Homeಮುಖಪುಟಪಿ. ಲಂಕೇಶ್‌ ಜನ್ಮದಿನ: ಅವರ ಬರೆಹಗಳ ಆಯ್ದ ಭಾಗಗಳು

ಪಿ. ಲಂಕೇಶ್‌ ಜನ್ಮದಿನ: ಅವರ ಬರೆಹಗಳ ಆಯ್ದ ಭಾಗಗಳು

ನನ್ನಂತೆಯೇ ಮಾರ್ಚ್ 8ರಂದು ಲಕ್ಷಾಂತರ, ಕೋಟ್ಯಂತರ ಜನ ಹುಟ್ಟಿ ವಿವಿಧ ಕರ್ಮಗಳಲ್ಲಿ ತೊಡಗಿರಬಹುದು. ಅವರು ನನಗಿಂತಲೂ ಬುದ್ಧಿವಂತರೂ, ವಿಚಾರವಂತರೂ ಆಗಿರಬಹುದು.

- Advertisement -
- Advertisement -

ಕನ್ನಡದ ಕೆಲವು ತಲೆಮಾರುಗಳನ್ನು ಪ್ರಭಾವಿಸಿದ ಪ್ರತಿಭಾನ್ವಿತ ಲೇಖಕ, ಚಿಂತಕ, ಪತ್ರಕರ್ತ ಪಿ.ಲಂಕೇಶ್‌ರವರ ಜನ್ಮದಿನ ಇಂದು. ಅವರ ನೆನಪಿನಲ್ಲಿ ಅವರ ಟೀಕೆಟಿಪ್ಪಣಿ ಪುಸ್ತಕದಿಂದ ಕೆಲ ಬರಹಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಈಗ ಯಾವುದನ್ನು ನೆನೆಯಲಿ? ಯಾವುದು ಮೊದಲು? ಯಾವುದು ಆಮೇಲೆ?

ನೀವು ನನ್ನನ್ನು ದಯವಿಟ್ಟು ಕ್ಷಮಿಸಿ. ನನ್ನಂತೆಯೇ ಮಾರ್ಚ್ 8ರಂದು ಲಕ್ಷಾಂತರ, ಕೋಟ್ಯಂತರ ಜನ ಹುಟ್ಟಿ ವಿವಿಧ ಕರ್ಮಗಳಲ್ಲಿ ತೊಡಗಿರಬಹುದು. ಅವರು ನನಗಿಂತಲೂ ಬುದ್ಧಿವಂತರೂ, ವಿಚಾರವಂತರೂ ಆಗಿರಬಹುದು ಅಥವಾ ನನಗಿಂತಲೂ ಅನಾಮಿಕರಾಗಿದ್ದು ನೆಮ್ಮೆದಿ, ಆತಂಕ ಎರಡನ್ನೂ ಅರಿಯದೇ ಜೀವಿಸುತ್ತಿರಬಹುದು.ಆದ್ದರಿಂದ ಈ ಹುಟ್ಟುಹಬ್ಬದ ಬಗ್ಗೆಯಾಗಲೀ, ನನ್ನ ಕಳೆದುಹೋದ ಮತ್ತು ಎಂದೆಂದಿಗೂ ನನಗೆ ಅಂಟಿಕೊಂಡೇ ಇರುವ ಐವತ್ತು ವರ್ಷದ ಬಗ್ಗೆಯಾಗಲೀ ಧ್ವನಿ ಎತ್ತರಿಸಿ ಮಾತಾಡಿದೊಡನೆ, ಬೊಬ್ಬೆ ಹಾಕೊದೊಡನೆ ಎಲ್ಲ ಅಸಹಜವಾಗುತ್ತದೆ.

ಅಹಂಕಾರಕ್ಕೆ ಅನೇಕ ರೂಪಗಳಿರುತ್ತವೆ. ನನ್ನ ನೆಮ್ಮೆದಿಯನ್ನು ನಾನೇ ಕಲಕುವ ಮತ್ತು ಹೊಸ ಬಗೆಯ ವಿಶ್ವಾಸ ಹುಡುಕುವ ಚಟ ಮತ್ತು ಛಲ ನನ್ನಿಂದ ಮರೆಯಾಗದಿರಲಿ.

***

ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತಿದೆ? ಅದು ದುಃಖದ ಓಲಗ ಎಷ್ಟು ಜನರ ಸಂತೋಷವನ್ನು ಸಾವಿನ ಬಗ್ಗೆ ಅಟ್ಟಹಾಸವನು, ರೋಷದ ಅಂತಿಮವನ್ನು, ಸೇಡಿನ ಪ್ರತಿಫಲನವನ್ನು ಮಂಡಿಸುತ್ತಿದೆ?

ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತಿದೆ?

***

ಗಾಂಧೀಜಿಗೆ ಗೊತ್ತಿತ್ತು. ಆತ್ಮವನ್ನು ಕಳೆದುಕೊಂಡ ರಾಜಕಾರಣಿ ತನ್ನನ್ನು ರಕ್ಷಿಸಲು ಪೋಲೀಸು ಪಡೆಯನ್ನು ಹೊಂದಿರಬೇಕಾಗುತ್ತದೆ.

ಬಾಪೂಜಿ ಎಂದೂ ಅಂಗ ರಕ್ಷಕರನ್ನು ಹೊಂದಲಿಲ್ಲ.

ಸಿದ್ಧಾರ್ಥನನ್ನು ಚಿಂತೆಗೀಡು ಮಾಡಿ, ಬುದ್ಧನನ್ನಾಗಿಸಿದ ಆ ಸದ್ದು ಇವರಿಗೆ ಯಾವುದಾದರೂ ಅರ್ಥವನ್ನು ತಲುಪಿಸುತ್ತಿದೆಯೇ? ಬಾಪೂಜಿಯನ್ನು ಮಹಾತ್ಮನನ್ನಾಗಿ ಮಾಡುವಲ್ಲಿ ಯಶಸ್ವಿಯಾದ ಆ ಸದ್ದು ಕಿಂಚಿತ್ತಾದರೂ ನಮ್ಮನ್ನು ಸ್ಪರ್ಶಿಸಬೇಡವೇ?

ಆ ಓಲಗ ಯಾರ ಸಾವನ್ನು, ನೋವನ್ನು, ಅನ್ಯಾಯವನ್ನು, ಯಾವ ಮಾಯವಾದ ಕನಸು, ಕ್ರಿಯಾಶೀಲತೆಯನ್ನು, ಯಾವ ಭ್ರಷ್ಟತೆ, ಹುಂಬತನವನ್ನು , ಯಾವ ದ್ವೀಪವನ್ನು, ಸ್ವಾರ್ಥದ ಪರಿಣಾಮವನ್ನು ವ್ಯಕ್ತಪಡಿಸುತ್ತಿವೆ?

ಯೋಚಿಸೋಣ.

***

ಇಲ್ಲಿಯ ರೈತ, ಗುಡಿಗಾರ, ಕಮ್ಮಾರ, ಕುಂಬಾರ ಎಲ್ಲರೂ ಜಾತಿಪದ್ಧತಿಯ ನರಕದಲ್ಲಿ ಬಿದ್ದು ಬಡತನ, ನಿರುದ್ಯೊಗದಲ್ಲಿ ನಶಿಸಿ ಹೋಗುತ್ತಿದ್ದಾರೆ. ಅಕ್ಷರ ಜ್ಞಾನವಿದ್ದ ಒಂದೇ ಒಂದು ಗುಂಪು ಇಲ್ಲಿಯ ರೈತನ ನೇಗಿಲು, ಕಮ್ಮಾರರ ತಿದಿ, ಗೃಹಿಣಿಯ ಬೀಸುವ ಕಲ್ಲು, ಕೊಟ್ಟಣ ಮುಂತಾದುವನ್ನು ಉತ್ತಮಪಡಿಸಲು ಬಡವನ ಶ್ರಮವನ್ನು ಕಮ್ಮಿ ಮಾಡಲು ಯತ್ನಿಸಲಿಲ್ಲ. ಅಷ್ಟೇ ಏಕೆ, ಇವೆಲ್ಲವನ್ನೂ ಮೀರಿ ಇಡೀ ದೇಶಕ್ಕೆ ಕ್ರಾಂತಿಕಾರಿ ಎನ್ನಿಸಬಹುದಾದ ಪೆನ್ನು, ಪೇಪರ್, ಸ್ಲೇಟನ್ನು ಕಂಡುಹಿಡಿಯಲಿಲ್ಲ. ಕೆಲವರ ಮೇಲುಜಾತಿಯ ಮಿದುಳುಗಳು ಲಕ್ಷಾಂತರ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಯತ್ನಿಸಿ, ಪೇಪರಿಗೆ ಬದಲು ದಾಖಲೆಯ ಹಾಳೆಗಳಾಗಲು ಯತ್ನಿಸಿ ಸತ್ತುಹೋದ ಒಬ್ಬ ವ್ಯಕ್ತಿಯೊಂದಿಗೆ ತಿಳಿವು ಕೂಡಾ ಸಾಯುತ್ತಾ ಹೋಯಿತು. ಕ್ರೌರ್ಯ ಮತ್ತು ಜಡತ್ವ ಮಾತ್ರ ಉಳಿಯಿತು. ಕ್ರೌರ್ಯ ಮತ್ತು ಜಡತ್ವ ಇರುವ ಮನುಷ್ಯನಲ್ಲಿ ಪ್ರೇಮ, ಸಹಾನುಭೂತಿ, ಪಾಳುದಾರಿಕೆ ಉಳಿಯುವುದಿಲ್ಲ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...