Homeಮುಖಪುಟಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಕೊರೊನಾ ಕಾರಣಕ್ಕೆ ಮೃತಪಟ್ಟ ಶವದ ಅಂತ್ಯಸಂಸ್ಕಾರಕ್ಕೆ ಅವಕಾಶಕೊಡದ ಮಂಗಳೂರಿನ ಅಮಾನವೀಯ ಘಟನೆಯ ಕುರಿತು ಅಲ್ಲಿನವರೇ ಆದ ಬಾಪು ಅಮ್ಮೆಂಬಳರವರ ಲೇಖನ

- Advertisement -
- Advertisement -

ಉನ್ಮಾದವನ್ನು ಯಾವ ರೀತಿ ಹರಡಲಾಗುತ್ತದೆ ಮತ್ತು ಅದು ನಮ್ಮನ್ನು ಹೇಗೆ ಆಟವಾಡಿಸುತ್ತದೆ ಎಂಬುವುದು ಮಂಗಳೂರಿನ ಘಟನೆ ಸ್ಪಷ್ಟ ಚಿತ್ರಣ ನೀಡುತ್ತದೆ. ಎಲ್ಲೋ ದೂರದ ಸುಶಿಕ್ಷಿತರಲ್ಲದ ಉತ್ತರದ ರಾಜ್ಯಗಳ ಜನರು ಈ ರೀತಿ ನಡೆದು ಕೊಂಡಿದ್ದರೆ, ರೋಗದ ಬಗ್ಗೆ ಅವರಿಗೆ ಅರಿವಿಲ್ಲ ಹಾಗಾಗಿ ಅವರ ತಪ್ಪಿಲ್ಲ ಎಂದು ಸುಮ್ಮನಿದ್ದು ಬಿಡಬಹುದಾಗಿತ್ತು. ಆದರೆ ಇದೆಲ್ಲ ನಡೆದಿರುವುದು ಪ್ರಜ್ಞಾವಂತರೆಂದು ನಮಗೆ ನಾವೇ ಹೇಳಿಕೊಳ್ಳುವ ನನ್ನೂರು ಮಂಗಳೂರಿನಲ್ಲಿ ಎನ್ನುವುದು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಎಷ್ಟೊಂದು ಅಮಾನವೀಯ ಘಟನೆ ಇದು. ಹಿರಿಯ ಜೀವವೊಂದು ಅವರು ಮಾಡದ ತಪ್ಪಿಗೆ ಸಾವಿಗೀಡಾದ ನಂತರವೂ ಒಂದು ಘನತೆಯ ಅಂತಿಮ ಸಂಸ್ಕಾರಕ್ಕೆ ನನ್ನೂರಿನ ಜನ ಅವಕಾಶ ಕೊಟ್ಟಿಲ್ಲ ಎಂದರೆ ಯಾವ ಪ್ರಜ್ಞೆ, ಎಂತಹ ಪ್ರಜ್ಞಾವಂತರು ? ಎಂತಹ ಕ್ರೂರತೆ ಇದು??

ಜಿಲ್ಲಾಡಳಿತ ಕೊರೊನಾ ಕಾರಣಕ್ಕೆ ಮೃತಪಟ್ಟ ಆ ಹಿರಿಯರ ಶವವನ್ನು ಆಂಬುಲೆನ್ಸ್‌ನಲ್ಲಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅರ್ಧ ಜಿಲ್ಲೆ ಅಲೆದಾಡಿದೆ. ಹೋದಲ್ಲೆಲ್ಲ ಜನರ ವಿರೋಧ ಕಂಡುಬಂದಿದೆ. ಅಂದರೆ ಅರ್ಥ ಮಾಡಿಕೊಳ್ಳಿ ಒಂದು ದೊಡ್ಡ ಗುಂಪಿನ ಜನರು ಉನ್ಮಾದಕ್ಕೆ ಒಳಗಾಗಿ ತಾವೇನು ಮಾಡುತ್ತಿದ್ದೇವೆ, ಇದು ಸರಿಯಾದ ನಡೆಯೇ ಎಂಬ ಬಗ್ಗೆ ಚಿಂತಿಸುವಷ್ಟೂ ವಿವೇಚನೆ ಕಳೆದುಕೊಂಡಿದೆ. ಅವರಿಗೆ ತಿಳಿ ಹೇಳುವವರೂ ಆ ಹೊತ್ತಿನಲ್ಲಿ ಯಾರೂ ಇರಲಿಲ್ಲ. ಒಂದು ವೇಳೆ ಹೇಳಿದ್ದರೂ ಕೇಳುತ್ತಿದ್ದರೆ? ಅದೂ ಇಲ್ಲ. ಪಚ್ಚನಾಡಿ ಸ್ಮಶಾನದಲ್ಲಿ ಶಾಸಕ ಭರತ್ ಶೆಟ್ಟಿ ನಡೆದುಕೊಂಡ ರೀತಿ ನಾಗರಿಕ ಸಮಾಜ ಎಂದು ಹೇಳುವ ಯಾರಾದರೂ ತಲೆತಗ್ಗಿಸಬೇಕಾದಂತ ವಿಷಯ. ಒಬ್ಬ ಸ್ವತಃ ಡಾಕ್ಟರ್ ಆಗಿರುವ ಅವರು, ಶವ ಇಲ್ಲಿ ಸುಟ್ಟರೆ ಕೊರೊನಾ ಹರಡಲ್ಲ ಎಂದು ಹೇಳುತ್ತಲೆ, ಅಂತಿಮ ಸಂಸ್ಕಾರದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ನನ್ನ ಜನ ಒಪ್ಪುತ್ತಿಲ್ಲ ಎಂದು ಹೇಳಿ ಕೊನೆವರೆಗೂ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಶವದಿಂದ ಕೊರೊನಾ ಹರಡುವುದಿಲ್ಲ ಎಂದು ಗೊತ್ತಿದ್ದರೂ ಜನರು ಒಪ್ಪುತ್ತಿಲ್ಲ ಎಂದು ಎಲ್ಲವೂ ಹಾಗೆ ಒಪ್ಪಿ ಬಿಡುವುದೆ. ಅದನ್ನು ವಿವೇಚಿಸಿ ಅವರಿಗೆ ತಿಳಿಹೇಳುವ ಹಾಗೂ ಈ ಅಮಾನವೀಯ ನಡೆಯ ವಿರುದ್ದ ನಿಲ್ಲುವ ನೈತಿಕ ಪ್ರಜ್ಞೆಯಾದರೂ ಬೇಡವೆ.

ಸುರತ್ಕಲ್ ಶಾಸಕ ಭರತ್‌ ಶೆಟ್ಟಿ

ಶಾಸಕ ಹಾಗೂ ಸ್ವತಃ ಡಾಕ್ಟರ್ ಕೂಡಾ ಆಗಿರುವ ಭರತ್ ಶೆಟ್ಟಿಗೆ ಅಲ್ಲಿರುವ ಜನರಿಗೆ ತಿಳಿ ಹೇಳಿ ಅಂತಿಮ ಸಂಸ್ಕಾರಕ್ಕೆ ಒಪ್ಪಿಸುವ ಧೈರ್ಯ ಯಾಕೆ ಬರಲಿಲ್ಲ?. ಮುಖ್ಯವಾಗಿ ಜನರು ಉದ್ರೇಕಗೊಳ್ಳಬಹುದು, ನನ್ನ ಮತದಾರರೇ ನನಗೆ ತಿರುಗಿ ಬೀಳಬಹುದು ಎಂಬ ಭಯ. ಹಾಗೆ ನೋಡಿದರೆ ಇಲ್ಲಿ ಇಂತಹ ಉನ್ಮಾದವನ್ನು ನಿಜಕ್ಕೂ ಸೃಷ್ಟಿಸಿದವರು ಯಾರು? ಇವರುಗಳು ತಾನೆ. ನಿಜ ಗೊತ್ತಿದ್ದರೂ ಅಲ್ಲಿ ಸೇರಿರುವ ಜನರು ಒಪ್ಪಿಕೊಳ್ಳುತ್ತಿಲ್ಲ ಯಾಕೆಂದರೆ ಒಪ್ಪಿಕೊಳ್ಳದೆ ಇರುವಂತಹ ಮನಸ್ಸುಗಳನ್ನು ಈಗಾಗಲೇ ಇಲ್ಲಿ ಸೃಷ್ಟಿಸಿಯಾಗಿದೆ. ಇಂತಹ ಉನ್ಮಾದವನ್ನು ಸೃಷ್ಟಿಸಿದವರಿಗೆ ಈಗ ಅದರ ವಿರುದ್ಧ ಮಾತನಾಡಲು ಭಯವಿದೆ. ಅದೇ ಕಾರಣಕ್ಕೆ ಸಾವಿಗೀಡಾದ ವ್ಯಕ್ತಿಯ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಕೂಡಾ, ಸ್ಮಶಾನ ಸಿಗದಿದ್ದರೆ ನನ್ನ ಜಮೀನಿನಲ್ಲಿ ಸಂಸ್ಕಾರ ಮಾಡಿ ಎಂದಿದ್ದು. ಈಗ ಅವರನ್ನು ಮಾನವೀಯತೆಯ ಹರಿಕಾರ ಎನ್ನುತ್ತಾ ಕೆಲವರು ಕೊಂಡಾಡುತ್ತಿದ್ದಾರೆ, ಬಿಡಿ. ಆದರೆ ನಿಜವಾಗಿಯೂ ಒಬ್ಬ ಶಾಸಕನ ಕರ್ತವ್ಯ ಯಾವುದು?.

ಕೊರೊನಾ ಸೋಂಕಿತರು ಸತ್ತರೆ ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲೇಬೇಕು ಎಂದು ನಿಯಮವೇನು ಇಲ್ಲ. ಸಾರ್ವಜನಿಕರಿಗಂತೂ ಇಂತಹ ಯಾವುದೇ ಮಾಹಿತಿ ನೀಡುವುದಿಲ್ಲ. ಆದರೆ ಜಿಲ್ಲಾಡಳಿತ ‌ಶವ ಸಂಸ್ಕಾರ ಮಾಡಬೇಕು ಎಂದು ತೀರ್ಮಾನಿಸಿದ ಕಡೆಯಲ್ಲೆಲ್ಲ ಜನ ಸೇರಿದ್ದರೆಂದರೆ ಉನ್ಮಾದಕ್ಕೆ ಒಳಪಡಿಸುವ ನೆಟ್ವರ್ಕ್ ಎಷ್ಟೊಂದು ವೇಗವಾಗಿ ಕೆಲಸ ಮಾಡುತ್ತಿದೆ ಎಂಬುವುದು ಅರ್ಥ ಮಾಡಿಕೊಳ್ಳಬಹುದು. ಜಿಲ್ಲಾಡಳಿತ ಅಂತಿಮ ಸಂಸ್ಕಾರಕ್ಕೆ ತೀರ್ಮಾನಿಸಿದ ಸ್ಮಶಾನವಿರುವ ಭಾಗದ ಜನರಿಗೆ ಅಷ್ಟೊಂದು ವೇಗದಲ್ಲಿ ಸಂದೇಶಗಳು ತಲುಪಿ, ಅಲ್ಲಿ ಅಂತಿಮ ಸಂಸ್ಕಾರ ಮಾಡಲು ಬಿಡಬಾರದು ಎಂದು ವಿವೇಚನೆಯಿಲ್ಲದ ತೀರ್ಮಾನವನ್ನು ಒಂದು ದೊಡ್ಡ ಜನ ಸಮೂಹ ತೀರ್ಮಾನಿಸುತ್ತದೆಯಂದರೆ, ಅದಕ್ಕಿಂತಲೂ ಹೆಚ್ಚಿನ ಅಪಾಯ ಏನಿದೆ. ಕೊರೊನಾ ಬಗ್ಗೆ ಜನರಿಗೆ ಸರ್ಕಾರ ಇಷ್ಟೆಲ್ಲ ಮಾಹಿತಿಯನ್ನು ನೀಡಿದರೂ ಮಂಗಳೂರಿನಂತಹ ಸುಶಿಕ್ಷಿತ ಜನರೆ ಅದನ್ನು ಮನನ ಮಾಡಿಕೊಂಡಿಲ್ಲವೆಂದರೆ ಸಮಾಜದ ದಾರಿ ಎಲ್ಲಿಗಿದೆ ಹೇಳಿ.

ಕೊರೊನಾ ಈಗಾಗಲೆ ಎಲ್ಲಾ ಕಡೆಗೂ ಹಬ್ಬುತ್ತಿದೆ. ಈ ಸೋಂಕು ಯಾರಿಗೂ ಹರಡಬಹುದು. ಒಂದು ವೇಳೆ ಅಲ್ಲಿ ಅಂತಿಮ ಸಂಸ್ಕಾರ ಮಾಡದಂತೆ ತಡೆದ ಜನರಿಗೂ ಇದೆ ರೀತಿಯ ಪರಿಸ್ಥಿತಿ ಬಂದಿದ್ದರೆ (ಹಾಗೆ ಆಗದಿರಲಿ) ಏನಾಗುತ್ತಿತ್ತು. ಅಲ್ಲಿ ಸೇರಿದ ಯಾರೂ ಸಾವಿಗೀಡಾದ ಕುಟುಂಬದವರ ಸ್ಥಾನದಲ್ಲಿ ನಿಂತು ನೋಡಲೇ ಇಲ್ಲ. ಆ ಕುಟುಂಬದವರು ಎಷ್ಟು ನೊಂದಿರಬಹುದು, ಮನೆಯ ಹಿರಿಯರನ್ನು ಕಳೆದುಕೊಂಡ ನೋವಿನ ಜೊತೆಗೆ, ಅಂತಿಮ ಸಂಸ್ಕಾರ ಮಾಡಲಾಗುತ್ತಿಲ್ಲ ಎಂಬ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿರುತ್ತದೆ. ಆದರೆ ಅಲ್ಲಿ ಸೇರಿದ ಯಾರಿಗೂ ಇದರ ಬಗ್ಗೆ ಆಲೋಚಿಸುವಷ್ಟು ವ್ಯಯದಾನವಿರಲಿಲ್ಲ. ಸಾಮೂಹಿಕ ಉನ್ಮಾದವೊಂದು ಏನೆಲ್ಲ ಮಾಡಿ ಬಿಡುತ್ತದೆ ನೋಡಿ. ಶವದ ಅಂತಿಮ ಸಂಸ್ಕಾರ ನಮ್ಮ ಹತ್ತಿರದ ಸ್ಮಶಾನದಲ್ಲಿ ಮಾಡುತ್ತಿದ್ದಾರೆಂಬ ಸಂದೇಶ ಭಯ ಹುಟ್ಟಿಸುವ ರೀತಿಯಲ್ಲಿ ಬಂದಿರುತ್ತದೆ, ಅದರಿಂದಾಗಿ ಅಂತಿಮ ಸಂಸ್ಕಾರ ಮಾಡಲು ಬಿಡಲೇಬಾರದು ಎಂಬ ತಲೆಗಡರಿದ ಉನ್ಮಾದದಿಂದಾಗಿ ಬಾಕಿ ಎಲ್ಲವೂ ಮಂಕಾಗುತ್ತದೆ. ಅವರು ಆಲೋಚನೆಯ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ನಿಜಕ್ಕೂ ಮಾನವೀಯತೆ ಎಂದರೆ ಏನು, ಎಲ್ಲವನ್ನೂ ಮೀರಿ ಮನುಷ್ಯನ ಸಂಕಷ್ಟಗಳಿಗೆ ನೆರವಾಗುವುದು, ಅವರ ನೋವಿಗೆ ಸಾಂತ್ವನವಾಗುವುದು, ಅವರ ಭಾರಗಳಿಗೆ ಬೆನ್ನಾಗುವುದು. ಆದರೆ ನನ್ನ ಮಂಗಳೂರಿಗೆ ಏನಾಗಿದೆ…


ಇದನ್ನೂ ಓದಿ: ಪಾದರಾಯನಪುರ ಮತ್ತು ಚನ್ನೈ ವೈದ್ಯನ ಸಾವಿನ ಘಟನೆ: ಇದು ನಮ್ಮೊಳಗಿನ ವೈರಸ್! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪ್ರಜ್ಞಾವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಜಿಲ್ಲೆಯಲ್ಲಿಯೇ ಹೀಗಾಗಿರುವುದು ದುರಂತ.
    “ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಾ” ಎಂದು ಬುದ್ದ ಹೇಳಿ, ಎರಡೂವರೆ ಸಾವಿರ ವರ್ಷಗಳು ಕಳೆದಿದ್ದರೂ ನಾವಿನ್ನೂ ಬುದ್ದಿ ಕಲಿತಿಲ್ಲ ಎಂದರೆ, ಕಲಿಯುವುದಾದರೂ ಯಾವಾಗ?
    ನಾಗರೀಕತೆಯ ಸವಲತ್ತುಗಳು ಹೆಚ್ಚಿದಂತೆಲ್ಲ ಮನುಷ್ಯ ಮಾನವನಾಗಬೇಕೇ ಹೊರತು ರಕ್ಕಸನಾಗಬಾರದು.

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...