Homeಮುಖಪುಟಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಕೊರೊನಾ ಕಾರಣಕ್ಕೆ ಮೃತಪಟ್ಟ ಶವದ ಅಂತ್ಯಸಂಸ್ಕಾರಕ್ಕೆ ಅವಕಾಶಕೊಡದ ಮಂಗಳೂರಿನ ಅಮಾನವೀಯ ಘಟನೆಯ ಕುರಿತು ಅಲ್ಲಿನವರೇ ಆದ ಬಾಪು ಅಮ್ಮೆಂಬಳರವರ ಲೇಖನ

- Advertisement -
- Advertisement -

ಉನ್ಮಾದವನ್ನು ಯಾವ ರೀತಿ ಹರಡಲಾಗುತ್ತದೆ ಮತ್ತು ಅದು ನಮ್ಮನ್ನು ಹೇಗೆ ಆಟವಾಡಿಸುತ್ತದೆ ಎಂಬುವುದು ಮಂಗಳೂರಿನ ಘಟನೆ ಸ್ಪಷ್ಟ ಚಿತ್ರಣ ನೀಡುತ್ತದೆ. ಎಲ್ಲೋ ದೂರದ ಸುಶಿಕ್ಷಿತರಲ್ಲದ ಉತ್ತರದ ರಾಜ್ಯಗಳ ಜನರು ಈ ರೀತಿ ನಡೆದು ಕೊಂಡಿದ್ದರೆ, ರೋಗದ ಬಗ್ಗೆ ಅವರಿಗೆ ಅರಿವಿಲ್ಲ ಹಾಗಾಗಿ ಅವರ ತಪ್ಪಿಲ್ಲ ಎಂದು ಸುಮ್ಮನಿದ್ದು ಬಿಡಬಹುದಾಗಿತ್ತು. ಆದರೆ ಇದೆಲ್ಲ ನಡೆದಿರುವುದು ಪ್ರಜ್ಞಾವಂತರೆಂದು ನಮಗೆ ನಾವೇ ಹೇಳಿಕೊಳ್ಳುವ ನನ್ನೂರು ಮಂಗಳೂರಿನಲ್ಲಿ ಎನ್ನುವುದು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಎಷ್ಟೊಂದು ಅಮಾನವೀಯ ಘಟನೆ ಇದು. ಹಿರಿಯ ಜೀವವೊಂದು ಅವರು ಮಾಡದ ತಪ್ಪಿಗೆ ಸಾವಿಗೀಡಾದ ನಂತರವೂ ಒಂದು ಘನತೆಯ ಅಂತಿಮ ಸಂಸ್ಕಾರಕ್ಕೆ ನನ್ನೂರಿನ ಜನ ಅವಕಾಶ ಕೊಟ್ಟಿಲ್ಲ ಎಂದರೆ ಯಾವ ಪ್ರಜ್ಞೆ, ಎಂತಹ ಪ್ರಜ್ಞಾವಂತರು ? ಎಂತಹ ಕ್ರೂರತೆ ಇದು??

ಜಿಲ್ಲಾಡಳಿತ ಕೊರೊನಾ ಕಾರಣಕ್ಕೆ ಮೃತಪಟ್ಟ ಆ ಹಿರಿಯರ ಶವವನ್ನು ಆಂಬುಲೆನ್ಸ್‌ನಲ್ಲಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅರ್ಧ ಜಿಲ್ಲೆ ಅಲೆದಾಡಿದೆ. ಹೋದಲ್ಲೆಲ್ಲ ಜನರ ವಿರೋಧ ಕಂಡುಬಂದಿದೆ. ಅಂದರೆ ಅರ್ಥ ಮಾಡಿಕೊಳ್ಳಿ ಒಂದು ದೊಡ್ಡ ಗುಂಪಿನ ಜನರು ಉನ್ಮಾದಕ್ಕೆ ಒಳಗಾಗಿ ತಾವೇನು ಮಾಡುತ್ತಿದ್ದೇವೆ, ಇದು ಸರಿಯಾದ ನಡೆಯೇ ಎಂಬ ಬಗ್ಗೆ ಚಿಂತಿಸುವಷ್ಟೂ ವಿವೇಚನೆ ಕಳೆದುಕೊಂಡಿದೆ. ಅವರಿಗೆ ತಿಳಿ ಹೇಳುವವರೂ ಆ ಹೊತ್ತಿನಲ್ಲಿ ಯಾರೂ ಇರಲಿಲ್ಲ. ಒಂದು ವೇಳೆ ಹೇಳಿದ್ದರೂ ಕೇಳುತ್ತಿದ್ದರೆ? ಅದೂ ಇಲ್ಲ. ಪಚ್ಚನಾಡಿ ಸ್ಮಶಾನದಲ್ಲಿ ಶಾಸಕ ಭರತ್ ಶೆಟ್ಟಿ ನಡೆದುಕೊಂಡ ರೀತಿ ನಾಗರಿಕ ಸಮಾಜ ಎಂದು ಹೇಳುವ ಯಾರಾದರೂ ತಲೆತಗ್ಗಿಸಬೇಕಾದಂತ ವಿಷಯ. ಒಬ್ಬ ಸ್ವತಃ ಡಾಕ್ಟರ್ ಆಗಿರುವ ಅವರು, ಶವ ಇಲ್ಲಿ ಸುಟ್ಟರೆ ಕೊರೊನಾ ಹರಡಲ್ಲ ಎಂದು ಹೇಳುತ್ತಲೆ, ಅಂತಿಮ ಸಂಸ್ಕಾರದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ನನ್ನ ಜನ ಒಪ್ಪುತ್ತಿಲ್ಲ ಎಂದು ಹೇಳಿ ಕೊನೆವರೆಗೂ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಶವದಿಂದ ಕೊರೊನಾ ಹರಡುವುದಿಲ್ಲ ಎಂದು ಗೊತ್ತಿದ್ದರೂ ಜನರು ಒಪ್ಪುತ್ತಿಲ್ಲ ಎಂದು ಎಲ್ಲವೂ ಹಾಗೆ ಒಪ್ಪಿ ಬಿಡುವುದೆ. ಅದನ್ನು ವಿವೇಚಿಸಿ ಅವರಿಗೆ ತಿಳಿಹೇಳುವ ಹಾಗೂ ಈ ಅಮಾನವೀಯ ನಡೆಯ ವಿರುದ್ದ ನಿಲ್ಲುವ ನೈತಿಕ ಪ್ರಜ್ಞೆಯಾದರೂ ಬೇಡವೆ.

ಸುರತ್ಕಲ್ ಶಾಸಕ ಭರತ್‌ ಶೆಟ್ಟಿ

ಶಾಸಕ ಹಾಗೂ ಸ್ವತಃ ಡಾಕ್ಟರ್ ಕೂಡಾ ಆಗಿರುವ ಭರತ್ ಶೆಟ್ಟಿಗೆ ಅಲ್ಲಿರುವ ಜನರಿಗೆ ತಿಳಿ ಹೇಳಿ ಅಂತಿಮ ಸಂಸ್ಕಾರಕ್ಕೆ ಒಪ್ಪಿಸುವ ಧೈರ್ಯ ಯಾಕೆ ಬರಲಿಲ್ಲ?. ಮುಖ್ಯವಾಗಿ ಜನರು ಉದ್ರೇಕಗೊಳ್ಳಬಹುದು, ನನ್ನ ಮತದಾರರೇ ನನಗೆ ತಿರುಗಿ ಬೀಳಬಹುದು ಎಂಬ ಭಯ. ಹಾಗೆ ನೋಡಿದರೆ ಇಲ್ಲಿ ಇಂತಹ ಉನ್ಮಾದವನ್ನು ನಿಜಕ್ಕೂ ಸೃಷ್ಟಿಸಿದವರು ಯಾರು? ಇವರುಗಳು ತಾನೆ. ನಿಜ ಗೊತ್ತಿದ್ದರೂ ಅಲ್ಲಿ ಸೇರಿರುವ ಜನರು ಒಪ್ಪಿಕೊಳ್ಳುತ್ತಿಲ್ಲ ಯಾಕೆಂದರೆ ಒಪ್ಪಿಕೊಳ್ಳದೆ ಇರುವಂತಹ ಮನಸ್ಸುಗಳನ್ನು ಈಗಾಗಲೇ ಇಲ್ಲಿ ಸೃಷ್ಟಿಸಿಯಾಗಿದೆ. ಇಂತಹ ಉನ್ಮಾದವನ್ನು ಸೃಷ್ಟಿಸಿದವರಿಗೆ ಈಗ ಅದರ ವಿರುದ್ಧ ಮಾತನಾಡಲು ಭಯವಿದೆ. ಅದೇ ಕಾರಣಕ್ಕೆ ಸಾವಿಗೀಡಾದ ವ್ಯಕ್ತಿಯ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಕೂಡಾ, ಸ್ಮಶಾನ ಸಿಗದಿದ್ದರೆ ನನ್ನ ಜಮೀನಿನಲ್ಲಿ ಸಂಸ್ಕಾರ ಮಾಡಿ ಎಂದಿದ್ದು. ಈಗ ಅವರನ್ನು ಮಾನವೀಯತೆಯ ಹರಿಕಾರ ಎನ್ನುತ್ತಾ ಕೆಲವರು ಕೊಂಡಾಡುತ್ತಿದ್ದಾರೆ, ಬಿಡಿ. ಆದರೆ ನಿಜವಾಗಿಯೂ ಒಬ್ಬ ಶಾಸಕನ ಕರ್ತವ್ಯ ಯಾವುದು?.

ಕೊರೊನಾ ಸೋಂಕಿತರು ಸತ್ತರೆ ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲೇಬೇಕು ಎಂದು ನಿಯಮವೇನು ಇಲ್ಲ. ಸಾರ್ವಜನಿಕರಿಗಂತೂ ಇಂತಹ ಯಾವುದೇ ಮಾಹಿತಿ ನೀಡುವುದಿಲ್ಲ. ಆದರೆ ಜಿಲ್ಲಾಡಳಿತ ‌ಶವ ಸಂಸ್ಕಾರ ಮಾಡಬೇಕು ಎಂದು ತೀರ್ಮಾನಿಸಿದ ಕಡೆಯಲ್ಲೆಲ್ಲ ಜನ ಸೇರಿದ್ದರೆಂದರೆ ಉನ್ಮಾದಕ್ಕೆ ಒಳಪಡಿಸುವ ನೆಟ್ವರ್ಕ್ ಎಷ್ಟೊಂದು ವೇಗವಾಗಿ ಕೆಲಸ ಮಾಡುತ್ತಿದೆ ಎಂಬುವುದು ಅರ್ಥ ಮಾಡಿಕೊಳ್ಳಬಹುದು. ಜಿಲ್ಲಾಡಳಿತ ಅಂತಿಮ ಸಂಸ್ಕಾರಕ್ಕೆ ತೀರ್ಮಾನಿಸಿದ ಸ್ಮಶಾನವಿರುವ ಭಾಗದ ಜನರಿಗೆ ಅಷ್ಟೊಂದು ವೇಗದಲ್ಲಿ ಸಂದೇಶಗಳು ತಲುಪಿ, ಅಲ್ಲಿ ಅಂತಿಮ ಸಂಸ್ಕಾರ ಮಾಡಲು ಬಿಡಬಾರದು ಎಂದು ವಿವೇಚನೆಯಿಲ್ಲದ ತೀರ್ಮಾನವನ್ನು ಒಂದು ದೊಡ್ಡ ಜನ ಸಮೂಹ ತೀರ್ಮಾನಿಸುತ್ತದೆಯಂದರೆ, ಅದಕ್ಕಿಂತಲೂ ಹೆಚ್ಚಿನ ಅಪಾಯ ಏನಿದೆ. ಕೊರೊನಾ ಬಗ್ಗೆ ಜನರಿಗೆ ಸರ್ಕಾರ ಇಷ್ಟೆಲ್ಲ ಮಾಹಿತಿಯನ್ನು ನೀಡಿದರೂ ಮಂಗಳೂರಿನಂತಹ ಸುಶಿಕ್ಷಿತ ಜನರೆ ಅದನ್ನು ಮನನ ಮಾಡಿಕೊಂಡಿಲ್ಲವೆಂದರೆ ಸಮಾಜದ ದಾರಿ ಎಲ್ಲಿಗಿದೆ ಹೇಳಿ.

ಕೊರೊನಾ ಈಗಾಗಲೆ ಎಲ್ಲಾ ಕಡೆಗೂ ಹಬ್ಬುತ್ತಿದೆ. ಈ ಸೋಂಕು ಯಾರಿಗೂ ಹರಡಬಹುದು. ಒಂದು ವೇಳೆ ಅಲ್ಲಿ ಅಂತಿಮ ಸಂಸ್ಕಾರ ಮಾಡದಂತೆ ತಡೆದ ಜನರಿಗೂ ಇದೆ ರೀತಿಯ ಪರಿಸ್ಥಿತಿ ಬಂದಿದ್ದರೆ (ಹಾಗೆ ಆಗದಿರಲಿ) ಏನಾಗುತ್ತಿತ್ತು. ಅಲ್ಲಿ ಸೇರಿದ ಯಾರೂ ಸಾವಿಗೀಡಾದ ಕುಟುಂಬದವರ ಸ್ಥಾನದಲ್ಲಿ ನಿಂತು ನೋಡಲೇ ಇಲ್ಲ. ಆ ಕುಟುಂಬದವರು ಎಷ್ಟು ನೊಂದಿರಬಹುದು, ಮನೆಯ ಹಿರಿಯರನ್ನು ಕಳೆದುಕೊಂಡ ನೋವಿನ ಜೊತೆಗೆ, ಅಂತಿಮ ಸಂಸ್ಕಾರ ಮಾಡಲಾಗುತ್ತಿಲ್ಲ ಎಂಬ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿರುತ್ತದೆ. ಆದರೆ ಅಲ್ಲಿ ಸೇರಿದ ಯಾರಿಗೂ ಇದರ ಬಗ್ಗೆ ಆಲೋಚಿಸುವಷ್ಟು ವ್ಯಯದಾನವಿರಲಿಲ್ಲ. ಸಾಮೂಹಿಕ ಉನ್ಮಾದವೊಂದು ಏನೆಲ್ಲ ಮಾಡಿ ಬಿಡುತ್ತದೆ ನೋಡಿ. ಶವದ ಅಂತಿಮ ಸಂಸ್ಕಾರ ನಮ್ಮ ಹತ್ತಿರದ ಸ್ಮಶಾನದಲ್ಲಿ ಮಾಡುತ್ತಿದ್ದಾರೆಂಬ ಸಂದೇಶ ಭಯ ಹುಟ್ಟಿಸುವ ರೀತಿಯಲ್ಲಿ ಬಂದಿರುತ್ತದೆ, ಅದರಿಂದಾಗಿ ಅಂತಿಮ ಸಂಸ್ಕಾರ ಮಾಡಲು ಬಿಡಲೇಬಾರದು ಎಂಬ ತಲೆಗಡರಿದ ಉನ್ಮಾದದಿಂದಾಗಿ ಬಾಕಿ ಎಲ್ಲವೂ ಮಂಕಾಗುತ್ತದೆ. ಅವರು ಆಲೋಚನೆಯ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ನಿಜಕ್ಕೂ ಮಾನವೀಯತೆ ಎಂದರೆ ಏನು, ಎಲ್ಲವನ್ನೂ ಮೀರಿ ಮನುಷ್ಯನ ಸಂಕಷ್ಟಗಳಿಗೆ ನೆರವಾಗುವುದು, ಅವರ ನೋವಿಗೆ ಸಾಂತ್ವನವಾಗುವುದು, ಅವರ ಭಾರಗಳಿಗೆ ಬೆನ್ನಾಗುವುದು. ಆದರೆ ನನ್ನ ಮಂಗಳೂರಿಗೆ ಏನಾಗಿದೆ…


ಇದನ್ನೂ ಓದಿ: ಪಾದರಾಯನಪುರ ಮತ್ತು ಚನ್ನೈ ವೈದ್ಯನ ಸಾವಿನ ಘಟನೆ: ಇದು ನಮ್ಮೊಳಗಿನ ವೈರಸ್! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪ್ರಜ್ಞಾವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಜಿಲ್ಲೆಯಲ್ಲಿಯೇ ಹೀಗಾಗಿರುವುದು ದುರಂತ.
    “ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಾ” ಎಂದು ಬುದ್ದ ಹೇಳಿ, ಎರಡೂವರೆ ಸಾವಿರ ವರ್ಷಗಳು ಕಳೆದಿದ್ದರೂ ನಾವಿನ್ನೂ ಬುದ್ದಿ ಕಲಿತಿಲ್ಲ ಎಂದರೆ, ಕಲಿಯುವುದಾದರೂ ಯಾವಾಗ?
    ನಾಗರೀಕತೆಯ ಸವಲತ್ತುಗಳು ಹೆಚ್ಚಿದಂತೆಲ್ಲ ಮನುಷ್ಯ ಮಾನವನಾಗಬೇಕೇ ಹೊರತು ರಕ್ಕಸನಾಗಬಾರದು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...