Homeಅಂಕಣಗಳುಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

ಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

- Advertisement -
- Advertisement -

ಲಿಂಗಾಯತ ಪಂಚಮಸಾಲಿ ನಾಯಕರು ಮೀಸಲಾತಿ ಹೋರಾಟ ಸಮಿತಿ ಕಟ್ಟಿಕೊಂಡು ಹೋರಾಟ ನಡೆಸಿದ್ದಾರೆ. ಈಗ ಹಿಂದುಳಿದ ಪ್ರವರ್ಗ 3ಬಿಯಲ್ಲಿ ಇರುವ ಈ ಉಪಜಾತಿ 2ಎಗೆ ಸೇರಬೇಕು ಎನ್ನುವುದು ಅವರ ಆಗ್ರಹ.

ಶೇ.5 ಮೀಸಲು ಸೌಲಭ್ಯ ಇರುವ 3ಬಿ ಗುಂಪಿನಲ್ಲಿ ವೀರಶೈವ ಲಿಂಗಾಯತದ ಎಲ್ಲ ಉಪಜಾತಿಗಳು ಸೇರಿದಂತೆ ಸುಮಾರು 6 ಜಾತಿಗಳು ಹಾಗೂ ಹಾಗೂ ಅವುಗಳ ಸರಿಸಮಾನ ಜಾತಿಗಳು ಇವೆ. ಶೇ.15 ಮೀಸಲು ಇರುವ 2ಎ ಪ್ರವರ್ಗದಲ್ಲಿ 102 ಜಾತಿಗಳು ಹಾಗೂ ಅವುಗಳ ಸಮಾನಾಂತರ ಜಾತಿಗಳು ಇವೆ.

ಪ್ರತಿ ಗುಂಪಿನಲ್ಲೂ ಮೀಸಲು ಸೌಲಭ್ಯ ಸಮಾನವಾಗಿ ಹಂಚಿಕೆ ಆಗುತ್ತದೆ ಅಂದುಕೊಳ್ಳುವುದಾದರೆ ಈಗ ಪಂಚಮಶಾಲಿಗಳಿಗೆ ಶೇಕಡಾ 0.83 ಸೌಲಭ್ಯ ದೊರೆಯುತ್ತದೆ. ಆದರೆ ಅದನ್ನು 2ಎನಲ್ಲಿ ಸೇರಿಸಿದರೆ ಆ ಜಾತಿಯ ಅಭ್ಯರ್ಥಿಗಳಿಗೆ ಶೇ.0.14 ಸೌಲಭ್ಯ ದೊರೆಯುತ್ತದೆ. (ಬೇರೆಬೇರೆ ಸಮುದಾಯಗಳ ಜನಸಂಖ್ಯೆ ಹೆಚ್ಚುಕಮ್ಮಿಯುರುತ್ತದೆ ಎಂಬುದನ್ನು ಸದ್ಯಕ್ಕೆ ಬದಿಗಿರಿಸಿ ನೋಡಿದಾಗಲೂ 2ಎನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆ ಉಳಿದೇ ತೀರುತ್ತದೆ.) ಎಲ್ಲಾ ಜಾತಿ ಸಮುದಾಯಗಳು ಹೆಚ್ಚಿನ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿರುವಾಗ ಈ ಪಂಚಮಸಾಲಿ ಕಮಿಟಿ ಅಂದಾಜು ಎಂಟು ಪಟ್ಟು ಕಮ್ಮಿ ಸೌಲಭ್ಯಕ್ಕೆ ಹಾತೊರೆಯುತ್ತಿರುವುದೇಕೆ?

ಇದಕ್ಕೆ ಸಮುದಾಯದ ಅಭಿವೃದ್ಧಿ ಹೊರತಾಗಿ ಪಕ್ಷ ರಾಜಕಾರಣವೂ ಸೇರಿದಂತೆ ಇತರ ಕಾರಣಗಳು ಇರಬಹುದೇ? ಇದು ಇಡೀ ಪಂಚಮಸಾಲಿ ಸಮಾಜದ ಹೋರಾಟವೇ ಅಥವಾ ಆ ಜಾತಿಯ ಕೆಲ ರಾಜಕೀಯ ನಾಯಕರ ಅಸ್ತಿತ್ವದ ಹೋರಾಟವೇ? ಇದರಿಂದ ಸಮಾಜಕ್ಕೆ ಸಿಗುವುದು ಏನು? ಪುಢಾರಿಗಳಿಗೆ ದೊರೆಯುವುದು ಏನು? ಇದರ ಬಗ್ಗೆ ಸಮಾಜಕ್ಕಾಗಲೀ, ಮುಖಂಡರಿಗಾಗಲೀ ಸ್ಪಷ್ಟತೆ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ದೊರೆಯುತ್ತಿಲ್ಲ.

ಮೇಲುನೋಟಕ್ಕೆ ಇದು ರಾಜಕೀಯ ಹೋರಾಟದಂತೆ ಕಾಣುತ್ತದೆ.

ಬಸನಗೌಡ ಪಾಟೀಲ ಯತ್ನಾಳ್

ಇದನ್ನು ಎರಡು ರೀತಿ ನೋಡಬಹುದು. ಬಸನಗೌಡ ಯತ್ನಾಳ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ತಮಗೆ ಅಧಿಕಾರ ಸಿಗಲಿಲ್ಲ ಎನ್ನುವುದಕ್ಕೋ ಅಥವಾ ತಮ್ಮ ವಿರೋಧಿಗಳಿಗೆ ಅಧಿಕಾರ ಸಿಕ್ಕಿದೆ ಎನ್ನುವುದಕ್ಕೋ ಅಥವಾ ತಾವು ತಮ್ಮ ಸಮುದಾಯದಲ್ಲಿ ಪ್ರಶ್ನಾತೀತ ನಾಯಕರರಾಗಬೇಕು ಎನ್ನುವುದಕ್ಕೋ ಮನೆ-ಮಠ ಬಿಟ್ಟು ಬೀದಿಗೆ ಇಳಿದಂತೆ ಕಾಣುತ್ತದೆ.

ರಾಜ್ಯಮಟ್ಟದ ಸಹಕಾರಿ ಒಕ್ಕೂಟದ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಲು ಹೋಗಿ ಸೌಹಾರ್ದ ಸಹಕಾರಿ ಸಂಘಟನೆಯ ದ್ವೇಷ ಕಟ್ಟಿಕೊಂಡ ಯತ್ನಾಳ್ ಅವರು ಬಿಜೆಪಿಯ ಮತ್ತು ಸಂಘ ಪರಿವಾರದ ಎಲ್ಲರ ಜೊತೆ ಸೌಹಾರ್ದ ಸಂಬಂಧಗಳನ್ನೇನು ಇಟ್ಟುಕೊಂಡಿಲ್ಲ. ಹಾಗೆಂದು ಬಿಜೆಪಿ ಯತ್ನಾಳ್‌ಗೌಡರಂತಹ ಬೇಫಿಕರ್ ಭಾಷಣಕಾರರನ್ನು ಕಳೆದುಕೊಳ್ಳಲು ತಯಾರಿಲ್ಲ. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಯತ್ನಾಳ್ ಅವರ ಮನೆಗೆ ಹೋಗಿ ತಾವು ನಮ್ಮ ಚುನಾವಣೆಯಲ್ಲಿ ‘ತಾರಾ ಪ್ರಚಾರಕ’ರಾಗಿ ಸೇವೆ ಸಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಹಿಂದಿನದೆಲ್ಲಾ ಮರೆತು ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾಗಿ ಯತ್ನಾಳ್ ನೋವುನುಂಗಿ ನಗು ಮುಖ ತೋರಿದ ಸ್ಥಿತಿಯಲ್ಲಿ ಘೋಷಿಸಿದ್ದಾರೆ.

ಇವರಿಗೆ ತಮ್ಮದೇ ಪಕ್ಷದ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ ಅವರ ಮೇಲೆ ಸಿಟ್ಟಿದೆ. ಇದರ ಬಗ್ಗೆ ಕೇಳಿರಲಾರದವರು ಯಾರೂ ಇರಲಾರರು. ಇನ್ನು ಯತ್ನಾಳ್‌ರ ಮೇಲಿನ ಸಿಟ್ಟಿನಿಂದ ಒಂದಲ್ಲ ಎರಡಲ್ಲ ಐದು ಮಠ ಕಟ್ಟುತ್ತೇನೆ ಎಂದು ಹೇಳಿರುವ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ರಾಜಕೀಯ ವಿರೋಧಿಗಳು ಎನ್ನುವುದು ಕೂಟ ಅಷ್ಟೇ ಸಾಮಾನ್ಯ ತಿಳಿವಳಿಕೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ಯತ್ನಾಳ್ ಬಿಟ್ಟರೆ ಮೀಸಲಾತಿ ಹೋರಾಟದಲ್ಲಿ ಇರುವವರು ಬಿಜೆಪಿ ಹೊರತುಪಡಿಸಿ ಇತರ ಪಕ್ಷದಲ್ಲಿ ಇರುವ ಅವರ ಕುಲಬಾಂಧವರೇ. ರಾಜ್ಯದ ಅನೇಕ ಕಡೆ ಪಂಚಮಸಾಲಿ ಪ್ರತಿಭಟನೆಗಳನ್ನು ನೋಡಿದರೆ ಯತ್ನಾಳ್‌ರಿಗೆ ಬಿಜೆಪಿಯ ಮೇಲೆ ಪ್ರೀತಿ ಇದ್ದರೂ ಕೆಲ ಪ್ರತಿಸ್ಪರ್ಧಿಗಳ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಅನ್ನಿಸದೆ ಇರದು.

ಆದರೆ ರಾಜ್ಯದ ಸಾಮಾಜಿಕ ರಚನೆಯನ್ನು ಬಲ್ಲವರು, ಜಾತಿ-ಉಪಜಾತಿ ರಾಜಕಾರಣದ ಒಳಪಟ್ಟುಗಳನ್ನು ಬಲ್ಲವರು ಇದು ಮೇಲೆ ಕಾಣುವಷ್ಟು ಸರಳವಾಗಿಲ್ಲ ಎನ್ನುತ್ತಾರೆ. ಇದು ರಾಜಕೀಯೋ-ಸಾಮಾಜಿಕ ತಂತ್ರ ಎಂದು ಅವರ ಅನಿಸಿಕೆ. 3ಬಿ ಪ್ರವರ್ಗದಲ್ಲಿ ವೀರಶೈವ-ಲಿಂಗಾಯತ ಜಾತಿ ಪಂಗಡಗಳು ಇದ್ದು ಪಂಚಮಸಾಲಿ ಜನಾಂಗಕ್ಕೆ ತಮ್ಮವರೊಡನೆ ಸ್ಪರ್ಧೆ ಇಷ್ಟವಿಲ್ಲ. ಇನ್ನು 2ಎ ಪ್ರವರ್ಗದಲ್ಲಿ ಲಿಂಗಾಯತರ ಬಣಜಿಗ ಉಪ ಜಾತಿಯನ್ನು ಜಗದೀಶ್ ಶೆಟ್ಟರ್ ಅವರು ತಮ್ಮ ಕಾಲದಲ್ಲಿ ಗದ್ದಲ ಇಲ್ಲದೆ ಸೇರಿಸಿಬಿಟ್ಟರು. ಬಣಜಿಗರು ಪಂಚಮಸಾಲಿಗಳಿಗೆ ಹೋಲಿಸಿದರೆ ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿತು. ಇನ್ನು ಲಿಂಗಾಯತ ಪ್ರಾತಿನಿಧ್ಯ ಎನ್ನುವ ಹೆಸರಿನಲ್ಲಿ ಕೇವಲ ಬಣಜಿಗರು ಎಲ್ಲ ಸೌಲಭ್ಯ ಬಾಚಿಕೊಂಡರು, ಪಂಚಮಸಾಲಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿಲ್ಲ ಎನ್ನುವ ದುಃಖ ಯತ್ನಾಳ್ ಮತ್ತು ಇತರ ನಾಯಕರಿಗೆ ಇದ್ದಂತೆ ಇದೆ.

ಇನ್ನು 3ಬಿ ಗುಂಪಿನಲ್ಲಿ ಮರಾಠಾ ಸಮುದಾಯ ಇದ್ದು, 2ಎನಲ್ಲಿ ಕುರುಬ ಜನಾಂಗ ಇದೆ. ಮರಾಠರೊಂದಿಗೆ ಸ್ಪರ್ಧೆ ಮಾಡುವುದಕ್ಕಿಂತ ಕುರುಬ ಜನಾಂಗದ ಜೊತೆ ಸ್ಪರ್ಧೆ ಅನುಕೂಲ ಎನ್ನುವ ಲೆಕ್ಕಾಚಾರ ಇಂತಹ ನಾಯಕರಿಗೆ ಇದ್ದಂತೆ ಇದೆ.

ಬಸವರಾಜ್ ಬೊಮ್ಮಾಯಿ

ಉತ್ತರ ಕರ್ನಾಟಕದಾದ್ಯಂತ ಹಬ್ಬಿರುವ ಪಂಚಮಸಾಲಿ ಜನಾಂಗ ತಲೆತಲಾಂತರದಿಂದ ಭೂಮಾಲೀಕತ್ವ ಹೊಂದಿದೆ. ಅವರನ್ನು ಹಳ್ಳಿಗಳಲ್ಲಿ ಗೌಡರು-ಬಿರಾದಾರ, ಪಾಟೀಲ್ ಎಂದು ಕರೆಯುತ್ತಾರೆ. ಇವರ ಎದುರು ಇತರ ಹಿಂದುಳಿದ ಜಾತಿಯವರು ಸ್ಪರ್ಧೆ ಮಾಡಲು ಸಾಧ್ಯ ಇಲ್ಲ. ಉದಾಹರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸ್ಥಾನ 2ಎಗೆ ಮೀಸಲು ಎಂತಾದರೆ ಪಂಚಮಸಾಲಿಗಳ ಎದುರು ಇತರ ಹಿಂದುಳಿದ ಜಾತಿಯ ಯಾವುದೇ ಅಭ್ಯರ್ಥಿ ನಿಲ್ಲಲು ಸಾಧ್ಯ ಇಲ್ಲ. ಆದರೆ 3ಬಿನಲ್ಲಿ ಇದ್ದರೆ ಇವರು ಇತರ ಲಿಂಗಾಯತರ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಅವರು 2ಎಗೆ ಬದಲಾವಣೆಗೊಳ್ಳಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದು ಕೆಲವರ ಅನಿಸಿಕೆ.

ಈ ಪಿಸುಮಾತುಗಳನ್ನು ತಳ್ಳಿಹಾಕಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಮಗೆ ರಾಜಕೀಯ ಮೀಸಲಾತಿ ಬೇಡ. ಅದನ್ನು ನಾವು ಬರೆದುಕೊಟ್ಟಿದ್ದೇವೆ ಎನ್ನುವ ಮಾತು ಹೇಳಿದ್ದಾರೆ. ಇದು ಸಮಸ್ಯೆಯನ್ನು ಸರಳವಾಗಿಸುವ ಬದಲಾಗಿ ಇನ್ನೂ ನಿಗೂಢವಾಗಿಸುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಮಾತ್ರ ಕೆಲವು ಹಂತಗಳಲ್ಲಿ ರಾಜಕೀಯ ಮೀಸಲಾತಿ ಇದೆ.

ಕಾನೂನು ಸಚಿವ ಮಾಧುಸ್ವಾಮಿ ಅವರು ಸೂಚಿಸಿದಂತೆ ಆರ್ಥಿಕ ಹಿಂದುಳಿದವರ (ಇಡಬ್ಲೂಎಸ್) ಶೇ.10ರ ಕೋಟಾದಿಂದ ಒಂದು ಭಾಗವನ್ನು ಪಂಚಮಸಾಲಿಯವರಿಗೆ ಕೊಡಬಹುದು. ಇದಕ್ಕೆ ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸು ಅಗತ್ಯವಿಲ್ಲ. ಆದರೆ ಈ ಗುಂಪಿಗೆ ರಾಜಕೀಯ ಮೀಸಲಾತಿ ಇಲ್ಲ. ಕೂಡಲ ಸಂಗಮ ಸ್ವಾಮೀಜಿ ಅವರಿಗೆ ಈ ಸೂಚನೆ ಮೊದಲೇ ಸಿಕ್ಕಿತ್ತೇ?

ಆದರೆ ಇದು ಸುಲಭವಲ್ಲ. ಜಯಶ್ರೀ ಪಾಟೀಲ್ ಮತ್ತು ಇತರರು ಎನ್ನುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮರಾಠಾ ಜನಾಂಗಕ್ಕೆ ಕೊಟ್ಟಿದ್ದ 16 ಶೇಕಡಾ ಮೀಸಲಾತಿಯನ್ನು ತಳ್ಳಿಹಾಕಿದೆ. ಶೇ.50ರ ಮಿತಿಮೀರಿವುದು ಒಂದು ಕಾರಣವಾದರೆ ಆಯೋಗದ ಶಿಫಾರಸ್ಸು ಇರಲಿಲ್ಲ ಎನ್ನುವ ಕಾರಣ ಇನ್ನೊಂದು.

ತಮ್ಮ ರಾಜಕೀಯ ಚಾಣಾಕ್ಷ ತನಕ್ಕೆ ಹೆಸರಾದ ಬಸವರಾಜ ಬೊಮ್ಮಾಯಿ ಅವರು, ’ನೋಡಪ್ಪ ನಾನಂತೂ ಕೊಟ್ಟೆ, ಕೋರ್ಟ್‌ನವರು ಕೊಡದೇ ಹೋದರೆ ನಾನು ಏನು ಮಾಡಲಿ’ ಎನ್ನುವ ಮಾತಾಡಿ ಕೈಚೆಲ್ಲಬಹುದು. ’ಇನ್ನೊಂದು ಬಾರಿ ಅಧಿಕಾರ ಕೊಟ್ಟರೆ ನಾನು ಏನಾದರೂ ಮಾಡಿಯೇನು’ ಎನ್ನುವ ಆಶ್ವಾಸನೆ ಕೊಡಬಹುದು. ಈ ಹಿನ್ನೆಲೆಯಲ್ಲೇ ಅವರು ಯತ್ನಾಳ್ ಅವರಿಗೆ ಆಣೆ ಪ್ರಮಾಣ ಮಾಡಿದರೋ ಏನೋ? ಇದ್ದರೂ ಇರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...

ಎಲ್‌ಪಿಜಿ ಬಿಕ್ಕಟ್ಟು: ಹೋಟೆಲ್ ಮಾಲೀಕರಿಗೆ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದ ಸಚಿವ ಕೆ.ಎಚ್. ​​ಮುನಿಯಪ್ಪ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್‌ಪಿಜಿ  ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ...

ಹೋರಾಟಗಾರ ಸೋನಮ್ ವಾಂಗ್ಚುಕ್ ಬಂಧನ ರದ್ದುಗೊಳಿಸಿದ ಕೇಂದ್ರ

ಲಡಾಖ್‌ನಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಮಾತುಕತೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ವರದಿಯಾಗಿದೆ. ಸರ್ಕಾರ...

‘ಭಾರತವನ್ನು ಬೆದರಿಸುವಲ್ಲಿ ತಿಂಗಳುಗಟ್ಟಲೆ ಕಳೆದ ಅಮೆರಿಕ ಈಗ ಜಗತ್ತನ್ನ ಬೇಡಿಕೊಳ್ಳುತ್ತಿದೆ’: ರಷ್ಯಾದ ತೈಲ ವಿಚಾರದ ಕುರಿತು ಇರಾನ್ ಟೀಕೆ

ಟೆಹ್ರಾನ್: ರಷ್ಯಾದ ತೈಲದ ವಿಷಯದಲ್ಲಿ ಅಮೆರಿಕವು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಇರಾನ್ ಶನಿವಾರ ಆರೋಪಿಸಿದೆ. ವಾಷಿಂಗ್ಟನ್ ಈಗ ಒತ್ತಡ ಮತ್ತು ನಿರ್ಬಂಧಗಳ ಮೂಲಕ ನಿರ್ಬಂಧಿಸಲು ಪ್ರಯತ್ನಿಸಿದ ಅದೇ ಕಚ್ಚಾ ತೈಲವನ್ನು ಖರೀದಿಸಲು...

ಗಾಝಾ ನರಮೇಧ : ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್‌ ಪರ ಅಮೆರಿಕ ವಕಾಲತ್ತು

ಗಾಝಾ ನರಮೇಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾ ಹೂಡಿರುವ ಪ್ರಕರಣದಲ್ಲಿ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಮಧ್ಯ ಪ್ರವೇಶಿಸಿದ್ದು, ಇಸ್ರೇಲ್ ಪರ ವಕಾಲತ್ತು ವಹಿಸಲು ಮುಂದಾಗಿವೆ ಎಂದು ವರದಿಯಾಗಿದೆ. ದಿ...