Homeಕರ್ನಾಟಕನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

ನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

- Advertisement -
- Advertisement -

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಕೃಷಿ ಮಂತ್ರಿ ಎನ್. ಚಲುವರಾಯಸ್ವಾಮಿ ಸರಕಾರ ರಚನೆಯಾದ ಒಂದೇ ವಾರಕ್ಕೆ ಸಕ್ಕರೆ ಕಾರ್ಖಾನೆಗೆ ಐವತ್ತು ಕೋಟಿ ಹಣ ಬಿಡುಗಡೆ ಮಾಡಿಸಿ ತಾವೊಬ್ಬ ಸಮರ್ಥ ಮಂತ್ರಿ ಎಂಬ ಭರವಸೆಯನ್ನು ಮೂಡಿಸುವತ್ತ ಮುಂದಡಿಯಿಟ್ಟಿದ್ದಾರೆ!

ಮಂಡ್ಯ ಜಿಲ್ಲಾಪಂಚಾಯ್ತಿಗೆ ಆಯ್ಕೆಯಾಗುವುದರ ಮುಖಾಂತರ ರಾಜಕೀಯ ಪ್ರವೇಶ ಪಡೆದ ಚಲುವರಾಯಸ್ವಾಮಿ ಅಂದು ಜಿಲ್ಲಾ ಮಂತ್ರಿಯಾಗಿದ್ದ ಎಸ್.ಡಿ ಜಯರಾಮರ ಬೆಂಬಲದಿಂದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿ ನಾಗಮಂಗಲ ಕ್ಷೇತ್ರದ ಕೆಲಸಗಳನ್ನು ಮಾಡುತ್ತ ಜನಪ್ರಿಯತೆ ಗಳಿಸತೊಡಗಿದರು. ಸಹಜವಾಗಿ ಅಂದಿನ ಶಾಸಕರು ಮತ್ತು ಬಿಡಿಎ ಛೇರ್ಮನ್ ಆಗಿದ್ದ ಶಿವರಾಮೇಗೌಡರು ತನ್ನ ಪ್ರತಿಸ್ಪರ್ಧಿಯ ವಿಷಯವಾಗಿ ಹೆಚ್ಚು ಪ್ರಚಾರ ಕೊಡತೊಡಗಿದರು; ಅದಾಗಲೇ ವಕೀಲ ಮತ್ತು ಪತ್ರಕರ್ತ ಗಂಗಾಧರಮೂರ್ತಿ ಕೊಲೆ ಆಪಾದನೆಯಿಂದ ಬಿಡುಗಡೆಯಾಗಿದ್ದ ಶಿವರಾಮೇಗೌಡರು ಹೊಸ ಹುಮ್ಮಸ್ಸಿನಿಂದ ನಾನು ಅಂತಹವನಲ್ಲ ಎಂದು ಸಾಬೀತುಮಾಡುವ ಭರದಲ್ಲಿ ಚಲುವರಾಯಸ್ವಾಮಿಗೇ ಹೆಚ್ಚು ಪ್ರಚಾರಕೊಟ್ಟರು. ಜನಕ್ಕೆ ಚಲುವರಾಯಸ್ವಾಮಿ ಹೇಗಿರಬಹುದೆಂಬ ಕುತೂಹಲ ಜಾಸ್ತಿಯಾಗಿ ತಮ್ಮ ಊರಿನ ಹಬ್ಬ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕರೆಯತೊಡಗಿದರು; ಆಗ ಜನರಿಗೆ ತಮ್ಮ ನಾಯಕನಾಗಲು ಈತನೇ ಸರಿ ಅನ್ನಿಸತೊಡಗಿತು. ಮುಂದೆ 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶೀವರಾಮೇಗೌಡರ ಎದುರು 16 ಸಾವಿರ ಮತಗಳ ಮುನ್ನಡೆಯಿಂದ ಗೆದ್ದರು. ಆಗ ಕುಮಾರಸ್ವಾಮಿ ದೇವೇಗೌಡರಾದಿಯಾಗಿ ಸೋತು ಹೋಗಿದ್ದರಿಂದ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ ಗುರುತಿಸುವ ನಾಯಕರಾಗಿ ಬೆಳೆಯತೊಡಗಿದ್ದರು.

ವಿರೋಧ ಪಕ್ಷದಲ್ಲಿದ್ದುಕೊಂಡೇ ಎಸ್‌ಎಂ ಕೃಷ್ಣರ ಸರಕಾರದಿಂದ ತಾಲೂಕಿಗೆ ಬೇಕಾದ ಕೆಲಸ ಮಾಡುತ್ತ ಐದು ವರ್ಷ ತುಂಬಿಸಿದಾಗ ಮತ್ತೆ ಚುನಾವಣೆ ಬಂತು. 2004ರಲ್ಲಿ ಮತ್ತೆ ಗೆದ್ದ ಚಲುವರಾಯಸ್ವಾಮಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾದರು. ಆಗ ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದುದಲ್ಲದೆ ನಾಗಮಂಗಲದ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಸುಮಾರು ಐದು ಊರುಗಳಿಗೆ ಪ್ರಾಥಮಿಕ ಆರೋಗ್ಯದ ಘಟಕಗಳನ್ನು ತಂದರು. ಇದರ ಜೊತೆಗೆ ರಾಜ್ಯದ ಇನ್ನಿತರ ಕಡೆಯ ಜವಾಬ್ದಾರಿಯನ್ನು ನೋಡಬೇಕಿದ್ದುದರಿಂದ ಆರೋಗ್ಯ ಇಲಾಖೆಯನ್ನು ಸುಸ್ಥಿತಿಗೆ ತರುವ ಸಮಯದಲ್ಲಿ ಸಮ್ಮಿಶ್ರ ಸರಕಾರವೇ ಹೈಜಾಕಾದಂತಾಗಿ ಧರ್ಮಸಿಂಗ್ ಮನೆಗೆ ಹೋದರು. ಬಹುಶಃ ಕರ್ನಾಟಕದ ರಾಜಕಾರಣ ತನ್ನ ಪಥವನ್ನು ಬದಲಿಸಿಕೊಂಡು ಪತನದ ಹಾದಿ ಹಿಡಿಯಲು ಇದೇ ಕಾರಣ. ಕುಮಾರಸ್ವಾಮಿಯವರು ಬಿಜೆಪಿಗಳೊಟ್ಟಿಗೆ ಸರಕಾರ ಮಾಡಿದರು.

ದೇವೇಗೌಡ

ಆಗ ಕುಮಾರಸ್ವಾಮಿ ಸುತ್ತ ಸಮರ್ಥರ ದಂಡೇ ನೆರೆದಿತ್ತು; ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ ಹೀಗೆ; ಇವರೆಲ್ಲಾ ತಮ್ಮ ಮಗನನ್ನು ಮೀರಿಸುವ ನಾಯಕರಾಗಿ ಹೊರಹೊಮ್ಮುತ್ತಿದ್ದಂತೆ ಕಂಡಿದ್ದರಿಂದ ಆತಂಕಗೊಂಡ ದೇವೇಗೌಡರು ಮಗನೊಂದಿಗೆ ರಾಜಿಯಾಗಿ ಅಧಿಕಾರದ ಸೂತ್ರ ಕೈಗೆ ತೆಗೆದುಕೊಳ್ಳತೊಡಗಿದರು. ಚಲುವರಾಯಸ್ವಾಮಿ ಆಗ ಸಾರಿಗೆ ಸಚಿವರಾಗಿದ್ದರು. ಆಗಾಗಲೇ ನಾಗಮಂಗಲಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ತಂದು ಆರ್‌ಟಿಓ ಆಫೀಸ್ ತೆರೆದಿದ್ದರು ಮತ್ತು ಬಸ್ಸನ್ನೇ ನೋಡದಂತಹ ಹಳ್ಳಿಗಳಿಗೂ ಬಸ್ಸು ಹೋಗಿ ಬರುವಂತೆ ಮಾಡಿದ್ದರು. ಕೆ.ಇ.ಬಿಯ ಇ.ಇ ಆಫೀಸು (ಎಕ್ಸೆಕ್ಯುಟಿವ್ ಇಂಜಿನಿಯರ್ ಆಫೀಸು) ಪಾಂಡವಪುರದಲ್ಲಿತ್ತು. ಅದನ್ನು ನಾಗಮಂಗಲಕ್ಕೂ ತಂದರು.

ಆಗ ಅಸಿಸ್ಟೆಂಟ್ ಕಮೀಷನರ್ ಕಚೇರಿ ಪಾಂಡವಪುರದಲ್ಲಿದ್ದು ನಾಗಮಂಗಲ ಪ್ರಾಂತ್ಯದ ಜನ ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕೆ ಪಾಂಡವಪುರಕ್ಕೆ ಅಲೆಯಬೇಕಾಗಿತ್ತು. ಚಲುವರಾಯಸ್ವಾಮಿಯವರು ಎ.ಸಿ. ಕಚೇರಿಯೇ ವಾರಕ್ಕೊಮ್ಮೆ ನಾಗಮಂಗಲಕ್ಕೆ ಬಂದು ಕೆಲಸ ಮಾಡುವಂತೆ ಮಾಡಿದರು. ಅಲ್ಲದೆ ತಾಲೂಕಿನ ದೊಡ್ಡ ಊರುಗಳಿಗೆ ಹೈಸ್ಕೂಲು ತಂದರು. ಅಷ್ಟರಲ್ಲಿ ಇವರುಗಳ ಇಲಾಖೆಯ ಕೆಲಸಗಳಿಗೆ ಅಡೆತಡೆಗಳು ಶುರುವಾದವು. ಗೌಡರಿಗೆ ಚಲುವರಾಯಸ್ವಾಮಿ ಎಲ್ಲೋ ತಮ್ಮ ಮಗನನ್ನೇ ಒವರ್‌ಟೇಕ್ ಮಾಡುವಂತೆ ಕಂಡಿತು; ಹಾಗಾಗಿ ದೇವೇಗೌಡರ ಅಭಿಮಾನಿಗಳು ಮತ್ತು ರೇವಣ್ಣನ ಹಿಂಬಾಲಕರು ಮುಂದಿನ 2008ರ ಚುನಾವಣೆಯಲ್ಲಿ ಚಲುವರಾಯಸ್ವಾಮಿ ವಿರುದ್ಧ ಕೆಲಸ ಮಾಡಿದ್ದರು ಎಂಬ ಮಾತು ಜನಜನಿತವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಮುಂದೆ ಪಹರೆ ವಾಹನದ ನಡುವೆ ಸೈರನ್ ಮೊಳಗಿಸಿಕೊಂಡು ಹೋಗುವ ಮಂತ್ರಿ ಬಗ್ಗೆ ನಿಷ್ಕಾರಣದ ತಾತ್ಸಾರ ಬೆಳೆದುಕೊಂಡಿದ್ದು ಒಂದು ಕಾರಣವಾಗಿ ಆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸೋತರು. ಇಷ್ಟೊಂದು ಕೆಲಸ ಮಾಡಿಯೂ ಜನ ಸೋಲಿಸಿದರಲ್ಲಾ ಎಂಬ ನಿರಾಶೆಗೆ ಚಲುವರಾಯಸ್ವಾಮಿ ಒಳಗಾಗಿದ್ದರು. ಬೇರೆ ಕಾರಣಗಳೂ ಇದ್ದವು. ಆ ಕಾರಣಗಳು ಮುಂದೆ ಬೃಹದಾಕಾರವಾಗಿ ಎದ್ದುನಿಂತು ದೇವೇಗೌಡರು ನಾಗಮಂಗಲ ಕ್ಷೇತ್ರದ ದೇವಸ್ಥಾನ ಉದ್ಘಾಟನೆ, ತಿಥಿ, ಮದುವೆಗೆಲ್ಲಾ ಬಂದು ಚಲುವರಾಯಸ್ವಾಮಿಯನ್ನು ಮೂಲೆಗುಂಪು ಮಾಡಲು ಶತಾಯಗತಾಯ ಪ್ರಯತ್ನಿಸಿದರು. ಆಗ ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆ ನೌಕರರ ವಸತಿ ನಿರ್ಮಾಣದ ಸೊಸೈಟಿಯಲ್ಲಿ ಹೆಸರು ಮಾಡಿದ್ದ ಸುರೇಶ್‌ಗೌಡರು ಬಂದು ಚಲುವರಾಯಸ್ವಾಮಿ ಎದುರು ನಿಂತು ಗೆದ್ದರು. 2013ರಲ್ಲಿ ಚಲುವರಾಯಸ್ವಾಮಿ ಮತ್ತೆ ಜೆಡಿಎಸ್‌ನಿಂದ ಗೆದ್ದರೂ ಆಗ ಕಾಂಗ್ರೆಸ್ ಸರ್ಕಾರ ಬಂತು. ಮುಂದೆ ಅದುಲುಬದಲಾಗಿ ಸುರೇಶ್‌ಗೌಡ ಜನತಾದಳಕ್ಕೆ ಹೋದರೆ ಚಲುವರಾಯಸ್ವಾಮಿ ಕಾಂಗ್ರೆಸ್‌ಗೆ ಹೋದರು.

ಇದನ್ನೂ ಓದಿ: ನಮ್ಮ ಸಚಿವರಿವರು; ಸರಳ ರಾಜಕಾರಣಿ ರಹೀಂ ಖಾನ್ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ

ನಂತರ 2018ರ ಚುನಾವಣೆಯಲ್ಲಿ ಸುರೇಶ್‌ಗೌಡರು ದಾಖಲೆಯ ನಲವತ್ತೇಳುವರೆ ಸಾವಿರ ಲೀಡನಲ್ಲಿ ಗೆದ್ದರು. ಚಲುವರಾಯಸ್ವಾಮಿ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ಸಿಗೆ ಹೋದರೆಂದು ದೇವೇಗೌಡರ ಕಡೆಯವರು ಮತದಾರರನ್ನು ಕೆರಳಿಸಿ ಗೆಲುವು ಸಾಧಿಸಿದ್ದರು. ಮುಂದೆ ಸಮ್ಮಿಶ್ರ ಸರಕಾರ ಬಂತು; 80 ಸೀಟು ಗೆದ್ದಿದ್ದ ಕಾಂಗ್ರೆಸ್ ಮೂವತ್ತು ಚಿಲ್ಲರೆ ಸೀಟು ಗೆದ್ದಿದ್ದ ದಳಕ್ಕೆ ಸಪೋರ್ಟಟು ಮಾಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿತ್ತು. ಚಲುವರಾಯಸ್ವಾಮಿಯವರನ್ನು ಮೂಲೆಗುಂಪು ಮಾಡಿ ಮಂಡ್ಯವನ್ನು ಕೈಗೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ ದೇವೇಗೌಡರು ಮತ್ತು ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯವರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸಿದರು. ಅವರಗೂ ಓಟು ಕೇಳುವಂತಹ ಸ್ಥಿತಿ ಚಲುವರಾಯಸ್ವಾಮಿಗೆ ಬಂತು. ಆದರೆ ಮಂಡ್ಯದ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿಯಾದ ನಿಖಿಲ್‌ಗೆ ಕೆಲಸ ಮಾಡುವುದರ ಬದಲು ಸುಮಲತಾಗೆ ವರ್ಕ್ ಮಾಡಿದ್ದರಿಂದ ನಿಖಿಲ್ ಒಂದೂಕಾಲು ಲಕ್ಷದ ಅಂತರದಿಂದ ಸೋತರು. ಇದರಲ್ಲಿ ಚಲುವರಾಯಸ್ವಾಮಿ ಶ್ರಮವೂ ಇತ್ತು.

ಸುರೇಶ್‌ಗೌಡ

ಮುಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ನಾಗಮಂಗಲದ ಮುಖಾಂತರ ಹಾದುಹೋಗುವಾಗ ಅದರ ಜವಾಬ್ದಾರಿ ಚಲುವರಾಯಸ್ವಾಮಿ ಮೇಲೆ ಬಿತ್ತು. ಈ ಐತಿಹಾಸಿಕ ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಚಲುವರಾಯಸ್ವಾಮಿ ರಾಹುಲಗಾಂಧಿಗೆ ಹತ್ತಿರವಾದರು.

ಈ ಬಾರಿ ಚಲುವರಾಯಸ್ವಾಮಿ ಎದುರಿಸಿದ ನಾಗಮಂಗಲದ ಚುನಾವಣೆ ಹಿಂದಿಗಿಂತಲೂ ಬಿರುಸಾಗಿತ್ತು. ಗೆಲ್ಲುವ ಎಲ್ಲ ಸೂಚನೆಗಳಿದ್ದರೂ ಕಡೆ ಗಳಿಗೆಯಲ್ಲಿ ನಾಗಮಂಗಲಕ್ಕೆ ಬಂದು ರೋಡ್‌ಶೋ ಮಾಡಿದ ದೇವೇಗೌಡರು, ಚಲುವರಾಯಸ್ವಾಮಿಯನ್ನು ಸೋಲಿಸಲು ಕರೆಕೊಟ್ಟಿದ್ದಲ್ಲದೆ, ಗದ್ಗರಿತವಾಗಿ ಕೇಳಿಕೊಂಡರು. ಅವರ ಸಭೆಗೆ ಸೇರಿದ್ದ ಜನಸ್ತೋಮ ನೋಡಿದ ಜನರು ಸುರೇಶ್‌ಗೌಡರ ಗೆಲುವಿನ ಬಗ್ಗೆ ಯಾವ ಸಂಶಯವನ್ನು ಇಟ್ಟುಕೊಳ್ಳದೆ ಮನಸ್ಸಿಗೆ ಬಂದಷ್ಟು ಬೆಟ್ ಕಟ್ಟಿ ಸೋತುಹೋದರು. ಬೆಳ್ಳೂರು, ನಾಗಮಂಗಲ ಮತ್ತು ಕೊಪ್ಪ ಹೋಬಳಿ ಚಲುವರಾಯಸ್ವಾಮಿಯವರ ಕೈಹಿಡಿದಿದ್ದರಿಂದ ಅವರು ನಾಲ್ಕುವರೆ ಸಾವಿರ ವೋಟುಗಳ ಅಂತರದಲ್ಲಿ ಗೆದ್ದರು. ಈಗ ಎಲ್ಲ ಅಡೆತಡೆಗಳನ್ನು ನಿಭಾಯಿಸಿಕೊಂಡು ಗೆದ್ದು ಸಚಿವರಾಗಿರುವ ಮಂಡ್ಯ ಜಿಲ್ಲೆಯ ನಾಯಕರಾದ ಚಲುವರಾಯಸ್ವಾಮಿಯನ್ನು ಮಂಡ್ಯದ ಕರ್ನಾಟಕ ಸಂಘ ಸನ್ಮಾನಿಸಿದೆ. ಕೃಷಿ ಸಮಾಜದಿಂದ ಬಂದ ಭೈರೇಗೌಡರ ನಂತರ ಚಲುವರಾಯಸ್ವಾಮಿ ಆ ಇಲಾಖೆಗೆ ಜೀವ ನೀಡಬೇಕಾಗಿದೆ. ನಾಗಮಂಗಲದ ಶಾಸಕರಾಗಿದ್ದ ಚಲುವರಾಯಸ್ವಾಮಿ ಈಗ ಕೃಷಿಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ, ಮಂಡ್ಯದಲ್ಲಿ ನಿರ್ವಹಣೆಯಿಲ್ಲದೆ ಹಾಳುಬಿದ್ದಿರುವ ರೈತ ಸಭಾಂಗಣ, ಕಲಾಮಂದಿರ ಇತ್ಯಾದಿ ಸಾಂಸ್ಕೃತಿಕ ವಲಯಗಳ ಪುನಶ್ಚೇತನಕ್ಕೆ ಕೆಲಸ ಮಾಡಿ, ಮಂಡ್ಯವನ್ನು ಅದರ ಗತಕಾಲದ ವೈಭವಕ್ಕೆ ಮರಳಿ ತರಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...