Homeಮುಖಪುಟಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಕೊರೊನಾ ಕಾರಣಕ್ಕೆ ಮೃತಪಟ್ಟ ಶವದ ಅಂತ್ಯಸಂಸ್ಕಾರಕ್ಕೆ ಅವಕಾಶಕೊಡದ ಮಂಗಳೂರಿನ ಅಮಾನವೀಯ ಘಟನೆಯ ಕುರಿತು ಅಲ್ಲಿನವರೇ ಆದ ಬಾಪು ಅಮ್ಮೆಂಬಳರವರ ಲೇಖನ

- Advertisement -
- Advertisement -

ಉನ್ಮಾದವನ್ನು ಯಾವ ರೀತಿ ಹರಡಲಾಗುತ್ತದೆ ಮತ್ತು ಅದು ನಮ್ಮನ್ನು ಹೇಗೆ ಆಟವಾಡಿಸುತ್ತದೆ ಎಂಬುವುದು ಮಂಗಳೂರಿನ ಘಟನೆ ಸ್ಪಷ್ಟ ಚಿತ್ರಣ ನೀಡುತ್ತದೆ. ಎಲ್ಲೋ ದೂರದ ಸುಶಿಕ್ಷಿತರಲ್ಲದ ಉತ್ತರದ ರಾಜ್ಯಗಳ ಜನರು ಈ ರೀತಿ ನಡೆದು ಕೊಂಡಿದ್ದರೆ, ರೋಗದ ಬಗ್ಗೆ ಅವರಿಗೆ ಅರಿವಿಲ್ಲ ಹಾಗಾಗಿ ಅವರ ತಪ್ಪಿಲ್ಲ ಎಂದು ಸುಮ್ಮನಿದ್ದು ಬಿಡಬಹುದಾಗಿತ್ತು. ಆದರೆ ಇದೆಲ್ಲ ನಡೆದಿರುವುದು ಪ್ರಜ್ಞಾವಂತರೆಂದು ನಮಗೆ ನಾವೇ ಹೇಳಿಕೊಳ್ಳುವ ನನ್ನೂರು ಮಂಗಳೂರಿನಲ್ಲಿ ಎನ್ನುವುದು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಎಷ್ಟೊಂದು ಅಮಾನವೀಯ ಘಟನೆ ಇದು. ಹಿರಿಯ ಜೀವವೊಂದು ಅವರು ಮಾಡದ ತಪ್ಪಿಗೆ ಸಾವಿಗೀಡಾದ ನಂತರವೂ ಒಂದು ಘನತೆಯ ಅಂತಿಮ ಸಂಸ್ಕಾರಕ್ಕೆ ನನ್ನೂರಿನ ಜನ ಅವಕಾಶ ಕೊಟ್ಟಿಲ್ಲ ಎಂದರೆ ಯಾವ ಪ್ರಜ್ಞೆ, ಎಂತಹ ಪ್ರಜ್ಞಾವಂತರು ? ಎಂತಹ ಕ್ರೂರತೆ ಇದು??

ಜಿಲ್ಲಾಡಳಿತ ಕೊರೊನಾ ಕಾರಣಕ್ಕೆ ಮೃತಪಟ್ಟ ಆ ಹಿರಿಯರ ಶವವನ್ನು ಆಂಬುಲೆನ್ಸ್‌ನಲ್ಲಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅರ್ಧ ಜಿಲ್ಲೆ ಅಲೆದಾಡಿದೆ. ಹೋದಲ್ಲೆಲ್ಲ ಜನರ ವಿರೋಧ ಕಂಡುಬಂದಿದೆ. ಅಂದರೆ ಅರ್ಥ ಮಾಡಿಕೊಳ್ಳಿ ಒಂದು ದೊಡ್ಡ ಗುಂಪಿನ ಜನರು ಉನ್ಮಾದಕ್ಕೆ ಒಳಗಾಗಿ ತಾವೇನು ಮಾಡುತ್ತಿದ್ದೇವೆ, ಇದು ಸರಿಯಾದ ನಡೆಯೇ ಎಂಬ ಬಗ್ಗೆ ಚಿಂತಿಸುವಷ್ಟೂ ವಿವೇಚನೆ ಕಳೆದುಕೊಂಡಿದೆ. ಅವರಿಗೆ ತಿಳಿ ಹೇಳುವವರೂ ಆ ಹೊತ್ತಿನಲ್ಲಿ ಯಾರೂ ಇರಲಿಲ್ಲ. ಒಂದು ವೇಳೆ ಹೇಳಿದ್ದರೂ ಕೇಳುತ್ತಿದ್ದರೆ? ಅದೂ ಇಲ್ಲ. ಪಚ್ಚನಾಡಿ ಸ್ಮಶಾನದಲ್ಲಿ ಶಾಸಕ ಭರತ್ ಶೆಟ್ಟಿ ನಡೆದುಕೊಂಡ ರೀತಿ ನಾಗರಿಕ ಸಮಾಜ ಎಂದು ಹೇಳುವ ಯಾರಾದರೂ ತಲೆತಗ್ಗಿಸಬೇಕಾದಂತ ವಿಷಯ. ಒಬ್ಬ ಸ್ವತಃ ಡಾಕ್ಟರ್ ಆಗಿರುವ ಅವರು, ಶವ ಇಲ್ಲಿ ಸುಟ್ಟರೆ ಕೊರೊನಾ ಹರಡಲ್ಲ ಎಂದು ಹೇಳುತ್ತಲೆ, ಅಂತಿಮ ಸಂಸ್ಕಾರದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ನನ್ನ ಜನ ಒಪ್ಪುತ್ತಿಲ್ಲ ಎಂದು ಹೇಳಿ ಕೊನೆವರೆಗೂ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಶವದಿಂದ ಕೊರೊನಾ ಹರಡುವುದಿಲ್ಲ ಎಂದು ಗೊತ್ತಿದ್ದರೂ ಜನರು ಒಪ್ಪುತ್ತಿಲ್ಲ ಎಂದು ಎಲ್ಲವೂ ಹಾಗೆ ಒಪ್ಪಿ ಬಿಡುವುದೆ. ಅದನ್ನು ವಿವೇಚಿಸಿ ಅವರಿಗೆ ತಿಳಿಹೇಳುವ ಹಾಗೂ ಈ ಅಮಾನವೀಯ ನಡೆಯ ವಿರುದ್ದ ನಿಲ್ಲುವ ನೈತಿಕ ಪ್ರಜ್ಞೆಯಾದರೂ ಬೇಡವೆ.

ಸುರತ್ಕಲ್ ಶಾಸಕ ಭರತ್‌ ಶೆಟ್ಟಿ

ಶಾಸಕ ಹಾಗೂ ಸ್ವತಃ ಡಾಕ್ಟರ್ ಕೂಡಾ ಆಗಿರುವ ಭರತ್ ಶೆಟ್ಟಿಗೆ ಅಲ್ಲಿರುವ ಜನರಿಗೆ ತಿಳಿ ಹೇಳಿ ಅಂತಿಮ ಸಂಸ್ಕಾರಕ್ಕೆ ಒಪ್ಪಿಸುವ ಧೈರ್ಯ ಯಾಕೆ ಬರಲಿಲ್ಲ?. ಮುಖ್ಯವಾಗಿ ಜನರು ಉದ್ರೇಕಗೊಳ್ಳಬಹುದು, ನನ್ನ ಮತದಾರರೇ ನನಗೆ ತಿರುಗಿ ಬೀಳಬಹುದು ಎಂಬ ಭಯ. ಹಾಗೆ ನೋಡಿದರೆ ಇಲ್ಲಿ ಇಂತಹ ಉನ್ಮಾದವನ್ನು ನಿಜಕ್ಕೂ ಸೃಷ್ಟಿಸಿದವರು ಯಾರು? ಇವರುಗಳು ತಾನೆ. ನಿಜ ಗೊತ್ತಿದ್ದರೂ ಅಲ್ಲಿ ಸೇರಿರುವ ಜನರು ಒಪ್ಪಿಕೊಳ್ಳುತ್ತಿಲ್ಲ ಯಾಕೆಂದರೆ ಒಪ್ಪಿಕೊಳ್ಳದೆ ಇರುವಂತಹ ಮನಸ್ಸುಗಳನ್ನು ಈಗಾಗಲೇ ಇಲ್ಲಿ ಸೃಷ್ಟಿಸಿಯಾಗಿದೆ. ಇಂತಹ ಉನ್ಮಾದವನ್ನು ಸೃಷ್ಟಿಸಿದವರಿಗೆ ಈಗ ಅದರ ವಿರುದ್ಧ ಮಾತನಾಡಲು ಭಯವಿದೆ. ಅದೇ ಕಾರಣಕ್ಕೆ ಸಾವಿಗೀಡಾದ ವ್ಯಕ್ತಿಯ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಕೂಡಾ, ಸ್ಮಶಾನ ಸಿಗದಿದ್ದರೆ ನನ್ನ ಜಮೀನಿನಲ್ಲಿ ಸಂಸ್ಕಾರ ಮಾಡಿ ಎಂದಿದ್ದು. ಈಗ ಅವರನ್ನು ಮಾನವೀಯತೆಯ ಹರಿಕಾರ ಎನ್ನುತ್ತಾ ಕೆಲವರು ಕೊಂಡಾಡುತ್ತಿದ್ದಾರೆ, ಬಿಡಿ. ಆದರೆ ನಿಜವಾಗಿಯೂ ಒಬ್ಬ ಶಾಸಕನ ಕರ್ತವ್ಯ ಯಾವುದು?.

ಕೊರೊನಾ ಸೋಂಕಿತರು ಸತ್ತರೆ ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲೇಬೇಕು ಎಂದು ನಿಯಮವೇನು ಇಲ್ಲ. ಸಾರ್ವಜನಿಕರಿಗಂತೂ ಇಂತಹ ಯಾವುದೇ ಮಾಹಿತಿ ನೀಡುವುದಿಲ್ಲ. ಆದರೆ ಜಿಲ್ಲಾಡಳಿತ ‌ಶವ ಸಂಸ್ಕಾರ ಮಾಡಬೇಕು ಎಂದು ತೀರ್ಮಾನಿಸಿದ ಕಡೆಯಲ್ಲೆಲ್ಲ ಜನ ಸೇರಿದ್ದರೆಂದರೆ ಉನ್ಮಾದಕ್ಕೆ ಒಳಪಡಿಸುವ ನೆಟ್ವರ್ಕ್ ಎಷ್ಟೊಂದು ವೇಗವಾಗಿ ಕೆಲಸ ಮಾಡುತ್ತಿದೆ ಎಂಬುವುದು ಅರ್ಥ ಮಾಡಿಕೊಳ್ಳಬಹುದು. ಜಿಲ್ಲಾಡಳಿತ ಅಂತಿಮ ಸಂಸ್ಕಾರಕ್ಕೆ ತೀರ್ಮಾನಿಸಿದ ಸ್ಮಶಾನವಿರುವ ಭಾಗದ ಜನರಿಗೆ ಅಷ್ಟೊಂದು ವೇಗದಲ್ಲಿ ಸಂದೇಶಗಳು ತಲುಪಿ, ಅಲ್ಲಿ ಅಂತಿಮ ಸಂಸ್ಕಾರ ಮಾಡಲು ಬಿಡಬಾರದು ಎಂದು ವಿವೇಚನೆಯಿಲ್ಲದ ತೀರ್ಮಾನವನ್ನು ಒಂದು ದೊಡ್ಡ ಜನ ಸಮೂಹ ತೀರ್ಮಾನಿಸುತ್ತದೆಯಂದರೆ, ಅದಕ್ಕಿಂತಲೂ ಹೆಚ್ಚಿನ ಅಪಾಯ ಏನಿದೆ. ಕೊರೊನಾ ಬಗ್ಗೆ ಜನರಿಗೆ ಸರ್ಕಾರ ಇಷ್ಟೆಲ್ಲ ಮಾಹಿತಿಯನ್ನು ನೀಡಿದರೂ ಮಂಗಳೂರಿನಂತಹ ಸುಶಿಕ್ಷಿತ ಜನರೆ ಅದನ್ನು ಮನನ ಮಾಡಿಕೊಂಡಿಲ್ಲವೆಂದರೆ ಸಮಾಜದ ದಾರಿ ಎಲ್ಲಿಗಿದೆ ಹೇಳಿ.

ಕೊರೊನಾ ಈಗಾಗಲೆ ಎಲ್ಲಾ ಕಡೆಗೂ ಹಬ್ಬುತ್ತಿದೆ. ಈ ಸೋಂಕು ಯಾರಿಗೂ ಹರಡಬಹುದು. ಒಂದು ವೇಳೆ ಅಲ್ಲಿ ಅಂತಿಮ ಸಂಸ್ಕಾರ ಮಾಡದಂತೆ ತಡೆದ ಜನರಿಗೂ ಇದೆ ರೀತಿಯ ಪರಿಸ್ಥಿತಿ ಬಂದಿದ್ದರೆ (ಹಾಗೆ ಆಗದಿರಲಿ) ಏನಾಗುತ್ತಿತ್ತು. ಅಲ್ಲಿ ಸೇರಿದ ಯಾರೂ ಸಾವಿಗೀಡಾದ ಕುಟುಂಬದವರ ಸ್ಥಾನದಲ್ಲಿ ನಿಂತು ನೋಡಲೇ ಇಲ್ಲ. ಆ ಕುಟುಂಬದವರು ಎಷ್ಟು ನೊಂದಿರಬಹುದು, ಮನೆಯ ಹಿರಿಯರನ್ನು ಕಳೆದುಕೊಂಡ ನೋವಿನ ಜೊತೆಗೆ, ಅಂತಿಮ ಸಂಸ್ಕಾರ ಮಾಡಲಾಗುತ್ತಿಲ್ಲ ಎಂಬ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿರುತ್ತದೆ. ಆದರೆ ಅಲ್ಲಿ ಸೇರಿದ ಯಾರಿಗೂ ಇದರ ಬಗ್ಗೆ ಆಲೋಚಿಸುವಷ್ಟು ವ್ಯಯದಾನವಿರಲಿಲ್ಲ. ಸಾಮೂಹಿಕ ಉನ್ಮಾದವೊಂದು ಏನೆಲ್ಲ ಮಾಡಿ ಬಿಡುತ್ತದೆ ನೋಡಿ. ಶವದ ಅಂತಿಮ ಸಂಸ್ಕಾರ ನಮ್ಮ ಹತ್ತಿರದ ಸ್ಮಶಾನದಲ್ಲಿ ಮಾಡುತ್ತಿದ್ದಾರೆಂಬ ಸಂದೇಶ ಭಯ ಹುಟ್ಟಿಸುವ ರೀತಿಯಲ್ಲಿ ಬಂದಿರುತ್ತದೆ, ಅದರಿಂದಾಗಿ ಅಂತಿಮ ಸಂಸ್ಕಾರ ಮಾಡಲು ಬಿಡಲೇಬಾರದು ಎಂಬ ತಲೆಗಡರಿದ ಉನ್ಮಾದದಿಂದಾಗಿ ಬಾಕಿ ಎಲ್ಲವೂ ಮಂಕಾಗುತ್ತದೆ. ಅವರು ಆಲೋಚನೆಯ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ನಿಜಕ್ಕೂ ಮಾನವೀಯತೆ ಎಂದರೆ ಏನು, ಎಲ್ಲವನ್ನೂ ಮೀರಿ ಮನುಷ್ಯನ ಸಂಕಷ್ಟಗಳಿಗೆ ನೆರವಾಗುವುದು, ಅವರ ನೋವಿಗೆ ಸಾಂತ್ವನವಾಗುವುದು, ಅವರ ಭಾರಗಳಿಗೆ ಬೆನ್ನಾಗುವುದು. ಆದರೆ ನನ್ನ ಮಂಗಳೂರಿಗೆ ಏನಾಗಿದೆ…


ಇದನ್ನೂ ಓದಿ: ಪಾದರಾಯನಪುರ ಮತ್ತು ಚನ್ನೈ ವೈದ್ಯನ ಸಾವಿನ ಘಟನೆ: ಇದು ನಮ್ಮೊಳಗಿನ ವೈರಸ್! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪ್ರಜ್ಞಾವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಜಿಲ್ಲೆಯಲ್ಲಿಯೇ ಹೀಗಾಗಿರುವುದು ದುರಂತ.
    “ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಾ” ಎಂದು ಬುದ್ದ ಹೇಳಿ, ಎರಡೂವರೆ ಸಾವಿರ ವರ್ಷಗಳು ಕಳೆದಿದ್ದರೂ ನಾವಿನ್ನೂ ಬುದ್ದಿ ಕಲಿತಿಲ್ಲ ಎಂದರೆ, ಕಲಿಯುವುದಾದರೂ ಯಾವಾಗ?
    ನಾಗರೀಕತೆಯ ಸವಲತ್ತುಗಳು ಹೆಚ್ಚಿದಂತೆಲ್ಲ ಮನುಷ್ಯ ಮಾನವನಾಗಬೇಕೇ ಹೊರತು ರಕ್ಕಸನಾಗಬಾರದು.

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...