Homeಮುಖಪುಟತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಹೋರಾಟದಲ್ಲಿ ಸೋಲು ಎಂಬುದೆ ಇಲ್ಲ..

ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಹೋರಾಟದಲ್ಲಿ ಸೋಲು ಎಂಬುದೆ ಇಲ್ಲ..

ತನ್ನ ಹೆತ್ತ ಕರುಳನ್ನು ಕಳೆದುಕೊಂಡರು ಛಲಬಿಡದೆ ಹೋರಾಟದ ಕಂದೀಲು ಹಿಡಿದು ಸಾಗುತ್ತಿರುವ ಈ ನೆಲದ ಭಾರತ ಮಾತೆಯರೆಲ್ಲರಿಗು ಮಹಿಳಾ ದಿನಾಚರಣೆಯ ಶುಭಾಶಯಗಳು.

- Advertisement -
- Advertisement -

“ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಹೋರಾಟದಲ್ಲಿ ಸೋಲು ಎಂಬುದೆ ಇಲ್ಲ” ಕಣ್ಣನ್ ಗೋಪಿನಾಥ್ ಹೇಳಿದ ಈ ಸಾಲುಗಳು ಮಕ್ಕಳ ಹೊತ್ತೂಟಕ್ಕೆಂದು ಝಡಿ ಮಳೆಯು ಲೆಕ್ಕಿಸದೆ ತಂಬಾಕು ಹೊಲದಲ್ಲಿ ದುಡಿವ ನನ್ನ ಹಳ್ಳಿಯ ತಾಯಂದಿರಿಂದ ಹಿಡಿದು ದೆಲ್ಲಿಯಲ್ಲಿ ಭಾರತೀಯ ಸೌಹಾರ್ದ, ಸಾಮರಸ್ಯ, ಸಹಬಾಳ್ವೆ, ಭ್ರಾತೃತ್ವ, ಸಹಿಷ್ಣುತೆಗೆ ಎದುರಾಗಿರುವ ಗ್ರಹಣವನ್ನು ದೂರ ಮಾಡಿ ತಮ್ಮ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಹೋರಾಡುತ್ತಿರುವ ಶಾಹೀನ್‌ಬಾಗ್ ನ ಹೆಣ್ಣುಗಳವರೆಗು ಅಕ್ಷರಶಃ‌ ಸರ್ವಕಾಲಿಕ ಸತ್ಯ.

ಸ್ವತಂತ್ರ ಭಾರತದ ಇತಿಹಾಸದಲ್ಲೆ ಬಲಿಷ್ಟ ಸರ್ಕಾರವೆಂದು ಮಾಧ್ಯಮಗಳಿಂದ ಬಿಂಬಿತವಾಗಿರುವ ಹಾಲಿ ಕೇಂದ್ರ ಸರ್ಕಾರಕ್ಕೆ ದೆಹಲಿಯಲ್ಲಿ ಅರವತ್ತನಾಲ್ಕು ದಿನಗಳಿಂದ ನಡೆಯುತ್ತಿರುವ ಶಾಂತಿಯುತ ಮಹಿಳಾ ಪ್ರತಿಭಟನೆಯು ಗೋಧಿ ಮೀಡಿಯಾದ ಅಬ್ಬರದ ಪ್ರಚಾರದ ನಡುವೆ, ವಿರೋಧ ಪಕ್ಷಗಳ ದುರ್ಬಲತೆಯ ನಡುವೆ, ಆರು ವರ್ಷಗಳಿಂದ ಎಲ್ಲಾ ಹೋರಾಟಗಳನ್ನು ದಮನಿಸಿದ್ದ ಈ ಸರ್ಕಾರವನ್ನು ಗಂಭೀರವಾಗಿ ನಿದ್ದೆಗೆಡಿಸಿ ದೆಹಲಿಯ ಚುನಾವಣೆಯ ಬಹು ಚರ್ಚಿತ ವಿಷಯವಾಗಿ, ಭಾಜಾಪ ಪಕ್ಷದ ಸೋಲಿನ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದ ನಿರ್ಣಾಯಕ ಅಂಗವಾಗಿ ಮಹಿಳಾ ಪ್ರತಿಭಟನಾ ಶಕ್ತಿಯನ್ನು ಜಗತ್ತಿಗೆ ನೆನಪಿಸಿದ ಕೀರ್ತಿ, ಪ್ರಬಲ ಕೇಂದ್ರ ಸರ್ಕಾರಕ್ಕೆ ನಾರಿ ಶಕ್ತಿಯನ್ನು ರುಜುವಾತು ಮಾಡಿದ ಹಿರಿಮೆ ಶಾಹೀನ್ ಬಾಗ್‌ ಹೆಣ್ಣುಗಳಿಗೆ ಸಲ್ಲುತ್ತದೆ.

 

ಭಾರತದಲ್ಲಿ ಸ್ವಾತಂತ್ರ್ಯಾನಂತರ 70ರ‌ ದಶಕ ಹೊರತುಪಡಿಸಿ ಬಹುಕಾಲ ಭಾರತದ ಮಹಿಳಾ ದನಿ ಮರೆಯಾಗಿದ್ದದ್ದು ಒಂದು ರೀತಿಯ ವಿಪರ್ಯಾಸ. ಭಾರತದಲ್ಲಿ ಮಹಿಳಾಪರ ಸಂಗತಿಗಳು ಮುನ್ನೆಲೆಗೆ ಬಂದದ್ದು 70ರ ದಶಕದಲ್ಲಿ. 1971ರಲ್ಲಿ ವಿಶ್ವಸಂಸ್ಥೆಯ ಸೂಚನೆಯ ಮೇರೆಗೆ ಮಹಿಳೆಯರ ಸ್ಥಿತಿಗತಿಗಳನ್ನು ಪರಿಶೀಲಿಸಲು ‘ಕಮಿಟಿ ಆನ್ ದಿ ಸ್ಟೇಟಸ್ ಆಫ್ ವಿಮೆನ್ ಇನ್ ಇಂಡಿಯಾ’ ಎಂಬ ಸಮಿತಿಯೊಂದನ್ನು ರಚಿಸಲಾಯಿತು.

ಹಿರಿಯ ಮಹಿಳಾ ಹೋರಾಟಗಾರರಿದ್ದಂತಹ ಈ ಸಮಿತಿ ಭಾರತದ ತುಂಬೆಲ್ಲಾ ಓಡಾಡಿ ಎಲ್ಲಾ ಸ್ಥರಗಳ ಮಹಿಳೆಯರ ಬದುಕಿನ ಸ್ಥಿತಿಗತಿಗಳನ್ನು ಖುದ್ದಾಗಿ ಅವಲೋಕಿಸಿದಾಗ ಕಂಡಂತಹ ಆಘಾತಕಾರಿ‌ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ‘ಸಮಾನತೆಯೆಡೆಗೆ’ ಎಂಬ ವರದಿಯನ್ನು ಈ ಸಮಿತು ಬಿಡುಗಡೆ ಮಾಡಿತು. ಈ ವರದಿ ಭಾರತದ ಮಹಿಳಾಪರ ಮತ್ತು ಪ್ರಜಾತಾಂತ್ರಿಕ ವಲಯಗಳಲ್ಲಿ ಬಹುಚರ್ಚಿತ ವಿಚಾರವಾಯಿತು. ಅನೇಕ ಸ್ವಾಯತ್ತ ಮಹಿಳಾ ಸಂಘಟನೆಗಳು ಆರಂಭವಾದವು. ಶಿಕ್ಷಣ, ಉದ್ಯೋಗಾವಕಾಶ, ಲೈಂಗಿಕ ಕಿರುಕುಳ ಮುಕ್ತ ಔದ್ಯೋಗಿಕ ವಾತಾರವಣ ಮೊದಲಾದ ಅನೇಕ ಅಂಶಗಳು ಧ್ವನಿಸಲು ಶುರುವಾದವು.

ಆರ್ಥಿಕ ಸಧೃಡತೆ ಮಹಿಳಾ ಸಬಲೀಕರಣಕ್ಕೆ ಮೂಲ ಅಸ್ತ್ರ ಎಂಬುದನ್ನು ಸಮಾಜ ಕಂಡುಕೊಂಡಿತು.
ವರದಕ್ಷಿಣೆ ಕಿರುಕುಳ, ಅತ್ಯಾಚಾರಗಳು ಮೊದಲಾದವುಗಳ ವಿರುದ್ಧ ಯಾವುದೇ ಸಂಘಟನೆಯಲ್ಲಿರಲಿ ಅಥವಾ ಇಲ್ಲದಿರಲಿ ಮಹಿಳೆಯರು ಬೀದಿಗಿಳಿದರು. ಮಹಿಳೆಯರ ಕುರಿತ ಸಾಮಾಜಿಕ ಸಂವೇದನೆ ಹೆಚ್ಚಾಗುತ್ತ ಬಂದ ಪರಿಣಾಮ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆಲವು ಮಹಿಳಾಪರ ಕಾಯ್ದೆಗಳು, ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಲೇಬೇಕಾದದ್ದು ಅನಿವಾರ್ಯವಾಯಿತು. ಅಷ್ಟೆಯಲ್ಲ‌ ವಿಶ್ವಸಂಸ್ಥೆ 1975ರಲ್ಲಿ ಮಾರ್ಚ್ 08ನ್ನು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಿಸಿ, ಆ ವರ್ಷವನ್ನು ಮಹಿಳಾ ವರ್ಷ, ಆ ದಶಕವನ್ನು ಮಹಿಳಾ ದಶಕ ಎಂದೂ ಘೋಷಿಸಿತು.

ಕಾಲಕ್ಕೆ ತಕ್ಕಂತೆ ಸಮಸ್ಯೆಗಳ ಸ್ವರೂಪ ಭಿನ್ನವಾಗಿರುತ್ತದೆ, ಸಮಸ್ಯೆಗೆ ತಕ್ಕಂತೆ ಹೋರಾಟದ ಸ್ವರೂಪವೂ ಭಿನ್ನವಾಗುವುದು ಅನಿವಾರ್ಯವಾಗುತ್ತದೆ. ಹೋರಾಟದ ಸ್ವರೂಪಕ್ಕೆ ತಕ್ಕಂತೆ ಪ್ರತಿಫಲಗಳು ಭಿನ್ನವಾಗುತ್ತವೆ. ಎಪ್ಪತ್ತರ ದಶಕದಲ್ಲಿ ಪ್ರಮುಖವಾಗಿ ಭಾರತ ಮತ್ತಿತರ ದೇಶಗಳಲ್ಲಿ ನಡೆದ ಮಹಿಳಾ ಹೋರಾಟದಿಂದಾಗಿ ಆ ಇಡೀ ದಶಕ ಮಹಿಳಾ ದಶಕವಾದಂತೆಯೆ ಈ ಇಡೀ ವರ್ಷ ಭಾರತದಲ್ಲಿ ಮಹಿಳಾ ವರ್ಷವೆ ಆಗಲಿದೆ.
ಈ ಮಹಿಳಾ‌‌ ವರ್ಷದ ಪ್ರತಿರೋಧ ವರ್ಷಧಾರೆ ಪ್ರಾರಂಭವಾದದ್ದು ಡಿಸೆಂಬರ್ 15, 2019ರಂದು‌ ದೆಹಲಿಯ ಜಾಮಿಯ ಮಿಲ್ಲಿಯ ವಿಶ್ವವಿದ್ಯಾಲಯದಲ್ಲಿ NPR NRC CAA ವಿರೋಧಿಸಿ ದಿಟ್ಟ ಪ್ರತಿಭಟನೆ ನಡೆಯಿತು. ನಂತರ ಪೊಲೀಸರು ಕ್ಯಾಂಪಸ್ಸಿನೊಳಗೆ ನುಗ್ಗಿ‌ ಗೂಂಡಾವರ್ತನೆಯೊಂದಿಗೆ ಕೈಗೆ ಸಿಕ್ಕ ಸಿಕ್ಕವರನ್ನು ಥಳಿಸಿದರು. ಆಗ ಒಬ್ಬ ಹುಡುಗನನ್ನು ಹೊಡೆಯುತ್ತಿದ್ದ ಪೊಲೀಸರನ್ನು ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿದ ಜಾಮಿಯಾ ಮಿಲ್ಲಿಯಾ‌ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಾದ ಕೇರಳಾದ ಲದೀದ ಫ಼ರ್ಜ಼ಾನ ಮತ್ತು ಆಯಿಶಾ ರೆನ್ನ
ಎಂಬ ಇವರಿಬ್ಬರು ಜಾಮಿಯಾ ಹೋರಾಟದ ಚಹರೆಗಳಾದರು.

ಜಾಮಿಯಾದ ಮೇಲಾದ ಹಲ್ಲೆಯನ್ನು ವಿರೋಧಿಸಿ ಮಕ್ಕಳ ಭವಿಷ್ಯಕ್ಕಾಗಿ‌ ಎಂಬ ಧ್ಯೇಯವಾಕ್ಯದೊಂದಿಗೆ ದೆಹಲಿಯ ಸೆಕ್ಟರ್ -13ರಲ್ಲಿ ರಾತ್ರೋರಾತ್ರಿ ದೀಪ ಹಿಡಿದು ನಿಂತ ತಾಯಂದಿರ ಹೋರಾಟ ಶಾಹೀನ್ ಬಾಗ್‌ ಆಗಿ ಬೆಳೆಯಿತು. ಈ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಬಲಪಂಥೀಯ ಕೋಮುವಾದಿ ಶಕ್ತಿಗಳು ಲಾಟಿಚಾರ್ಜ್, ಗೋಲಿಬಾರ್, ಗಲಭೆಗಳನ್ನು ನಡೆಸಿದರು ಸಹ ಕುಗ್ಗದೆ ಮುನ್ನುಗಿದೆ.

ಶಾಹೀನ್ ಬಾಗ್‌ನ ಹೋರಾಟದ ಮಾದರಿಯಲ್ಲೆ ದೇಶದ ತುಂಬೆಲ್ಲಾ‌ ಶಾಹೀನ್ ಬಾಗ್‌ಗಳು ಪ್ರಾರಂಭವಾಗಿವೆ.
ದಾವಣಗೆರೆ, ರಾಯಚೂರು, ಹುಬ್ಬಳ್ಳಿ, ಬಿಜಾಪುರ, ಗುಲ್ಬರ್ಗ, ಭದ್ರಾವತಿ ಸೇರಿದಂತೆ ಬೆಂಗಳೂರಿನ ಬಿಲಾಲ್ ಬಾಗ್‌ ಕರ್ನಾಟಕ ರಾಜ್ಯದ ತುಂಬೆಲ್ಲಾ ಮಹಿಳಾ ನೇತೃತ್ವದ ಹೋರಾಟಗಳು ಮುನ್ನೆಲೆಯಲ್ಲಿವೆ.

ಒಂದು ಕಡೆ ಶಾಹೀನ್ ಬಾಗ್‌ ಹೋರಾಟವನ್ನು ಮಹಿಳೆಯರು ಮುನ್ನಡೆಸುತ್ತಿದ್ದರೆ ದೇಶದ ತುಂಬೆಲ್ಲಾ ಮಹಿಳೆಯರು ಬುರ್ಕಾ-ಬಿಂದಿ ಹೋರಾಟದ ಮೂಲಕ ಧರ್ಮಾತೀತ ರೂಪವನ್ನು ಚಳುವಳಿಗೆ ನೀಡುತ್ತಿದ್ದಾರೆ. ಮತ್ತೊಂದೆಡೆ ಬೀದಿ ತುಂಬೆಲ್ಲಾ ರಂಗೋಲಿ ಬಿಡಿಸಿ ಕೇಂದ್ರದ ಕರಾಳ ಕಾಯ್ದೆಗಳನ್ನು ವಿರೋಧಿಸುತ್ತಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳು, ಕಿಲೋಮೀಟರುಗಟ್ಟಲೆ ಕಾಲ್ನಡಿಗೆಯ ಜಾಥಗಳನ್ನು ಹೊರಟ ಸ್ತ್ರೀಯರು, ಕವಿತೆ, ಕವನ, ಚಿತ್ರಕಲೆ ಹೀಗೆ ವಿಭಿನ್ನ ಆಯಾಮಗಳಲ್ಲಿ ಪ್ರತಿಭಟನೆಯನ್ನು ಮಹಿಳೆಯರು ತೆರೆದಿಡುತ್ತಿರುವುದು ವಿಶ್ವದ ಭವಿಷ್ಯವನ್ನು ಕಟ್ಟುಕೊಡುವ ಆಶಾದಾಯಕ ಮುನ್ನೋಟವನ್ನು ನೀಡುತ್ತಿದೆ.

ಒಂದೆಡೆ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ತಮ್ಮ ಮಕ್ಕಳ ಭವಿಷ್ಯಕ್ಕಾಗಿ, ಸಂವಿಧಾನ ಮತ್ತು ದೇಶದ ಉಳಿವಿಗಾಗಿ ಹೋರಾಡುತ್ತಿದ್ದರೆ ಬೇಟಿ ಬಚಾವ್ ಬೇಟಿ ಪಡಾವ್ ಎನ್ನುವ ಸರ್ಕಾರ ಓದುವ ಹಕ್ಕಿಗಾಗಿಯೆ ಶುಲ್ಕ ಕಡಿಮೆ ಮಾಡಿ ಎಂದು ಕೇಳಿದ ಜೆ.ಎನ್.ಯುವಿನ ವಿದ್ಯಾರ್ಥಿಗಳ ಮೇಲೆ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಶಿ ಘೋಷ್ ಎನ್ನುವ ಹೆಣ್ಣು ಮಗಳ ಮೇಲೆ ಮಾಡಿದ ಹಲ್ಲೆ ಮಾಡಿತು. ಆಕೆಗೆ ಸಾಂತ್ವಾನ ಹೇಳಲು ಹೋದ ದೀಪಿಕಾ ಪಡುಕೋಣೆಯ ಬಗ್ಗೆ ಆಡಿದ ಮಾತುಗಳು ಈ ಸಂಸ್ಕೃತಿ ರಕ್ಷಕರ ಮುಖವಾಡದ ಅನಾವರಣವನ್ನು ಮಾಡಿದ್ದು ಒಂದೆಡೆಯಾದರೆ ಆಯಿಶಿ ಘೋಷ್, ದೀಪಿಕಾ ಪಡುಕೋಣೆಯಂತಹ ಹೆಣ್ಣುಗಳು ಪ್ರಭುತ್ವದ ಎದುರಿಗೆ ತೋರಿದ ಧೈರ್ಯ ನಿಜಕ್ಕೂ ಭರವಸೆಯ ಕಿರಣ.

ಇಷ್ಟೆಲ್ಲದರ ನಡುವೆ ಮಹಿಳಾ ಹೋರಾಟಗಳು ಸಿಂಪತಿಯ ಕಾರಣದಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತವೆ ಎಂಬುದಕ್ಕಿಂತ ಹಸಿ ಹಸಿ ಸುಳ್ಳು ಮತ್ತೊಂದಿಲ್ಲ. ಮಹಿಳಾ ಪ್ರತಿಭಟನೆ, ಹೋರಾಟ ಈ ಮಟ್ಟಿಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾರಣ ಹೆಣ್ಣೊಳಗಿನ ನೈಜ ಕಾಳಜಿ, ಧೃಡತೆ, ಸ್ಥೈರ್ಯ ಮತ್ತು ಗೆದ್ದೆ ಗೆಲ್ಲುವೆವೆಂಬ ಅಚಲ ನಂಬಿಕೆ. ತಿಂಗಳಾನುಗಟ್ಟಲೆ ಅಲುಗಾಡದೆ ಕೂತಲ್ಲೆ ಕೂರುವ ಮನೋಸ್ಥೈರ್ಯ, ಹೋರಾಟದ ಕಿಚ್ಚು ಹೆಣ್ಣಿನಲ್ಲಿ ಮಾತ್ರ ಕಾಣಲು ಸಾಧ್ಯ.

ನಾಲ್ಕುನೂರು ವರ್ಷದ ಇತಿಹಾಸದಲ್ಲೆ ಕಂಡು ಕೇಳರಿಯದ ಐದು ಡಿಗ್ರಿ ಸೆನ್ಸಸ್ ಚಳಿಯಲ್ಲು ವಯಸ್ಸಿನ ಪರಿಮಿತಿಯಿಲ್ಲದೆ, ಯಾವ ಬೆದರಿಕೆಗೂ ಕುಗ್ಗದೆ ಜಗ್ಗದೆ ಹೋರಾಡುತ್ತಿರುವ, ತನ್ನ ಹೆತ್ತ ಕರುಳನ್ನು ಕಳೆದುಕೊಂಡರು ಛಲಬಿಡದೆ ಹೋರಾಟದ ಕಂದೀಲು ಹಿಡಿದು ಸಾಗುತ್ತಿರುವ ಈ ನೆಲದ ಭಾರತ ಮಾತೆಯರೆಲ್ಲರಿಗು ಮಹಿಳಾ ದಿನಾಚರಣೆಯ ಶುಭಾಶಯಗಳು.

(ಲೇಖಕಿ ಕವಯತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...