Homeಅಂತರಾಷ್ಟ್ರೀಯಬೆಂಕಿಯ ಜೊತೆಗೆ ಸರಸ; ರಷ್ಯಾದಲ್ಲಿ ಖಾಸಗಿ ಸೈನ್ಯದ ತುಕಡಿಗಳ ಬಂಡಾಯ

ಬೆಂಕಿಯ ಜೊತೆಗೆ ಸರಸ; ರಷ್ಯಾದಲ್ಲಿ ಖಾಸಗಿ ಸೈನ್ಯದ ತುಕಡಿಗಳ ಬಂಡಾಯ

- Advertisement -
- Advertisement -

23 ಜೂನ್ 2023 ರಂದು, ರಷ್ಯನ್ ಸರ್ಕಾರ ಆರ್ಥಿಕ ಸಹಾಯ ನೀಡಿ ಬೆಳೆಸಿದ ಖಾಸಗಿ ಸೈನ್ಯದ ಸಂಸ್ಥೆ, ವಾಗ್ನರ್ ಗುಂಪು, ರಷ್ಯಾದ ರಕ್ಷಣಾ ಸಚಿವಾಲಯದ ವಿರುದ್ಧವೇ ಬಂಡಾಯವನ್ನು ಎಬ್ಬಿಸಿತು. ವಾಗ್ನರ್‌ನ ನಾಯಕ ಯೆವ್‌ಜೆನಿ ಪ್ರಿಗೊಜಿನ್, ಶೊಯಿಗು ಮತ್ತು ಗೆರಾಸಿಮೊವ್ ಎಂಬ ಪ್ರದೇಶಗಳನ್ನು ತಮ್ಮ ವಶಕ್ಕೆ ಕೊಟ್ಟುಬಿಡಬೇಕೆಂದು ಆಗ್ರಹಪಡಿಸಿದ. ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಾಗ್ನರ್‌ನ ಈ ನಡೆಯನ್ನು ದೇಶದ್ರೋಹ ಎಂದು ಖಂಡಿಸಿದ. ಈ ಬಂಡಾಯದ ಸಮಯದಲ್ಲಿ, ವಾಗ್ನರ್ ಸೈನ್ಯ ದಕ್ಷಿಣದ ಮಿಲಿಟರಿ ಜಿಲ್ಲೆಯ ಮುಖ್ಯ ಕಚೇರಿಯಿದ್ದ ರೊಸ್ಟೊವ್-ಆನ್-ಡಾನ್ ಅನ್ನು ವಶಪಡಿಸಿಕೊಂಡಿತು. ಅವರು ನಂತರ ರಷ್ಯದ ವಾಯುಸೇನಾದ ದಾಳಿಯನ್ನು ಹಿಮ್ಮೆಟ್ಟಿಸುತ್ತಾ ಮಾಸ್ಕೋದ ಕಡೆಗೆ ದಂಡೆತ್ತಿ ಹೋದರು. ಭೂ ಸೇನಾ ರಕ್ಷಣಾ ಪಡೆಗಳು ಮಾಸ್ಕೊ ಮೇಲೆಯೇ ತನ್ನ ಗಮನವನ್ನು ಕೇಂದ್ರೀಕರಿಸಿದ್ದವು. ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಸಂಧಾನಕಾರನಾಗಿ ಇಬ್ಬರ ನಡುವೆಯೂ ಒಡಂಬಡಿಕೆಯಾಗುವಂತೆ ಪಾತ್ರವಹಿಸಿದ, ಪ್ರಿಗೊಜಿನ್ ಬಂಡಾಯವನ್ನು ಅಂತ್ಯಗೊಳಿಸಲು ಒಪ್ಪಿಕೊಂಡ.

ಈ ಬಂಡಾಯದ ಪರಿಣಾಮವಾಗಿ ಅನೇಕ ಸಾವುನೋವುಗಳು ಸಂಭವಿಸಿದವು. ಕಡೇ ಪಕ್ಷ ಹದಿಮೂರು ರಷ್ಯಾದ ಸೈನಿಕರುಗಳನ್ನು ಕೊಲ್ಲಲಾಯಿತು. ವಾಗ್ನರ್ ಸಂಸ್ಥೆಯ ಈ ಬಂಡಾಯವು ರಷ್ಯಾದ ಸೈನ್ಯದ ಆಂತರಿಕ ವ್ಯವಸ್ಥೆಯಲ್ಲಿನ ಬಿಗಿವಾತಾವರಣವನ್ನು ಹೊರಗೆಡಹಿತು ಮತ್ತು ಸರ್ಕಾರದ ಬೆಂಬಲದಿಂದ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸೈನಿಕ ಸಂಸ್ಥೆಗಳ ಕ್ರಿಯಾಶಕ್ತಿಯ ಬಗ್ಗೆ ಗಮನ ಹರಿಯುವಂತೆ ಮಾಡಿತು.

ಇದು ಹೇಗೆ ಪ್ರಾರಂಭವಾಯಿತು?

ಬಕ್ಮುಟ್‌ನ ಹೋರಾಟದ ಸಮಯದಲ್ಲಿ, ವಾಗ್ನರ್ ಗುಂಪು ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ಜೊತೆಯ ಬಿಗಿವಾತಾವರಣ ಉಲ್ಬಣಗೊಂಡಿತು. ರಷ್ಯಾ ಸರ್ಕಾರ ಅವರಿಗೆ ಸಾಕಷ್ಟು ಅಗತ್ಯವಸ್ತುಗಳನ್ನು ಸರಬರಾಜು ಮಾಡುತ್ತಿರಲಿಲ್ಲ ಎಂದು ಪ್ರಿಗೊಜಿನ್ ದೂರಿದ. ವಾಗ್ನರ್ ಗುಂಪಿನ ಯೋಧರ ಸಾವಿಗೆ ರಕ್ಷಣಾ ಮಂತ್ರಿ ಸರ್ಗೈ ಶೊಯಿಗು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ವೇಲರಿ ಜೆರಾಸಿಮೊವ್ ಕಾರಣಕರ್ತರು ಎಂದು ಆತ ದೂರಿದ. ಈ ಹೋರಾಟದಲ್ಲಿ ಬಹಳಷ್ಟು ಜನ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು ಮತ್ತು ಉಕ್ರೇನ್‌ನಲ್ಲಿ ಡಿಸೆಂಬರ್ 2022 ಮತ್ತು ಜೂನ್ 2023ರ ಅಂತರದಲ್ಲಿ ಸತ್ತ 20,000 ರಷ್ಯಾ ಪಡೆಯ ಸೈನಿಕರಲ್ಲಿ ಅರ್ಧದಷ್ಟು ಹೋರಾಟಗಾರರು ವಾಗ್ನರ್ ಗುಂಪಿಗೆ ಸೇರಿದವರಾಗಿದ್ದರು. ಬಕ್ಬುಟ್‌ನಲ್ಲಿ ರಷ್ಯಾದ ಗೆಲುವಿನ ನಂತರ ವಾಪಸ್ಸಾಗುವಾಗ ವಾಗ್ನರ್ ಮತ್ತು ರಕ್ಷಣಾ ಪಡೆಗಳ ನಡುವಿನ ಘರ್ಷಣೆ ನಡೆಯುತ್ತಲೇ ಇತ್ತು.

ಜೂನ್ 2023ರ ಮಧ್ಯಭಾಗದಲ್ಲಿ ರಷ್ಯಾದ ರಕ್ಷಣಾ ಸಚಿವಾಲಯ ವಾಗ್ನರ್‌ಗೆ ರಷ್ಯಾದ ಮಾಮೂಲಿ ಸೈನ್ಯದ ಆಜ್ಞಾಪನಾ ವ್ಯವಸ್ಥೆಯ ಜೊತೆಯಲ್ಲಿ ಏಕೀಕರಣಗೊಳ್ಳಬೇಕೆಂದು ಆಜ್ಞೆ ಹೊರಡಿಸಿತು. ಪ್ರಿಗೊಜಿನ್ ಇದನ್ನು ತಳ್ಳಿ ಹಾಕಿದ. ಪ್ರಿಗೊಜಿನ್ ರಕ್ಷಣಾ ಸಚಿವಾಲಯವನ್ನು ಟೀಕಿಸಿದ ಮತ್ತು ಅಧ್ಯಕ್ಷ ಪುಟಿನ್ ಸಚಿವಾಲಯದ ವಿರುದ್ಧ ತನ್ನ ಬಂಡಾಯವನ್ನು ಬೆಂಬಲಿಸುತ್ತಾನೆ ಎಂದು ನಂಬಿಕೊಂಡು ಶೊಯಿಗುನನ್ನು ಮರಣದಂಡನೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ.

ಜೂನ್ 23, 2023ರಂದು, ಪ್ರಿಗೊಜಿನ್, ರಕ್ಷಣಾ ಸಚಿವಾಲಯ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ. ಅವನು ಉಕ್ರೇನ್ ಜೊತೆಯಲ್ಲಿ ನಡೆಸುತ್ತಿರುವ ಈ ಯುದ್ಧ ರಷ್ಯದ ಗಣ್ಯವ್ಯಕ್ತಿಗಳ ಹಿತವನ್ನು ಕಾಪಾಡುವುದಕ್ಕೋಸ್ಕರ ಎಂದು ಹೇಳಿದ. ರಷ್ಯಾ ಸರ್ಕಾರದ ಉಕ್ರೇನ್‌ನ ಆಕ್ರಮಣದ ಬಗ್ಗೆ ನೀಡುತ್ತಿದ್ದ ಸಮಜಾಯಿಹಿಷಿಯನ್ನು ತಳ್ಳಿಹಾಕಿದ. ಪ್ರತಿದಿನದ ವಾಗ್ನರ್ ಹೋರಾಟಗಾರರ ಸಾವಿನ ಸಂಖ್ಯೆ ಸಾವಿರಕ್ಕೆ ಏರಿದೆ ಎಂದು ಅವನು ಪ್ರತಿಪಾದಿಸಿದ. ಅವನು ಇನ್ನೂ ಮುಂದುವರಿಯುತ್ತಾ, ಸೈನ್ಯದಲ್ಲಿನ ಅಧಿಕಾರಿ ವ್ಯವಸ್ಥೆ ಇದನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಮುಚ್ಚಿಟ್ಟಿದೆ ಎಂದು ಹೇಳಿದ.

ವಾಗ್ನರ್ ಬಿಡಾರದ ಮೇಲಿನ ಕ್ಷಿಪಣಿ ಆಕ್ರಮಣದ ನಂತರ ಉಂಟಾದ ಪರಿಣಾಮವನ್ನು ಈ ವೀಡಿಯೊ ತೋರಿಸಿತು. ಈ ಕ್ಷಿಪಣಿ ಆಕ್ರಮಣವನ್ನು ನಡೆಸಿದ್ದು ರಕ್ಷಣಾ ಸಚಿವಾಲಯವೇ ಎಂದದ್ದಲ್ಲದೆ, 2000 ವಾಗ್ನರ್ ಸೈನಿಕರನ್ನು ಅದು ಕೊಂದು ಹಾಕಿತು ಎಂದು ಪ್ರಿಗೊಜಿನ್ ಪ್ರತಿಪಾದಿಸಿದ. ಈ ವಿಡಿಯೋದ ಸಿಂಧುತ್ವವನ್ನು ಪ್ರಶ್ನಿಸಲಾಯಿತು ಮತ್ತು ಕೆಲವರು ಈ ವಿಡಿಯೊವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು. ಇದಾದ ನಂತರವೇ ಪ್ರಿಗೊಜಿನ್ ರಕ್ಷಣಾ ಮಂತ್ರಾಲಯದ ವಿರುದ್ಧ ಸಶಸ್ತ್ರ ಬಂಡಾಯ ಎದ್ದಿದ್ದು ಮತ್ತು ಈ ಬಂಡಾಯದಲ್ಲಿ ಬಿಡಿವ್ಯಕ್ತಿಗಳೂ ಸೇರಿಕೊಳ್ಳುವಂತೆ ಕರೆಕೊಟ್ಟಿದ್ದು. ಈ ಬಂಡಾಯವನ್ನು ಕಳಪೆಯಾಗಿ ಯೋಜಿಸಲಾಗಿತ್ತು ಮತ್ತು ಅನೇಕ ವಾಗ್ನರ್ ಸದಸ್ಯರುಗಳಿಗೆ ಈ ಬಂಡಾಯದ ಬಗ್ಗೆ ಅರಿವೇ ಇರಲಿಲ್ಲ.

ಈ ವಾಗ್ನರ್ ಗುಂಪು ಅಂದರೆ ಯಾರು?

ವಾಗ್ನರ್ ಗುಂಪು, ಅಧಿಕೃತವಾಗಿ ಕರೆಯಲಾಗುವ ಪಿ.ಎಮ್.ಸಿ. ವಾಗ್ನರ್, ರಷ್ಯಾ ಸರ್ಕಾರದಿಂದ ಹಣಸಹಾಯ ಪಡೆದ ಖಾಸಗಿ ಸೈನ್ಯ ಸಂಸ್ಥೆ. ಅದನ್ನು ದಿಮಿಟ್ರಿ ಯೂಟ್ಕಿನ್ ಎಂಬುವನಿಂದ 2014ರಲ್ಲಿ ಸ್ಥಾಪಿಸಲಾಯಿತು, ಅವನೊಬ್ಬ ಮಾಜಿ GRU (ರಷ್ಯಾ ಮಿಲಿಟರಿಯ ಒಂದು ಸಂಸ್ಥೆ) ಅಧಿಕಾರಿ, ಮತ್ತು ಪ್ರೊಗೊಜಿನ್ ಒಬ್ಬ ವ್ಯಾಪಾರಿ. ವಾಗ್ನರ್ ತನ್ನ ಪ್ರಖ್ಯಾತಿಯನ್ನು ಪಡೆದಿದ್ದು ಉಕ್ರೇನ್‌ನ ಡಾನ್‌ಬಾಸ್ ಯುದ್ಧದ ಸಮಯದಲ್ಲಿ, ಅದು ರಷ್ಯಾ ದೇಶದ ಪರವಾಗಿದ್ದ ಪ್ರತೇಕವಾದಿ ಶಕ್ತಿಗಳನ್ನು ಬೆಂಬಲಿಸಿತ್ತು. ಈ ಗುಂಪು ಪ್ರಪಂಚದಾದ್ಯಂತ ಎಲ್ಲಾ ಸಂಘರ್ಷಗಳಲ್ಲಿಯೂ ಸಕ್ರಿಯವಾಗಿತ್ತು, ಅದು ಸಿರಿಯ, ಲಿಬಿಯಾ, ಅಫ್ರಿಕಾದ ಮಧ್ಯ ಪ್ರಾಂತ ಪ್ರದೇಶ ಮತ್ತು ಮಾಲಿ ಒಳಗೊಂಡಂತೆ.

ಇದನ್ನೂ ಓದಿ: ಯುಎಸ್‌ಎ ಸುಪ್ರೀಂಕೋರ್ಟ್ ತೀರ್ಪು; ಜನಾಂಗೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಅವಕಾಶಗಳಿಗೆ ಹೊಡೆತ

ರಷ್ಯಾ ಸರ್ಕಾರ ಈ ವಾಗ್ನರ್ ಗುಂಪನ್ನು ಉಪಯೋಗಿಸಿಕೊಂಡು ಪರೋಕ್ಷ ಸಮರವನ್ನು ನಡೆಸಿ, ರಷ್ಯಾದ ಸೈನ್ಯದ ಭಾಗವಹಿಸುವಿಕೆಯ ಆಪಾದನೆಯನ್ನು ಅಲ್ಲಗಳೆಯುತ್ತಿತ್ತು. ಇದೊಂದು ಖಾಸಗಿ ಸಂಸ್ಥೆಯಾಗಿದ್ದುದರಿಂದ ವಾಗ್ನರ್‌ಗೆ ಇದ್ದ ಅನುಕೂಲವೆಂದರೆ ಅದು ಅಂತಾರಾಷ್ಟ್ರೀಯ ಮತ್ತು ರಷ್ಯಾದ ಕಾನೂನಿನ ವ್ಯಾಪ್ತಿಯಿಂದ ಹೊರಗಿರುತ್ತಿತ್ತು, ಮತ್ತು ರಷ್ಯಾದ ಸೈನಿಕ ಕಾರ್ಯಾಚರಣೆಗಳಿಗಿ ಬೆಲೆ ಕಟ್ಟಲಾರದಷ್ಟು ಸಹಾಯಕವಾಗಿರುತ್ತಿತ್ತು. ಆದರೂ ಕೂಡ ಉಕ್ರೇನ್ ಜೊತೆಯಲ್ಲಿನ ಸಂಘರ್ಷದ ನಂತರದ ದಿನಗಳಲ್ಲಿ, ಒಂದು ಖಾಸಗಿ ಸೈನಿಕ ಗುಂಪಿನಿಂದ ಬೆಂಬಲವನ್ನು ಪಡೆಯುವುದಕ್ಕೆ ಆಗುತ್ತಿದ್ದ ಖರ್ಚು ರಷ್ಯಾ ಸರ್ಕಾರಕ್ಕೆ ಬಹಳ ಹೆಚ್ಚೆಂದು ಅನಿಸತೊಡಗಿತು.

ವ್ಲಾಡಿಮಿರ್ ಪುಟಿನ್

ಒಂದು ಖಾಸಗಿ ಸೈನಿಕ ಸಂಸ್ಥೆಯಾಗಿ, ವಾಗ್ನರ್‌ಗೆ ಇದ್ದ ಆಸಕ್ತಿ ಖಾಸಗಿಯಾಗಿಯೇ ಉಳಿದುಬಿಟ್ಟಿತ್ತು ಮತ್ತು ಇದು ಬಂಡಾಯದ ಪರಿಸ್ಥಿತಿಗೆ ಎಡೆಮಾಡಿಕೊಟ್ಟಿತು. ವಾಗ್ನರ್‌ನ ಕಾರ್ಯಾಚರಣೆಯ ದಿಕ್ಕು ಬದಲಾಗಿದ್ದು ಖಾಸಗಿ ಸೈನ್ಯ ಸಂಸ್ಥೆಗೆ ಉಂಟಾಗಬಹುದಾದ ಅಪಾಯಗಳನ್ನು ತಪ್ಪಿಸುವುದಕ್ಕೋಸ್ಕರ.

ಸಿರಿಯ ದೇಶದಲ್ಲಿ ವಾಗ್ನರ್ ಗುಂಪು ಸಿರಿಯನ್ ಸೈನ್ಯದ ಜೊತೆಯಲ್ಲಿ ನಿಕಟವಾಗಿ ಕಾರ್ಯನಿರ್ವಹಿಸಿತು, ನಿರ್ದಿಷ್ಟವಾಗಿ ಐಎಸ್‌ಐಎಸ್ ವಿರುದ್ಧದ ಕಾರ್ಯಾಚರಣೆಯಲ್ಲಿ. ಸುಡಾನ್‌ನಲ್ಲಿ ವಾಗ್ನರ್ ಅಮೆರಿಕದ ಸೈನ್ಯದ ವಿರುದ್ಧ, ಅಂದರೆ ಸುಡಾನ್‌ನ ಗಣಿಗಾರಿಕೆಯ ಸ್ವಾಮ್ಯವನ್ನು, ಅದರಲ್ಲೂ ನಿರ್ದಿಷ್ಟವಾಗಿ ಚಿನ್ನ, ಯುರಾನಿಯಮ್ ಮತ್ತು ವಜ್ರದ ಗಣಿಗಾರಿಕೆಯನ್ನು ಅಮೆರಿಕ ಸೈನ್ಯ ವಶ ಪಡಿಸಿಕೊಳ್ಳುವುದರ ವಿರುದ್ಧವಾಗಿ ಕಾರ್ಯಾಚರಣೆ ನಡೆಸಿತು. ಸೆಂಟ್ರಲ್ ಆಫ್ರಿಕಾ ರಿಪಬ್ಲಿಕ್‌ನಲ್ಲಿ, ವಾಗ್ನರ್ ಗುಂಪು ಗಣಿಕ್ಷೇಪಗಳ ರಕ್ಷಣೆಗೋಸ್ಕರ ಕಾರ್ಯಾಚರಣೆ ನಡೆಸಿ ಅಲ್ಲಿನ ಸರ್ಕಾರದ ಬೆಂಬಲಕ್ಕೆ ನಿಂತಿತು. ಅನೇಕ ಸಂಘರ್ಷಗಳಲ್ಲಿ, ವಾಗ್ನರ್ ಗುಂಪು ಪ್ರಾಂತೀಯ ಸರ್ಕಾರಗಳ ಜೊತೆಗೂಡಿ ಹೋರಾಟ ಮಾಡಿತು ಮತ್ತು ಆ ಪ್ರದೇಶಗಳನ್ನು ಅದರಲ್ಲೂ ರಷ್ಯಾ ಬೆಂಬಲಿತ ಪ್ರದೇಶಗಳನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಹೋರಾಟ ಮಾಡಿತು. ಕೆಲವು ಬಾರಿ, ವಾಗ್ನರ್ ಗುಂಪಿಗೆ ಸ್ಥಳೀಯರ ಬೆಂಬಲವೂ ಸಿಗುತ್ತಿತ್ತು. ಒಂದು ವ್ಯವಸ್ಥಿತ ಖಾಸಗಿ ಗುಂಪಾಗಿ, ವಾಗ್ನರ್ ಗುಂಪು ರಷ್ಯಾ ಸರ್ಕಾರದ ಶಕ್ತಿಗಳಿಗೆ ಬೇರೆ ದೇಶಗಳ ಮೇಲೆ ಸ್ವಾಮ್ಯತೆಯನ್ನು ಸ್ಥಾಪಿಸಲು ಸಹಾಯ ಮಾಡಿತು ಮತ್ತು ರಷ್ಯಾ ಮಿಲಿಟರಿಯ ಹಸ್ತಕ್ಷೇಪದ ಬಗ್ಗೆ ನಿರಾಕರಣೆ ಮಾಡುವುದಕ್ಕೆ ಸಹಾಯವಾಗುವಂತೆ ಮಾಡಿತು.

ಇದನ್ನೂ ಓದಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಪ್ರಭುತ್ವಗಳ ಜೊತೆಜೊತೆಗೆ ಖಾಸಗಿ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆ ನಡೆಸುವುದೇನೂ ರಷ್ಯ ಒಂದಕ್ಕೇ ಸೀಮಿತವಾಗಿಲ್ಲ. ಹಣಕ್ಕಾಗಿಯೇ ಕೆಲಸ ಮಾಡುವ ಇಂತಹ ಗುಂಪುಗಳ ಪ್ರಯೋಜನವನ್ನು, ಅನೇಕ ಸರ್ಕಾರಗಳು ತಮ್ಮ ಕೈಲಿ ಆಗದೇ ಇರುವ ಕೆಲಸಗಳನ್ನು ಮಾಡಲು ಅಂದರೆ ಕಾನೂನು ವ್ಯವಸ್ಥೆಯನ್ನು ಬುಡಮೇಲು ಮಾಡುವ ಮತ್ತು ಪ್ರಜಾಪ್ರಭುತ್ವದ ಕಾರಣದಿಂದ ಉಂಟಾಗುವ ಹೊಣೆಗಾರಿಕೆಯಿಂದ ಪಾರುಮಾಡುವಂತಹ ಕೆಲಸಗಳಿಗೆ ಬಳಸಿಕೊಂಡಿವೆ. ರಷ್ಯಾ ಸರ್ಕಾರ ತನ್ನ ಅಪೇಕ್ಷೆಯಂತೆ ವಾಗ್ನರ್ ಗುಂಪನ್ನು ರಾಷ್ಟ್ರೀಕರಣಗೊಳಿಸಿ ರಷ್ಯಾ ಸರ್ಕಾರದ ಕೈಕೆಳಗೆ ಕೆಲಸ ಮಾಡಬಹುದು ಎಂದು ಎಣಿಸಿದಾಕ್ಷಣ, ವಾಗ್ನರ್ ಗುಂಪು, ರಷ್ಯ ಸರ್ಕಾರಕ್ಕೇ ಒಂದು ಬೆದರಿಕೆಯಾಗಿ ನಿಲ್ಲಬಹುದು. ಒಂದು ಸೈನಿಕ ಗುಂಪನ್ನು ನಿರ್ವಹಿಸಿ ಬೆಂಬಲಿಸುವುದು ಅಪಾಯಕಾರಿಯಾದ ನಡೆ. ಶೀತಲ ಸಮರದ ನಂತರ, ಅನೇಕ ದೇಶಗಳು ಈ ರೀತಿಯ ಗುಂಪನ್ನು ದೂರದ ಬೇರೇ ದೇಶಗಳ ಕಾರ್ಯಾಚರಣೆಗೆ ಮಾತ್ರ ಉಪಯೋಗಿಸಿಕೊಳ್ಳುವ ಮೂಲಕ ಅವುಗಳ ಅಪಾಯವನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿವೆ.

ಈ ರೀತಿಯ ಬೇರೆಬೇರೆ ಖಾಸಗಿ ಮಿಲಿಟರಿ ಸಂಸ್ಥೆಗಳು ಯಾವುವಿವೆ?

ಕೆಲವು ಪ್ರಮುಖವಾದ ಖಾಸಗಿ ಸೇನಾ ಸಂಸ್ಥೆಗಳು ಮತ್ತು ಅವುಗಳ ಜೊತೆಗೆ ಸಂಬಂಧ ಹೊಂದಿರುವ ದೇಶಗಳು ಇಂತಿವೆ:

DynCorp International: ಯುಎಸ್ ಮೂಲದ ಈ ಸಂಸ್ಥೆ ರಕ್ಷಣಾ ಸೇವೆಗಳನ್ನು ಒದಗಿಸುತ್ತದೆ. ವಿವಾದಾತ್ಮಕ ಅಬು ಘ್ರೈಬ್ ಹಗರಣ ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ಅಮೆರಿಕ ಈ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

G4S: ಇದೊಂದು ಬ್ರಿಟನ್ ಮೂಲದ ಸಂಸ್ಥೆ, ಮತ್ತು ಅದು ಅನೇಕ ಭದ್ರತಾ ಸೇವೆಗಳನ್ನು ನೀಡುತ್ತದೆ. ಅದು ವಿಶ್ವಾದ್ಯಂತ ಕೆಲಸ ಮಾಡುತ್ತದೆ, ಮತ್ತು ಅನೇಕ ದೇಶಗಳು ಅದರ ಸೇವೆಯನ್ನು ಪಡೆದುಕೊಂಡಿವೆ.

Executive outcomes: ಇದೊಂದು ಸೌತ್ ಆಫ್ರಿಕ ಮೂಲದ ಸಂಸ್ಥೆ ಮತ್ತು ಅದು ಆಂಗೋಲನ್ ಸಿವಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರ ಮೂಲಕ ಹೆಚ್ಚು ಪರಿಚಿತವಾಗಿದೆ. ಅದೂ ಕೂಡ ತನ್ನ ಸೇವೆಯನ್ನು ವಿಶ್ವದಾದ್ಯಂತ ಹಲವು ಸರ್ಕಾರಗಳಿಗೆ ಮತ್ತು ಉದ್ದಿಮೆಗಳಿಗೆ ನೀಡಿದೆ.

ಭಾರತದಲ್ಲಿ, ಖಾಸಗಿ ಸೈನಿಕ ಕಾರ್ಯಾಚರಣೆಯ ಸಂಸ್ಥೆಯನ್ನು ಸ್ಥಾಪಿಸಲು ಕಾನೂನು ರೂಪಗೊಂಡಿಲ್ಲ. ಖಾಸಗಿಯವರನ್ನು ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ದೇಶದ ಅನೇಕ ಭಾಗಗಳಲ್ಲಿ ಪ್ರಭುತ್ವ ಉಪಯೋಗಿಸಿಕೊಂಡಿರುವ ಉದಾಹರಣೆಗಳು ಚರಿತ್ರೆಯಲ್ಲಿವೆ. ಖಾಸಗಿ ಸೈನಿಕ ಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲಕಾರಿ ಪರಿಸ್ಥಿತಿಗಳೇನೋ ಇವೆ. ಮತ್ತು ಭಾರತದಲ್ಲಿ ಈ ಭದ್ರತಾ ವಿಭಾಗದಲ್ಲಿನ ಬೇಡಿಕೆ ಹೆಚ್ಚುತ್ತಲೇ ಇದೆ, ಮತ್ತು ಭಾರತದಲ್ಲಿ ಬೃಹತ್ತಾದ ಸೈನ್ಯವೂ ಇದೆ. ಈ ವ್ಯಾಪ್ತಿಯಲ್ಲಿ ಸೂಕ್ತವಾದ ಕಾರ್ಮಿಕ ಪಡೆಯನ್ನು ಸ್ಥಾಪಿಸಲು ಬೇಡಿಕೆಯೇನೊ ಇದೆ. ಆದರೂ ಕೂಡ ಈ ದಾರಿ ಅಪಾಯಕಾರಿಯಾದದ್ದು, ವಾಗ್ನರ್ ಸಂಸ್ಥೆಯ ವಿಷಯದಲ್ಲಿ ಈಗ ನಡೆದ ಘಟನೆಯ ಅದನ್ನು ಮನಗಾಣಿಸುವಂತಿದೆ.

ಕನ್ನಡಕ್ಕೆ: ಕೆ. ಶ್ರೀನಾಥ್

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...

3ನೇ ಹಂತದ ‘SIR’ ಕರಡು ಮತದಾರರ ಪಟ್ಟಿ ಬಿಡುಗಡೆ: 12 ರಾಜ್ಯಗಳಲ್ಲಿ 1.58 ಕೋಟಿ ಮತದಾರರ ಹೆಸರು ಕೈಬಿಟ್ಟ ಆಯೋಗ, ಇನ್ನು ಕರ್ನಾಟಕ ಬಾಕಿ

3ನೇ ಹಂತದದಲ್ಲಿ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆಸಲಾದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಬಳಿಕ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಹೆಸರುಗಳು...

ದಾರುಲ್ ಉಲೂಮ್ ದಿಯೋಬಂದ್ ಆವರಣದಲ್ಲಿ ಶಿವಲಿಂಗವಿದೆ ಎಂದ ಹಿಂದುತ್ವ ಸಂಘಟನೆ : ಆ.11ರಂದು ಗಂಗಾಜಲ ಅರ್ಪಿಸುವುದಾಗಿ ಘೋಷಣೆ

ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿರುವ ಪ್ರಸಿದ್ದ ಮುಸ್ಲಿಂ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಆವರಣದಲ್ಲಿ ಶಿವಲಿಂಗವಿದೆ ಎಂದು ಪ್ರತಿಪಾದಿಸಿರುವ ಹಿಂದೂ ರಕ್ಷಾ ದಳ ಸಂಘಟನೆ, ಆಗಸ್ಟ್ 11 ರಂದು ಸಂಸ್ಥೆಗೆ ಭೇಟಿ ನೀಡಿ ಗಂಗಾಜಲ...

‘ಮೋದಿ ನಮ್ಮನ್ನು ಗುಂಡಿಕ್ಕಿ ಕೊಂದರೂ ಈ ಜೀವಿತಾವಧಿಯಲ್ಲಿ ವಂದೇ ಮಾತರಂ ಪೂರ್ಣ ಆವೃತ್ತಿ ಹಾಡುವುದಿಲ್ಲ’: ಕೇರಳ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತ್ತಾನ್

ಕಾಸರಗೋಡು (ಕೇರಳ): ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ 'ಹರ್ ಘರ್ ತಿರಂಗಾ' ಅಭಿಯಾನದ ಸಮಯದಲ್ಲಿ ರಾಷ್ಟ್ರಗೀತೆ 'ವಂದೇ ಮಾತರಂ'ನ ಸಂಪೂರ್ಣ ವಾಗ್ವಾದ/ಆವೃತ್ತಿಯನ್ನು ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸಂವಹನದ ಸುತ್ತ ಭಾರಿ ವಿವಾದ...