Homeಮುಖಪುಟಕನ್ನಡ ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟ ಪಾರ್ವತಮ್ಮ ರಾಜಕುಮಾರ್ ಸ್ಮರಣೆ

ಕನ್ನಡ ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟ ಪಾರ್ವತಮ್ಮ ರಾಜಕುಮಾರ್ ಸ್ಮರಣೆ

ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ ಇಂದಿಗೆ ಮೂರು ವರ್ಷ. ಸದಭಿರುಚಿಯ ಚಿತ್ರಗಳ ನಿರ್ಮಾಣದೊಂದಿಗೆ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ, ಚಿತ್ರನಿರ್ಮಾಣದಲ್ಲಿ ಶಿಸ್ತು ರೂಢಿಸಿದವರು ಪಾರ್ವತಮ್ಮ. ವರನಟ ಡಾ.ರಾಜಕುಮಾರ್ ಕನ್ನಡಗರ ಐಕಾನ್ ಆಗಿ ರೂಪುಗೊಳ್ಳುವಲ್ಲಿ ಪಾರ್ವತಮ್ಮನವರ ಶ್ರಮ ದೊಡ್ಡದು.

- Advertisement -
- Advertisement -

“ಕನ್ನಡ ಸಿನಿಮಾ ನಿರ್ಮಾಣಕ್ಕೆ ಶಿಸ್ತು ಮತ್ತು ಸ್ಥಿರತೆ ತಂದುಕೊಟ್ಟವರು ಪಾರ್ವತಮ್ಮ ರಾಜಕುಮಾರ್” ಎಂದಿದ್ದರು ಹಿರಿಯ ನಿರ್ದೇಶಕ ಭಗವಾನ್. ವರ್ಷದ ಹಿಂದೆ ಅವರಿಗೆ ಡಾಕ್ಟರೇಟ್ ಗೌರವ ಸಂದ ಸಂದರ್ಭದಲ್ಲಿ ಪಾರ್ವತಮ್ಮನವರ ಬಗ್ಗೆ ಭಗವಾನ್ ಮಾತನಾಡುತ್ತಾ, “ಅವರು ಈ ಗೌರವಕ್ಕೆ ಅತ್ಯಂತ ಸೂಕ್ತ ವ್ಯಕ್ತಿ. ನಾನು ಅವರನ್ನು ನನ್ನ ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ನೋಡಿಕೊಂಡು ಬಂದಿದ್ದೇನೆ. ಆಗ ಮದರಾಸಿನಲ್ಲಿ ಕನ್ನಡ ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿದ್ದ ದಿನಗಳಲ್ಲಿ ಕನ್ನಡ ಕಲಾವಿದರು ಮತ್ತು ತಂತ್ರಜ್ಞರಾದ ನಮಗೆ ಅನಿಶ್ಚಿತತೆ ಕಾಡುತ್ತಿತ್ತು. ಕನ್ನಡ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದವರು ಹೊರರಾಜ್ಯದವರೇ ಆಗಿರುತ್ತಿದ್ದರು. ಮುಂದೆ ಪಾರ್ವತಮ್ಮನವರು ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಕನ್ನಡದ ಹೂಡಿಕೆದಾರರಿಗೆ ಆತ್ಮವಿಶ್ವಾಸ ಮೂಡಿಸಿದರು. ಶಿಸ್ತು ಮತ್ತು ಬದ್ಧತೆಯ ಅವರ ಬ್ಯಾನರ್ ಕನ್ನಡ ಚಿತ್ರರಂಗಕ್ಕೆ ಸ್ಥಿರತೆ ತಂದುಕೊಟ್ಟಿತು” ಎಂದು ಹೇಳಿದ್ದರು.

ಪಾರ್ವತಮ್ಮನವರ ಮಾರ್ಗದರ್ಶನ

ಇಲ್ಲಿ ಮತ್ತೊಂದು ಸಂದರ್ಭವನ್ನು ಸ್ಮರಿಸಬಹುದು. ನಿರ್ದೇಶಕರಾದ ದೊರೈ-ಭಗವಾನ್ ಅದೊಮ್ಮೆ ತಾವು ನಿರ್ದೇಶಿಸಲಿದ್ದ “ಚಂದನದ ಗೊಂಬೆ’ ಚಿತ್ರಕ್ಕಾಗಿ ಡಾ.ರಾಜಕುಮಾರ್ ಡೇಟ್ಸ್ ಕೇಳುವುದಕ್ಕೆಂದು ಸದಾಶಿವನರದ ಅವರ ಮನೆಗೆ ಹೋಗದ್ದರು. ಇದು ಸಾಹಿತಿ ತರಾಸು ಅವರ ಕೃತಿಯನ್ನು ಆಧರಿಸಿದ ವಸ್ತು. ಕಥೆ ಕೇಳಿದ ಪಾರ್ವತಮ್ಮನವರು, “ಈ ಪಾತ್ರ ರಾಜಕುಮಾರ್ ಅವರ ಇಮೇಜ್‍ಗೆ ಹೊಂದುವುದಿಲ್ಲ. ಬದಲಿಗೆ ಈ ಪಾತ್ರಕ್ಕೆ ನೀವು ಅನಂತನಾಗ್ ಅವರನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರ ಚೆನ್ನಾಗಿ ಆಗುತ್ತದೆ’ ಎಂದು ಸಲಹೆ ಮಾಡಿದರು. ಅದರಂತೆ ನಿರ್ದೇಶಕದ್ವಯರು ಅನಂತನಾಗ್ ಅವರನ್ನ ಆಯ್ಕೆ ಮಾಡಿಕೊಂಡ ಚಿತ್ರ ಮಾಡಿದರು. ಈ ಸಿನಿಮಾ ಸೂಪರ್‌ಹಿಟ್ ಆಯ್ತು! ಅನಂತನಾಗ್ ಅವರ ವೃತ್ತಿ ಬದುಕಿಗೂ ಈ ಸಿನಿಮಾ ಒಂದೊಳ್ಳೆ ತಿರುವು ನೀಡಿತು. ಹೀಗೆ ಹಲವು ಹಂತಗಳಲ್ಲಿ ಅವರು ಕನ್ನಡ ಚಿತ್ರನಿರ್ದೇಶಕರಿಗೆ ಮಾರ್ಗದರ್ಶನ ಮಾಡಿದ್ದಿದೆ.

ಡಾ.ರಾಜಕುಮಾರ್ ಯಶಸ್ಸಿನ ಹಿಂದೆ ಪಾರ್ವತಮ್ಮನವರ ಕೊಡುಗೆ

“ಪಾರ್ವತಿ ಬದುಕಿಗೆ ಬಂದ ನಂತರ ನನ್ನ ಅದೃಷ್ಟ ಖುಲಾಯಿಸಿತು. ಆಕೆ ನನ್ನ ಅದೃಷ್ಟ ದೇವತೆ’ ಎನ್ನುತ್ತಿದ್ದರು ಡಾ.ರಾಜಕುಮಾರ್. 1953 ಜೂನ್ 25ರಂದು ರಾಜಕುಮಾರ್ ಅವರನ್ನು ವರಿಸಿದಾಗ ಪಾರ್ವತಮ್ಮನವರಿಗೆ 13 ವರ್ಷವಷ್ಟೆ. 1954ರಲ್ಲಿ ರಾಜ್ ನಾಯಕನಟನಾಗಿ ನಟಿಸಿದ ಮೊಟ್ಟಮೊದಲ ಸಿನಿಮಾ “ಬೇಡರ ಕಣ್ಣಪ್ಪ’ ತೆರೆಕಂಡಿತು. ಈ ಚಿತ್ರದ ಯಶಸ್ಸಿನೊಂದಿಗೆ ರಾಜಕುಮಾರ್ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಯವರೆಗೆ ರಂಗಭೂಮಿ ನಟನಾಗಿದ್ದ ಅವರು ಮುಂದೆ ಸಿನಿಮಾ ನಟನಾಗಿ ಗುರುತಿಸಿಕೊಂಡರು. ಈ ಏಳ್ಗೆಗೆ ತಮ್ಮ ಬದುಕಿಗೆ ಬಂದ ಪಾರ್ವತಮ್ಮನವರೇ ಕಾರಣ ಎಂದೇ ಭಾವಿಸಿದ್ದರು ರಾಜ್. ಅದಕ್ಕೆ ಸರಿಯಾಗಿ ಪಾರ್ವತಮ್ಮನವರೂ ಸೂಕ್ತ ಸಲಹೆ-ಸೂಚನೆಗಳೊಂದಿಗೆ ಪತಿಗೆ ನೆರವಾಗುತ್ತಿದ್ದರು. ವಯಸ್ಸು ಚಿಕ್ಕದಾದರೂ ಪ್ರೌಢ ಆಲೋಚನೆ ಪಾರ್ವತಮ್ಮನವರದ್ದು. ಅವರ ಹುಟ್ಟೂರು ಮೈಸೂರು ಜಿಲ್ಲೆಯ ಸಾಲಿಗ್ರಾಮ. ಅಪ್ಪಾಜಿ ಗೌಡ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರಿಯಾಗಿ 1939 ಡಿಸೆಂಬರ್ 6ರಂದು ಜನಿಸಿದರು.

ನಾಟಕ, ಸಿನಿಮಾವೊಂದು ಯಶಸ್ಸು ಸಾಧಿಸಲು ಇಡೀ ತಂಡದ ಪ್ರಯತ್ನ ಅತ್ಯಗತ್ಯ ಎಂದು ಅರಿವಾಗಲು ಪಾರ್ವತಮ್ಮ ರಾಜಕುಮಾರ್ ರವರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಮುಂದಿನ ದಿನಗಳಲ್ಲಿ ಪಾರ್ವತಮ್ಮನವರು ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ಅರಿವು ಮೂಡಿಸಿಕೊಂಡರು. ಸಿನಿಮಾವೊಂದರ ಯಶಸ್ಸಿಗೆ ಉತ್ತಮ ಕತೆ, ತಂತ್ರಜ್ಞರ ಪಾಲ್ಗೊಳ್ಳುವಿಕೆ ಮುಖ್ಯ ಎನ್ನುವುದನ್ನು ರಾಜ್ ಸಿನಿಮಾಗಳ ನಿರ್ಮಾಪಕರಿಗೆ ಮನವರಿಕೆ ಮಾಡಿಕೊಟ್ಟರು. ಮುಂದೆ ಸ್ವತಃ ತಾವೂ ರಾಜ್ ಸಿನಿಮಾಗಳ ಕತೆ, ವಸ್ತುವಿನ ಚರ್ಚೆಯಲ್ಲಿ ಪಾಲ್ಗೊಳ್ಳತೊಡಗಿದರು. ರಾಜ್ ಅವರ ಕಿರಿಯ ಸಹೋದರ ವರದಪ್ಪ ಮತ್ತು ಪಾರ್ವತಮ್ಮನವರು ಕತೆ, ಚಿತ್ರಕಥೆಯ ಚರ್ಚೆಗಳಲ್ಲಿ ತೊಡಗಿಸಿಕೊಂಡದ್ದು ರಾಜ್‍ಗೆ ಬಹುದೊಡ್ಡ ವರವಾಯ್ತು. ಕ್ರಮೇಣ ಅವರ ಇಮೇಜ್ ಬೆಳೆಯತೊಡಗಿತಲ್ಲದೆ ಅವರು ನಟಿಸಿದ ಸಿನಿಮಾಗಳು ಕೂಡ ಜನಮನ್ನಣೆ ಗಳಿಸಿದವು.

ಚಿತ್ರಕೃಪೆ: ಮನು

ವಜ್ರೇಶ್ವರಿ ಕಂಬೈನ್ಸ್ ಆರಂಭ

ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ಅನುಭವ ಸಿಗುತ್ತಿದ್ದಂತೆ ಪಾರ್ವತಮ್ಮನವರು ಸ್ವತಃ ತಾವೇ ಚಿತ್ರನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಆರಂಭಿಸಿದರು. ಚಿತ್ರನಿರ್ಮಾಣ ಮತ್ತು ಕನ್ನಡ ಚಿತ್ರೋದ್ಯಮದ ಬಗ್ಗೆ ಪಾರ್ವತಮ್ಮನವರಿಗೊಂದು ಮುನ್ನೋಟ ಇತ್ತು. “ತ್ರಿಮೂರ್ತಿ’ ಚಿತ್ರದಿಂದ ನಿರ್ಮಾಣಕ್ಕಿಳಿದ ಅವರು ಮುಂದೆ ಸಾಲು ಸಾಲಾಗಿ ಮಹತ್ವದ ಚಿತ್ರಗಳನ್ನು ನಿರ್ಮಿಸುತ್ತಾ ಬಂದರು. ಇಲ್ಲಿಯವರೆಗೆ ಅವರ ಸಂಸ್ಥೆಯಡಿ 80ಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣಗೊಂಡಿವೆ. ಶಿಸ್ತು ಮತ್ತು ಬದ್ಧತೆ ಅವರ ಚಿತ್ರನಿರ್ಮಾಣ ಸಂಸ್ಥೆಯ ಧ್ಯೇಯವಾಕ್ಯ. ತಮ್ಮದೇ ಸಂಸ್ಥೆಯಡಿ ಚಿತ್ರಗಳನ್ನು ನಿರ್ಮಿಸತೊಡಗಿದಾಗ ಪಾರ್ವತಮ್ಮನವರಿಗೆ ಹೆಚ್ಚಿನ ಅಧಿಕಾರವಿರುತ್ತಿತ್ತು. ತಾವೇ ಕತೆಯನ್ನು ಆಯ್ಕೆ ಮಾಡುತ್ತಿದ್ದರು. ಕತೆಗೆ ಹೊಂದುವಂತಹ ತಾರಾಬಳಗ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿತ್ತು. ಪ್ರಮುಖವಾಗಿ ಪಾರ್ವತಮ್ಮ ಚಿತ್ರಸಾಹಿತಿಗಳ ಬಗ್ಗೆ ಅಪಾರ ಗೌರವಭಾವ ಹೊಂದಿದ್ದರು. ಸದೃಢ ಚಿತ್ರವೊಂದು ರೂಪುಗೊಳ್ಳಲು ಚಿತ್ರಸಾಹಿತ್ಯದ ಪಾಲು ದೊಡ್ಡದು ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದ ಅವರು ಅನುಭವಿ ಚಿತ್ರಸಾಹಿತಿಗಳಿಂದ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳನ್ನು ಬರೆಸುತ್ತಿದ್ದರು. ಒಂದೆಡೆ ಇದರಿಂದ ರಾಜ್ “ಐಕಾನ್’ ಆಗಿ ರೂಪುಗೊಂಡರಲ್ಲದೆ ಮತ್ತೊಂದೆಡೆ ತಂತ್ರಜ್ಞರು ಮತ್ತು ಚಿತ್ರಸಾಹಿತಿಗಳೂ ಬೆಳೆದರು. ಅವರ ಸಂಸ್ಥೆಯಡಿ ತಯಾರಾದ ತಂತ್ರಜ್ಞರು ಮುಂದೆ ಕನ್ನಡದ ಇತರೆ ನಿರ್ಮಾಣ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ದೊಡ್ಡ ಯಶಸ್ಸು ಕಂಡಿದ್ದಾರೆ. ಅವರ ಸಂಸ್ಥೆಯ ಚಿತ್ರಗಳ ಯಶಸ್ಸಿನ ಪರ್ಸಂಟೇಜ್ ಶೇ.98 ಎನ್ನುವುದು ವಿಶೇಷ!

ಸ್ವತಃ ಪಾರ್ವತಮ್ಮ ರಾಜಕುಮಾರ್ ರವರು ಉತ್ತಮ ಓದುಗರಾಗದ್ದರು. ಬಿಡುವಿನ ವೇಳೆಯಲ್ಲಿ ಕಾದಂಬರಿಗಳನ್ನು ಓದುತ್ತಿದ್ದ ಅವರು ಬೆಳ್ಳಿತೆರೆಗೆ ಹೊಂದಿಕೆಯಾಗುವಂತಹ ಕತೆಗಳಿದ್ದರೆ ನಿರ್ದೇಶಕರಿಗೆ ತಿಳಿಸುತ್ತಿದ್ದರು. ಹೀಗಾಗಿಯೇ ಅವರ ಬ್ಯಾನರ್‌ನಲ್ಲಿ ತಯಾರಾದ ಸಾಕಷ್ಟು ಸಿನಿಮಾಗಳು ಕಾದಂಬರಿ ಆಧರಿಸಿದ್ದವೇ ಆಗಿವೆ. ಒಮ್ಮೆ ಬೀದಿಯಲ್ಲಿ ತಳ್ಳುಗಾಡಿಯಲ್ಲಿ ಓರ್ವ ಹಳೆಯ ಪುಸ್ತಕಗಳನ್ನು ಮಾರಾಟಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದನಂತೆ. ಪಾರ್ವತಮ್ಮನವರು ಆಸಕ್ತಿಯಿಂದ ಗಾಡಿ ನಿಲ್ಲಿಸಿ ತಮಗೇನಾದರೂ ಪುಸ್ತಕಗಳು ಸಿಗುತ್ತವೆಯೇ ಎಂದು ನೋಡಿದ್ದಾರೆ. ಅಲ್ಲಿ ಅವರಿಗೆ ದೇವುಡು ನರಸಿಂಹಶಾಸ್ತ್ರಿಯವರ “ಮಯೂರ’ ಕೃತಿ ಕಣ್ಣಿಗೆ ಬಿದ್ದಿದೆ. ಅದನ್ನು ಎತ್ತಿಕೊಂಡ ಪಾರ್ವತಮ್ಮನವರು ಓದಿ ಆ ವಸ್ತುವನ್ನು ಬೆಳ್ಳಿತೆರೆಗೆ ಅಳವಡಿಸಲು ನಿರ್ಧರಿಸಿದರು. ಡಾ.ರಾಜಕುಮಾರ್ ವೃತ್ತಿ ಬದುಕಿಗೆ ಮಾತ್ರವಲ್ಲ ಕನ್ನಡ ಚಿತ್ರರಂಗಕ್ಕೂ ಇದು ಮಹತ್ವದ ಚಿತ್ರವಾಯ್ತು!

ಎಪ್ಪತ್ತರ ದಶಕದ ದ್ವಿತಿಯಾರ್ಧದ ಹೊತ್ತಿಗೆ ಕನ್ನಡ ಚಿತ್ರರಂಗ ಮದರಾಸಿನಿಂದ ಕನ್ನಡ ನಾಡಿಗೆ ಶಿಫ್ಟ್ ಆಯ್ತು. ಆಗ ಇಲ್ಲಿ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡ ಮೂರ್ನಾಲ್ಕು ಪ್ರಮುಖ ಸಂಸ್ಥೆಗಳಲ್ಲಿ ಪಾರ್ವತಮ್ಮನವರ ಬ್ಯಾನರ್ ಮುಂಚೂಣಿಯದ್ದು. ಈ ಕಾಲಘಟ್ಟದಲ್ಲಿ ತಂತ್ರಜ್ಞರು ಮತ್ತು ಕಲಾವಿದರಲ್ಲಿ ಚಿತ್ರನಿರ್ಮಾಣದೊಂದಿಗೆ ವಿಶ್ವಾಸ ಮೂಡಿಸುವುದು ಅತ್ಯವಶ್ಯವಾಗಿತ್ತು. ಆ ವೇಳೆಗಾಗಲೇ ಸಿನಿಮೋದ್ಯಮದ ವ್ಯಾಕರಣ ಕರಗತ ಮಾಡಿಕೊಂಡಿದ್ದ ಪಾರ್ವತಮ್ಮನವರು ತಮ್ಮ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ರಾಜ್ ಸಿನಿಮಾಗಳಲ್ಲಿ ಬಿಝಿಯಾಗಿದ್ದಾಗ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಸ್ಟಾರ್ ನಟನಾಗಿ ಬೆಳೆದ ರಾಜ್‍ರನ್ನು ಯಾವುದೇ ಗಾಸಿಪ್‍ಗಳು ಕಲಕದಂತೆ ಎಚ್ಚರಿಕೆ ವಹಿಸಿದರು. ಇತ್ತೀಚಿನ ವರ್ಷಗಳವರೆಗೂ ಅದೆಷ್ಟೋ ಉದ್ಯಮದ ಸಮಸ್ಯೆಗಳು ಮತ್ತು ಕಲಾವಿದರ ವೈಯಕ್ತಿಕ ಸಮಸ್ಯೆಗಳು ಕೂಡ ಪಾರ್ವತಮ್ಮನವರ ಸಮ್ಮುಖದಲ್ಲಿ ಬಗೆಹರಿಯುತ್ತಿದ್ದವು. ಇದು ಉದ್ಯಮದ ಮಂದಿ ಅವರ ಮೇಲಿಟ್ಟ ಗೌರವ, ವಿಶ್ವಾಸದ ಪ್ರತೀಕ.

ಮಕ್ಕಳ ಎಂಟ್ರಿ

ತಮ್ಮ ಪುತ್ರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರನ್ನು ತಮ್ಮ ಬ್ಯಾನರ್ ಮೂಲಕ ಪಾರ್ವತಮ್ಮನವರು ಯಶಸ್ವಿಯಾಗಿ ಬೆಳ್ಳಿತೆರೆಗೆ ಪರಿಚಯಿಸಿದರು. ಅಮ್ಮ ಹಾಕಿಕೊಟ್ಟ ಕಾದಂಬರಿ ಆಧರಿಸಿದ ಮತ್ತು ಸದಭಿರುಚಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಡಾ.ರಾಜ್ ಪುತ್ರರೂ ಯಶಸ್ಸು ಕಂಡರು. ಇನ್ನು ಅವರ ನಿರ್ಮಾಣ ಸಂಸ್ಥೆಯಡಿ ಕನ್ನಡ ತೆರೆಗೆ ಪರಿಚಯವಾದ ನಾಯಕಿಯರ ಸಂಖ್ಯೆ ದೊಡ್ಡದಿದೆ. ಸುಧಾರಾಣಿ, ಆಶಾರಾಣಿ, ವೀಣಾ, ಮಾಲಾಶ್ರೀ, ಮೋಹಿನಿ, ಮೊನಿಶಾ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ವಿದ್ಯಾವೆಂಕಟೇಶ್, ಶ್ರೀವಿದ್ಯಾ, ರಕ್ಷಿತಾ, ರಮ್ಯಾ… ಹೀಗೆ ಹತ್ತಾರು ನಾಯಕಿಯರು ಅವರ ಬ್ಯಾನರ್‌ನಲ್ಲಿ ಪರಿಚಯವಾಗಿ ಯಶಸ್ಸು ಕಂಡಿದ್ದಾರೆ.

ಚಿತ್ರಕೃಪೆ: ಮನು

“ಪಾರ್ವತಮ್ಮನವರ ಬ್ಯಾನರ್‌ನಿಂದ ಪರಿಚಯವಾದ ನಟಿ ನಾನು. ವೈಯಕ್ತಿಕವಾಗಿ ನನಗೆ ಆ ಬಗ್ಗೆ ತುಂಬಾ ಖುಷಿ ಇದೆ. ಅವರ ಸಂಸ್ಥೆಯಿಂದ ಪರಿಚಯವಾಗಿದ್ದು ವೃತ್ತಿ ಬದುಕಿಗೆ ದೊಡ್ಡ ವರವಾಯ್ತು. ಮತ್ತೊಂದೆಡೆ ನನಗೆ ಗೌರವವೂ ಸಿಕ್ಕಿದೆ. ದೊಡ್ಮನೆಯ ಸಿನಿಮಾ ಮೂಲಕ ಬಂದವಳು ಎಂದು ಎಲ್ಲರೂ ಪ್ರೀತಿ, ವಿಶ್ವಾಸ, ಗೌರವದಿಂದ ಕಾಣುತ್ತಾರೆ” ಎನ್ನುತ್ತಾರೆ ನಟಿ ಸುಧಾರಾಣಿ. ಹೀಗೆ, ಹಲವು ಕಾರಣಗಳಿಂದಾಗಿ ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮನವರು ಪ್ರಮುಖ ವ್ಯಕ್ತಿ ಮತ್ತು ಶಕ್ತಿಯಾಗಿ ಗೋಚರಿಸುತ್ತಾರೆ.


ಇದನ್ನೂ ಓದಿ; ತೆಲುಗು, ತಮಿಳು ಚಿತ್ರರಂಗದಲ್ಲಿ ಯಶಕಂಡ ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ, ಕನ್ನಡಿಗ ವಿಠಲಾಚಾರ್ಯ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...