಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ತಂದು ಆರ್‌ಟಿಓ ಆಫೀಸ್ ತೆರೆದಿದ್ದರು ಮತ್ತು ಬಸ್ಸನ್ನೇ ನೋಡದಂತಹ ಹಳ್ಳಿಗಳಿಗೂ ಬಸ್ಸು ಹೋಗಿ ಬರುವಂತೆ ಮಾಡಿದ್ದರು. ಕೆ.ಇ.ಬಿಯ ಇ.ಇ ಆಫೀಸು (ಎಕ್ಸೆಕ್ಯುಟಿವ್ ಇಂಜಿನಿಯರ್ ಆಫೀಸು) ಪಾಂಡವಪುರದಲ್ಲಿತ್ತು. ಅದನ್ನು ನಾಗಮಂಗಲಕ್ಕೂ ತಂದರು.

ಆಗ ಅಸಿಸ್ಟೆಂಟ್ ಕಮೀಷನರ್ ಕಚೇರಿ ಪಾಂಡವಪುರದಲ್ಲಿದ್ದು ನಾಗಮಂಗಲ ಪ್ರಾಂತ್ಯದ ಜನ ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕೆ ಪಾಂಡವಪುರಕ್ಕೆ ಅಲೆಯಬೇಕಾಗಿತ್ತು. ಚಲುವರಾಯಸ್ವಾಮಿಯವರು ಎ.ಸಿ. ಕಚೇರಿಯೇ ವಾರಕ್ಕೊಮ್ಮೆ ನಾಗಮಂಗಲಕ್ಕೆ ಬಂದು ಕೆಲಸ ಮಾಡುವಂತೆ ಮಾಡಿದರು. ಅಲ್ಲದೆ ತಾಲೂಕಿನ ದೊಡ್ಡ ಊರುಗಳಿಗೆ ಹೈಸ್ಕೂಲು ತಂದರು. ಅಷ್ಟರಲ್ಲಿ ಇವರುಗಳ ಇಲಾಖೆಯ ಕೆಲಸಗಳಿಗೆ ಅಡೆತಡೆಗಳು ಶುರುವಾದವು. ಗೌಡರಿಗೆ ಚಲುವರಾಯಸ್ವಾಮಿ ಎಲ್ಲೋ ತಮ್ಮ ಮಗನನ್ನೇ ಒವರ್‌ಟೇಕ್ ಮಾಡುವಂತೆ ಕಂಡಿತು; ಹಾಗಾಗಿ ದೇವೇಗೌಡರ ಅಭಿಮಾನಿಗಳು ಮತ್ತು ರೇವಣ್ಣನ ಹಿಂಬಾಲಕರು ಮುಂದಿನ 2008ರ ಚುನಾವಣೆಯಲ್ಲಿ ಚಲುವರಾಯಸ್ವಾಮಿ ವಿರುದ್ಧ ಕೆಲಸ ಮಾಡಿದ್ದರು ಎಂಬ ಮಾತು ಜನಜನಿತವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಮುಂದೆ ಪಹರೆ ವಾಹನದ ನಡುವೆ ಸೈರನ್ ಮೊಳಗಿಸಿಕೊಂಡು ಹೋಗುವ ಮಂತ್ರಿ ಬಗ್ಗೆ ನಿಷ್ಕಾರಣದ ತಾತ್ಸಾರ ಬೆಳೆದುಕೊಂಡಿದ್ದು ಒಂದು ಕಾರಣವಾಗಿ ಆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸೋತರು. ಇಷ್ಟೊಂದು ಕೆಲಸ ಮಾಡಿಯೂ ಜನ ಸೋಲಿಸಿದರಲ್ಲಾ ಎಂಬ ನಿರಾಶೆಗೆ ಚಲುವರಾಯಸ್ವಾಮಿ ಒಳಗಾಗಿದ್ದರು. ಬೇರೆ ಕಾರಣಗಳೂ ಇದ್ದವು. ಆ ಕಾರಣಗಳು ಮುಂದೆ ಬೃಹದಾಕಾರವಾಗಿ ಎದ್ದುನಿಂತು ದೇವೇಗೌಡರು ನಾಗಮಂಗಲ ಕ್ಷೇತ್ರದ ದೇವಸ್ಥಾನ ಉದ್ಘಾಟನೆ, ತಿಥಿ, ಮದುವೆಗೆಲ್ಲಾ ಬಂದು ಚಲುವರಾಯಸ್ವಾಮಿಯನ್ನು ಮೂಲೆಗುಂಪು ಮಾಡಲು ಶತಾಯಗತಾಯ ಪ್ರಯತ್ನಿಸಿದರು. ಆಗ ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆ ನೌಕರರ ವಸತಿ ನಿರ್ಮಾಣದ ಸೊಸೈಟಿಯಲ್ಲಿ ಹೆಸರು ಮಾಡಿದ್ದ ಸುರೇಶ್‌ಗೌಡರು ಬಂದು ಚಲುವರಾಯಸ್ವಾಮಿ ಎದುರು ನಿಂತು ಗೆದ್ದರು. 2013ರಲ್ಲಿ ಚಲುವರಾಯಸ್ವಾಮಿ ಮತ್ತೆ ಜೆಡಿಎಸ್‌ನಿಂದ ಗೆದ್ದರೂ ಆಗ ಕಾಂಗ್ರೆಸ್ ಸರ್ಕಾರ ಬಂತು. ಮುಂದೆ ಅದುಲುಬದಲಾಗಿ ಸುರೇಶ್‌ಗೌಡ ಜನತಾದಳಕ್ಕೆ ಹೋದರೆ ಚಲುವರಾಯಸ್ವಾಮಿ ಕಾಂಗ್ರೆಸ್‌ಗೆ ಹೋದರು.

ಇದನ್ನೂ ಓದಿ: ನಮ್ಮ ಸಚಿವರಿವರು; ಸರಳ ರಾಜಕಾರಣಿ ರಹೀಂ ಖಾನ್ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ

ನಂತರ 2018ರ ಚುನಾವಣೆಯಲ್ಲಿ ಸುರೇಶ್‌ಗೌಡರು ದಾಖಲೆಯ ನಲವತ್ತೇಳುವರೆ ಸಾವಿರ ಲೀಡನಲ್ಲಿ ಗೆದ್ದರು. ಚಲುವರಾಯಸ್ವಾಮಿ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ಸಿಗೆ ಹೋದರೆಂದು ದೇವೇಗೌಡರ ಕಡೆಯವರು ಮತದಾರರನ್ನು ಕೆರಳಿಸಿ ಗೆಲುವು ಸಾಧಿಸಿದ್ದರು. ಮುಂದೆ ಸಮ್ಮಿಶ್ರ ಸರಕಾರ ಬಂತು; 80 ಸೀಟು ಗೆದ್ದಿದ್ದ ಕಾಂಗ್ರೆಸ್ ಮೂವತ್ತು ಚಿಲ್ಲರೆ ಸೀಟು ಗೆದ್ದಿದ್ದ ದಳಕ್ಕೆ ಸಪೋರ್ಟಟು ಮಾಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿತ್ತು. ಚಲುವರಾಯಸ್ವಾಮಿಯವರನ್ನು ಮೂಲೆಗುಂಪು ಮಾಡಿ ಮಂಡ್ಯವನ್ನು ಕೈಗೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ ದೇವೇಗೌಡರು ಮತ್ತು ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯವರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸಿದರು. ಅವರಗೂ ಓಟು ಕೇಳುವಂತಹ ಸ್ಥಿತಿ ಚಲುವರಾಯಸ್ವಾಮಿಗೆ ಬಂತು. ಆದರೆ ಮಂಡ್ಯದ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿಯಾದ ನಿಖಿಲ್‌ಗೆ ಕೆಲಸ ಮಾಡುವುದರ ಬದಲು ಸುಮಲತಾಗೆ ವರ್ಕ್ ಮಾಡಿದ್ದರಿಂದ ನಿಖಿಲ್ ಒಂದೂಕಾಲು ಲಕ್ಷದ ಅಂತರದಿಂದ ಸೋತರು. ಇದರಲ್ಲಿ ಚಲುವರಾಯಸ್ವಾಮಿ ಶ್ರಮವೂ ಇತ್ತು.

ಸುರೇಶ್‌ಗೌಡ

ಮುಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ನಾಗಮಂಗಲದ ಮುಖಾಂತರ ಹಾದುಹೋಗುವಾಗ ಅದರ ಜವಾಬ್ದಾರಿ ಚಲುವರಾಯಸ್ವಾಮಿ ಮೇಲೆ ಬಿತ್ತು. ಈ ಐತಿಹಾಸಿಕ ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಚಲುವರಾಯಸ್ವಾಮಿ ರಾಹುಲಗಾಂಧಿಗೆ ಹತ್ತಿರವಾದರು.

ಈ ಬಾರಿ ಚಲುವರಾಯಸ್ವಾಮಿ ಎದುರಿಸಿದ ನಾಗಮಂಗಲದ ಚುನಾವಣೆ ಹಿಂದಿಗಿಂತಲೂ ಬಿರುಸಾಗಿತ್ತು. ಗೆಲ್ಲುವ ಎಲ್ಲ ಸೂಚನೆಗಳಿದ್ದರೂ ಕಡೆ ಗಳಿಗೆಯಲ್ಲಿ ನಾಗಮಂಗಲಕ್ಕೆ ಬಂದು ರೋಡ್‌ಶೋ ಮಾಡಿದ ದೇವೇಗೌಡರು, ಚಲುವರಾಯಸ್ವಾಮಿಯನ್ನು ಸೋಲಿಸಲು ಕರೆಕೊಟ್ಟಿದ್ದಲ್ಲದೆ, ಗದ್ಗರಿತವಾಗಿ ಕೇಳಿಕೊಂಡರು. ಅವರ ಸಭೆಗೆ ಸೇರಿದ್ದ ಜನಸ್ತೋಮ ನೋಡಿದ ಜನರು ಸುರೇಶ್‌ಗೌಡರ ಗೆಲುವಿನ ಬಗ್ಗೆ ಯಾವ ಸಂಶಯವನ್ನು ಇಟ್ಟುಕೊಳ್ಳದೆ ಮನಸ್ಸಿಗೆ ಬಂದಷ್ಟು ಬೆಟ್ ಕಟ್ಟಿ ಸೋತುಹೋದರು. ಬೆಳ್ಳೂರು, ನಾಗಮಂಗಲ ಮತ್ತು ಕೊಪ್ಪ ಹೋಬಳಿ ಚಲುವರಾಯಸ್ವಾಮಿಯವರ ಕೈಹಿಡಿದಿದ್ದರಿಂದ ಅವರು ನಾಲ್ಕುವರೆ ಸಾವಿರ ವೋಟುಗಳ ಅಂತರದಲ್ಲಿ ಗೆದ್ದರು. ಈಗ ಎಲ್ಲ ಅಡೆತಡೆಗಳನ್ನು ನಿಭಾಯಿಸಿಕೊಂಡು ಗೆದ್ದು ಸಚಿವರಾಗಿರುವ ಮಂಡ್ಯ ಜಿಲ್ಲೆಯ ನಾಯಕರಾದ ಚಲುವರಾಯಸ್ವಾಮಿಯನ್ನು ಮಂಡ್ಯದ ಕರ್ನಾಟಕ ಸಂಘ ಸನ್ಮಾನಿಸಿದೆ. ಕೃಷಿ ಸಮಾಜದಿಂದ ಬಂದ ಭೈರೇಗೌಡರ ನಂತರ ಚಲುವರಾಯಸ್ವಾಮಿ ಆ ಇಲಾಖೆಗೆ ಜೀವ ನೀಡಬೇಕಾಗಿದೆ. ನಾಗಮಂಗಲದ ಶಾಸಕರಾಗಿದ್ದ ಚಲುವರಾಯಸ್ವಾಮಿ ಈಗ ಕೃಷಿಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ, ಮಂಡ್ಯದಲ್ಲಿ ನಿರ್ವಹಣೆಯಿಲ್ಲದೆ ಹಾಳುಬಿದ್ದಿರುವ ರೈತ ಸಭಾಂಗಣ, ಕಲಾಮಂದಿರ ಇತ್ಯಾದಿ ಸಾಂಸ್ಕೃತಿಕ ವಲಯಗಳ ಪುನಶ್ಚೇತನಕ್ಕೆ ಕೆಲಸ ಮಾಡಿ, ಮಂಡ್ಯವನ್ನು ಅದರ ಗತಕಾಲದ ವೈಭವಕ್ಕೆ ಮರಳಿ ತರಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...