Homeಮುಖಪುಟಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಕೊರೊನಾ ಕಾರಣಕ್ಕೆ ಮೃತಪಟ್ಟ ಶವದ ಅಂತ್ಯಸಂಸ್ಕಾರಕ್ಕೆ ಅವಕಾಶಕೊಡದ ಮಂಗಳೂರಿನ ಅಮಾನವೀಯ ಘಟನೆಯ ಕುರಿತು ಅಲ್ಲಿನವರೇ ಆದ ಬಾಪು ಅಮ್ಮೆಂಬಳರವರ ಲೇಖನ

- Advertisement -
- Advertisement -

ಉನ್ಮಾದವನ್ನು ಯಾವ ರೀತಿ ಹರಡಲಾಗುತ್ತದೆ ಮತ್ತು ಅದು ನಮ್ಮನ್ನು ಹೇಗೆ ಆಟವಾಡಿಸುತ್ತದೆ ಎಂಬುವುದು ಮಂಗಳೂರಿನ ಘಟನೆ ಸ್ಪಷ್ಟ ಚಿತ್ರಣ ನೀಡುತ್ತದೆ. ಎಲ್ಲೋ ದೂರದ ಸುಶಿಕ್ಷಿತರಲ್ಲದ ಉತ್ತರದ ರಾಜ್ಯಗಳ ಜನರು ಈ ರೀತಿ ನಡೆದು ಕೊಂಡಿದ್ದರೆ, ರೋಗದ ಬಗ್ಗೆ ಅವರಿಗೆ ಅರಿವಿಲ್ಲ ಹಾಗಾಗಿ ಅವರ ತಪ್ಪಿಲ್ಲ ಎಂದು ಸುಮ್ಮನಿದ್ದು ಬಿಡಬಹುದಾಗಿತ್ತು. ಆದರೆ ಇದೆಲ್ಲ ನಡೆದಿರುವುದು ಪ್ರಜ್ಞಾವಂತರೆಂದು ನಮಗೆ ನಾವೇ ಹೇಳಿಕೊಳ್ಳುವ ನನ್ನೂರು ಮಂಗಳೂರಿನಲ್ಲಿ ಎನ್ನುವುದು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಎಷ್ಟೊಂದು ಅಮಾನವೀಯ ಘಟನೆ ಇದು. ಹಿರಿಯ ಜೀವವೊಂದು ಅವರು ಮಾಡದ ತಪ್ಪಿಗೆ ಸಾವಿಗೀಡಾದ ನಂತರವೂ ಒಂದು ಘನತೆಯ ಅಂತಿಮ ಸಂಸ್ಕಾರಕ್ಕೆ ನನ್ನೂರಿನ ಜನ ಅವಕಾಶ ಕೊಟ್ಟಿಲ್ಲ ಎಂದರೆ ಯಾವ ಪ್ರಜ್ಞೆ, ಎಂತಹ ಪ್ರಜ್ಞಾವಂತರು ? ಎಂತಹ ಕ್ರೂರತೆ ಇದು??

ಜಿಲ್ಲಾಡಳಿತ ಕೊರೊನಾ ಕಾರಣಕ್ಕೆ ಮೃತಪಟ್ಟ ಆ ಹಿರಿಯರ ಶವವನ್ನು ಆಂಬುಲೆನ್ಸ್‌ನಲ್ಲಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅರ್ಧ ಜಿಲ್ಲೆ ಅಲೆದಾಡಿದೆ. ಹೋದಲ್ಲೆಲ್ಲ ಜನರ ವಿರೋಧ ಕಂಡುಬಂದಿದೆ. ಅಂದರೆ ಅರ್ಥ ಮಾಡಿಕೊಳ್ಳಿ ಒಂದು ದೊಡ್ಡ ಗುಂಪಿನ ಜನರು ಉನ್ಮಾದಕ್ಕೆ ಒಳಗಾಗಿ ತಾವೇನು ಮಾಡುತ್ತಿದ್ದೇವೆ, ಇದು ಸರಿಯಾದ ನಡೆಯೇ ಎಂಬ ಬಗ್ಗೆ ಚಿಂತಿಸುವಷ್ಟೂ ವಿವೇಚನೆ ಕಳೆದುಕೊಂಡಿದೆ. ಅವರಿಗೆ ತಿಳಿ ಹೇಳುವವರೂ ಆ ಹೊತ್ತಿನಲ್ಲಿ ಯಾರೂ ಇರಲಿಲ್ಲ. ಒಂದು ವೇಳೆ ಹೇಳಿದ್ದರೂ ಕೇಳುತ್ತಿದ್ದರೆ? ಅದೂ ಇಲ್ಲ. ಪಚ್ಚನಾಡಿ ಸ್ಮಶಾನದಲ್ಲಿ ಶಾಸಕ ಭರತ್ ಶೆಟ್ಟಿ ನಡೆದುಕೊಂಡ ರೀತಿ ನಾಗರಿಕ ಸಮಾಜ ಎಂದು ಹೇಳುವ ಯಾರಾದರೂ ತಲೆತಗ್ಗಿಸಬೇಕಾದಂತ ವಿಷಯ. ಒಬ್ಬ ಸ್ವತಃ ಡಾಕ್ಟರ್ ಆಗಿರುವ ಅವರು, ಶವ ಇಲ್ಲಿ ಸುಟ್ಟರೆ ಕೊರೊನಾ ಹರಡಲ್ಲ ಎಂದು ಹೇಳುತ್ತಲೆ, ಅಂತಿಮ ಸಂಸ್ಕಾರದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ನನ್ನ ಜನ ಒಪ್ಪುತ್ತಿಲ್ಲ ಎಂದು ಹೇಳಿ ಕೊನೆವರೆಗೂ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಶವದಿಂದ ಕೊರೊನಾ ಹರಡುವುದಿಲ್ಲ ಎಂದು ಗೊತ್ತಿದ್ದರೂ ಜನರು ಒಪ್ಪುತ್ತಿಲ್ಲ ಎಂದು ಎಲ್ಲವೂ ಹಾಗೆ ಒಪ್ಪಿ ಬಿಡುವುದೆ. ಅದನ್ನು ವಿವೇಚಿಸಿ ಅವರಿಗೆ ತಿಳಿಹೇಳುವ ಹಾಗೂ ಈ ಅಮಾನವೀಯ ನಡೆಯ ವಿರುದ್ದ ನಿಲ್ಲುವ ನೈತಿಕ ಪ್ರಜ್ಞೆಯಾದರೂ ಬೇಡವೆ.

ಸುರತ್ಕಲ್ ಶಾಸಕ ಭರತ್‌ ಶೆಟ್ಟಿ

ಶಾಸಕ ಹಾಗೂ ಸ್ವತಃ ಡಾಕ್ಟರ್ ಕೂಡಾ ಆಗಿರುವ ಭರತ್ ಶೆಟ್ಟಿಗೆ ಅಲ್ಲಿರುವ ಜನರಿಗೆ ತಿಳಿ ಹೇಳಿ ಅಂತಿಮ ಸಂಸ್ಕಾರಕ್ಕೆ ಒಪ್ಪಿಸುವ ಧೈರ್ಯ ಯಾಕೆ ಬರಲಿಲ್ಲ?. ಮುಖ್ಯವಾಗಿ ಜನರು ಉದ್ರೇಕಗೊಳ್ಳಬಹುದು, ನನ್ನ ಮತದಾರರೇ ನನಗೆ ತಿರುಗಿ ಬೀಳಬಹುದು ಎಂಬ ಭಯ. ಹಾಗೆ ನೋಡಿದರೆ ಇಲ್ಲಿ ಇಂತಹ ಉನ್ಮಾದವನ್ನು ನಿಜಕ್ಕೂ ಸೃಷ್ಟಿಸಿದವರು ಯಾರು? ಇವರುಗಳು ತಾನೆ. ನಿಜ ಗೊತ್ತಿದ್ದರೂ ಅಲ್ಲಿ ಸೇರಿರುವ ಜನರು ಒಪ್ಪಿಕೊಳ್ಳುತ್ತಿಲ್ಲ ಯಾಕೆಂದರೆ ಒಪ್ಪಿಕೊಳ್ಳದೆ ಇರುವಂತಹ ಮನಸ್ಸುಗಳನ್ನು ಈಗಾಗಲೇ ಇಲ್ಲಿ ಸೃಷ್ಟಿಸಿಯಾಗಿದೆ. ಇಂತಹ ಉನ್ಮಾದವನ್ನು ಸೃಷ್ಟಿಸಿದವರಿಗೆ ಈಗ ಅದರ ವಿರುದ್ಧ ಮಾತನಾಡಲು ಭಯವಿದೆ. ಅದೇ ಕಾರಣಕ್ಕೆ ಸಾವಿಗೀಡಾದ ವ್ಯಕ್ತಿಯ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಕೂಡಾ, ಸ್ಮಶಾನ ಸಿಗದಿದ್ದರೆ ನನ್ನ ಜಮೀನಿನಲ್ಲಿ ಸಂಸ್ಕಾರ ಮಾಡಿ ಎಂದಿದ್ದು. ಈಗ ಅವರನ್ನು ಮಾನವೀಯತೆಯ ಹರಿಕಾರ ಎನ್ನುತ್ತಾ ಕೆಲವರು ಕೊಂಡಾಡುತ್ತಿದ್ದಾರೆ, ಬಿಡಿ. ಆದರೆ ನಿಜವಾಗಿಯೂ ಒಬ್ಬ ಶಾಸಕನ ಕರ್ತವ್ಯ ಯಾವುದು?.

ಕೊರೊನಾ ಸೋಂಕಿತರು ಸತ್ತರೆ ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲೇಬೇಕು ಎಂದು ನಿಯಮವೇನು ಇಲ್ಲ. ಸಾರ್ವಜನಿಕರಿಗಂತೂ ಇಂತಹ ಯಾವುದೇ ಮಾಹಿತಿ ನೀಡುವುದಿಲ್ಲ. ಆದರೆ ಜಿಲ್ಲಾಡಳಿತ ‌ಶವ ಸಂಸ್ಕಾರ ಮಾಡಬೇಕು ಎಂದು ತೀರ್ಮಾನಿಸಿದ ಕಡೆಯಲ್ಲೆಲ್ಲ ಜನ ಸೇರಿದ್ದರೆಂದರೆ ಉನ್ಮಾದಕ್ಕೆ ಒಳಪಡಿಸುವ ನೆಟ್ವರ್ಕ್ ಎಷ್ಟೊಂದು ವೇಗವಾಗಿ ಕೆಲಸ ಮಾಡುತ್ತಿದೆ ಎಂಬುವುದು ಅರ್ಥ ಮಾಡಿಕೊಳ್ಳಬಹುದು. ಜಿಲ್ಲಾಡಳಿತ ಅಂತಿಮ ಸಂಸ್ಕಾರಕ್ಕೆ ತೀರ್ಮಾನಿಸಿದ ಸ್ಮಶಾನವಿರುವ ಭಾಗದ ಜನರಿಗೆ ಅಷ್ಟೊಂದು ವೇಗದಲ್ಲಿ ಸಂದೇಶಗಳು ತಲುಪಿ, ಅಲ್ಲಿ ಅಂತಿಮ ಸಂಸ್ಕಾರ ಮಾಡಲು ಬಿಡಬಾರದು ಎಂದು ವಿವೇಚನೆಯಿಲ್ಲದ ತೀರ್ಮಾನವನ್ನು ಒಂದು ದೊಡ್ಡ ಜನ ಸಮೂಹ ತೀರ್ಮಾನಿಸುತ್ತದೆಯಂದರೆ, ಅದಕ್ಕಿಂತಲೂ ಹೆಚ್ಚಿನ ಅಪಾಯ ಏನಿದೆ. ಕೊರೊನಾ ಬಗ್ಗೆ ಜನರಿಗೆ ಸರ್ಕಾರ ಇಷ್ಟೆಲ್ಲ ಮಾಹಿತಿಯನ್ನು ನೀಡಿದರೂ ಮಂಗಳೂರಿನಂತಹ ಸುಶಿಕ್ಷಿತ ಜನರೆ ಅದನ್ನು ಮನನ ಮಾಡಿಕೊಂಡಿಲ್ಲವೆಂದರೆ ಸಮಾಜದ ದಾರಿ ಎಲ್ಲಿಗಿದೆ ಹೇಳಿ.

ಕೊರೊನಾ ಈಗಾಗಲೆ ಎಲ್ಲಾ ಕಡೆಗೂ ಹಬ್ಬುತ್ತಿದೆ. ಈ ಸೋಂಕು ಯಾರಿಗೂ ಹರಡಬಹುದು. ಒಂದು ವೇಳೆ ಅಲ್ಲಿ ಅಂತಿಮ ಸಂಸ್ಕಾರ ಮಾಡದಂತೆ ತಡೆದ ಜನರಿಗೂ ಇದೆ ರೀತಿಯ ಪರಿಸ್ಥಿತಿ ಬಂದಿದ್ದರೆ (ಹಾಗೆ ಆಗದಿರಲಿ) ಏನಾಗುತ್ತಿತ್ತು. ಅಲ್ಲಿ ಸೇರಿದ ಯಾರೂ ಸಾವಿಗೀಡಾದ ಕುಟುಂಬದವರ ಸ್ಥಾನದಲ್ಲಿ ನಿಂತು ನೋಡಲೇ ಇಲ್ಲ. ಆ ಕುಟುಂಬದವರು ಎಷ್ಟು ನೊಂದಿರಬಹುದು, ಮನೆಯ ಹಿರಿಯರನ್ನು ಕಳೆದುಕೊಂಡ ನೋವಿನ ಜೊತೆಗೆ, ಅಂತಿಮ ಸಂಸ್ಕಾರ ಮಾಡಲಾಗುತ್ತಿಲ್ಲ ಎಂಬ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿರುತ್ತದೆ. ಆದರೆ ಅಲ್ಲಿ ಸೇರಿದ ಯಾರಿಗೂ ಇದರ ಬಗ್ಗೆ ಆಲೋಚಿಸುವಷ್ಟು ವ್ಯಯದಾನವಿರಲಿಲ್ಲ. ಸಾಮೂಹಿಕ ಉನ್ಮಾದವೊಂದು ಏನೆಲ್ಲ ಮಾಡಿ ಬಿಡುತ್ತದೆ ನೋಡಿ. ಶವದ ಅಂತಿಮ ಸಂಸ್ಕಾರ ನಮ್ಮ ಹತ್ತಿರದ ಸ್ಮಶಾನದಲ್ಲಿ ಮಾಡುತ್ತಿದ್ದಾರೆಂಬ ಸಂದೇಶ ಭಯ ಹುಟ್ಟಿಸುವ ರೀತಿಯಲ್ಲಿ ಬಂದಿರುತ್ತದೆ, ಅದರಿಂದಾಗಿ ಅಂತಿಮ ಸಂಸ್ಕಾರ ಮಾಡಲು ಬಿಡಲೇಬಾರದು ಎಂಬ ತಲೆಗಡರಿದ ಉನ್ಮಾದದಿಂದಾಗಿ ಬಾಕಿ ಎಲ್ಲವೂ ಮಂಕಾಗುತ್ತದೆ. ಅವರು ಆಲೋಚನೆಯ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ನಿಜಕ್ಕೂ ಮಾನವೀಯತೆ ಎಂದರೆ ಏನು, ಎಲ್ಲವನ್ನೂ ಮೀರಿ ಮನುಷ್ಯನ ಸಂಕಷ್ಟಗಳಿಗೆ ನೆರವಾಗುವುದು, ಅವರ ನೋವಿಗೆ ಸಾಂತ್ವನವಾಗುವುದು, ಅವರ ಭಾರಗಳಿಗೆ ಬೆನ್ನಾಗುವುದು. ಆದರೆ ನನ್ನ ಮಂಗಳೂರಿಗೆ ಏನಾಗಿದೆ…


ಇದನ್ನೂ ಓದಿ: ಪಾದರಾಯನಪುರ ಮತ್ತು ಚನ್ನೈ ವೈದ್ಯನ ಸಾವಿನ ಘಟನೆ: ಇದು ನಮ್ಮೊಳಗಿನ ವೈರಸ್! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪ್ರಜ್ಞಾವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಜಿಲ್ಲೆಯಲ್ಲಿಯೇ ಹೀಗಾಗಿರುವುದು ದುರಂತ.
    “ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಾ” ಎಂದು ಬುದ್ದ ಹೇಳಿ, ಎರಡೂವರೆ ಸಾವಿರ ವರ್ಷಗಳು ಕಳೆದಿದ್ದರೂ ನಾವಿನ್ನೂ ಬುದ್ದಿ ಕಲಿತಿಲ್ಲ ಎಂದರೆ, ಕಲಿಯುವುದಾದರೂ ಯಾವಾಗ?
    ನಾಗರೀಕತೆಯ ಸವಲತ್ತುಗಳು ಹೆಚ್ಚಿದಂತೆಲ್ಲ ಮನುಷ್ಯ ಮಾನವನಾಗಬೇಕೇ ಹೊರತು ರಕ್ಕಸನಾಗಬಾರದು.

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...