Homeಅಂಕಣಗಳುಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

ಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

- Advertisement -
- Advertisement -

ಲಿಂಗಾಯತ ಪಂಚಮಸಾಲಿ ನಾಯಕರು ಮೀಸಲಾತಿ ಹೋರಾಟ ಸಮಿತಿ ಕಟ್ಟಿಕೊಂಡು ಹೋರಾಟ ನಡೆಸಿದ್ದಾರೆ. ಈಗ ಹಿಂದುಳಿದ ಪ್ರವರ್ಗ 3ಬಿಯಲ್ಲಿ ಇರುವ ಈ ಉಪಜಾತಿ 2ಎಗೆ ಸೇರಬೇಕು ಎನ್ನುವುದು ಅವರ ಆಗ್ರಹ.

ಶೇ.5 ಮೀಸಲು ಸೌಲಭ್ಯ ಇರುವ 3ಬಿ ಗುಂಪಿನಲ್ಲಿ ವೀರಶೈವ ಲಿಂಗಾಯತದ ಎಲ್ಲ ಉಪಜಾತಿಗಳು ಸೇರಿದಂತೆ ಸುಮಾರು 6 ಜಾತಿಗಳು ಹಾಗೂ ಹಾಗೂ ಅವುಗಳ ಸರಿಸಮಾನ ಜಾತಿಗಳು ಇವೆ. ಶೇ.15 ಮೀಸಲು ಇರುವ 2ಎ ಪ್ರವರ್ಗದಲ್ಲಿ 102 ಜಾತಿಗಳು ಹಾಗೂ ಅವುಗಳ ಸಮಾನಾಂತರ ಜಾತಿಗಳು ಇವೆ.

ಪ್ರತಿ ಗುಂಪಿನಲ್ಲೂ ಮೀಸಲು ಸೌಲಭ್ಯ ಸಮಾನವಾಗಿ ಹಂಚಿಕೆ ಆಗುತ್ತದೆ ಅಂದುಕೊಳ್ಳುವುದಾದರೆ ಈಗ ಪಂಚಮಶಾಲಿಗಳಿಗೆ ಶೇಕಡಾ 0.83 ಸೌಲಭ್ಯ ದೊರೆಯುತ್ತದೆ. ಆದರೆ ಅದನ್ನು 2ಎನಲ್ಲಿ ಸೇರಿಸಿದರೆ ಆ ಜಾತಿಯ ಅಭ್ಯರ್ಥಿಗಳಿಗೆ ಶೇ.0.14 ಸೌಲಭ್ಯ ದೊರೆಯುತ್ತದೆ. (ಬೇರೆಬೇರೆ ಸಮುದಾಯಗಳ ಜನಸಂಖ್ಯೆ ಹೆಚ್ಚುಕಮ್ಮಿಯುರುತ್ತದೆ ಎಂಬುದನ್ನು ಸದ್ಯಕ್ಕೆ ಬದಿಗಿರಿಸಿ ನೋಡಿದಾಗಲೂ 2ಎನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆ ಉಳಿದೇ ತೀರುತ್ತದೆ.) ಎಲ್ಲಾ ಜಾತಿ ಸಮುದಾಯಗಳು ಹೆಚ್ಚಿನ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿರುವಾಗ ಈ ಪಂಚಮಸಾಲಿ ಕಮಿಟಿ ಅಂದಾಜು ಎಂಟು ಪಟ್ಟು ಕಮ್ಮಿ ಸೌಲಭ್ಯಕ್ಕೆ ಹಾತೊರೆಯುತ್ತಿರುವುದೇಕೆ?

ಇದಕ್ಕೆ ಸಮುದಾಯದ ಅಭಿವೃದ್ಧಿ ಹೊರತಾಗಿ ಪಕ್ಷ ರಾಜಕಾರಣವೂ ಸೇರಿದಂತೆ ಇತರ ಕಾರಣಗಳು ಇರಬಹುದೇ? ಇದು ಇಡೀ ಪಂಚಮಸಾಲಿ ಸಮಾಜದ ಹೋರಾಟವೇ ಅಥವಾ ಆ ಜಾತಿಯ ಕೆಲ ರಾಜಕೀಯ ನಾಯಕರ ಅಸ್ತಿತ್ವದ ಹೋರಾಟವೇ? ಇದರಿಂದ ಸಮಾಜಕ್ಕೆ ಸಿಗುವುದು ಏನು? ಪುಢಾರಿಗಳಿಗೆ ದೊರೆಯುವುದು ಏನು? ಇದರ ಬಗ್ಗೆ ಸಮಾಜಕ್ಕಾಗಲೀ, ಮುಖಂಡರಿಗಾಗಲೀ ಸ್ಪಷ್ಟತೆ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ದೊರೆಯುತ್ತಿಲ್ಲ.

ಮೇಲುನೋಟಕ್ಕೆ ಇದು ರಾಜಕೀಯ ಹೋರಾಟದಂತೆ ಕಾಣುತ್ತದೆ.

ಬಸನಗೌಡ ಪಾಟೀಲ ಯತ್ನಾಳ್

ಇದನ್ನು ಎರಡು ರೀತಿ ನೋಡಬಹುದು. ಬಸನಗೌಡ ಯತ್ನಾಳ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ತಮಗೆ ಅಧಿಕಾರ ಸಿಗಲಿಲ್ಲ ಎನ್ನುವುದಕ್ಕೋ ಅಥವಾ ತಮ್ಮ ವಿರೋಧಿಗಳಿಗೆ ಅಧಿಕಾರ ಸಿಕ್ಕಿದೆ ಎನ್ನುವುದಕ್ಕೋ ಅಥವಾ ತಾವು ತಮ್ಮ ಸಮುದಾಯದಲ್ಲಿ ಪ್ರಶ್ನಾತೀತ ನಾಯಕರರಾಗಬೇಕು ಎನ್ನುವುದಕ್ಕೋ ಮನೆ-ಮಠ ಬಿಟ್ಟು ಬೀದಿಗೆ ಇಳಿದಂತೆ ಕಾಣುತ್ತದೆ.

ರಾಜ್ಯಮಟ್ಟದ ಸಹಕಾರಿ ಒಕ್ಕೂಟದ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಲು ಹೋಗಿ ಸೌಹಾರ್ದ ಸಹಕಾರಿ ಸಂಘಟನೆಯ ದ್ವೇಷ ಕಟ್ಟಿಕೊಂಡ ಯತ್ನಾಳ್ ಅವರು ಬಿಜೆಪಿಯ ಮತ್ತು ಸಂಘ ಪರಿವಾರದ ಎಲ್ಲರ ಜೊತೆ ಸೌಹಾರ್ದ ಸಂಬಂಧಗಳನ್ನೇನು ಇಟ್ಟುಕೊಂಡಿಲ್ಲ. ಹಾಗೆಂದು ಬಿಜೆಪಿ ಯತ್ನಾಳ್‌ಗೌಡರಂತಹ ಬೇಫಿಕರ್ ಭಾಷಣಕಾರರನ್ನು ಕಳೆದುಕೊಳ್ಳಲು ತಯಾರಿಲ್ಲ. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಯತ್ನಾಳ್ ಅವರ ಮನೆಗೆ ಹೋಗಿ ತಾವು ನಮ್ಮ ಚುನಾವಣೆಯಲ್ಲಿ ‘ತಾರಾ ಪ್ರಚಾರಕ’ರಾಗಿ ಸೇವೆ ಸಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಹಿಂದಿನದೆಲ್ಲಾ ಮರೆತು ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾಗಿ ಯತ್ನಾಳ್ ನೋವುನುಂಗಿ ನಗು ಮುಖ ತೋರಿದ ಸ್ಥಿತಿಯಲ್ಲಿ ಘೋಷಿಸಿದ್ದಾರೆ.

ಇವರಿಗೆ ತಮ್ಮದೇ ಪಕ್ಷದ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ ಅವರ ಮೇಲೆ ಸಿಟ್ಟಿದೆ. ಇದರ ಬಗ್ಗೆ ಕೇಳಿರಲಾರದವರು ಯಾರೂ ಇರಲಾರರು. ಇನ್ನು ಯತ್ನಾಳ್‌ರ ಮೇಲಿನ ಸಿಟ್ಟಿನಿಂದ ಒಂದಲ್ಲ ಎರಡಲ್ಲ ಐದು ಮಠ ಕಟ್ಟುತ್ತೇನೆ ಎಂದು ಹೇಳಿರುವ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ರಾಜಕೀಯ ವಿರೋಧಿಗಳು ಎನ್ನುವುದು ಕೂಟ ಅಷ್ಟೇ ಸಾಮಾನ್ಯ ತಿಳಿವಳಿಕೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ಯತ್ನಾಳ್ ಬಿಟ್ಟರೆ ಮೀಸಲಾತಿ ಹೋರಾಟದಲ್ಲಿ ಇರುವವರು ಬಿಜೆಪಿ ಹೊರತುಪಡಿಸಿ ಇತರ ಪಕ್ಷದಲ್ಲಿ ಇರುವ ಅವರ ಕುಲಬಾಂಧವರೇ. ರಾಜ್ಯದ ಅನೇಕ ಕಡೆ ಪಂಚಮಸಾಲಿ ಪ್ರತಿಭಟನೆಗಳನ್ನು ನೋಡಿದರೆ ಯತ್ನಾಳ್‌ರಿಗೆ ಬಿಜೆಪಿಯ ಮೇಲೆ ಪ್ರೀತಿ ಇದ್ದರೂ ಕೆಲ ಪ್ರತಿಸ್ಪರ್ಧಿಗಳ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಅನ್ನಿಸದೆ ಇರದು.

ಆದರೆ ರಾಜ್ಯದ ಸಾಮಾಜಿಕ ರಚನೆಯನ್ನು ಬಲ್ಲವರು, ಜಾತಿ-ಉಪಜಾತಿ ರಾಜಕಾರಣದ ಒಳಪಟ್ಟುಗಳನ್ನು ಬಲ್ಲವರು ಇದು ಮೇಲೆ ಕಾಣುವಷ್ಟು ಸರಳವಾಗಿಲ್ಲ ಎನ್ನುತ್ತಾರೆ. ಇದು ರಾಜಕೀಯೋ-ಸಾಮಾಜಿಕ ತಂತ್ರ ಎಂದು ಅವರ ಅನಿಸಿಕೆ. 3ಬಿ ಪ್ರವರ್ಗದಲ್ಲಿ ವೀರಶೈವ-ಲಿಂಗಾಯತ ಜಾತಿ ಪಂಗಡಗಳು ಇದ್ದು ಪಂಚಮಸಾಲಿ ಜನಾಂಗಕ್ಕೆ ತಮ್ಮವರೊಡನೆ ಸ್ಪರ್ಧೆ ಇಷ್ಟವಿಲ್ಲ. ಇನ್ನು 2ಎ ಪ್ರವರ್ಗದಲ್ಲಿ ಲಿಂಗಾಯತರ ಬಣಜಿಗ ಉಪ ಜಾತಿಯನ್ನು ಜಗದೀಶ್ ಶೆಟ್ಟರ್ ಅವರು ತಮ್ಮ ಕಾಲದಲ್ಲಿ ಗದ್ದಲ ಇಲ್ಲದೆ ಸೇರಿಸಿಬಿಟ್ಟರು. ಬಣಜಿಗರು ಪಂಚಮಸಾಲಿಗಳಿಗೆ ಹೋಲಿಸಿದರೆ ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿತು. ಇನ್ನು ಲಿಂಗಾಯತ ಪ್ರಾತಿನಿಧ್ಯ ಎನ್ನುವ ಹೆಸರಿನಲ್ಲಿ ಕೇವಲ ಬಣಜಿಗರು ಎಲ್ಲ ಸೌಲಭ್ಯ ಬಾಚಿಕೊಂಡರು, ಪಂಚಮಸಾಲಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿಲ್ಲ ಎನ್ನುವ ದುಃಖ ಯತ್ನಾಳ್ ಮತ್ತು ಇತರ ನಾಯಕರಿಗೆ ಇದ್ದಂತೆ ಇದೆ.

ಇನ್ನು 3ಬಿ ಗುಂಪಿನಲ್ಲಿ ಮರಾಠಾ ಸಮುದಾಯ ಇದ್ದು, 2ಎನಲ್ಲಿ ಕುರುಬ ಜನಾಂಗ ಇದೆ. ಮರಾಠರೊಂದಿಗೆ ಸ್ಪರ್ಧೆ ಮಾಡುವುದಕ್ಕಿಂತ ಕುರುಬ ಜನಾಂಗದ ಜೊತೆ ಸ್ಪರ್ಧೆ ಅನುಕೂಲ ಎನ್ನುವ ಲೆಕ್ಕಾಚಾರ ಇಂತಹ ನಾಯಕರಿಗೆ ಇದ್ದಂತೆ ಇದೆ.

ಬಸವರಾಜ್ ಬೊಮ್ಮಾಯಿ

ಉತ್ತರ ಕರ್ನಾಟಕದಾದ್ಯಂತ ಹಬ್ಬಿರುವ ಪಂಚಮಸಾಲಿ ಜನಾಂಗ ತಲೆತಲಾಂತರದಿಂದ ಭೂಮಾಲೀಕತ್ವ ಹೊಂದಿದೆ. ಅವರನ್ನು ಹಳ್ಳಿಗಳಲ್ಲಿ ಗೌಡರು-ಬಿರಾದಾರ, ಪಾಟೀಲ್ ಎಂದು ಕರೆಯುತ್ತಾರೆ. ಇವರ ಎದುರು ಇತರ ಹಿಂದುಳಿದ ಜಾತಿಯವರು ಸ್ಪರ್ಧೆ ಮಾಡಲು ಸಾಧ್ಯ ಇಲ್ಲ. ಉದಾಹರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸ್ಥಾನ 2ಎಗೆ ಮೀಸಲು ಎಂತಾದರೆ ಪಂಚಮಸಾಲಿಗಳ ಎದುರು ಇತರ ಹಿಂದುಳಿದ ಜಾತಿಯ ಯಾವುದೇ ಅಭ್ಯರ್ಥಿ ನಿಲ್ಲಲು ಸಾಧ್ಯ ಇಲ್ಲ. ಆದರೆ 3ಬಿನಲ್ಲಿ ಇದ್ದರೆ ಇವರು ಇತರ ಲಿಂಗಾಯತರ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಅವರು 2ಎಗೆ ಬದಲಾವಣೆಗೊಳ್ಳಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದು ಕೆಲವರ ಅನಿಸಿಕೆ.

ಈ ಪಿಸುಮಾತುಗಳನ್ನು ತಳ್ಳಿಹಾಕಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಮಗೆ ರಾಜಕೀಯ ಮೀಸಲಾತಿ ಬೇಡ. ಅದನ್ನು ನಾವು ಬರೆದುಕೊಟ್ಟಿದ್ದೇವೆ ಎನ್ನುವ ಮಾತು ಹೇಳಿದ್ದಾರೆ. ಇದು ಸಮಸ್ಯೆಯನ್ನು ಸರಳವಾಗಿಸುವ ಬದಲಾಗಿ ಇನ್ನೂ ನಿಗೂಢವಾಗಿಸುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಮಾತ್ರ ಕೆಲವು ಹಂತಗಳಲ್ಲಿ ರಾಜಕೀಯ ಮೀಸಲಾತಿ ಇದೆ.

ಕಾನೂನು ಸಚಿವ ಮಾಧುಸ್ವಾಮಿ ಅವರು ಸೂಚಿಸಿದಂತೆ ಆರ್ಥಿಕ ಹಿಂದುಳಿದವರ (ಇಡಬ್ಲೂಎಸ್) ಶೇ.10ರ ಕೋಟಾದಿಂದ ಒಂದು ಭಾಗವನ್ನು ಪಂಚಮಸಾಲಿಯವರಿಗೆ ಕೊಡಬಹುದು. ಇದಕ್ಕೆ ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸು ಅಗತ್ಯವಿಲ್ಲ. ಆದರೆ ಈ ಗುಂಪಿಗೆ ರಾಜಕೀಯ ಮೀಸಲಾತಿ ಇಲ್ಲ. ಕೂಡಲ ಸಂಗಮ ಸ್ವಾಮೀಜಿ ಅವರಿಗೆ ಈ ಸೂಚನೆ ಮೊದಲೇ ಸಿಕ್ಕಿತ್ತೇ?

ಆದರೆ ಇದು ಸುಲಭವಲ್ಲ. ಜಯಶ್ರೀ ಪಾಟೀಲ್ ಮತ್ತು ಇತರರು ಎನ್ನುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮರಾಠಾ ಜನಾಂಗಕ್ಕೆ ಕೊಟ್ಟಿದ್ದ 16 ಶೇಕಡಾ ಮೀಸಲಾತಿಯನ್ನು ತಳ್ಳಿಹಾಕಿದೆ. ಶೇ.50ರ ಮಿತಿಮೀರಿವುದು ಒಂದು ಕಾರಣವಾದರೆ ಆಯೋಗದ ಶಿಫಾರಸ್ಸು ಇರಲಿಲ್ಲ ಎನ್ನುವ ಕಾರಣ ಇನ್ನೊಂದು.

ತಮ್ಮ ರಾಜಕೀಯ ಚಾಣಾಕ್ಷ ತನಕ್ಕೆ ಹೆಸರಾದ ಬಸವರಾಜ ಬೊಮ್ಮಾಯಿ ಅವರು, ’ನೋಡಪ್ಪ ನಾನಂತೂ ಕೊಟ್ಟೆ, ಕೋರ್ಟ್‌ನವರು ಕೊಡದೇ ಹೋದರೆ ನಾನು ಏನು ಮಾಡಲಿ’ ಎನ್ನುವ ಮಾತಾಡಿ ಕೈಚೆಲ್ಲಬಹುದು. ’ಇನ್ನೊಂದು ಬಾರಿ ಅಧಿಕಾರ ಕೊಟ್ಟರೆ ನಾನು ಏನಾದರೂ ಮಾಡಿಯೇನು’ ಎನ್ನುವ ಆಶ್ವಾಸನೆ ಕೊಡಬಹುದು. ಈ ಹಿನ್ನೆಲೆಯಲ್ಲೇ ಅವರು ಯತ್ನಾಳ್ ಅವರಿಗೆ ಆಣೆ ಪ್ರಮಾಣ ಮಾಡಿದರೋ ಏನೋ? ಇದ್ದರೂ ಇರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...