Homeಮುಖಪುಟ'ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಹಿಡಿಯಲಾಗಿದೆ..'; ಕೇಂದ್ರದ ಜತೆಗಿನ ಸಭೆ ಬಹಿಷ್ಕರಿಸಲು ರೈತರ ನಿರ್ಧಾರ

‘ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಹಿಡಿಯಲಾಗಿದೆ..’; ಕೇಂದ್ರದ ಜತೆಗಿನ ಸಭೆ ಬಹಿಷ್ಕರಿಸಲು ರೈತರ ನಿರ್ಧಾರ

- Advertisement -
- Advertisement -

ತಮ್ಮ ‘ದೆಹಲಿ ಚಲೋ’ ಪ್ರತಿಭಟನೆಗೆ ಮುಂಚಿತವಾಗಿ ರೈತರ ಸಂಘಟನೆಗಳು ಮತ್ತು ಒಕ್ಕೂಟಗಳ ಅಧಿಕೃತ ಪುಟಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಎಕ್ಸ್‌ ಮತ್ತು ಫೇಸ್‌ಬುಕ್ ನಲ್ಲಿನ ಹನ್ನೆರಡು ಖಾತೆಗಳನ್ನು ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಭಾರತದಲ್ಲಿ ತಡೆಹಿಡಿಯಲಾಗಿದೆ ಎಂದು ‘ದೆಹಲಿ ಚಲೋ ಮೆರವಣಿಗೆ’ ನಡೆಸುತ್ತಿರುವ ರೈತರು ಆರೋಪ ಮಾಡಿದ್ದಾರೆ.

ಫೆಬ್ರವರಿ 13 ರಂದು ರೈತರು ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸುವ ಒಂದು ದಿನದ ಮೊದಲು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಹಿಡಿಯಲಾಗಿದೆ. ಜಗ್ಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಯೋಜಕ ನೇತೃತ್ವದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಜಂಟಿಯಾಗಿ ಪ್ರತಿಭಟನೆಗೆ ಕರೆ ನೀಡಿತು.

ಫೆಬ್ರವರಿ 15 ರವರೆಗೆ ಹರಿಯಾಣದ ಏಳು ಜಿಲ್ಲೆಗಳಲ್ಲಿ ರೈತರ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲಿನ ನಿಷೇಧ ಮತ್ತು ವಿಸ್ತೃತ ಇಂಟರ್ನೆಟ್ ನಿಷೇಧದ ಜೊತೆಗೆ, ಹರಿಯಾಣ ಪೊಲೀಸರು ಪಟಿಯಾಲಾ ಮತ್ತು ಖಾನೌರಿಯಿಂದ ಪಂಜಾಬ್-ಹರಿಯಾಣದ ಶಂಭು ಗಡಿಯಲ್ಲಿ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಿಂದ ಗಡಿಯವರೆಗೆ ಬಹು ಹಂತಗಳಲ್ಲಿ ದಿಗ್ಬಂಧನಗಳ ಮೂಲಕ ರೈತರ ದೆಹಲಿ ಪ್ರವೇಶವನ್ನು ನಿಷೇಧಿಸಿದ್ದಾರೆ.

ರೈತರು ಫೆಬ್ರವರಿ 13ರಿಂದ ರಾತ್ರಿ ಶಂಭು ಗಡಿಯಲ್ಲಿ ಕಳೆದಿದ್ದಾರೆ, ಹರಿಯಾಣದ ಗಡಿಯ ಇನ್ನೊಂದು ಭಾಗದಲ್ಲಿ ಅರೆಸೇನಾ ಪಡೆಗಳ ಭಾರೀ ನಿಯೋಜನೆ ಇದೆ. ಅವರನ್ನು ಹರಿಯಾಣಕ್ಕೆ ದಾಟದಂತೆ ತಡೆಯುವುದರ ಜೊತೆಗೆ, ಹರಿಯಾಣ ಪೊಲೀಸರು ಶಂಭು ಗಡಿಯಲ್ಲಿ ಪ್ರತಿಭಟನಾಕಾರರ ರೈತರನ್ನು ಹತ್ತಿಕ್ಕಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಅಶೃವಾಯು ಸಿಡಿಸಲು ಡ್ರೋನ್‌ಗಳನ್ನು ಬಳಸಿದ್ದರಿಮದ 100ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾಜಿಕ ಮಾಧ್ಯಮ ಖಾತೆಗಳಿಗೆ ತಡೆ:

ಕಿಸಾನ್ ಮಜ್ದೂರ್ ಮೋರ್ಚಾದ (ಕೆಎಂಎಂ) ಸಂಯೋಜಕ ಸರ್ವನ್ ಸಿಂಗ್ ಪಂಧೇರ್, ಬಿಕೆಯು ವಕ್ತಾರ ತೇಜ್ವೀರ್ ಸಿಂಗ್ ಅಂಬಾಲಾ (ಶಹೀದ್ ಭಗತ್ ಸಿಂಗ್), ರೈತ ನಾಯಕ ರಮಣದೀಪ್ ಸಿಂಗ್ ಮಾನ್, ಬಿಕೆಯು ಕ್ರಾಂತಿಕಾರಿಯಿಂದ ಸುರ್ಜಿತ್ ಸಿಂಗ್ ಫುಲ್ ಅವರಂತಹ ಪ್ರಮುಖ ರೈತ ನಾಯಕರ ಎಕ್ಸ್ ಖಾತೆಗಳು ಮತ್ತು ಫೇಸ್‌ಬುಕ್ ಪುಟಗಳು , ರೈತ ಮುಖಂಡ ಹರ್ಪಾಲ್ ಸಂಘ, ಹರಿಯಾಣದ ಅಶೋಕ್ ದಾನೋಡ ಸೇರಿದಂತೆ ಅನೇಕರ ಖಾತೆಗಳನ್ನು ತಡೆಹಿಡಿಯಲಾಗಿದೆ.

ರೈತರ ಆಂದೋಲನವನ್ನು ಬೆಂಬಲಿಸುವ ಮತ್ತು ಅದರ ಬಗ್ಗೆ ನವೀಕರಣಗಳನ್ನು ಪೋಸ್ಟ್ ಮಾಡಿದ ಅಧಿಕೃತ ಪುಟಗಳನ್ನು ಸರ್ಕಾರವು ನಿಷೇಧಿಸಿದೆ. ಅಂದರೆ, ಭಾವಜಿತ್ ಸಿಂಗ್ ನಡೆಸುತ್ತಿರುವ ‘Tractor2twitr_P’, ಭಾರತೀಯ ಕಿಸಾನ್ ಯೂನಿಯನ್ (ಶಹೀದ್ ಭಗತ್ ಸಿಂಗ್) ಮತ್ತು ಗುರಮ್ನೀತ್ ಸಿಂಗ್ ಮಂಗತ್ ನಡೆಸುತ್ತಿರುವ ಪ್ರಗತಿಪರ ರೈತರ ಫ್ರಂಟ್ ಖಾತೆಗಳನ್ನು ತಡೆಹಿಡಿಯಲಾಗಿದೆ.

ಬಿಕೆಯು (ಎಸ್‌ಬಿಎಸ್) ಹರಿಯಾಣದ ಅಂಬಾಲಾದಿಂದ ರೈತರ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದ ಪ್ರಮುಖ ರೈತ ಸಂಘಗಳಲ್ಲಿ ಒಂದಾಗಿದೆ. ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ನಡೆಸುತ್ತಿದ್ದ ‘ಗಾಂವ್ ಸವೇರಾ’ ಪುಟವನ್ನು ತಡೆಹಿಡಿಯಲಾಗಿದೆ. ಹಾಗೆಯೇ ಮಂದೀಪ್ ಅವರ ವೈಯಕ್ತಿಕ ಪುಟವನ್ನು ತಡೆಹಿಡಿಯಲಾಗಿದೆ. ಮಂದೀಪ್ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಪ್ರಮುಖ ಹೆಸರು ಮತ್ತು 2020ರಲ್ಲಿ ಅವರನ್ನು ಬಂಧಿಸಲಾಗಿತ್ತು. ಜೈಲಿನಲ್ಲಿ, ಮಂದೀಪ್ ತನ್ನ ಕಾಲುಗಳ ಮೇಲೆ ಟಿಪ್ಪಣಿಗಳನ್ನು ದಾಖಲಿಸಿಕೊಂಡು ನಂತರ ದಿ ಕ್ಯಾರವಾನ್‌ಗೆ ವರದಿ ಬರೆದಿದ್ದರು.

ಈ ಖಾತೆಗಳನ್ನು ತಡೆಹಿಡಿಯುವ ಪ್ರಕ್ರಿಯೆಯು ಹೆಚ್ಚಾಗಿ ಅಪಾರದರ್ಶಕವಾಗಿದೆ ಎಂದು ತಿಳಿಯಲಾಗಿದೆ. ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಎಕ್ಸ್‌ ಖಾತೆಯಂತೆ ಗುರಮ್ನೀತ್ ಅವರ ವೈಯಕ್ತಿಕ ಎಕ್ಸ್‌ ಖಾತೆಯು ಇನ್ನೂ ಮುಂದುವರೆದಿದೆ. ಆದರೆ, ದಲ್ಲೆವಾಲ್ ಅವರ ಫೇಸ್‌ಬುಕ್ ಪುಟವನ್ನು ನಿಷೇಧಿಸಲಾಗಿದೆ.

ಖಾತೆಗಳು ಎಕ್ಸ್‌ ನಿಂದ ಸಂದೇಶ ಸ್ವೀಕರಿಸಿದ್ದು, ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ನಿಮ್ಮ ಖಾತೆಯನ್ನು [ಭಾರತದಲ್ಲಿ] ತಡೆಹಿಡಿಯಲಾಗಿದೆ ಎಂದು ಹೇಳಿದೆ.

ಕುತೂಹಲವೆಂದರೆ, ದೆಹಲಿ ಚಲೋ ಪ್ರತಿಭಟನೆಗೆ ಮುಂಚಿತವಾಗಿ ಇತ್ತೀಚೆಗೆ ಪ್ರಾರಂಭಿಸಲಾದ ಕಿಸಾನ್ ಮಜ್ದೂರ್ ಮೋರ್ಚಾದ ಅಧಿಕೃತ ಪುಟವು ಇನ್ನೂ ಚಾಲನೆಯಲ್ಲಿದೆ. ಈ ಹಿಂದೆ 2020-2021ರಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಕಿಸಾನ್ ಏಕ್ತಾ ಮೋರ್ಚಾದ ಅಧಿಕೃತ ಪುಟ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಿತ್ತು. ಇದು ಹೆಚ್ಚಾಗಿ ಎಸ್‌ಕೆಎಂನ ಡಿಜಿಟಲ್ ಔಟ್‌ಪೋಸ್ಟ್‌ನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ.

ಆಗ ಪಂಜಾಬಿ ಗಾಯಕ ಜಾಝಿ ಬಿ ಮತ್ತು ಖಾಲ್ಸಾ ಏಡ್‌ನ ರವಿ ಸಿಂಗ್ ಅವರಂತಹ ಉನ್ನತ ಬೆಂಬಲಿಗರು, ಸ್ವತಂತ್ರ ಪತ್ರಕರ್ತ ಸಂದೀಪ್ ಸಿಂಗ್ ಅವರ ಖಾತೆಗಳನ್ನು ತಡೆಹಿಡಿಯಲಾಗಿತ್ತು ಮತ್ತು ಲಾಕ್ ಮತ್ತು ಕೀ ಅಡಿಯಲ್ಲಿ ಮುಂದುವರಿಯಿತು.

‘ದಿ ವೈರ್‌’ನೊಂದಿಗೆ ಮಾತನಾಡಿರುವ, ಭಾವಜಿತ್ ಸಿಂಗ್, ‘ಫೆಬ್ರವರಿ 12 ರಂದು ಮಂತ್ರಿಗಳ ಜತೆಗೆ ರೈತ ಮುಖಂಡರು ಸಭೆಯಲ್ಲಿ ಕುಳಿತಿದ್ದ ಎಲ್ಲರ ಖಾತೆಗಳನ್ನು ತಡೆಹಿಡಿಯಲಾಗಿದೆ’ ಎಂದು ಹೇಳಿದರು.  ‘ಕೇಂದ್ರ ಸರ್ಕಾರ ಮಾತ್ರವಲ್ಲ, ಪಂಜಾಬ್ ಸರ್ಕಾರವೂ ರೈತ ಸಂಘದ ನಾಯಕರ ಖಾತೆಗಳನ್ನು ಪ್ರತ್ಯೇಕಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ನಾವು ಭಾವಿಸುತ್ತೇವೆ. ಇದು ಅಪಾಯಕಾರಿ ಪ್ರವೃತ್ತಿಯಾಗಿದೆ. ಏಕೆಂದರೆ, ರೈತರ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಖಾತೆಗಳಿಗೆ ಬೆಂಬಲ ಸಿಗುತ್ತಿದೆ. ಆದರೆ ರೈತರ ಅಧಿಕೃತ ಮುಖವಾಣಿಗಳು ಪ್ರಚಾರ ಮತ್ತು ತಪ್ಪು ಮಾಹಿತಿಯನ್ನು ಹೊರಹಾಕಲು ಉದ್ದೇಶಿಸುತ್ತಿವೆ’ ಎಂದು ಅವರು ಹೇಳಿದರು.

2024ರ ಲೋಕಸಭೆ ಚುನಾವಣೆಯೊಂದಿಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವ ಅಥವಾ ಪ್ರಶ್ನಿಸುವ ಧೈರ್ಯವಿರುವ ಎಲ್ಲರನ್ನೂ ಮೌನಗೊಳಿಸುವುದು ಸರ್ಕಾರದ ಕಾರ್ಯಸೂಚಿಯಾಗಿದೆ. ಏಕೆಂದರೆ ಅದು ಅವರ ಇಮೇಜ್ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಭಾವಜಿತ್ ಹೇಳಿದರು.

ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮರುಸ್ಥಾಪಿಸಿದರೆ ಮಾತ್ರ ಸಭೆ:

ರೈತರು ಮತ್ತು ಆಂದೋಲನದ ಬೆಂಬಲಿಗರ ಖಾತೆಗಳನ್ನು ಮರುಸ್ಥಾಪಿಸುವವರೆಗೆ ಮುಂದಿನ ಸಭೆಗಳನ್ನು ಬಹಿಷ್ಕರಿಸಲು ನಾಯಕರು ನಿರ್ಧರಿಸಿದ್ದಾರೆ ಎಂದು ಭಾವಜಿತ್ ಹೇಳಿದರು. ‘ಸರ್ಕಾರವು ಈ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮರುಪ್ರಾರಂಭಿಸಿದರೆ ಮಾತ್ರ ಮೂರನೇ ಸುತ್ತಿನ ಸಭೆಗಳಿಗೆ ಆಹ್ವಾನವನ್ನು ಸ್ವೀಕರಿಸಲಾಗುವುದು’ ಎಂದು ರೈತ ಸಂಘದ ಮುಖಂಡರು ನಿರ್ಧರಿಸಿದ್ದಾರೆ

ರೈತ ನಾಯಕ ರಮಣದೀಪ್ ಸಿಂಗ್ ಮಾನ್ ಅವರು ಫೆಬ್ರವರಿ 12 ರ ರಾತ್ರಿ ರೈತರು ಮತ್ತು ಕೇಂದ್ರ ಸಚಿವರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಆದರೆ, ಅವರ ಎಕ್ಸ್ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ವಾಟ್ಸಾಪ್‌ನಲ್ಲಿ ಸಂದೇಶ ಬಂದಿದೆ.

‘ನಾನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂದೇಶವನ್ನು ತೋರಿಸಿದೆ. ಆದರೆ ಅವರು ಅಜ್ಞಾನವನ್ನು ತೋರಿಸಿದರು ಮತ್ತು ಈ ಕ್ರಮದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರು. ಹೀಗಾದರೆ ಹೇಗೆ ಎಂದು ನಾನು ಪಿಯೂಷ್ ಗೋಯಲ್ ಅವರನ್ನು ಕೇಳಿದೆ’ ಎಂದು ಹೇಳಿದ್ದಾರೆ.

‘ಕೇದ್ರ ಸರ್ಕಾರವು ನಮ್ಮನ್ನು ನಂಬುವಂತೆ ಕೇಳಬಹುದು, ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಪಂಜಾಬ್ ಎನ್‌ಆರ್‌ಐ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರನ್ನೂ ನಾನು ಕೇಳಿದೆ; ಇದು ಆಪ್ ಸರ್ಕಾರವೇ ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸುತ್ತಿದೆಯೇ ಎಂದು. ಆದರೆ ಅವರು ಉತ್ತರಿಸಲು ನಿರಾಕರಿಸಿದರು’ ಎಂದು ಅವರು ಹೇಳಿದರು. ‘ರೈತರ ಮೇಲೆ ಒತ್ತಡ ಹೇರುವ ಸ್ಪಷ್ಟ ಪ್ರಯತ್ನ ಇದಾಗಿದೆ’ ಎಂದು ರಮಣದೀಪ್ ಹೇಳಿದರು.

‘ವಾಸ್ತವವೆಂದರೆ ಕೇಂದ್ರ ಸರ್ಕಾರವು ರೈತರ ಶಕ್ತಿಗೆ ಹೆದರುತ್ತಿದೆ. ಅವರು ಈಗಾಗಲೇ 2020 ರಲ್ಲಿ ರೈತರ ಪ್ರತಿಭಟನೆಯ ಸಮಯದಲ್ಲಿ ಇದನ್ನು ನೋಡಿದ್ದಾರೆ. ಅವರು ಏನು ಬೇಕಾದರೂ ಪ್ರಯತ್ನಿಸಲಿ, ರೈತರು ಒಗ್ಗಟ್ಟಾಗಿದ್ದಾರೆ ಮತ್ತು ಅವರ ಉದ್ದೇಶಕ್ಕೆ ಬದ್ಧರಾಗಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ; ಮೂರನೆ ದಿನಕ್ಕೆ ಕಾಲಿಟ್ಟ ‘ದೆಹಲಿ ಚಲೋ’ ರೈತರ ಮೆರವಣಿಗೆ; ಇಂದು ಮತ್ತೊಂದು ಸುತ್ತಿನ ಸಭೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...