Homeಅಂಕಣಗಳುಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

ಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

- Advertisement -
- Advertisement -

ಲಿಂಗಾಯತ ಪಂಚಮಸಾಲಿ ನಾಯಕರು ಮೀಸಲಾತಿ ಹೋರಾಟ ಸಮಿತಿ ಕಟ್ಟಿಕೊಂಡು ಹೋರಾಟ ನಡೆಸಿದ್ದಾರೆ. ಈಗ ಹಿಂದುಳಿದ ಪ್ರವರ್ಗ 3ಬಿಯಲ್ಲಿ ಇರುವ ಈ ಉಪಜಾತಿ 2ಎಗೆ ಸೇರಬೇಕು ಎನ್ನುವುದು ಅವರ ಆಗ್ರಹ.

ಶೇ.5 ಮೀಸಲು ಸೌಲಭ್ಯ ಇರುವ 3ಬಿ ಗುಂಪಿನಲ್ಲಿ ವೀರಶೈವ ಲಿಂಗಾಯತದ ಎಲ್ಲ ಉಪಜಾತಿಗಳು ಸೇರಿದಂತೆ ಸುಮಾರು 6 ಜಾತಿಗಳು ಹಾಗೂ ಹಾಗೂ ಅವುಗಳ ಸರಿಸಮಾನ ಜಾತಿಗಳು ಇವೆ. ಶೇ.15 ಮೀಸಲು ಇರುವ 2ಎ ಪ್ರವರ್ಗದಲ್ಲಿ 102 ಜಾತಿಗಳು ಹಾಗೂ ಅವುಗಳ ಸಮಾನಾಂತರ ಜಾತಿಗಳು ಇವೆ.

ಪ್ರತಿ ಗುಂಪಿನಲ್ಲೂ ಮೀಸಲು ಸೌಲಭ್ಯ ಸಮಾನವಾಗಿ ಹಂಚಿಕೆ ಆಗುತ್ತದೆ ಅಂದುಕೊಳ್ಳುವುದಾದರೆ ಈಗ ಪಂಚಮಶಾಲಿಗಳಿಗೆ ಶೇಕಡಾ 0.83 ಸೌಲಭ್ಯ ದೊರೆಯುತ್ತದೆ. ಆದರೆ ಅದನ್ನು 2ಎನಲ್ಲಿ ಸೇರಿಸಿದರೆ ಆ ಜಾತಿಯ ಅಭ್ಯರ್ಥಿಗಳಿಗೆ ಶೇ.0.14 ಸೌಲಭ್ಯ ದೊರೆಯುತ್ತದೆ. (ಬೇರೆಬೇರೆ ಸಮುದಾಯಗಳ ಜನಸಂಖ್ಯೆ ಹೆಚ್ಚುಕಮ್ಮಿಯುರುತ್ತದೆ ಎಂಬುದನ್ನು ಸದ್ಯಕ್ಕೆ ಬದಿಗಿರಿಸಿ ನೋಡಿದಾಗಲೂ 2ಎನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆ ಉಳಿದೇ ತೀರುತ್ತದೆ.) ಎಲ್ಲಾ ಜಾತಿ ಸಮುದಾಯಗಳು ಹೆಚ್ಚಿನ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿರುವಾಗ ಈ ಪಂಚಮಸಾಲಿ ಕಮಿಟಿ ಅಂದಾಜು ಎಂಟು ಪಟ್ಟು ಕಮ್ಮಿ ಸೌಲಭ್ಯಕ್ಕೆ ಹಾತೊರೆಯುತ್ತಿರುವುದೇಕೆ?

ಇದಕ್ಕೆ ಸಮುದಾಯದ ಅಭಿವೃದ್ಧಿ ಹೊರತಾಗಿ ಪಕ್ಷ ರಾಜಕಾರಣವೂ ಸೇರಿದಂತೆ ಇತರ ಕಾರಣಗಳು ಇರಬಹುದೇ? ಇದು ಇಡೀ ಪಂಚಮಸಾಲಿ ಸಮಾಜದ ಹೋರಾಟವೇ ಅಥವಾ ಆ ಜಾತಿಯ ಕೆಲ ರಾಜಕೀಯ ನಾಯಕರ ಅಸ್ತಿತ್ವದ ಹೋರಾಟವೇ? ಇದರಿಂದ ಸಮಾಜಕ್ಕೆ ಸಿಗುವುದು ಏನು? ಪುಢಾರಿಗಳಿಗೆ ದೊರೆಯುವುದು ಏನು? ಇದರ ಬಗ್ಗೆ ಸಮಾಜಕ್ಕಾಗಲೀ, ಮುಖಂಡರಿಗಾಗಲೀ ಸ್ಪಷ್ಟತೆ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ದೊರೆಯುತ್ತಿಲ್ಲ.

ಮೇಲುನೋಟಕ್ಕೆ ಇದು ರಾಜಕೀಯ ಹೋರಾಟದಂತೆ ಕಾಣುತ್ತದೆ.

ಬಸನಗೌಡ ಪಾಟೀಲ ಯತ್ನಾಳ್

ಇದನ್ನು ಎರಡು ರೀತಿ ನೋಡಬಹುದು. ಬಸನಗೌಡ ಯತ್ನಾಳ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ತಮಗೆ ಅಧಿಕಾರ ಸಿಗಲಿಲ್ಲ ಎನ್ನುವುದಕ್ಕೋ ಅಥವಾ ತಮ್ಮ ವಿರೋಧಿಗಳಿಗೆ ಅಧಿಕಾರ ಸಿಕ್ಕಿದೆ ಎನ್ನುವುದಕ್ಕೋ ಅಥವಾ ತಾವು ತಮ್ಮ ಸಮುದಾಯದಲ್ಲಿ ಪ್ರಶ್ನಾತೀತ ನಾಯಕರರಾಗಬೇಕು ಎನ್ನುವುದಕ್ಕೋ ಮನೆ-ಮಠ ಬಿಟ್ಟು ಬೀದಿಗೆ ಇಳಿದಂತೆ ಕಾಣುತ್ತದೆ.

ರಾಜ್ಯಮಟ್ಟದ ಸಹಕಾರಿ ಒಕ್ಕೂಟದ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಲು ಹೋಗಿ ಸೌಹಾರ್ದ ಸಹಕಾರಿ ಸಂಘಟನೆಯ ದ್ವೇಷ ಕಟ್ಟಿಕೊಂಡ ಯತ್ನಾಳ್ ಅವರು ಬಿಜೆಪಿಯ ಮತ್ತು ಸಂಘ ಪರಿವಾರದ ಎಲ್ಲರ ಜೊತೆ ಸೌಹಾರ್ದ ಸಂಬಂಧಗಳನ್ನೇನು ಇಟ್ಟುಕೊಂಡಿಲ್ಲ. ಹಾಗೆಂದು ಬಿಜೆಪಿ ಯತ್ನಾಳ್‌ಗೌಡರಂತಹ ಬೇಫಿಕರ್ ಭಾಷಣಕಾರರನ್ನು ಕಳೆದುಕೊಳ್ಳಲು ತಯಾರಿಲ್ಲ. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಯತ್ನಾಳ್ ಅವರ ಮನೆಗೆ ಹೋಗಿ ತಾವು ನಮ್ಮ ಚುನಾವಣೆಯಲ್ಲಿ ‘ತಾರಾ ಪ್ರಚಾರಕ’ರಾಗಿ ಸೇವೆ ಸಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಹಿಂದಿನದೆಲ್ಲಾ ಮರೆತು ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾಗಿ ಯತ್ನಾಳ್ ನೋವುನುಂಗಿ ನಗು ಮುಖ ತೋರಿದ ಸ್ಥಿತಿಯಲ್ಲಿ ಘೋಷಿಸಿದ್ದಾರೆ.

ಇವರಿಗೆ ತಮ್ಮದೇ ಪಕ್ಷದ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ ಅವರ ಮೇಲೆ ಸಿಟ್ಟಿದೆ. ಇದರ ಬಗ್ಗೆ ಕೇಳಿರಲಾರದವರು ಯಾರೂ ಇರಲಾರರು. ಇನ್ನು ಯತ್ನಾಳ್‌ರ ಮೇಲಿನ ಸಿಟ್ಟಿನಿಂದ ಒಂದಲ್ಲ ಎರಡಲ್ಲ ಐದು ಮಠ ಕಟ್ಟುತ್ತೇನೆ ಎಂದು ಹೇಳಿರುವ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ರಾಜಕೀಯ ವಿರೋಧಿಗಳು ಎನ್ನುವುದು ಕೂಟ ಅಷ್ಟೇ ಸಾಮಾನ್ಯ ತಿಳಿವಳಿಕೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ಯತ್ನಾಳ್ ಬಿಟ್ಟರೆ ಮೀಸಲಾತಿ ಹೋರಾಟದಲ್ಲಿ ಇರುವವರು ಬಿಜೆಪಿ ಹೊರತುಪಡಿಸಿ ಇತರ ಪಕ್ಷದಲ್ಲಿ ಇರುವ ಅವರ ಕುಲಬಾಂಧವರೇ. ರಾಜ್ಯದ ಅನೇಕ ಕಡೆ ಪಂಚಮಸಾಲಿ ಪ್ರತಿಭಟನೆಗಳನ್ನು ನೋಡಿದರೆ ಯತ್ನಾಳ್‌ರಿಗೆ ಬಿಜೆಪಿಯ ಮೇಲೆ ಪ್ರೀತಿ ಇದ್ದರೂ ಕೆಲ ಪ್ರತಿಸ್ಪರ್ಧಿಗಳ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಅನ್ನಿಸದೆ ಇರದು.

ಆದರೆ ರಾಜ್ಯದ ಸಾಮಾಜಿಕ ರಚನೆಯನ್ನು ಬಲ್ಲವರು, ಜಾತಿ-ಉಪಜಾತಿ ರಾಜಕಾರಣದ ಒಳಪಟ್ಟುಗಳನ್ನು ಬಲ್ಲವರು ಇದು ಮೇಲೆ ಕಾಣುವಷ್ಟು ಸರಳವಾಗಿಲ್ಲ ಎನ್ನುತ್ತಾರೆ. ಇದು ರಾಜಕೀಯೋ-ಸಾಮಾಜಿಕ ತಂತ್ರ ಎಂದು ಅವರ ಅನಿಸಿಕೆ. 3ಬಿ ಪ್ರವರ್ಗದಲ್ಲಿ ವೀರಶೈವ-ಲಿಂಗಾಯತ ಜಾತಿ ಪಂಗಡಗಳು ಇದ್ದು ಪಂಚಮಸಾಲಿ ಜನಾಂಗಕ್ಕೆ ತಮ್ಮವರೊಡನೆ ಸ್ಪರ್ಧೆ ಇಷ್ಟವಿಲ್ಲ. ಇನ್ನು 2ಎ ಪ್ರವರ್ಗದಲ್ಲಿ ಲಿಂಗಾಯತರ ಬಣಜಿಗ ಉಪ ಜಾತಿಯನ್ನು ಜಗದೀಶ್ ಶೆಟ್ಟರ್ ಅವರು ತಮ್ಮ ಕಾಲದಲ್ಲಿ ಗದ್ದಲ ಇಲ್ಲದೆ ಸೇರಿಸಿಬಿಟ್ಟರು. ಬಣಜಿಗರು ಪಂಚಮಸಾಲಿಗಳಿಗೆ ಹೋಲಿಸಿದರೆ ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿತು. ಇನ್ನು ಲಿಂಗಾಯತ ಪ್ರಾತಿನಿಧ್ಯ ಎನ್ನುವ ಹೆಸರಿನಲ್ಲಿ ಕೇವಲ ಬಣಜಿಗರು ಎಲ್ಲ ಸೌಲಭ್ಯ ಬಾಚಿಕೊಂಡರು, ಪಂಚಮಸಾಲಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿಲ್ಲ ಎನ್ನುವ ದುಃಖ ಯತ್ನಾಳ್ ಮತ್ತು ಇತರ ನಾಯಕರಿಗೆ ಇದ್ದಂತೆ ಇದೆ.

ಇನ್ನು 3ಬಿ ಗುಂಪಿನಲ್ಲಿ ಮರಾಠಾ ಸಮುದಾಯ ಇದ್ದು, 2ಎನಲ್ಲಿ ಕುರುಬ ಜನಾಂಗ ಇದೆ. ಮರಾಠರೊಂದಿಗೆ ಸ್ಪರ್ಧೆ ಮಾಡುವುದಕ್ಕಿಂತ ಕುರುಬ ಜನಾಂಗದ ಜೊತೆ ಸ್ಪರ್ಧೆ ಅನುಕೂಲ ಎನ್ನುವ ಲೆಕ್ಕಾಚಾರ ಇಂತಹ ನಾಯಕರಿಗೆ ಇದ್ದಂತೆ ಇದೆ.

ಬಸವರಾಜ್ ಬೊಮ್ಮಾಯಿ

ಉತ್ತರ ಕರ್ನಾಟಕದಾದ್ಯಂತ ಹಬ್ಬಿರುವ ಪಂಚಮಸಾಲಿ ಜನಾಂಗ ತಲೆತಲಾಂತರದಿಂದ ಭೂಮಾಲೀಕತ್ವ ಹೊಂದಿದೆ. ಅವರನ್ನು ಹಳ್ಳಿಗಳಲ್ಲಿ ಗೌಡರು-ಬಿರಾದಾರ, ಪಾಟೀಲ್ ಎಂದು ಕರೆಯುತ್ತಾರೆ. ಇವರ ಎದುರು ಇತರ ಹಿಂದುಳಿದ ಜಾತಿಯವರು ಸ್ಪರ್ಧೆ ಮಾಡಲು ಸಾಧ್ಯ ಇಲ್ಲ. ಉದಾಹರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸ್ಥಾನ 2ಎಗೆ ಮೀಸಲು ಎಂತಾದರೆ ಪಂಚಮಸಾಲಿಗಳ ಎದುರು ಇತರ ಹಿಂದುಳಿದ ಜಾತಿಯ ಯಾವುದೇ ಅಭ್ಯರ್ಥಿ ನಿಲ್ಲಲು ಸಾಧ್ಯ ಇಲ್ಲ. ಆದರೆ 3ಬಿನಲ್ಲಿ ಇದ್ದರೆ ಇವರು ಇತರ ಲಿಂಗಾಯತರ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಅವರು 2ಎಗೆ ಬದಲಾವಣೆಗೊಳ್ಳಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದು ಕೆಲವರ ಅನಿಸಿಕೆ.

ಈ ಪಿಸುಮಾತುಗಳನ್ನು ತಳ್ಳಿಹಾಕಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಮಗೆ ರಾಜಕೀಯ ಮೀಸಲಾತಿ ಬೇಡ. ಅದನ್ನು ನಾವು ಬರೆದುಕೊಟ್ಟಿದ್ದೇವೆ ಎನ್ನುವ ಮಾತು ಹೇಳಿದ್ದಾರೆ. ಇದು ಸಮಸ್ಯೆಯನ್ನು ಸರಳವಾಗಿಸುವ ಬದಲಾಗಿ ಇನ್ನೂ ನಿಗೂಢವಾಗಿಸುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಮಾತ್ರ ಕೆಲವು ಹಂತಗಳಲ್ಲಿ ರಾಜಕೀಯ ಮೀಸಲಾತಿ ಇದೆ.

ಕಾನೂನು ಸಚಿವ ಮಾಧುಸ್ವಾಮಿ ಅವರು ಸೂಚಿಸಿದಂತೆ ಆರ್ಥಿಕ ಹಿಂದುಳಿದವರ (ಇಡಬ್ಲೂಎಸ್) ಶೇ.10ರ ಕೋಟಾದಿಂದ ಒಂದು ಭಾಗವನ್ನು ಪಂಚಮಸಾಲಿಯವರಿಗೆ ಕೊಡಬಹುದು. ಇದಕ್ಕೆ ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸು ಅಗತ್ಯವಿಲ್ಲ. ಆದರೆ ಈ ಗುಂಪಿಗೆ ರಾಜಕೀಯ ಮೀಸಲಾತಿ ಇಲ್ಲ. ಕೂಡಲ ಸಂಗಮ ಸ್ವಾಮೀಜಿ ಅವರಿಗೆ ಈ ಸೂಚನೆ ಮೊದಲೇ ಸಿಕ್ಕಿತ್ತೇ?

ಆದರೆ ಇದು ಸುಲಭವಲ್ಲ. ಜಯಶ್ರೀ ಪಾಟೀಲ್ ಮತ್ತು ಇತರರು ಎನ್ನುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮರಾಠಾ ಜನಾಂಗಕ್ಕೆ ಕೊಟ್ಟಿದ್ದ 16 ಶೇಕಡಾ ಮೀಸಲಾತಿಯನ್ನು ತಳ್ಳಿಹಾಕಿದೆ. ಶೇ.50ರ ಮಿತಿಮೀರಿವುದು ಒಂದು ಕಾರಣವಾದರೆ ಆಯೋಗದ ಶಿಫಾರಸ್ಸು ಇರಲಿಲ್ಲ ಎನ್ನುವ ಕಾರಣ ಇನ್ನೊಂದು.

ತಮ್ಮ ರಾಜಕೀಯ ಚಾಣಾಕ್ಷ ತನಕ್ಕೆ ಹೆಸರಾದ ಬಸವರಾಜ ಬೊಮ್ಮಾಯಿ ಅವರು, ’ನೋಡಪ್ಪ ನಾನಂತೂ ಕೊಟ್ಟೆ, ಕೋರ್ಟ್‌ನವರು ಕೊಡದೇ ಹೋದರೆ ನಾನು ಏನು ಮಾಡಲಿ’ ಎನ್ನುವ ಮಾತಾಡಿ ಕೈಚೆಲ್ಲಬಹುದು. ’ಇನ್ನೊಂದು ಬಾರಿ ಅಧಿಕಾರ ಕೊಟ್ಟರೆ ನಾನು ಏನಾದರೂ ಮಾಡಿಯೇನು’ ಎನ್ನುವ ಆಶ್ವಾಸನೆ ಕೊಡಬಹುದು. ಈ ಹಿನ್ನೆಲೆಯಲ್ಲೇ ಅವರು ಯತ್ನಾಳ್ ಅವರಿಗೆ ಆಣೆ ಪ್ರಮಾಣ ಮಾಡಿದರೋ ಏನೋ? ಇದ್ದರೂ ಇರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...