Homeಮುಖಪುಟಎನ್‌ಪಿಆರ್, ಜನಗಣತಿ ಕುರಿತು ಜನರ ಆತಂಕ ನಿವಾರಿಸುವಂತೆ ಸರಕಾರಕ್ಕೆ ಸಂಸದೀಯ ಸಮಿತಿ ಸೂಚನೆ

ಎನ್‌ಪಿಆರ್, ಜನಗಣತಿ ಕುರಿತು ಜನರ ಆತಂಕ ನಿವಾರಿಸುವಂತೆ ಸರಕಾರಕ್ಕೆ ಸಂಸದೀಯ ಸಮಿತಿ ಸೂಚನೆ

ಜನಗಣತಿಯು ಸರಾಗವಾಗಿ ನಡೆಯುವಂತೆ ಒಂದು ದಾರಿಯನ್ನು ಕೇಂದ್ರ ಗೃಹ ಸಚಿವಾಲಯ ಕಂಡುಕೊಳ್ಳಬೇಕು; ಇಲ್ಲವಾದರೆ ಹಲವಾರು ರಾಜ್ಯಗಳಲ್ಲಿ ಇಡೀ ಪ್ರಕ್ರಿಯೆಯೇ ಬುಡಮೇಲಾಗಬಹುದು.

- Advertisement -
- Advertisement -

ಎನ್‌ಪಿಆರ್ ಮತ್ತು ಜನಗಣತಿಯ ಪ್ರಕ್ರಿಯೆ ಆರಂಭಿಸುವ ಮೊದಲು ಸಾರ್ವಜನಿಕರ ಆತಂಕ ನಿವಾರಣೆಗೆ ಸೂಕ್ತ ಯೋಜನೆಯೊಂದನ್ನು ರೂಪಿಸುವಂತೆ ಸಂಸದೀಯ ಸಮಿತಿಯೊಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಮುಂಬರಲಿರುವ ಎನ್‌ಪಿಆರ್ ಮತ್ತು ಜನಗಣತಿಯ ಕುರಿತು ಜನರಿಗೆ ಅತೃಪ್ತಿ ಮತ್ತು ಭಯವಿದ್ದು, ಯಾವುದೇ ಮಾಹಿತಿ ಸಂಗ್ರಹ ಆರಂಭಿಸುವ ಮೊದಲು ಈ ಭಯವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದೀಯ ಸಮಿತಿಯು ಸರಕಾರಕ್ಕೆ ಸಲಹೆ ಮಾಡಿದೆ. ಈ ಸಲಹೆಯನ್ನು ಮಾಡಿರುವುದು ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ.

ಜನಗಣತಿಯು ಸರಾಗವಾಗಿ ನಡೆಯುವಂತೆ ಒಂದು ದಾರಿಯನ್ನು ಕೇಂದ್ರ ಗೃಹ ಸಚಿವಾಲಯ ಕಂಡುಕೊಳ್ಳಬೇಕು; ಇಲ್ಲವಾದರೆ ಹಲವಾರು ರಾಜ್ಯಗಳಲ್ಲಿ ಇಡೀ ಪ್ರಕ್ರಿಯೆಯೇ ಬುಡಮೇಲಾಗಬಹುದು ಎಂದು ಸಮಿತಿಯು ಎಚ್ಚರಿಕೆ ನೀಡಿದೆ.

ಎನ್‌ಪಿಆರ್ ಎಂದರೇನು?: ಗೃಹ ಸಚಿವಾಲಯದ ವಾದ

ರಾಷ್ಟ್ರೀಯ ಒಮ್ಮತಕ್ಕೆ ಬರುವ ಸಲುವಾಗಿ ಎನ್‌ಪಿ‌ಆರ್‌ಗೆ ಸಂಬಂಧಿಸಿದಂತೆ ಇರುವ ವಿವಿಧ ವಿಷಯಗಳ ಬಗ್ಗೆ ಎಲ್ಲಾ ರಾಜ್ಯಗಳಿಗೆ ಸಂಪೂರ್ಣವಾಗಿ ಮನವರಿಕೆ ಮಾಡಬೇಕು ಎಂದು ಈ ಬಹುಪಕ್ಷೀಯ ಸಮಿತಿ ಹೇಳಿದೆ. ಈ ರೀತಿಯ ಒಮ್ಮತವು ದೇಶಾದ್ಯಂತ ಜನರಲ್ಲಿ ಇರುವ ಭಯವನ್ನು ನಿವಾರಿಸಿ, ಸಂಪೂರ್ಣ ಸ್ಪಷ್ಟತೆ ಮೂಡಿಸುವುದರಿಂದ ಸರಾಗವಾಗಿ ಈ ಪ್ರಕ್ರಿಯೆ ನಡೆಯಲು ಅನುಕೂಲವಾಗುವುದು ಎಂದು ಸಮಿತಿಯು ಹೇಳಿದೆ.

ಹೊಸದಾಗಿ ಮಾಹಿತಿ ಸಂಗ್ರಹ ಕಾರ್ಯಕ್ರಮಕ್ಕೆ ತಗಲುವ ಶ್ರಮ ಮತ್ತು ವೆಚ್ಚ ಮರುಕಳಿಸದಂತೆ ಮಾಡಲು ಆಧಾರ್ ಮಾಹಿತಿಗಳನ್ನೇ ಎನ್‌ಪಿಆರ್ ನವೀಕರಣಕ್ಕೆ ಬಳಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಮಿತಿ ಹೇಳಿದೆ.

1955ರ ಪೌರತ್ವ ಕಾಯಿದೆಯ ಆಧಾರದಲ್ಲಿ- 2003ರ ಪೌರತ್ವ ನಿಯಮಗಳ ಅನ್ವಯ 2010ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಥವಾ ಎನ್‌ಪಿಆರ್ ಮಾಡಲಾಗಿತ್ತು ಮತ್ತು 2015ರಲ್ಲಿ ಅದನ್ನು ನವೀಕರಣ ಮಾಡಲಾಗಿತ್ತು.

“ಹುಟ್ಟು, ಸಾವು ಮತ್ತು ವಲಸೆ ಇತ್ಯಾದಿ ಕಾರಣಗಳಿಂದ ರಾಷ್ಟ್ರೀಯ ಅಂಕಿಅಂಶಗಳನ್ನು ಮತ್ತೊಮ್ಮೆ ನವೀಕರಣ ಮಾಡಬೇಕಾದ ಅಗತ್ಯವಿದ್ದು, ಸರಕಾರ ಎನ್‌ಪಿಆರ್ ನವೀಕರಣದ ನಿರ್ಧಾರ ಕೈಗೊಂಡಿದೆ” ಎಂದು ಗೃಹ ಸಚಿವಾಲಯ ವಾದಿಸಿತು.

ಎನ್‌ಪಿಆರ್ ನವೀಕರಣ ನಡೆಯುತ್ತಿದ್ದು, ಅದನ್ನು ಹೊಸದಾಗಿ ಮಾಡುತ್ತಿಲ್ಲವಾದುದರಿಂದ, ಆಧಾರ್ ಮಾಹಿತಿ ಸಂಗ್ರಹ ( ಡಾಟಾ ಬೇಸ್) ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಯಾವುದೇ ಮರುಕಳಿಕೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಗೃಹ ಸಚಿವಾಲಯ ವಾದಿಸಿತು.

ಅದಲ್ಲದೇ “ಆಧಾರ್ ವೈಯಕ್ತಿಕ ಮಾಹಿತಿಯನ್ನು ಹೊಂದಿದ್ದು, ಎನ್‌ಪಿಆರ್ ಕೌಟುಂಬಿಕ ಮಾಹಿತಿಯನ್ನು ಹೊಂದಿರುತ್ತದೆ. ಆಧಾರ್ ಮಾಹಿತಿ ಸಂಗ್ರಹದಿಂದ ಕೌಟುಂಬಿಕ ಮಾಹಿತಿ ಸಂಗ್ರಹ ಸ್ಥಾಪಿಸಲು ಪ್ರತೀ ಮನೆಗೆ ಭೇಟಿ ನೀಡುವ ಅಗತ್ಯವಿದೆ” ಎಂದೂ ಗೃಹ ಸಚಿವಾಲಯ ವಾದಿಸಿತು.

ಆಧಾರ್, ಮತದಾರರ ಗುರುತುಚೀಟಿ, ಪಾಸ್‌ಪೋರ್ಟ್ ಸಂಖ್ಯೆ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳ ನಡುವೆ ಕಳೆದುಹೋಗಿರುವ ಕೊಂಡಿಯನ್ನು ಎನ್‌ಪಿಆರ್ ಮರಳಿ ಸ್ಥಾಪಿಸುವುದು, ಮತ್ತು ಮಾಹಿತಿಯ ಮರುಕಳಿಕೆಯನ್ನು ಕೂಡಾ ಅದು ನಿವಾರಿಸುವುದು ಎಂದು ಕೂಡಾ ಗೃಹ ಸಚಿವಾಲಯ ವಾದಿಸಿತು. ಎನ್‌ಪಿಆರ್ ಮಾಹಿತಿಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸಿ, ಭವಿಷ್ಯದಲ್ಲಿ ವಿವಿಧ ಯೋಜನೆಗಳ ಅನುಷ್ಟಾನದ ವೇಳೆ ಸರಕಾರದ ಸಂಪನ್ಮೂಲಗಳನ್ನು ಉಳಿತಾಯ ಮಾಡುವುದು ಎಂದೂ ಗೃಹ ಸಚಿವಾಲಯ ವಾದಿಸಿತು.

ಜನನ ಮತ್ತು ಮರಣದ ಮಾಹಿತಿಗಳನ್ನು ಸಂಪರ್ಕಿಸಿ ಪ್ರಸ್ತುತ ಕಾಲದ ಜನಸಂಖ್ಯೆಯ ಪ್ರಸ್ತುತ ಕಾಲದ ಮಾಹಿತಿ ಸಂಗ್ರಹ ಸರಕಾರದ ಆಶಯವಾಗಿದೆ ಎಂದೂ ಗೃಹ ಸಚಿವಾಲಯ ವಾದಿಸಿದೆ.

ದೇಶದಾದ್ಯಂತ ಎಪ್ರಿಲ್ 1ರಿಂದ ಜನಗಣತಿಯ ಜೊತೆಯಲ್ಲಿ ಎನ್‌ಪಿಆರ್ ನಡೆಸುವ ಯೋಜನೆಯೇನೋ ಇದೆ. ಆದರೆ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಮುಂತಾದ ಪ್ರತಿಪಕ್ಷಗಳಿರುವ ರಾಜ್ಯಗಳು ತಾವು ಎನ್‌ಪಿಆರ್ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ.

ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯ ಪೂರ್ವಭಾವಿ ಕಾರ್ಯಕ್ರಮ ಎಂದು ಪ್ರತಿಪಕ್ಷಗಳ ಆರೋಪವಾದರೆ, ರಾಷ್ಟ್ರೀಯ ಪೌರತ್ವ ದಾಖಲಾತಿ ಕುರಿತು ಯಾವುದೇ ನಿರ್ಧಾರವನ್ನು ಈ ತನಕ ತೆಗೆದುಕೊಳ್ಳಲಾಗಿಲ್ಲ ಎಂದು ಬಿಜೆಪಿ ನೇತೃತ್ವದ ಸರಕಾರ ಹೇಳುತ್ತಿದೆ.

ಕೇಳಲಾಗಲಿರುವ ಪ್ರಶ್ನಾವಳಿಯಲ್ಲಿ ಹೆತ್ತವರ ಜನನ ಸ್ಥಳ, ಜನನ ದಿನಾಂಕ ಇತ್ಯಾದಿ ಮಾಹಿತಿಗಳ ಕುರಿತು ಪ್ರಶ್ನೆಗಳನ್ನು ಹೊಸದಾಗಿ ಸೇರಿಸಿರುವುದಕ್ಕೆ ಹಲವಾರು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕೃಪೆ: ಕಮಲ್‌ಜಿತ್‌ ಕೌರ್‌ ಸಂಧು, ಇಂಡಿಯಾ ಟುಡೆ
ಕನ್ನಡಕ್ಕೆ : ನಿಖಿಲ್‌ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...